Homeಕರ್ನಾಟಕಫ್ಯಾಕ್ಟ್ ಚೆಕ್: ಬೆಂಗಳೂರಲ್ಲಿ ‘ಮೋದಿ ಮಸೀದಿ’ ಇದೆಯೇ? ಇಲ್ಲಿದೆ ನೋಡಿ ಅಸಲಿ ಕಹಾನಿ!

ಫ್ಯಾಕ್ಟ್ ಚೆಕ್: ಬೆಂಗಳೂರಲ್ಲಿ ‘ಮೋದಿ ಮಸೀದಿ’ ಇದೆಯೇ? ಇಲ್ಲಿದೆ ನೋಡಿ ಅಸಲಿ ಕಹಾನಿ!

ಈ ಮಸೀದಿಯನ್ನು 175 ವರ್ಷಗಳಿಗೂ ಹಿಂದೆಯೇ ಕಟ್ಟಲಾಗಿದೆ. ಇತ್ತೀಚಿಗೆ ಈ ಮಸೀದಯನ್ನು ನವೀಕರಣ ಮಾಡಿದ ಕಾರಣಕ್ಕಾಗಿ ಈಗ ಅದು ಸುದ್ದಿಯಲ್ಲಿದೆ. ಈ ಮಸೀದಿ ಶಿವಾಜಿ ನಗರದಲ್ಲಿದೆ.

- Advertisement -
- Advertisement -

ಸಾಮಾಜಿಕ ಜಾಲತಾಣಗಳಲ್ಲಿ ಹೀಗೊಂದು ಫೋಟೊ-ಸುದ್ದಿ ಹರಿದಾಡುತ್ತಿದೆ: ‘ಬೆಂಗಳೂರಿನ ಮುಸ್ಲಿಮರು ಮಸೀದಿಯೊಂದಕ್ಕೆ ನರೇಂದ್ರ ಮೋದಿ ಹೆಸರಿಟ್ಟಿದ್ದಾರೆ… ಇದನ್ನು ನೋಡಿ ಎಷ್ಟು ಜನ ಆತ್ಮಹತ್ಯೆ ಮಾಡಿಕೊಳ್ಳುತ್ತಾರೋ’ ಎಂಬುದು ಆ ಸುದ್ದಿಯ ಸಾರಾಂಶ.

ಮೇಲಿನ ಸಂದೇಶದ ಪ್ರಕಾರ, ಬೆಂಗಳೂರಿನಲ್ಲಿ ಮಸೀದಿಯೊಂದಕ್ಕೆ ಪ್ರಧಾನಿ ನರೇಂದ್ರ ಮೋದಿ ಹೆಸರಿಟ್ಟಿದ್ದಾರೆ. ಮೋದಿಯವರು ಫಾಲೋ ಮಾಡುವ ಟ್ವೀಟ್ ಖಾತೆ( @mahesh10816 ) ಯಿಂದ ಮೇಲಿನ ಸಂದೇಶವನ್ನು ಟ್ವೀಟ್ ಮಾಡಲಾಗಿದ್ದು, ಈ ಟ್ವೀಟ್ ಜೊತೆ ಎರಡು ಫೋಟೊಗಳೂ ಇವೆ. ಜೂನ್ 20ರ ಈ ಸಂದೇಶ ಅಂದೇ 400ಕ್ಕೂ ಹೆಚ್ಚು ಬಾರಿ ರೀಟ್ವೀಟ್ ಆಗಿದೆ. ಪೋಸ್ಟ್‍ನ ಎಡಕ್ಕಿರುವ ಫೋಟೊದಲ್ಲಿ ‘MODI MASJID’ ಎಂಬುದನ್ನು, ಬಲಭಾಗದ ಫೋಟೊದಲ್ಲಿ ಹಿಂಬದಿಯಲ್ಲಿ ಮೋದಿಯ ಪೋಸ್ಟರ್ ಅನ್ನು ಕಾಣಬಹುದು. ವ್ಯಾಟ್ಸಾಪ್ ನಲ್ಲೂ ಈ ಸಂದೇಶ ವಿಪರೀತ ಹರಿದಾಡುತ್ತಿದೆ.

ಕನ್ನಡದ ಶೀರ್ಷಿಕೆ ಇರುವ ಫೋಟೊ ಒಂದು ಕೂಡ ಹರಿದಾಡುತ್ತಿದ್ದು, ‘ಮೋದಿ ಹೆಸರಲ್ಲಿ 12 ಕೋಟಿಯ ಮಸೀದಿ, ಮೋದಿ ಮಸೀದಿಯಲ್ಲಿ ಜಮೀರ ಖಾನ್’ ಎಂಬ ಸಾಲುಗಳಿವೆ. ಇಂಥದ್ದನ್ನು ತೋರಿಸಿ, ನೋಡಿ ಬೆಂಗಳೂರಿನ ಮುಸ್ಲಿಮರೂ ಮೋದಿ ಸಾಧನೆ ಮೆಚ್ಚಿದ್ದಾರೆ ಎಂದು ಸುಳ್ಳನ್ನು ಹರಡುವ ಕುತಂತ್ರವಿದು.

ಸತ್ಯ: ಬೆಂಗಳೂರಿನ ಯಾವ ಮಸಿದಿಗೂ ನರೆಂದ್ರ ಮೋದಿಯ ಹೆಸರನ್ನು ಇಡಲಾಗಿಲ್ಲ. ಮೇಲಿನ ಸಂದೇಶವನ್ನು ಮೋದಿ ಕೆಲವರು ಮುಸ್ಲಿಮರಲ್ಲೂ ಜನಪ್ರಿಯರು ಎಂದು ತೋರಿಸುವ ಭಾಗವಾಗಿ ಹರಡುತ್ತಿದ್ದಾರೆ. ಇದನ್ನು ಸತ್ಯ ಎಂದು ನಂಬಿದ ಅಮಾಯಕರು ವ್ಯಾಟ್ಸಾಪ್‍ನಲ್ಲಿ ತಮ್ಮ ಸ್ನೇಹಿತರಿಗೆ ಇದನ್ನು ಕಳಿಸುತ್ತಿದ್ದಾರೆ.

ಸಾಮಾಜಿಕ ಜಾಲತಾಣದ ಬಳಕೆದಾರರ ಕೋರಿಕೆಯ ಮೇಲೆ ಮೇಲಿನ ಸಂದೇಶದ ಕುರಿತಾಗಿ ಆಲ್ಟ್‍ನ್ಯೂಸ್ ಫ್ಯಾಕ್ಟ್‍ಚೆಕ್ ಮಾಡಿದೆ. ಬೆಂಗಳೂರಲ್ಲಿ ಮೋದಿ ಮಸೀದಿ ಎಂಬುದು ಇದೆ ಆದರೂ, ಅದು ನರೇಂದ್ರ ಮೋದಿ ಹೆಸರಿನದ್ದಲ್ಲ. ಅದನ್ನು ‘ಮೋದಿ ಅಬ್ದುಲ್ ಗಫೂರ್’ ಎಂಬ ದಾನಿಯ ಸ್ಮರಣಾರ್ಥ ‘ಮೋದಿ ಮಸೀದಿ’ ಎಂದು ಹೆಸರಿಸಲಾಗಿದೆ. ಈ ಮಸೀದಿಯನ್ನು 175 ವರ್ಷಗಳಿಗೂ ಹಿಂದೆಯೇ ಕಟ್ಟಲಾಗಿದೆ. ಇತ್ತೀಚಿಗೆ ಈ ಮಸೀದಯನ್ನು ನವೀಕರಣ ಮಾಡಿದ ಕಾರಣಕ್ಕಾಗಿ ಈಗ ಅದು ಸುದ್ದಿಯಲ್ಲಿದೆ. ಈ ಮಸೀದಿ ಶಿವಾಜಿ ನಗರದಲ್ಲಿದೆ.

ಟ್ವೀಟ್ ಜೊತೆಗಿರುವ ಎಡಭಾಗದ ಫೋಟೊ ‘ಮೋದಿ ಮಸೀದಿ’ಯದ್ದು (ನರೇಂದ್ರ ಮೋದಿಯಲ್ಲ, ಮೋದಿ ಅಬ್ದುಲ್ ಗಫೂರ್)… ಎರಡನೇ ಫೋಟೊದ ಮೂಲ ಗೊತ್ತಾಗಿಲ್ಲವಾದರೂ, ಅದು ‘ಮೋದಿ ಮಸೀದಿ’ಯ ಫೋಟೊವಂತೂ ಅಲ್ಲ. ಮೇಲಿನ ಫೇಕ್ ಆಧರಿಸಿಯೇ ಜಮೀರ್ ನಿಂತಿರುವ ಮಸಿದಿಯ ಫೋಟೊ ಇರುವ ಕನ್ನಡ ವಿಡಿಯೊವನ್ನು ಸೃಷ್ಟಿಸಿ ಯುಟ್ಯೂಬ್‍ಗೆ ಅಪಲೋಡ್ ಮಾಡಲಾಗಿದೆ. ಕಳೆದ ವರ್ಷವಷ್ಟೇ ಈ ಮಸೀದಿ ನಿರ್ಮಸಿಲಾಗಿದೆ ಎಂದು ಸುಳ್ಳು ಬಿತ್ತರಿಸಲಾಗಿದೆ.

ಈ ಮಸೀದಿ ಬಗ್ಗೆ ಗೊತ್ತಾದರೆ ನಮ್ಮ ಚಾನೆಲ್‍ಗಳೂ ಮೋದಿ ಹೆಸರಲ್ಲಿ ಬೆಂಗಳೂರಲ್ಲಿ ಮಸೀದಿ ಎಂದು ವಿಶೇಷ ಕಾರ್ಯಕ್ರಮ ಪ್ರಸಾರ ಮಾಡಬಹುದು, ಎಚ್ಚರವಿರಲಿ…

ಕೃಪೆ: ಆಲ್ಟ್ ನ್ಯೂಸ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶಾಲೆ, ಪೂಜಾ ಸ್ಥಳ, ಬಸ್ ನಿಲ್ದಾಣಗಳ ಬಳಿ ಇರುವ 717 ಮದ್ಯದಂಗಡಿಗಳನ್ನು ಮುಚ್ಚಲು ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಆದೇಶ 

ಅಧಿಕಾರ ವಹಿಸಿಕೊಂಡ ನಂತರ ತಮ್ಮ ಮೊದಲ ಪ್ರಮುಖ ಆಡಳಿತಾತ್ಮಕ ನಿರ್ದೇಶನದಲ್ಲಿ, ಸಿ. ಜೋಸೆಫ್ ವಿಜಯ್ ಸೋಮವಾರ, ತಮಿಳುನಾಡು ಸರ್ಕಾರವು ಪೂಜಾ ಸ್ಥಳಗಳು, ಶಿಕ್ಷಣ ಸಂಸ್ಥೆಗಳು ಮತ್ತು ಬಸ್ ನಿಲ್ದಾಣಗಳಿಂದ 500 ಮೀಟರ್ ಒಳಗೆ...

FACT CHECK: ಭಾರತೀಯರು ಚಿನ್ನ ಖರೀದಿಸಬೇಡಿ ಎಂದು 1967ರಲ್ಲೇ ಇಂದಿರಾ ಗಾಂಧಿ ಹೇಳಿದ್ರಾ?

ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ತೆಲಂಗಾಣದ ಸಿಕಂದರಾಬಾದ್ ರ‍್ಯಾಲಿಯಲ್ಲಿ ಮಾತನಾಡುತ್ತಾ, ಆರ್ಥಿಕ ಬಿಕ್ಕಟ್ಟು ತಪ್ಪಿಸಲು "ಒಂದು ವರ್ಷ ಚಿನ್ನ ಖರೀದಿಸಬೇಡಿ" ಎಂದು ಜನರಲ್ಲಿ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ, 1967ರಲ್ಲಿ ಅಂದಿನ ಪ್ರಧಾನಿ...

ಪಶ್ಚಿಮ ಬಂಗಾಳ| ಧ್ವನಿವರ್ಧಕಗಳ ನಿಯಂತ್ರಣಕ್ಕೆ ಆದೇಶಿಸಿದ ನೂತನ ಸಿಎಂ ಅಧಿಕಾರಿ; ಧಾರ್ಮಿಕ ಸಭೆ ನೆಪದಲ್ಲಿ ರಸ್ತೆ ತಡೆಗೆ ನಿಷೇಧ

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವು ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳ ಬಳಕೆಯನ್ನು ನಿಯಂತ್ರಿಸಲು ಮತ್ತು ಪ್ರಾರ್ಥನೆ ಅಥವಾ ಧಾರ್ಮಿಕ ಸಭೆ ನೆಪದಲ್ಲಿ ಸಾರ್ವಜನಿಕ ರಸ್ತೆಗಳನ್ನು ನಿರ್ಬಂಧಿಸದಂತೆ ನೋಡಿಕೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಹೊಸ ಸೂಚನೆಗಳನ್ನು...

ರಾಜಸ್ಥಾನದಲ್ಲಿ ನೀಟ್‌-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ; ಸಿಬಿಐ ತನಿಖೆಗೆ ಆದೇಶಿಸಿದ ಸರ್ಕಾರ

ಮೇ 3 ರಂದು ನಡೆಸಲಾದ ನೀಟ್ (ಯುಜಿ) 2026 ಅನ್ನು ರದ್ದುಗೊಳಿಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಂಗಳವಾರ (ಮೇ 12) ಘೋಷಿಸಿದೆ. ಪ್ರತ್ಯೇಕವಾಗಿ ತಿಳಿಸಲಾಗುವ ದಿನಾಂಕಗಳಲ್ಲಿ ಮರು ಪರೀಕ್ಷೆಯನ್ನು ನಡೆಸಲಾಗುವುದು, ಪರೀಕ್ಷೆಗೆ...

ಇತ್ಯರ್ಥವಾಗದ ಚುನಾವಣಾ ತಕರಾರು : ಮತ ಹಾಕಿದ ಜನರಿಗೆ ದಿನಕ್ಕೊಬ್ಬ ಶಾಸಕ

ರಾಜ್ಯದಲ್ಲಿ ಪ್ರಸ್ತುತ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೂರು ವರ್ಷಗಳನ್ನು ಪೂರೈಸಿದೆ. ಚುನಾವಣೆ ನಡೆಯಲು ಇನ್ನು ಎರಡು ವರ್ಷಗಳು ಬಾಕಿಯಿದೆ. ಅಂದರೆ, ಸರ್ಕಾರದ ಐದು ವರ್ಷಗಳ ಅವಧಿಯಲ್ಲಿ ಮುಕ್ಕಾಲು...

“ಸನಾತನವನ್ನು ನಿರ್ಮೂಲನೆ ಮಾಡಬೇಕು…”; ವಿಧಾನಸಭೆಯಲ್ಲೇ ತನ್ನ ಹಿಂದಿನ ಹೇಳಿಕೆ ಪುನರುಚ್ಚರಿಸಿದ ಉದಯನಿಧಿ ಸ್ಟಾಲಿನ್

ತಮಿಳುನಾಡು ವಿರೋಧ ಪಕ್ಷದ ನಾಯಕ ಮತ್ತು ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಮಂಗಳವಾರ ತಮಿಳುನಾಡು ವಿಧಾನಸಭೆಯಲ್ಲಿ ನಡೆದ ಅಧಿವೇಶನದಲ್ಲಿ, ಸನಾತನ ಧರ್ಮದ ನಿರ್ಮೂಲನೆಗೆ ಮತ್ತೊಮ್ಮೆ ಕರೆ ನೀಡಿದ್ದಾರೆ. ಸದನದಲ್ಲಿ ಮಾತನಾಡಿದ ಅವರು, "ಜನರನ್ನು ವಿಭಜಿಸುವ...

‘ಅಮೃತಕಾಲ’ದ ಸ್ವಪ್ನದಿಂದ ‘ಬಿಕ್ಕಟ್ಟಿನ ಕಾಲ’ಕ್ಕೆ: ಕಳಚಿಕೊಳ್ಳುತ್ತಿರುವ ಮೋದಿಯವರ ‘ಆತ್ಮನಿರ್ಭರ’ ಮುಖವಾಡ 

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗೂ ಮುನ್ನ ದೇಶವು ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆಯಿಂದ ಬಳಲುತ್ತಿದ್ದಾಗ, ಬಿಜೆಪಿ ನಾಯಕರು ಮತ್ತು ಕೇಂದ್ರ ಸರ್ಕಾರದ ಮಂತ್ರಿಗಳು ಮೋದಿಯವರ ‘ದಯೆ’ಯಿಂದ ಭಾರತಕ್ಕೆ ಯಾವುದೇ...

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...