Homeಕರ್ನಾಟಕ‘ಲೌಕಿಕ ಜೀವನ’ ಮತ್ತು ‘ಸತಿಪತಿ ಭಾವ’ದ ಕುರಿತು ವಚನಕಾರರ ದೃಷ್ಟಿಕೋನವೇನು?

‘ಲೌಕಿಕ ಜೀವನ’ ಮತ್ತು ‘ಸತಿಪತಿ ಭಾವ’ದ ಕುರಿತು ವಚನಕಾರರ ದೃಷ್ಟಿಕೋನವೇನು?

- Advertisement -
- Advertisement -

ಚಿತ್ರದರ್ಗದ ಮುರುಘಾ ಶಿವಮೂರ್ತಿ ಶರಣರು ಪೋಕ್ಸೋ ಪ್ರಕರಣದಲ್ಲಿ ಆರೋಪಿಯಾದ ಬಳಿಕ ಮತ್ತೊಂದು ಸಂಗತಿ ಚರ್ಚೆಯ ಮುನ್ನೆಲೆಗೆ ಬಂದಿದೆ. ನಾಡಿನ ಬಹುತೇಕ ಜನರು, “ಈ ಮಠಾಧೀಶರೇಕೆ ಮದುವೆಯಾಗುವುದಿಲ್ಲ? ವಚನ ಪರಂಪರೆಯನ್ನು ಅನುಸರಿಸುವವರು ನಿಸರ್ಗ ಸಹಜ ಗುಣಗಳನ್ನು ಹತ್ತಿಕ್ಕುವುದಿಲ್ಲ ಹಾಗೂ ಪ್ರಕೃತಿಗೆ ವಿರುದ್ಧವಾಗಿ ನಡೆದುಕೊಂಡು ಈ ರೀತಿಯ ಘೋರ ಅಪರಾಧದಲ್ಲಿ ಸಿಲುಕುವುದಿಲ್ಲ” ಎಂಬ ಅಭಿಪ್ರಾಯಗಳನ್ನು ತಾಳುತ್ತಿದ್ದಾರೆ.

ಲೌಕಿಕ ಜೀವನ, ಸತಿಪತಿ ಬಾಳ್ವೆ ಹಾಗೂ ನಿಸರ್ಗ ಸಹಜ ಸ್ಥಾಯಿ ಭಾವಗಳ ಕುರಿತು ವಚನಕಾರರ ನಿಲುವು ಏನಿತ್ತು? ಧರ್ಮಗುರುಗಳು ಎನಿಸಿಕೊಂಡು, ಗುರು ಪೀಠದಲ್ಲಿ ಕುಳಿತು ಜನರಿಗೆ ಮಾರ್ಗದರ್ಶನ ತೋರುವವರು ಎಲ್ಲಿ ತಪ್ಪುಗಳನ್ನು ಮಾಡುತ್ತಿದ್ದಾರೆ? ನಿಜಕ್ಕೂ ವಚನಕಾರರ ಹಾದಿಯಲ್ಲಿ ಇವರು ನಡೆಯುತ್ತಿದ್ದಾರಾ?- ಈ ಮೊದಲಾದ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಅಗತ್ಯವಿದೆ.

“ಶರಣ ಪರಂಪರೆಯಲ್ಲಿ ಸತಿ-ಪತಿ ಭಾವ ಎನ್ನುವುದು ಲೋಕ ವಿವರಣೆಗೂ ಬಳಕೆಯಾಗುತ್ತದೆ, ಕೌಟುಂಬಿಕ ವ್ಯವಸ್ಥೆಗೂ ಬಳಕೆಯಾಗುತ್ತದೆ. ಸತಿ-ಪತಿ ಭಾವವು ಶರಣ ಪರಂಪರೆಯಲ್ಲಿ ಬಹಳ ಮುಖ್ಯವಾದ ನಿಲುವು ಎನ್ನುತ್ತಾರೆ” ಚಿಂತಕ ಡಾ.ಎಸ್‌.ನಟರಾಜ ಬೂದಾಳು.

ಶ್ರಮಣ ಪರಂಪರೆಗಳ ಬಗ್ಗೆ ಗಂಭೀರವಾದ ಅಧ್ಯಯನ ಮಾಡಿದವರಲ್ಲಿ ಒಬ್ಬರಾದ ಬೂದಾಳು ಅವರು ಈ ವಿಷಯದ ಕುರಿತು ಮತ್ತಷ್ಟು ಬೆಳಕು ಚೆಲ್ಲುತ್ತಾರೆ. “ಸತಿ-ಪತಿ ಭಾವ ಎನ್ನುವುದು ಗುರು-ಶಿಷ್ಯ ಪರಂಪರೆಗೂ ಅನ್ವಯವಾಗುತ್ತದೆ. ಅಂಗ-ಲಿಂಗ ಸಂಬಂಧಕ್ಕೂ ಅನ್ವಯವಾಗುತ್ತದೆ. ಕುಟುಂಬ ವ್ಯವಸ್ಥೆಗೂ ಅನ್ವಯವಾಗುತ್ತದೆ” ಎಂಬುದು ಅವರ ವಿಶ್ಲೇಷಣೆ.

“ಕುಟುಂಬ- ಶರಣರ ಮುಖ್ಯವಾದ ಕೇಂದ್ರ ಕಲ್ಪನೆಯೂ ಹೌದು. ಕೌಂಟುಬಿಕ ಬದುಕನ್ನು ತುಂಬಾ ಗೌರವದಿಂದ ನೋಡಿದರು ಹಾಗೂ ಅದನ್ನು ಜತನದಿಂದ ಕಾಪಾಡಬೇಕೆಂದು ಆಶಿಸಿದರು. ಕುಟುಂಬದಾಚೆಗಿನ ವ್ಯವಸ್ಥೆಗಳಾದ ಮಠಗಳ ಬಗ್ಗೆ ವಚನಗಳಲ್ಲಿ ಯಾವುದೇ ಉಲ್ಲೇಖವಿಲ್ಲ. ಶರಣರು ಕಾಲವಾದ ಸುಮಾರು ಇನ್ನೂರು ಮುನ್ನೂರು ವರ್ಷಗಳ ನಂತರದಲ್ಲಿ ಮಠಗಳು ಹುಟ್ಟಿಕೊಂಡವು” ಎನ್ನುತ್ತಾರೆ ಬೂದಾಳು.

ಮುಂದುವರಿದು, “ಶರಣರದ್ದು ಬಹುಮುಖ್ಯವಾಗಿ ಗುರುಶಿಷ್ಯ ಪರಂಪರೆಯಾಗಿದೆ. ಅದು ಗುರುಮಾರ್ಗವೇ ಹೊರತು ಮಠಮಾರ್ಗವಲ್ಲ. ಅರಿವನ್ನೇ ಗುರು ಎನ್ನುತ್ತಾರೆ ವಚನಕಾರರು. ಅಲ್ಲಮ, ಬಸವಣ್ಣ, ಜೇಡರ ದಾಸಮಯ್ಯ, ಮಾದಾರ ಚೆನ್ನಯ್ಯ ಮೊದಲಾದ ವಚನಕಾರರು ಒಳ್ಳೆಯ ಕುಟುಂಬಸ್ಥರಾಗಿದ್ದರು. ಬಸವಾದಿ ಶರಣರೆಲ್ಲ ಕುಟುಂಬ ಪ್ರೇಮಿಗಳೇ ಹೊರತು ಮಠ ಪ್ರೇಮಿಗಳಲ್ಲ” ಎಂದು ತಿಳಿಸಿದರು.

“ಬಸವಣ್ಣ, ಅಲ್ಲಮ, ಅಂಬಿಗರ ಚೌಡಯ್ಯ- ಇವರ್‍ಯಾರು ಯಾವುದೇ ಮಠದ ಜಗದ್ಗುರು ಆಗಿರಲಿಲ್ಲ. ಬದಲಿಗೆ ಒಳ್ಳೆಯ ಕುಟುಂಬಸ್ಥರಾಗಿದ್ದರು ಹಾಗೂ ಜ್ಞಾನಿಗಳಾಗಿದ್ದರು. ಶರಣರ ಕಾಲದಲ್ಲಿ ಯಾವುದೇ ಮಠಗಳು ಇರಲಿಲ್ಲ. ಆದರೆ ಅನುಭವ ಮಂಟಪಗಳು ಇದ್ದವು. ಎಲ್ಲೆಲ್ಲಿ ಶರಣರು, ಜ್ಞಾನಿಗಳು ಸೇರುತ್ತಿದ್ದರೋ ಅವೆಲ್ಲವನ್ನೂ ಅನುಭವ ಮಂಟಪ ಎನ್ನಲಾಗುತ್ತಿತ್ತು” ಎಂದು ವಿವರಿಸಿದರು.

“ಮಠ ಮಾನ್ಯಗಳ ನಡೆ ನಿಸರ್ಗ ಸಹಜವಾದದ್ದಲ್ಲ. ತಿಂದ ಅನ್ನದ ರಸವ ಕಟ್ಟಿದೊಡೆ ದೊಡ್ಡ ಯೋಗಿಯಾಗುತ್ತಾನೆಯೇ? ಅನ್ನ ತಿಂದ ಬಳಿಕ ಏನೆಲ್ಲ ನಿಸರ್ಗ ಸಹಜವಾಗಿ ಆಗಬೇಕೋ ಅದೆಲ್ಲವೂ ಆಗಬೇಕು ಎಂಬುದು ವಚನಕಾರರ ಆಶಯ” ಎಂದು ಸ್ಪಷ್ಟಪಡಿಸಿದರು.

ವಚನ ಸಾಹಿತ್ಯದ ಬಗ್ಗೆ ಆಳವಾಗಿ ಅಧ್ಯಯನ ಮಾಡಿದವರಾದ ಚಿಂತಕ ಡಾ.ಬಂಜಗೆರೆ ಜಯಪ್ರಕಾಶ್ ‘ನಾನುಗೌರಿ.ಕಾಂ’ ಜೊತೆ ಮಾತನಾಡಿ, “ಕಾಯಕ ನಿರತರಾದ ವಚನಕಾರರು (ಸಂಸಾರಿಗಳು) ಹಾಗೂ ಜಂಗಮರು (ಬಹುತೇಕರು ಮದುವೆಯಾಗಿರುತ್ತಿರಲಿಲ್ಲ) ಎಂದು ಎರಡು ವಿಧದಲ್ಲಿ ವಚನಕಾರರನ್ನು ಗುರುತಿಸಬಹುದು. ಇವರ್‍ಯಾರು ಮಠಗಳನ್ನು ಸ್ಥಾಪಿಸಿದವರಲ್ಲ. ನಾಥ, ಸಿದ್ಧ ಪರಂಪರೆಯಲ್ಲಿ ಬರುವ ಭೈರಾಗಿಗಳ ರೀತಿ, ಬೌದ್ಧಬಿಕ್ಕುಗಳಂತೆ ಜಂಗಮರು ಸಂಚಾರಿಗಳಾಗಿದ್ದರು. ಆದರೆ ಮದುವೆಯಾಗಲೇಬಾರದು ಎನ್ನುವುದಾಗಲೀ, ಸನ್ಯಾಸ ಧರ್ಮವೇ ಶ್ರೇಷ್ಠ ಎನ್ನುವುದಾಗಲೀ ಯಾವುದೇ ವಚನಕಾರರ ನಿಲುವಾಗಿರಲಿಲ್ಲ. ಸತಿ-ಪತಿಗಳೊಂದಾದ ಭಕ್ತಿ ಹಿತವೊಪ್ಪುದು ಶಿವಂಗೆ ಎಂಬ ಉದಾತ್ತ ಚಿಂತನೆಯನ್ನು ಬಿತ್ತದವರು ಶರಣರು” ಎಂದರು.

“ವೈದಿಕ ಧರ್ಮ ಸನ್ಯಾಸವೇ ಶ್ರೇಷ್ಠ ಎಂದು ಪ್ರತಿಪಾದಿಸಿತು. ಬಾಲ ಸನ್ಯಾಸಿಗಳು ಇನ್ನೂ ಶ್ರೇಷ್ಠ, ಹೆಣ್ಣು ಮೋಕ್ಷಕ್ಕೆ ಅಡ್ಡಿ ಎಂದು ಹೇಳಿತು. ಪೂಜಾ ವಿಧಿಗಳಲ್ಲಿ ಹೆಣ್ಣು ಸಹಾಯಕಿಯಾಗಿರಬೇಕೋ ಹೊರತು ಪ್ರಧಾನ ಪೂಜಕಳಾಗಿರಬಾರದು ಎಂದು ನಿಯಮಗಳನ್ನು ವೈದಿಕ ಧರ್ಮ ತಂದಿತು. ಇದನ್ನು ವಿರೋಧಿಸಿದವರು ಶರಣರು. ಹೆಣ್ಣಿಗೂ ಲಿಂಗಾಧಾರಣೆ, ಇಷ್ಟಲಿಂಗ ಪೂಜೆಗೆ ಅವಕಾಶ ನೀಡಿತು. ಕಾಲಗಳು ಉರುಳಿದಂತೆ ವೈದಿಕ ಪ್ರಭಾವಕ್ಕೆ ಒಳಗಾದ ಕೆಲವರು ಮಠ ಕಟ್ಟಲು ಶುರು ಮಾಡಿದರು. ಇಲ್ಲಿ ಸಂಸಾರಿ ಮಠಗಳೂ ಇವೆ, ಸನ್ಯಾಸಿ ಮಠಗಳೂ ಇವೆ” ಎಂದು ಹೇಳಿದರು.

“ವೈದಿಕ ಮಠಗಳ ಅನುಕರಣೆಯಲ್ಲಿ ವಿರಕ್ತ ಮಠಗಳಲ್ಲಿಯೂ ಪೀಠಗಳು ಬಂದವು. ಆದರೆ ವಚನಕಾರರಲ್ಲಿ ಮದುವೆಯಾಗದೆಯೇ ದೈವ ಸಾಕ್ಷಾತ್ಕಾರ ಮಾಡಿಕೊಳ್ಳಬೇಕೆಂಬ ಪರಿಕಲ್ಪನೆಯೇ ಇಲ್ಲ. ಶರಣರಿಗೆ ಸಂಸಾರ ಮತ್ತು ಕಾಯಕಗಳು ತೊಡಕುಗಳಾಗಿರಲಿಲ್ಲ. ಭಕ್ತಿಯನ್ನು ಪ್ರಕಟಿಸಲು ಇವುಗಳು ಸಾಧನಗಳಾಗಿದ್ದವು. ಸ್ವಾರ್ಥವಿಲ್ಲದ ಸಂಸಾರ ಕಲ್ಪನೆಯನ್ನು ಬೆಳೆಸಿದರು. ದಾಸೋಹ ಚಿಂತನೆ ಬೆಳೆದು ಬಂದಿದ್ದೇ ಈ ಮಾರ್ಗದಲ್ಲಿ. ವಚನಕಾರರ ಪ್ರಕಾರ ದುಡಿಯದೇ ತಿನ್ನುವುದು ಅಪರಾಧ, ಜೊತೆಗೆ ದುಡಿದು ತಾನೊಬ್ಬನೇ ತಿನ್ನವುದು ಕೂಡ ಅಪರಾಧ. ಅತಿಥಿಯೇ ಶಿವನ ಸ್ವರೂಪ” ಎಂದು ವಿಶ್ಲೇಷಿಸಿದರು.

“ಕಾಮ- ವ್ಯಾಮೋಹವಾಗಬಾರದು ಎಂಬುದು ವಚನಕಾರರ ನಿಲುವಾಗಿತ್ತು. ಪರಸತಿಯನ್ನೊಲ್ಲೆ, ಪರಧನವನ್ನೊಲ್ಲೆ ಎಂಬ ಸಂದೇಶವನ್ನು ಸಾರಿದರು. ಸತಿ-ಪತಿ ಒಂದಾದರೆ ಶಿವ-ಶಿವೆಯರ ಮಿಲನವಾದಂತೆ ಎಂದು ತಿಳಿಸಿದರು. ಆದರೆ ಕಾಮದ ಮೋಹ ಹಾಗೂ ಪರಸತಿಯ ಮೋಹವನ್ನು ಅಲ್ಲಗಳೆದರು. ಇದರ ಜೊತೆಗೆ ನಿಸರ್ಗಧರ್ಮವನ್ನು ಪ್ರತಿಪಾದಿಸಿದರು. ಒಡಲಿಚ್ಚೆಯ ಸಲಿಸದೆ ನಿಮಿಷವಿರಬಾರದು ಎಂದರು. ಒಡಲೆಚ್ಚೆ ಎಂಬುದು ಯಾವುದು? ಹಸಿವು, ನಿದ್ರೆ, ಕಾಮ ನಿಸರ್ಗ ತತ್ವಗಳು. ಅವುಗಳು ಎಷ್ಟಿರಬೇಕೋ ಅಷ್ಟು ಇರಲೇಬೇಕು. ಅಂದರೆ ಅದರಲ್ಲಿಯೇ ಮುಳುಗಬಾರದು ಎನ್ನುತ್ತಾರೆ ವಚನಕಾರರು. ನಿಸರ್ಗ ತತ್ವವನ್ನು ಅಲ್ಲಗಳೆದು ಬದುಕುವುದು ಶಿವನ ಇಚ್ಛೆಗೆ ವಿರುದ್ಧವಾಗಿ ಬದುಕಿದಂತೆ. ಆದರೆ ಲಂಪಟತನ ಬೇರೆ, ಕಾಮ ಬೇರೆ. ದುಡಿಮೆ ಬೇರೆ, ದುರಾಸೆ ಬೇರೆ ಎಂಬುದು ವಚನಕಾರರ ನಿಲುವುವಾಗಿತ್ತು” ಎಂದು ವಿವರಿಸಿದರು.

1
ಛಲಬೇಕು ಶರಣಂಗೆ ಪರಧನವನೊಲ್ಲೆನೆಂಬ,
ಛಲಬೇಕು ಶರಣಂಗೆ ಪರಸತಿಯನೊಲ್ಲೆನೆಂಬ,
ಛಲಬೇಕು ಶರಣಂಗೆ ಪರದೈವವನೊಲ್ಲೆನೆಂಬ,
ಛಲಬೇಕು ಶರಣಂಗೆ ಲಿಂಗಜಂಗಮವನೊಂದೆಂಬ,
ಛಲಬೇಕು ಶರಣಂಗೆ ಪ್ರಸಾದ ದಿಟವೆಂಬ,
ಛಲವಿಲ್ಲದವರ ಮೆಚ್ಚ ಕೂಡಲಸಂಗಮದೇವ.

2
ಕಾಮ ಬೇಡ ಪರಸ್ತ್ರೀಯರಲ್ಲಿ
ಕ್ರೋಧ ಬೇಡ ಗುರುವಿನಲ್ಲಿ
ಲೋಭ ಬೇಡ ತನು ಮನ ಧನದಲ್ಲಿ
ಮೋಹ ಬೇಡ ಸಂಸಾರದಲ್ಲಿ
ಮದ ಬೇಡ ಶಿವಭಕ್ತರಲ್ಲಿ
ಮತ್ಸರ ಬೇಡ ಸಕಲಪ್ರಾಣಿಗಳಲ್ಲಿ.
ಇಂತೀ ಷಡ್ಗುಣವನರಿದು ಮೆರೆಯಬಲ್ಲಡೆ
ಆತನೇ ಸಹಜ ಸದ್ಭಕ್ತ ಕಾಣಾ ಕೂಡಲಚೆನ್ನಸಂಗಮದೇವಾ

3
ಭಕ್ತನ ಮನ ಹೆಣ್ಣಿನೊಳಗಾದಡೆ,
ವಿವಾಹವಾಗಿ ಕೊಡುವುದು.
ಭಕ್ತನ ಮನ ಮಣ್ಣಿನೊಳಗಾದಡೆ,
ಕೊಂಡು ಆಲಯವ ಮಾಡುವುದು.
ಭಕ್ತನ ಮನ ಹೊನ್ನಿನೊಳಗಾದಡೆ,
ಬಳಲಿ ದೊರಕಿಸುವುದು ನೋಡಾ.
ಕಪಿಲಸಿದ್ಧಮಲ್ಲಿಕಾರ್ಜುನಾ

– ಈ ರೀತಿಯ ನೂರಾರು ವಚನಗಳನ್ನು ವಚನಕಾರರು ಬರೆದಿದ್ದಾರೆ ಎನ್ನುತ್ತಾರೆ ವಚನಗಳನ್ನು ಅಧ್ಯಯನ ಮಾಡಿದವರಾದ ವೀರಭದ್ರಗೌಡ ಅಮರಾಪುರ.

“17ನೇ ಶತಮಾನದಲ್ಲಿ ಷಣ್ಮುಖ ಶಿವಯೋಗಿ ಎಂಬ ಶರಣ- ಹೊರಗೆ ಹೆಣ್ಣ ಬಿಟ್ಟು ನಿಶ್ಚಿಂತನೆಂದು ಹೇಳುವನಲ್ಲದೆ ಒಳಗೆಬಿಟ್ಟು ನಿಶ್ಚಿಂತನಲ್ಲನಯ್ಯ. ಇಂತಪ್ಪ ಏಕಾಂತ ದ್ರೋಹಿ- ಎಂದಿದ್ದಾರೆ. ಈ ರೀತಿಯಲ್ಲಿ ವಚನಕಾರರು ನಿಸರ್ಗ ಸಹಜ ಗುಣಗಳನ್ನು ಚಿಂತಿಸಿದರು” ಎನ್ನುತ್ತಾರೆ ಅಮರಾಪುರ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಮೊದಲ ಪ್ಯಾರಾದಲ್ಲಿ. ಹತ್ತಿಕ್ಕುತ್ತಾರೆ ಮತ್ತು ಸಿಲುಕುತ್ತಾರೆ ಎಂಬ ಪದಗಳನ್ನು ಬಳಸಬೇಕಾಗಿತ್ತು ನೀವು ಬಳಸಿದ ಪದಗಳು ತಪ್ಪಾಗಿದೆ.

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...