Homeಅಂಕಣಗಳುಪುಟಕ್ಕಿಟ್ಟ ಪುಟಗಳುಪತಂಜಲಿ ಯೋಗಸೂತ್ರ: ಧಾರ್ಮಿಕವೂ ಅಲ್ಲದ ಮೌಢ್ಯವೂ ಅಲ್ಲದ ತಂತ್ರ ಸಾಧನ

ಪತಂಜಲಿ ಯೋಗಸೂತ್ರ: ಧಾರ್ಮಿಕವೂ ಅಲ್ಲದ ಮೌಢ್ಯವೂ ಅಲ್ಲದ ತಂತ್ರ ಸಾಧನ

ತನ್ನ ಸೂತ್ರಗಳನ್ನು ವಿಶ್ವಾಸಿಸಿ ಎಂದು ಭ್ರಾಮಕ ಶ್ರದ್ಧೆಯನ್ನು ಉಂಟುಮಾಡುವ ಇರಾದೆ ಪತಂಜಲಿಗಿಲ್ಲ. ಪ್ರಯೋಗಿಸಿ ಅಭ್ಯಾಸ ಮಾಡಿ ಎನ್ನುತ್ತಾನೆ. ಅನುಷ್ಠಾನಕ್ಕೆ ತನ್ನಿ ಎಂದು ತಾಕೀತು ಮಾಡುತ್ತಾನೆ. ಅದರಿಂದ ಹೀಗಾಗತ್ತೆ ಹಾಗಾಗತ್ತೆ ಎಂದು ಫಲವನ್ನು ಪೂರ್ವಪಾಠದಲ್ಲಿ ಹೇಳಿ ಆಸೆ ಹುಟ್ಟಿಸುವುದಿಲ್ಲ.

- Advertisement -
- Advertisement -

ಯೋಗ ಎಂಬುದನ್ನು ಧಾರ್ಮಿಕತೆಗೆ ತಳುಕುಹಾಕುವ ಮತ್ತು ಅದನ್ನು ಮೌಢ್ಯವೆಂದು ತಳ್ಳಿ ಹಾಕುವುದು ಎರಡೂ ಪೂರ್ವಗ್ರಹದಿಂದ ಕೂಡಿದೆ. ಆದರೆ ಇವೆರಡಕ್ಕೂ ಹೊರತಾಗಿರುವ ಒಂದು ಸಾಧನ ತಂತ್ರ ಈ ಪತಂಜಲಿ ಯೋಗಸೂತ್ರ.

ಮನುಷ್ಯ ತನ್ನ ಗ್ರಹಿಕೆ ಮತ್ತು ಅನುಭವಗಳ ಪರಿಮಿತಿಯಲ್ಲಿ ಇರುವ ತನ್ನ ಮನಸ್ಸು ಮತ್ತು ಶರೀರ ಸಂವೇದನೆಯನ್ನು ವಿಸ್ತರಿಸಿಕೊಂಡು ಕೈವಲ್ಯವನ್ನು ಪಡೆಯಲು ಮಾಡಿರುವ ಬೋಧನೆ ಇದು. ಯಾವುದೇ ದೇವತೆಗಳ ಗುಣಗಾನವಲ್ಲ, ಪ್ರಾರ್ಥನೆ, ಆರಾಧನೆಗಳಿಂದ ಫಲ ಪಡೆಯುವ ಭರವಸೆಯಲ್ಲ, ಹುಟ್ಟಿನಿಂದ ಶ್ರೇಷ್ಠರೋ ಕನಿಷ್ಟರೋ ಆಗಿದ್ದಾರೆಂಬ ಭ್ರಮೆಯಲ್ಲಿರುವ ಜಾತಿಯವರಿಗೆ ಸವಲತ್ತೋ, ಅನುಗ್ರಹವೋ ಅಲ್ಲವೇ ಅಲ್ಲ. ಯಾವೊಬ್ಬ ಮನುಷ್ಯನೂ ತನ್ನ ಸೀಮಿತ ಗ್ರಹಿಕೆಯಲ್ಲಿರುವ ಮನಸ್ಸಿನ ಸ್ವರೂಪ ಮತ್ತು ಚಟುವಟಿಕೆಗಳನ್ನು ಅರಿತುಕೊಂಡು, ಯಾದು ತನ್ನನ್ನು ಉದಾತ್ತಗೊಳಿಸುತ್ತದೆಯೋ ಅಥವಾ ನಿರ್ಬಂಧಗಳಿಂದ ಮುಕ್ತಗೊಳಿಸುತ್ತದೆಯೋ ಅಂತಹವನ್ನು ಸ್ವೀಕರಿಸುತ್ತಾ, ಯಾವುವು ತನ್ನನ್ನು ಹಿಂದಕ್ಕೆ ಎಳೆಯುತ್ತದೆಯೋ, ಬಂಧನದಲ್ಲಿ ಸಿಲುಕಿಸುತ್ತದೆಯೋ, ಆನಂದವನ್ನು ನೀಡುವುದಿಲ್ಲವೋ ಅಂತಹವನ್ನು ನಿಗ್ರಹಿಸುವ ತರಬೇತಿಗೆ ಅಗತ್ಯವಿರುವ ಫಾರ್ಮುಲಾಗಳು ಈ ಯೋಗಸೂತ್ರಗಳು.

ಅನುಮಾನಗಳನ್ನು ಹುಟ್ಟಿಹಾಕಿಕೊಂಡು, ಚರ್ಚೆಗಳನ್ನು ಮಾಡಿಕೊಂಡು, ಸಿದ್ಧಾಂತಗಳ ಶಾಖೆಗಳ ಮೂಸೆಗಳಲ್ಲಿ ಶೋಧಿಸಿಕೊಂಡು ಕಾಲಹರಣ ಮಾಡಬೇಡಿ. ಹೇಳಿದಷ್ಟು ಮಾಡಿ ಎನ್ನುವಷ್ಟು ಖಂಡಿತವಾದಿ ಈ ಪತಂಜಲಿ. “ಅಥ ಯೋಗಾನುಶಾಸನಂ” ಎಂದೇ ಪ್ರಾರಂಭಿಸುತ್ತಾರೆ. ಜಿಜ್ಞಾಸಾಶಾಸ್ತ್ರಗಳು “ಅಥಾತೋ ಬ್ರಹ್ಮಜಿಜ್ಞಾಸಾ” ಅಥವಾ “ಅಥಾತೋ ಧರ್ಮಜಿಜ್ಞಾಸಾ” ಎಂದು ಪ್ರಾರಂಭಿಸಿದರೆ ಅಲ್ಲಿ ನಿಮ್ಮ ಹೊಸ ಆಲೋಚನೆಗಳಿಗೆ ಮತ್ತು ಬೇರೆ ಬೇರೆ ಸಿದ್ಧಾಂತಗಳ ಒರೆಗಲ್ಲಿಗೆ ತಿಕ್ಕಿ ತೀಡಿ ಈ ವಿಷಯವು ಸರಿಯೋ, ತಪ್ಪೋ, ಸಮರ್ಪಕವೋ ಎಂದು ನೋಡುವ ಸಾಧ್ಯತೆಗಳಿರುತ್ತದೆ. ಆದರೆ ವಿಜ್ಞಾನದ ಸೂತ್ರಗಳಲ್ಲಿ ನಿರೂಪಿತ ವಿಷಯವು ದೃಢವಾಗಿದ್ದು, ಅದು ಬದಲಾಗುವುದಿಲ್ಲ. ಆದರೆ ಅದರಿಂದ ಈಚೆಗೂ ವಿಷಯಗಳು ಪ್ರಯೋಗಗಳಿಂದ ಮತ್ತಷ್ಟು ವಿಸ್ತಾರಗೊಳ್ಳುವವು. ಉದಾಹರಣೆಗೆ ಗುರುತ್ವಾಕರ್ಷಣೆಯ ನಿಯಮ. ಇದನ್ನು ಸಂದೇಹಿಸಲಾಗದು. ಈಗಾಗಲೇ ನಿರೂಪಿತವಾಗಿರುವುದು. ಅದನ್ನು ಪ್ರಯೋಗಗಳಿಗೆ ಒಳಪಡಿಸಬಹುದು. ಬೇರೆಬೇರೆ ವಿಷಯಗಳಲ್ಲಿ ಇದರ ವಿಸ್ತಾರವನ್ನು ಹೆಚ್ಚಿಸಬಹುದು. ಇದರ ನಿಯಮವನ್ನು ಭೂಮಿಯ ಮೇಲೆ ಮಾತ್ರವಲ್ಲದೇ ಅಂತರಿಕ್ಷದಲ್ಲಿ ಮಾಡುವ ಪ್ರಯೋಗಗಳವರೆಗೂ ವಿಸ್ತರಿಸಬಹುದು. ಗುರುತ್ವಾಕರ್ಷಣೆಯ ನಿಯಮವೆಂದರೆ ಅದೊಂದು ಮೂಲಭೂತ ವೈಜ್ಞಾನಿಕ ಸೂತ್ರ. ಪತಂಜಲಿಗೆ ಅಷ್ಟರಮಟ್ಟಿಗಿನ ವಿಶ್ವಾಸ ತನ್ನ ಸೂತ್ರಗಳಲ್ಲಿ.

ತನ್ನ ಸೂತ್ರಗಳನ್ನು ವಿಶ್ವಾಸಿಸಿ ಎಂದು ಭ್ರಾಮಕ ಶ್ರದ್ಧೆಯನ್ನು ಉಂಟುಮಾಡುವ ಇರಾದೆ ಪತಂಜಲಿಗಿಲ್ಲ. ಪ್ರಯೋಗಿಸಿ ಅಭ್ಯಾಸ ಮಾಡಿ ಎನ್ನುತ್ತಾನೆ. ಅನುಷ್ಠಾನಕ್ಕೆ ತನ್ನಿ ಎಂದು ತಾಕೀತು ಮಾಡುತ್ತಾನೆ. ಅದರಿಂದ ಹೀಗಾಗತ್ತೆ ಹಾಗಾಗತ್ತೆ ಎಂದು ಫಲವನ್ನು ಪೂರ್ವಪಾಠದಲ್ಲಿ ಹೇಳಿ ಆಸೆ ಹುಟ್ಟಿಸುವುದಿಲ್ಲ. ಆ ರೀತಿಯಲ್ಲಿ ಆಸೆ ಹುಟ್ಟಿಸುವುದು ಅಥವಾ ಭಯ ಹುಟ್ಟಿಸುವುದು ಪತಂಜಲಿಯ ಯೋಗ ಮಾರ್ಗದಲ್ಲಿ ನಿಷೇಧವೂ ಹೌದು.

ಹಾಗಂತ ಪತಂಜಲಿಯ ಯೋಗಸೂತ್ರವು ಋಷಿಮುನಿಯೊಬ್ಬನೋ ಅಥವಾ ಯೋಗಿಯೊಬ್ಬನೋ ತಾನು ಮೋಡಗಳ ಆಚೆಯಿಂದಲೋ ಅಥವಾ ಬೆಟ್ಟಗಳ ಮರೆಯಿಂದಲೋ ದೇವರ ಬಾಯಿಂದ ಕೇಳಿಸಿಕೊಂಡು ಬರೆದಿರುವಂತಹುದೇನಲ್ಲ. ಸುಮಾರು ಕ್ರಿಸ್ತಪೂರ್ವ 150ರ ಆಸುಪಾಸುಗಳಲ್ಲಿ ರಚಿಸಲ್ಪಟ್ಟಿರಬಹುದಾದ ಈ ಕೃತಿ ಶತಶತಮಾನಗಳ ಹಿಂದಿನ ಅನೇಕ ಪ್ರಯೋಗಗಳನ್ನು, ಅಭ್ಯಾಸಗಳನ್ನು, ತಂತ್ರ ಸಾಧನೆಗಳನ್ನು ಗಮನಿಸಿಕೊಂಡು, ವಿವಿಧ ಸಿದ್ಧಾಂತಗಳ ಶಾಲೆಗಳ ಧ್ವನಿಗಳನ್ನು ಕೇಳುತ್ತಾ, ಅದರಿಂದಾಚೆಗಿರುವ ಮರ್ಮವನ್ನು ಅರಿಯಲು ಯತ್ನಿಸುತ್ತಾ ಕ್ರೋಢೀಕರಿಸುವಂತಹ ಸೂತ್ರಗಳಾಗಿವೆ. ನೂರಾರು ವರ್ಷಗಳು ಬರಿಯ ಮೌಖಿಕವಾಗಿಯೇ ಇದ್ದ ಈ ಸೂತ್ರಗಳು ನಂತರದ ಕಾಲಘಟ್ಟದಲ್ಲಿ ಬರವಣಿಗೆಯ ರೂಪಕ್ಕೆ ತರಲಾಯಿತು.

ವಿಷ್ಣುವೋ, ಇಂದ್ರನೋ, ಶಿವನೋ, ಒಬ್ಬ ದೇವರ ಅಧೀನದಲ್ಲಿದ್ದು ಅವನ ಆಗ್ರಹ ಮತ್ತು ಅನುಗ್ರಹಗಳಿಗೆ ತಕ್ಕಂತೆ ನಮ್ಮ ಬದುಕಿನ ನಡೆಗಳು ಒಡಮೂಡುವುದು ಎಂದು ನಂಬುವ ಧಾರ್ಮಿಕ ಶ್ರದ್ಧೆ ಪತಂಜಲಿಯದ್ದಲ್ಲ. ಮನಸ್ಸು ಮತ್ತು ದೇಹಕ್ಕೆ ಅಗತ್ಯವಿರುವ ‘ಅಭ್ಯಾಸ’ ಮಾಡುತ್ತಾ, ತನ್ನನ್ನು ತಾನು ತರಬೇತಿಗೊಳಿಸಿಕೊಳ್ಳುತ್ತಾ ಕೈವಲ್ಯವನ್ನು ಪಡೆಯುವುದು – ಮನಸ್ಸು ಮತ್ತು ದೇಹವನ್ನು ಶಿಸ್ತಿಗೆ ಒಳಪಡಿಸಿ, ನಮ್ಮ ಚೈತನ್ಯವನ್ನು ಕೇಂದ್ರೀಕರಿಸಿ ಔನ್ನತ್ಯವನ್ನು ಹೊಂದುವುದು ಅವನ ಮಾರ್ಗ. ಇಲ್ಲಿ ಆತ್ಮವೆಂದರೆ ವ್ಯಕ್ತಿಗತವಾದ ಚೈತನ್ಯ. ಪರಮಾತ್ಮವೆಂದರೆ ವ್ಯಕ್ತಿಗತವಾಗಿರುವುದನ್ನು ಮೀರಿರುವ ವಿಶ್ವದಸ್ತಿತ್ವದ ಮಹಾಚೈತನ್ಯ. ಒಂದು ನೀರಿನ ಹನಿಯಲ್ಲಿರುವ ಅಣುಗಳ ಸಂಯೋಜನೆ ಮತ್ತು ಗುಣಗಳೇ ಸಮುದ್ರದಲ್ಲಿಯೂ ಇರುವುದು. ಆದರೆ ಈ ಎರಡರ ನಡುವೆ ಭೌತಿಕ ವ್ಯತ್ಯಾಸವಿದೆ. ನೀರಿನ ಹನಿಯು ಸಾಗರವನ್ನು ಸೇರಿ ಅಗಾಧತೆಯಲ್ಲಿ ಒಂದಾಗಿ ತಾನೂ ಆ ಅಗಾಧಶಕ್ತಿಯಲ್ಲಿ ಒಂದಾಗುವ ಸಾಧ್ಯತೆಯೂ ಇದೆ. ಈ ಸಾಧ್ಯತೆಯನ್ನು ಮನುಷ್ಯನ ಜೀವ ಎಂಬ ಚೈತನ್ಯವು ಪರಮ ಎಂಬ ಮಹಾ ಚೈತನ್ಯದೊಡನೆ ಸೇರಿಸುವ ಪ್ರಕ್ರಿಯಲ್ಲಿ ಕಂಡುಕೊಳ್ಳುವ ಪ್ರಯತ್ನಕ್ಕೆ ಒಂದು ಶಿಸ್ತಿನ ಬೋಧನೆ ಈ ಪತಂಜಲಿಯದು.

ಮನುಷ್ಯನ ಮನಸ್ಸು ಮತ್ತು ಅದರ ರಚನೆ, ಕಾರ್ಯ ಚಟುವಟಿಕೆಗಳು, ಸಾಮರ್ಥ್ಯಗಳು, ದೌರ್ಬಲ್ಯಗಳು, ಈ ಎಲ್ಲವೂ ಪತಂಜಲಿಯ ಗಮನದಲ್ಲಿದೆ. ಅದು ಈ ಮನುಷ್ಯನ ಜೈವಿಕ, ಸಾಮಾಜಿಕ ಪರಿಸರಗಳು ವಿಧಿಸಿರುವ ನಿರ್ಬಂಧಗಳಿಂದ ಸೀಮಿತ ಚೌಕಟ್ಟಿನ ವಸ್ತುವಾಗಿದೆ ಎಂಬ ಅರಿವು ಇದೆ. ಅದನ್ನು ಎಲ್ಲಾ ಬಗೆಯ ಬಂಧನಗಳಿಂದ ಮುಕ್ತವಾಗಿಸುವ ಕಾಳಜಿ ಇದೆ. ಈ ಕಾಳಜಿಯು ಯಾರನ್ನೂ ದ್ವೇಷಿಸದಿರಲು, ಆಲೋಚನೆಯಲ್ಲಿಯೂ ಹಿಂಸೆ ಮಾಡದಿರಲು ಎಚ್ಚರಿಕೆಯನ್ನು ನೀಡುತ್ತದೆ.

ಸೃಷ್ಟಿಕರ್ತ ಎಂಬ ಭ್ರಮೆಯನ್ನು ಒಮ್ಮಿಂದೊಮ್ಮೆಲೇ ತಳ್ಳಿ ಹಾಕುತ್ತದೆ. ಯಾರೂ ಸೃಷ್ಟಿಸಿದ್ದಲ್ಲದ ಈ ಪ್ರಕೃತಿಯು ಯಾವಾಗಲೂ ಇತ್ತು. ಕಾಲದಿಂದ ಕಾಲಕ್ಕೆ ನಿರಂತರವಾಗಿ ರೂಪಾಂತರಗೊಳ್ಳುತ್ತಲೇ ಇರುತ್ತದೆ ಎಂಬ ಸ್ಪಷ್ಟತೆ ಪತಂಜಲಿಗೆ ಇದೆ. ಅದಕ್ಕೆ ಅದರದೇ ಆದಂತಹ ಗುಣಗಳಿವೆ, ಕ್ರಮಗಳಿವೆ. ಇದರ ಸೃಷ್ಟಿಯೇ ಆಗಿರುವ ಮನುಷ್ಯನ ಶರೀರಕ್ಕೂ ಮತ್ತು ಅವನ ಮನಸ್ಸಿಗೂ ಅದೇ ಗುಣಧರ್ಮಗಳಿವೆ. ಹಾಗಾಗಿ ಅರಿತು ಅಭ್ಯಾಸ ಮಾಡಿರೆಂದು ಪತಂಜಲಿ ಬೋಧಿಸುತ್ತಾನೆ. ಈ ಯೋಗ ಸೂತ್ರವು ಬೇಡುವುದು ಶ್ರದ್ಧೆಯನ್ನು, ನಂಬಿಕೆಯನ್ನಲ್ಲ. ಚೈತನ್ಯ, ಆಲೋಚನೆ, ಏಕಾಗ್ರತೆ ಮತ್ತು ಅರಿವು ಯೋಗದ ಗುರಿಯನ್ನು ಸಾಧಿಸುವುದು. ಸ್ಥೂಲ ಪರಿಸರವು ಮನುಷ್ಯನ ಮನಸ್ಸನ್ನು ತನ್ನ ಪ್ರಭಾವಕ್ಕೆ ವಶಪಡಿಸಿಕೊಂಡು ಚಂಚಲವನ್ನು ಉಂಟುಮಾಡುತ್ತದೆ. ಆದರೆ ಅವನು ಎಚ್ಚೆತ್ತುಕೊಂಡು ಅವುಗಳನ್ನು ಮೀರಿ ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣೆ, ಧ್ಯಾನ ಮತ್ತು ಸಮಾಧಿ ಎಂಬ ಯೋಗದ ಎಂಟು ಅಂಗಗಳನ್ನು ಅನುಷ್ಠಾನ ಮಾಡಿದರೆ ಮನುಷ್ಯನ ಮನಸ್ಸು ಮತ್ತು ಶರೀರವು ತಾನು ಒಳಪಟ್ಟಿರುವ ಅಶುದ್ಧಿಯಿಂದ ಮುಕ್ತವಾಗುತ್ತದೆ ಎಂಬುದು ಇದರ ಧೋರಣೆ. ಇವುಗಳಲ್ಲಿ ಇರುವುದಾದರೂ ಏನು: ಅಹಿಂಸೆ, ಸತ್ಯ, ಕದಿಯದಿರುವುದು, ಅಪಹರಿಸದಿರುವುದು, ಶಕ್ತಿಯನ್ನು ಪೋಲು ಮಾಡಿಕೊಳ್ಳದಿರುವಂತಹ ಬ್ರಹ್ಮಚರ್ಯವೇ ಯಮ ಅಥವಾ ರೀತಿಗಳು. ಹೀಗೆ ಮನುಷ್ಯನು ತನ್ನ ಮನಸ್ಸನ್ನು ಮುಕ್ತವಾಗಿಯೂ ಮತ್ತು ಆರೋಗ್ಯವಾಗಿಯೂ ಇಟ್ಟುಕೊಂಡು ಔನ್ನತ್ಯಕ್ಕೆ ಬೇಕಾದುದಕ್ಕೆ ತನ್ನ ಚಟುವಟಿಕೆಗಳನ್ನು ಕೇಂದ್ರೀಕರಿಸಿಕೊಳ್ಳಲು ಸೂತ್ರಗಳನ್ನು ಒದಗಿಸುವುದು ಇದರ ಇರಾದೆ.

ಯಾರು ಅಭ್ಯಾಸ ಮಾಡುತ್ತಾರೋ ಅವರಿಗೆ ಈ ಯೋಗಸಾಧನೆಯು ಲಭ್ಯ. ಒಂದೊಂದು ಸೂತ್ರವೂ ಮನೋವೈಜ್ಞಾನಿಕವಾಗಿ ಮತ್ತು ಸೈದ್ಧಾಂತಿಕವಾಗಿ ತಮ್ಮದೇ ಮನಸ್ಸನ್ನು ಅರಿಯಲು ಮತ್ತು ಸಶಕ್ತಗೊಳಿಸಿಕೊಳ್ಳಲು ನೆರವಾಗುವ ಮಾರ್ಗಸೂತ್ರಗಳೇ ಮತ್ತು ಒಳನೋಟಗಳೇ.

ಮಾನಸಿಕ ಸಶಕ್ತತೆಗೆ ಮತ್ತು ಸ್ವಾಸ್ಥ್ಯಕ್ಕೆ ಒಂದೆರಡು ಸೂತ್ರಗಳನ್ನು ಇಲ್ಲಿ ಹಂಚಿಕೊಳ್ಳುತ್ತೇನೆ.

ಮೈತ್ರೀಕರುಣಾಮುದಿತೋಪೇಕ್ಷಾಣಾಂಸುಖದುಃಖಪುಣ್ಯಾಪುಣ್ಯವಿಷಯಾಣಾಂ ಭಾವನಾತಶ್ಚಿತ್ತಪ್ರಸಾದನಮ್ (1.33)

ಸುಖದೊಂದಿಗೆ ಮೈತ್ರಿ, ದುಃಖದೊಂದಿಗೆ ಕರುಣೆ, ಪುಣ್ಯದಲ್ಲಿ ಹರ್ಷ, ಪಾಪದಲ್ಲಿ ಉಪೇಕ್ಷೆಗಳ ಭಾವನೆಗಳನ್ನು ಬೆಳೆಸಿಕೊಂಡಲ್ಲಿ ಚಿತ್ತಪ್ರಸಾದವಾಗುವುದು.

ಅಹಿಂಸೆಯನ್ನು ಮಹಾವ್ರತವನ್ನಾಗಿಸಿಕೊಳ್ಳುವ ಬಗೆ ಇದು ಹೇಳುವುದನ್ನು ನೋಡಿ, “ಜಾತಿದೇಶಕಾಲಸಮಯಾನವಚ್ಛಿನ್ನಾಃ ಸಾರ್ವಭೌಮ ಮಹಾವ್ರತಮ್” (2.31) ಒಂದು ಜೀವಕ್ಕೆ ಹಾನಿ ಮಾಡುವುದಿಲ್ಲ ಎಂದರೆ ಅದು ಯಾವ ಜಾತಿಯದೇ ಆಗಿರಲಿ, ಯಾವ ಪ್ರದೇಶದ್ದೇ ಆಗಿರಲಿ, ಯಾವುದೇ ಸಂದರ್ಭವೇ ಆಗಿರಲಿ ಮಾಡಕೂಡದು. ಯಾವುದೇ ರೀತಿಯ ಪರಿಮಿತಿಗಳಿಲ್ಲದ ಅಹಿಂಸೆಯು ಮಹಾವ್ರತವಾಗುತ್ತದೆ. ಸ್ವಜನರಿಗೆ ಕರುಣೆ, ಮತ್ತೊಬ್ಬರಿಗೆ ಕ್ರೌರ್ಯ ಎಂಬುದನ್ನು ನೇರವಾಗಿ ವಿರೋಧಿಸುತ್ತಾ ಪತಂಜಲಿ ಜೀವಪರವಾಗುತ್ತಾನೆ. ಮನುಷ್ಯನ ಮನಸ್ಸು ಜೀವಪರವಾಗಿರಬೇಕೆಂದು ಸ್ಪಷ್ಟವಾಗಿ ಪ್ರತಿಪಾದಿಸುತ್ತಾನೆ.

“ವಿತರ್ಕಭಾಧನೇ ಪ್ರತಿಪಕ್ಷಭಾವನಮ್” (2.33) ವ್ಯಕ್ತಿತ್ವ ವಿಕಸನದ ನವೀನ ತರಬೇತಿಗಳು ಈ ಸೂತ್ರವನ್ನು ಪಾಸಿಟಿವ್ ಥಿಂಕಿಂಗ್ ಎಂದು ಮುಂದಿಡುತ್ತವೆ. ‘ಮನಸ್ಸು ವ್ಯತಿರಿಕ್ತವಾದ ಉದ್ದೇಶಗಳಿಂದ ತಡೆಯಲ್ಪಟ್ಟಾಗ ಅವುಗಳ ವಿರೋಧ ಪಕ್ಷಗಳನ್ನು ಭಾವಿಸಿಕೊಳ್ಳಬೇಕು’ ಎಂದು ಸೂತ್ರ ಹೇಳುತ್ತದೆ. ನನಗೆ ಸೋಲಿನ ಭೀತಿ ಆವರಿಸಿದಾಗ ಜಯವನ್ನು ಭಾವಿಸುವುದು, ಸಾವಿನ ಭಯ ಬಾಧಿಸುವಾಗ ಬದುಕಿನ ಇಚ್ಛೆಯನ್ನು ಭಾವಿಸುವುದು, ದ್ವೇಷದಿಂದ ಮನಸ್ಸು ಕುದಿಯುವಾಗ ಪ್ರೇಮವನ್ನು ದ್ವೇಷದ ಬದಲಾಗಿ ತಂದುಕೊಳ್ಳುವ ಅಭ್ಯಾಸವನ್ನು ಸೂತ್ರ ಸೂಚಿಸುತ್ತದೆ.

“ಅಹಿಂಸಾಪ್ರತಿಷ್ಠಾಯಾಂ ತತ್ಸನ್ನಿಧೌ ವೈರತ್ಯಾಗಃ” (2.35)

ಅಹಿಂಸೆಯಲ್ಲಿ ಮನುಷ್ಯನು ಪ್ರತಿಷ್ಠಾಪಿತನಾದ ಮೇಲೆ ಅವನ ಸಾನ್ನಿಧ್ಯದಲ್ಲಿ ವೈರವು ಇರುವುದಿಲ್ಲ. ಅಂದರೆ ಸೂತ್ರವು ಹೇಳುವಂತೆ ವ್ಯಕ್ತಿಯು ಅಹಿಂಸೆಯನ್ನು ಮಹಾವ್ರತವನ್ನಾಗಿ ಸ್ವೀಕರಿಸಿ ತಾನು ಇರುವ ಎಡೆಯನ್ನೆಲ್ಲಾ ವೈರತ್ವದಿಂದ ಮುಕ್ತ ಮಾಡಲಿ ಎಂದು.

ವೀರ್ಯ ಎಂದರೆ ಶಕ್ತಿ ಎಂದೂ, ಈಶ್ವರನೆಂದರೆ ಇಡೀ ಅಸ್ತಿತ್ವವೆಂದೂ, ಆತ್ಮವೆಂದರೆ ವ್ಯಕ್ತಿಗತವಾದ ಚೈತನ್ಯವೆಂದೂ ಹೀಗೆ ಹಲವು ಸರಳ ಅರ್ಥಗಳಲ್ಲಿ ಸೂತ್ರಗಳನ್ನು ಗ್ರಹಿಸುತ್ತಾ ಹೋದರೆ ತನ್ನ ಮನಸ್ಸನ್ನು ಮತ್ತು ಬದುಕನ್ನು ಸಶಕ್ತವಾಗಿ ಸುಂದರಗೊಳಿಸಿಕೊಳ್ಳಲು ಪತಂಜಲಿ ಯೋಗಸೂತ್ರವು ಮಾರ್ಗದರ್ಶಿಯೇ ಸರಿ.

ಮೈತ್ರ್ಯಾದಿಷು ಬಲಾನಿ (4.23) ಮೈತ್ರಿಯಲ್ಲಿ ಬಲವುಂಟಾಗುತ್ತದೆ ಎಂಬುದು ಕೂಡ ಅಷ್ಟೇ ಸರಳ ಮತ್ತು ಸತ್ಯದ ಮಾತು.


ಇದನ್ನು ಓದಿ: ದೇವತಾ ಪ್ರತಿಮೆಗಳು ವಿಕಾಸವಾದುದ್ದು ಹೇಗೆ? ಅದರ ಹಿಂದಿನ ರಾಜಕೀಯವೇನು?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...