Homeಅಂಕಣಗಳುಪುಟಕ್ಕಿಟ್ಟ ಪುಟಗಳುಪತಂಜಲಿ ಯೋಗಸೂತ್ರ: ಧಾರ್ಮಿಕವೂ ಅಲ್ಲದ ಮೌಢ್ಯವೂ ಅಲ್ಲದ ತಂತ್ರ ಸಾಧನ

ಪತಂಜಲಿ ಯೋಗಸೂತ್ರ: ಧಾರ್ಮಿಕವೂ ಅಲ್ಲದ ಮೌಢ್ಯವೂ ಅಲ್ಲದ ತಂತ್ರ ಸಾಧನ

ತನ್ನ ಸೂತ್ರಗಳನ್ನು ವಿಶ್ವಾಸಿಸಿ ಎಂದು ಭ್ರಾಮಕ ಶ್ರದ್ಧೆಯನ್ನು ಉಂಟುಮಾಡುವ ಇರಾದೆ ಪತಂಜಲಿಗಿಲ್ಲ. ಪ್ರಯೋಗಿಸಿ ಅಭ್ಯಾಸ ಮಾಡಿ ಎನ್ನುತ್ತಾನೆ. ಅನುಷ್ಠಾನಕ್ಕೆ ತನ್ನಿ ಎಂದು ತಾಕೀತು ಮಾಡುತ್ತಾನೆ. ಅದರಿಂದ ಹೀಗಾಗತ್ತೆ ಹಾಗಾಗತ್ತೆ ಎಂದು ಫಲವನ್ನು ಪೂರ್ವಪಾಠದಲ್ಲಿ ಹೇಳಿ ಆಸೆ ಹುಟ್ಟಿಸುವುದಿಲ್ಲ.

- Advertisement -
- Advertisement -

ಯೋಗ ಎಂಬುದನ್ನು ಧಾರ್ಮಿಕತೆಗೆ ತಳುಕುಹಾಕುವ ಮತ್ತು ಅದನ್ನು ಮೌಢ್ಯವೆಂದು ತಳ್ಳಿ ಹಾಕುವುದು ಎರಡೂ ಪೂರ್ವಗ್ರಹದಿಂದ ಕೂಡಿದೆ. ಆದರೆ ಇವೆರಡಕ್ಕೂ ಹೊರತಾಗಿರುವ ಒಂದು ಸಾಧನ ತಂತ್ರ ಈ ಪತಂಜಲಿ ಯೋಗಸೂತ್ರ.

ಮನುಷ್ಯ ತನ್ನ ಗ್ರಹಿಕೆ ಮತ್ತು ಅನುಭವಗಳ ಪರಿಮಿತಿಯಲ್ಲಿ ಇರುವ ತನ್ನ ಮನಸ್ಸು ಮತ್ತು ಶರೀರ ಸಂವೇದನೆಯನ್ನು ವಿಸ್ತರಿಸಿಕೊಂಡು ಕೈವಲ್ಯವನ್ನು ಪಡೆಯಲು ಮಾಡಿರುವ ಬೋಧನೆ ಇದು. ಯಾವುದೇ ದೇವತೆಗಳ ಗುಣಗಾನವಲ್ಲ, ಪ್ರಾರ್ಥನೆ, ಆರಾಧನೆಗಳಿಂದ ಫಲ ಪಡೆಯುವ ಭರವಸೆಯಲ್ಲ, ಹುಟ್ಟಿನಿಂದ ಶ್ರೇಷ್ಠರೋ ಕನಿಷ್ಟರೋ ಆಗಿದ್ದಾರೆಂಬ ಭ್ರಮೆಯಲ್ಲಿರುವ ಜಾತಿಯವರಿಗೆ ಸವಲತ್ತೋ, ಅನುಗ್ರಹವೋ ಅಲ್ಲವೇ ಅಲ್ಲ. ಯಾವೊಬ್ಬ ಮನುಷ್ಯನೂ ತನ್ನ ಸೀಮಿತ ಗ್ರಹಿಕೆಯಲ್ಲಿರುವ ಮನಸ್ಸಿನ ಸ್ವರೂಪ ಮತ್ತು ಚಟುವಟಿಕೆಗಳನ್ನು ಅರಿತುಕೊಂಡು, ಯಾದು ತನ್ನನ್ನು ಉದಾತ್ತಗೊಳಿಸುತ್ತದೆಯೋ ಅಥವಾ ನಿರ್ಬಂಧಗಳಿಂದ ಮುಕ್ತಗೊಳಿಸುತ್ತದೆಯೋ ಅಂತಹವನ್ನು ಸ್ವೀಕರಿಸುತ್ತಾ, ಯಾವುವು ತನ್ನನ್ನು ಹಿಂದಕ್ಕೆ ಎಳೆಯುತ್ತದೆಯೋ, ಬಂಧನದಲ್ಲಿ ಸಿಲುಕಿಸುತ್ತದೆಯೋ, ಆನಂದವನ್ನು ನೀಡುವುದಿಲ್ಲವೋ ಅಂತಹವನ್ನು ನಿಗ್ರಹಿಸುವ ತರಬೇತಿಗೆ ಅಗತ್ಯವಿರುವ ಫಾರ್ಮುಲಾಗಳು ಈ ಯೋಗಸೂತ್ರಗಳು.

ಅನುಮಾನಗಳನ್ನು ಹುಟ್ಟಿಹಾಕಿಕೊಂಡು, ಚರ್ಚೆಗಳನ್ನು ಮಾಡಿಕೊಂಡು, ಸಿದ್ಧಾಂತಗಳ ಶಾಖೆಗಳ ಮೂಸೆಗಳಲ್ಲಿ ಶೋಧಿಸಿಕೊಂಡು ಕಾಲಹರಣ ಮಾಡಬೇಡಿ. ಹೇಳಿದಷ್ಟು ಮಾಡಿ ಎನ್ನುವಷ್ಟು ಖಂಡಿತವಾದಿ ಈ ಪತಂಜಲಿ. “ಅಥ ಯೋಗಾನುಶಾಸನಂ” ಎಂದೇ ಪ್ರಾರಂಭಿಸುತ್ತಾರೆ. ಜಿಜ್ಞಾಸಾಶಾಸ್ತ್ರಗಳು “ಅಥಾತೋ ಬ್ರಹ್ಮಜಿಜ್ಞಾಸಾ” ಅಥವಾ “ಅಥಾತೋ ಧರ್ಮಜಿಜ್ಞಾಸಾ” ಎಂದು ಪ್ರಾರಂಭಿಸಿದರೆ ಅಲ್ಲಿ ನಿಮ್ಮ ಹೊಸ ಆಲೋಚನೆಗಳಿಗೆ ಮತ್ತು ಬೇರೆ ಬೇರೆ ಸಿದ್ಧಾಂತಗಳ ಒರೆಗಲ್ಲಿಗೆ ತಿಕ್ಕಿ ತೀಡಿ ಈ ವಿಷಯವು ಸರಿಯೋ, ತಪ್ಪೋ, ಸಮರ್ಪಕವೋ ಎಂದು ನೋಡುವ ಸಾಧ್ಯತೆಗಳಿರುತ್ತದೆ. ಆದರೆ ವಿಜ್ಞಾನದ ಸೂತ್ರಗಳಲ್ಲಿ ನಿರೂಪಿತ ವಿಷಯವು ದೃಢವಾಗಿದ್ದು, ಅದು ಬದಲಾಗುವುದಿಲ್ಲ. ಆದರೆ ಅದರಿಂದ ಈಚೆಗೂ ವಿಷಯಗಳು ಪ್ರಯೋಗಗಳಿಂದ ಮತ್ತಷ್ಟು ವಿಸ್ತಾರಗೊಳ್ಳುವವು. ಉದಾಹರಣೆಗೆ ಗುರುತ್ವಾಕರ್ಷಣೆಯ ನಿಯಮ. ಇದನ್ನು ಸಂದೇಹಿಸಲಾಗದು. ಈಗಾಗಲೇ ನಿರೂಪಿತವಾಗಿರುವುದು. ಅದನ್ನು ಪ್ರಯೋಗಗಳಿಗೆ ಒಳಪಡಿಸಬಹುದು. ಬೇರೆಬೇರೆ ವಿಷಯಗಳಲ್ಲಿ ಇದರ ವಿಸ್ತಾರವನ್ನು ಹೆಚ್ಚಿಸಬಹುದು. ಇದರ ನಿಯಮವನ್ನು ಭೂಮಿಯ ಮೇಲೆ ಮಾತ್ರವಲ್ಲದೇ ಅಂತರಿಕ್ಷದಲ್ಲಿ ಮಾಡುವ ಪ್ರಯೋಗಗಳವರೆಗೂ ವಿಸ್ತರಿಸಬಹುದು. ಗುರುತ್ವಾಕರ್ಷಣೆಯ ನಿಯಮವೆಂದರೆ ಅದೊಂದು ಮೂಲಭೂತ ವೈಜ್ಞಾನಿಕ ಸೂತ್ರ. ಪತಂಜಲಿಗೆ ಅಷ್ಟರಮಟ್ಟಿಗಿನ ವಿಶ್ವಾಸ ತನ್ನ ಸೂತ್ರಗಳಲ್ಲಿ.

ತನ್ನ ಸೂತ್ರಗಳನ್ನು ವಿಶ್ವಾಸಿಸಿ ಎಂದು ಭ್ರಾಮಕ ಶ್ರದ್ಧೆಯನ್ನು ಉಂಟುಮಾಡುವ ಇರಾದೆ ಪತಂಜಲಿಗಿಲ್ಲ. ಪ್ರಯೋಗಿಸಿ ಅಭ್ಯಾಸ ಮಾಡಿ ಎನ್ನುತ್ತಾನೆ. ಅನುಷ್ಠಾನಕ್ಕೆ ತನ್ನಿ ಎಂದು ತಾಕೀತು ಮಾಡುತ್ತಾನೆ. ಅದರಿಂದ ಹೀಗಾಗತ್ತೆ ಹಾಗಾಗತ್ತೆ ಎಂದು ಫಲವನ್ನು ಪೂರ್ವಪಾಠದಲ್ಲಿ ಹೇಳಿ ಆಸೆ ಹುಟ್ಟಿಸುವುದಿಲ್ಲ. ಆ ರೀತಿಯಲ್ಲಿ ಆಸೆ ಹುಟ್ಟಿಸುವುದು ಅಥವಾ ಭಯ ಹುಟ್ಟಿಸುವುದು ಪತಂಜಲಿಯ ಯೋಗ ಮಾರ್ಗದಲ್ಲಿ ನಿಷೇಧವೂ ಹೌದು.

ಹಾಗಂತ ಪತಂಜಲಿಯ ಯೋಗಸೂತ್ರವು ಋಷಿಮುನಿಯೊಬ್ಬನೋ ಅಥವಾ ಯೋಗಿಯೊಬ್ಬನೋ ತಾನು ಮೋಡಗಳ ಆಚೆಯಿಂದಲೋ ಅಥವಾ ಬೆಟ್ಟಗಳ ಮರೆಯಿಂದಲೋ ದೇವರ ಬಾಯಿಂದ ಕೇಳಿಸಿಕೊಂಡು ಬರೆದಿರುವಂತಹುದೇನಲ್ಲ. ಸುಮಾರು ಕ್ರಿಸ್ತಪೂರ್ವ 150ರ ಆಸುಪಾಸುಗಳಲ್ಲಿ ರಚಿಸಲ್ಪಟ್ಟಿರಬಹುದಾದ ಈ ಕೃತಿ ಶತಶತಮಾನಗಳ ಹಿಂದಿನ ಅನೇಕ ಪ್ರಯೋಗಗಳನ್ನು, ಅಭ್ಯಾಸಗಳನ್ನು, ತಂತ್ರ ಸಾಧನೆಗಳನ್ನು ಗಮನಿಸಿಕೊಂಡು, ವಿವಿಧ ಸಿದ್ಧಾಂತಗಳ ಶಾಲೆಗಳ ಧ್ವನಿಗಳನ್ನು ಕೇಳುತ್ತಾ, ಅದರಿಂದಾಚೆಗಿರುವ ಮರ್ಮವನ್ನು ಅರಿಯಲು ಯತ್ನಿಸುತ್ತಾ ಕ್ರೋಢೀಕರಿಸುವಂತಹ ಸೂತ್ರಗಳಾಗಿವೆ. ನೂರಾರು ವರ್ಷಗಳು ಬರಿಯ ಮೌಖಿಕವಾಗಿಯೇ ಇದ್ದ ಈ ಸೂತ್ರಗಳು ನಂತರದ ಕಾಲಘಟ್ಟದಲ್ಲಿ ಬರವಣಿಗೆಯ ರೂಪಕ್ಕೆ ತರಲಾಯಿತು.

ವಿಷ್ಣುವೋ, ಇಂದ್ರನೋ, ಶಿವನೋ, ಒಬ್ಬ ದೇವರ ಅಧೀನದಲ್ಲಿದ್ದು ಅವನ ಆಗ್ರಹ ಮತ್ತು ಅನುಗ್ರಹಗಳಿಗೆ ತಕ್ಕಂತೆ ನಮ್ಮ ಬದುಕಿನ ನಡೆಗಳು ಒಡಮೂಡುವುದು ಎಂದು ನಂಬುವ ಧಾರ್ಮಿಕ ಶ್ರದ್ಧೆ ಪತಂಜಲಿಯದ್ದಲ್ಲ. ಮನಸ್ಸು ಮತ್ತು ದೇಹಕ್ಕೆ ಅಗತ್ಯವಿರುವ ‘ಅಭ್ಯಾಸ’ ಮಾಡುತ್ತಾ, ತನ್ನನ್ನು ತಾನು ತರಬೇತಿಗೊಳಿಸಿಕೊಳ್ಳುತ್ತಾ ಕೈವಲ್ಯವನ್ನು ಪಡೆಯುವುದು – ಮನಸ್ಸು ಮತ್ತು ದೇಹವನ್ನು ಶಿಸ್ತಿಗೆ ಒಳಪಡಿಸಿ, ನಮ್ಮ ಚೈತನ್ಯವನ್ನು ಕೇಂದ್ರೀಕರಿಸಿ ಔನ್ನತ್ಯವನ್ನು ಹೊಂದುವುದು ಅವನ ಮಾರ್ಗ. ಇಲ್ಲಿ ಆತ್ಮವೆಂದರೆ ವ್ಯಕ್ತಿಗತವಾದ ಚೈತನ್ಯ. ಪರಮಾತ್ಮವೆಂದರೆ ವ್ಯಕ್ತಿಗತವಾಗಿರುವುದನ್ನು ಮೀರಿರುವ ವಿಶ್ವದಸ್ತಿತ್ವದ ಮಹಾಚೈತನ್ಯ. ಒಂದು ನೀರಿನ ಹನಿಯಲ್ಲಿರುವ ಅಣುಗಳ ಸಂಯೋಜನೆ ಮತ್ತು ಗುಣಗಳೇ ಸಮುದ್ರದಲ್ಲಿಯೂ ಇರುವುದು. ಆದರೆ ಈ ಎರಡರ ನಡುವೆ ಭೌತಿಕ ವ್ಯತ್ಯಾಸವಿದೆ. ನೀರಿನ ಹನಿಯು ಸಾಗರವನ್ನು ಸೇರಿ ಅಗಾಧತೆಯಲ್ಲಿ ಒಂದಾಗಿ ತಾನೂ ಆ ಅಗಾಧಶಕ್ತಿಯಲ್ಲಿ ಒಂದಾಗುವ ಸಾಧ್ಯತೆಯೂ ಇದೆ. ಈ ಸಾಧ್ಯತೆಯನ್ನು ಮನುಷ್ಯನ ಜೀವ ಎಂಬ ಚೈತನ್ಯವು ಪರಮ ಎಂಬ ಮಹಾ ಚೈತನ್ಯದೊಡನೆ ಸೇರಿಸುವ ಪ್ರಕ್ರಿಯಲ್ಲಿ ಕಂಡುಕೊಳ್ಳುವ ಪ್ರಯತ್ನಕ್ಕೆ ಒಂದು ಶಿಸ್ತಿನ ಬೋಧನೆ ಈ ಪತಂಜಲಿಯದು.

ಮನುಷ್ಯನ ಮನಸ್ಸು ಮತ್ತು ಅದರ ರಚನೆ, ಕಾರ್ಯ ಚಟುವಟಿಕೆಗಳು, ಸಾಮರ್ಥ್ಯಗಳು, ದೌರ್ಬಲ್ಯಗಳು, ಈ ಎಲ್ಲವೂ ಪತಂಜಲಿಯ ಗಮನದಲ್ಲಿದೆ. ಅದು ಈ ಮನುಷ್ಯನ ಜೈವಿಕ, ಸಾಮಾಜಿಕ ಪರಿಸರಗಳು ವಿಧಿಸಿರುವ ನಿರ್ಬಂಧಗಳಿಂದ ಸೀಮಿತ ಚೌಕಟ್ಟಿನ ವಸ್ತುವಾಗಿದೆ ಎಂಬ ಅರಿವು ಇದೆ. ಅದನ್ನು ಎಲ್ಲಾ ಬಗೆಯ ಬಂಧನಗಳಿಂದ ಮುಕ್ತವಾಗಿಸುವ ಕಾಳಜಿ ಇದೆ. ಈ ಕಾಳಜಿಯು ಯಾರನ್ನೂ ದ್ವೇಷಿಸದಿರಲು, ಆಲೋಚನೆಯಲ್ಲಿಯೂ ಹಿಂಸೆ ಮಾಡದಿರಲು ಎಚ್ಚರಿಕೆಯನ್ನು ನೀಡುತ್ತದೆ.

ಸೃಷ್ಟಿಕರ್ತ ಎಂಬ ಭ್ರಮೆಯನ್ನು ಒಮ್ಮಿಂದೊಮ್ಮೆಲೇ ತಳ್ಳಿ ಹಾಕುತ್ತದೆ. ಯಾರೂ ಸೃಷ್ಟಿಸಿದ್ದಲ್ಲದ ಈ ಪ್ರಕೃತಿಯು ಯಾವಾಗಲೂ ಇತ್ತು. ಕಾಲದಿಂದ ಕಾಲಕ್ಕೆ ನಿರಂತರವಾಗಿ ರೂಪಾಂತರಗೊಳ್ಳುತ್ತಲೇ ಇರುತ್ತದೆ ಎಂಬ ಸ್ಪಷ್ಟತೆ ಪತಂಜಲಿಗೆ ಇದೆ. ಅದಕ್ಕೆ ಅದರದೇ ಆದಂತಹ ಗುಣಗಳಿವೆ, ಕ್ರಮಗಳಿವೆ. ಇದರ ಸೃಷ್ಟಿಯೇ ಆಗಿರುವ ಮನುಷ್ಯನ ಶರೀರಕ್ಕೂ ಮತ್ತು ಅವನ ಮನಸ್ಸಿಗೂ ಅದೇ ಗುಣಧರ್ಮಗಳಿವೆ. ಹಾಗಾಗಿ ಅರಿತು ಅಭ್ಯಾಸ ಮಾಡಿರೆಂದು ಪತಂಜಲಿ ಬೋಧಿಸುತ್ತಾನೆ. ಈ ಯೋಗ ಸೂತ್ರವು ಬೇಡುವುದು ಶ್ರದ್ಧೆಯನ್ನು, ನಂಬಿಕೆಯನ್ನಲ್ಲ. ಚೈತನ್ಯ, ಆಲೋಚನೆ, ಏಕಾಗ್ರತೆ ಮತ್ತು ಅರಿವು ಯೋಗದ ಗುರಿಯನ್ನು ಸಾಧಿಸುವುದು. ಸ್ಥೂಲ ಪರಿಸರವು ಮನುಷ್ಯನ ಮನಸ್ಸನ್ನು ತನ್ನ ಪ್ರಭಾವಕ್ಕೆ ವಶಪಡಿಸಿಕೊಂಡು ಚಂಚಲವನ್ನು ಉಂಟುಮಾಡುತ್ತದೆ. ಆದರೆ ಅವನು ಎಚ್ಚೆತ್ತುಕೊಂಡು ಅವುಗಳನ್ನು ಮೀರಿ ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣೆ, ಧ್ಯಾನ ಮತ್ತು ಸಮಾಧಿ ಎಂಬ ಯೋಗದ ಎಂಟು ಅಂಗಗಳನ್ನು ಅನುಷ್ಠಾನ ಮಾಡಿದರೆ ಮನುಷ್ಯನ ಮನಸ್ಸು ಮತ್ತು ಶರೀರವು ತಾನು ಒಳಪಟ್ಟಿರುವ ಅಶುದ್ಧಿಯಿಂದ ಮುಕ್ತವಾಗುತ್ತದೆ ಎಂಬುದು ಇದರ ಧೋರಣೆ. ಇವುಗಳಲ್ಲಿ ಇರುವುದಾದರೂ ಏನು: ಅಹಿಂಸೆ, ಸತ್ಯ, ಕದಿಯದಿರುವುದು, ಅಪಹರಿಸದಿರುವುದು, ಶಕ್ತಿಯನ್ನು ಪೋಲು ಮಾಡಿಕೊಳ್ಳದಿರುವಂತಹ ಬ್ರಹ್ಮಚರ್ಯವೇ ಯಮ ಅಥವಾ ರೀತಿಗಳು. ಹೀಗೆ ಮನುಷ್ಯನು ತನ್ನ ಮನಸ್ಸನ್ನು ಮುಕ್ತವಾಗಿಯೂ ಮತ್ತು ಆರೋಗ್ಯವಾಗಿಯೂ ಇಟ್ಟುಕೊಂಡು ಔನ್ನತ್ಯಕ್ಕೆ ಬೇಕಾದುದಕ್ಕೆ ತನ್ನ ಚಟುವಟಿಕೆಗಳನ್ನು ಕೇಂದ್ರೀಕರಿಸಿಕೊಳ್ಳಲು ಸೂತ್ರಗಳನ್ನು ಒದಗಿಸುವುದು ಇದರ ಇರಾದೆ.

ಯಾರು ಅಭ್ಯಾಸ ಮಾಡುತ್ತಾರೋ ಅವರಿಗೆ ಈ ಯೋಗಸಾಧನೆಯು ಲಭ್ಯ. ಒಂದೊಂದು ಸೂತ್ರವೂ ಮನೋವೈಜ್ಞಾನಿಕವಾಗಿ ಮತ್ತು ಸೈದ್ಧಾಂತಿಕವಾಗಿ ತಮ್ಮದೇ ಮನಸ್ಸನ್ನು ಅರಿಯಲು ಮತ್ತು ಸಶಕ್ತಗೊಳಿಸಿಕೊಳ್ಳಲು ನೆರವಾಗುವ ಮಾರ್ಗಸೂತ್ರಗಳೇ ಮತ್ತು ಒಳನೋಟಗಳೇ.

ಮಾನಸಿಕ ಸಶಕ್ತತೆಗೆ ಮತ್ತು ಸ್ವಾಸ್ಥ್ಯಕ್ಕೆ ಒಂದೆರಡು ಸೂತ್ರಗಳನ್ನು ಇಲ್ಲಿ ಹಂಚಿಕೊಳ್ಳುತ್ತೇನೆ.

ಮೈತ್ರೀಕರುಣಾಮುದಿತೋಪೇಕ್ಷಾಣಾಂಸುಖದುಃಖಪುಣ್ಯಾಪುಣ್ಯವಿಷಯಾಣಾಂ ಭಾವನಾತಶ್ಚಿತ್ತಪ್ರಸಾದನಮ್ (1.33)

ಸುಖದೊಂದಿಗೆ ಮೈತ್ರಿ, ದುಃಖದೊಂದಿಗೆ ಕರುಣೆ, ಪುಣ್ಯದಲ್ಲಿ ಹರ್ಷ, ಪಾಪದಲ್ಲಿ ಉಪೇಕ್ಷೆಗಳ ಭಾವನೆಗಳನ್ನು ಬೆಳೆಸಿಕೊಂಡಲ್ಲಿ ಚಿತ್ತಪ್ರಸಾದವಾಗುವುದು.

ಅಹಿಂಸೆಯನ್ನು ಮಹಾವ್ರತವನ್ನಾಗಿಸಿಕೊಳ್ಳುವ ಬಗೆ ಇದು ಹೇಳುವುದನ್ನು ನೋಡಿ, “ಜಾತಿದೇಶಕಾಲಸಮಯಾನವಚ್ಛಿನ್ನಾಃ ಸಾರ್ವಭೌಮ ಮಹಾವ್ರತಮ್” (2.31) ಒಂದು ಜೀವಕ್ಕೆ ಹಾನಿ ಮಾಡುವುದಿಲ್ಲ ಎಂದರೆ ಅದು ಯಾವ ಜಾತಿಯದೇ ಆಗಿರಲಿ, ಯಾವ ಪ್ರದೇಶದ್ದೇ ಆಗಿರಲಿ, ಯಾವುದೇ ಸಂದರ್ಭವೇ ಆಗಿರಲಿ ಮಾಡಕೂಡದು. ಯಾವುದೇ ರೀತಿಯ ಪರಿಮಿತಿಗಳಿಲ್ಲದ ಅಹಿಂಸೆಯು ಮಹಾವ್ರತವಾಗುತ್ತದೆ. ಸ್ವಜನರಿಗೆ ಕರುಣೆ, ಮತ್ತೊಬ್ಬರಿಗೆ ಕ್ರೌರ್ಯ ಎಂಬುದನ್ನು ನೇರವಾಗಿ ವಿರೋಧಿಸುತ್ತಾ ಪತಂಜಲಿ ಜೀವಪರವಾಗುತ್ತಾನೆ. ಮನುಷ್ಯನ ಮನಸ್ಸು ಜೀವಪರವಾಗಿರಬೇಕೆಂದು ಸ್ಪಷ್ಟವಾಗಿ ಪ್ರತಿಪಾದಿಸುತ್ತಾನೆ.

“ವಿತರ್ಕಭಾಧನೇ ಪ್ರತಿಪಕ್ಷಭಾವನಮ್” (2.33) ವ್ಯಕ್ತಿತ್ವ ವಿಕಸನದ ನವೀನ ತರಬೇತಿಗಳು ಈ ಸೂತ್ರವನ್ನು ಪಾಸಿಟಿವ್ ಥಿಂಕಿಂಗ್ ಎಂದು ಮುಂದಿಡುತ್ತವೆ. ‘ಮನಸ್ಸು ವ್ಯತಿರಿಕ್ತವಾದ ಉದ್ದೇಶಗಳಿಂದ ತಡೆಯಲ್ಪಟ್ಟಾಗ ಅವುಗಳ ವಿರೋಧ ಪಕ್ಷಗಳನ್ನು ಭಾವಿಸಿಕೊಳ್ಳಬೇಕು’ ಎಂದು ಸೂತ್ರ ಹೇಳುತ್ತದೆ. ನನಗೆ ಸೋಲಿನ ಭೀತಿ ಆವರಿಸಿದಾಗ ಜಯವನ್ನು ಭಾವಿಸುವುದು, ಸಾವಿನ ಭಯ ಬಾಧಿಸುವಾಗ ಬದುಕಿನ ಇಚ್ಛೆಯನ್ನು ಭಾವಿಸುವುದು, ದ್ವೇಷದಿಂದ ಮನಸ್ಸು ಕುದಿಯುವಾಗ ಪ್ರೇಮವನ್ನು ದ್ವೇಷದ ಬದಲಾಗಿ ತಂದುಕೊಳ್ಳುವ ಅಭ್ಯಾಸವನ್ನು ಸೂತ್ರ ಸೂಚಿಸುತ್ತದೆ.

“ಅಹಿಂಸಾಪ್ರತಿಷ್ಠಾಯಾಂ ತತ್ಸನ್ನಿಧೌ ವೈರತ್ಯಾಗಃ” (2.35)

ಅಹಿಂಸೆಯಲ್ಲಿ ಮನುಷ್ಯನು ಪ್ರತಿಷ್ಠಾಪಿತನಾದ ಮೇಲೆ ಅವನ ಸಾನ್ನಿಧ್ಯದಲ್ಲಿ ವೈರವು ಇರುವುದಿಲ್ಲ. ಅಂದರೆ ಸೂತ್ರವು ಹೇಳುವಂತೆ ವ್ಯಕ್ತಿಯು ಅಹಿಂಸೆಯನ್ನು ಮಹಾವ್ರತವನ್ನಾಗಿ ಸ್ವೀಕರಿಸಿ ತಾನು ಇರುವ ಎಡೆಯನ್ನೆಲ್ಲಾ ವೈರತ್ವದಿಂದ ಮುಕ್ತ ಮಾಡಲಿ ಎಂದು.

ವೀರ್ಯ ಎಂದರೆ ಶಕ್ತಿ ಎಂದೂ, ಈಶ್ವರನೆಂದರೆ ಇಡೀ ಅಸ್ತಿತ್ವವೆಂದೂ, ಆತ್ಮವೆಂದರೆ ವ್ಯಕ್ತಿಗತವಾದ ಚೈತನ್ಯವೆಂದೂ ಹೀಗೆ ಹಲವು ಸರಳ ಅರ್ಥಗಳಲ್ಲಿ ಸೂತ್ರಗಳನ್ನು ಗ್ರಹಿಸುತ್ತಾ ಹೋದರೆ ತನ್ನ ಮನಸ್ಸನ್ನು ಮತ್ತು ಬದುಕನ್ನು ಸಶಕ್ತವಾಗಿ ಸುಂದರಗೊಳಿಸಿಕೊಳ್ಳಲು ಪತಂಜಲಿ ಯೋಗಸೂತ್ರವು ಮಾರ್ಗದರ್ಶಿಯೇ ಸರಿ.

ಮೈತ್ರ್ಯಾದಿಷು ಬಲಾನಿ (4.23) ಮೈತ್ರಿಯಲ್ಲಿ ಬಲವುಂಟಾಗುತ್ತದೆ ಎಂಬುದು ಕೂಡ ಅಷ್ಟೇ ಸರಳ ಮತ್ತು ಸತ್ಯದ ಮಾತು.


ಇದನ್ನು ಓದಿ: ದೇವತಾ ಪ್ರತಿಮೆಗಳು ವಿಕಾಸವಾದುದ್ದು ಹೇಗೆ? ಅದರ ಹಿಂದಿನ ರಾಜಕೀಯವೇನು?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...