HomeUncategorizedಇಸ್ರೇಲ್‌ ಯುದ್ಧ ಭೀಕರತೆ: ಮಕ್ಕಳ ಸ್ಮಶಾನವಾದ ಗಾಝಾ!

ಇಸ್ರೇಲ್‌ ಯುದ್ಧ ಭೀಕರತೆ: ಮಕ್ಕಳ ಸ್ಮಶಾನವಾದ ಗಾಝಾ!

- Advertisement -
- Advertisement -

ಇಸ್ರೇಲ್ ಬಾಂಬ್‌ ದಾಳಿಗೆ ಗಾಝಾದಲ್ಲಿ 24,00ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಇದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರ ಮತ್ತು ಮಕ್ಕಳ ಹತ್ಯಾಕಾಂಡವನ್ನು ಇಸ್ರೇಲ್‌ ನಡೆಸಿದೆ. ಪದೇ ಪದೇ ಶಾಲೆಗಳನ್ನು, ನವಜಾತ ಶಿಶುಗಳ ಆರೈಕೆ ಕೇಂದ್ರಗಳನ್ನು ಕೇಂದ್ರೀಕರಿಸಿ ಇಸ್ರೇಲ್‌ ದಾಳಿ ನಡೆಸಿದ್ದು, ಈವರೆಗೆ 10,000ಕ್ಕೂ ಹೆಚ್ಚು ಪ್ಯಾಲೇಸ್ತೀನ್‌ನ ಅಮಾಯಕ ಮಕ್ಕಳು ಇಸ್ರೇಲ್‌ ದಾಳಿಯಿಂದ ಕೊಲ್ಲಲ್ಪಟ್ಟಿದ್ದಾರೆ.

ಯುರೋ-ಮೆಡ್ ಮಾನವ ಹಕ್ಕುಗಳ ಮಾನಿಟರ್ ಬಿಡುಗಡೆ ಮಾಡಿದ್ದ ವರದಿಯ ಪ್ರಕಾರ, ಇಸ್ರೇಲ್ 10,000 ಕ್ಕೂ ಹೆಚ್ಚು ಶಿಶುಗಳು ಮತ್ತು ಮಕ್ಕಳನ್ನು ಕೊಂದಿದೆ. ನೂರಾರು ಮಕ್ಕಳು ಪಾಳುಬಿದ್ದ ಕಟ್ಟಡಗಳ ಅವಶೇಷಗಳಡಿಯಲ್ಲಿ ಉಳಿದುಕೊಂಡಿರುವುದರಿಂದ ಬದುಕುಳಿಯುವ ಸಾಧ್ಯತೆ ಕಡಿಮೆ ಇದೆ. ಸುಮಾರು 7,00,000 ಮಕ್ಕಳು ಇಸ್ರೇಲ್‌ನ ಗಾಝಾ ನರಮೇಧದಿಂದ ಪ್ರಭಾವಿತರಾಗಿದ್ದಾರೆ, ಇದರಲ್ಲಿ ಕೊಲ್ಲಲ್ಪಟ್ಟವರು, ಗಾಯಗೊಂಡವರು ಮತ್ತು ಆಂತರಿಕವಾಗಿ ಸ್ಥಳಾಂತರಗೊಂಡವರು ಸೇರಿದ್ದಾರೆ.

ಇಸ್ರೇಲ್‌ ದಾಳಿಯಲ್ಲಿ 18,000 ಪ್ಯಾಲೆಸ್ತೀನ್ ಮಕ್ಕಳು ಗಾಯಗೊಂಡಿದ್ದಾರೆ. ಇದರಲ್ಲಿ ಅನೇಕ ಮಕ್ಕಳು ಗಂಭೀರವಾಗಿದ್ದಾರೆ. ಡಜನ್‌ಗಟ್ಟಲೆ ಮಕ್ಕಳು ಅಂಗಾಂಗಳನ್ನು ಕಳೆದುಕೊಂಡಿದ್ದಾರೆ ಮತ್ತು ನೂರಾರು ಮ್ಕಕಳು ತಮ್ಮ ದೇಹದ ವಿವಿಧ ಭಾಗಗಳಿಗೆ ತೀವ್ರ ಸುಟ್ಟಗಾಯಗಳನ್ನು ಅನುಭವಿಸಿದ್ದಾರೆ. ಸ್ಥಳಾಂತರಗೊಂಡ ಮಕ್ಕಳಲ್ಲಿ 50 ಪ್ರತಿಶತದಷ್ಟು ಮಕ್ಕಳು ನಿರ್ಜಲೀಕರಣ, ಅಪೌಷ್ಟಿಕತೆ, ಉಸಿರಾಟ ಮತ್ತು ಚರ್ಮ ರೋಗಗಳು, ತೀವ್ರ ಶೀತದಿಂದ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ನವಜಾತ ಶಿಶುಗಳಿಗೆ ಲಸಿಕೆ ಸಿಗದೆ ಅಪಾಯದಲ್ಲಿದೆ.

ಗಾಝಾ ಪಟ್ಟಿಯಲ್ಲಿರುವ ಕನಿಷ್ಠ 25,000 ಮಕ್ಕಳು ಒಬ್ಬ ಅಥವಾ ಇಬ್ಬರ ಪೋಷಕರನ್ನು ಕಳೆದುಕೊಂಡಿದ್ದಾರೆ. ಸಾವಿರಾರು ಮಕ್ಕಳು ಭವಿಷ್ಯವನ್ನು ಕಳೆದುಕೊಂಡಿದ್ದಾರೆ. ಗಾಝಾ ಪಟ್ಟಿಯಲ್ಲಿರುವ 217 ಶಾಲೆಗಳು ಇಸ್ರೇಲ್‌ ದಾಳಿಯ ಸಮಯದಲ್ಲಿ ಹಾನಿಗೊಳಗಾಗಿವೆ.

ಸೇವ್ ದಿ ಚಿಲ್ಡ್ರನ್ ಡೇಟಾ ಪ್ರಕಾರ, ಗಾಝಾದಲ್ಲಿ ಪ್ರತಿ 10 ನಿಮಿಷಕ್ಕೆ ಒಂದು ಮಗುವನ್ನು ಕೊಲ್ಲಲಾಗುತ್ತಿದೆ. ಮಧ್ಯಪ್ರಾಚ್ಯ ಮತ್ತು ಉತ್ತರ ಆಫ್ರಿಕಾದ ಯುನಿಸೆಫ್ ಪ್ರಾದೇಶಿಕ ನಿರ್ದೇಶಕ ಅಡೆಲೆ ಖೋಡ್ರ್ ಶನಿವಾರ ಹೇಳಿಕೆಯೊಂದರಲ್ಲಿ, ಗಾಝಾವು ಮಕ್ಕಳಿಗೆ ಪ್ರಪಂಚದಲ್ಲೇ ಅತ್ಯಂತ ಅಪಾಯಕಾರಿ ಸ್ಥಳವಾಗಿದೆ. ವಿಶ್ವದೆಲ್ಲೆಡೆ ಮಕ್ಕಳು ಆಟವಾಡುತ್ತಿರುವಾಗ ಮತ್ತು ಶಾಲೆಗೆ ಹೋಗುತ್ತಿರುವಾಗ ಗಾಝಾ ಮಕ್ಕಳ ಅವಶೇಷಗಳ ರಾಶಿಯಾಗಿ ಮಾರ್ಪಟ್ಟಿದೆ ಎಂದು ಹೇಳಿದ್ದಾರೆ.

ಅ.7ರಂದು ಯುದ್ಧ ಪ್ರಾರಂಭವಾದಾಗಿನಿಂದ ಸುಮಾರು ಒಂದು ಮಿಲಿಯನ್ ಮಕ್ಕಳನ್ನು ಈಗ ಬಲವಂತವಾಗಿ ಸ್ಥಳಾಂತರಿಸಲಾಗಿದೆ ಎಂದು UN ಮಕ್ಕಳ ಏಜೆನ್ಸಿಯ ಹೇಳಿದೆ. ನೀರು, ಆಹಾರ, ಅಥವಾ ರಕ್ಷಣೆಯಿಲ್ಲದೆ, ಉಸಿರಾಟದ ಸೋಂಕುಗಳು ಮತ್ತು ನೀರಿನಿಂದ ಹರಡುವ ರೋಗಗಳ ಅಪಾಯಗಳು ಹೆಚ್ಚಿದ್ದು, ಗಾಝಾ ಮಕ್ಕಳ ಸ್ಮಶಾನವಾಗಿದೆ ಎಂದು ಹೇಳಿದೆ.

ಪ್ಯಾಲೆಸ್ತೀನಿಯನ್‌ ನರಮೇಧವನ್ನು ಸಂಭ್ರಮಿಸಿ ಹಾಡು ಹಾಡಿದ್ದ ಇಸ್ರೇಲ್ ಮಕ್ಕಳು:

ನವೆಂಬರ್‌ನಲ್ಲಿ ಇಸ್ರೇಲ್‌ನ ಸಾರ್ವಜನಿಕ ಬ್ರಾಡ್‌ಕಾಸ್ಟರ್ ಕಾನ್, ತನ್ನ ಅಧಿಕೃತ ಎಕ್ಸ್‌ಲ್ಲಿನ ಪೋಸ್ಟ್‌ನಲ್ಲಿ  ಇಸ್ರೇಲ್‌ ಮಕ್ಕಳು ಗಾಝಾದಲ್ಲಿ ಪ್ಯಾಲೆಸ್ತೀನಿಯನ್ನರು ನರಮೇಧವನ್ನು ಆಚರಿಸುವ ಹಾಡನ್ನು ಹಾಡುವ ವೀಡಿಯೊವನ್ನು ಅಪ್‌ಲೋಡ್ ಮಾಡಿದೆ. ಟೀಕೆಗೆ ಒಳಗಾದ ಬಳಿಕ ನಂತರ ವೀಡಿಯೊ ಕ್ಲಿಪ್‌ನ್ನು ಅಳಿಸಿದ್ದಾರೆ. ಸಾಮಾಜಿಕ ಮಾಧ್ಯಮದಿಂದ ವೀಡಿಯೊವನ್ನು ಅಳಿಸಿದ ನಂತರವೂ, ಹಾಡು ಚರ್ಚೆ ಮತ್ತು ವಿವಾದದ ವಿಷಯವಾಗಿ ಉಳಿದಿದೆ. ಒಂದು ವರ್ಷದೊಳಗೆ ಇಡೀ ಗಾಝಾದ ಜನರನ್ನು ನಿರ್ಮೂಲನೆ ಮಾಡುವ ಬಗ್ಗೆ ಮಕ್ಕಳು ಸಂತೋಷದಿಂದ ಹಾಡುವುದನ್ನು ನೋಡಿ ಪ್ರಪಂಚದಾದ್ಯಂತದ ಅನೇಕರು ಆಘಾತಕ್ಕೊಳಗಾಗಿದ್ದರು.

ರಾಫಾದಲ್ಲಿ ನಾಗರಿಕರ ಪರಿಸ್ಥಿತಿಗಳು ಗಂಭೀರ:

ದಕ್ಷಿಣ ಗಾಝಾ ಪಟ್ಟಿಯಲ್ಲಿರುವ ರಾಫಾದಲ್ಲಿ ನಾಗರಿಕರ ಪರಿಸ್ಥಿತಿಗಳು ಅತ್ಯಂತ ಭೀಕರವಾಗಿವೆ ಎಂದು ಇಂಟರ್ನ್ಯಾಷನಲ್ ಕಮಿಟಿ ಆಫ್ ದಿ ರೆಡ್ ಕ್ರಾಸ್ (ICRC) ಹೇಳಿಕೊಂಡಿದೆ. ರಾಫಾ ಈಜಿಪ್ಟ್‌ನ ಗಡಿಯ ಸಮೀಪದಲ್ಲಿದೆ ಮತ್ತು ಲಕ್ಷಾಂತರ ಮಂದಿ ಅಲ್ಲಿ ಆಶ್ರಯವನ್ನು ಪಡದುಕೊಂಡಿದ್ದಾರೆ.

ರಾಫಾದಲ್ಲಿ ನಿರಾಶ್ರಿತ ಜನರ ಅಗತ್ಯಗಳನ್ನು ಪೂರೈಸಲು ನಮ್ಮಲ್ಲಿ ಸಾಕಷ್ಟು ಪರಿಹಾರ ಸಾಮಗ್ರಿಗಳಿಲ್ಲ.ಸಾಕಷ್ಟು ನೀರು ಇಲ್ಲ, ಸಾಕಷ್ಟು ನೈರ್ಮಲ್ಯವಿಲ್ಲ, ಮತ್ತು ಜನರಿಗೆ ಆಹಾರ, ವೈದ್ಯಕೀಯ ಹಾರೈಕೆ ಸಿಗುತ್ತಿಲ್ಲ ಎಂದು ICRC ಕ್ಷಿಪ್ರ ನಿಯೋಜನೆ ಸಂಯೋಜಕ ಸ್ಟೀಫನ್ ರಯಾನ್ ತಿಳಿಸಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್, ಗಾಝಾದ ಜನಸಂಖ್ಯೆಯನ್ನು ಎದುರಿಸುತ್ತಿರುವ ಗಂಭೀರ ಅಪಾಯವನ್ನು ನಿವಾರಿಸಲು ಮತ್ತು ಗಾಯಗಳು, ತೀವ್ರವಾದ ಹಸಿವಿನಿಂದ ಬಳಲುತ್ತಿರುವ ಜನರಿಗೆ ತುರ್ತು ಸಹಾಯ ಮಾಡುವಂತೆ ಅಂತರಾಷ್ಟ್ರೀಯ ಸಮುದಾಯಕ್ಕೆ ಕರೆ ನೀಡಿದ್ದಾರೆ.

ಆಸ್ಪತ್ರೆಗಳಿಗೆ ಔಷಧಗಳು, ವೈದ್ಯಕೀಯ ಸರಬರಾಜುಗಳು ಮತ್ತು ಇಂಧನವನ್ನು ಪೂರೈಸುವ ಸಾಮರ್ಥ್ಯವು ಸೀಮಿತವಾಗಿದೆ. ಇತ್ತೀಚಿನ WHO ಮೌಲ್ಯಮಾಪನಗಳ ಪ್ರಕಾರ ಗಾಝಾದಲ್ಲಿ 13 ಭಾಗಶಃ ಕಾರ್ಯನಿರ್ವಹಿಸುವ ಆಸ್ಪತ್ರೆಗಳನ್ನು ಹೊಂದಿದೆ ಮತ್ತು 21 ಆಸ್ಪತ್ರೆಗಳು ಕಾರ್ಯನಿರ್ವಹಿಸುತ್ತಿಲ್ಲ ಎಂದು ಹೇಳಿದೆ. ನಾಗರಿಕರನ್ನು ಮತ್ತಷ್ಟು ಹಿಂಸಾಚಾರದಿಂದ ರಕ್ಷಿಸಲು ಮತ್ತು ಮತ್ತು ಶಾಂತಿ ಸ್ಥಾಪನೆಗೆ ಕದನ ವಿರಾಮ ಒಂದೇ ದಾರಿಯಾಗಿದೆ ಎಂದು ಟೆಡ್ರೊಸ್ ಹೇಳಿದರು.

ಕಳೆದ 24 ಗಂಟೆಗಳ ಅವಧಿಯಲ್ಲಿ ಗಾಝಾದ ಮೇಲೆ ಇಸ್ರೇಲ್‌ ನಡೆಸಿದ ದಾಳಿಯಲ್ಲಿ ಸುಮಾರು 210 ಪ್ಯಾಲೆಸ್ತೀನಿಯನ್ನರು ಸಾವನ್ನಪ್ಪಿದ್ದಾರೆ ಮತ್ತು 325 ಮಂದಿ ಗಾಯಗೊಂಡಿದ್ದಾರೆ ಎಂದು ಪ್ಯಾಲೇಸ್ತೀನಿಯನ್ ಆರೋಗ್ಯ ಸಚಿವಾಲಯ ತಿಳಿಸಿದೆ. ಇಸ್ರೇಲ್‌ ಮಿಲಿಟರಿ ಕ್ಲಿಯರೆನ್ಸ್ ಆದೇಶಗಳ ನಂತರ ಕನಿಷ್ಠ 1,00,000 ಸ್ಥಳಾಂತರಗೊಂಡ ಜನರು ರಾಫಾದಲ್ಲಿ ಸೇರಿದ್ದಾರೆ.

ಇದನ್ನು ಓದಿ: ಲೋಕಸಭೆ ಚುನಾವಣೆಗೆ ಮುನ್ನ ಇವಿಎಂ ಸರಿಪಡಿಸದಿದ್ದರೆ ಬಿಜೆಪಿ 400 ಸ್ಥಾನಗಳನ್ನು ಗೆಲ್ಲಬಹುದು: ಸ್ಯಾಮ್ ಪಿತ್ರೋಡಾ

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮುಂಬೈ: ಬೆಸ್ಟ್ ಬಸ್ ಹಿಮ್ಮುಖವಾಗಿ ಚಲಿಸುವಾಗ ಪಾದಚಾರಿಗಳಿಗೆ ಡಿಕ್ಕಿ: ನಾಲ್ವರ ಸಾವು, 10 ಜನರಿಗೆ ಗಾಯ

ಮುಂಬೈನ ನಾಗರಿಕ ಸಾರಿಗೆ ಸಂಸ್ಥೆಯ ಬೆಸ್ಟ್‌ನ ಬಸ್ ಸೋಮವಾರ ರಾತ್ರಿ ಮುಂಬೈನ ಭಾಂಡಪ್ ಪ್ರದೇಶದಲ್ಲಿ ಹಿಮ್ಮುಖವಾಗಿ ಚಲಿಸುತ್ತಿದ್ದಾಗ ಪಾದಚಾರಿಗಳ ಮೇಲೆ ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ ನಾಲ್ವರು ಸಾವನ್ನಪ್ಪಿ,10 ಮಂದಿ ಗಾಯಗೊಂಡಿದ್ದಾರೆ. ಡಿಸೆಂಬರ್ 9,...

ಕೋಗಿಲು ಪ್ರಕರಣ | ಸೂರು ಕಳೆದುಕೊಂಡವರಿಗೆ ಬೈಯ್ಯಪ್ಪನಹಳ್ಳಿಯಲ್ಲಿ ಪರ್ಯಾಯ ಮನೆ ಹಂಚಿಕೆ : ಸಿಎಂ ಸಿದ್ದರಾಮಯ್ಯ

ಕೋಗಿಲು ಬಡಾವಣೆಯಲ್ಲಿ ಜಿಬಿಎ ನಡೆಸಿದ ತೆರವು ಕಾರ್ಯಾಚರಣೆಯಿಂದ ಸೂರು ಕಳೆದುಕೊಂಡವರಿಗೆ ಬೈಯ್ಯಪ್ಪನಹಳ್ಳಿಯಲ್ಲಿ ಪರ್ಯಾಯ ಮನೆ ಹಂಚಿಕೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಸೋಮವಾರ (ಡಿ.29) ಗೃಹ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು,...

ಬಾಂಗ್ಲಾದೇಶದ ಮೊದಲ ಮಹಿಳಾ ಪ್ರಧಾನಿ ಖಾಲಿದಾ ಝಿಯಾ ನಿಧನ

ಬಾಂಗ್ಲಾದೇಶದ ಮೊದಲ ಮಹಿಳಾ ಪ್ರಧಾನಿ ಖಾಲಿದಾ ಝಿಯಾ ದೀರ್ಘಕಾಲದ ಅನಾರೋಗ್ಯದ ನಂತರ ಮಂಗಳವಾರ (ಡಿಸೆಂಬರ್ 30, 2025) ಬೆಳಗಿನ ಜಾವ ನಿಧನರಾದರು. ಅವರಿಗೆ 80 ವರ್ಷ ವಯಸ್ಸಾಗಿತ್ತು. ಖಾಲಿದಾ ಅವರು ಬಾಂಗ್ಲಾದೇಶದ ವಿರೋಧ ಪಕ್ಷ...

‘ಆತ ಗಲ್ಲಿಗೇರುವವರೆಗೆ ಹೋರಾಟ ಮುಂದುವರಿಸುತ್ತೇನೆ’ : ಸುಪ್ರೀಂ ಕೋರ್ಟ್ ಆದೇಶ ಸ್ವಾಗತಿಸಿದ ಉನ್ನಾವೋ ಅತ್ಯಾಚಾರ ಸಂತ್ರಸ್ತೆ

ಅಪರಾಧಿ ಕುಲದೀಪ್ ಸಿಂಗ್ ಸೆಂಗಾರ್‌ ಜೀವಾವಧಿ ಶಿಕ್ಷೆ ಅಮಾನತಿಗೆ ತಡೆ ನೀಡಿರುವ ಸುಪ್ರೀಂ ಕೋರ್ಟ್‌ ಆದೇಶವನ್ನು ಉನ್ನಾವೋ ಅತ್ಯಾಚಾರ ಸಂತ್ರಸ್ತೆ ಸ್ವಾಗತಿಸಿದ್ದು, ಸೆಂಗಾರ್‌ ಗಲ್ಲಿಗೇರುವವರೆಗೆ ತನ್ನ ಕಾನೂನು ಹೋರಾಟ ಮುಂದುವರಿಸುವುದಾಗಿ ಹೇಳಿದ್ದಾರೆ. "ಈ...

ಅರಾವಳಿ ಬೆಟ್ಟ, ಶ್ರೇಣಿಗಳ ಮರು ವ್ಯಾಖ್ಯಾನಕ್ಕೆ ಸುಪ್ರೀಂ ಕೋರ್ಟ್ ತಡೆ

ಅರಾವಳಿ ಬೆಟ್ಟ ಮತ್ತು ಶ್ರೇಣಿಗಳ ಹೊಸ ವ್ಯಾಖ್ಯಾನ ಕುರಿತು ನವೆಂಬರ್ 20ರಂದು ನಿವೃತ್ತ ಸಿಜೆಐ ಬಿ. ಆರ್ ಗವಾಯಿ ನೇತೃತ್ವದ ಪೀಠ ನೀಡಿದ ತೀರ್ಪಿನ ಅನುಷ್ಠಾನವನ್ನು ಮೂವರು ನ್ಯಾಯಾಧೀಶರ ಸುಪ್ರೀಂ ಕೋರ್ಟ್‌ನ ವಿಶೇಷ...

ತಮಿಳುನಾಡು: ವಲಸೆ ಕಾರ್ಮಿಕನ ಮೇಲೆ ನಾಲ್ವರು ಅಪ್ರಾಪ್ತ ಗಾಂಜಾ ವ್ಯಸನಿಗಳಿಂದ ಹಲ್ಲೆ; ಡಿಎಂಕೆಯನ್ನು ಟೀಕಿಸಿದ ಬಿಜೆಪಿ 

ತಮಿಳುನಾಡಿನ ತಿರುವಲ್ಲೂರು ಜಿಲ್ಲೆಯಲ್ಲಿ ವಲಸೆ ಕಾರ್ಮಿಕನ ಮೇಲೆ ನಾಲ್ವರು ಅಪ್ರಾಪ್ತ ವಯಸ್ಕರು ಹಲ್ಲೆ ನಡೆಸಿದ್ದು, ವಲಸೆ ಕಾರ್ಮಿಕ ತೀವ್ರವಾಗಿ ಗಾಯಗೊಂಡಿದ್ದಾರೆ. ಈ ಘಟನೆಯನ್ನು ಅಪ್ರಾಪ್ತ ವಯಸ್ಕರು ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದು, ಈ ಆಘಾತಕಾರಿ...

ಬಿಜೆಪಿ ಶಾಸಕ ಶರಣು ಸಲಗರ್ ಮೇಲೆ ಎಫ್ಐಆರ್: ಚುನಾವಣೆ ವೇಳೆ ₹99 ಲಕ್ಷ ಸಾಲ ಪಡೆದು ವಂಚನೆ ಆರೋಪ

ಬೀದರ್: 2023 ರ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಸಾಲವಾಗಿ ಪಡೆದಿದ್ದ ಹಣವನ್ನು ಹಿಂದಿರುಗಿಸಲು ವಿಫಲವಾದ ಆರೋಪದ ಮೇಲೆ 99 ಲಕ್ಷ ರೂ.ಗಳ ಚೆಕ್ ಅಮಾನ್ಯವಾದ ದೂರಿಗೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಶರಣು ಸಲಗರ್...

ಗಾಜಾದಲ್ಲಿ ನರಮೇಧ ಮುಂದುವರೆಸಿದ ಇಸ್ರೇಲ್: 80 ದಿನಗಳಲ್ಲಿ 969 ಬಾರಿ ಕದನ ವಿರಾಮ ಉಲ್ಲಂಘನೆ: 418ಜನರ ಹತ್ಯೆ

80 ದಿನಗಳ ಅವಧಿಯಲ್ಲಿ ಇಸ್ರೇಲ್ 969 ಬಾರಿ ಕದನ ವಿರಾಮ ಒಪ್ಪಂದವನ್ನು ಉಲ್ಲಂಘಿಸಿದ್ದು, 418 ನಾಗರಿಕರು ಸಾವನ್ನಪ್ಪಿದ್ದಾರೆ ಮತ್ತು 1,141 ಜನರು ಗಾಯಗೊಂಡಿದ್ದಾರೆ ಎಂದು ಗಾಜಾದಲ್ಲಿರುವ ಸರ್ಕಾರಿ ಮಾಧ್ಯಮ ಕಚೇರಿ ತಿಳಿಸಿದೆ. ಭಾನುವಾರ ಬಿಡುಗಡೆ...

BREAKING NEWS: ಉನ್ನಾವೋ ಅತ್ಯಾಚಾರ: ಸೆಂಗಾರ್ ಜೀವಾವಧಿ ಶಿಕ್ಷೆ ಅಮಾನತುಗೊಳಿಸಿದ ದೆಹಲಿ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ತಡೆ

2017 ರ ಉನ್ನಾವೋ ಅಪ್ರಾಪ್ತ ಬಾಲಕಿಯ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಉಚ್ಚಾಟಿತ ಭಾರತೀಯ ಜನತಾ ಪಕ್ಷ (ಬಿಜೆಪಿ) ನಾಯಕ ಕುಲದೀಪ್ ಸಿಂಗ್ ಸೆಂಗಾರ್ ಅವರ ಜೀವಾವಧಿ ಶಿಕ್ಷೆಯನ್ನು ಅಮಾನತುಗೊಳಿಸಿದ್ದ ದೆಹಲಿ ಹೈಕೋರ್ಟ್ ಆದೇಶವನ್ನು...

‘ಲವ್ ಜಿಹಾದ್’ ಆರೋಪ: ಬರೇಲಿಯಲ್ಲಿ ಹುಟ್ಟುಹಬ್ಬದ ಪಾರ್ಟಿಯನ್ನು ಹಿಂಸಾಚಾರಕ್ಕೆ ತಿರುಗಿಸಿದ ಬಜರಂಗದಳ 

ಬರೇಲಿಯ ಕೆಫೆಯೊಂದರಲ್ಲಿ ನರ್ಸಿಂಗ್ ವಿದ್ಯಾರ್ಥಿನಿಯ ಹುಟ್ಟುಹಬ್ಬದ ಆಚರಣೆಯಾಗಿ ಆರಂಭವಾದ ಸಂಭ್ರಮ, ಶನಿವಾರ ಬಜರಂಗದಳ ಸದಸ್ಯರು ಸ್ಥಳಕ್ಕೆ ನುಗ್ಗಿ, ಅತಿಥಿಗಳ ಮೇಲೆ ಹಲ್ಲೆ ನಡೆಸಿ, ಅಲ್ಲಿದ್ದ ಇಬ್ಬರು ಮುಸ್ಲಿಂ ಹುಡುಗರನ್ನು "ಲವ್ ಜಿಹಾದ್" ಎಂದು...