Homeಮುಖಪುಟಮುನ್ಸೂಚನೆ ಇಲ್ಲದ ವಿದ್ಯುತ್ ಕಡಿತ: ದೆಹಲಿಯ ಜೈ ಹಿಂದ್ ಕ್ಯಾಂಪ್ ನಿವಾಸಿಗಳಿಗೆ ಈಗ ತೆರವು ಭೀತಿ

ಮುನ್ಸೂಚನೆ ಇಲ್ಲದ ವಿದ್ಯುತ್ ಕಡಿತ: ದೆಹಲಿಯ ಜೈ ಹಿಂದ್ ಕ್ಯಾಂಪ್ ನಿವಾಸಿಗಳಿಗೆ ಈಗ ತೆರವು ಭೀತಿ

- Advertisement -
- Advertisement -

ದೆಹಲಿಯ ವಸಂತ್ ಕುಂಜ್‌ನಲ್ಲಿರುವ ಜೈ ಹಿಂದ್ ಕ್ಯಾಂಪ್ ನಿವಾಸಿಗಳು ಹತಾಶೆಯ ಕಂದಕದಲ್ಲಿ ಸಿಲುಕಿದ್ದಾರೆ. ಜೂನ್ 8ರಂದು ಅಧಿಕಾರಿಗಳು ವಿದ್ಯುತ್ ಕಡಿತಗೊಳಿಸಿದ ನಂತರ, ರಾಷ್ಟ್ರ ರಾಜಧಾನಿಯ ಸುಡುವ ಬಿಸಿಲು ಮತ್ತು ಆರ್ದ್ರತೆಯು ಅವರ ಬದುಕನ್ನು ದುಸ್ತರಗೊಳಿಸಿದೆ. 1,400ಕ್ಕೂ ಹೆಚ್ಚು ಕುಟುಂಬಗಳು ವಾಸಿಸುವ ಈ ಕ್ಯಾಂಪ್‌ನ ಮನೆಗಳನ್ನು ಮೇ 30ರ ನ್ಯಾಯಾಲಯದ ಆದೇಶದ ಮೇರೆಗೆ ನೆಲಸಮಗೊಳಿಸಲು ನಿರ್ಧರಿಸಲಾಗಿದೆ ಎಂದು ದಿ ವೈರ್, ಇಂಡಿಯಾ ಟುಡೆ ಪತ್ರಿಕೆಗಳು ವರದಿ ಮಾಡಿವೆ.

ದಶಕಗಳ ಹಿಂದೆ ಪಶ್ಚಿಮ ಬಂಗಾಳ ಮತ್ತು ಅಸ್ಸಾಂನಿಂದ ವಲಸೆ ಬಂದಿರುವ ಬಹುಪಾಲು ನಿವಾಸಿಗಳು, ಇದು ತಮ್ಮನ್ನು ಗುರಿಯಾಗಿಸಿಕೊಂಡಿರುವ ನಡೆಯೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. 40 ವರ್ಷಗಳಷ್ಟು ಹಳೆಯದಾದ ಈ ಕ್ಯಾಂಪ್ ಅನ್ನು ರಾಜ್ಯ ಸರ್ಕಾರ “ಅಕ್ರಮ” ಎಂದು ಘೋಷಿಸಿದೆ. ಪೊಲೀಸರು “ದಾಖಲೆಗಳಿಲ್ಲದ ಬಾಂಗ್ಲಾದೇಶಿಯರು” ಇಲ್ಲಿ ಅಡಗಿಕೊಂಡಿದ್ದಾರೆಂದು ಆರೋಪಿಸಿದ್ದಾರೆ, ಆದರೆ ಸಮುದಾಯವು ಈ ಆರೋಪಗಳನ್ನು “ದುರುದ್ದೇಶಪೂರಿತ” ಎಂದು ಸಂಪೂರ್ಣವಾಗಿ ತಳ್ಳಿಹಾಕಿದೆ.

“ನಾವು ಭಾರತೀಯರು, ಆದರೆ ಕೆಲವರಲ್ಲಿ ದಾಖಲೆಗಳಿಲ್ಲದಿರಬಹುದು. ಆದರೂ ಯಾವುದೇ ಸೂಚನೆ ಇಲ್ಲದೆ ನಮ್ಮ ವಿದ್ಯುತ್ ಸಂಪರ್ಕ ಕಡಿತಗೊಳಿಸಿ, ಈ ಧಗೆಯಲ್ಲಿ ನಮ್ಮನ್ನು ನರಳುವಂತೆ ಮಾಡಲಾಗಿದೆ” ಎಂದು ಆಯುದ್ದೀನ್ ಹುಸೇನ್ ಹೇಳಿದ್ದಾರೆ. ಚಾಲಕರಾಗಿ ಕರ್ತವ್ಯದಲ್ಲಿದ್ದಾಗ ವಿದ್ಯುತ್ ಕಡಿತದ ಸುದ್ದಿ ಕೇಳಿ ಆಘಾತಗೊಂಡ ಹುಸೇನ್, “ವಿದ್ಯುತ್ ಮಂಡಳಿ, ದೆಹಲಿ ಪೊಲೀಸ್ ಮತ್ತು ಸಿಆರ್‌ಪಿಎಫ್ ಜೊತೆ ಬಂದು ತಂತಿಗಳನ್ನು ಕಟ್ ಮಾಡಿದರು. ನ್ಯಾಯಾಲಯದ ಆದೇಶ ಎಂದರೇ ಹೊರತು, ಯಾವುದೇ ಮುನ್ಸೂಚನೆ ಇರಲಿಲ್ಲ. ಅವರು ನಮ್ಮ ಬದುಕಿನ ಅಸರೆಯನ್ನೇ ಕಿತ್ತುಕೊಂಡರು” ಎಂದು ಅಳಲು ತೋಡಿಕೊಂಡರು.

ಯೋಜಿತ ನೆಲಸಮದ ಬಗ್ಗೆ ತಮಗೆ ಯಾವುದೇ ಮಾಹಿತಿ ಇಲ್ಲ ಎಂದು ಆಯುದ್ದೀನ್ ಹುಸೇನ್ ಸ್ಪಷ್ಟಪಡಿಸುತ್ತಾರೆ. “ನಮ್ಮ ಮನೆಗಳು ಕೆಡವಲ್ಪಟ್ಟರೆ ನಾವೇನು ಮಾಡಬಹುದು?” ಎಂದು ಪ್ರಶ್ನಿಸುವ ಅವರ ಮಾತಿನಲ್ಲಿ ಆಳವಾದ ಹತಾಶೆ ಇದೆ. “ಈಗಿನ ಮುಖ್ಯ ಚಿಂತೆ ವಿದ್ಯುತ್. ಚಿಕ್ಕ ಮಕ್ಕಳು, ಗರ್ಭಿಣಿಯರು, ವೃದ್ಧರಿರುವಾಗ ಈ ಬಿಸಿಲಿನಲ್ಲಿ ಒಂದು ಕ್ಷಣವೂ ಇರುವುದು ಕಷ್ಟ. ವಿದ್ಯುತ್ ಏಕೆ ಕಡಿತಗೊಳಿಸಿದರು ಮತ್ತು ಅದನ್ನು ಪುನಃಸ್ಥಾಪಿಸಲಿ ಎಂದು ಮಾತ್ರ ನಾವು ಬೇಡುತ್ತಿದ್ದೇವೆ” ಎಂದು ಅವರು ಕಳವಳ ವ್ಯಕ್ತಪಡಿಸುತ್ತಾರೆ. “ನಾನು ಈ ಬೀದಿಗಳಲ್ಲೇ ಬೆಳೆದಿದ್ದೇನೆ, 30 ವರ್ಷಗಳಿಂದ ಇದೇ ನೆಲದಲ್ಲಿ ಬೇರೂರಿದ್ದೇನೆ. ಜೈ ಹಿಂದ್ ಕ್ಯಾಂಪ್ ಕೇವಲ ಆಶ್ರಯತಾಣವಲ್ಲ; ಅದು ನನ್ನ ಬದುಕಿನ ಸಮಸ್ತ ಅಸ್ತಿತ್ವ” ಎಂದು ಹುಸೇನ್ ಭಾವುಕರಾಗಿ ನುಡಿಯುತ್ತಾರೆ.

ಸುಡುವ ಬೇಸಿಗೆಯ ಬಿಸಿಲಿನಲ್ಲಿ, ನಿವಾಸಿಗಳು ಅಸಹಾಯಕವಾಗಿ ತಮ್ಮ ಮನೆಗಳ ಹೊರಗೆ ಕೈಪಂಖಗಳನ್ನು ಬೀಸುತ್ತಾ ಕುಳಿತಿದ್ದಾರೆ. ಕಳೆದ 22 ವರ್ಷಗಳಿಂದ ಲಖನೌದಿಂದ ವಲಸೆ ಬಂದು ಇದೇ ಕ್ಯಾಂಪ್‌ನಲ್ಲಿ ವಾಸಿಸುತ್ತಿರುವ ಲಲಿತ್ ಕುಮಾರ್ ತಮ್ಮ ಅಳಲನ್ನು ತೋಡಿಕೊಂಡರು: “ನಮ್ಮ ವಿದ್ಯುತ್ ಸಂಪರ್ಕವನ್ನು ನಿನ್ನೆ ಬೆಳಿಗ್ಗೆ 10 ಗಂಟೆಗೆ ಕಡಿತಗೊಳಿಸಿದರು. ಒಂದು ಸಂಪೂರ್ಣ ವಿಡಿಯೋ ತಂಡವೇ ಅಧಿಕಾರಿಗಳೊಂದಿಗೆ ಬಂದು ನಮ್ಮನ್ನು ಚಿತ್ರೀಕರಿಸುತ್ತಿತ್ತು. ಏನಾಗುತ್ತಿದೆ ಎಂದು ನಮಗೆ ಕನಿಷ್ಠ ಸುಳಿವೂ ಇಲ್ಲ. ನಾನು ಪ್ರತಿ ತಿಂಗಳು ಸರಿಯಾಗಿ ವಿದ್ಯುತ್ ಬಿಲ್‌ಗಳನ್ನು ಪಾವತಿಸುತ್ತಿದ್ದೇನೆ, ಹಾಗಿದ್ದರೂ ಅವರು ಏಕೆ ಹೀಗೆ ಮಾಡುತ್ತಿದ್ದಾರೆ?” ಅವರ ಧ್ವನಿಯಲ್ಲಿ ಆತಂಕ ಸ್ಪಷ್ಟವಾಗಿತ್ತು. “24 ಗಂಟೆಗಳಿಗಿಂತ ಹೆಚ್ಚಾಗಿದೆ. ಫ್ಯಾನ್‌ಗಳಿಲ್ಲ, ಕೂಲರ್‌ಗಳಿಲ್ಲ, ಏನೂ ಇಲ್ಲ. ಈ ಬಿಸಿಲಿನಲ್ಲಿ ಒಂದು ಗಂಟೆ ಕೂಡ ಇರಲು ಆಗುತ್ತಿಲ್ಲ. ನಾವಿಲ್ಲಿ 2,000 ಜನರಿದ್ದೇವೆ, ಈಗ ಎಲ್ಲಿಗೆ ಹೋಗಬೇಕು?” ಎಂದು ಅವರು ಹತಾಶೆಯಿಂದ ಪ್ರಶ್ನಿಸಿದರು.

ಮುಸ್ಲಿಂ ನಿವಾಸಿಗಳಿಗೆ ಈ ಪರಿಸ್ಥಿತಿಯು ಆಳವಾದ ಅವಮಾನವನ್ನುಂಟು ಮಾಡಿದೆ. “ನಾವು ಬಂಗಾಳದಿಂದ ಬಂದವರು ಎಂಬ ಒಂದೇ ಕಾರಣಕ್ಕೆ ನಮ್ಮನ್ನು ಬಾಂಗ್ಲಾದೇಶಿಯರು ಎಂದು ಹಣೆಪಟ್ಟಿ ಕಟ್ಟುತ್ತಾರೆ” ಎಂದು ಹುಸೇನ್ ತೀವ್ರ ನೋವಿನಿಂದ ಹೇಳುತ್ತಾರೆ. “ದೆಹಲಿ ಪೊಲೀಸರೇ ನಮ್ಮ ದಾಖಲೆಗಳನ್ನು ಪರಿಶೀಲಿಸಲು ಬಂಗಾಳದಲ್ಲಿರುವ ನಮ್ಮ ಹಳ್ಳಿಗಳಿಗೆ ಭೇಟಿ ನೀಡಿದ್ದರು. ಅಲ್ಲಿನ ಪಂಚಾಯತ್‌ಗಳು ಮತ್ತು ಸಂಸದರು ಸಹ ನಮ್ಮ ಭಾರತೀಯ ಪೌರತ್ವವನ್ನು ದೃಢಪಡಿಸಿದ್ದಾರೆ. ನಾವೆಲ್ಲರೂ ಭಾರತೀಯರು, ಆದರೂ ನಮ್ಮನ್ನು ಪದೇ ಪದೇ ಅದನ್ನು ಸಾಬೀತುಪಡಿಸಲು ಒತ್ತಾಯಿಸಲಾಗುತ್ತಿದೆ” ಎಂದು ಅವರ ಧ್ವನಿಯಲ್ಲಿ ಆಕ್ರೋಶ ಮನೆಮಾಡಿದೆ.

ವಿದ್ಯುತ್ ಕಡಿತವು ಗರ್ಭಿಣಿಯರು, ಮಕ್ಕಳು, ಅಸ್ವಸ್ಥರು ಮತ್ತು ವೃದ್ಧರಂತಹ ದುರ್ಬಲ ವರ್ಗದವರನ್ನು ಹೆಚ್ಚು ಬಾಧಿಸಿದೆ. ಅಸ್ವಸ್ಥ ಪೋಷಕರು, ಕುರುಡು ಸಹೋದರಿ ಮತ್ತು ಚಿಕ್ಕ ಮಕ್ಕಳನ್ನು ನೋಡಿಕೊಳ್ಳುವ ವಿಧವೆ ಫಾತಿಮಾ ಅವರ ಆಕ್ರೋಶ ಸ್ಪಷ್ಟವಾಗಿದೆ: “ನಾವು ಮಾನವರಲ್ಲವೇ? ದಶಕಗಳಿಂದ ಇಲ್ಲಿ ವಾಸಿಸಿದ್ದೇವೆ, ಆದರೆ ಈಗ ನಮ್ಮನ್ನು ‘ಅಕ್ರಮ’ ಎನ್ನುತ್ತಾರೆ! ಚುನಾವಣೆ ಬಂದಾಗ ಇದೇ ರಾಜಕಾರಣಿಗಳು ನಮ್ಮ ಮತಕ್ಕಾಗಿ ಭಿಕ್ಷೆ ಬೇಡಲು ಮೊದಲಿಗರಾಗಿದ್ದರು.” ತಮ್ಮ ಹೋರಾಟವನ್ನು ವಿವರಿಸುತ್ತಾ, “ನಾವು ಗೌರವಯುತ ಜೀವನಕ್ಕಾಗಿ ಇಲ್ಲಿಗೆ ಬಂದಿದ್ದೇವೆ, ಆದರೆ ಅವರು ಅದನ್ನೂ ನಮಗೆ ಮಾಡಲು ಬಿಡುತ್ತಿಲ್ಲ. ಎಲ್ಲವನ್ನೂ ಕೋಮುವಾದಿ ಮಾಡುತ್ತಾರೆ. ಹಿಂದೂಗಳು, ಮುಸ್ಲಿಮರು, ಸಿಖ್ಖರು – ನಾವೆಲ್ಲರೂ ಇಲ್ಲಿ ಒಟ್ಟಾಗಿ ವಾಸಿಸುತ್ತೇವೆ” ಎಂದು ಫಾತಿಮಾ ತಮ್ಮ ನೋವು ಮತ್ತು ಅಸಮಾಧಾನವನ್ನು ವ್ಯಕ್ತಪಡಿಸಿದರು.

ಅಡುಗೆಯವರಾದ ರಶೀದಾ ಕಣ್ಣೀರಿಡುತ್ತಾ ತಮ್ಮ ಹೃದಯದ ನೋವನ್ನು ಹಂಚಿಕೊಂಡರು: “ಉತ್ತಮ ಬದುಕಿನ ಆಸೆ ಹೊತ್ತು ಇಲ್ಲಿಗೆ ಬಂದೆವು. ಮೂರು ದಶಕಗಳಿಂದ ಇದೇ ನಮ್ಮ ಮನೆ, ನಮ್ಮ ನೆಲೆ. ಈಗ ನಾವು ಎಲ್ಲಿಗೆ ಹೋಗುವುದು? ಇಲ್ಲಿಂದ ಕದಲುವುದು ಎಂದರೆ ನಮ್ಮ ಬೇರುಗಳನ್ನೇ ಕಿತ್ತುಹಾಕಿದಂತೆ. ನಾವಿಲ್ಲಿಯೇ ಉಳಿಯುತ್ತೇವೆ.” ವಿದ್ಯುತ್ ಸಂಪರ್ಕ ಕಡಿತಗೊಂಡಿರುವುದರಿಂದ, ರಾತ್ರಿಯಿಡೀ ನಿವಾಸಿಗಳು ಬೀದಿಗಳಲ್ಲಿ ಮಲಗಲು ಒತ್ತಾಯಿಸಲ್ಪಟ್ಟಿದ್ದಾರೆ. ಫೋನ್‌ಗಳಿಗೆ ಚಾರ್ಜ್ ಮಾಡಲು ಸಮೀಪದ ಅಂಗಡಿಗಳನ್ನು ಆಶ್ರಯಿಸುವುದು ಅವರಿಗೆ ಅನಿವಾರ್ಯವಾಗಿದೆ.

ವಿದ್ಯುತ್ ಸಂಪರ್ಕವು ಕ್ಯಾಂಪಿನ ಮಸೀದಿ ಮತ್ತು ದೇವಸ್ಥಾನದ ಮೂಲಕ ಸಾಗುತ್ತಿತ್ತು. ಅಧಿಕಾರಿಗಳು ಎರಡೂ ಧಾರ್ಮಿಕ ಕೇಂದ್ರಗಳ ಮೀಟರ್‌ಗಳಿಂದ ತಂತಿಗಳನ್ನು ಕಡಿತಗೊಳಿಸಿದಾಗ, ಇಡೀ ಪ್ರದೇಶವು ಕ್ಷಣಾರ್ಧದಲ್ಲಿ ಕತ್ತಲಲ್ಲಿ ಮುಳುಗಿತು. ಈ ಕ್ರಿಯೆಯು ನಿವಾಸಿಗಳ ಹೃದಯವನ್ನು ತಟ್ಟಿದೆ. “ನಾವು ಬಿಟ್ಟು ಹೋಗುವ ಮೊದಲು ಇಲ್ಲಿಯೇ ಸಾಯುತ್ತೇವೆ” ಎಂದು ಮುಷರಫ್ ಆಕ್ರೋಶದಿಂದ ಪ್ರತಿಜ್ಞೆ ಮಾಡಿದರು. ಫಾತಿಮಾ ಕೂಡ ಗಟ್ಟಿದನಿಯಲ್ಲಿ “ನಮಗೆ ಬೇರೆ ಎಲ್ಲಿಗೂ ಹೋಗಲು ಸ್ಥಳವಿಲ್ಲ. ನಾವು ನಮ್ಮ ಜೀವವನ್ನು ಕೊಡುತ್ತೇವೆ, ಆದರೆ ಇಲ್ಲಿಂದ ಕದಲುವುದಿಲ್ಲ” ಎಂದು ಆ ದೃಢ ಸಂಕಲ್ಪವನ್ನು ಪುನರುಚ್ಚರಿಸಿದರು.

ಅಸಹನೀಯ ಬಿಸಿಲಿನಿಂದಾಗಿ, ಹಲವರು ತಾತ್ಕಾಲಿಕವಾಗಿ ತಮ್ಮ ಸಂಬಂಧಿಕರ ಮನೆಗಳಿಗೆ ತೆರಳಲು ಒತ್ತಾಯಿಸಲ್ಪಟ್ಟಿದ್ದಾರೆ. ತಮ್ಮ ಕೂಲರ್‌ಗಳು ಮತ್ತು ರೆಫ್ರಿಜರೇಟರ್‌ಗಳನ್ನು ಗಾಡಿಗಳಿಗೆ ಲೋಡ್ ಮಾಡುತ್ತಾ, ಉಳಿಸಬಹುದಾದದ್ದನ್ನು ಉಳಿಸಿಕೊಳ್ಳಲು ಅವರು ಹತಾಶ ಪ್ರಯತ್ನ ಮಾಡುತ್ತಿದ್ದರು. “ಹೊರಗಡೆ ಬಾಡಿಗೆ ಕೂಡ ನಮಗೆ ತುಂಬಾ ಹೆಚ್ಚು. ಬಿಟ್ಟು ಹೋಗುವುದು ನಮಗೊಂದು ಆಯ್ಕೆಯಲ್ಲ” ಎಂದು ರಶೀದಾ ಸ್ಪಷ್ಟಪಡಿಸಿದರು, ಇದು ಅವರ ಅಸಹಾಯಕತೆಯನ್ನು ಬಿಂಬಿಸುತ್ತದೆ. ಇಂತಹ ಪರಿಸ್ಥಿತಿಯಲ್ಲೂ, ನಾಗರಿಕ ಸಮಾಜ ಗುಂಪುಗಳು ಪ್ರಕರಣವು ನ್ಯಾಯಾಲಯದಲ್ಲಿ ಬಾಕಿ ಇದೆ ಎಂದು ತಿಳಿಸಿವೆ ಮತ್ತು ನೆಲಸಮಕ್ಕೆ ತಡೆ ನೀಡುವಂತೆ ಅರ್ಜಿ ಸಲ್ಲಿಸಿ, ಕಾನೂನು ಹೋರಾಟವನ್ನು ಮುಂದುವರೆಸಿವೆ.

ಕ್ರಾಂತಿಕಾರಿಗಳ ಹತ್ಯೆಗೆ 50 ವರ್ಷ: ಶ್ರೀಕಾಕುಳಂ ಸಶಸ್ತ್ರ ಹೋರಾಟಗಾರರಾದ ವೆಂಪಟಾಪು ಸತ್ಯನಾರಾಯಣ, ಆದಿಭಟ್ಲಾ ಕೈಲಾಸಂ ಎನ್‌ಕೌಂಟರ್ ರಹಸ್ಯ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸತೀಶ್‌ ಜಾರಕಿಹೊಳಿ ಮೇಲಿನ ಇಡಿ ದಾಳಿಯನ್ನು ‘ಚಾರಿತ್ರ್ಯ ಹರಣ’ ಎಂದ ವಿಜಯ್ ಮಲ್ಯ

ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ಮನೆ ಹಾಗೂ ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯವು (ಇಡಿ) ನಡೆಸಿದ ದಾಳಿಯನ್ನು ಮಾಜಿ ಸಂಸದ ಮತ್ತು ದೇಶದಿಂದ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ, "ಸಾರ್ವಜನಿಕವಾಗಿ ಚಾರಿತ್ರ್ಯ...

ಒಗ್ಗಟ್ಟಿನ ಮಾತುಗಳಷ್ಟೇ ಸಾಲದು, ಕೃತಿಯಲ್ಲಿರಲಿ ದಿಟ್ಟತನ : ಬ್ರಿಕ್ಸ್ ವಿಚಾರದಲ್ಲಿ ಕೇಂದ್ರಕ್ಕೆ ಕಾಂಗ್ರೆಸ್ ಚಾಟಿ

ಜಾಗತಿಕ ಮಟ್ಟದಲ್ಲಿ ಬ್ರಿಕ್ಸ್ (BRICS) ಒಕ್ಕೂಟದ ಪ್ರಭಾವ ಹೆಚ್ಚುತ್ತಿರುವುದನ್ನು ಸ್ವಾಗತಿಸಿರುವ ಕಾಂಗ್ರೆಸ್, ಈ ಒಕ್ಕೂಟದ ಅಧ್ಯಕ್ಷತೆಯನ್ನು ವಹಿಸಿರುವ ಭಾರತವು ‘ಗ್ಲೋಬಲ್ ಸೌತ್’ (Global South) ರಾಷ್ಟ್ರಗಳ ನಡುವೆ ತನ್ನ ರಾಜತಾಂತ್ರಿಕ ಸ್ಥಾನಮಾನವನ್ನು ಮರುಸ್ಥಾಪಿಸಲು...

9/11 ರ ಹಿಂದಿನ ದಾಳಿಯನ್ನು ಇರಾನ್ ಜೊತೆಗಿನ ಇಂದಿನ ಯುದ್ಧಕ್ಕೆ ಜೋಡಿಸಿದ ಡೊನಾಲ್ಡ್‌ ಟ್ರಂಪ್

"ಸೆಪ್ಟೆಂಬರ್ 11, 2001 ರ ದಾಳಿಯನ್ನು ಯುನೈಟೆಡ್ ಸ್ಟೇಟ್ಸ್ ಎಂದಿಗೂ ಮರೆಯುವುದಿಲ್ಲ. 25 ವರ್ಷಗಳ ನಂತರವೂ ಇರಾನ್ ಮೇಲೆ ದಾಳಿ ಮಾಡುವ ಮೂಲಕ ದೇಶವು ಭಯೋತ್ಪಾದನೆ ವಿರುದ್ಧದ ಯುದ್ಧವನ್ನು ಮುಂದುವರೆಸಿದೆ" ಎಂದು ಅಧ್ಯಕ್ಷ...

SIR ನೋಟಿಸ್ ಮತ್ತು ವಿಚಾರಣೆಯಲ್ಲಿ ಅಕ್ರಮ : ಚು. ಆಯೋಗದ ವಿರುದ್ಧ ನಾಗರಿಕ ಸಂಘಟನೆಗಳಿಂದ 2ನೇ ಎಫ್‌ಐಆರ್

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಭಾಗವಾಗಿ, ಆಗಸ್ಟ್ 24ರಂದು ರಾಜ್ಯ ಚುನಾವಣಾ ಆಯೋಗ ಬಿಡುಗಡೆ ಮಾಡಿದ್ದ ಕರಡು ಮತದಾರರ ಪಟ್ಟಿಯನ್ನು ತಿರಸ್ಕರಿಸಿ ಕೇಂದ್ರ ಚುನಾವಣಾ ಆಯೋಗದ ವಿರುದ್ಧ ಎಫ್‌ಐಆರ್ ಬಿಡುಗಡೆ...

‘ಕೊಂಕಣಿ – ಮಾಲ್ವಣಿ ಸಮುದಾಯಗಳು ಹಿಂದುತ್ವದ ಬೆಂಬಲಿಗರು..’; ಮಹಾರಾಷ್ಟ್ರ ಬಿಜೆಪಿ ನಾಯಕ ಅಮೀತ್ ಸತಮ್

ಮುಂಬೈನಲ್ಲಿ ವಾಸಿಸುತ್ತಿರುವ ಕೊಂಕಣಿ ಮತ್ತು ಮಾಲ್ವಣಿ ಸಮುದಾಯಗಳು ಸೇರಿದಂತೆ ಕೊಂಕಣ ಪ್ರದೇಶದ ಜನರು ಹಿಂದುತ್ವವನ್ನು ಬೆಂಬಲಿಸುತ್ತಾರೆ ಎಂದು ಬಿಜೆಪಿ ನಾಯಕ ಅಮೀತ್ ಸತಮ್ ಹೇಳಿದ್ದಾರೆ. ಮಹಾರಾಷ್ಟ್ರದ ಕೊಂಕಣ ಪ್ರದೇಶದ ಸಾವಂತವಾಡಿಗೆ ಗಣಪತಿ ಭಕ್ತರಿಗಾಗಿ ಛತ್ರಪತಿ...

SIR! ಸಾಮಾನ್ಯರಿಗೆ ಸಂಕಷ್ಟ; ಗಣ್ಯರಿಗೆ ಮನೆ ಬಾಗಿಲಲ್ಲೇ ಸೇವೆ?

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ಕರ್ನಾಟಕದಲ್ಲಿ ಮುಂದುವರೆದಿರುವ ನಡುವೆಯೇ, ಅದರ ಜಾರಿಯಲ್ಲಿ ಸಾಮಾನ್ಯ ಮತದಾರರು ಮತ್ತು ಪ್ರಭಾವಿ ವ್ಯಕ್ತಿಗಳ ಅನುಭವದ ನಡುವಿನ ವ್ಯತ್ಯಾಸದ ಕುರಿತು ಪ್ರಶ್ನೆಗಳು ಎದ್ದಿವೆ. ಮತದಾರರ ಪಟ್ಟಿಯಲ್ಲಿನ...

ದಲಿತ ಬಾಲಕಿ ನಿಶು ಆಜಾದ್ ಕುಟುಂಬಕ್ಕೆ ನಿಲ್ಲದ ಕಿರುಕುಳ; ಅಸಭ್ಯ ಭಾಷೆ – ಬೆದರಿಕೆ ಸಂದೇಶ ರವಾನೆ

ಸಿಜೆಪಿ ಪ್ರತಿಭಟನೆಯಲ್ಲಿ ಗಮನ ಸೆಳೆದಿದ್ದ ಹದಿನಾಲ್ಕು ವರ್ಷ ವಯಸ್ಸಿನ ದಲಿತ ಸಮುದಾಯದ ಕಂಟೆಂಟ್ ಕ್ರಿಯೇಟರ್ ನಿಶು ಆಜಾದ್ ಮತ್ತು ಅವರ ಕುಟುಂಬಕ್ಕೆ ಮೊಬೈಲ್‌ ಫೋನ್‌ ಮೂಲಕ ನಿರಂತರ ಕಿರುಕುಳ ಸಂದೇಶ ಬರುತ್ತಿವೆ ಎಂದು...

ಉತ್ತರ ಪ್ರದೇಶ| 8ನೇ ತರಗತಿಯ ದಲಿತ ವಿದ್ಯಾರ್ಥಿಗೆ ಶಿಕ್ಷಕಿಯಿಂದ ಜಾತಿ ತಾರತಮ್ಯ

ಉತ್ತರ ಪ್ರದೇಶದ ಲಖಿಂಪುರ ಖೇರಿ ಜಿಲ್ಲೆಯ ಸರ್ಕಾರಿ ಉನ್ನತ ಪ್ರಾಥಮಿಕ ಶಾಲೆಯ 8ನೇ ತರಗತಿಯ ವಿದ್ಯಾರ್ಥಿಯೊಬ್ಬರು ಶಿಕ್ಷಕಿಯಿಂದ ಜಾತಿ ಆಧಾರಿತ ತಾರತಮ್ಯ ಎಸಗಲಾಗಿದೆ ಎಂದು ಆರೋಪಿಸಿದ್ದಾನೆ. ಕೃಷ್ಣ ಎಂದು ಗುರುತಿಸಲ್ಪಟ್ಟ ಈ ವಿದ್ಯಾರ್ಥಿ ಪರಿಶಿಷ್ಟ...

ಯೆಮನ್ | ಸಂಪೂರ್ಣ ರೆಡ್ ಸೀ ಕರಾವಳಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡ ಹೌತಿ ಪಡೆ : ಮಂದೇಬ್ ಜಲಸಂಧಿ ಮೇಲೆಯೂ ಹಿಡಿತ ಸಾಧಿಸಿರುವುದಾಗಿ ವರದಿ

ಮಹತ್ವದ ಬೆಳವಣಿಗೆಯಲ್ಲಿ, ಹೌತಿ ಬಂಡುಕೋರರು ಯೆಮನ್‌ನ ಇಡೀ ಕೆಂಪು ಸಮುದ್ರದ (ರೆಡ್ ಸೀ) ಕರಾವಳಿಯನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಇರಾನ್ ಬೆಂಬಲಿತ ಹೌತಿ ಸಶಸ್ತ್ರ ಪಡೆಗಳು ಯೆಮನ್ ಸರ್ಕಾರದ ನಿಯಂತ್ರಣದಲ್ಲಿದ್ದ...

ಭಾರತದ ಚುನಾವಣಾ ಪ್ರಕ್ರಿಯೆಯು ಅತ್ಯಂತ ಪಾರದರ್ಶಕವಾಗಿದೆ: ಸಿಇಸಿ ಜ್ಞಾನೇಶ್ ಕುಮಾರ್

ಭಾರತದ ಚುನಾವಣಾ ಪ್ರಕ್ರಿಯೆಯು ವಿಶ್ವದಲ್ಲೇ ಅತ್ಯಂತ ಪಾರದರ್ಶಕವಾದದ್ದು ಎಂದು ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ (ಸೆ.11) ಹೇಳಿದ್ದಾರೆ. ಗುಜರಾತ್ ವಿಶ್ವವಿದ್ಯಾಲಯದ ಅಟಲ್ ಕಲಾಂ ಸಭಾಂಗಣದಲ್ಲಿ ನಡೆದ 'ಮತಗಟ್ಟೆ ಮಟ್ಟದ ಅಧಿಕಾರಿಗಳೊಂದಿಗೆ...