Homeಮುಖಪುಟನಿಮಗೆ ಗೂಂಡಾಗಿರಿ ಬೇಕಾದರೆ ಬಿಜೆಪಿಗೆ ಓಟು ಹಾಕಿ: ಉತ್ತಮ ಶಾಲೆ, ಆಸ್ಪತ್ರೆ ಬೇಕಾದರೆ ಆಪ್ ಗೆಲ್ಲಿಸಿ...

ನಿಮಗೆ ಗೂಂಡಾಗಿರಿ ಬೇಕಾದರೆ ಬಿಜೆಪಿಗೆ ಓಟು ಹಾಕಿ: ಉತ್ತಮ ಶಾಲೆ, ಆಸ್ಪತ್ರೆ ಬೇಕಾದರೆ ಆಪ್ ಗೆಲ್ಲಿಸಿ – ಅರವಿಂದ್ ಕೇಜ್ರಿವಾಲ್

ಇದುವರೆಗೂ ನಮ್ಮ ರಾಜ್ಯದಲ್ಲಿ 154 ರೈತರನ್ನು ಸರ್ಕಾರಗಳು ಗುಂಡು ಹಾರಿಸಿ ಕೊಂದಿವೆ. ಅಂತಹ ಸರ್ಕಾರಗಳನ್ನು ಕಿತ್ತೆಸೆಯುವ ಸಂದರ್ಭ ಬಂದಿದೆ - ಕೋಡಿಹಳ್ಳಿ ಚಂದ್ರಶೇಖರ್

- Advertisement -
- Advertisement -

ನಿಮಗೆ ಗೂಂಡಾಗಿರಿ, ದಂಗೆ ಬೇಕಾದರೆ ಬಿಜೆಪಿಗೆ ಓಟು ಹಾಕಿ. ಉತ್ತಮ ಶಾಲೆ, ಆಸ್ಪತ್ರೆ ಬೇಕಾದರೆ ಆಪ್ ಗೆಲ್ಲಿಸಿ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕರೆ ನೀಡಿದ್ದಾರೆ.

ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಆಪ್ ವತಿಯಿಂದ ಏರ್ಪಡಿಸಿದ್ದ ಬೃಹತ್ ರೈತ ಸಮಾವೇಶದಲ್ಲಿ ಮಾತನಾಡಿದ ಅವರು, “ಕರ್ನಾಟಕದಲ್ಲಿ ಹಿಂದೆ 20% ಕಮಿಷನ್ ಸರ್ಕಾರವಿತ್ತು. ಈಗ 40% ಕಮಿಷನ್ ಸರ್ಕಾರ ಅಧಿಕಾರ ನಡೆಸುತ್ತಿವೆ. ಆದರೆ ನಮ್ಮ ದೆಹಲಿ ಸರ್ಕಾರ 0% ಕಮಿಷನ್ ಸರ್ಕಾರವಾಗಿದೆ. ಸಂಪೂರ್ಣ ಪ್ರಮಾಣಿಕ ಪಕ್ಷ ನಮ್ಮದು” ಎಂದರು.

ಇತಿಹಾಸದಲ್ಲಿ ರಾವಣ ಅಹಂಕಾರ ತೋರಿಸಿದ. ದೇವ ಸ್ವರೂಪಿ ರಾಮಚಂದ್ರರ ಜೊತೆ ದುಷ್ಮನ್ ಮಾಡಬೇಡ ಎಂದು ವಿಭೀಷಣ, ಮಂಡೋದರಿ ಮನವಿ ಮಾಡಿದರೂ ರಾವಣ ಕೇಳಲಿಲ್ಲ. ಅಂತ್ಯದಲ್ಲಿ ರಾವಣನಿಗೆ ಏನಾಯಿತು ನಾವೆಲ್ಲ ನೋಡಿದ್ದೇವೆ. ನಮ್ಮ ಕೇಂದ್ರ ಸರ್ಕಾರ ಕೂಡ ಅದೇ ರೀತಿ ವರ್ತಿಸಿತು. ಕೃಷಿ ಕಾನೂನುಗಳನ್ನು ತಂದು ರೈತರ ವಿರುದ್ಧ ನಡೆದುಕೊಂಡಿತು. ಆದರೆ ದಿಟ್ಟ ರೈತ ಹೋರಾಟದ ಮುಂದೆ ಅದು ಮಂಡಿಯೂರಿತು ಅಂದರು.

ಆಪ್ ಪಕ್ಷವನ್ನು ಸಂಪೂರ್ಣವಾಗಿ ಬೆಂಬಲಿಸುವುದಾಗಿ ಘೋಷಿಸಿದ ಕೋಡಿಹಳ್ಳಿ ಚಂದ್ರಶೇಖರ್‌ರವರಿಗೆ ಸ್ವಾಗತ ಕೋರಿದ ಅವರು, ಹೋರಾಡುತ್ತಿರುವ ಸಾವಿರಾರು ರೈತರಿಗೆ ಅಭಿನಂದನೆಗಳನ್ನು ಸಲ್ಲಿಸಿದರು. “ದೇಶದ ಮೂಲೆ ಮೂಲೆಗಳಲ್ಲಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ರೈತನ ಮಕ್ಕಳು ರೈತರಾಗಲು ಬಯಸುತ್ತಿಲ್ಲ. ಇದನ್ನು ಬದಲಿಸಬೇಕಿದೆ. ಅದಕ್ಕೆ ಆಮ್ ಆದ್ಮಿ ಪಕ್ಷ ಬದ್ಧವಾಗಿದೆ” ಎಂದರು.

“ದಿಲ್ಲಿಯಲ್ಲಿ 0% ಸರ್ಕಾರವಿದೆ. ಕಟ್ಟರ್ ಪ್ರಾಮಾಣಿಕ ಸರ್ಕಾರವಿದೆ. ಒಂದು ಪೈಸೆ ಸಹ ಭ್ರಷ್ಟಾಚಾರ ನಡೆಯುತ್ತಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಸಹ ಹೇಳುತ್ತಾರೆ. ಏಕೆಂದರೆ ಪ್ರಧಾನಿ ಮಂತ್ರಿ ನನ್ನ ಮನೆ ಮೇಲೆ ಸಿಬಿಐ ದಾಳಿ, ಐಟಿ ದಾಳಿ ನಡೆಯಿತು. ನನ್ನ ಬೆಡ್ ರೂಂ ಚೆಕ್ ಮಾಡಿದರು. ಅವರಿಗೆ ಏನು ಸಿಗಲಿಲ್ಲ. ಏಕೆಂದರೆ ನಾನು ಪ್ರಾಮಾಣಿಕ ಮುಖ್ಯಮಂತ್ರಿಯಾಗಿದ್ದೇನೆ.  ನಮ್ಮ ಉಪ ಮುಖ್ಯಮಂತ್ರಿ, ಎಲ್ಲಾ ಮಂತ್ರಿಗಳು ಮತ್ತು 20 ಶಾಸಕರ ಮನೆ ಮೇಲೆ ದಾಳಿಯಾಯತು. ಆದರೆ ಏನೂ ಸಿಗಲಿಲ್ಲ” ಎಂದು ತಿಳಿಸಿದರು.

ನಾನೊಬ್ಬ ಸಾಮಾನ್ಯ ಮನುಷ್ಯ. ನನಗೂ ಹೆಂಡತಿ ಮಕ್ಕಳು ತಂದೆ ತಾಯಿ ಇದ್ದಾರೆ. ಹಾಗಾಗಿ ಸಾಮಾನ್ಯ ಮನಷ್ಯರ ಕಷ್ಟಗಳು ನನಗೆ ಗೊತ್ತಿವೆ. ಸಾಮಾನ್ಯರಿಗೆ ಏನು ಬೇಕು ಎಂದು ನನಗೆ ಗೊತ್ತಿದೆ. ಹಿಂದೆ ದಿಲ್ಲಿಯಲ್ಲಿ ಸರ್ಕಾರಿ ಶಾಲೆಗಳು ಹೇಗಿದ್ದವು? ಆದರೆ ಇಂದು ಖಾಸಗಿ ಶಾಲೆಗಳಿಂತ ಚೆನ್ನಾಗಿವೆ. ಐದು ವರ್ಷಗಳಲ್ಲಿ ಅವುಗಳನ್ನು ಬದಲಿಸಿದ್ದೇವೆ. ಸರ್ಕಾರಿ ಶಾಲೆಗಳಲ್ಲಿ 99.7% ಫಲಿತಾಂಶ ಬಂದಿದೆ. ಅಲ್ಲಿ ಸ್ವಿಮ್ಮಿಂಗ್ ಫೂಲ್, ಲಿಫ್ಟ್, ಸಭಾಂಗಣ ಎಲ್ಲವೂ ಇದೆ. ಹಾಗಾಗಿ 4 ಲಕ್ಷ ಮಕ್ಕಳಿಗೆ ಖಾಸಗಿ ಶಾಲೆಯಿಂದ ಸರ್ಕಾರಿ ಶಾಲೆಗೆ ಬಂದಿದ್ದಾರೆ. ಇದು ಮ್ಯಾಜಿಕ್ ಎಂದರು.

ದೆಹಲಿಯಲ್ಲಿ ಕಿಡ್ನಿ ಟ್ರಾನ್ಸ್‌ಪ್ಲಾಂಟ್‌ ಮಾಡಲು 40-50 ಲಕ್ಷ ಖರ್ಚಾಗುತ್ತಿತ್ತು. ಈಗ ಸಂಪೂರ್ಣ ಉಚಿತವಾಗಿದೆ. 2 ಕೋಟಿ ಜನರಿಗೆ ಉಚಿತ ಆರೋಗ್ಯ ನೀಡುತ್ತಿದ್ದೇವೆ. ಇದೆಲ್ಲವೂ ಪ್ರಾಮಾಣಿಕ ಸರ್ಕಾರ ಹಣ ಉಳಿಸಿದ್ದರಿಂದ ಸಾಧ್ಯವಾಗಿದೆ ಎಂದರು. ದೆಹಲಿಯಲ್ಲಿ ಶಿಕ್ಷಣ ವೆಚ್ಚ ಉಚಿತ, ಆರೋಗ್ಯ ಉಚಿತ, ವಿದ್ಯುತ್, ಕುಡಿಯುವ ನೀರು ಮತ್ತು ಮಹಿಳೆಯರಿಗೆ ಸಾರಿಗೆ ಉಚಿತವಾಗಿದೆ ಎಂದರು.

ನನ್ನ ಮನೆ ಮೇಲೆ ಕೆಲ ಗೂಂಡಾಗಳು ದಾಳಿ ಮಾಡಿದರು. ನನಗೆ ಯಾವುದೇ ಭಯವಿಲ್ಲ. ನಾನು ದೇಶಕ್ಕಾಗಿ ಪ್ರಾಣ ಕೊಡಲು ಸಿದ್ದನಿದ್ದೇನೆ. ಆದರೆ ಆ ದಿನ ನನ್ನ ಮನೆ ಮೇಲೆ ದಾಳಿ ಮಾಡಿದಾಗ ನಾವು ಯಾರು ಇರಲಿಲ್ಲ. ನನ್ನ ತಂದೆ ತಾಯಿ ಇದ್ದರು. ಆ ಗೂಂಡಾಗಳಿಗೆ ಬಿಜೆಪಿ ಸನ್ಮಾನ ಮಾಡುತ್ತಿದೆ ಎಂದು ಕಿಡಿಕಾರಿದರು. ಅತ್ಯಾಚಾರಿ, ಗೂಂಡಾ, ಲಫಂಗರು ಎಲ್ಲಾರೂ ಒಂದೇ ಪಕ್ಷದಲ್ಲಿದ್ದರೆ. ಅದೇ ಬಿಜೆಪಿ ಪಕ್ಷ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರೈತರ ಮಕ್ಕಳು ವಿಧಾನಸಭೆ ಪ್ರವೇಶ ಮಾಡಬೇಕು – ಕೋಡಿಹಳ್ಳಿ ಚಂದ್ರಶೇಖರ್ ಆಶಯ

ನಮ್ಮ ಬದುಕಿಗೆ ರಾಜಕೀಯ ಪಕ್ಷಗಳು ಕೈಹಾಕಿದ ಮೇಲೆ, ನಿಮ್ಮ ಅಧಿಕಾರಕ್ಕೆ ನಾವು ಕೈ ಹಾಕುವುದು ಧರ್ಮ. ಹಾಗಾಗಿ ನಿಮ್ಮನ್ನು ಆಚೆಗೆ ಕಳಿಸಿ, ರೈತರ ಮಕ್ಕಳು ವಿಧಾನಸಭೆ ಪ್ರವೇಶ ಮಾಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯಾಧ್ಯಕ್ಷರಾದ ಕೋಡಿಹಳ್ಳಿ ಚಂದ್ರಶೇಖರ್ ಆಶಯ ವ್ಯಕ್ತಪಡಿಸಿದರು.

1980 ರಲ್ಲಿ ರೈತ ಚಳವಳಿ ಆರಂಭವಾಯಿತು. ಆರ್ ಗುಂಡೂರಾವ್ ಸರ್ಕಾರ ನೀರಿಗೆ ತೆರಿಗೆ ಹಾಕಿ, ವಸೂಲಿ ಮಾಡಲು ಹೋದಾಗ ನರಗುಂದದಲ್ಲಿ ಪ್ರತಿಭಟನಾನಿರತ ರೈತರ ಮೇಲೆ ಗುಂಡು ಹಾರಿಸಿ ಕೊಂದರು. ಅಲ್ಲದೆ ಬೆಳಗಾವಿಯ ನಿಪ್ಪಾಣಿ, ಹಾಸನದ ದುದ್ದ, ಶಿವಮೊಗ್ಗದ ನಾಗಸಮುದ್ರ ಸೇರಿ ರಾಜ್ಯದಲ್ಲಿ 154 ರೈತರನ್ನು ಸರ್ಕಾರಗಳು ಗುಂಡು ಹಾರಿಸಿ ಕೊಂದಿವೆ. ಅಂತಹ ಸರ್ಕಾರಗಳನ್ನು ಕಿತ್ತೆಸೆಯುವ ಸಂದರ್ಭ ಬಂದಿದೆ ಎಂದರು.

ಕೇಂದ್ರ ಸರ್ಕಾರ ಕೊರೊನಾ ಸಂದರ್ಭದಲ್ಲಿ ಸುಗ್ರೀವಾಜ್ಞೆಯ ಮೂಲಕ ರೈತ ವಿರೋಧಿ ಕೃಷಿ ಕಾನೂನುಗಳನ್ನು ಜಾರಿಗೆ ತಂದಿತು. ಆದರೆ 13 ತಿಂಗಳ ನಂತರ ವಾಪಸ್ ತೆಗೆದುಕೊಂಡರು. ಕರ್ನಾಟಕದಲ್ಲಿ ಯಡಿಯೂರಪ್ಪನವರ ನೇತೃತ್ವದಲ್ಲಿ ಕಾನೂನಗಳನ್ನು ಜಾರಿಗೊಳಿಸಿ ಕುಂಟು ನೆಪ ಹೇಳಿ ವಾಪಸ್ ಪಡೆದಿಲ್ಲ. ಇದರ ವಿರುದ್ಧ ಹೋರಾಡಬೇಕಿದೆ ಎಂದರು.

ನಾಲ್ಕು ಅಪಾಯಕಾರಿ ಕಾನೂನುಗಳು ವಾಪಸ್ ಹೋಗಿಲ್ಲ. ಈಗ ವಿಧಾನಸಭೆಯಲ್ಲಿ ಕೂತಿರುವ 224 ಜನ ಶಾಸಕರು ರೈತರಿಗೆ ನ್ಯಾಯ ಕೊಡಿಸಿಲ್ಲ. ಬದಲಿಗೆ ರೈತರ ಸಾವಿಗೆ ಕಾರಣರಾಗಿದ್ದೀರಿ. 40% ಹಗಲು ದರೋಡೆಗೆ ಸಾಕ್ಷಿಯಾಗಿದ್ದೀರಿ. ನಿಮ್ಮನ್ನು ಮನೆಗೆ ಕಳುಹಿಸುವ ಸಮಯ ಬಂದಿದೆ. ಬೊಮ್ಮಾಯಿ ಸರ್ಕಾರದ ಅವಧಿ ಮುಗಿದಿದೆ ಎಂದರು.

ವಿರೋಧ ಪಕ್ಷದವರನ್ನು ಬೆಂಬಲಿಸಲು ಮಾನದಂಡವೇನು? ನಾವೇ ಒಂದು ಪಕ್ಷವನ್ನು ಕಟ್ಟಬೇಕು ಎಂದುಕೊಂಡೆವು. ನಾವು ಎಷ್ಟು ಸಮರ್ಥವಾಗಿ ಮಾಡಲಿಕ್ಕೆ ಸಾಧ್ಯ? ಎಲ್ಲಾ ಅಳೆದು ತೂಗಿದಾಗ ಕಳೆದ 8 ವರ್ಷಗಳಿಂದ ಅರವಿಂದ್ ಕೇಜ್ರಿವಾಲ್ ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಿದ್ದಾರೆ. ಭ್ರಷ್ಟಾಚಾರಕ್ಕೆ ಇತಿಶ್ರೀ ಹಾಡಲು ಆಪ್ ಬೆಂಬಲಿಸಿಲು ತೀರ್ಮಾನಿಸಿದ್ದೇವೆ ಎಂದು ಘೋಷಿಸಿದರು.

ಇದನ್ನೂ ಓದಿ: 40% ಕಮಿಷನ್‌ನಿಂದ ಕರುನಾಡು ಕಳೆದುಕೊಳ್ಳುತ್ತಿರುವುದೇನು?

2023ರ ಚುನಾವಣೆಯಲ್ಲಿ ಆಪ್ ಆದ್ಮಿ ಪಕ್ಷದೊಂದಿಗೆ ನಾವು ಕರ್ನಾಟಕ ವಿಧಾನಸಭೆ ಪ್ರವೇಶಿಸಬೇಕು. ಶುದ್ಧ ಹಸ್ತರಾದ ಆಪ್ ಪಕ್ಷ ವನ್ನು ಸಂಪೂರ್ಣವಾಗಿ ಬೆಂಬಲಿಸುತ್ತಿದ್ದೇವೆ. ನಮ್ಮ ರಾಜಕೀಯ ಮುಖವಾಣಿ ಆಮ್ ಆದ್ಮಿ ಪಕ್ಷ: ನಮ್ಮ ಚುನಾವಣೆಯ ಅಸ್ತ್ರ ಪೊರಕೆ ಎಂದು ಸಾರಿದರು.

ರೈತ ಸಂಘ ಮುಂದೆಯೂ ಸ್ವತಂತ್ರವಾಗಿ ಇರುತ್ತದೆ. ಹಾಗಿದ್ದುಕೊಂಡೆ ಆಮ್ ಆದ್ಮಿ ಸರ್ಕಾರ ರಚಿಸಲು ಹಗಲು ರಾತ್ರಿ ದುಡಿಯತ್ತದೆ. ಇದಕ್ಕೆ ರೈತರು ಪ್ರಮಾಣ ಮಾಡಬೇಕು. ರೈತರು ಅನ್ನ ಕೊಟ್ಟು, ಹಾಲು ಕೊಟ್ಟು ಪವಿತ್ರ ಕೆಲಸ ಮಾಡುತ್ತೀವಿ. ಹೆಂಡ, ಹಣಕ್ಕೆ ವೋಟು ಹಾಕುವುದು ಬಿಡಬೇಕು. ಯಾರಾದರೂ ಜಾತಿ ಹೆಸರೇಳಿದರೆ ಉಗಿಯಬೇಕು. ನಮ್ಮ ನಡುವೆ ಧರ್ಮ ಪ್ರವೇಶ ಮಾಡಬಾರದು. ಏಕೆಂದರೆ ನಮ್ಮದು ಕಾಯಕ ಧರ್ಮ. ಇದು ಬಸವಣ್ಣನವರ ನಾಡು. ಕಾಯಕ ಧರ್ಮ ಶ್ರೇಷ್ಟ ಎಂದರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಮಾಧ್ಯಮಗಳು, ಹೊರರಾಜ್ಯದ ಪಕ್ಷಗಳಿಗೆ ಕೊಡುವ ಮಹತ್ವವನ್ನು ಕರ್ನಾಟಕ ರಾಜ್ಯದ ಪಕ್ಷಗಳಿಗೂ ಕೊಡಬೇಕು. ಕರ್ನಾಟಕ ರಾಜ್ಯಕ್ಕಾಗಿಯೇ ” ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ” ಹಗಲಿರುಳು ಶ್ರಮಿಸುತ್ತಾ ಇದೆ. ಏಪ್ರಿಲ್ 24 ರಂದು 10 : 00 ಗಂಟೆಗೆ ಜನ ಚೈತನ್ಯ ಯಾತ್ರೆ ಪ್ರಾರಂಭವಾದ್ರೆ ಮುಂದಿನ 2023 ರ ಮೇ ಎರಡನೇ ವಾರದ ವಿಧಾನ ಸಭಾ ಚುನಾವಣೆ ಮುಗಿಯುವವರೆಗೆ ಮನೆಯನ್ನು ಸೇರದೇ ರಾಜ್ಯಧ್ಯಕ್ಷರಾದ ರವಿ ಕೃಷ್ಣ ರೆಡ್ಡಿ ಯವರು ರಾಜ್ಯದಾದ್ಯಂತ ಪ್ರವಾಸ ಮಾಡುತ್ತಾರೆ. ಇದು ಕರ್ನಾಟಕದ ಇತಿಹಾಸದಲ್ಲಿ ಹಿಂದೆ ನಡೆದಿಲ್ಲ ಮುಂದೆ ನಡೆಯೋದಿಲ್ಲ. ಇದ್ರ ಬಗ್ಗೆ ಬರೆಯಿರಿ, ಮೇಡಂ.

LEAVE A REPLY

Please enter your comment!
Please enter your name here

- Advertisment -

ಚುನಾವಣಾ ಸಮಯದಲ್ಲಿ ಉಚಿತ ಕೊಡುಗೆಗಳ ಪ್ರವೃತ್ತಿ ಪ್ರಶ್ನಿಸಿದ ಸುಪ್ರೀಂ ಕೋರ್ಟ್

ರಾಜಕೀಯ ಪಕ್ಷಗಳು ಮತ್ತು ರಾಜ್ಯ ಸರ್ಕಾರಗಳು ಚುನಾವಣೆಗೆ ಮುನ್ನ "ಉಚಿತ ಕೊಡುಗೆಗಳ" ಜಾಹೀರಾತು ನೀಡುವ ಅಭ್ಯಾಸ ಹೆಚ್ಚುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಗುರುವಾರ ಬಲವಾದ ಮೌಖಿಕ ಅವಲೋಕನಗಳನ್ನು ನೀಡಿದೆ. ವಿದ್ಯುತ್ (ತಿದ್ದುಪಡಿ) ನಿಯಮಗಳು, 2024...

ರಾಹುಲ್ ಗಾಂಧಿಗೆ ಕರ್ಣಿ ಸೇನೆಯಿಂದ ಜೀವ ಬೆದರಿಕೆ: ಬಿಜೆಪಿ-ಆರ್‌ಎಸ್‌ಎಸ್ ಜಾಲವೇ ‘ಗೋಡ್ಸೆ ಕಾರ್ಖಾನೆ’ ಎಂದ ಕಾಂಗ್ರೆಸ್

ನವದೆಹಲಿ: ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿರುದ್ಧ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಕರ್ಣಿ ಸೇನೆ ಜೀವ ಬೆದರಿಕೆ ಹಾಕಿದ್ದು, ಇದು "ಏಕಾಂಗಿ ಸ್ಫೋಟವಲ್ಲ"...

ಬಿಹಾರ| ವಿಧಾನಸಭೆಯಲ್ಲಿ ‘ತಂಬಾಕು’ ತಿಂದ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ

ಬಿಹಾರ ವಿಧಾನಸಭೆಯ ಬಜೆಟ್ ಅಧಿವೇಶನದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬಳಿಕ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ವಿಡಿಯೋದಲ್ಲಿ, ಉಪಮುಖ್ಯಮಂತ್ರಿ ಹಾಗೂ ಹಿರಿಯ ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ ಕಲಾಪದ ಸಮಯದಲ್ಲಿ ವಸ್ತುವೊಂದನ್ನು...

‘ಬೆದರಿಕೆ, ಚಿತ್ರಹಿಂಸೆ, ಅತ್ಯಾಚಾರ ‘: ಇಸ್ರೇಲ್‌ ಜೈಲಿನ ದೌರ್ಜನ್ಯ ಬಿಚ್ಚಿಟ್ಟ ಪ್ಯಾಲೆಸ್ತೀನ್ ಪತ್ರಕರ್ತರು

ಇಸ್ರೇಲ್ ಜೈಲುಗಳಲ್ಲಿ ಬಂಧಿತರಾಗಿರುವ ಪ್ಯಾಲೆಸ್ತೀನ್ ಪತ್ರಕರ್ತರು ತೀವ್ರವಾದ ದೌರ್ಜನ್ಯಗಳನ್ನು ಎದುರಿಸುತ್ತಿದ್ದಾರೆ ಎಂದು ಅಂತಾರಾಷ್ಟ್ರೀಯ ಪತ್ರಕರ್ತರ ರಕ್ಷಣಾ ಸಮಿತಿ (ಸಿಪಿಜೆ) ಹೇಳಿದೆ. ಬಂಧನದಿಂದ ಬಿಡುಗಡೆಯಾಗಿರುವ ಪತ್ರಕರ್ತರನ್ನು ಸಂದರ್ಶಿಸಿರುವ ಸಿಪಿಜೆ, ಜೈಲಿನಲ್ಲಿರುವ ಪತ್ರಕರ್ತರು ನಿರಂತರವಾಗಿ ದೈಹಿಕ...

ಪಾಕಿಸ್ತಾನದ ಕರಾಚಿಯಲ್ಲಿ ಶಂಕಿತ ಅನಿಲ ಸೋರಿಕೆ: ಮಕ್ಕಳು ಸೇರಿದಂತೆ 16 ಮಂದಿ ಸಾವು

ಕರಾಚಿ: ಪಾಕಿಸ್ತಾನದ ಕರಾಚಿಯಲ್ಲಿ ಗುರುವಾರ ಬೆಳಿಗ್ಗೆ ವಸತಿ ಕಟ್ಟಡವೊಂದರಲ್ಲಿ ಶಂಕಿತ ಅನಿಲ ಸೋರಿಕೆಯಿಂದಾಗಿ ಸ್ಫೋಟ ಸಂಭವಿಸಿ, ಮಕ್ಕಳು ಸೇರಿದಂತೆ ಕನಿಷ್ಠ 16 ಜನರು ಸಾವನ್ನಪ್ಪಿದ್ದು, 14 ಜನರು ಗಾಯಗೊಂಡಿದ್ದಾರೆ. "ಓಲ್ಡ್ ಸೋಲ್ಜರ್ ಬಜಾರ್...

ಮಹಾರಾಷ್ಟ್ರ| 10 ದಿನಗಳ ಮಗುವಿನೊಂದಿಗೆ 12 ನೇ ತರಗತಿ ಪರೀಕ್ಷೆ ಬರೆದ ಮಹಿಳೆ

ಮಹಾರಾಷ್ಟ್ರದ ನಾಂದೇಡ್ ನಗರದಲ್ಲಿ 12 ನೇ ತರಗತಿಯ ಮಹಾರಾಷ್ಟ್ರ ಬೋರ್ಡ್ ಪರೀಕ್ಷೆಗೆ ಹಾಜರಾದ ಮಹಿಳೆಯೊಬ್ಬರು ತನ್ನ 10 ದಿನಗಳ ಮಗುವನ್ನು ಪರೀಕ್ಷಾ ಕೇಂದ್ರಕ್ಕೆ ಕರೆತಂದಿದ್ದಾರೆ. ಮಹಿಳೆ ಪರೀಕ್ಷೆ ಬರೆಯುವ ಕಾರಣಕ್ಕೆ ಕೇಂದ್ರದ ವಿಶೇಷ...

ಒಡಿಶಾ| ದಲಿತರು ವಾಸಿಸುವ ಪ್ರದೇಶಕ್ಕೆ ಕುಡಿಯುವ ನೀರು-ವಿದ್ಯುತ್ ಸಂಪರ್ಕ ಕಡಿತ

ಒಡಿಶಾದ ಬಲಂಗೀರ್ ಜಿಲ್ಲೆಯಲ್ಲಿ ಜಾತಿ ಆಧಾರಿತ ತಾರತಮ್ಯವಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ. ಆದರೆ, ಗ್ರಾಮದ ಅಧಿಕಾರಿಯೊಬ್ಬರು ಈ ಅಡಚಣೆಗೆ ಸ್ಥಳೀಯ ಕಲಹ ಕಾರಣ ಎಂದು ಆರೋಪಿಸಿದ್ದಾರೆ. ಜಿಲ್ಲೆಯ ತುರೆಕೆಲಾ ಬ್ಲಾಕ್‌ನ ಡುಮೆರ್ಚುವಾನ್ ಗ್ರಾಮದಲ್ಲಿ...

ತಮಿಳುನಾಡು ವಿಧಾನಸಭಾ ಚುನಾವಣೆ: ಡಿಎಂಕೆ ನೇತೃತ್ವದ ಮೈತ್ರಿಕೂಟಕ್ಕೆ ಡಿಎಂಡಿಕೆ ಸೇರ್ಪಡೆ

ಚೆನ್ನೈ: ದಿವಂಗತ ನಟ ವಿಜಯಕಾಂತ್ ಅವರ ದೇಶೀಯ ಮುರ್ಪೋಕ್ಕು ದ್ರಾವಿಡ ಕಳಗಂ (ಡಿಎಂಡಿಕೆ) ಗುರುವಾರ ದ್ರಾವಿಡ ಮುನ್ನೇತ್ರ ಕಳಗಂ ನೇತೃತ್ವದ ಜಾತ್ಯತೀತ ಪ್ರಗತಿಪರ ಒಕ್ಕೂಟ (ಎಸ್‌ಪಿಎ)ವನ್ನು 21ವರ್ಷಗಳ ಅಸ್ತಿತ್ವದ ನಂತರ ಮೊದಲ ಬಾರಿಗೆ...

ಟ್ರಕ್ ಚಾಲಕ ರಸ್ತೆಯಲ್ಲಿ ನಮಾಝ್ ಮಾಡಿದ್ದರಿಂದ ಟ್ರಾಫಿಕ್ ಜಾಮ್ ಎಂದು ಸುಳ್ಳು ಸುದ್ದಿ ಪ್ರಸಾರ : ಝೀ ನ್ಯೂಸ್‌ಗೆ 1 ಲಕ್ಷ ರೂ. ದಂಡ

ಮುಸ್ಲಿಂ ವ್ಯಕ್ತಿಯೊಬ್ಬರು ನಮಾಝ್ ಮಾಡಲು ಹೆದ್ದಾರಿ ಮಧ್ಯೆ ಟ್ರಕ್‌ ನಿಲ್ಲಿಸಿದ್ದರಿಂದ ಟ್ರಾಫಿಕ್ ಜಾಮ್‌ ಉಂಟಾಗಿದೆ ಎಂದು ಸುಳ್ಳು ಸುದ್ದಿ ಹಬ್ಬಿದ ಝೀ ನ್ಯೂಸ್‌ ಚಾನೆಲ್‌ಗೆ ಸುದ್ದಿ ಪ್ರಸಾರಕರು ಮತ್ತು ಡಿಜಿಟಲ್ ಮಾನದಂಡಗಳ ಪ್ರಾಧಿಕಾರ(ಎನ್‌ಬಿಡಿಎಸ್‌ಎ)...

ಗುಜರಾತ್‌| ಜಾತಿ ಆಧಾರಿತ ಜಗಳದಲ್ಲಿ ದಲಿತ ಯುವಕನ ಮೇಲೆ ಚಾಕುವಿನಿಂದ ದಾಳಿ

ಶನಿವಾರ ತಡರಾತ್ರಿ ರಾಣಿಪ್‌ನಲ್ಲಿ ನಡೆದ ಸಣ್ಣ ಭಿನ್ನಾಭಿಪ್ರಾಯವೊಂದು ಹಿಂಸಾಚಾರಕ್ಕೆ ತಿರುಗಿದ್ದು, 25 ವರ್ಷದ ದಲಿತ ಯುವಕ ಸಾಹಿಲ್ ವಘೇಲಾ ಮೇಲೆ ಚಾಕುವಿನಿಂದ ಹಲ್ಲೆ ನಡೆಸಲಾಗಿದೆ. ಯುವಕ ಗಂಭೀರವಾಗಿ ಗಾಯಗೊಂಡಿದ್ದು, ಘಟನೆಯು ಈ ಪ್ರದೇಶದಲ್ಲಿ...