Homeಅಂಕಣಗಳುಪುಟಕ್ಕಿಟ್ಟ ಪುಟಗಳುದೇವತಾ ಪ್ರತಿಮೆಗಳು ವಿಕಾಸವಾದುದ್ದು ಹೇಗೆ? ಅದರ ಹಿಂದಿನ ರಾಜಕೀಯವೇನು?

ದೇವತಾ ಪ್ರತಿಮೆಗಳು ವಿಕಾಸವಾದುದ್ದು ಹೇಗೆ? ಅದರ ಹಿಂದಿನ ರಾಜಕೀಯವೇನು?

- Advertisement -
- Advertisement -

ವ್ಯಕ್ತಿಯು ತನ್ನ ಸುಖಸಂತೋಷಗಳಿಗೆ ಸಂಘವನ್ನು ಸಾಧನವನ್ನಾಗಿ ಬಳಸಿಕೊಳ್ಳುವುದು ಸಾಧಾರಣ ನಿಯಮ. ಆದರೆ ಸಂಘ ಒಮ್ಮೆ ಮೈದಳೆದು ನಿಂತಿತೆಂದರೆ ವ್ಯಕ್ತಿಯ ಸ್ವಾತಂತ್ರ ಮೊಟಕಾಗಿಬಿಡುತ್ತದೆ. ವ್ಯಕ್ತಿಗಾಗಿ ಸಂಘವೋ, ಸಂಘಕ್ಕಾಗಿ ವ್ಯಕ್ತಿಯೋ ಹೇಳುವುದು ಕಷ್ಟವಾಗುತ್ತದೆ. ವ್ಯಕ್ತಿಗಿಂತ ಮಿಗಿಲಾದ, ಬೇರೆಯಾದ, ತನ್ನದೇ ಆದ ಇರವನ್ನು ಪಡೆದುಕೊಳ್ಳಲು ಸಂಘ ಹೆಣಗಾಡುತ್ತದೆ; ಹೀಗೆಂದು ಎಸ್ ಕೆ ರಾಮಚಂದ್ರ ರಾವ್ ತಮ್ಮ ಮೂರ್ತಿಶಿಲ್ಪದ ಪುಸ್ತಕದಲ್ಲಿ ವಿಚಾರ ಮಾಡುತ್ತಾರೆ. ಶಿಲ್ಪಗಳ ನೆಲೆ ಹಿನ್ನೆಲೆಗಳನ್ನು ಗುರುತಿಸುವ ಮತ್ತು ಚರ್ಚೆ ಮಾಡುವ ಕಾರಣದಿಂದ ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ ಮತ್ತು ಆಧ್ಯಾತ್ಮಿಕವಾಗಿರುವ ಎಲ್ಲಾ ವಿಷಯಗಳನ್ನೂ ಈ ಪುಸ್ತಕ ಅವಲೋಕಿಸುತ್ತದೆ.

ದೇವಾನುದೇವತೆಗಳ ಮೂರ್ತಿಗಳು ಮೂರ್ತೀಭವಿಸಿದ ಹಿನ್ನೆಲೆಗಳನ್ನು ಗಮನಿಸುತ್ತಾ ದೇವರುಗಳ ಹುಟ್ಟು, ಬೆಳವಣಿಗೆ, ಅವುಗಳ ಸಾಂಸ್ಕೃತಿಕ  ರಾಜಕಾರಣ, ಸಂಘರ್ಷ ಮತ್ತು ಈ ಹೊತ್ತಿಗೆ ಅವುಗಳ ಪ್ರತಿಮೆಗಳು ನಿರ್ದಿಷ್ಟ ರೂಪಕ್ಕೆ ಬಂದು ನಿಂತಿರುವುದರ ಅಧ್ಯಯನ ಈ ಕೃತಿಯ ಮುಖ್ಯ ಉದ್ದೇಶ.

ವ್ಯಕ್ತಿ ಮತ್ತು ಸಮಾಜ: ಈ ಎರಡರ ನಡುವಿನ ಸಂಘರ್ಷಕ್ಕೆ ಕಾರಣ ಮಾತ್ರ ವಿಚಿತ್ರ ಮತ್ತು ವಿಸ್ಮಯ. ಆದರೆ ಈ ಸಂಘದ ಕೈ ಬಲಪಡಿಸುವ ಅಗತ್ಯ ವ್ಯಕ್ತಿಗಿದೆ. ಆದರೆ ಇದು ಅವನನ್ನೇ ಬಂಧಿಸುತ್ತದೆ. ನುಂಗುವುದಕ್ಕೂ ಆಗದ, ಉಗಳುವುದಕ್ಕೂ ಆಗದಂತೆ ತಾನೇ ಸಮಾಜದ ಬಲೆಯಲ್ಲಿ ಬಂಧಿತನಾಗುತ್ತಾನೆ. ಈ ಬಲೆಯ ಹರವಿನಲ್ಲಿ ನಮ್ಮ ಎಲ್ಲಾ ವ್ಯವಹಾರಗಳೂ ನಡೆಯಬೇಕು. ಅದಕ್ಕಾಗಿ ಅವನು ಸಂಕೇತಗಳನ್ನು ಸೃಷ್ಟಿಸಬೇಕು. ಸಂಕೇತಗಳನ್ನು ಸೃಷ್ಟಿ ಮಾಡುವ, ಕಲಿಯುವ, ಕಲಿಸುವ ಮತ್ತು ಅದರಲ್ಲಿ ವ್ಯವಹರಿಸುವ ಕೌಶಲ್ಯ ಮಾನವನಿಗೆ ನಿಸರ್ಗದತ್ತವಾಗಿಯೇ ಬಂದಿದೆ. ಅವನ ಬುದ್ಧಿಶಕ್ತಿ ಮತ್ತು ಭಾವನಾ ಪ್ರೌಢಿಮೆಯು ಈ ಕೌಶಲ್ಯಕ್ಕೆ ಮೂಲ ಸಾಮಗ್ರಿಗಳು. ಭಾಷೆ, ಮದುವೆ, ನಾಣ್ಯ, ವಿದ್ಯಾಭ್ಯಾಸ, ನ್ಯಾಯ, ಧರ್ಮ, ಸರಕಾರ, ವಿಜ್ಞಾನ, ಸಾಹಿತ್ಯ ಎಲ್ಲವೂ ಸಂಕೇತದ ಬಲೆಯ ವಿವರಗಳೇ ಎನ್ನುವ ರಾವ್ ಸಂಪ್ರದಾಯಗಳ ಬಗ್ಗೆಯೂ ವಿಶ್ಲೇಷಿಸುತ್ತಾರೆ.

ಹೊಸ ಉಪಾಯ ಹುಡುಕದ ಸೋಮಾರಿಗೆ ಸಂಪ್ರದಾಯಗಳು ಬೇಕಾಗುತ್ತವೆ. ಸಿದ್ಧವಾದ, ಜನರು ಬಳಸಿ ಉಪಯೋಗಕಂಡ ಉಪಾಯಗಳನ್ನು ಮಾತ್ರ ಅನುಸರಿಸುವ ಈ ಮಂದಿಯು ಸಾರ್ವಜನಿಕ ಅಭಿಪ್ರಾಯಕ್ಕಾಗಿ ಕೆಲಸ ಮಾಡುತ್ತಾರೆ. ಅವು ಒಂದು ರೀತಿ ಸೋಶಿಯಲ್ ಕಂಟ್ರೋಲ್ ಅಥವಾ ಸಾಮಾಜಿಕ ಅಂಕೆಯಾಗಿಯೂ ಕೆಲಸ ಮಾಡುತ್ತವೆ. ಈ ಸಾಮಾಜಿಕ ಅಂಕೆಯಿಂದ ಪ್ರಾರಂಭಿಸುವ ರಾವ್ ಕುಲದೈವ (ಟೊಟಮ್) ಮತ್ತು ವಿಧಿ ನಿಷೇಧ (ಟಾಬು)ಗಳ ಕಡೆಗೆ ಹೊರಳಿ ಬುಡಕಟ್ಟುಗಳು, ಜನಾಂಗಗಳು ತಮ್ಮ ತಮ್ಮ ಸಂಕೇತಗಳನ್ನು ತಮ್ಮ ಸಂಘದ ಶಕ್ತಿಯನ್ನಾಗಿಸಿಕೊಂಡು ವ್ಯಕ್ತಿಗಳನ್ನು ನಿಗ್ರಹಿಸುವ, ಸಮುದಾಯಗಳನ್ನು ರಕ್ಷಿಸುವ ಕೆಲಸಗಳನ್ನು ಮಾಡುವ ಅಗತ್ಯತೆಯನ್ನು ಗುರುತಿಸುತ್ತಾರೆ.

ಸ್ವಾರಸ್ಯಕರವಾದ ಸಂಪ್ರದಾಯಗಳನ್ನು ಗುರುತಿಸುವ ರಾವ್ ವಿಶ್ವದ ತುಂಬಾ ಅಪರೂಪವಾದ ಬುಡಕಟ್ಟುಗಳ ವಿಧಿಗಳನ್ನು ದಾಖಲಿಸುತ್ತಾರೆ. ಬೋರ್ನಿಯೋ ಮತ್ತು ಮೆಲನೀಶಯದ ಬುಡಕಟ್ಟುಗಳಲ್ಲಿ ಹುಟ್ಟಿದ ಮಗುವಿಗೆ ಹೆಸರಿಡಬೇಕಾದರೆ ಮಗುವಿಗೆ ಯಾವ ಹೆಸರಿಡುತ್ತಾರೋ ಆ ಹೆಸರಿನ ವ್ಯಕ್ತಿಯನ್ನು ಕೊಂದು, ತಲೆ ಕಡಿದು, ಅವನ ಬುರುಡೆಯಲ್ಲಿರುವ ಮಿದುಳನ್ನು ಅಡುಗೆ ಮಾಡಿ ತಂದೆ ತಿಂದ ಮೇಲೆಯೇ ಮಗುವಿಗೆ ಹೆಸರಿಡುತ್ತಿದ್ದುದು. ನಂತರ ಬರಿದಾದ ಬುರುಡೆಯನ್ನು ಪವಿತ್ರವೆಂದು ತಮ್ಮ ಮನೆಯಲ್ಲಿ ಜತನ ಮಾಡುತ್ತಿದ್ದರು.
ಹವಾಯ್ ದ್ವೀಪದ ಸಮರದೇವತೆ, ಆಫ್ರಿಕಾಖಂಡದ ಧಾನ್ಯದೇವತೆ, ಈಜಿಪ್ಟ್ ದೇಶದ ಬೇಸ್ ಎಂಬ ಯಕ್ಷ, ಸಿರಿಯಾದ ಎಲ್ ದೇವತೆಗಳನ್ನೆಲ್ಲಾ ಉಲ್ಲೇಖಿಸುವ ರಾವ್ ಭಾರತದ ಪ್ರಚಲಿತ ದೇವರುಗಳ ಪ್ರತಿಮೆಗಳ ಕಡೆಗೆ ಹೊರಳುತ್ತಾರೆ.

ಬರಿಯ ಶ್ರದ್ಧಾಭಕ್ತಿಯ ಸಾಂಪ್ರದಾಯಿಕ ಭಾವುಕತೆಯಲ್ಲಿ ಬಂಧಿತರಾಗಿರುವವರಿಗೆ ಈ ಪುಸ್ತಕದಲ್ಲಿ ಚರ್ಚಿಸಿರುವ ದೇವತೆಗಳ ಪ್ರತಿಮೆಗಳ ವಿಕಾಸವನ್ನು ಅರಿತರೇ ಎಷ್ಟೋ ಭ್ರಮೆಗಳು ಹರಿಯುವ ಸಾಧ್ಯತೆ ಇದೆ. ಗಣಪತಿಯ ಹುಟ್ಟು ಅವನ ಆದಿ ಪೂಜಿತನೆಂಬ ಕಲ್ಪನೆಯನ್ನು ಒಡೆದು ಹಾಕಿದರೆ, ಶಿವನ ಸ್ವಾರಸ್ಯ ಅರಣ್ಯಕರ ಅವಲೋಕನವನ್ನು ಮಾಡಲಾಗಿದೆ. ಇನ್ನು ವಿಷ್ಣುವಿನ ವಿಶಿಷ್ಟ ಭಾಗವತಪಂಥದ ಹಂತಗಳನ್ನು ವಿವೇಚಿಸಲಾಗಿದೆ. ಗ್ರಾಮದೇವತೆಗಳು ಹೇಗೆ ಹುಟ್ಟಿದರು, ಅವರು ಸರ್ವಶಕ್ತಿಗಳೆಂತು ಆದರು ಎಂಬುದು ಕೂಡಾ ಇವರ ಅಧ್ಯಯನದಿಂದ ತಪ್ಪಿಸಿಕೊಳ್ಳುವುದಿಲ್ಲ. ಸುಬ್ರಹ್ಮಣ್ಯ ಅಥವಾ ಸ್ಕಂದ, ಶಾಸ್ತ ಅಥವಾ ಅಯ್ಯಪ್ಪ, ಮಲ್ಲಾರಿ – ಖಂಡೋಬರAತಹ ಪಾರ್ಶ್ವ ದೇವತೆಗಳು ಸ್ವಯಂಪ್ರಧಾನ ದೇವತೆಗಳಾಗುವ ಬಗೆ, ಕಳಿಯಾಟ್ಟದ ತೆಯ್ಯಕೋಲಗಳು, ತುಳುನಾಡಿನ ದೈವಗಳು, ಕೃಷ್ಣನ ಕಲ್ಪನೆ; ಇವುಗಳ ಚಾರಿತ್ರಿಕ ಅಧ್ಯಯನವೂ ಇಲ್ಲಿದೆ. ವಿವಿಧ ಕಾಲಘಟ್ಟಗಳಲ್ಲಿ ಆದಂತಹ ಸಾಂಸ್ಕೃತಿಕ ಪಲ್ಲಟಗಳಿಗೆ ಅಷ್ಟು ಕಾರಣಗಳನ್ನು ರಾವ್ ಹೇಳದಿದ್ದರೂ, ಪ್ರತಿಮೆಗಳು ತಮ್ಮ ರೂಪಗಳನ್ನು ಬದಲಾಯಿಸಿಕೊಳ್ಳುತ್ತಾ ಬಂದ ಬಗೆಗಳನ್ನು ವಿವರಿಸುತ್ತಾ ಹೋಗುತ್ತಾರೆ. ಇದು ಬಹಳ ಮಹತ್ವದ್ದಾಗಿದೆ.

ಈ ಕಾಲಕ್ಕೆ ಇಂತಹ ವಿಷಯಗಳು ಸಾಮಾನ್ಯ ತಿಳಿವಳಿಕೆಗಳಾಗಿದ್ದು ಯಾವುದೋ ಅಧ್ಯಯನ ಸಂಪನ್ಮೂಲವಾಗುವಂತಹ ಹೊತ್ತಿಗೆಯಲ್ಲಿ ಮಾತ್ರವೇ ಇರಬೇಕಾದ ವಿಷಯಗಳಾಗಬಾರದಿತ್ತು. ಏಕೆಂದರೆ, ಕಾಲಪ್ರವಾಹದಲ್ಲಿ ಹೊಸಹೊಸ ಸವಾಲುಗಳು, ಸಮಸ್ಯೆಗಳು ಮತ್ತು ಸಂಘರ್ಷಗಳನ್ನು ಎದುರಿಸುತ್ತಿರುತ್ತೇವೆ. ಅವುಗಳನ್ನು ಎದುರಿಸುವ ಕೌಶಲ್ಯ ಮತ್ತು ಶಕ್ತಿ ಸಾಂಪ್ರದಾಯಿಕ ಮನಸ್ಥಿತಿಗಳಿಗೆ ಸಾಧ್ಯವಾಗದೇ, ತಾವು ಗೊಂದಲಕ್ಕೀಡಾಗುವುದು ಮಾತ್ರವಲ್ಲದೇ ತಾವು ಸದಸ್ಯರಾಗಿರುವ ಸಾಮಾಜಿಕ ಸಂಘದಲ್ಲಿಯೂ ಕೂಡ ಗೊಂದಲವನ್ನುಂಟುಮಾಡುತ್ತಾರೆ. ಇವು ಬಹಳ ಆತಂಕದ ಸಂಗತಿಗಳು. ವೈಜ್ಞಾನಿಕ ಆವಿಷ್ಕಾರಗಳು ಮತ್ತು ಸಂಶೋಧನೆಗಳು ಮುಂದುವರೆದಂತೆ ಹಳೆಯ ಪರಿಕರಗಳನ್ನು ಹಿಂದಕ್ಕೆ, ವಸ್ತುಸಂಗ್ರಹಾಲಯದ ದಾಖಲೆಗೆ ಸರಿಸಿ, ಸಾಂಸ್ಕೃತಿಕ ಮತ್ತು ಧಾರ್ಮಿಕ ಕ್ಷೇತ್ರಗಳಲ್ಲಿ ಹೊಸ ಸಂಶೋಧನೆಗಳನ್ನು ಬಳಸುವಂತೆ ಸಂಶೋಧಕರು ಮತ್ತು ವಿಚಾರವಂತರಿಗೆ ಸಾಧ್ಯವಾಗದಿರುವುದೇಕೆ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆ ಏನಲ್ಲ.

ದೇಶದ ಸಂಸ್ಕೃತಿಯನ್ನು ಧರ್ಮ ಮತ್ತು ಕಲೆಗಳ ದೃಷ್ಟಿಯಿಂದ ಅಧ್ಯಯನ ಮಾಡುವ ಕಾರ್ಯಫಲವು ಜನಸಾಮಾನ್ಯರಿಗೆ ಮುಟ್ಟಿದ್ದರೆ ಸಮಾಜದ ಮನೋಧರ್ಮವು ಎಂದಿಗೋ ಮೌಢ್ಯದಿಂದ ಬಿಡುಗಡೆಯಾಗಿರುತ್ತಿತ್ತು.

ಸಾಂಪ್ರದಾಯಿಕ ಧೋರಣೆಯ ಸೋಮಾರಿಗಳು ಈ ಮೂರ್ತಿಶಿಲ್ಪದ ಕೃತಿಯನ್ನು ಒಮ್ಮೆ ಅಧ್ಯಯನ ಮಾಡಬೇಕು. ಧರ್ಮ, ದರ್ಶನ, ಮನೋವಿಜ್ಞಾನ, ಸಮಾಜಶಾಸ್ತ್ರ ಮಾನವಶಾಸ್ತ್ರ, ಪ್ರಾಕ್ತನ-ಪ್ರಾಚ್ಯ ಸಂಶೋಧನೆಗಳ ವಿವರಗಳೆಲ್ಲವೂ ಇದರಲ್ಲಿದೆ.
ಈ ಪುಸ್ತಕದ ಅಧ್ಯಯನ ವ್ಯಾಪ್ತಿ ದೊಡ್ಡದು. ಇದರಲ್ಲಿ ಅಡಕವಾಗಿರುವ ಸಂಗತಿಗಳು ಮೂಲಭೂತವಾದವು.

ಸಂಶೋಧನೆ, ವಿಮರ್ಶೆ, ಪರಿಶೀಲನೆ- ಇವು ಕೂಡಿಬಂದಿರುವ ಕೃತಿ ಮೂರ್ತಿಶಿಲ್ಪ ಎಂದು ಎಚ್ ನರಸಿಂಹಯ್ಯ ತಮ್ಮ ಮುನ್ನುಡಿಯಲ್ಲಿ ಉಲ್ಲೇಖಿಸಿರುವುದು ವಿಶೇಷ.

  • ಯೋಗೇಶ್ ಮಾಸ್ಟರ್, ರಂಗಭೂಮಿ ಕಲಾವಿದರು, ಬರಹಗಾರರು.

ಇದನ್ನೂ ಓದಿ: ಶಾಸ್ತ್ರೀಯ – 2: ವೀರ ಗತಕಾಲದ ನೋವಿನ ಕಥನ ಸಾರುವ ವೀರಗಲ್ಲುಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...