Homeಅಂಕಣಗಳುನೂರರ ನೋಟ; ದೊಡ್ಡರಂಗೇಗೌಡರು ಆತ್ಮಾವಲೋಕನ ಮಾಡಿಕೊಳ್ಳಲಿ

ನೂರರ ನೋಟ; ದೊಡ್ಡರಂಗೇಗೌಡರು ಆತ್ಮಾವಲೋಕನ ಮಾಡಿಕೊಳ್ಳಲಿ

- Advertisement -
- Advertisement -

ಅಮೆರಿಕದಲ್ಲಿ ಒಂದು ಮಾತಿದೆ Get On, Get Honour, Get Honest ಎಂದು.

ಮೊದಲು Get On ಆಗಿ, ದೊಡ್ಡರಂಗೇಗೌಡರು ಸಾಹಿತಿ ಎನಿಸಿದರು. ಸಿನಿಮಾ ಹಾಡು ಬರೆಯುವುದರಲ್ಲೂ ಹೆಸರು ಮಾಡಿದರು.

ಮುಂದಿನ ಹೆಜ್ಜೆ Get Honour. ಬಿಜೆಪಿಯ ಮೇಲ್ಮನೆ ಸದಸ್ಯರಾದರು. ಸರ್ಕಾರದ ಪುಸ್ತಕಕೊಳ್ಳುವ ಸಮಿತಿಯ ಅಧ್ಯಕ್ಷರು ಆದರು. ಅನಾಯಾಸವಾಗಿ, ಬಿಜೆಪಿಯ ಸಹಕಾರದಿಂದ ಪದ್ಮಶ್ರೀ ಪ್ರಶಸ್ತಿಯೂ ದೊರೆಯಿತು.

ಇಷ್ಟೆಲ್ಲ ಗೌರವಗಳನ್ನು ಬಿಜೆಪಿ ಸರ್ಕಾರ ದೊಡ್ಡರಂಗೇಗೌಡರಿಗೆ ಬಳುವಳಿಯಾಗಿ ಕೊಟ್ಟಿರುವಾಗ ಅವರು ಬಿಜೆಪಿಗೆ ಪ್ರತ್ಯುಪಕಾರ ಮಾಡಿ ಸಾಲ ತೀರಿಸಬೇಡವೇ? ಕೃತಜ್ಞತೆ ಸಲ್ಲಿಸಬೇಡವೇ? ಈಗ ಅವರು Honest ಆಗುವ ಪ್ರಯತ್ನದಲ್ಲಿದ್ದಾರೆ. ಯಾರಿಗೆ Honest ಆಗುವುದು? ಬಿಜೆಪಿಗಲ್ಲದೆ ಬೇರೆ ಯಾರಿಗೆ Honest ಆಗುವುದು?

ಆದರೆ ಅವರು ಅದಕ್ಕಾಗಿ ಮೊದಲು ಆಯ್ಕೆಮಾಡಿದ್ದು ಹಿಂದಿ ಭಾಷೆಯನ್ನು ರಾಷ್ಟ್ರಭಾಷೆಯಾಗಿ ಒಪ್ಪಿಕೊಳ್ಳುವ ವಿಚಾರ ಪ್ರಸ್ತಾಪಿಸುವ ಮುಖಾಂತರ. ಕನ್ನಡಿಗರು ಹೆಮ್ಮೆ ಪಡಬಹುದಾದ, ಹಾವೇರಿಯಲ್ಲಿ ನಡೆಯುವ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನವನ್ನು ಕನ್ನಡ ಸಾಹಿತ್ಯ ಪರಿಷತ್ತು ಅವರಿಗೆ ದಯಪಾಲಿಸಿತು. ಆ ಸುದ್ದಿ ತಿಳಿದ ಒಡನೆ ದೊಡ್ಡರಂಗೇಗೌಡರು ಮೊದಲಿಗೆ ಆಡಿದ ಮಾತು ಕೇಂದ್ರ ಸರ್ಕಾರದ ಹಿಂದಿ ಹೇರಿಕೆಯ ನೀತಿಯನ್ನು ಸಮರ್ಥಿಸುವ ಮೂಲಕ ಕರ್ನಾಟಕ ಹಿಂದಿಯನ್ನು ರಾಷ್ಟ್ರಭಾಷೆಯನ್ನಾಗಿ ಏಕೆ ಒಪ್ಪಿಕೊಳ್ಳಬಾರದು ಎನ್ನುವ ರೀತಿಯಲ್ಲಿ ಪ್ರಶ್ನಿಸಿದರು. ಅವರೇ ಹೇಳಿರುವಂತೆ ದಕ್ಷಿಣ ರಾಜ್ಯಗಳಲ್ಲಿ ಹಿಂದಿ ಚಲಾವಣೆಯಲ್ಲಿಲ್ಲ.

ಉತ್ತರ ಭಾರತದ ರಾಜ್ಯಗಳು ಹಿಂದಿಯನ್ನು ರಾಷ್ಟ್ರಭಾಷೆಯನ್ನಾಗಿ ಒಪ್ಪಿರುವ ಮಾತ್ರಕ್ಕೆ, ನಾವು, ಹಿಂದಿಯ ಗಂಧವೇ ಇಲ್ಲದ ದಕ್ಷಿಣ ಭಾರತದ ಜನ ಇದನ್ನು ಯಾಕೆ ಒಪ್ಪಬೇಕು ಎಂದು ಜನರು ಕೇಳಲಾರಂಭಿಸಿದರು. ದೊಡ್ಡರಂಗೇಗೌಡರ ಬಾಯಿ ಕಟ್ಟಿಹೋಯ್ತು. ಸಮ್ಮೇಳನದ ಸಮಯದಲ್ಲಿ ಕನ್ನಡಿಗರು ಒಕ್ಕೊರಲಿನಿಂದ ಸಮ್ಮೇಳಾನಾಧ್ಯಕ್ಷರನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆಂಬ ಮತ್ತು ಬೆವರಿಳಿಸುತ್ತಾರೆಂಬ ಭಯ ದೊಡ್ಡರಂಗೇಗೌಡರನ್ನು ಕಾಡಲು ಆರಂಭವಾಯಿತು. ಸರ್ಕಾರಕ್ಕೂ ಈ ಭಯ ತಾಕಿ ಸಮ್ಮೇಳನವನ್ನೇ ಮುಂದಕ್ಕೆ ಹಾಕುವ ತೀರ್ಮಾನ ಕೈಗೊಂಡಿತು. ಸಂಬಂಧಪಟ್ಟ ಮಂತ್ರಿಗಳು ಸಮ್ಮೇಳನವನ್ನು ಮುಂದಕ್ಕೆ ಹಾಕಿರುವ ಸುದ್ದಿ ಪ್ರಕಟಿಸಿದರು.

ಈ ಮಧ್ಯೆ ದೊಡ್ಡರಂಗೇಗೌಡರು, ತಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದೂ ಒಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಆ ನಂತರ ಇನ್ನೊಂದು ಸಂದರ್ಭದಲ್ಲಿ ತಮ್ಮ ನಿಲುವನ್ನು ಬದಲಾಯಿಸಿರುವುದಾಗಿ ಹೇಳಿದರು. ಬಹುಶಃ ಸಮ್ಮೇಳನದಲ್ಲಿ ಎಲ್ಲ ಕನ್ನಡಿಗರ ಒಕ್ಕೊರಲಿನ ಪ್ರಕೋಪಕ್ಕೆ ಒಳಗಾಗಬಹುದು ಎಂಬ ಹೆದರಿಕೆ ಅವರನ್ನು ಕಾಡಿರಬಹುದು.

ಸಮ್ಮೇಳನ ಮುಂದಕ್ಕೆ ಹೋಯಿತು. ತಮಗೆ ಮೋದಿ ಸರ್ಕಾರ ಪದ್ಮಶ್ರೀ ಪ್ರಶಸ್ತಿ ನೀಡಿದ್ದು ದೊಡ್ಡರಂಗೇಗೌಡರಿಗೆ ಮತ್ತೆ ಜ್ಞಾಪಕಕ್ಕೆ ಬಂದಿರಬೇಕು. ಬಿಜೆಪಿಗೆ ಕೃತಜ್ಞತೆ ಸಲ್ಲಿಸುವುದನ್ನು ಮರೆಯಬಾರದು ಎಂದುಕೊಂಡು, ಹಿಂದುತ್ವ ಪ್ರತಿಪಾದಕರ Hidden Agendaವನ್ನು ಒಂದೊಂದಾಗಿ ಸಮರ್ಥಿಸುವುದು ತಮ್ಮ ಕರ್ತವ್ಯ ಎಂದುಕೊಂಡು ಈಗ ಸಂವಿಧಾನವನ್ನು ಬದಲಿಸುವ ಪ್ರಸ್ತಾಪ ಮಾಡಿದ್ದಾರೆ. ಸಂವಿಧಾನದಲ್ಲಿ ಅಥವಾ ರಾಜ್ಯಾಂಗದಲ್ಲಿ ಏನೇನು ಬದಲಾವಣೆ ತರಬೇಕು ಎಂಬುದನ್ನು ವಿವರಿಸುವ ಧೈರ್ಯ ಅವರು ಮಾಡಲಿಲ್ಲ. ಮುಗುಮ್ಮಾಗಿ ಸಂವಿಧಾನದಲ್ಲಿ ಬದಲಾವಣೆಗೆ ತರಬೇಕು ಎಂದು ಸಾಹಿತ್ಯ ಸಮ್ಮೇಳನ ಒಂದರಲ್ಲಿ ಪ್ರಸ್ತಾಪಿಸಿದ್ದಾರೆ. ಈ ಮಾತಿಗೂ ಸಾಕಷ್ಟು ಪ್ರತಿಭಟನೆ ವ್ಯಕ್ತವಾಗಿದೆ. ಹಾವೇರಿ ಸಮ್ಮೇಳನ ನಡೆಯುವುದೇ ಆದರೆ ಕನ್ನಡಿಗರು ದೊಡ್ಡರಂಗೇಗೌಡರಿಗೆ ಚಾರಿತ್ರಿಕ ಪ್ರತಿಭಟನೆ ತೋರುತ್ತಾರೆ. ಬಿಜೆಪಿಯ ವಕ್ತಾರನಾಗಲು ಬಯಸುವ ನಾನು ಯಾಕಾದರು ಈ ಸಮ್ಮೇಳನಾಧ್ಯಕ್ಷ ಪದವಿಯನ್ನು ಒಪ್ಪಿಕೊಂಡೆ ಎಂದು ಪರಿತಪಿಸುತ್ತಾರೆ.

ದೊಡ್ಡರಂಗೇಗೌಡರು ಇನ್ನು ಮುಂದೆ ಕನ್ನಡಿಗರ ಹಿತವನ್ನು ಕಾಪಾಡುವವರಲ್ಲ. ಅವರು ಬಿಜೆಪಿಯ ಬಾಯಿ ಹರುಕ ಶಾಸಕರಂತೆ ತಾವೂ ಒಬ್ಬ ವಕ್ತಾರರಾಗಿ ಪರಿವರ್ತನೆಗೊಳ್ಳುವವರು ಎಂಬುದನ್ನು ಸಾಬೀತುಮಾಡಿದ್ದಾರೆ.
ಮನುಷ್ಯ ಎಷ್ಟೇ ಬುದ್ಧಿವಂತನಾಗಿರಲಿ, ಬದ್ಧತೆಯನ್ನುಳ್ಳವನಾಗಿರಲಿ ಸರ್ಕಾರ ನೀಡುವ ಬಿರುದು ಬಾವಲಿ ಸ್ಥಾನಮಾನಗಳಿಗೆ ಮನ ಸೋತರೆ ಎಷ್ಟು ಕ್ರೂರನಾಗಬಲ್ಲ, ದಾಸನಾಗಬಲ್ಲ ಎಂಬುದಕ್ಕೆ ಜ್ವಲಂತ ಉದಾಹರಣೆ ದೊಡ್ಡರಂಗೇಗೌಡರು.

ದೊಡ್ಡರಂಗೇಗೌಡರನ್ನು ಅನೇಕ ವರ್ಷಗಳಿಂದ ಬಲ್ಲವನು ನಾನು. ಅವರನ್ನು ಕಂಡರೆ ನನಗೆ ತುಂಬ ಗೌರವ, ಮೆಚ್ಚುಗೆ. ಅವರಿಗೆ ತಮ್ಮ ಹೆಸರು ಬೆಳಗಬೇಕು ಎಂಬ ಆಸೆ ಇತ್ತು. ಅದನ್ನೂ ನಾನು ಬಲ್ಲೆ. ಆದರೆ ಅವರು For a pot of Porridgeಗೋಸ್ಕರ ತಮ್ಮ soulಅನ್ನೇ ಮಾರಿಕೊಳ್ಳುವವರು ಎಂದು ನಾನು ಭಾವಿಸಿರಲಿಲ್ಲ. ಕನ್ನಡಿಗರೆಲ್ಲರ ಹೃನ್ಮನಗಳನ್ನು ಗೆದ್ದಿದ್ದ ಅವರಿಗೆ ಪದ್ಮಭೂಷಣ ಎಂಬ ಚಿನ್ನದ ಉರುಳು ಜನರ ಮನ್ನಣೆಗಿಂತ ಹೆಚ್ಚಾಯಿತೇ? What a fall my Countrymen!

ಕನ್ನಡದ ಜನತೆಗೆಲ್ಲರಿಗೂ ಬೇಕಾಗಿದ್ದ ಅವರು ಈಗ ಹಿಂದುತ್ವ ಪ್ರತಿಪಾದಕರ ಸಣ್ಣ ಪಂಗಡದ ಅಡಿಯಾಳಾದರೇಕೆ ಎಂಬುದು ನನ್ನನ್ನು ಬಾಧಿಸುವ ಪ್ರಶ್ನೆ.


ಇದನ್ನೂ ಓದಿ: “ಹಿಂದಿ ನಮ್ಮ ರಾಷ್ಟ್ರ ಭಾಷೆ”: ದೊಡ್ಡರಂಗೇಗೌಡರ ಹೇಳಿಕೆಗೆ ಕನ್ನಡಿಗರ ವಿರೋಧ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ದಲಿತ ವಿದ್ಯಾರ್ಥಿನಿ ಕೊಲೆ ಪ್ರಕರಣ: ಪ್ರತಿಭಟನಾಕಾರರ ಮೇಲೆ ಪೊಲೀಸ್ ಲಾಠಿಚಾರ್ಜ್; ಯೋಗಿ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ

ನವದೆಹಲಿ: ಜುಲೈ 8 ರಂದು ಮೀರತ್‌ನಲ್ಲಿ ನಡೆದ ದಲಿತ ವಿದ್ಯಾರ್ಥಿನಿಯ ಹತ್ಯೆಯನ್ನು ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದ ದಲಿತ ಕಾರ್ಯಕರ್ತರು ಮತ್ತು ಮೃತರ ಕುಟುಂಬ ಸದಸ್ಯರ ಮೇಲೆ ಉತ್ತರ ಪ್ರದೇಶ ಪೊಲೀಸರು ಭೀಕರ ಹಲ್ಲೆ,...

ಒಮಾನ್ ಕರಾವಳಿಯಲ್ಲಿ ಮತ್ತೊಂದು ಹಡಗಿನ ಮೇಲೆ ದಾಳಿ: ಭಾರತೀಯ ಪ್ರಜೆ ನಾಪತ್ತೆ, 10 ಜನರ ರಕ್ಷಣೆ: ವಿದೇಶಾಂಗ ಸಚಿವಾಲಯ ಮಾಹಿತಿ

ನವದೆಹಲಿ: ಜುಲೈ 12 ರಂದು ಒಮಾನ್ ಕರಾವಳಿಯ ಅಂತರರಾಷ್ಟ್ರೀಯ ಜಲಮಾರ್ಗದಲ್ಲಿ ಸಾಗುತ್ತಿದ್ದ ‘ಜಿಎಫ್‌ಎಸ್ ಗ್ಯಾಲಕ್ಸಿ’ (GFS Galaxy) ಎಂಬ ವಾಣಿಜ್ಯ ಹಡಗಿನ ಮೇಲೆ ನಡೆದ ದಾಳಿಯನ್ನು ಭಾರತ ಸರ್ಕಾರ ತೀವ್ರವಾಗಿ ಖಂಡಿಸಿದೆ. ಭೀಕರ...

SIR ಪ್ರಕ್ರಿಯೆಯಲ್ಲಿ ಎಐ ಬಳಕೆ, ಭಾರೀ ಪ್ರಮಾಣದಲ್ಲಿ ಮತದಾರರ ಹೆಸರು ಡಿಲೀಟ್ : ಕಳವಳ ವ್ಯಕ್ತಪಡಿಸಿದ ವಿಶ್ವಸಂಸ್ಥೆಯ ವಿಶೇಷ ವರದಿಗಾರರು

ಭಾರತೀಯ ಚುನಾವಣಾ ಆಯೋಗ (ಇಸಿಐ) ಕೈಗೊಂಡ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯು (ಎಸ್‌ಐಆರ್) ವ್ಯಾಪಕ ಪ್ರಮಾಣದಲ್ಲಿ ಮತದಾರರ ಹೆಸರುಗಳ ಅಳಿಸುವಿಕೆಗೆ ಕಾರಣವಾಗಿದೆ ಮತ್ತು ಇದು ಮುಸ್ಲಿಮರು ಹಾಗೂ ಇತರ ಅಲ್ಪಸಂಖ್ಯಾತ ಸಮುದಾಯಗಳ...

ಮಹಾರಾಷ್ಟ್ರ: ನಂದೂರ್ಬಾರ್‌ನ ಸರ್ಕಾರಿ ಹಾಸ್ಟೆಲ್‌ನಲ್ಲಿ ಕಲುಷಿತ ಆಹಾರ ಸೇವಿಸಿ 40 ವಿದ್ಯಾರ್ಥಿಗಳು ಅಸ್ವಸ್ಥ; ತೀವ್ರಗೊಂಡ ತನಿಖೆ 

ನಂದೂರ್ಬಾರ್ (ಮಹಾರಾಷ್ಟ್ರ): ಮಹಾರಾಷ್ಟ್ರದ ನಂದೂರ್ಬಾರ್ ಜಿಲ್ಲೆಯ ಶಹಾಡಾ ತಾಲೂಕಿನಲ್ಲಿರುವ ಸರ್ಕಾರಿ ಸಮಾಜ ಕಲ್ಯಾಣ ಇಲಾಖೆಯ ವಸತಿನಿಲಯದಲ್ಲಿ ಶಂಕಿತ ವಿಷಪೂರಿತ ಆಹಾರ ಸೇವಿಸಿ ಸುಮಾರು 40 ವಿದ್ಯಾರ್ಥಿಗಳು ತೀವ್ರವಾಗಿ ಅಸ್ವಸ್ಥಗೊಂಡಿರುವ ಕಳವಳಕಾರಿ ಘಟನೆ ವರದಿಯಾಗಿದೆ.  ಹಾಸ್ಟೆಲ್‌ನಲ್ಲಿ...

ಇರಾನ್‌ನ 140 ಸ್ಥಳಗಳನ್ನು ಗುರಿಯಾಗಿಸಿ ಅಮೆರಿಕದಿಂದ ದಾಳಿ : ಬಹ್ರೇನ್, ಕತಾರ್, ಯುಎಇ ಮೇಲೆ ಇರಾನ್‌ನಿಂದ ಪ್ರತಿದಾಳಿ

ಹಾರ್ಮುಝ್ ಜಲಸಂಧಿಯಲ್ಲಿ ಇರಾನ್ ನಡೆಸಿದ ದಾಳಿಯಿಂದಾಗಿ ಸರಕು ಸಾಗಣೆ ಹಡಗೊಂದು ಹೊತ್ತಿ ಉರಿದು, ಅದರಲ್ಲಿದ್ದ ಸಿಬ್ಬಂದಿ ಹಡಗು ಬಿಟ್ಟು ಹೊರಡುವಂತಾಗಿತ್ತು. ಈ ಘಟನೆಯನ್ನು ಖಂಡಿಸಿ ಅಮೆರಿಕ ಭಾನುವಾರ (ಜು.12) ಮುಂಜಾನೆ ಇರಾನ್ ಮೇಲೆ...

31 ವರ್ಷಗಳ ಹಳೇ ಸಾಲ ತೀರಿಸಲು 1200 ಕಿ.ಮೀ ಪ್ರಯಾಣಿಸಿದ ಕೇರಳದ ಇಸ್ಮಾಯಿಲ್

"ನನ್ನ ಕಣ್ಣುಗಳಿಂದ ಆನಂದಬಾಷ್ಪಗಳು ಉದುರಿದವು. ನನ್ನ ಮನಸ್ಸಿಗೆ ಅದೆಷ್ಟು ನೆಮ್ಮದಿ ಸಿಕ್ಕಿತೆಂದರೆ, ಅದನ್ನು ವಿವರಿಸಲು ಪದಗಳೇ ಸಾಲದು. ಆತನಿಗೂ ಅಷ್ಟೇ ದೊಡ್ಡ ಸಮಾಧಾನ." ಹೀಗೆ ಭಾವುಕರಾಗಿ ನುಡಿಯುತ್ತಾರೆ ಮೊಹಮ್ಮದ್ ಇಸ್ಮಾಯಿಲ್. 1995ರಲ್ಲಿ ಸೌದಿ...

ಬಂಡಾಯದ ಬಳಿಕ ಟಿಎಂಸಿಗೆ ಮತ್ತೊಂದು ಸವಾಲು : ಪಕ್ಷದ ಬ್ಯಾಂಕ್ ಖಾತೆಗಳು ಫ್ರೀಝ್

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮೂರು ಬ್ಯಾಂಕ್ ಖಾತೆಗಳಲ್ಲಿರುವ 440 ಕೋಟಿ ರೂಪಾಯಿ ಹಣವನ್ನು ಭಾಗಶಃ ಬಳಸಲು ಕಲ್ಕತ್ತಾ ಹೈಕೋರ್ಟ್ ಅನುಮತಿ ನೀಡಿದ ಮರುದಿನವೇ, ಪಶ್ಚಿಮ ಬಂಗಾಳ ಪೊಲೀಸರು...

ಮಂದಿರ ನಿರ್ಮಾಣದ ಕ್ರೆಡಿಟ್‌ಗೆ ಇದ್ದ ಯಜಮಾನಿಕೆ, ಕೊಳ್ಳೆ ಹೊಡೆದಾಗ ಯಾಕಿಲ್ಲ ಸೇವಕರೇ?

ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಮುನ್ನ ಪ್ರಧಾನಿಯವರು 11 ದಿನಗಳ ಕಾಲ ಕಠಿಣ ಉಪವಾಸ ವ್ರತ ಆಚರಿಸಿದ್ದರು, ಕೇವಲ ಎಳನೀರು ಕುಡಿದರು, ನೆಲದ ಮೇಲೆ ಮಲಗಿದರು ಎಂದು ಇಡೀ ದೇಶಕ್ಕೆ ಸಾರಲಾಗಿತ್ತು. ಅಯೋಧ್ಯೆಯಿಂದ ಹೊಸ ಕಾಲದ...

‘ಫ್ರೀ ಪ್ಯಾಲೆಸ್ತೀನ್’ ಘೋಷಣೆಯನ್ನು ತಮಾಷೆ ಮಾಡಿದ ಸೈಫ್ ಅಲಿ ಖಾನ್ – ನಿರೂಪಕಿ ಅನುಪಮಾ ಚೋಪ್ರಾ

ಸ್ಪ್ಯಾನಿಷ್ ನಟ ಜೇವಿಯರ್ ಬಾರ್ಡೆಮ್ ಅವರ "ಫ್ರೀ ಪ್ಯಾಲೆಸ್ತೀನ್" ಹೇಳಿಕೆ ಕುರಿತು ಸೈಫ್ ಅಲಿ ಖಾನ್ ಮತ್ತು ಚಲನಚಿತ್ರ ಪತ್ರಕರ್ತೆ ಅನುಪಮಾ ಚೋಪ್ರಾ ನಗುತ್ತಿರುವ ಕ್ಲಿಪ್ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ನಟನ ಅಸೂಕ್ಷ್ಮ...

ತೆಲಂಗಾಣ : ಪೋಕ್ಸೋ ಪ್ರಕರಣದ ಆರೋಪಿಯಿಂದ ಸಂತ್ರಸ್ತೆ ಸೇರಿ 6 ಜನರ ಹತ್ಯೆ

ಪೋಕ್ಸೋ ಪ್ರಕರಣದ ಆರೋಪಿಯೊಬ್ಬ ಸಂತ್ರಸ್ತೆ ಸೇರಿದಂತೆ ಒಟ್ಟು ಆರು ಜನರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್ ಮಂಡಲದಲ್ಲಿ ಶುಕ್ರವಾರ (ಜು.10) ರಾತ್ರಿ ನಡೆದಿದೆ. 28 ವರ್ಷ ವಯಸ್ಸಿನ...