Homeಅಂಕಣಗಳುಪುಟಕ್ಕಿಟ್ಟ ಪುಟಗಳುದೇವತಾ ಪ್ರತಿಮೆಗಳು ವಿಕಾಸವಾದುದ್ದು ಹೇಗೆ? ಅದರ ಹಿಂದಿನ ರಾಜಕೀಯವೇನು?

ದೇವತಾ ಪ್ರತಿಮೆಗಳು ವಿಕಾಸವಾದುದ್ದು ಹೇಗೆ? ಅದರ ಹಿಂದಿನ ರಾಜಕೀಯವೇನು?

- Advertisement -
- Advertisement -

ವ್ಯಕ್ತಿಯು ತನ್ನ ಸುಖಸಂತೋಷಗಳಿಗೆ ಸಂಘವನ್ನು ಸಾಧನವನ್ನಾಗಿ ಬಳಸಿಕೊಳ್ಳುವುದು ಸಾಧಾರಣ ನಿಯಮ. ಆದರೆ ಸಂಘ ಒಮ್ಮೆ ಮೈದಳೆದು ನಿಂತಿತೆಂದರೆ ವ್ಯಕ್ತಿಯ ಸ್ವಾತಂತ್ರ ಮೊಟಕಾಗಿಬಿಡುತ್ತದೆ. ವ್ಯಕ್ತಿಗಾಗಿ ಸಂಘವೋ, ಸಂಘಕ್ಕಾಗಿ ವ್ಯಕ್ತಿಯೋ ಹೇಳುವುದು ಕಷ್ಟವಾಗುತ್ತದೆ. ವ್ಯಕ್ತಿಗಿಂತ ಮಿಗಿಲಾದ, ಬೇರೆಯಾದ, ತನ್ನದೇ ಆದ ಇರವನ್ನು ಪಡೆದುಕೊಳ್ಳಲು ಸಂಘ ಹೆಣಗಾಡುತ್ತದೆ; ಹೀಗೆಂದು ಎಸ್ ಕೆ ರಾಮಚಂದ್ರ ರಾವ್ ತಮ್ಮ ಮೂರ್ತಿಶಿಲ್ಪದ ಪುಸ್ತಕದಲ್ಲಿ ವಿಚಾರ ಮಾಡುತ್ತಾರೆ. ಶಿಲ್ಪಗಳ ನೆಲೆ ಹಿನ್ನೆಲೆಗಳನ್ನು ಗುರುತಿಸುವ ಮತ್ತು ಚರ್ಚೆ ಮಾಡುವ ಕಾರಣದಿಂದ ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ ಮತ್ತು ಆಧ್ಯಾತ್ಮಿಕವಾಗಿರುವ ಎಲ್ಲಾ ವಿಷಯಗಳನ್ನೂ ಈ ಪುಸ್ತಕ ಅವಲೋಕಿಸುತ್ತದೆ.

ದೇವಾನುದೇವತೆಗಳ ಮೂರ್ತಿಗಳು ಮೂರ್ತೀಭವಿಸಿದ ಹಿನ್ನೆಲೆಗಳನ್ನು ಗಮನಿಸುತ್ತಾ ದೇವರುಗಳ ಹುಟ್ಟು, ಬೆಳವಣಿಗೆ, ಅವುಗಳ ಸಾಂಸ್ಕೃತಿಕ  ರಾಜಕಾರಣ, ಸಂಘರ್ಷ ಮತ್ತು ಈ ಹೊತ್ತಿಗೆ ಅವುಗಳ ಪ್ರತಿಮೆಗಳು ನಿರ್ದಿಷ್ಟ ರೂಪಕ್ಕೆ ಬಂದು ನಿಂತಿರುವುದರ ಅಧ್ಯಯನ ಈ ಕೃತಿಯ ಮುಖ್ಯ ಉದ್ದೇಶ.

ವ್ಯಕ್ತಿ ಮತ್ತು ಸಮಾಜ: ಈ ಎರಡರ ನಡುವಿನ ಸಂಘರ್ಷಕ್ಕೆ ಕಾರಣ ಮಾತ್ರ ವಿಚಿತ್ರ ಮತ್ತು ವಿಸ್ಮಯ. ಆದರೆ ಈ ಸಂಘದ ಕೈ ಬಲಪಡಿಸುವ ಅಗತ್ಯ ವ್ಯಕ್ತಿಗಿದೆ. ಆದರೆ ಇದು ಅವನನ್ನೇ ಬಂಧಿಸುತ್ತದೆ. ನುಂಗುವುದಕ್ಕೂ ಆಗದ, ಉಗಳುವುದಕ್ಕೂ ಆಗದಂತೆ ತಾನೇ ಸಮಾಜದ ಬಲೆಯಲ್ಲಿ ಬಂಧಿತನಾಗುತ್ತಾನೆ. ಈ ಬಲೆಯ ಹರವಿನಲ್ಲಿ ನಮ್ಮ ಎಲ್ಲಾ ವ್ಯವಹಾರಗಳೂ ನಡೆಯಬೇಕು. ಅದಕ್ಕಾಗಿ ಅವನು ಸಂಕೇತಗಳನ್ನು ಸೃಷ್ಟಿಸಬೇಕು. ಸಂಕೇತಗಳನ್ನು ಸೃಷ್ಟಿ ಮಾಡುವ, ಕಲಿಯುವ, ಕಲಿಸುವ ಮತ್ತು ಅದರಲ್ಲಿ ವ್ಯವಹರಿಸುವ ಕೌಶಲ್ಯ ಮಾನವನಿಗೆ ನಿಸರ್ಗದತ್ತವಾಗಿಯೇ ಬಂದಿದೆ. ಅವನ ಬುದ್ಧಿಶಕ್ತಿ ಮತ್ತು ಭಾವನಾ ಪ್ರೌಢಿಮೆಯು ಈ ಕೌಶಲ್ಯಕ್ಕೆ ಮೂಲ ಸಾಮಗ್ರಿಗಳು. ಭಾಷೆ, ಮದುವೆ, ನಾಣ್ಯ, ವಿದ್ಯಾಭ್ಯಾಸ, ನ್ಯಾಯ, ಧರ್ಮ, ಸರಕಾರ, ವಿಜ್ಞಾನ, ಸಾಹಿತ್ಯ ಎಲ್ಲವೂ ಸಂಕೇತದ ಬಲೆಯ ವಿವರಗಳೇ ಎನ್ನುವ ರಾವ್ ಸಂಪ್ರದಾಯಗಳ ಬಗ್ಗೆಯೂ ವಿಶ್ಲೇಷಿಸುತ್ತಾರೆ.

ಹೊಸ ಉಪಾಯ ಹುಡುಕದ ಸೋಮಾರಿಗೆ ಸಂಪ್ರದಾಯಗಳು ಬೇಕಾಗುತ್ತವೆ. ಸಿದ್ಧವಾದ, ಜನರು ಬಳಸಿ ಉಪಯೋಗಕಂಡ ಉಪಾಯಗಳನ್ನು ಮಾತ್ರ ಅನುಸರಿಸುವ ಈ ಮಂದಿಯು ಸಾರ್ವಜನಿಕ ಅಭಿಪ್ರಾಯಕ್ಕಾಗಿ ಕೆಲಸ ಮಾಡುತ್ತಾರೆ. ಅವು ಒಂದು ರೀತಿ ಸೋಶಿಯಲ್ ಕಂಟ್ರೋಲ್ ಅಥವಾ ಸಾಮಾಜಿಕ ಅಂಕೆಯಾಗಿಯೂ ಕೆಲಸ ಮಾಡುತ್ತವೆ. ಈ ಸಾಮಾಜಿಕ ಅಂಕೆಯಿಂದ ಪ್ರಾರಂಭಿಸುವ ರಾವ್ ಕುಲದೈವ (ಟೊಟಮ್) ಮತ್ತು ವಿಧಿ ನಿಷೇಧ (ಟಾಬು)ಗಳ ಕಡೆಗೆ ಹೊರಳಿ ಬುಡಕಟ್ಟುಗಳು, ಜನಾಂಗಗಳು ತಮ್ಮ ತಮ್ಮ ಸಂಕೇತಗಳನ್ನು ತಮ್ಮ ಸಂಘದ ಶಕ್ತಿಯನ್ನಾಗಿಸಿಕೊಂಡು ವ್ಯಕ್ತಿಗಳನ್ನು ನಿಗ್ರಹಿಸುವ, ಸಮುದಾಯಗಳನ್ನು ರಕ್ಷಿಸುವ ಕೆಲಸಗಳನ್ನು ಮಾಡುವ ಅಗತ್ಯತೆಯನ್ನು ಗುರುತಿಸುತ್ತಾರೆ.

ಸ್ವಾರಸ್ಯಕರವಾದ ಸಂಪ್ರದಾಯಗಳನ್ನು ಗುರುತಿಸುವ ರಾವ್ ವಿಶ್ವದ ತುಂಬಾ ಅಪರೂಪವಾದ ಬುಡಕಟ್ಟುಗಳ ವಿಧಿಗಳನ್ನು ದಾಖಲಿಸುತ್ತಾರೆ. ಬೋರ್ನಿಯೋ ಮತ್ತು ಮೆಲನೀಶಯದ ಬುಡಕಟ್ಟುಗಳಲ್ಲಿ ಹುಟ್ಟಿದ ಮಗುವಿಗೆ ಹೆಸರಿಡಬೇಕಾದರೆ ಮಗುವಿಗೆ ಯಾವ ಹೆಸರಿಡುತ್ತಾರೋ ಆ ಹೆಸರಿನ ವ್ಯಕ್ತಿಯನ್ನು ಕೊಂದು, ತಲೆ ಕಡಿದು, ಅವನ ಬುರುಡೆಯಲ್ಲಿರುವ ಮಿದುಳನ್ನು ಅಡುಗೆ ಮಾಡಿ ತಂದೆ ತಿಂದ ಮೇಲೆಯೇ ಮಗುವಿಗೆ ಹೆಸರಿಡುತ್ತಿದ್ದುದು. ನಂತರ ಬರಿದಾದ ಬುರುಡೆಯನ್ನು ಪವಿತ್ರವೆಂದು ತಮ್ಮ ಮನೆಯಲ್ಲಿ ಜತನ ಮಾಡುತ್ತಿದ್ದರು.
ಹವಾಯ್ ದ್ವೀಪದ ಸಮರದೇವತೆ, ಆಫ್ರಿಕಾಖಂಡದ ಧಾನ್ಯದೇವತೆ, ಈಜಿಪ್ಟ್ ದೇಶದ ಬೇಸ್ ಎಂಬ ಯಕ್ಷ, ಸಿರಿಯಾದ ಎಲ್ ದೇವತೆಗಳನ್ನೆಲ್ಲಾ ಉಲ್ಲೇಖಿಸುವ ರಾವ್ ಭಾರತದ ಪ್ರಚಲಿತ ದೇವರುಗಳ ಪ್ರತಿಮೆಗಳ ಕಡೆಗೆ ಹೊರಳುತ್ತಾರೆ.

ಬರಿಯ ಶ್ರದ್ಧಾಭಕ್ತಿಯ ಸಾಂಪ್ರದಾಯಿಕ ಭಾವುಕತೆಯಲ್ಲಿ ಬಂಧಿತರಾಗಿರುವವರಿಗೆ ಈ ಪುಸ್ತಕದಲ್ಲಿ ಚರ್ಚಿಸಿರುವ ದೇವತೆಗಳ ಪ್ರತಿಮೆಗಳ ವಿಕಾಸವನ್ನು ಅರಿತರೇ ಎಷ್ಟೋ ಭ್ರಮೆಗಳು ಹರಿಯುವ ಸಾಧ್ಯತೆ ಇದೆ. ಗಣಪತಿಯ ಹುಟ್ಟು ಅವನ ಆದಿ ಪೂಜಿತನೆಂಬ ಕಲ್ಪನೆಯನ್ನು ಒಡೆದು ಹಾಕಿದರೆ, ಶಿವನ ಸ್ವಾರಸ್ಯ ಅರಣ್ಯಕರ ಅವಲೋಕನವನ್ನು ಮಾಡಲಾಗಿದೆ. ಇನ್ನು ವಿಷ್ಣುವಿನ ವಿಶಿಷ್ಟ ಭಾಗವತಪಂಥದ ಹಂತಗಳನ್ನು ವಿವೇಚಿಸಲಾಗಿದೆ. ಗ್ರಾಮದೇವತೆಗಳು ಹೇಗೆ ಹುಟ್ಟಿದರು, ಅವರು ಸರ್ವಶಕ್ತಿಗಳೆಂತು ಆದರು ಎಂಬುದು ಕೂಡಾ ಇವರ ಅಧ್ಯಯನದಿಂದ ತಪ್ಪಿಸಿಕೊಳ್ಳುವುದಿಲ್ಲ. ಸುಬ್ರಹ್ಮಣ್ಯ ಅಥವಾ ಸ್ಕಂದ, ಶಾಸ್ತ ಅಥವಾ ಅಯ್ಯಪ್ಪ, ಮಲ್ಲಾರಿ – ಖಂಡೋಬರAತಹ ಪಾರ್ಶ್ವ ದೇವತೆಗಳು ಸ್ವಯಂಪ್ರಧಾನ ದೇವತೆಗಳಾಗುವ ಬಗೆ, ಕಳಿಯಾಟ್ಟದ ತೆಯ್ಯಕೋಲಗಳು, ತುಳುನಾಡಿನ ದೈವಗಳು, ಕೃಷ್ಣನ ಕಲ್ಪನೆ; ಇವುಗಳ ಚಾರಿತ್ರಿಕ ಅಧ್ಯಯನವೂ ಇಲ್ಲಿದೆ. ವಿವಿಧ ಕಾಲಘಟ್ಟಗಳಲ್ಲಿ ಆದಂತಹ ಸಾಂಸ್ಕೃತಿಕ ಪಲ್ಲಟಗಳಿಗೆ ಅಷ್ಟು ಕಾರಣಗಳನ್ನು ರಾವ್ ಹೇಳದಿದ್ದರೂ, ಪ್ರತಿಮೆಗಳು ತಮ್ಮ ರೂಪಗಳನ್ನು ಬದಲಾಯಿಸಿಕೊಳ್ಳುತ್ತಾ ಬಂದ ಬಗೆಗಳನ್ನು ವಿವರಿಸುತ್ತಾ ಹೋಗುತ್ತಾರೆ. ಇದು ಬಹಳ ಮಹತ್ವದ್ದಾಗಿದೆ.

ಈ ಕಾಲಕ್ಕೆ ಇಂತಹ ವಿಷಯಗಳು ಸಾಮಾನ್ಯ ತಿಳಿವಳಿಕೆಗಳಾಗಿದ್ದು ಯಾವುದೋ ಅಧ್ಯಯನ ಸಂಪನ್ಮೂಲವಾಗುವಂತಹ ಹೊತ್ತಿಗೆಯಲ್ಲಿ ಮಾತ್ರವೇ ಇರಬೇಕಾದ ವಿಷಯಗಳಾಗಬಾರದಿತ್ತು. ಏಕೆಂದರೆ, ಕಾಲಪ್ರವಾಹದಲ್ಲಿ ಹೊಸಹೊಸ ಸವಾಲುಗಳು, ಸಮಸ್ಯೆಗಳು ಮತ್ತು ಸಂಘರ್ಷಗಳನ್ನು ಎದುರಿಸುತ್ತಿರುತ್ತೇವೆ. ಅವುಗಳನ್ನು ಎದುರಿಸುವ ಕೌಶಲ್ಯ ಮತ್ತು ಶಕ್ತಿ ಸಾಂಪ್ರದಾಯಿಕ ಮನಸ್ಥಿತಿಗಳಿಗೆ ಸಾಧ್ಯವಾಗದೇ, ತಾವು ಗೊಂದಲಕ್ಕೀಡಾಗುವುದು ಮಾತ್ರವಲ್ಲದೇ ತಾವು ಸದಸ್ಯರಾಗಿರುವ ಸಾಮಾಜಿಕ ಸಂಘದಲ್ಲಿಯೂ ಕೂಡ ಗೊಂದಲವನ್ನುಂಟುಮಾಡುತ್ತಾರೆ. ಇವು ಬಹಳ ಆತಂಕದ ಸಂಗತಿಗಳು. ವೈಜ್ಞಾನಿಕ ಆವಿಷ್ಕಾರಗಳು ಮತ್ತು ಸಂಶೋಧನೆಗಳು ಮುಂದುವರೆದಂತೆ ಹಳೆಯ ಪರಿಕರಗಳನ್ನು ಹಿಂದಕ್ಕೆ, ವಸ್ತುಸಂಗ್ರಹಾಲಯದ ದಾಖಲೆಗೆ ಸರಿಸಿ, ಸಾಂಸ್ಕೃತಿಕ ಮತ್ತು ಧಾರ್ಮಿಕ ಕ್ಷೇತ್ರಗಳಲ್ಲಿ ಹೊಸ ಸಂಶೋಧನೆಗಳನ್ನು ಬಳಸುವಂತೆ ಸಂಶೋಧಕರು ಮತ್ತು ವಿಚಾರವಂತರಿಗೆ ಸಾಧ್ಯವಾಗದಿರುವುದೇಕೆ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆ ಏನಲ್ಲ.

ದೇಶದ ಸಂಸ್ಕೃತಿಯನ್ನು ಧರ್ಮ ಮತ್ತು ಕಲೆಗಳ ದೃಷ್ಟಿಯಿಂದ ಅಧ್ಯಯನ ಮಾಡುವ ಕಾರ್ಯಫಲವು ಜನಸಾಮಾನ್ಯರಿಗೆ ಮುಟ್ಟಿದ್ದರೆ ಸಮಾಜದ ಮನೋಧರ್ಮವು ಎಂದಿಗೋ ಮೌಢ್ಯದಿಂದ ಬಿಡುಗಡೆಯಾಗಿರುತ್ತಿತ್ತು.

ಸಾಂಪ್ರದಾಯಿಕ ಧೋರಣೆಯ ಸೋಮಾರಿಗಳು ಈ ಮೂರ್ತಿಶಿಲ್ಪದ ಕೃತಿಯನ್ನು ಒಮ್ಮೆ ಅಧ್ಯಯನ ಮಾಡಬೇಕು. ಧರ್ಮ, ದರ್ಶನ, ಮನೋವಿಜ್ಞಾನ, ಸಮಾಜಶಾಸ್ತ್ರ ಮಾನವಶಾಸ್ತ್ರ, ಪ್ರಾಕ್ತನ-ಪ್ರಾಚ್ಯ ಸಂಶೋಧನೆಗಳ ವಿವರಗಳೆಲ್ಲವೂ ಇದರಲ್ಲಿದೆ.
ಈ ಪುಸ್ತಕದ ಅಧ್ಯಯನ ವ್ಯಾಪ್ತಿ ದೊಡ್ಡದು. ಇದರಲ್ಲಿ ಅಡಕವಾಗಿರುವ ಸಂಗತಿಗಳು ಮೂಲಭೂತವಾದವು.

ಸಂಶೋಧನೆ, ವಿಮರ್ಶೆ, ಪರಿಶೀಲನೆ- ಇವು ಕೂಡಿಬಂದಿರುವ ಕೃತಿ ಮೂರ್ತಿಶಿಲ್ಪ ಎಂದು ಎಚ್ ನರಸಿಂಹಯ್ಯ ತಮ್ಮ ಮುನ್ನುಡಿಯಲ್ಲಿ ಉಲ್ಲೇಖಿಸಿರುವುದು ವಿಶೇಷ.

  • ಯೋಗೇಶ್ ಮಾಸ್ಟರ್, ರಂಗಭೂಮಿ ಕಲಾವಿದರು, ಬರಹಗಾರರು.

ಇದನ್ನೂ ಓದಿ: ಶಾಸ್ತ್ರೀಯ – 2: ವೀರ ಗತಕಾಲದ ನೋವಿನ ಕಥನ ಸಾರುವ ವೀರಗಲ್ಲುಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...

ತಾರತಮ್ಯ ಮುಕ್ತ ಕ್ಯಾಂಪಸ್ ನಿರ್ಮಾಣದತ್ತ ಮಹತ್ವದ ಹೆಜ್ಜೆ; ‘ರೋಹಿತ್ ವೇಮುಲ ಮಸೂದೆ’ಗೆ ಸಚಿವ ಸಂಪುಟ ಅನುಮೋದನೆ

ಕರ್ನಾಟಕ ಸರ್ಕಾರದ ಸಚಿವ ಸಂಪುಟ ಗುರುವಾರ (ಏ.16) ದಂದು ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ’ಗೆ ಅನುಮೋದನೆ ನೀಡಿದೆ. ಹೈದರಾಬಾದ್‌ನ ಕೆಂದ್ರೀಯ ವಿಶ್ವವಿದ್ಯಾಲಯದಲ್ಲಿ...