Homeಅಂಕಣಗಳುನೂರರ ನೋಟ; ದೊಡ್ಡರಂಗೇಗೌಡರು ಆತ್ಮಾವಲೋಕನ ಮಾಡಿಕೊಳ್ಳಲಿ

ನೂರರ ನೋಟ; ದೊಡ್ಡರಂಗೇಗೌಡರು ಆತ್ಮಾವಲೋಕನ ಮಾಡಿಕೊಳ್ಳಲಿ

- Advertisement -
- Advertisement -

ಅಮೆರಿಕದಲ್ಲಿ ಒಂದು ಮಾತಿದೆ Get On, Get Honour, Get Honest ಎಂದು.

ಮೊದಲು Get On ಆಗಿ, ದೊಡ್ಡರಂಗೇಗೌಡರು ಸಾಹಿತಿ ಎನಿಸಿದರು. ಸಿನಿಮಾ ಹಾಡು ಬರೆಯುವುದರಲ್ಲೂ ಹೆಸರು ಮಾಡಿದರು.

ಮುಂದಿನ ಹೆಜ್ಜೆ Get Honour. ಬಿಜೆಪಿಯ ಮೇಲ್ಮನೆ ಸದಸ್ಯರಾದರು. ಸರ್ಕಾರದ ಪುಸ್ತಕಕೊಳ್ಳುವ ಸಮಿತಿಯ ಅಧ್ಯಕ್ಷರು ಆದರು. ಅನಾಯಾಸವಾಗಿ, ಬಿಜೆಪಿಯ ಸಹಕಾರದಿಂದ ಪದ್ಮಶ್ರೀ ಪ್ರಶಸ್ತಿಯೂ ದೊರೆಯಿತು.

ಇಷ್ಟೆಲ್ಲ ಗೌರವಗಳನ್ನು ಬಿಜೆಪಿ ಸರ್ಕಾರ ದೊಡ್ಡರಂಗೇಗೌಡರಿಗೆ ಬಳುವಳಿಯಾಗಿ ಕೊಟ್ಟಿರುವಾಗ ಅವರು ಬಿಜೆಪಿಗೆ ಪ್ರತ್ಯುಪಕಾರ ಮಾಡಿ ಸಾಲ ತೀರಿಸಬೇಡವೇ? ಕೃತಜ್ಞತೆ ಸಲ್ಲಿಸಬೇಡವೇ? ಈಗ ಅವರು Honest ಆಗುವ ಪ್ರಯತ್ನದಲ್ಲಿದ್ದಾರೆ. ಯಾರಿಗೆ Honest ಆಗುವುದು? ಬಿಜೆಪಿಗಲ್ಲದೆ ಬೇರೆ ಯಾರಿಗೆ Honest ಆಗುವುದು?

ಆದರೆ ಅವರು ಅದಕ್ಕಾಗಿ ಮೊದಲು ಆಯ್ಕೆಮಾಡಿದ್ದು ಹಿಂದಿ ಭಾಷೆಯನ್ನು ರಾಷ್ಟ್ರಭಾಷೆಯಾಗಿ ಒಪ್ಪಿಕೊಳ್ಳುವ ವಿಚಾರ ಪ್ರಸ್ತಾಪಿಸುವ ಮುಖಾಂತರ. ಕನ್ನಡಿಗರು ಹೆಮ್ಮೆ ಪಡಬಹುದಾದ, ಹಾವೇರಿಯಲ್ಲಿ ನಡೆಯುವ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನವನ್ನು ಕನ್ನಡ ಸಾಹಿತ್ಯ ಪರಿಷತ್ತು ಅವರಿಗೆ ದಯಪಾಲಿಸಿತು. ಆ ಸುದ್ದಿ ತಿಳಿದ ಒಡನೆ ದೊಡ್ಡರಂಗೇಗೌಡರು ಮೊದಲಿಗೆ ಆಡಿದ ಮಾತು ಕೇಂದ್ರ ಸರ್ಕಾರದ ಹಿಂದಿ ಹೇರಿಕೆಯ ನೀತಿಯನ್ನು ಸಮರ್ಥಿಸುವ ಮೂಲಕ ಕರ್ನಾಟಕ ಹಿಂದಿಯನ್ನು ರಾಷ್ಟ್ರಭಾಷೆಯನ್ನಾಗಿ ಏಕೆ ಒಪ್ಪಿಕೊಳ್ಳಬಾರದು ಎನ್ನುವ ರೀತಿಯಲ್ಲಿ ಪ್ರಶ್ನಿಸಿದರು. ಅವರೇ ಹೇಳಿರುವಂತೆ ದಕ್ಷಿಣ ರಾಜ್ಯಗಳಲ್ಲಿ ಹಿಂದಿ ಚಲಾವಣೆಯಲ್ಲಿಲ್ಲ.

ಉತ್ತರ ಭಾರತದ ರಾಜ್ಯಗಳು ಹಿಂದಿಯನ್ನು ರಾಷ್ಟ್ರಭಾಷೆಯನ್ನಾಗಿ ಒಪ್ಪಿರುವ ಮಾತ್ರಕ್ಕೆ, ನಾವು, ಹಿಂದಿಯ ಗಂಧವೇ ಇಲ್ಲದ ದಕ್ಷಿಣ ಭಾರತದ ಜನ ಇದನ್ನು ಯಾಕೆ ಒಪ್ಪಬೇಕು ಎಂದು ಜನರು ಕೇಳಲಾರಂಭಿಸಿದರು. ದೊಡ್ಡರಂಗೇಗೌಡರ ಬಾಯಿ ಕಟ್ಟಿಹೋಯ್ತು. ಸಮ್ಮೇಳನದ ಸಮಯದಲ್ಲಿ ಕನ್ನಡಿಗರು ಒಕ್ಕೊರಲಿನಿಂದ ಸಮ್ಮೇಳಾನಾಧ್ಯಕ್ಷರನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆಂಬ ಮತ್ತು ಬೆವರಿಳಿಸುತ್ತಾರೆಂಬ ಭಯ ದೊಡ್ಡರಂಗೇಗೌಡರನ್ನು ಕಾಡಲು ಆರಂಭವಾಯಿತು. ಸರ್ಕಾರಕ್ಕೂ ಈ ಭಯ ತಾಕಿ ಸಮ್ಮೇಳನವನ್ನೇ ಮುಂದಕ್ಕೆ ಹಾಕುವ ತೀರ್ಮಾನ ಕೈಗೊಂಡಿತು. ಸಂಬಂಧಪಟ್ಟ ಮಂತ್ರಿಗಳು ಸಮ್ಮೇಳನವನ್ನು ಮುಂದಕ್ಕೆ ಹಾಕಿರುವ ಸುದ್ದಿ ಪ್ರಕಟಿಸಿದರು.

ಈ ಮಧ್ಯೆ ದೊಡ್ಡರಂಗೇಗೌಡರು, ತಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದೂ ಒಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಆ ನಂತರ ಇನ್ನೊಂದು ಸಂದರ್ಭದಲ್ಲಿ ತಮ್ಮ ನಿಲುವನ್ನು ಬದಲಾಯಿಸಿರುವುದಾಗಿ ಹೇಳಿದರು. ಬಹುಶಃ ಸಮ್ಮೇಳನದಲ್ಲಿ ಎಲ್ಲ ಕನ್ನಡಿಗರ ಒಕ್ಕೊರಲಿನ ಪ್ರಕೋಪಕ್ಕೆ ಒಳಗಾಗಬಹುದು ಎಂಬ ಹೆದರಿಕೆ ಅವರನ್ನು ಕಾಡಿರಬಹುದು.

ಸಮ್ಮೇಳನ ಮುಂದಕ್ಕೆ ಹೋಯಿತು. ತಮಗೆ ಮೋದಿ ಸರ್ಕಾರ ಪದ್ಮಶ್ರೀ ಪ್ರಶಸ್ತಿ ನೀಡಿದ್ದು ದೊಡ್ಡರಂಗೇಗೌಡರಿಗೆ ಮತ್ತೆ ಜ್ಞಾಪಕಕ್ಕೆ ಬಂದಿರಬೇಕು. ಬಿಜೆಪಿಗೆ ಕೃತಜ್ಞತೆ ಸಲ್ಲಿಸುವುದನ್ನು ಮರೆಯಬಾರದು ಎಂದುಕೊಂಡು, ಹಿಂದುತ್ವ ಪ್ರತಿಪಾದಕರ Hidden Agendaವನ್ನು ಒಂದೊಂದಾಗಿ ಸಮರ್ಥಿಸುವುದು ತಮ್ಮ ಕರ್ತವ್ಯ ಎಂದುಕೊಂಡು ಈಗ ಸಂವಿಧಾನವನ್ನು ಬದಲಿಸುವ ಪ್ರಸ್ತಾಪ ಮಾಡಿದ್ದಾರೆ. ಸಂವಿಧಾನದಲ್ಲಿ ಅಥವಾ ರಾಜ್ಯಾಂಗದಲ್ಲಿ ಏನೇನು ಬದಲಾವಣೆ ತರಬೇಕು ಎಂಬುದನ್ನು ವಿವರಿಸುವ ಧೈರ್ಯ ಅವರು ಮಾಡಲಿಲ್ಲ. ಮುಗುಮ್ಮಾಗಿ ಸಂವಿಧಾನದಲ್ಲಿ ಬದಲಾವಣೆಗೆ ತರಬೇಕು ಎಂದು ಸಾಹಿತ್ಯ ಸಮ್ಮೇಳನ ಒಂದರಲ್ಲಿ ಪ್ರಸ್ತಾಪಿಸಿದ್ದಾರೆ. ಈ ಮಾತಿಗೂ ಸಾಕಷ್ಟು ಪ್ರತಿಭಟನೆ ವ್ಯಕ್ತವಾಗಿದೆ. ಹಾವೇರಿ ಸಮ್ಮೇಳನ ನಡೆಯುವುದೇ ಆದರೆ ಕನ್ನಡಿಗರು ದೊಡ್ಡರಂಗೇಗೌಡರಿಗೆ ಚಾರಿತ್ರಿಕ ಪ್ರತಿಭಟನೆ ತೋರುತ್ತಾರೆ. ಬಿಜೆಪಿಯ ವಕ್ತಾರನಾಗಲು ಬಯಸುವ ನಾನು ಯಾಕಾದರು ಈ ಸಮ್ಮೇಳನಾಧ್ಯಕ್ಷ ಪದವಿಯನ್ನು ಒಪ್ಪಿಕೊಂಡೆ ಎಂದು ಪರಿತಪಿಸುತ್ತಾರೆ.

ದೊಡ್ಡರಂಗೇಗೌಡರು ಇನ್ನು ಮುಂದೆ ಕನ್ನಡಿಗರ ಹಿತವನ್ನು ಕಾಪಾಡುವವರಲ್ಲ. ಅವರು ಬಿಜೆಪಿಯ ಬಾಯಿ ಹರುಕ ಶಾಸಕರಂತೆ ತಾವೂ ಒಬ್ಬ ವಕ್ತಾರರಾಗಿ ಪರಿವರ್ತನೆಗೊಳ್ಳುವವರು ಎಂಬುದನ್ನು ಸಾಬೀತುಮಾಡಿದ್ದಾರೆ.
ಮನುಷ್ಯ ಎಷ್ಟೇ ಬುದ್ಧಿವಂತನಾಗಿರಲಿ, ಬದ್ಧತೆಯನ್ನುಳ್ಳವನಾಗಿರಲಿ ಸರ್ಕಾರ ನೀಡುವ ಬಿರುದು ಬಾವಲಿ ಸ್ಥಾನಮಾನಗಳಿಗೆ ಮನ ಸೋತರೆ ಎಷ್ಟು ಕ್ರೂರನಾಗಬಲ್ಲ, ದಾಸನಾಗಬಲ್ಲ ಎಂಬುದಕ್ಕೆ ಜ್ವಲಂತ ಉದಾಹರಣೆ ದೊಡ್ಡರಂಗೇಗೌಡರು.

ದೊಡ್ಡರಂಗೇಗೌಡರನ್ನು ಅನೇಕ ವರ್ಷಗಳಿಂದ ಬಲ್ಲವನು ನಾನು. ಅವರನ್ನು ಕಂಡರೆ ನನಗೆ ತುಂಬ ಗೌರವ, ಮೆಚ್ಚುಗೆ. ಅವರಿಗೆ ತಮ್ಮ ಹೆಸರು ಬೆಳಗಬೇಕು ಎಂಬ ಆಸೆ ಇತ್ತು. ಅದನ್ನೂ ನಾನು ಬಲ್ಲೆ. ಆದರೆ ಅವರು For a pot of Porridgeಗೋಸ್ಕರ ತಮ್ಮ soulಅನ್ನೇ ಮಾರಿಕೊಳ್ಳುವವರು ಎಂದು ನಾನು ಭಾವಿಸಿರಲಿಲ್ಲ. ಕನ್ನಡಿಗರೆಲ್ಲರ ಹೃನ್ಮನಗಳನ್ನು ಗೆದ್ದಿದ್ದ ಅವರಿಗೆ ಪದ್ಮಭೂಷಣ ಎಂಬ ಚಿನ್ನದ ಉರುಳು ಜನರ ಮನ್ನಣೆಗಿಂತ ಹೆಚ್ಚಾಯಿತೇ? What a fall my Countrymen!

ಕನ್ನಡದ ಜನತೆಗೆಲ್ಲರಿಗೂ ಬೇಕಾಗಿದ್ದ ಅವರು ಈಗ ಹಿಂದುತ್ವ ಪ್ರತಿಪಾದಕರ ಸಣ್ಣ ಪಂಗಡದ ಅಡಿಯಾಳಾದರೇಕೆ ಎಂಬುದು ನನ್ನನ್ನು ಬಾಧಿಸುವ ಪ್ರಶ್ನೆ.


ಇದನ್ನೂ ಓದಿ: “ಹಿಂದಿ ನಮ್ಮ ರಾಷ್ಟ್ರ ಭಾಷೆ”: ದೊಡ್ಡರಂಗೇಗೌಡರ ಹೇಳಿಕೆಗೆ ಕನ್ನಡಿಗರ ವಿರೋಧ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಶೀಘ್ರದಲ್ಲೇ ಹೊರಡುತ್ತೇನೆ’: ‘2-3 ವಾರಗಳಲ್ಲಿ’ ಇರಾನ್ ಮೇಲಿನ ಯುದ್ಧ ಕೊನೆಗೊಳಿಸುವ ಬಗ್ಗೆ ಸುಳಿವು ನೀಡಿದ ಅಮೆರಿಕ ಅಧ್ಯಕ್ಷ ಟ್ರಂಪ್ 

ವಾಷಿಂಗ್ಟನ್ ಡಿಸಿ: ಜಾಗತಿಕ ಇಂಧನ ಮಾರುಕಟ್ಟೆಗಳನ್ನು ಅಸ್ತವ್ಯಸ್ತಗೊಳಿಸಿರುವ ಒಂದು ತಿಂಗಳ ಕಾಲ ನಡೆದ ಯುದ್ಧದ ಸಂಭಾವ್ಯ ಅಂತ್ಯದ ಬಗ್ಗೆ ಸುಳಿವು ನೀಡುವ ಮೂಲಕ, ಮುಂದಿನ ಎರಡು ಮೂರು ವಾರಗಳ ಮೊದಲೇ ಇರಾನ್ ವಿರುದ್ಧದ...

ದೊಡ್ಡಬಳ್ಳಾಪುರದಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ : ಕೆಐಎಡಿಬಿ ವಿರುದ್ಧ ಬೀದಿಗಿಳಿದ ಜನ

ದೇವನಹಳ್ಳಿ ಬಳಿಕ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ ಪ್ರಾರಂಭಗೊಂಡಿದೆ. ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ದಿ ಮಂಡಳಿ (ಕೆಐಎಡಿಬಿ) ವಿರುದ್ಧ ಜನರು ಬೀದಿಗಿಳಿದಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ...

ಬಿಹಾರ: ಪತಿಯನ್ನು ಹತ್ಯೆ ಮಾಡಿದ ಗುಂಪಿನಿಂದ ಬೆದರಿಕೆ; ಇಬ್ಬರು ಮಕ್ಕಳೊಂದಿಗೆ ವಿಷ ಸೇವಿಸಿದ ಮುಸ್ಲಿಂ ಮಹಿಳೆ ಸಾವು, ಮಕ್ಕಳ ಸ್ಥಿತಿ ಗಂಭೀರ

ಬಿಹಾರದ ರೋಹ್ತಾಸ್ ಜಿಲ್ಲೆಯ ಮುಸ್ಲಿಂ ಮಹಿಳೆಯೊಬ್ಬರು ಮಂಗಳವಾರ ತನ್ನ ಇಬ್ಬರು ಅಪ್ರಾಪ್ತ ಮಕ್ಕಳೊಂದಿಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.  ಪತಿಯನ್ನು ಅಮಾನುಷವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿದ್ದ ಆರೋಪಿಗಳಿಂದ ಬೆದರಿಕೆಗಳನ್ನು ತಾಳಲಾರದೆ...

ಅತ್ಯಾಚಾರ ಆರೋಪ: ಅಶೋಕ್ ಖರತ್ ಅವರ ಪುತ್ರನನ್ನು ವಿಚಾರಣೆಗಾಗಿ ವಶಕ್ಕೆ ಪಡೆದ ಎಸ್ಐಟಿ; ಪತ್ನಿಗಾಗಿ ಹುಡುಕಾಟ 

ನಾಸಿಕ್: ಅತ್ಯಾಚಾರ ಆರೋಪಿ ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ವಿರುದ್ಧ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ನಾಸಿಕ್ ನಗರದಲ್ಲಿ ಆತನ ಮಗನನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದು, ಆತನ ಪತ್ನಿಗಾಗಿಯೂ...

ಇರಾಕ್‌ : ಬಗ್ದಾದ್‌ನಲ್ಲಿ ಯುಎಸ್‌ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅಪಹರಣ

ಇರಾಕ್‌ ರಾಜಧಾನಿ ಬಗ್ದಾದ್‌ ನಗರದ ಅಲ್-ಸಾದೂನ್ ಬೀದಿಯಲ್ಲಿರುವ ಬಗ್ದಾದ್ ಹೋಟೆಲ್ ಬಳಿ ಅಮೆರಿಕದ ಪ್ರಶಸ್ತಿ ವಿಜೇತ ಸ್ವತಂತ್ರ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅವರನ್ನು ಮಂಗಳವಾರ (ಮಾ.31, 2026) ಅಪಹರಿಸಲಾಗಿದೆ ಎಂದು ವರದಿಯಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ,...

ವಾಣಿಜ್ಯ ಎಲ್‌ಪಿಜಿ ದರ 195.50 ರೂ. ಏರಿಕೆ : ಜನ ಸಾಮಾನ್ಯರಿಗೆ ಗಾಯದ ಮೇಲೆ ಬರೆ

ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಜಾಗತಿಕ ತೈಲ ಬೆಲೆಗಳು ಏರುತ್ತಿರುವ ನಡುವೆ, ವಾಣಿಜ್ಯ ಎಲ್‌ಪಿಜಿ ದರವನ್ನು ಬುಧವಾರ (ಏ.1) 195.50 ರೂ. ಹೆಚ್ಚಿಸಲಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಪ್ರಕಾರ, ಬೆಲೆ ಏರಿಕೆ ಬಳಿಕ...

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿಯಿದೆ : ಅಖಿಲೇಶ್ ಯಾದವ್ ವ್ಯಂಗ್ಯ

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ವ್ಯಂಗ್ಯವಾಡಿದ್ದಾರೆ. ಬಿಜೆಪಿ ನಾಯಕರು ಹಾಗೂ ಅವರ ಸಹವರ್ತಿಗಳ ಭ್ರಷ್ಟಾಚಾರ ಮತ್ತು ದುರ್ನಡತೆಯ ಪ್ರಕರಣಗಳು...

ಅಂತರ್ಧರ್ಮೀಯ ‘ಲಿವ್-ಇನ್’ ಸಂಬಂಧ ಅಪರಾಧವಲ್ಲ: ಅಲಹಾಬಾದ್ ಹೈಕೋರ್ಟ್

ಅಂತರ್ಧರ್ಮೀಯ ಲಿವ್-ಇನ್ ಸಂಬಂಧವನ್ನು ನಿಷೇಧಿಸಲಾಗಿಲ್ಲ ಅಥವಾ ಯಾವುದೇ ಕಾನೂನಿನ ಅಡಿಯಲ್ಲಿ ಅಪರಾಧವಲ್ಲಎಂದು ತೀರ್ಪು ನೀಡಿರುವ ಅಲಹಾಬಾದ್ ಹೈಕೋರ್ಟ್, ಮಹಿಳೆಯ ಕುಟುಂಬದಿಂದ ಬೆದರಿಕೆ ಎದುರಿಸುತ್ತಿರುವ ದಂಪತಿಗಳಿಗೆ ರಕ್ಷಣೆ ನೀಡಿದೆ. ಸೋನ್‌ಭದ್ರಾದ ಕಾಜಲ್ ಪ್ರಜಾಪತಿ ಮತ್ತು ಅವರ...

‘ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧಗೊಳಿಸಬೇಕು’; ರಾಜ್ಯಸಭೆಯಲ್ಲಿ ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯ

ಭಾರತದಲ್ಲಿ ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧ ಹಕ್ಕನ್ನಾಗಿ ಮಾಡಲು, ಹಂಚಿಕೆಯ ಆರೈಕೆ ಜವಾಬ್ದಾರಿಗಳನ್ನು ಒತ್ತಿಹೇಳಲು ಕಾನೂನನ್ನು ಜಾರಿಗೆ ತರಬೇಕೆಂದು ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯಿಸಿದ್ದಾರೆ. ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ತಂದೆ ಉದ್ಯೋಗ...

ಬಿಜೆಪಿ ಇತರ ರಾಜ್ಯಗಳ ಅಕ್ರಮ ಮತದಾರರನ್ನು ಸೇರಿಸುತ್ತಿದೆ : ಮಮತಾ ಬ್ಯಾನರ್ಜಿ ಆರೋಪ

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಂಗಳವಾರ (ಮಾ.31) ಬಿಜೆಪಿ ಬಿಹಾರ, ರಾಜಸ್ಥಾನ, ಹರಿಯಾಣ ಮತ್ತು ಉತ್ತರ ಪ್ರದೇಶದ ಅಕ್ರಮ ಮತದಾರರನ್ನು ರಾಜ್ಯದ ಮತದಾರರ ಪಟ್ಟಿಯಲ್ಲಿ ಸೇರಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು. ಪಶ್ಚಿಮ...