Homeಅಂಕಣಗಳುಒಂದು ರಾಷ್ಟ್ರ ಒಂದು ಚುನಾವಣೆ ಎಂಬುದು ಸಂವಿಧಾನ ಮತ್ತು ಪ್ರಜಾತಂತ್ರ ವಿರೋಧಿಯಾದುದು

ಒಂದು ರಾಷ್ಟ್ರ ಒಂದು ಚುನಾವಣೆ ಎಂಬುದು ಸಂವಿಧಾನ ಮತ್ತು ಪ್ರಜಾತಂತ್ರ ವಿರೋಧಿಯಾದುದು

- Advertisement -
- Advertisement -

| ಯೋಗೇಂದ್ರ ಯಾದವ್ |

ಅನುವಾದ: ರಾಜಶೇಖರ್ ಅಕ್ಕಿ

ಒಂದು ರಾಷ್ಟ್ರ ಒಂದು ಚುನಾವಣೆ! ಇದನ್ನು ಕೇಳಲು ಎಷ್ಟು ಸುಂದರವಾಗಿದೆ. ಆದರೆ ಇದರ ಹಿಂದಿರುವ ಪ್ರಸ್ತಾಪವೂ ಅಷ್ಟೇ ಸುಂದರವಾಗಿದೆಯೇ ಎನ್ನುವುದು ನಮ್ಮ ಮುಂದಿನ ಪ್ರಶ್ನೆ. ದೇಶಾದ್ಯಂತ ಲೋಕಸಭೆ ಮತ್ತು ವಿಧಾನಸಭೆಯ ಚುನಾವಣೆಗಳನ್ನು 5 ವರ್ಷಗಳಲ್ಲಿ ಒಂದೇ ಬಾರಿ ಜೊತೆಗೇ ನಡೆಸುವ ಪ್ರಸ್ತಾಪ ನಮ್ಮ ಪ್ರಜಾಪ್ರಭುತ್ವಕ್ಕೆ ಒಳ್ಳೆಯ ಹೆಜ್ಜೆಯಾಗಬಲ್ಲದೇ?

ಮೊದಲ ನೋಟದಲ್ಲಿ ಇದೊಂದು ತುಂಬಾ ಸರಳ ಪ್ರಸ್ತಾಪ ಎನಿಸುತ್ತದೆ. ದೇಶಾದ್ಯಂತ ಪ್ರತಿ ಐದು ವರ್ಷಗಳಲ್ಲಿ ಚುನಾವಣೆ ಆಗುವುದು ನಿಶ್ಚಿತ. ಆದರೆ ವಿಧಾನಸಭೆಯ ಚುನಾವಣೆಗಳ ದಿನಾಂಕಗಳು ಲೋಕಸಭೆಯ ದಿನಾಂಕಗಳೊಂದಿಗೆ ಜೋಡಿಸಿಲ್ಲ. ಹಾಗಾಗಿ ಕೇಂದ್ರ ಸರಕಾರದ 5 ವರ್ಷಗಳ ಕಾರ್ಯಕಾಲದಲ್ಲಿ ಪ್ರತಿ ವರ್ಷ ಒಂದು ಅಥವಾ ಎರಡು ಬಾರಿ ರಾಜ್ಯಗಳ ವಿಧಾನಸಭೆಗೆ ಚುನಾವಣೆ ನಡೆಯುತ್ತವೆ. ಚುನಾವಣೆಯ ನೀತಿ ಸಂಹಿತೆ ಜಾರಿ ಬಂದ ಕೂಡಲೇ ಆ ರಾಜ್ಯಗಳ ಇದೇ ಕೇಂದ್ರ ಸರಕಾರಗಳ ಕಡತಗಳೂ ನಿಂತುಬಿಡುತ್ತವೆ. ಕೇಂದ್ರ ಸರಕಾರದ ಕಾರ್ಯವೈಖರಿಯಲ್ಲಿ ಅಡ್ಡಿ ಬರುತ್ತವೆ. ಸರಕಾರ ಚುನಾವಣೆಯ ಒತ್ತಡದಲ್ಲಿ ಕೆಲಸ ಮಾಡುತ್ತವೆ, ಹಾಗಾಗಿ ಯಾವುದೇ ದೀರ್ಘಕಾಲೀನ ನೀತಿಗಳನ್ನು ರೂಪಿಸಲು ಆಗುವುದಿಲ್ಲ. ಹಾಗೂ ರಾಜ್ಯ ಮತ್ತು ಕೇಂದ್ರದ ಚುನಾವಣೆಗಳನ್ನು ಬೇರೆ ಬೇರೆಯಾಗಿ ನಡೆಸುವುದರಿಂದ ವೆಚ್ಚವೂ ದುಪ್ಪಟಾಗುತ್ತದೆ.

ಹಾಗಾಗಿಯೇ 5 ವರ್ಷಗಳಲ್ಲಿ ಒಂದೇ ಸಲ ಒಟ್ಟಾಗಿ ಎಲ್ಲಾ ರಾಜ್ಯಗಳ ವಿಧಾನಸಭೆ ಹಾಗೂ ಲೋಕಸಭೆಯ ಚುನಾವಣೆಗಳನ್ನು ನಡೆಸಿ, ಮುಂದಿನ 5 ವರ್ಷಗಳ ತನಕ ಎಲ್ಲರೂ ಯಾವುದೇ ಅಡತಡೆಗಳಿಲ್ಲದೆ ತಮ್ಮ ಸರಕಾರಗಳನ್ನು ನಡೆಸುವುದಕ್ಕೆ ಈ ಪ್ರಸ್ತಾಪ.

5 ವರ್ಷಗಳ ನಂತರ ಒಂದೇ ಬಾರಿ ಎಲ್ಲರ ಕೆಲಸಗಳ ಮೌಲ್ಯಮಾಪನವಾಗಬೇಕು ಹಾಗೂ ಹೊಸ ಲೋಕಸಭೆ ಮತ್ತು ವಿಧಾನಸಭೆಗಳನ್ನು ಚುನಾಯಿಸಬೇಕು. ಮೊದಲ ಬಾರಿ ಇದನ್ನು ಕೇಳಿದಾಗ ಈ ಮಾತುಗಳು ಸರಳ ಮತ್ತು ನೇರ ಅನಿಸುತ್ತವೆ.
ಆದರೆ ವಾಸ್ತವದಲ್ಲಿ ಈ ಪ್ರಸ್ತಾಪ ಅಷ್ಟು ನೇರವೂ ಇಲ್ಲ, ಸರಳವೂ ಇಲ್ಲ. ಈ ಪ್ರಸ್ತಾಪ ಬರೀ ಚುನಾವಣೆಗಳ ದಿನಾಂಕ ಬದಲಿಸುವ ಪ್ರಸ್ತಾಪ ಅಲ್ಲ. ಇದನ್ನು ಕೇವಲ ಆಡಳಿತಾತ್ಮಕ ಬದಲಾವಣೆಯಿಂದ ಜಾರಿಗೊಳಿಸಲಾಗುವುದಿಲ್ಲ.

ಈ ಪ್ರಸ್ತಾಪವನ್ನು ಒಪ್ಪಿಕೊಳ್ಳುವ ಅರ್ಥವೆಂದರೆ, ನಮ್ಮ ಸಂವಿಧನ ಮತ್ತು ನಮ್ಮ ಪ್ರಜಾಪ್ರಭುತ್ವದ ಮೂಲಭೂತ ಅಡಿಪಾಯದಲ್ಲೇ ಬದಲಾವಣೆ ಮಾಡುವುದಕ್ಕೆ ಒಪ್ಪಿಕೊಂಡಂತೆ. ನಮ್ಮ ಸಂವಿಧಾನವನ್ನು ರಚಿಸಿದವರು ನಮ್ಮ ದೇಶದ ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು ಅಮೇರಿಕದ ರಾಷ್ಟ್ರಪತಿಯ ಪದ್ಧತಿಯನ್ನು ಒಪ್ಪಿಕೊಳ್ಳದೇ ಬ್ರಿಟನ್ನಿನ ಸಂಸದೀಯ ಪ್ರಜಾಪ್ರಭುತ್ವದ ಅಡಿಪಾಯದ ಚೌಕಟ್ಟನ್ನು ನಮ್ಮದಾಗಿಸಿಕೊಂಡರು. ನಮ್ಮ ಸಂಸದೀಯ ಚೌಕಟ್ಟಿನಲ್ಲಿ ಪ್ರಧಾನಮಂತ್ರಿಗೆ ಸಂಸತ್ತಿನಲ್ಲಿ ಬಹುಮತ ಪಡೆಯುವುದು ಅನಿವಾರ್ಯವಾಗಿದೆ. ಯಾವುದೇ ಪ್ರಧಾನಮಂತ್ರಿ ಅಥವಾ ಲೋಕಸಭೆಯಲ್ಲಿ ವಿಶ್ವಾಸ ಮಂಡನೆಯಲ್ಲಿ ಸೋತಕೂಡಲೇ ಆ ಸರಕಾರವು ತಕ್ಷಣ ರಾಜೀನಾಮೆ ನೀಡಬೇಕಾಗುತ್ತದೆ.

ಯೋಚಿಸಿ, ಒಂದು ವೇಳೆ ‘ಒಂದು ರಾಷ್ಟ್ರ ಒಂದು ಚುನಾವಣೆ’ ಯ ಪ್ರಸ್ತಾಪವನ್ನು ಸ್ವೀಕಾರ ಮಾಡಲಾಗಿ ಹಾಗೂ ಒಂದು ವೇಳೆ ಯಾವುದೇ ಒಂದು ರಾಜ್ಯದಲ್ಲಿ ಅಥವಾ ಕೇಂದ್ರದಲ್ಲಿ ಯಾವುದೇ ಸರಕಾರ 2 ವರ್ಷಗಳ ನಂತರ ಅಥವಾ 4 ವರ್ಷಗಳ ನಂತರ ಬಹುಮತ ಕಳೆದುಕೊಂಡರೆ ಆ ಪರಿಸ್ಥಿತಿಯಲ್ಲಿ ಏನಾಗಬಹುದು? ಆ ಸರಕಾರಕ್ಕೆ 5 ವರ್ಷಗಳ ತನಕ ಬಹುಮತ ಇರಲಿ ಬಿಡಲಿ ಮುಂದುವರೆಸಲು ಅವಕಾಶ ನೀಡಲಾಗುವುದೇ? ಒಂದು ವೇಳೆ ಇಂಥ ನಿಯಮ ಮಾಡಿದಲ್ಲಿ ಸದನದಲ್ಲಿ ತನ್ನ ಬಜೆಟ್ ಅನ್ನೆ ಪಾಸ್ ಮಾಡಲು ಆಗದ ಆ ಸರಕಾರ ತನ್ನ ಆಳ್ವಿಕೆಯನ್ನು ಹೇಗೆ ಮಾಡಬಲ್ಲದು? ಅಥವಾ ಕೇವಲ ಬಾಕಿ ಉಳಿದ ಅವಧಿಗಾಗಿಯೇ ಮತ್ತೊಮ್ಮೆ ಚುನಾವಣೆ ನಡೆಸಲಾಗುವುದೇ? ಇದರರ್ಥ ಒಂದು ವೇಳೆ ಯಾವುದೊಂದು ಸರಕಾರ ನಾಲ್ಕು ವರ್ಷಗಳ ನಂತರ ಕುಸಿದುಬಿದ್ದರೆ ರಾಜ್ಯ ಅಥವಾ ದೇಶದಲ್ಲಿ ಕೇವಲ ಒಂದು ವರ್ಷ ಸರಕಾರವನ್ನು ಚುನಾಯಿಸುವುದಕ್ಕಾಗಿ ಹೊಸ ಚುನಾವಣೆಗಳು ಆಗಬೇಕಾಗುತ್ತದೆ. ಹಾಗಾಗಿ ನಮ್ಮ ಮುಂದಿನ ಪ್ರಶ್ನೆ, ಇಂತಹ ಪರಿಸ್ಥಿತಿಯಲ್ಲಿ ಈ ಪ್ರಸ್ತಾಪ ನಮ್ಮ ಪ್ರಜಾಪ್ರಭುತ್ವದ ಸಮಸ್ಯೆಗಳನ್ನು ಕಡಿಮೆ ಮಾಡುವುದೇ ಅಥವಾ ಹೆಚ್ಚಿಸುವುದೇ ಎನ್ನುವುದಾಗಿದೆ.

ಇಲ್ಲಿ ಇನ್ನೊಂದು ಗಂಭಿರ ಮತ್ತು ಆಳವಾದ ಸಮಸ್ಯೆಯ ಬಗ್ಗೆ ಗಮನ ಹರಿಸುವ ಅಗತ್ಯವಿದೆ. ಪ್ರತಿ ಸ್ತರದಲ್ಲೂ ಚುನಾವಣೆಗಳು ಬೇರೆ ಬೇರೆಯಾಗಿ ನಡೆದಾಗ ಮತದಾರ ಪ್ರತಿ ಹಂತಕ್ಕೂ ತನ್ನ ವಿಭಿನ್ನ ಅಭಿಪ್ರಾಯದೊಂದಿಗೆ ಮತಚಲಾಯಿಸಬಹುದಾಗಿದೆ. ಆದರೆ ಬೇರೆ ಬೇರೆ ಸ್ತರದ ಚುನಾವಣೆಗಳು ಒಂದೇ ಬಾರಿ ಆದಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಎರಡೂ ಮತಗಳು ಒಂದಕ್ಕೊಂದು ಜೋಡಿಸಲಾಗುತ್ತವೆ. ನಿಸ್ಸಂಶಯವಾಗಿಯೂ ಇಂದು ನಮ್ಮ ಮತದಾರರು ಮುಂಚೆಗಿಂತಲೂ ಹೆಚ್ಚು ಜಾಗರೂಕಾಗುತ್ತಿದ್ದಾರೆ. ಓರಿಸ್ಸಾದ ಚುನಾವಣೆ ನಮಗೆ ಹೇಳುವುದೇನೆಂದರೆ, ಒಂದೇ ಸಮಯದಲ್ಲಿ ಮತ ಚಲಾಯಿಸಿದರೂ ಮತದಾರರು ಲೋಕಸಭೆಗಾಗಿ ಬಿಜೆಪಿಗೆ ಹೆಚ್ಚು ಮತ ನೀಡಿ ವಿಧಾನಸಭೆಗಾಗಿ ಬಿಜೆಡಿಯನ್ನು ಆಯ್ಕೆ ಮಾಡಬಹುದಾಗಿದೆ. ಆದರೆ ಎರಡು ಬೇರೆ ಬೇರೆ ಸ್ತರದ ಚುನಾವಣೆಗಳ ಪ್ರಚಾರ ಹಾಗೂ ಮತದಾನ ಒಂದೇ ಸಮಯದಲ್ಲಿ ನಡೆದಾಗ ಎರಡೂ ಚುನಾವಣೆಗಳಲ್ಲಿ ಸಂಯೋಜನೆಯ ಸ್ಥಿತಿ ಬರುವುದು ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಒಂದೇ ಸಮಯದಲ್ಲಿ ಚುನಾವಣೆ ನಡೆಸುವ ಪ್ರಸ್ತಾಪದಿಂದ ನಮ್ಮ ರಾಜಕೀಯದ ಸ್ಥಾನೀಯ ಮತ್ತು ವಲಯಾವಾರು ಇತಿಹಾಸವನ್ನು ಘಾಸಿಗೊಳಿಸುತ್ತದೆ.

ಇನ್ನೊಂದು ಪ್ರಶ್ನೆ, ಚುನಾವಣೆಯ ಕ್ಯಾಲೆಂಡರ್‍ನ ಸಮಸ್ಯೆಗಳನ್ನು ಪರಿಹರಿಸುವುದಕ್ಕಾಗಿ ದೇಶದ ಸಂವಿಧಾನಾತ್ಮಕ ವ್ಯವಸ್ಥೆಯಲ್ಲಿ ಇಂತಹ ದೊಡ್ಡ ಬದಲಾವಣೆ ಮಾಡುವ ಅವಶ್ಯಕತೆ ಇದೆಯೇ? ನನ್ನ ಪ್ರಕಾರ, ಚುನಾವಣೆಯ ಕ್ಯಾಲೆಂಡರ್‍ನಲ್ಲಿ ಮೂರು ಸುಧಾರಣೆಗಳನ್ನು ತಂದರೆ ‘ಒಂದು ರಾಷ್ಟ್ರ ಒಂದು ಚುನಾವಣೆ’ಯಂತಹ ಬೃಹತ್ ಸಂವಿಧಾನಾತ್ಮಕ ಬದಲಾವಣೆಯ ಯಾವುದೇ ಅವಶ್ಯಕತೆ ಇರುವುದಿಲ್ಲ.

ಮೊದಲನೆಯದು, ಚುನಾವಣೆಯ ಮಾದರಿ ನೀತೆ ಸಂಹಿತೆಯಲ್ಲಿ ಬದಲಾವಣೆ ಮಾಡಬೇಕಿದೆ, ಯಾವುದೇ ರಾಜ್ಯದ ವಿಧಾನಸಭೆ ಚುನಾವಣೆಯ ಸಮಯದಲ್ಲಿ ಕೇಂದ್ರ ಸರಕಾರದ ಸಾಮಾನ್ಯ ಕಾರ್ಯಕೆಲಸಗಳಲ್ಲಿ ಅಡೆತಡೆಗಳು ಬರದಂತೆ ನೀತಿ ಸಂಹಿತೆಯಲ್ಲಿ ಬದಲಾವಣೆ. ಎರಡನೇಯದ್ದು, ಚುನಾವಣಾ ಆಯೋಗ ಮತದಾನದ ಅವಧಿಯನ್ನು ಕಡಿತಗೊಳಿಸಬಹುದು. ಉತ್ತರಪ್ರದೇಶದಂತಹ ರಾಜ್ಯದ ವಿಧಾನಸಭೆ ಚುನಾವಣೆಯನ್ನು ತಿಂಗಳುಪೂರ್ತಿ 7 ಹಂತಗಳಲ್ಲಿ ನಡೆಸುವುದು ಸರಿಯಲ್ಲ. ಚುನಾವಣೆ ಮತದಾನದ ಪ್ರಕ್ರಿಯೆ ಒಂದು ವಾರದಲ್ಲಿ ಸಂಪೂರ್ಣವಾದರೆ ಸರಕಾರದ ಕೆಲಸಗಳಲ್ಲಿ ಅಡ್ಡಿ ಕಡಿಮೆ ಆಗುವವು. ಮೂರನೇಯದ್ದು, ಚುನಾವಣಾ ಆಯೋಗ ಬಯಸಿದಲ್ಲಿ ಹಲವು ರಾಜ್ಯಗಳ ಚುನಾವಣೆಗಳನ್ನು ಜೊತೆಗೂಡಿಸಿ ಒಂದೇ ಸಮಯದಲ್ಲಿ ಮಾಡಬಹುದು. ಯಾವುದೇ ಲೋಕಸಭೆ ಅಥವಾ ರಾಜ್ಯಸಭೆಯ ಅವಧಿ ಪೂರ್ಣವಾಗುವ 6 ತಿಂಗಳ ಮುಂಚೆಯ ತನಕ ಯಾವ ಸಮಯದಲ್ಲೂ ಚುನಾವಣೆ ನಡೆಸುವ ಅವಕಾಶ ಚುನಾವಣಾ ಆಯೋಗಕ್ಕೆ ನಮ್ಮ ಸಂವಿಧಾನ ಅವಕಾಶ ಕಲ್ಪಿಸಿದೆ. ಈ ಅವಕಾಶವನ್ನು ಬಳಸಿ ಚುನಾವಣಾ ಆಯೋಗವು ಕೆಲವು ರಾಜ್ಯಗಳ ಚುನಾವಣೆಗಳನ್ನು ಸ್ವಲ್ಪ ಸಮಯ ಮುಂಚೆ ಮಾಡಿ ಇತರ ರಾಜ್ಯಗಳ ಚುನಾವಣೆಗಳನ್ನು ಒಂದೆ ಸಮಯದಲ್ಲಿ ಮಾಡಬಹುದು ಹಾಗೂ ಇದರಿಂದ ಕೇಂದ್ರ ಸರಕರಾದ 5 ವರ್ಷದ ಕಾರ್ಯಾವಧಿಯಲ್ಲಿ 8ರಿಂದ 10 ದೊಡ್ಡ ರಾಜ್ಯ ಚುನಾವಣೆಗಳು ಆಗುವ ಬದಲಿಗೆ ಕೇವಲ ನಾಲ್ಕು ಅಥವಾ ಐದು ದೊಡ್ಡ ರಾಜ್ಯ ಚುನಾವಣೆಗಳು ಆಗಬಹುದಾಗಿದೆ.

ಚುನಾವಣೆಗಳಲ್ಲಿ ಆಗುವ ವೆಚ್ಚವನ್ನು ಕಡಿಮೆ ಮಾಡುವುದಕ್ಕೆ ಚುನಾವಣೆಯ ಕ್ಯಾಲೆಂಡರ್ ಬದಲಾವಣೆ ಮಾಡುವ ಅವಶ್ಯಕತೆ ಇಲ್ಲ. ಚುನಾವಣೆಗಳಲ್ಲಿ ಹುಚ್ಚುಚ್ಚಾಗಿ ಅತ್ಯಂತ ದೊಡ್ಡ ಮೊತ್ತವನ್ನು ಖರ್ಚು ಮಾಡುವುದಕ್ಕೆ ನಿಜವಾದ ಕಾರಣ ಇರುವುದು ಚುನಾವಣೆಗಳಲ್ಲಿ ಕಾನೂನಿನ ಎಲ್ಲೆಯನ್ನು ಮೀರಿ ಮಾಡುವ ಖರ್ಚು. ಹಾಗಾಗಿ ಚುನಾವಣಾ ಆಯೋಗ ಚುನಾವಣೆಯ ವೆಚ್ಚದ ಎಲ್ಲೆಯನ್ನು ಕಟ್ಟುನಿಟ್ಟಿನಿಂದ ಜಾರಿಗೆ ತರಬೇಕು.

ಇವೆಲ್ಲದರ ನಿಷ್ಕರ್ಷ ಸ್ಪಷ್ಟವಾಗಿದೆ: ಚುನಾವಣೆಯ ಕ್ಯಾಲೆಂಡರ್‍ನಿಂದ ಆಗುವ ಅಡೆತಡೆಗಳು ಹಾಗೂ ಆಳ್ವಿಕೆಯ ತೊಂದರೆಗಳನ್ನು ಬಗೆಹರಿಸಬೇಕಾದರೆ ‘ಒಂದು ರಾಷ್ಟ್ರ ಒಂದು ಚುನಾವಣೆ’ಯೇ ಪರಿಹಾರವಲ್ಲ, ಇದರ ಹೊರತಾಗಿಯೂ ನಿಸ್ಸಂಶಯವಾಗಿ ಆ ತೊಂದರೆಗಳನ್ನು ನಿವಾರಿಸಬಹುದು. ಪ್ರಶ್ನೆ ಇರುವುದು, ಇವೆಲ್ಲವುಗಳ ಹೊರತಾಗಿಯೂ ಸರಕಾರ ಈ ಪ್ರಸ್ತಾಪವನ್ನು ಏಕೆ ತರಲು ಪ್ರಯತ್ನಿಸುತ್ತಿದೆ ಹಾಗೂ ಅದರಲ್ಲೂ ತನ್ನ ಹೊಸ ಆಳ್ವಿಕೆಯ ಮೊಟ್ಟ ಮೊದಲ ಹೆಜ್ಜೆಯಾಗಿ? ಈ ಸರಕಾರದ ನಿಯತ್ತಾದರೂ ಏನಿದೆ ಇದರ ಹಿಂದೆ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...