Homeನ್ಯಾಯ ಪಥಪೊಲೀಸರಿಗೆ ವಿಪಾಸನಾ ಧ್ಯಾನ ತರಬೇತಿ ಅಗತ್ಯ

ಪೊಲೀಸರಿಗೆ ವಿಪಾಸನಾ ಧ್ಯಾನ ತರಬೇತಿ ಅಗತ್ಯ

- Advertisement -
- Advertisement -

ಕೊರೊನಾ ವೈರಾಣು ದಾಂಗುಡಿಯಿಟ್ಟ ಮೇಲೆ ಜಗತ್ತು ಅಲ್ಲೋಲ ಕಲ್ಲೋಲವಾಗಿದೆ ಮತ್ತು ಬದುಕಿನ ಲಯವೇ ಬದಲಾಗಿದೆ. ಇದು ಹೊಸ ರೋಗಲಕ್ಷಣವಾದ್ದರಿಂದ, ಚುಚ್ಚುಮದ್ದು ಅಥವಾ ಗುಳಿಗೆಗಳನ್ನು ಇನ್ನೂ ಕಂಡು ಹಿಡಿದಿಲ್ಲವಾದ್ದರಿಂದ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದೇ ಅದನ್ನು ತಡೆಯುವ ಸುಲಭೋಪಾಯವೆಂದಾಯಿತು. ಆದ್ದರಿಂದ ‘ಮನೆಯ ಒಳಗಿರು’ ಎಂಬುದು ಬೀಜಮಂತ್ರವಾಯಿತು.

ಬಹುತೇಕ ದೇಶಗಳಲ್ಲಿ ಸರ್ಕಾರಗಳು ಲಾಕ್‌ಡೌನ್ ಘೋಷಿಸಿದವು. ನಮ್ಮ ದೇಶವೂ ಅದನ್ನೇ ಮಾಡಿತು. ಆದರೆ ಜನರು ಕೇಳಬೇಕಲ್ಲ. ಹೊಸದರಲ್ಲಿ ಸಣ್ಣಪುಟ್ಟ ನೆಪವೊಡ್ಡಿ ಕಾರು, ಬೈಕುಗಳಲ್ಲಿ ಬೀದಿಗಿಳಿಯಲಾರಂಭಿಸಿದರು. ಆಶ್ಚರ್ಯವೆಂದರೆ ಜಗತ್ತಿನ ಬೇರೆಲ್ಲೂ ಕಾಣಿಸದಂತಹ ದೃಶ್ಯಗಳು ಭಾರತದ ನಗರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದವು. ನಮ್ಮ ಪೊಲೀಸರು ಬೀದಿಯಲ್ಲಿ ಕಂಡಕಂಡವರನ್ನು ತಮ್ಮ ಲಾಠಿಗಳಿಂದ ಥಳಿಸುತ್ತಿದ್ದರು.

ಎಷ್ಟರಮಟ್ಟಿಗೆಂದರೆ, ಕಚೇರಿಗೆಂದು ಹೊರಟಿದ್ದ ಆರೋಗ್ಯ ಇಲಾಖೆಯಂಥ ತುರ್ತುಸೇವೆಯ ಅಧಿಕಾರಿಯನ್ನು ಗುರುತಿನ ಚೀಟಿ ತೋರಿಸಿದರೂ ಬಿಡದೆ ಮನಬಂದಂತೆ ಥಳಿಸಿ ಆಸ್ಪತ್ರೆಗೆ ದಾಖಲಾಗುವಂತೆ ಮಾಡಿದರು.

ಹೀಗೆ ಸಾರ್ವಜನಿಕವಾಗಿ ಹೊಡೆಯುವುದು ಕಾನೂನುಬದ್ಧವಲ್ಲ ಮತ್ತು ಮಾನವ ಹಕ್ಕುಗಳ ಉಲ್ಲಂಘನೆ ಎಂದು ಅವರಿಗೂ ತಿಳಿದಿದೆ. ಆದರೂ ಹೊಡೆಯುತ್ತಿದ್ದಾರೆ. ಜನರು ಹೊರಬರದಂತೆ ಭಯ ಹುಟ್ಟಿಸುವ ಉದ್ದೇಶದಿಂದಲೇ ಪೊಲೀಸರು ಹಾಗೆ ಮಾಡಿದ್ದರೂ ಹಿಂಸೆ ಅಲ್ಲಿ ತಾಂಡವವಾಡಿದೆ. ಅನೇಕರು ದೈಹಿಕ ನ್ಯೂನತೆಗೆ ಒಳಗಾಗಿರುವ ಸಾಧ್ಯತೆಗಳಿವೆ. ಕೆಲವರು ಎಷ್ಟು ರಭಸದಿಂದ ಹೊಡೆಯುತ್ತಿದ್ದರೆಂದರೆ ತಮ್ಮೆಲ್ಲ ಬಿರುಸನ್ನೂ ಒಟ್ಟುಗೂಡಿಸಿಕೊಂಡು ಲಾಠಿಯನ್ನು ಬೀಸುತ್ತಿದ್ದರು. ಹೀಗೆ ಹೇಳದೆ ಕೇಳದೆ, ಮುಖವನ್ನೂ ನೋಡದೆ ಬಾರಿಸುತ್ತಿದ್ದರು ಎಂದರೆ ವಿಕೃತಾನಂದವನ್ನು ಪಡೆಯುತ್ತಿದ್ದರು ಎಂದೇ ಅರ್ಥೈಸಬೇಕಾಗುತ್ತದೆ.

ಹಾಗೆಂದ ಮಾತ್ರಕ್ಕೆ ಹೊಡೆಯುತ್ತಿದ್ದವರು ಕೆಟ್ಟವರೆಂದೇನೂ ಅಲ್ಲ. ಮನಸ್ಸನ್ನು ಸ್ಥಿಮಿತದಲ್ಲಿಟ್ಟುಕೊಳ್ಳಲು ಎಲ್ಲರಿಗೂ ಸಾಧ್ಯವಾಗುವುದಿಲ್ಲ. ಕೋಪವನ್ನು ಉದ್ದೀಪಿಸಲು ಕೆಲವರಿಗೆ ಒಂದು ಸಣ್ಣ ಕಾರಣ ಸಾಕು. ವಸ್ತುಸ್ಥಿತಿಯನ್ನು ನೋಡಿ, ವಿಚಾರ ಮಾಡುವಷ್ಟು ತಾಳ್ಮೆ ಕೆಲವರಲ್ಲಿರುವುದಿಲ್ಲ. ಮನುಷ್ಯನೊಳಗಿರುವ ರಾಗ, ದ್ವೇಷಾದಿಗಳನ್ನು ಹತೋಟಿಯಲ್ಲಿಟ್ಟುಕೊಳ್ಳಲು ತರಬೇತಿಯ ಅಗತ್ಯವಿದೆ. ಅದನ್ನು ವಿಪಸ್ಸನಾ ಧ್ಯಾನ ನೀಡುತ್ತದೆ. ಸಾರ್ವಜನಿಕ ಸೇವೆಯಲ್ಲಿರುವವರಿಗೆ ಅದರಲ್ಲೂ ಮುಖ್ಯವಾಗಿ ಪೊಲೀಸರಿಗೆ ಅದರ ಅಗತ್ಯ ಹೆಚ್ಚು. ಯಾಕೆಂದರೆ ಅವರು ಯಾವಾಗಲೂ ಒತ್ತಡದಲ್ಲಿ ಕಾರ್ಯ ನಿರ್ವಹಿಸುತ್ತಾರೆ.

ಪಾಶ್ಚಾತ್ಯ ದೇಶಗಳಲ್ಲಿ ಇತ್ತೀಚೆಗೆ ಒಂದು ಹೊಸ ಟ್ರೆಂಡ್ ಶುರುವಾಗಿದೆ. ಒತ್ತಡ ನಿವಾರಣೆಗೆ ಅವರು ವಿಪಸ್ಸನಾ ಧ್ಯಾನದ ಮೊರೆ ಹೋಗುತ್ತಿದ್ದಾರೆ. ಕೆನಡಾ ದೇಶದ ಪೊಲೀಸರಿಗೆ ಹತ್ತು ದಿನಗಳ ಅವಧಿಯ ವಿಪಸ್ಸನಾ ಕಲಿಸಲಾಗುತ್ತಿದೆ. ಅಮೇರಿಕಾದಲ್ಲಿ ಜೈಲಿನಲ್ಲಿರುವ ಖೈದಿಗಳಿಗೂ ವಿಪಸ್ಸನಾ ಧ್ಯಾನ ಕಲಿಸುತ್ತಿದ್ದಾರೆ.

ಇತ್ತೀಚೆಗೆ ಒಂದು ಸಣ್ಣ ವೀಡಿಯೊ ನೋಡಿ ಅಚ್ಚರಿಗೊಂಡೆ. ಅದು ಬ್ರೆಜಿಲ್ ದೇಶದ ಒಂದು ಜೈಲಿನಲ್ಲಿ ಖೈದಿಗಳು ವಿಪಸ್ಸನಾ ಧ್ಯಾನ ಮಾಡುತ್ತಿರುವ ಕಿರುಚಿತ್ರ. ದಕ್ಷಿಣ ಅಮೆರಿಕಾದ ಹೆಚ್ಚಿನ ದೇಶಗಳು ಕ್ಷಿಪ್ರಕ್ರಾಂತಿಗಳಿಂದ ಸರ್ಕಾರ ರಚಿಸುತ್ತವೆ. ಮಾಫಿಯಾಗಳಿವೆ, ಡ್ರಗ್ಸ್ನ ಹಾವಳಿಯಿದೆ. ಕೊಲೆ, ಸುಲಿಗೆ, ಅತ್ಯಾಚಾರ, ದರೋಡೆ ಅಲ್ಲಿ ಮಾಮೂಲು ಘಟನೆಗಳು. ಈ ಎಲ್ಲ ಕಾರಣಗಳಿಂದ ಅಲ್ಲಿನ ಜೈಲುಗಳು ತುಂಬಿ ತುಳುಕುತ್ತವೆ. ಹೆಚ್ಚಿನ ಜೈಲುಗಳನ್ನು ಸೇನೆಗಳು ನೋಡಿಕೊಳ್ಳುತ್ತವೆ. ಆದರೂ ಜೈಲಿನ ಒಳಗೂ ಅದೇ ಕತೆ. ಕೊಲೆ, ಸುಲಿಗೆ, ಮಾಫಿಯಾ ಚಟುವಟಿಕೆ, ಡ್ರಗ್ಸ್ ಇತ್ಯಾದಿ. ಖೈದಿಗಳನ್ನು ತಹಬದಿಗೆ ತರಲು ಅವರಿಗೆ ವಿಪಸ್ಸನಾ ಧ್ಯಾನವನ್ನು ಕಲಿಸುತ್ತಿದ್ದಾರೆ!

ಅವರ ಅನುಭವಗಳನ್ನು ಅವರವರ ಬಾಯಲ್ಲಿಯೇ ಕೇಳಬೇಕು. ಒಬ್ಬ ಹೇಳುತ್ತಿದ್ದ; ಕೋಪ ಹೇಗೆ ಶಮನವಾಗುತ್ತದೆ? ನಮ್ಮೊಳಗಿರುವ ಕಲ್ಮಶವನ್ನು ತೆಗೆದುಹಾಕುವುದರಿಂದ. ಅದರ ಕಾರಣ ಮತ್ತು ಪರಿಣಾಮಗಳನ್ನು ಅರಿಯುವುದರಿಂದ ಅದು ಸಾಧ್ಯ. ಎಲ್ಲ ಕೆಡುಕುಗಳ ಮೂಲ ದ್ವೇ಼ಷ. ಅದನ್ನು ಸ್ವಲ್ಪಸ್ವಲ್ಪವಾಗಿ, ನಿಧನಿಧಾನವಾಗಿ ಹೊರಹಾಕಬೇಕು. ಲೋಭದಿಂದ ಬಿಡುಗಡೆ ಪಡೆಯಬೇಕು. ಆಗ ಅವಿದ್ಯೆ ತಂತಾನೆ ದೂರವಾಗುತ್ತದೆ. ಇವುಗಳನ್ನು ಇತರ ಧರ್ಮಗಳು ಹೇಳುವುದಿಲ್ಲವೆಂದಲ್ಲ.

ಆದರೆ ಬುದ್ಧ ಅವುಗಳ ಅನುಷ್ಠಾನಕ್ಕೆಂದು ಒಂದು ಪ್ರಯೋಗವನ್ನು ಕಂಡುಹಿಡಿದಿದ್ದಾನೆ. ಅದೇ ವಿಪಸ್ಸನಾ ಧ್ಯಾನ. ಬರ್ಮಾ ಮೂಲದ ಎಸ್. ಎನ್. ಗೊಯೆಂಕಾರವರು ಈ ಧ್ಯಾನಮಾರ್ಗವನ್ನು ಧರ್ಮದ ಆಚೆಗೆ ನಿಂತು ಜಗತ್ತಿನಾದ್ಯಂತ ಪ್ರಚುರಪಡಿಸಿದ್ದಾರೆ. ಬೌದ್ಧಧರ್ಮದ ಹಂಗಿಲ್ಲದೆ ಜನರು ಇದನ್ನು ಕಲಿಯುತ್ತಿದ್ದಾರೆ. ಇಲ್ಲಿ ಮತಾಂತರದ ಪ್ರಶ್ನೆಯಿಲ್ಲ. ದೇವರ ಗೊಡವೆಯಿಲ್ಲ. ಆದ್ದರಿಂದ ದೈವನಿಂದನೆಯ ಆರೋಪವಿಲ್ಲ. ಕೊನೆಗೆ ಬುದ್ಧನನ್ನು ಸ್ಮರಿಸದಿದ್ದರೂ ಆಕ್ಷೇಪವಿಲ್ಲ. ವಿಪಸ್ಸನಾ ಮನಸ್ಸನ್ನು ತಿಳಿಗೊಳಿಸುತ್ತದೆ ಮತ್ತು ಇರುವುದನ್ನು ಇರುವ ಹಾಗೆ ನೋಡುವುದನ್ನು ಕಲಿಸುತ್ತದೆ.

ಬಹುತೇಕ ಎಲ್ಲ ರಾಷ್ಟ್ರಗಳಲ್ಲಿಯೂ ಈಗ ವಿಪಸ್ಸನಾ ಧ್ಯಾನ ಕೇಂದ್ರಗಳಿವೆ. ಒತ್ತಡದಲ್ಲಿ ಕೆಲಸ ಮಾಡುವ ಎಲ್ಲ ಸಾರ್ವಜನಿಕ ಸೇವೆಯ ಸಿಬ್ಬಂದಿ ಮತ್ತು ಅಧಿಕಾರಿಗಳಿಗೆ ವಿಶೇಷವಾಗಿ ಪೊಲೀಸರಿಗೆ ಸರ್ಕಾರಗಳೇ ಭಾರತ ಮೂಲವಾದ ಈ ಧ್ಯಾನ ಮಾರ್ಗವನ್ನು ಕಲಿಸಲು ಮುಂದಾಗಬೇಕು.

-ಡಾ. ಮೂಡ್ನಾಕೂಡು ಚಿನ್ನಸ್ವಾಮಿ


ಓದಿ:

ಪ್ರಜಾಪ್ರಭುತ್ವ v/s ಜಾತಿಪ್ರಭುತ್ವ Democracy v/s Castocracy : ಡಾ. ಮೂಡ್ನಾಕೂಡು ಚಿನ್ನಸ್ವಾಮಿ


 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...