Homeಮುಖಪುಟಭಿಕ್ಷೆ ಬೇಡಿ, ಸಾಲ ತನ್ನಿ ಇಲ್ಲವೇ ಕದ್ದುಕೊಂಡು ಬನ್ನಿ: ಆಮ್ಲಜನಕ ವಿಷಯವಾಗಿ ಕೇಂದ್ರದ ವಿರುದ್ಧ ಕಿಡಿಕಾರಿದ...

ಭಿಕ್ಷೆ ಬೇಡಿ, ಸಾಲ ತನ್ನಿ ಇಲ್ಲವೇ ಕದ್ದುಕೊಂಡು ಬನ್ನಿ: ಆಮ್ಲಜನಕ ವಿಷಯವಾಗಿ ಕೇಂದ್ರದ ವಿರುದ್ಧ ಕಿಡಿಕಾರಿದ ಹೈಕೋರ್ಟ್

- Advertisement -
- Advertisement -

ದೆಹಲಿಯ ಹಲವು ಆಸ್ಪತ್ರೆಗಳು ಆಮ್ಲಜನಕದ ಕೊರತೆಯಿಂದಾಗಿ ದೆಹಲಿ ಹೈಕೋರ್ಟ್ ಮೊರೆ ಹೋಗಿವೆ. ಕೆಲವೇ ಗಂಟೆಗಳಲ್ಲಿ ಇರುವ ಆಮ್ಲಜನಕ ಖಾಲಿಯಾಗಲಿದ್ದು, ರೋಗಿಗಳ ಗತಿಯೇನು ಎಂದು ತೀವ್ರ ಆತಂಕ ವ್ಯಕ್ತಪಡಿಸಿವೆ. ‘ಆಮ್ಲಜನಕವಿಲ್ಲದ ಕಾರಣ ಜನರು ಸಾಯುವಂತಿಲ್ಲ” ಎಂದು ಒತ್ತಿ ಹೇಳಿರುವ ದೆಹಲಿ ಹೈಕೋರ್ಟ್ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿ, ಸರ್ಕಾರಕ್ಕೆ ಮಾನವ ಜೀವನದ ಬಗ್ಗೆ ಕಾಳಜಿಯಿಲ್ಲ ಎಂದು ಕಿಡಿಕಾರಿದೆ.

‘ಭಿಕ್ಷೆಯನ್ನಾದರೂ ಬೇಡಿ, ಸಾಲ ಆದರೂ ತನ್ನಿ ಇಲ್ಲವೇ ಕದ್ದುಕೊಂಡಾದರೂ ಬನ್ನಿ ಎಂದು ಆಮ್ಲಜನಕ ಪೂರೈಕೆಯ ಕುರಿತು ಕೇಂದ್ರವನ್ನು ಕೋರ್ಟ್ ಎಚ್ಚರಿಸಿದೆ. ದೆಹಲಿಯ ಆಮ್ಲಜನಕ ಬಿಕ್ಕಟ್ಟನ್ನು ನಿಭಾಯಿಸಿದ ಬಗ್ಗೆ ದೆಹಲಿ ಹೈಕೋರ್ಟ್ ಬುಧವಾರ ಕೇಂದ್ರವನ್ನು ಕಟುಪದಗಳಲ್ಲಿ ಟೀಕಿಸಿದೆ.

ದೆಹಲಿ ಹೈಕೋರ್ಟ್‌ನ ತೀಕ್ಷ್ಣವಾದ ಪ್ರತಿಕ್ರಿಯೆಗಳು ಇವು:

1. ನಾಗರಿಕನು ಸರ್ಕಾರ/ಪ್ರಭುತ್ವದ ಮೇಲೆ ಮಾತ್ರ ಆಶ್ರಯಿತನಾಗಿರುತ್ತಾನೆ.. ಅದು ಸರ್ಕಾರದ ಜವಾಬ್ದಾರಿ. ಆಮ್ಲಜನಕಕ್ಕಾಗಿ ಭಿಕ್ಷೆಯನ್ನಾದರೂ ಬೇಡಿ, ಸಾಲ ಆದರೂ ತನ್ನಿ ಇಲ್ಲವೇ ಕದ್ದುಕೊಂಡಾದರೂ ಬನ್ನಿ ಅದು ನಿಮ್ಮ (ಕೇಂದ್ರ ಆರೋಗ್ಯ ಇಲಾಖೆ) ಕೆಲಸ.

2. ನಿತ್ಯದ ಕಠಿಣ ವಾಸ್ತವ ಪರಿಸ್ಥಿತಿಯನ್ನು ಸರ್ಕಾರ ಹೇಗೆ ಮರೆತುಬಿಡುತ್ತದೆ? ಆಮ್ಲಜನಕವಿಲ್ಲದ ಕಾರಣ ಜನರು ಸಾಯುವಂತಿಲ್ಲ. ನಿಮ್ಮ ಸ್ವಂತ ಸುಖಕ್ಕಾಗಿ ಸಮಯ ತೆಗೆದುಕೊಳ್ಳುತ್ತೀರಿ ಮತ್ತು ಜನರು ಸಾಯುತ್ತಾರೆ.

3. ಜನರು ಸಾಯುವಾಗ ನೀವು ಕೈಗಾರಿಕೆಗಳ ಬಗ್ಗೆ ಕಾಳಜಿ ವಹಿಸುತ್ತೀರಿ. ಇದು ನೈಸರ್ಗಿಕ ತುರ್ತು. ಆದರೆ ಮಾನವ ಜೀವನವು ಸರ್ಕಾರಕ್ಕೆ ಅಪ್ರಸ್ತುತವಾಗುತ್ತದೆ.

4. ಇಂದು ಆಸ್ಪತ್ರೆಗಳು ಒಣಗಿವೆ. (ಆಮ್ಲಜನಕವಿಲ್ಲದೇ ಉಸಿರುಗಟ್ಟಿವೆ) ಇದು ನಿಜವಾಗಿಯೂ ಹಾಸ್ಯಾಸ್ಪದವಾಗಿದೆ. ನಮ್ಮ ಕಾಳಜಿ ಕೇವಲ ದೆಹಲಿಯಲ್ಲ. ಭಾರತದಾದ್ಯಂತ ಆಮ್ಲಜನಕ ಪೂರೈಕೆಗೆ ಸಂಬಂಧಿಸಿದಂತೆ ಕೇಂದ್ರವು ಏನು ಮಾಡುತ್ತಿದೆ ಎಂದು ತಿಳಿಯಲು ನಾವು ಬಯಸುತ್ತೇವೆ.

5. ಆಮ್ಲಜನಕದ ಅವಶ್ಯಕತೆ ಹಲವಾರು ಪಟ್ಟು ಹೆಚ್ಚಾಗಿದೆ. ಸಾಕಷ್ಟು ಪೂರೈಕೆಯನ್ನು ಖಚಿತಪಡಿಸಿಕೊಳ್ಳುವುದು ಕೇಂದ್ರದ ಜವಾಬ್ದಾರಿಯಾಗಿದೆ. ಜೀವನ ವಿಧಾನದ ಮೂಲಭೂತ ಹಕ್ಕನ್ನು ರಕ್ಷಿಸಲು ಯಾವುದೇ ವಿಧಾನದಿಂದಲಾದರೂ ನಾವು ಸರ್ಕಾರವನ್ನು ನಿರ್ದೇಶಿಸುತ್ತೇವೆ.

6. ನಿನ್ನೆ (ಮಂಗಳವಾರ) ನಾವು ನಿಮಗೆ (ಕೇಂದ್ರ ಆರೋಗ್ಯ ಸಚಿವಾಲಯ) ಪೆಟ್ರೋಲಿಯಂ ಮತ್ತು ಉಕ್ಕಿನ ಕೈಗಾರಿಕೆಗಳಿಗೆ ಆಮ್ಲಜನಕ ಪೂರೈಕೆ ನಿಲ್ಲಿಸುವಂತೆ ಆದೇಶಿಸಿದ್ದೇವೆ. ನೀವು ಏನು ಮಾಡಿದ್ದೀರಿ? ಫಲಿತಾಂಶ ಏನು …? ನಾವು ಫೈಲ್‌ಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. (ಇಲಾಖೆಯು ಈ ವಿಷಯದಲ್ಲಿ “ಫೈಲ್‌ಗಳು ಮೂವ್ ಆಗುತ್ತಿವೆ” ಎಂದು ಹೇಳಿದಾಗ).

7. ಟಾಟಾ ಕಂಪನಿ ತಮ್ಮ ಉಕ್ಕಿನ ಸ್ಥಾವರಗಳಿಂದ ಉತ್ಪತ್ತಿಯಾಗುವ ಆಮ್ಲಜನಕವನ್ನು ಬೇರೆಡೆಗೆ ತಿರುಗಿಸಲು ಸಾಧ್ಯವಾದರೆ ಇತರರಿಗೆ ಏಕೆ ಸಾಧ್ಯವಿಲ್ಲ? ಮಾನವೀಯತೆಯ ಪ್ರಜ್ಞೆ ಇಲ್ಲವೇ ಅಥವಾ ಏನು? ಅವುಗಳ ಬಳಕೆಗಾಗಿ ಆಮ್ಲಜನಕವನ್ನು ಉತ್ಪಾದಿಸುವ ಉಕ್ಕು ಮತ್ತು ಪೆಟ್ರೋಲಿಯಂ ಕೈಗಾರಿಕೆಗಳಿಂದ ಸರ್ಕಾರವು ಆಮ್ಲಜನಕವನ್ನು ಆರೋಗ್ಯ ಕ್ಷೇತ್ರಕ್ಕೆ ತಿರುಗಿಸಬಹುದು.

8. ಕೈಗಾರಿಕೆಗಳು ಸಹಾಯ ಮಾಡಲು ಸಿದ್ಧವಿವೆ. ಇದು ರಾಷ್ಟ್ರೀಯ ತುರ್ತು. ಆಮ್ಲಜನಕವನ್ನು ತಿರುಗಿಸಲು ನೀವು ಆದೇಶವನ್ನು ರವಾನಿಸಿದರೆ, ಯಾವುದೇ ಕೈಗಾರಿಕೆಗಳು ಇಲ್ಲ ಎಂದು ಹೇಳುವುದಿಲ್ಲ. ಮತ್ತು ನೀವು ನಿಮ್ಮದೇ ಆದ ಸರ್ಕಾರಿ-ಪೆಟ್ರೋಲಿಯಂ ಕಂಪನಿಗಳನ್ನು ಹೊಂದಿದ್ದೀರಿ. ನಾವು ನಿನ್ನೆ ಹಲವಾರು ಆದೇಶಗಳನ್ನು ನೀಡಿದ್ದೇವೆ. ಇಡೀ ದಿನ ನೀವು ಏನು ಮಾಡಿದ್ದೀರಿ?

9. ಸರ್ಕಾರ ವಾಸ್ತವಕ್ಕೆ ಏಕೆ ಎಚ್ಚರಗೊಳ್ಳುತ್ತಿಲ್ಲ. ನಮಗೆ ಆಘಾತವಾಗಿದೆ. ಏನಾಗುತ್ತಿದೆ? ಆಸ್ಪತ್ರೆಗಳಿಗೆ ಈ ಹಂತದಲ್ಲಿ ಆಮ್ಲಜನಕದ ನಿಲುಗಡೆ … ನರಕದರ್ಶನವಾಗುತ್ತಿದೆ…

10. ದಯವಿಟ್ಟು ಪರಿಸ್ಥಿತಿಯ ಗಂಭೀರತೆಯನ್ನು ಅರಿತುಕೊಳ್ಳಿ. ಸಾವಿರಾರು ಜೀವಗಳು ಅಪಾಯದಲ್ಲಿವೆ. ಸಾವಿರಾರು ಜನರು ಸಾಯುವುದನ್ನು ನೀವು ನೋಡಲು ಬಯಸುವಿರಾ?


ಇದನ್ನೂ ಓದಿ: ಆಕ್ಸಿಜನ್‌ಗಾಗಿ ರೋಗಿಗಳು ಕಾಯಬೇಕೆಂದು ಹೇಳುತ್ತೀರಾ?: ಕೇಂದ್ರದ ವಿರುದ್ಧ ಕಿಡಿಕಾರಿದ ಹೈಕೋರ್ಟ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ ಐತಿಹಾಸಿಕ...