Homeಕರ್ನಾಟಕಅಸಹ್ಯ ಹುಟ್ಟಿಸುವ ಪ್ರತಾಪ್ ಸಿಂಹನ ಲೈಂಗಿಕ ಹಗರಣ

ಅಸಹ್ಯ ಹುಟ್ಟಿಸುವ ಪ್ರತಾಪ್ ಸಿಂಹನ ಲೈಂಗಿಕ ಹಗರಣ

- Advertisement -
- Advertisement -

ತೇಜಸ್ವಿ ಸೂರ್ಯನ ಸೆಕ್ಸ್ ಹಗರಣದ ಬಗ್ಗೆ ಸಂತ್ರಸ್ತರು ದೂರಿದ್ದು ಇದೇ ವ್ಯಕ್ತಿಗೆ! ಆದರೆ ಈ ವ್ಯಕ್ತಿಯ ಕಥೆ ಕೇಳಿದರೆ ಬೆಚ್ಚಿ ಬೀಳುತ್ತೀರಿ?

ಏಪ್ರಿಲ್ 16ರ ಸಂಜೆಯ ಹೊತ್ತಿಗೆ ಮೈಸೂರು ಭಾಗದ ಕೆಲವರ ಮೊಬೈಲ್‍ಗೆ ಎರಡು ಆಡಿಯೋಗಳು, ಹುಡುಗಿಯೊಬ್ಬಳು ಹಸ್ತಾಕ್ಷರದಲ್ಲಿ ಬರೆದ 8 ಪುಟಗಳ ಪತ್ರ ಮತ್ತು ಸ್ಕ್ರೀನ್‍ಷಾಟ್‍ಗಳು ತಲುಪಿದವು. ಅದನ್ನು ಮೇಲ್ನೋಟಕ್ಕೆ ನೋಡಿದವರು ಕೂಡಲೇ ಇನ್ನಷ್ಟು ಜನರಿಗೆ ಫಾರ್ವರ್ಡ್ ಮಾಡಿದರು. ನಂತರ ಸಮಯ ಸಿಕ್ಕಾಗ ಆ ಸ್ಕ್ರೀನ್‍ಷಾಟ್‍ಗಳನ್ನು ಓದಿ, ಆಡಿಯೋ ಕೇಳಿದರು. ತೀರಾ ಅಶ್ಲೀಲವಾಗಿದ್ದ ಕಾರಣಕ್ಕೆ, ಮೊದಲು ಫಾರ್ವರ್ಡ್ ಮಾಡಿದ್ದಕ್ಕೆ ಮುಜುಗರ ಪಟ್ಟುಕೊಂಡು, ಕ್ಷಮೆ ಕೇಳಿ ಮತ್ತೆ ಮೆಸೇಜ್ ಮಾಡಿದರು.

ಆ ವಾಟ್ಸಾಪ್ ಫಾರ್ವರ್ಡ್‍ಗಳಲ್ಲಿದ್ದದ್ದು ಮೈಸೂರಿನ ಬಿಜೆಪಿ ಸಂಸದ ಪ್ರತಾಪ್ ಸಿಂಹರ ಲೈಂಗಿಕ ಪುರಾಣ. ಆಡಿಯೋ ಕೇಳಿದ ಎಲ್ಲರಿಗೂ ಅದು ಪ್ರತಾಪ್ ಸಿಂಹರದ್ದೇ ಎಂಬುದರಲ್ಲಿ ಯಾವ ಸಂದೇಹವೂ ಉಳಿಯುವುದಿಲ್ಲ. ಅದರ ಆಚೆಗೆ ಹಸ್ತಾಕ್ಷರದಲ್ಲಿರುವ ಪತ್ರದಲ್ಲಿ ಮಾಡಿರುವ ಆರೋಪಗಳನ್ನು ನೋಡಿದರೆ, ಅಥವಾ ಆಡಿಯೋ ಕೇಳಿದರೆ ಎರಡು ವಿಚಾರಗಳು ಸ್ಪಷ್ಟವಾಗುತ್ತದೆ. ಒಂದು, ಸಂಬಂಧಿಸಿದ ಹುಡುಗಿಯೂ ಸೋಕಾಲ್ಡ್ ಪ್ರೇಮ ಅಥವಾ ಸಂಬಂಧದಲ್ಲಿ ಒಪ್ಪಿಗೆಯಿಂದಲೇ ಆತನ ಜೊತೆಗೆ ಲೈಂಗಿಕ ಸಂಬಂಧ ಇಟ್ಟುಕೊಂಡಿದ್ದಾರೆ ಮತ್ತು ಪ್ರತಾಪ್ ಸಿಂಹ ಸಾರ್ವಜನಿಕವಾಗಿ ಚಾಲ್ತಿಯಲ್ಲಿರುವ ಮೌಲ್ಯಗಳಿಗನುಸಾರ ಅತ್ಯಂತ ಅನೈತಿಕವಾದ ಮತ್ತು ವಿಕೃತವಾದ ಲೈಂಗಿಕ ಆಸಕ್ತಿಗಳನ್ನು ಇಟ್ಟುಕೊಂಡಿದ್ದಾರೆ. ಏಕಕಾಲದಲ್ಲಿ ಹಲವರ ಜೊತೆಗೆ ಲೈಂಗಿಕ ಸಂಬಂಧಗಳನ್ನು ಇಟ್ಟುಕೊಳ್ಳುವ ಚಾಳಿ ಇರುವ ಒಂದು ವರ್ತುಲವನ್ನೇ ಅವರು ಬಿಲ್ಡ್ ಮಾಡಿಕೊಂಡಿದ್ದಾರೆ.

ಇವೆಲ್ಲವನ್ನೂ ಅವರವರ ವ್ಯಕ್ತಿಗತ ವಿಚಾರ ಎಂದು ತಳ್ಳಿ ಹಾಕಲಾಗದು.
ಕಾರಣವಿಷ್ಟೇ. ಪ್ರತಾಪ್ ಸಂಸತ್ ಸದಸ್ಯನಂತಹ ಸ್ಥಾನದಲ್ಲಿರುವ ವ್ಯಕ್ತಿ. ಈ ಸ್ಥಾನವೇ ಹಲವರನ್ನು ಆಕರ್ಷಿಸುವ, ಆಮಿಷ ಒಡ್ಡುವ, ಬೆದರಿಕೆ ಒಡ್ಡುವ ಸಾಧ್ಯತೆಗಳನ್ನು ಕಲ್ಪಿಸಿಕೊಡುತ್ತದೆ. ಹಾಗಾಗಿ ಅದರ ಎಲ್ಲಾ ಬಗೆಯ ದುರ್ಬಳಕೆ ಮಾಡಿಕೊಂಡು ಅಮಾಯಕರಾದ ಎಷ್ಟೋ ಹುಡುಗಿಯರನ್ನು ಬಲೆಗೆ ಕೆಡವಿಕೊಂಡಿರುವ ಸಾಧ್ಯತೆ ಇದ್ದೇ ಇರುತ್ತದೆ. ಅದನ್ನು ಪ್ರತಾಪ್ ಸಿಂಹ ಮಾಡಿದ್ದಾರೆ ಎಂದು ನಂಬುವಂತಹ ಸಾಕ್ಷ್ಯಾಧಾರಗಳು ಸದರಿ ವಾಟ್ಸಾಪ್ ಫಾರ್ವರ್ಡ್‍ಗಳಲ್ಲಿವೆ.

ಎರಡನೆಯದಾಗಿ, ಭಾರತೀಯ ಸಂಸ್ಕೃತಿ, ಸಚ್ಚಾರಿತ್ರ್ಯ ಇತ್ಯಾದಿಗಳ ಕುರಿತು ಮಾತನಾಡುವ ಆರೆಸ್ಸೆಸ್ ಜೊತೆಗೆ ಅಭಿಮಾನ ಪೂರ್ವಕ ಹೆಮ್ಮೆಯ ಸಂಬಂಧವನ್ನಿಟ್ಟುಕೊಂಡಿರುವುದಾಗಿ ಘೋಷಿಸುವ ಇಂತಹ ವ್ಯಕ್ತಿಗಳು ಹೀಗೇಕೆ ಎಂಬ ಪ್ರಶ್ನೆ ಏಳುತ್ತದೆ. ಮಾತಿಗೂ, ಕೃತಿಗೂ ಸಂಬಂಧವೇ ಇಲ್ಲ. ಅದರಲ್ಲೂ ಹೆಣ್ಣನ್ನು ಇವರುಗಳು ಭೋಗದ ವಸ್ತುವೆಂದಲ್ಲದೇ ಬೇರ್ಯಾವ ರೀತಿಯಲ್ಲೂ ನೋಡುವಂತೆ ಕಾಣುವುದಿಲ್ಲ.
ಬಹಳಷ್ಟು ಜನರಿಗೆ ಗೊತ್ತಿಲ್ಲದ ಸಂಗತಿಯೇನೆಂದರೆ, ರಾಷ್ಟ್ರೀಯ ಸ್ವಯಂಸೇವಕ ಸಂಘದಲ್ಲಿ ಮಹಿಳೆಯರಿಗೆ ಸದಸ್ಯತ್ವವೇ ಇಲ್ಲ. ರಾಷ್ಟ್ರ ಸೇವಿಕಾ ಸಂಘ ಇದೆಯಲ್ಲಾ ಎಂದು ಯಾರಾದರೂ ಕೇಳಬಹುದು. ಭಜರಂಗದಳ, ವಿಶ್ವ ಹಿಂದೂ ಪರಿಷತ್ ರೀತಿಯಲ್ಲಿ ಅದೂ ಒಂದು ಅಂಗಸಂಸ್ಥೆ ಮಾತ್ರವೇ ಆಗಿದೆ. ಕಾಂಗ್ರೆಸ್ ಅಥವಾ ಸಿಪಿಎಂ ಥರದ ಪಕ್ಷಗಳೂ ಹಾಗೆಯೇ ಅಲ್ಲವೇ ಎಂದು ಕೆಲವರು ಅಮಾಯಕ ಪ್ರಶ್ನೆಯನ್ನು ಹಾಕಬಹುದು. ಇಲ್ಲ, ಕಾಂಗ್ರೆಸ್ ಅಥವಾ ಸಿಪಿಎಂ ಪಕ್ಷಗಳಲ್ಲಿ ಮಹಿಳೆಯರೂ ಸದಸ್ಯರು. ಅದರಲ್ಲಿ ತಾರತಮ್ಯ ಇರುವುದಿಲ್ಲ. ಅದರ ಅಧ್ಯಕ್ಷರೂ ಆಗಬಹುದು. ಅದಲ್ಲದೇ ಮಹಿಳಾ ವಿಭಾಗವೂ ಇರುತ್ತದೆ ಅಷ್ಟೇ.

ಆದರೆ, ಇಲ್ಲಿ ಆರೆಸ್ಸೆಸ್‍ನ ನಾಯಕರಾಗುವುದು ಹೋಗಲಿ, ಸದಸ್ಯೆಯರಾಗೂ ಮಹಿಳೆಯರು ಇರುವಂತಿಲ್ಲ. ಮಹಿಳೆಯರು ಎರಡನೆಯ ದರ್ಜೆಯ ಪ್ರಜೆಗಳು, ಅವರು ಮನೆಗೆಲಸ ಮಾಡುವುದಕ್ಕೆ, ಸೇವೆ ಮಾಡುವುದಕ್ಕೆ, ಪುರುಷರ ಭೋಗಕ್ಕೆ ಬಳಕೆಯಾಗಲು ಅಷ್ಟೇ ಇದ್ದಾರೆ ಎಂಬ ಮನೋಭಾವ ಇದ್ದಾಗ, ಅದರ ಸುತ್ತಲಿನ ಪರಿವಾರ ಹೀಗೇ ಇರಲು ಸಾಧ್ಯ. ಹಾಗಾಗಿಯೇ ಕರ್ನಾಟಕವೊಂದರಲ್ಲೇ ಇಂತಹವರ (ಇದು ಆರೆಸ್ಸೆಸ್‍ನ ಲೈಂಗಿಕ ಹಗರಣಗಳ ಪಟ್ಟಿಯಲ್ಲ, ಕಳೆದ 10 ವರ್ಷಗಳಿಂದ ಕರ್ನಾಟಕದಲ್ಲಿ ಸಾರ್ವಜನಿಕವಾಗಿ ಚರ್ಚೆಯಾಗಿರುವ ಬಿಜೆಪಿ ನಾಯಕರ ಲೈಂಗಿಕ ಹಗರಣಗಳಲ್ಲಿ ಭಾಗಿಯಾಗಿರುವ ನಾಯಕರ ಪಟ್ಟಿ) ದೊಡ್ಡ ಪಟ್ಟಿ ಸಿಗುತ್ತದೆ. ಹಾಲಪ್ಪ, ರಘುಪತಿ ಭಟ್, ರೇಣುಕಾಚಾರ್ಯ, ಸಿದ್ದು ಸವಡಿ, ಕೃಷ್ಣ ಪಾಲೇಮಾರ್, ಸಿ.ಸಿ.ಪಾಟೀಲ, ತೇಜಸ್ವಿ ಸೂರ್ಯ, ಪ್ರತಾಪ್ ಸಿಂಹ.
ಇದು ಇಷ್ಟಕ್ಕೇ ಸೀಮಿತವಾಗಿರದು. ಏಕೆಂದರೆ ತೇಜಸ್ವಿ ಸೂರ್ಯನಿಂದ ಕಿರುಕುಳಕ್ಕೆ ಒಳಗಾದ ಇಬ್ಬರು ಮಹಿಳೆಯರು ತಮಗೆ ನೆರವಾಗಬೇಕೆಂದು ಪ್ರತಾಪ್ ಸಿಂಹನ ಮೊರೆ ಹೋಗಿದ್ದಾರೆಂದು ಈಗಾಗಲೇ ಬಹಿರಂಗವಾಗಿದೆ. ಯಾವ ಸಮಸ್ಯೆಯ ಕುರಿತು ಯಾರ ಬಳಿ ಹೋಗಿದ್ದಾರೆಂದು ನೋಡಿದರೆ ಆಘಾತವಾಗುತ್ತದೆ.

ಇಂತಹ ಹಗರಣಗಳು ಬಿಜೆಪಿಗೆ ಮಾತ್ರ ಸೀಮಿತವಾಗಿದೆಯೆಂದು ಅರ್ಥವಲ್ಲ. ಉಳಿದ ಪಕ್ಷಗಳಲ್ಲೂ ನಡೆದಿರುವ ಎಲ್ಲಾ ಹಗರಣಗಳೂ ಹೊರಗೆ ಬಂದಿವೆಯೆಂದೂ ಹೇಳಲಾಗದು. ಆದರೆ, ಬಿಜೆಪಿಯು ನೆಹರೂರಂಥ ನಾಯಕರು ಕುರಿತು ಸುಳ್ಳು ಸುದ್ದಿ, ಫೋಟೋಷಾಪ್ ಫೋಟೋಗಳನ್ನು ಸೃಷ್ಟಿ ಮಾಡುವ ದೊಡ್ಡ ಪಡೆಯನ್ನೇ ಹೊಂದಿದೆ. ತಮ್ಮ ಒಳಗೇ ಅಸಹ್ಯಕರ ಹುಳುಕುಗಳನ್ನು ಇಟ್ಟುಕೊಂಡಿದೆ.
ಬಿಜೆಪಿಯ ಯುವನಾಯಕರುಗಳಿಗೆ ಕೂಡಲೇ ಸೆಕ್ಸ್ ತಜ್ಞರಿಂದ ಕೌನ್ಸೆಲಿಂಗ್‍ನ ಅಗತ್ಯವಿದೆ. ಅದಕ್ಕೆ ವ್ಯವಸ್ಥೆ ಆಗದಿದ್ದರೆ, ಅವರು ದೊಡ್ಡ ಸಮಸ್ಯೆಯನ್ನು ಉಂಟು ಮಾಡಲಿದ್ದಾರೆ.

ಅಪ್‍ಡೇಟ್:
ಮೇಲೆ ಹೇಳಲಾದ ವಾಟ್ಸಾಪ್ ಫಾರ್ವರ್ಡ್‍ಗಳೊಂದಿಗೆ (ಪತ್ರಿಕೆಗೆ ಆ ಫೋಟೋಗಳು ಬಂದಿರಲಿಲ್ಲ) ಪ್ರತಾಪ್ ಸಿಂಹ ಒಬ್ಬ ಹುಡುಗಿಯ ಜೊತೆಗೆ ಇರುವ ಫೋಟೋ ಸಹಾ ಇತ್ತೆಂದು ಹೇಳಲಾಗುತ್ತಿದೆ. ಆ ಫೋಟೋದಲ್ಲಿರುವ ಹುಡುಗಿ ಜಿಲ್ಲಾ ಚುನಾವಣಾಧಿಕಾರಿಗಳಿಗೆ ಸದರಿ ಸುದ್ದಿ ಸುಳ್ಳೆಂದು ದೂರು ನೀಡಿರುವ ಕುರಿತು ವರದಿಯಾಗಿದೆ. ಆದರೆ, ಆಡಿಯೋದಲ್ಲಿ ಮಾತಾಡಿರುವ ಹುಡುಗಿ ಮತ್ತು ಈ ಹುಡುಗಿ ಒಬ್ಬರೇನಾ ಬೇರೆಯವರಾ ಎಂಬುದು ಗೊತ್ತಿಲ್ಲ.
ಈ ಕುರಿತು ನಡೆಯುವ ಇತರ ಬೆಳವಣಿಗೆಗಳ ಕುರಿತು ಈ ಪೇಜ್‍ನಲ್ಲಿ ನಂತರ ಅಪ್‍ಡೇಟ್ ಮಾಡಲಾಗುವುದು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...