Homeಕರ್ನಾಟಕ‘ಲೌಕಿಕ ಜೀವನ’ ಮತ್ತು ‘ಸತಿಪತಿ ಭಾವ’ದ ಕುರಿತು ವಚನಕಾರರ ದೃಷ್ಟಿಕೋನವೇನು?

‘ಲೌಕಿಕ ಜೀವನ’ ಮತ್ತು ‘ಸತಿಪತಿ ಭಾವ’ದ ಕುರಿತು ವಚನಕಾರರ ದೃಷ್ಟಿಕೋನವೇನು?

- Advertisement -
- Advertisement -

ಚಿತ್ರದರ್ಗದ ಮುರುಘಾ ಶಿವಮೂರ್ತಿ ಶರಣರು ಪೋಕ್ಸೋ ಪ್ರಕರಣದಲ್ಲಿ ಆರೋಪಿಯಾದ ಬಳಿಕ ಮತ್ತೊಂದು ಸಂಗತಿ ಚರ್ಚೆಯ ಮುನ್ನೆಲೆಗೆ ಬಂದಿದೆ. ನಾಡಿನ ಬಹುತೇಕ ಜನರು, “ಈ ಮಠಾಧೀಶರೇಕೆ ಮದುವೆಯಾಗುವುದಿಲ್ಲ? ವಚನ ಪರಂಪರೆಯನ್ನು ಅನುಸರಿಸುವವರು ನಿಸರ್ಗ ಸಹಜ ಗುಣಗಳನ್ನು ಹತ್ತಿಕ್ಕುವುದಿಲ್ಲ ಹಾಗೂ ಪ್ರಕೃತಿಗೆ ವಿರುದ್ಧವಾಗಿ ನಡೆದುಕೊಂಡು ಈ ರೀತಿಯ ಘೋರ ಅಪರಾಧದಲ್ಲಿ ಸಿಲುಕುವುದಿಲ್ಲ” ಎಂಬ ಅಭಿಪ್ರಾಯಗಳನ್ನು ತಾಳುತ್ತಿದ್ದಾರೆ.

ಲೌಕಿಕ ಜೀವನ, ಸತಿಪತಿ ಬಾಳ್ವೆ ಹಾಗೂ ನಿಸರ್ಗ ಸಹಜ ಸ್ಥಾಯಿ ಭಾವಗಳ ಕುರಿತು ವಚನಕಾರರ ನಿಲುವು ಏನಿತ್ತು? ಧರ್ಮಗುರುಗಳು ಎನಿಸಿಕೊಂಡು, ಗುರು ಪೀಠದಲ್ಲಿ ಕುಳಿತು ಜನರಿಗೆ ಮಾರ್ಗದರ್ಶನ ತೋರುವವರು ಎಲ್ಲಿ ತಪ್ಪುಗಳನ್ನು ಮಾಡುತ್ತಿದ್ದಾರೆ? ನಿಜಕ್ಕೂ ವಚನಕಾರರ ಹಾದಿಯಲ್ಲಿ ಇವರು ನಡೆಯುತ್ತಿದ್ದಾರಾ?- ಈ ಮೊದಲಾದ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಅಗತ್ಯವಿದೆ.

“ಶರಣ ಪರಂಪರೆಯಲ್ಲಿ ಸತಿ-ಪತಿ ಭಾವ ಎನ್ನುವುದು ಲೋಕ ವಿವರಣೆಗೂ ಬಳಕೆಯಾಗುತ್ತದೆ, ಕೌಟುಂಬಿಕ ವ್ಯವಸ್ಥೆಗೂ ಬಳಕೆಯಾಗುತ್ತದೆ. ಸತಿ-ಪತಿ ಭಾವವು ಶರಣ ಪರಂಪರೆಯಲ್ಲಿ ಬಹಳ ಮುಖ್ಯವಾದ ನಿಲುವು ಎನ್ನುತ್ತಾರೆ” ಚಿಂತಕ ಡಾ.ಎಸ್‌.ನಟರಾಜ ಬೂದಾಳು.

ಶ್ರಮಣ ಪರಂಪರೆಗಳ ಬಗ್ಗೆ ಗಂಭೀರವಾದ ಅಧ್ಯಯನ ಮಾಡಿದವರಲ್ಲಿ ಒಬ್ಬರಾದ ಬೂದಾಳು ಅವರು ಈ ವಿಷಯದ ಕುರಿತು ಮತ್ತಷ್ಟು ಬೆಳಕು ಚೆಲ್ಲುತ್ತಾರೆ. “ಸತಿ-ಪತಿ ಭಾವ ಎನ್ನುವುದು ಗುರು-ಶಿಷ್ಯ ಪರಂಪರೆಗೂ ಅನ್ವಯವಾಗುತ್ತದೆ. ಅಂಗ-ಲಿಂಗ ಸಂಬಂಧಕ್ಕೂ ಅನ್ವಯವಾಗುತ್ತದೆ. ಕುಟುಂಬ ವ್ಯವಸ್ಥೆಗೂ ಅನ್ವಯವಾಗುತ್ತದೆ” ಎಂಬುದು ಅವರ ವಿಶ್ಲೇಷಣೆ.

“ಕುಟುಂಬ- ಶರಣರ ಮುಖ್ಯವಾದ ಕೇಂದ್ರ ಕಲ್ಪನೆಯೂ ಹೌದು. ಕೌಂಟುಬಿಕ ಬದುಕನ್ನು ತುಂಬಾ ಗೌರವದಿಂದ ನೋಡಿದರು ಹಾಗೂ ಅದನ್ನು ಜತನದಿಂದ ಕಾಪಾಡಬೇಕೆಂದು ಆಶಿಸಿದರು. ಕುಟುಂಬದಾಚೆಗಿನ ವ್ಯವಸ್ಥೆಗಳಾದ ಮಠಗಳ ಬಗ್ಗೆ ವಚನಗಳಲ್ಲಿ ಯಾವುದೇ ಉಲ್ಲೇಖವಿಲ್ಲ. ಶರಣರು ಕಾಲವಾದ ಸುಮಾರು ಇನ್ನೂರು ಮುನ್ನೂರು ವರ್ಷಗಳ ನಂತರದಲ್ಲಿ ಮಠಗಳು ಹುಟ್ಟಿಕೊಂಡವು” ಎನ್ನುತ್ತಾರೆ ಬೂದಾಳು.

ಮುಂದುವರಿದು, “ಶರಣರದ್ದು ಬಹುಮುಖ್ಯವಾಗಿ ಗುರುಶಿಷ್ಯ ಪರಂಪರೆಯಾಗಿದೆ. ಅದು ಗುರುಮಾರ್ಗವೇ ಹೊರತು ಮಠಮಾರ್ಗವಲ್ಲ. ಅರಿವನ್ನೇ ಗುರು ಎನ್ನುತ್ತಾರೆ ವಚನಕಾರರು. ಅಲ್ಲಮ, ಬಸವಣ್ಣ, ಜೇಡರ ದಾಸಮಯ್ಯ, ಮಾದಾರ ಚೆನ್ನಯ್ಯ ಮೊದಲಾದ ವಚನಕಾರರು ಒಳ್ಳೆಯ ಕುಟುಂಬಸ್ಥರಾಗಿದ್ದರು. ಬಸವಾದಿ ಶರಣರೆಲ್ಲ ಕುಟುಂಬ ಪ್ರೇಮಿಗಳೇ ಹೊರತು ಮಠ ಪ್ರೇಮಿಗಳಲ್ಲ” ಎಂದು ತಿಳಿಸಿದರು.

“ಬಸವಣ್ಣ, ಅಲ್ಲಮ, ಅಂಬಿಗರ ಚೌಡಯ್ಯ- ಇವರ್‍ಯಾರು ಯಾವುದೇ ಮಠದ ಜಗದ್ಗುರು ಆಗಿರಲಿಲ್ಲ. ಬದಲಿಗೆ ಒಳ್ಳೆಯ ಕುಟುಂಬಸ್ಥರಾಗಿದ್ದರು ಹಾಗೂ ಜ್ಞಾನಿಗಳಾಗಿದ್ದರು. ಶರಣರ ಕಾಲದಲ್ಲಿ ಯಾವುದೇ ಮಠಗಳು ಇರಲಿಲ್ಲ. ಆದರೆ ಅನುಭವ ಮಂಟಪಗಳು ಇದ್ದವು. ಎಲ್ಲೆಲ್ಲಿ ಶರಣರು, ಜ್ಞಾನಿಗಳು ಸೇರುತ್ತಿದ್ದರೋ ಅವೆಲ್ಲವನ್ನೂ ಅನುಭವ ಮಂಟಪ ಎನ್ನಲಾಗುತ್ತಿತ್ತು” ಎಂದು ವಿವರಿಸಿದರು.

“ಮಠ ಮಾನ್ಯಗಳ ನಡೆ ನಿಸರ್ಗ ಸಹಜವಾದದ್ದಲ್ಲ. ತಿಂದ ಅನ್ನದ ರಸವ ಕಟ್ಟಿದೊಡೆ ದೊಡ್ಡ ಯೋಗಿಯಾಗುತ್ತಾನೆಯೇ? ಅನ್ನ ತಿಂದ ಬಳಿಕ ಏನೆಲ್ಲ ನಿಸರ್ಗ ಸಹಜವಾಗಿ ಆಗಬೇಕೋ ಅದೆಲ್ಲವೂ ಆಗಬೇಕು ಎಂಬುದು ವಚನಕಾರರ ಆಶಯ” ಎಂದು ಸ್ಪಷ್ಟಪಡಿಸಿದರು.

ವಚನ ಸಾಹಿತ್ಯದ ಬಗ್ಗೆ ಆಳವಾಗಿ ಅಧ್ಯಯನ ಮಾಡಿದವರಾದ ಚಿಂತಕ ಡಾ.ಬಂಜಗೆರೆ ಜಯಪ್ರಕಾಶ್ ‘ನಾನುಗೌರಿ.ಕಾಂ’ ಜೊತೆ ಮಾತನಾಡಿ, “ಕಾಯಕ ನಿರತರಾದ ವಚನಕಾರರು (ಸಂಸಾರಿಗಳು) ಹಾಗೂ ಜಂಗಮರು (ಬಹುತೇಕರು ಮದುವೆಯಾಗಿರುತ್ತಿರಲಿಲ್ಲ) ಎಂದು ಎರಡು ವಿಧದಲ್ಲಿ ವಚನಕಾರರನ್ನು ಗುರುತಿಸಬಹುದು. ಇವರ್‍ಯಾರು ಮಠಗಳನ್ನು ಸ್ಥಾಪಿಸಿದವರಲ್ಲ. ನಾಥ, ಸಿದ್ಧ ಪರಂಪರೆಯಲ್ಲಿ ಬರುವ ಭೈರಾಗಿಗಳ ರೀತಿ, ಬೌದ್ಧಬಿಕ್ಕುಗಳಂತೆ ಜಂಗಮರು ಸಂಚಾರಿಗಳಾಗಿದ್ದರು. ಆದರೆ ಮದುವೆಯಾಗಲೇಬಾರದು ಎನ್ನುವುದಾಗಲೀ, ಸನ್ಯಾಸ ಧರ್ಮವೇ ಶ್ರೇಷ್ಠ ಎನ್ನುವುದಾಗಲೀ ಯಾವುದೇ ವಚನಕಾರರ ನಿಲುವಾಗಿರಲಿಲ್ಲ. ಸತಿ-ಪತಿಗಳೊಂದಾದ ಭಕ್ತಿ ಹಿತವೊಪ್ಪುದು ಶಿವಂಗೆ ಎಂಬ ಉದಾತ್ತ ಚಿಂತನೆಯನ್ನು ಬಿತ್ತದವರು ಶರಣರು” ಎಂದರು.

“ವೈದಿಕ ಧರ್ಮ ಸನ್ಯಾಸವೇ ಶ್ರೇಷ್ಠ ಎಂದು ಪ್ರತಿಪಾದಿಸಿತು. ಬಾಲ ಸನ್ಯಾಸಿಗಳು ಇನ್ನೂ ಶ್ರೇಷ್ಠ, ಹೆಣ್ಣು ಮೋಕ್ಷಕ್ಕೆ ಅಡ್ಡಿ ಎಂದು ಹೇಳಿತು. ಪೂಜಾ ವಿಧಿಗಳಲ್ಲಿ ಹೆಣ್ಣು ಸಹಾಯಕಿಯಾಗಿರಬೇಕೋ ಹೊರತು ಪ್ರಧಾನ ಪೂಜಕಳಾಗಿರಬಾರದು ಎಂದು ನಿಯಮಗಳನ್ನು ವೈದಿಕ ಧರ್ಮ ತಂದಿತು. ಇದನ್ನು ವಿರೋಧಿಸಿದವರು ಶರಣರು. ಹೆಣ್ಣಿಗೂ ಲಿಂಗಾಧಾರಣೆ, ಇಷ್ಟಲಿಂಗ ಪೂಜೆಗೆ ಅವಕಾಶ ನೀಡಿತು. ಕಾಲಗಳು ಉರುಳಿದಂತೆ ವೈದಿಕ ಪ್ರಭಾವಕ್ಕೆ ಒಳಗಾದ ಕೆಲವರು ಮಠ ಕಟ್ಟಲು ಶುರು ಮಾಡಿದರು. ಇಲ್ಲಿ ಸಂಸಾರಿ ಮಠಗಳೂ ಇವೆ, ಸನ್ಯಾಸಿ ಮಠಗಳೂ ಇವೆ” ಎಂದು ಹೇಳಿದರು.

“ವೈದಿಕ ಮಠಗಳ ಅನುಕರಣೆಯಲ್ಲಿ ವಿರಕ್ತ ಮಠಗಳಲ್ಲಿಯೂ ಪೀಠಗಳು ಬಂದವು. ಆದರೆ ವಚನಕಾರರಲ್ಲಿ ಮದುವೆಯಾಗದೆಯೇ ದೈವ ಸಾಕ್ಷಾತ್ಕಾರ ಮಾಡಿಕೊಳ್ಳಬೇಕೆಂಬ ಪರಿಕಲ್ಪನೆಯೇ ಇಲ್ಲ. ಶರಣರಿಗೆ ಸಂಸಾರ ಮತ್ತು ಕಾಯಕಗಳು ತೊಡಕುಗಳಾಗಿರಲಿಲ್ಲ. ಭಕ್ತಿಯನ್ನು ಪ್ರಕಟಿಸಲು ಇವುಗಳು ಸಾಧನಗಳಾಗಿದ್ದವು. ಸ್ವಾರ್ಥವಿಲ್ಲದ ಸಂಸಾರ ಕಲ್ಪನೆಯನ್ನು ಬೆಳೆಸಿದರು. ದಾಸೋಹ ಚಿಂತನೆ ಬೆಳೆದು ಬಂದಿದ್ದೇ ಈ ಮಾರ್ಗದಲ್ಲಿ. ವಚನಕಾರರ ಪ್ರಕಾರ ದುಡಿಯದೇ ತಿನ್ನುವುದು ಅಪರಾಧ, ಜೊತೆಗೆ ದುಡಿದು ತಾನೊಬ್ಬನೇ ತಿನ್ನವುದು ಕೂಡ ಅಪರಾಧ. ಅತಿಥಿಯೇ ಶಿವನ ಸ್ವರೂಪ” ಎಂದು ವಿಶ್ಲೇಷಿಸಿದರು.

“ಕಾಮ- ವ್ಯಾಮೋಹವಾಗಬಾರದು ಎಂಬುದು ವಚನಕಾರರ ನಿಲುವಾಗಿತ್ತು. ಪರಸತಿಯನ್ನೊಲ್ಲೆ, ಪರಧನವನ್ನೊಲ್ಲೆ ಎಂಬ ಸಂದೇಶವನ್ನು ಸಾರಿದರು. ಸತಿ-ಪತಿ ಒಂದಾದರೆ ಶಿವ-ಶಿವೆಯರ ಮಿಲನವಾದಂತೆ ಎಂದು ತಿಳಿಸಿದರು. ಆದರೆ ಕಾಮದ ಮೋಹ ಹಾಗೂ ಪರಸತಿಯ ಮೋಹವನ್ನು ಅಲ್ಲಗಳೆದರು. ಇದರ ಜೊತೆಗೆ ನಿಸರ್ಗಧರ್ಮವನ್ನು ಪ್ರತಿಪಾದಿಸಿದರು. ಒಡಲಿಚ್ಚೆಯ ಸಲಿಸದೆ ನಿಮಿಷವಿರಬಾರದು ಎಂದರು. ಒಡಲೆಚ್ಚೆ ಎಂಬುದು ಯಾವುದು? ಹಸಿವು, ನಿದ್ರೆ, ಕಾಮ ನಿಸರ್ಗ ತತ್ವಗಳು. ಅವುಗಳು ಎಷ್ಟಿರಬೇಕೋ ಅಷ್ಟು ಇರಲೇಬೇಕು. ಅಂದರೆ ಅದರಲ್ಲಿಯೇ ಮುಳುಗಬಾರದು ಎನ್ನುತ್ತಾರೆ ವಚನಕಾರರು. ನಿಸರ್ಗ ತತ್ವವನ್ನು ಅಲ್ಲಗಳೆದು ಬದುಕುವುದು ಶಿವನ ಇಚ್ಛೆಗೆ ವಿರುದ್ಧವಾಗಿ ಬದುಕಿದಂತೆ. ಆದರೆ ಲಂಪಟತನ ಬೇರೆ, ಕಾಮ ಬೇರೆ. ದುಡಿಮೆ ಬೇರೆ, ದುರಾಸೆ ಬೇರೆ ಎಂಬುದು ವಚನಕಾರರ ನಿಲುವುವಾಗಿತ್ತು” ಎಂದು ವಿವರಿಸಿದರು.

1
ಛಲಬೇಕು ಶರಣಂಗೆ ಪರಧನವನೊಲ್ಲೆನೆಂಬ,
ಛಲಬೇಕು ಶರಣಂಗೆ ಪರಸತಿಯನೊಲ್ಲೆನೆಂಬ,
ಛಲಬೇಕು ಶರಣಂಗೆ ಪರದೈವವನೊಲ್ಲೆನೆಂಬ,
ಛಲಬೇಕು ಶರಣಂಗೆ ಲಿಂಗಜಂಗಮವನೊಂದೆಂಬ,
ಛಲಬೇಕು ಶರಣಂಗೆ ಪ್ರಸಾದ ದಿಟವೆಂಬ,
ಛಲವಿಲ್ಲದವರ ಮೆಚ್ಚ ಕೂಡಲಸಂಗಮದೇವ.

2
ಕಾಮ ಬೇಡ ಪರಸ್ತ್ರೀಯರಲ್ಲಿ
ಕ್ರೋಧ ಬೇಡ ಗುರುವಿನಲ್ಲಿ
ಲೋಭ ಬೇಡ ತನು ಮನ ಧನದಲ್ಲಿ
ಮೋಹ ಬೇಡ ಸಂಸಾರದಲ್ಲಿ
ಮದ ಬೇಡ ಶಿವಭಕ್ತರಲ್ಲಿ
ಮತ್ಸರ ಬೇಡ ಸಕಲಪ್ರಾಣಿಗಳಲ್ಲಿ.
ಇಂತೀ ಷಡ್ಗುಣವನರಿದು ಮೆರೆಯಬಲ್ಲಡೆ
ಆತನೇ ಸಹಜ ಸದ್ಭಕ್ತ ಕಾಣಾ ಕೂಡಲಚೆನ್ನಸಂಗಮದೇವಾ

3
ಭಕ್ತನ ಮನ ಹೆಣ್ಣಿನೊಳಗಾದಡೆ,
ವಿವಾಹವಾಗಿ ಕೊಡುವುದು.
ಭಕ್ತನ ಮನ ಮಣ್ಣಿನೊಳಗಾದಡೆ,
ಕೊಂಡು ಆಲಯವ ಮಾಡುವುದು.
ಭಕ್ತನ ಮನ ಹೊನ್ನಿನೊಳಗಾದಡೆ,
ಬಳಲಿ ದೊರಕಿಸುವುದು ನೋಡಾ.
ಕಪಿಲಸಿದ್ಧಮಲ್ಲಿಕಾರ್ಜುನಾ

– ಈ ರೀತಿಯ ನೂರಾರು ವಚನಗಳನ್ನು ವಚನಕಾರರು ಬರೆದಿದ್ದಾರೆ ಎನ್ನುತ್ತಾರೆ ವಚನಗಳನ್ನು ಅಧ್ಯಯನ ಮಾಡಿದವರಾದ ವೀರಭದ್ರಗೌಡ ಅಮರಾಪುರ.

“17ನೇ ಶತಮಾನದಲ್ಲಿ ಷಣ್ಮುಖ ಶಿವಯೋಗಿ ಎಂಬ ಶರಣ- ಹೊರಗೆ ಹೆಣ್ಣ ಬಿಟ್ಟು ನಿಶ್ಚಿಂತನೆಂದು ಹೇಳುವನಲ್ಲದೆ ಒಳಗೆಬಿಟ್ಟು ನಿಶ್ಚಿಂತನಲ್ಲನಯ್ಯ. ಇಂತಪ್ಪ ಏಕಾಂತ ದ್ರೋಹಿ- ಎಂದಿದ್ದಾರೆ. ಈ ರೀತಿಯಲ್ಲಿ ವಚನಕಾರರು ನಿಸರ್ಗ ಸಹಜ ಗುಣಗಳನ್ನು ಚಿಂತಿಸಿದರು” ಎನ್ನುತ್ತಾರೆ ಅಮರಾಪುರ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಮೊದಲ ಪ್ಯಾರಾದಲ್ಲಿ. ಹತ್ತಿಕ್ಕುತ್ತಾರೆ ಮತ್ತು ಸಿಲುಕುತ್ತಾರೆ ಎಂಬ ಪದಗಳನ್ನು ಬಳಸಬೇಕಾಗಿತ್ತು ನೀವು ಬಳಸಿದ ಪದಗಳು ತಪ್ಪಾಗಿದೆ.

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...