Homeಅಂಕಣಗಳುಒಂದು ರಾಷ್ಟ್ರ ಒಂದು ಚುನಾವಣೆ ಎಂಬುದು ಸಂವಿಧಾನ ಮತ್ತು ಪ್ರಜಾತಂತ್ರ ವಿರೋಧಿಯಾದುದು

ಒಂದು ರಾಷ್ಟ್ರ ಒಂದು ಚುನಾವಣೆ ಎಂಬುದು ಸಂವಿಧಾನ ಮತ್ತು ಪ್ರಜಾತಂತ್ರ ವಿರೋಧಿಯಾದುದು

- Advertisement -
- Advertisement -

| ಯೋಗೇಂದ್ರ ಯಾದವ್ |

ಅನುವಾದ: ರಾಜಶೇಖರ್ ಅಕ್ಕಿ

ಒಂದು ರಾಷ್ಟ್ರ ಒಂದು ಚುನಾವಣೆ! ಇದನ್ನು ಕೇಳಲು ಎಷ್ಟು ಸುಂದರವಾಗಿದೆ. ಆದರೆ ಇದರ ಹಿಂದಿರುವ ಪ್ರಸ್ತಾಪವೂ ಅಷ್ಟೇ ಸುಂದರವಾಗಿದೆಯೇ ಎನ್ನುವುದು ನಮ್ಮ ಮುಂದಿನ ಪ್ರಶ್ನೆ. ದೇಶಾದ್ಯಂತ ಲೋಕಸಭೆ ಮತ್ತು ವಿಧಾನಸಭೆಯ ಚುನಾವಣೆಗಳನ್ನು 5 ವರ್ಷಗಳಲ್ಲಿ ಒಂದೇ ಬಾರಿ ಜೊತೆಗೇ ನಡೆಸುವ ಪ್ರಸ್ತಾಪ ನಮ್ಮ ಪ್ರಜಾಪ್ರಭುತ್ವಕ್ಕೆ ಒಳ್ಳೆಯ ಹೆಜ್ಜೆಯಾಗಬಲ್ಲದೇ?

ಮೊದಲ ನೋಟದಲ್ಲಿ ಇದೊಂದು ತುಂಬಾ ಸರಳ ಪ್ರಸ್ತಾಪ ಎನಿಸುತ್ತದೆ. ದೇಶಾದ್ಯಂತ ಪ್ರತಿ ಐದು ವರ್ಷಗಳಲ್ಲಿ ಚುನಾವಣೆ ಆಗುವುದು ನಿಶ್ಚಿತ. ಆದರೆ ವಿಧಾನಸಭೆಯ ಚುನಾವಣೆಗಳ ದಿನಾಂಕಗಳು ಲೋಕಸಭೆಯ ದಿನಾಂಕಗಳೊಂದಿಗೆ ಜೋಡಿಸಿಲ್ಲ. ಹಾಗಾಗಿ ಕೇಂದ್ರ ಸರಕಾರದ 5 ವರ್ಷಗಳ ಕಾರ್ಯಕಾಲದಲ್ಲಿ ಪ್ರತಿ ವರ್ಷ ಒಂದು ಅಥವಾ ಎರಡು ಬಾರಿ ರಾಜ್ಯಗಳ ವಿಧಾನಸಭೆಗೆ ಚುನಾವಣೆ ನಡೆಯುತ್ತವೆ. ಚುನಾವಣೆಯ ನೀತಿ ಸಂಹಿತೆ ಜಾರಿ ಬಂದ ಕೂಡಲೇ ಆ ರಾಜ್ಯಗಳ ಇದೇ ಕೇಂದ್ರ ಸರಕಾರಗಳ ಕಡತಗಳೂ ನಿಂತುಬಿಡುತ್ತವೆ. ಕೇಂದ್ರ ಸರಕಾರದ ಕಾರ್ಯವೈಖರಿಯಲ್ಲಿ ಅಡ್ಡಿ ಬರುತ್ತವೆ. ಸರಕಾರ ಚುನಾವಣೆಯ ಒತ್ತಡದಲ್ಲಿ ಕೆಲಸ ಮಾಡುತ್ತವೆ, ಹಾಗಾಗಿ ಯಾವುದೇ ದೀರ್ಘಕಾಲೀನ ನೀತಿಗಳನ್ನು ರೂಪಿಸಲು ಆಗುವುದಿಲ್ಲ. ಹಾಗೂ ರಾಜ್ಯ ಮತ್ತು ಕೇಂದ್ರದ ಚುನಾವಣೆಗಳನ್ನು ಬೇರೆ ಬೇರೆಯಾಗಿ ನಡೆಸುವುದರಿಂದ ವೆಚ್ಚವೂ ದುಪ್ಪಟಾಗುತ್ತದೆ.

ಹಾಗಾಗಿಯೇ 5 ವರ್ಷಗಳಲ್ಲಿ ಒಂದೇ ಸಲ ಒಟ್ಟಾಗಿ ಎಲ್ಲಾ ರಾಜ್ಯಗಳ ವಿಧಾನಸಭೆ ಹಾಗೂ ಲೋಕಸಭೆಯ ಚುನಾವಣೆಗಳನ್ನು ನಡೆಸಿ, ಮುಂದಿನ 5 ವರ್ಷಗಳ ತನಕ ಎಲ್ಲರೂ ಯಾವುದೇ ಅಡತಡೆಗಳಿಲ್ಲದೆ ತಮ್ಮ ಸರಕಾರಗಳನ್ನು ನಡೆಸುವುದಕ್ಕೆ ಈ ಪ್ರಸ್ತಾಪ.

5 ವರ್ಷಗಳ ನಂತರ ಒಂದೇ ಬಾರಿ ಎಲ್ಲರ ಕೆಲಸಗಳ ಮೌಲ್ಯಮಾಪನವಾಗಬೇಕು ಹಾಗೂ ಹೊಸ ಲೋಕಸಭೆ ಮತ್ತು ವಿಧಾನಸಭೆಗಳನ್ನು ಚುನಾಯಿಸಬೇಕು. ಮೊದಲ ಬಾರಿ ಇದನ್ನು ಕೇಳಿದಾಗ ಈ ಮಾತುಗಳು ಸರಳ ಮತ್ತು ನೇರ ಅನಿಸುತ್ತವೆ.
ಆದರೆ ವಾಸ್ತವದಲ್ಲಿ ಈ ಪ್ರಸ್ತಾಪ ಅಷ್ಟು ನೇರವೂ ಇಲ್ಲ, ಸರಳವೂ ಇಲ್ಲ. ಈ ಪ್ರಸ್ತಾಪ ಬರೀ ಚುನಾವಣೆಗಳ ದಿನಾಂಕ ಬದಲಿಸುವ ಪ್ರಸ್ತಾಪ ಅಲ್ಲ. ಇದನ್ನು ಕೇವಲ ಆಡಳಿತಾತ್ಮಕ ಬದಲಾವಣೆಯಿಂದ ಜಾರಿಗೊಳಿಸಲಾಗುವುದಿಲ್ಲ.

ಈ ಪ್ರಸ್ತಾಪವನ್ನು ಒಪ್ಪಿಕೊಳ್ಳುವ ಅರ್ಥವೆಂದರೆ, ನಮ್ಮ ಸಂವಿಧನ ಮತ್ತು ನಮ್ಮ ಪ್ರಜಾಪ್ರಭುತ್ವದ ಮೂಲಭೂತ ಅಡಿಪಾಯದಲ್ಲೇ ಬದಲಾವಣೆ ಮಾಡುವುದಕ್ಕೆ ಒಪ್ಪಿಕೊಂಡಂತೆ. ನಮ್ಮ ಸಂವಿಧಾನವನ್ನು ರಚಿಸಿದವರು ನಮ್ಮ ದೇಶದ ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು ಅಮೇರಿಕದ ರಾಷ್ಟ್ರಪತಿಯ ಪದ್ಧತಿಯನ್ನು ಒಪ್ಪಿಕೊಳ್ಳದೇ ಬ್ರಿಟನ್ನಿನ ಸಂಸದೀಯ ಪ್ರಜಾಪ್ರಭುತ್ವದ ಅಡಿಪಾಯದ ಚೌಕಟ್ಟನ್ನು ನಮ್ಮದಾಗಿಸಿಕೊಂಡರು. ನಮ್ಮ ಸಂಸದೀಯ ಚೌಕಟ್ಟಿನಲ್ಲಿ ಪ್ರಧಾನಮಂತ್ರಿಗೆ ಸಂಸತ್ತಿನಲ್ಲಿ ಬಹುಮತ ಪಡೆಯುವುದು ಅನಿವಾರ್ಯವಾಗಿದೆ. ಯಾವುದೇ ಪ್ರಧಾನಮಂತ್ರಿ ಅಥವಾ ಲೋಕಸಭೆಯಲ್ಲಿ ವಿಶ್ವಾಸ ಮಂಡನೆಯಲ್ಲಿ ಸೋತಕೂಡಲೇ ಆ ಸರಕಾರವು ತಕ್ಷಣ ರಾಜೀನಾಮೆ ನೀಡಬೇಕಾಗುತ್ತದೆ.

ಯೋಚಿಸಿ, ಒಂದು ವೇಳೆ ‘ಒಂದು ರಾಷ್ಟ್ರ ಒಂದು ಚುನಾವಣೆ’ ಯ ಪ್ರಸ್ತಾಪವನ್ನು ಸ್ವೀಕಾರ ಮಾಡಲಾಗಿ ಹಾಗೂ ಒಂದು ವೇಳೆ ಯಾವುದೇ ಒಂದು ರಾಜ್ಯದಲ್ಲಿ ಅಥವಾ ಕೇಂದ್ರದಲ್ಲಿ ಯಾವುದೇ ಸರಕಾರ 2 ವರ್ಷಗಳ ನಂತರ ಅಥವಾ 4 ವರ್ಷಗಳ ನಂತರ ಬಹುಮತ ಕಳೆದುಕೊಂಡರೆ ಆ ಪರಿಸ್ಥಿತಿಯಲ್ಲಿ ಏನಾಗಬಹುದು? ಆ ಸರಕಾರಕ್ಕೆ 5 ವರ್ಷಗಳ ತನಕ ಬಹುಮತ ಇರಲಿ ಬಿಡಲಿ ಮುಂದುವರೆಸಲು ಅವಕಾಶ ನೀಡಲಾಗುವುದೇ? ಒಂದು ವೇಳೆ ಇಂಥ ನಿಯಮ ಮಾಡಿದಲ್ಲಿ ಸದನದಲ್ಲಿ ತನ್ನ ಬಜೆಟ್ ಅನ್ನೆ ಪಾಸ್ ಮಾಡಲು ಆಗದ ಆ ಸರಕಾರ ತನ್ನ ಆಳ್ವಿಕೆಯನ್ನು ಹೇಗೆ ಮಾಡಬಲ್ಲದು? ಅಥವಾ ಕೇವಲ ಬಾಕಿ ಉಳಿದ ಅವಧಿಗಾಗಿಯೇ ಮತ್ತೊಮ್ಮೆ ಚುನಾವಣೆ ನಡೆಸಲಾಗುವುದೇ? ಇದರರ್ಥ ಒಂದು ವೇಳೆ ಯಾವುದೊಂದು ಸರಕಾರ ನಾಲ್ಕು ವರ್ಷಗಳ ನಂತರ ಕುಸಿದುಬಿದ್ದರೆ ರಾಜ್ಯ ಅಥವಾ ದೇಶದಲ್ಲಿ ಕೇವಲ ಒಂದು ವರ್ಷ ಸರಕಾರವನ್ನು ಚುನಾಯಿಸುವುದಕ್ಕಾಗಿ ಹೊಸ ಚುನಾವಣೆಗಳು ಆಗಬೇಕಾಗುತ್ತದೆ. ಹಾಗಾಗಿ ನಮ್ಮ ಮುಂದಿನ ಪ್ರಶ್ನೆ, ಇಂತಹ ಪರಿಸ್ಥಿತಿಯಲ್ಲಿ ಈ ಪ್ರಸ್ತಾಪ ನಮ್ಮ ಪ್ರಜಾಪ್ರಭುತ್ವದ ಸಮಸ್ಯೆಗಳನ್ನು ಕಡಿಮೆ ಮಾಡುವುದೇ ಅಥವಾ ಹೆಚ್ಚಿಸುವುದೇ ಎನ್ನುವುದಾಗಿದೆ.

ಇಲ್ಲಿ ಇನ್ನೊಂದು ಗಂಭಿರ ಮತ್ತು ಆಳವಾದ ಸಮಸ್ಯೆಯ ಬಗ್ಗೆ ಗಮನ ಹರಿಸುವ ಅಗತ್ಯವಿದೆ. ಪ್ರತಿ ಸ್ತರದಲ್ಲೂ ಚುನಾವಣೆಗಳು ಬೇರೆ ಬೇರೆಯಾಗಿ ನಡೆದಾಗ ಮತದಾರ ಪ್ರತಿ ಹಂತಕ್ಕೂ ತನ್ನ ವಿಭಿನ್ನ ಅಭಿಪ್ರಾಯದೊಂದಿಗೆ ಮತಚಲಾಯಿಸಬಹುದಾಗಿದೆ. ಆದರೆ ಬೇರೆ ಬೇರೆ ಸ್ತರದ ಚುನಾವಣೆಗಳು ಒಂದೇ ಬಾರಿ ಆದಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಎರಡೂ ಮತಗಳು ಒಂದಕ್ಕೊಂದು ಜೋಡಿಸಲಾಗುತ್ತವೆ. ನಿಸ್ಸಂಶಯವಾಗಿಯೂ ಇಂದು ನಮ್ಮ ಮತದಾರರು ಮುಂಚೆಗಿಂತಲೂ ಹೆಚ್ಚು ಜಾಗರೂಕಾಗುತ್ತಿದ್ದಾರೆ. ಓರಿಸ್ಸಾದ ಚುನಾವಣೆ ನಮಗೆ ಹೇಳುವುದೇನೆಂದರೆ, ಒಂದೇ ಸಮಯದಲ್ಲಿ ಮತ ಚಲಾಯಿಸಿದರೂ ಮತದಾರರು ಲೋಕಸಭೆಗಾಗಿ ಬಿಜೆಪಿಗೆ ಹೆಚ್ಚು ಮತ ನೀಡಿ ವಿಧಾನಸಭೆಗಾಗಿ ಬಿಜೆಡಿಯನ್ನು ಆಯ್ಕೆ ಮಾಡಬಹುದಾಗಿದೆ. ಆದರೆ ಎರಡು ಬೇರೆ ಬೇರೆ ಸ್ತರದ ಚುನಾವಣೆಗಳ ಪ್ರಚಾರ ಹಾಗೂ ಮತದಾನ ಒಂದೇ ಸಮಯದಲ್ಲಿ ನಡೆದಾಗ ಎರಡೂ ಚುನಾವಣೆಗಳಲ್ಲಿ ಸಂಯೋಜನೆಯ ಸ್ಥಿತಿ ಬರುವುದು ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಒಂದೇ ಸಮಯದಲ್ಲಿ ಚುನಾವಣೆ ನಡೆಸುವ ಪ್ರಸ್ತಾಪದಿಂದ ನಮ್ಮ ರಾಜಕೀಯದ ಸ್ಥಾನೀಯ ಮತ್ತು ವಲಯಾವಾರು ಇತಿಹಾಸವನ್ನು ಘಾಸಿಗೊಳಿಸುತ್ತದೆ.

ಇನ್ನೊಂದು ಪ್ರಶ್ನೆ, ಚುನಾವಣೆಯ ಕ್ಯಾಲೆಂಡರ್‍ನ ಸಮಸ್ಯೆಗಳನ್ನು ಪರಿಹರಿಸುವುದಕ್ಕಾಗಿ ದೇಶದ ಸಂವಿಧಾನಾತ್ಮಕ ವ್ಯವಸ್ಥೆಯಲ್ಲಿ ಇಂತಹ ದೊಡ್ಡ ಬದಲಾವಣೆ ಮಾಡುವ ಅವಶ್ಯಕತೆ ಇದೆಯೇ? ನನ್ನ ಪ್ರಕಾರ, ಚುನಾವಣೆಯ ಕ್ಯಾಲೆಂಡರ್‍ನಲ್ಲಿ ಮೂರು ಸುಧಾರಣೆಗಳನ್ನು ತಂದರೆ ‘ಒಂದು ರಾಷ್ಟ್ರ ಒಂದು ಚುನಾವಣೆ’ಯಂತಹ ಬೃಹತ್ ಸಂವಿಧಾನಾತ್ಮಕ ಬದಲಾವಣೆಯ ಯಾವುದೇ ಅವಶ್ಯಕತೆ ಇರುವುದಿಲ್ಲ.

ಮೊದಲನೆಯದು, ಚುನಾವಣೆಯ ಮಾದರಿ ನೀತೆ ಸಂಹಿತೆಯಲ್ಲಿ ಬದಲಾವಣೆ ಮಾಡಬೇಕಿದೆ, ಯಾವುದೇ ರಾಜ್ಯದ ವಿಧಾನಸಭೆ ಚುನಾವಣೆಯ ಸಮಯದಲ್ಲಿ ಕೇಂದ್ರ ಸರಕಾರದ ಸಾಮಾನ್ಯ ಕಾರ್ಯಕೆಲಸಗಳಲ್ಲಿ ಅಡೆತಡೆಗಳು ಬರದಂತೆ ನೀತಿ ಸಂಹಿತೆಯಲ್ಲಿ ಬದಲಾವಣೆ. ಎರಡನೇಯದ್ದು, ಚುನಾವಣಾ ಆಯೋಗ ಮತದಾನದ ಅವಧಿಯನ್ನು ಕಡಿತಗೊಳಿಸಬಹುದು. ಉತ್ತರಪ್ರದೇಶದಂತಹ ರಾಜ್ಯದ ವಿಧಾನಸಭೆ ಚುನಾವಣೆಯನ್ನು ತಿಂಗಳುಪೂರ್ತಿ 7 ಹಂತಗಳಲ್ಲಿ ನಡೆಸುವುದು ಸರಿಯಲ್ಲ. ಚುನಾವಣೆ ಮತದಾನದ ಪ್ರಕ್ರಿಯೆ ಒಂದು ವಾರದಲ್ಲಿ ಸಂಪೂರ್ಣವಾದರೆ ಸರಕಾರದ ಕೆಲಸಗಳಲ್ಲಿ ಅಡ್ಡಿ ಕಡಿಮೆ ಆಗುವವು. ಮೂರನೇಯದ್ದು, ಚುನಾವಣಾ ಆಯೋಗ ಬಯಸಿದಲ್ಲಿ ಹಲವು ರಾಜ್ಯಗಳ ಚುನಾವಣೆಗಳನ್ನು ಜೊತೆಗೂಡಿಸಿ ಒಂದೇ ಸಮಯದಲ್ಲಿ ಮಾಡಬಹುದು. ಯಾವುದೇ ಲೋಕಸಭೆ ಅಥವಾ ರಾಜ್ಯಸಭೆಯ ಅವಧಿ ಪೂರ್ಣವಾಗುವ 6 ತಿಂಗಳ ಮುಂಚೆಯ ತನಕ ಯಾವ ಸಮಯದಲ್ಲೂ ಚುನಾವಣೆ ನಡೆಸುವ ಅವಕಾಶ ಚುನಾವಣಾ ಆಯೋಗಕ್ಕೆ ನಮ್ಮ ಸಂವಿಧಾನ ಅವಕಾಶ ಕಲ್ಪಿಸಿದೆ. ಈ ಅವಕಾಶವನ್ನು ಬಳಸಿ ಚುನಾವಣಾ ಆಯೋಗವು ಕೆಲವು ರಾಜ್ಯಗಳ ಚುನಾವಣೆಗಳನ್ನು ಸ್ವಲ್ಪ ಸಮಯ ಮುಂಚೆ ಮಾಡಿ ಇತರ ರಾಜ್ಯಗಳ ಚುನಾವಣೆಗಳನ್ನು ಒಂದೆ ಸಮಯದಲ್ಲಿ ಮಾಡಬಹುದು ಹಾಗೂ ಇದರಿಂದ ಕೇಂದ್ರ ಸರಕರಾದ 5 ವರ್ಷದ ಕಾರ್ಯಾವಧಿಯಲ್ಲಿ 8ರಿಂದ 10 ದೊಡ್ಡ ರಾಜ್ಯ ಚುನಾವಣೆಗಳು ಆಗುವ ಬದಲಿಗೆ ಕೇವಲ ನಾಲ್ಕು ಅಥವಾ ಐದು ದೊಡ್ಡ ರಾಜ್ಯ ಚುನಾವಣೆಗಳು ಆಗಬಹುದಾಗಿದೆ.

ಚುನಾವಣೆಗಳಲ್ಲಿ ಆಗುವ ವೆಚ್ಚವನ್ನು ಕಡಿಮೆ ಮಾಡುವುದಕ್ಕೆ ಚುನಾವಣೆಯ ಕ್ಯಾಲೆಂಡರ್ ಬದಲಾವಣೆ ಮಾಡುವ ಅವಶ್ಯಕತೆ ಇಲ್ಲ. ಚುನಾವಣೆಗಳಲ್ಲಿ ಹುಚ್ಚುಚ್ಚಾಗಿ ಅತ್ಯಂತ ದೊಡ್ಡ ಮೊತ್ತವನ್ನು ಖರ್ಚು ಮಾಡುವುದಕ್ಕೆ ನಿಜವಾದ ಕಾರಣ ಇರುವುದು ಚುನಾವಣೆಗಳಲ್ಲಿ ಕಾನೂನಿನ ಎಲ್ಲೆಯನ್ನು ಮೀರಿ ಮಾಡುವ ಖರ್ಚು. ಹಾಗಾಗಿ ಚುನಾವಣಾ ಆಯೋಗ ಚುನಾವಣೆಯ ವೆಚ್ಚದ ಎಲ್ಲೆಯನ್ನು ಕಟ್ಟುನಿಟ್ಟಿನಿಂದ ಜಾರಿಗೆ ತರಬೇಕು.

ಇವೆಲ್ಲದರ ನಿಷ್ಕರ್ಷ ಸ್ಪಷ್ಟವಾಗಿದೆ: ಚುನಾವಣೆಯ ಕ್ಯಾಲೆಂಡರ್‍ನಿಂದ ಆಗುವ ಅಡೆತಡೆಗಳು ಹಾಗೂ ಆಳ್ವಿಕೆಯ ತೊಂದರೆಗಳನ್ನು ಬಗೆಹರಿಸಬೇಕಾದರೆ ‘ಒಂದು ರಾಷ್ಟ್ರ ಒಂದು ಚುನಾವಣೆ’ಯೇ ಪರಿಹಾರವಲ್ಲ, ಇದರ ಹೊರತಾಗಿಯೂ ನಿಸ್ಸಂಶಯವಾಗಿ ಆ ತೊಂದರೆಗಳನ್ನು ನಿವಾರಿಸಬಹುದು. ಪ್ರಶ್ನೆ ಇರುವುದು, ಇವೆಲ್ಲವುಗಳ ಹೊರತಾಗಿಯೂ ಸರಕಾರ ಈ ಪ್ರಸ್ತಾಪವನ್ನು ಏಕೆ ತರಲು ಪ್ರಯತ್ನಿಸುತ್ತಿದೆ ಹಾಗೂ ಅದರಲ್ಲೂ ತನ್ನ ಹೊಸ ಆಳ್ವಿಕೆಯ ಮೊಟ್ಟ ಮೊದಲ ಹೆಜ್ಜೆಯಾಗಿ? ಈ ಸರಕಾರದ ನಿಯತ್ತಾದರೂ ಏನಿದೆ ಇದರ ಹಿಂದೆ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಹೈದರಾಬಾದ್| ಎಕ್ಸ್‌ಪ್ರೆಸ್‌ವೇನಲ್ಲಿ ನೇಮಕಾತಿ ಪರೀಕ್ಷೆ ಓಎಂಆರ್ ಹಾಳೆಗಳು ಪತ್ತೆ: ತನಿಖೆಗೆ ಆದೇಶ

ನೇಮಕಾತಿ ಪರೀಕ್ಷೆಯ ಮೂಲ ಆಪ್ಟಿಕಲ್ ಮಾರ್ಕ್ ರೆಕಗ್ನಿಷನ್ (ಒಎಂಆರ್) ಹಾಳೆಗಳು ಹೈದರಾಬಾದ್‌ನ ರಸ್ತೆಬದಿಯಲ್ಲಿ ರಾಶಿ ರಾಶಿಯಾಗಿ ಬಿದ್ದಿರುವುದು ಕಂಡುಬಂದ ನಂತರ ತೆಲಂಗಾಣ ಸಾರ್ವಜನಿಕ ಸೇವಾ ಆಯೋಗ (ಟಿಜಿಪಿಎಸ್‌ಸಿ) ತನಿಖೆಗೆ ಆದೇಶಿಸಿದೆ. 2018 ರ ಹಾಸ್ಟೆಲ್...

ಕರೂರ್ ಕಾಲ್ತುಳಿತ ಮೃತರ ಕುಟುಂಬಸ್ಥರಿಗೆ ನೀಡಿದ್ದ ಸರ್ಕಾರಿ ಉದ್ಯೋಗವನ್ನು ರದ್ದುಗೊಳಿಸಿದ ಮದ್ರಾಸ್ ಹೈಕೋರ್ಟ್

ಕರೂರ್ ಕಾಲ್ತುಳಿತ ದುರಂತದಲ್ಲಿ ಮೃತಪಟ್ಟವರ ಕುಟುಂಬಸ್ಥರಿಗೆ ಸರ್ಕಾರಿ ಉದ್ಯೋಗ ನೀಡಿದ್ದ ತಮಿಳುನಾಡು ಸರ್ಕಾರದ ಆದೇಶವನ್ನು ಮದ್ರಾಸ್ ಹೈಕೋರ್ಟ್ ಸೋಮವಾರ ರದ್ದುಗೊಳಿಸಿದೆ. ಈ ನೇಮಕಾತಿಗಳನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ (PIL) ವಿಚಾರಣೆ...

ವಿದ್ಯಾರ್ಥಿಗಳ ಬಂಧನ: ಮತ್ತೆ ಪ್ರತಿಭಟನೆಯ ಎಚ್ಚರಿಕೆ ನೀಡಿದ ‘ಕಾಕ್ರೋಚ್ ಜನತಾ ಪಾರ್ಟಿ’

ಪ್ರತಿಭಟನಾಕಾರರ ವಿರುದ್ಧ ಯಾವುದೇ ಪೋಲೀಸ್ ಕ್ರಮ ಕೈಗೊಳ್ಳುವುದಿಲ್ಲ ಎಂಬ ಒಪ್ಪಂದವನ್ನು ಸಂಪೂರ್ಣವಾಗಿ ಉಲ್ಲಂಘಿಸಲಾಗಿದೆ ಎಂದು 'ಕಾಕ್ರೋಚ್ ಜನತಾ ಪಾರ್ಟಿ' (CJP) ರಾಷ್ಟ್ರೀಯ ವಕ್ತಾರ ಅಶುತೋಷ್ ರಂಕಾ ಎಕ್ಸ್ (X) ಸಾಮಾಜಿಕ ಜಾಲತಾಣದ ಪೋಸ್ಟ್‌ನಲ್ಲಿ...

ಜೆನ್ ಝೀ ಪೀಳಿಗೆಯ ಹೋರಾಟ ಮತ್ತು ಮುಂದಿನ ನಡೆ.!

NEET ಪರೀಕ್ಷೆಯ ಅಕ್ರಮ ಹಾಗೂ ಪೇಪರ್ ಸೋರಿಕೆ ವಿರುದ್ಧ 'ಜೆನ್ ಝೀ' (Gen Z) ಯುವ ಸಮೂಹ ನಡೆಸಿದ ಹೋರಾಟವು ಕೇವಲ ಒಂದು ತಾತ್ಕಾಲಿಕ ವಿದ್ಯಾರ್ಥಿ ಹೋರಾಟವಾಗಿ ಉಳಿದಿಲ್ಲ. ಇದು ಪ್ರಭುತ್ವದ ಅಹಂಕಾರವನ್ನು...

ಬಿಹಾರ| ವಿದ್ಯಾರ್ಥಿಗಳ ಪ್ರತಿಭಟನೆಯ ಸಮಯದಲ್ಲಿ ಎಕೆ-47 ಬಳಸಿದ ಪೊಲೀಸ್‌ ಕಾನ್‌ಸ್ಟೆಬಲ್ ಅಮಾನತು

ಬಿಹಾರದ ಸಿವಾನ್ ಜಿಲ್ಲೆಯಲ್ಲಿ ಜುಲೈ 25 ರಂದು ನಡೆದ ವಿದ್ಯಾರ್ಥಿಗಳ ಪ್ರತಿಭಟನೆಯ ಸಮಯದಲ್ಲಿ ಎಕೆ-47 ರೈಫಲ್ ಬಳಸಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಪೊಲೀಸ್ ಕಾನ್‌ಸ್ಟೆಬಲ್ ಒಬ್ಬರನ್ನು ಅಮಾನತುಗೊಳಿಸಲಾಗಿದೆ ಎಂದು...

ನಾಳೆ ನನ್ನ ಮಗನೂ ಮೋದಿ ವಿರುದ್ಧ ಮಾತನಾಡಬಹುದು: ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ

ಅಸ್ಸಾಂ ಸಚಿವರೊಬ್ಬರ ಮಗಳು ಗುವಾಹಟಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು, ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿರುವುದು ರಾಜ್ಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ಘಟನೆಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ...

ವಿದ್ಯಾರ್ಥಿಗಳನ್ನು ಗುಂಡಿಕ್ಕಿ ಕೊಲ್ಲಬೇಕಿತ್ತು: ಆರ್‌ಎಸ್‌ಎಸ್ ಸಿದ್ಧಾಂತವಾದಿ ಟಿ.ಜಿ. ಮೋಹನ್‌ದಾಸ್ ವಿಕೃತ ಹೇಳಿಕೆ

ನವದೆಹಲಿ: ಕೇಂದ್ರ ಸರ್ಕಾರದ ಶಿಕ್ಷಣ ನೀತಿಗಳು ಹಾಗೂ ಪರೀಕ್ಷಾ ಅಕ್ರಮಗಳ ವಿರುದ್ಧ ದೆಹಲಿಯ ಜಂತರ್ ಮಂತರ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸಿ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿದ್ದ ಯುವಜನರ ವಿರುದ್ಧ...

ಸಿಜೆಪಿ ಪ್ರತಿಭಟನೆ: ವಿದ್ಯಾರ್ಥಿಗಳ ಮೇಲೆ ‘ಪೆಲೆಟ್‌ ಗನ್’ ದಾಳಿ ದೃಢ; ನಿಯಮಾವಳಿಗಳನ್ನು ಉಲ್ಲಂಘಿಸಿ ಬಲಪ್ರಯೋಗ ನಡೆಸಿರುವ RAF

ನವದೆಹಲಿ: ತಮ್ಮ ಹಕ್ಕುಗಳಿಗಾಗಿ ಪ್ರಜಾಸತ್ತಾತ್ಮಕವಾಗಿ ಧ್ವನಿ ಎತ್ತುತ್ತಿದ್ದ ವಿದ್ಯಾರ್ಥಿ ಸಮುದಾಯದ ಮೇಲೆ ಕೇಂದ್ರದ ಸಶಸ್ತ್ರ ಪಡೆಗಳು ಎಸಗಿದ ದೌರ್ಜನ್ಯದ ಕರಾಳ ಮುಖ ಕೊನೆಗೂ ಅನಾವರಣಗೊಂಡಿದೆ. ಜುಲೈ 20ರಂದು ದೆಹಲಿಯ ಕನ್ಹಾಟ್ ಪ್ಲೇಸ್ ಪ್ರದೇಶದಲ್ಲಿ...

ಕೇವಲ ಪ್ರತಿಭಟಿಸಿದ್ದಕ್ಕೆ ವಿದ್ಯಾರ್ಥಿಗಳು ಜೈಲುಪಾಲು; ಗಂಗೆಯ ದೋಣಿಯಲ್ಲಿ ಬಿರಿಯಾನಿ ತಿಂದವರಿಗೂ ಸಿಗುತ್ತಿಲ್ಲ ಜಾಮೀನು : ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಕಳವಳ

ಭಾರತದಲ್ಲಿ ಭಿನ್ನಾಭಿಪ್ರಾಯಗಳನ್ನು ಗೌರವಿಸುವ ಮತ್ತು ಅವುಗಳಿಗೆ ಅವಕಾಶ ನೀಡುವ ಸಾರ್ವಜನಿಕ ಸ್ಥಳಗಳು ಎಷ್ಟು ಕಡಿಮೆಯಾಗುತ್ತಿವೆ ಎಂದರೆ, ತಮ್ಮ ಹಕ್ಕುಗಳಿಗಾಗಿ ಪ್ರತಿಭಟಿಸುವ ವಿದ್ಯಾರ್ಥಿಗಳನ್ನು ಬಂಧಿಸಿ ಅವರಿಗೆ ಜಾಮೀನು ನಿರಾಕರಿಸಲಾಗುತ್ತಿದೆ ಎಂದು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ...

ಪ.ಬಂಗಾಳ: ನೂತನ ‘ಗೂಂಡಾ ಕಾಯ್ದೆ’ ಅಡಿ NEET ಪ್ರತಿಭಟನೆಯಲ್ಲಿ ಭಾಗಿಯಾದ 10 ಮುಸ್ಲಿಂ ಯುವಕರು ಸೇರಿದಂತೆ 11 ಜನರ ಬಂಧನ 

ಕೋಲ್ಕತ್ತಾ: ಕೇಂದ್ರದ ನರೇಂದ್ರ ಮೋದಿ ಸರ್ಕಾರದ ಶಿಕ್ಷಣ ಕ್ಷೇತ್ರದ ವೈಫಲ್ಯಗಳು ಹಾಗೂ ನೀಟ್-ಯುಜಿ (NEET-UG) ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣವನ್ನು ಖಂಡಿಸಿ ಶುಕ್ರವಾರ ಕೋಲ್ಕತ್ತಾದಲ್ಲಿ ನಡೆದ ಬೃಹತ್ ವಿದ್ಯಾರ್ಥಿ ಪ್ರತಿಭಟನೆಯು ತೀವ್ರ ರಾಜಕೀಯ...