Homeಕರ್ನಾಟಕಅಸಹ್ಯ ಹುಟ್ಟಿಸುವ ಪ್ರತಾಪ್ ಸಿಂಹನ ಲೈಂಗಿಕ ಹಗರಣ

ಅಸಹ್ಯ ಹುಟ್ಟಿಸುವ ಪ್ರತಾಪ್ ಸಿಂಹನ ಲೈಂಗಿಕ ಹಗರಣ

- Advertisement -
- Advertisement -

ತೇಜಸ್ವಿ ಸೂರ್ಯನ ಸೆಕ್ಸ್ ಹಗರಣದ ಬಗ್ಗೆ ಸಂತ್ರಸ್ತರು ದೂರಿದ್ದು ಇದೇ ವ್ಯಕ್ತಿಗೆ! ಆದರೆ ಈ ವ್ಯಕ್ತಿಯ ಕಥೆ ಕೇಳಿದರೆ ಬೆಚ್ಚಿ ಬೀಳುತ್ತೀರಿ?

ಏಪ್ರಿಲ್ 16ರ ಸಂಜೆಯ ಹೊತ್ತಿಗೆ ಮೈಸೂರು ಭಾಗದ ಕೆಲವರ ಮೊಬೈಲ್‍ಗೆ ಎರಡು ಆಡಿಯೋಗಳು, ಹುಡುಗಿಯೊಬ್ಬಳು ಹಸ್ತಾಕ್ಷರದಲ್ಲಿ ಬರೆದ 8 ಪುಟಗಳ ಪತ್ರ ಮತ್ತು ಸ್ಕ್ರೀನ್‍ಷಾಟ್‍ಗಳು ತಲುಪಿದವು. ಅದನ್ನು ಮೇಲ್ನೋಟಕ್ಕೆ ನೋಡಿದವರು ಕೂಡಲೇ ಇನ್ನಷ್ಟು ಜನರಿಗೆ ಫಾರ್ವರ್ಡ್ ಮಾಡಿದರು. ನಂತರ ಸಮಯ ಸಿಕ್ಕಾಗ ಆ ಸ್ಕ್ರೀನ್‍ಷಾಟ್‍ಗಳನ್ನು ಓದಿ, ಆಡಿಯೋ ಕೇಳಿದರು. ತೀರಾ ಅಶ್ಲೀಲವಾಗಿದ್ದ ಕಾರಣಕ್ಕೆ, ಮೊದಲು ಫಾರ್ವರ್ಡ್ ಮಾಡಿದ್ದಕ್ಕೆ ಮುಜುಗರ ಪಟ್ಟುಕೊಂಡು, ಕ್ಷಮೆ ಕೇಳಿ ಮತ್ತೆ ಮೆಸೇಜ್ ಮಾಡಿದರು.

ಆ ವಾಟ್ಸಾಪ್ ಫಾರ್ವರ್ಡ್‍ಗಳಲ್ಲಿದ್ದದ್ದು ಮೈಸೂರಿನ ಬಿಜೆಪಿ ಸಂಸದ ಪ್ರತಾಪ್ ಸಿಂಹರ ಲೈಂಗಿಕ ಪುರಾಣ. ಆಡಿಯೋ ಕೇಳಿದ ಎಲ್ಲರಿಗೂ ಅದು ಪ್ರತಾಪ್ ಸಿಂಹರದ್ದೇ ಎಂಬುದರಲ್ಲಿ ಯಾವ ಸಂದೇಹವೂ ಉಳಿಯುವುದಿಲ್ಲ. ಅದರ ಆಚೆಗೆ ಹಸ್ತಾಕ್ಷರದಲ್ಲಿರುವ ಪತ್ರದಲ್ಲಿ ಮಾಡಿರುವ ಆರೋಪಗಳನ್ನು ನೋಡಿದರೆ, ಅಥವಾ ಆಡಿಯೋ ಕೇಳಿದರೆ ಎರಡು ವಿಚಾರಗಳು ಸ್ಪಷ್ಟವಾಗುತ್ತದೆ. ಒಂದು, ಸಂಬಂಧಿಸಿದ ಹುಡುಗಿಯೂ ಸೋಕಾಲ್ಡ್ ಪ್ರೇಮ ಅಥವಾ ಸಂಬಂಧದಲ್ಲಿ ಒಪ್ಪಿಗೆಯಿಂದಲೇ ಆತನ ಜೊತೆಗೆ ಲೈಂಗಿಕ ಸಂಬಂಧ ಇಟ್ಟುಕೊಂಡಿದ್ದಾರೆ ಮತ್ತು ಪ್ರತಾಪ್ ಸಿಂಹ ಸಾರ್ವಜನಿಕವಾಗಿ ಚಾಲ್ತಿಯಲ್ಲಿರುವ ಮೌಲ್ಯಗಳಿಗನುಸಾರ ಅತ್ಯಂತ ಅನೈತಿಕವಾದ ಮತ್ತು ವಿಕೃತವಾದ ಲೈಂಗಿಕ ಆಸಕ್ತಿಗಳನ್ನು ಇಟ್ಟುಕೊಂಡಿದ್ದಾರೆ. ಏಕಕಾಲದಲ್ಲಿ ಹಲವರ ಜೊತೆಗೆ ಲೈಂಗಿಕ ಸಂಬಂಧಗಳನ್ನು ಇಟ್ಟುಕೊಳ್ಳುವ ಚಾಳಿ ಇರುವ ಒಂದು ವರ್ತುಲವನ್ನೇ ಅವರು ಬಿಲ್ಡ್ ಮಾಡಿಕೊಂಡಿದ್ದಾರೆ.

ಇವೆಲ್ಲವನ್ನೂ ಅವರವರ ವ್ಯಕ್ತಿಗತ ವಿಚಾರ ಎಂದು ತಳ್ಳಿ ಹಾಕಲಾಗದು.
ಕಾರಣವಿಷ್ಟೇ. ಪ್ರತಾಪ್ ಸಂಸತ್ ಸದಸ್ಯನಂತಹ ಸ್ಥಾನದಲ್ಲಿರುವ ವ್ಯಕ್ತಿ. ಈ ಸ್ಥಾನವೇ ಹಲವರನ್ನು ಆಕರ್ಷಿಸುವ, ಆಮಿಷ ಒಡ್ಡುವ, ಬೆದರಿಕೆ ಒಡ್ಡುವ ಸಾಧ್ಯತೆಗಳನ್ನು ಕಲ್ಪಿಸಿಕೊಡುತ್ತದೆ. ಹಾಗಾಗಿ ಅದರ ಎಲ್ಲಾ ಬಗೆಯ ದುರ್ಬಳಕೆ ಮಾಡಿಕೊಂಡು ಅಮಾಯಕರಾದ ಎಷ್ಟೋ ಹುಡುಗಿಯರನ್ನು ಬಲೆಗೆ ಕೆಡವಿಕೊಂಡಿರುವ ಸಾಧ್ಯತೆ ಇದ್ದೇ ಇರುತ್ತದೆ. ಅದನ್ನು ಪ್ರತಾಪ್ ಸಿಂಹ ಮಾಡಿದ್ದಾರೆ ಎಂದು ನಂಬುವಂತಹ ಸಾಕ್ಷ್ಯಾಧಾರಗಳು ಸದರಿ ವಾಟ್ಸಾಪ್ ಫಾರ್ವರ್ಡ್‍ಗಳಲ್ಲಿವೆ.

ಎರಡನೆಯದಾಗಿ, ಭಾರತೀಯ ಸಂಸ್ಕೃತಿ, ಸಚ್ಚಾರಿತ್ರ್ಯ ಇತ್ಯಾದಿಗಳ ಕುರಿತು ಮಾತನಾಡುವ ಆರೆಸ್ಸೆಸ್ ಜೊತೆಗೆ ಅಭಿಮಾನ ಪೂರ್ವಕ ಹೆಮ್ಮೆಯ ಸಂಬಂಧವನ್ನಿಟ್ಟುಕೊಂಡಿರುವುದಾಗಿ ಘೋಷಿಸುವ ಇಂತಹ ವ್ಯಕ್ತಿಗಳು ಹೀಗೇಕೆ ಎಂಬ ಪ್ರಶ್ನೆ ಏಳುತ್ತದೆ. ಮಾತಿಗೂ, ಕೃತಿಗೂ ಸಂಬಂಧವೇ ಇಲ್ಲ. ಅದರಲ್ಲೂ ಹೆಣ್ಣನ್ನು ಇವರುಗಳು ಭೋಗದ ವಸ್ತುವೆಂದಲ್ಲದೇ ಬೇರ್ಯಾವ ರೀತಿಯಲ್ಲೂ ನೋಡುವಂತೆ ಕಾಣುವುದಿಲ್ಲ.
ಬಹಳಷ್ಟು ಜನರಿಗೆ ಗೊತ್ತಿಲ್ಲದ ಸಂಗತಿಯೇನೆಂದರೆ, ರಾಷ್ಟ್ರೀಯ ಸ್ವಯಂಸೇವಕ ಸಂಘದಲ್ಲಿ ಮಹಿಳೆಯರಿಗೆ ಸದಸ್ಯತ್ವವೇ ಇಲ್ಲ. ರಾಷ್ಟ್ರ ಸೇವಿಕಾ ಸಂಘ ಇದೆಯಲ್ಲಾ ಎಂದು ಯಾರಾದರೂ ಕೇಳಬಹುದು. ಭಜರಂಗದಳ, ವಿಶ್ವ ಹಿಂದೂ ಪರಿಷತ್ ರೀತಿಯಲ್ಲಿ ಅದೂ ಒಂದು ಅಂಗಸಂಸ್ಥೆ ಮಾತ್ರವೇ ಆಗಿದೆ. ಕಾಂಗ್ರೆಸ್ ಅಥವಾ ಸಿಪಿಎಂ ಥರದ ಪಕ್ಷಗಳೂ ಹಾಗೆಯೇ ಅಲ್ಲವೇ ಎಂದು ಕೆಲವರು ಅಮಾಯಕ ಪ್ರಶ್ನೆಯನ್ನು ಹಾಕಬಹುದು. ಇಲ್ಲ, ಕಾಂಗ್ರೆಸ್ ಅಥವಾ ಸಿಪಿಎಂ ಪಕ್ಷಗಳಲ್ಲಿ ಮಹಿಳೆಯರೂ ಸದಸ್ಯರು. ಅದರಲ್ಲಿ ತಾರತಮ್ಯ ಇರುವುದಿಲ್ಲ. ಅದರ ಅಧ್ಯಕ್ಷರೂ ಆಗಬಹುದು. ಅದಲ್ಲದೇ ಮಹಿಳಾ ವಿಭಾಗವೂ ಇರುತ್ತದೆ ಅಷ್ಟೇ.

ಆದರೆ, ಇಲ್ಲಿ ಆರೆಸ್ಸೆಸ್‍ನ ನಾಯಕರಾಗುವುದು ಹೋಗಲಿ, ಸದಸ್ಯೆಯರಾಗೂ ಮಹಿಳೆಯರು ಇರುವಂತಿಲ್ಲ. ಮಹಿಳೆಯರು ಎರಡನೆಯ ದರ್ಜೆಯ ಪ್ರಜೆಗಳು, ಅವರು ಮನೆಗೆಲಸ ಮಾಡುವುದಕ್ಕೆ, ಸೇವೆ ಮಾಡುವುದಕ್ಕೆ, ಪುರುಷರ ಭೋಗಕ್ಕೆ ಬಳಕೆಯಾಗಲು ಅಷ್ಟೇ ಇದ್ದಾರೆ ಎಂಬ ಮನೋಭಾವ ಇದ್ದಾಗ, ಅದರ ಸುತ್ತಲಿನ ಪರಿವಾರ ಹೀಗೇ ಇರಲು ಸಾಧ್ಯ. ಹಾಗಾಗಿಯೇ ಕರ್ನಾಟಕವೊಂದರಲ್ಲೇ ಇಂತಹವರ (ಇದು ಆರೆಸ್ಸೆಸ್‍ನ ಲೈಂಗಿಕ ಹಗರಣಗಳ ಪಟ್ಟಿಯಲ್ಲ, ಕಳೆದ 10 ವರ್ಷಗಳಿಂದ ಕರ್ನಾಟಕದಲ್ಲಿ ಸಾರ್ವಜನಿಕವಾಗಿ ಚರ್ಚೆಯಾಗಿರುವ ಬಿಜೆಪಿ ನಾಯಕರ ಲೈಂಗಿಕ ಹಗರಣಗಳಲ್ಲಿ ಭಾಗಿಯಾಗಿರುವ ನಾಯಕರ ಪಟ್ಟಿ) ದೊಡ್ಡ ಪಟ್ಟಿ ಸಿಗುತ್ತದೆ. ಹಾಲಪ್ಪ, ರಘುಪತಿ ಭಟ್, ರೇಣುಕಾಚಾರ್ಯ, ಸಿದ್ದು ಸವಡಿ, ಕೃಷ್ಣ ಪಾಲೇಮಾರ್, ಸಿ.ಸಿ.ಪಾಟೀಲ, ತೇಜಸ್ವಿ ಸೂರ್ಯ, ಪ್ರತಾಪ್ ಸಿಂಹ.
ಇದು ಇಷ್ಟಕ್ಕೇ ಸೀಮಿತವಾಗಿರದು. ಏಕೆಂದರೆ ತೇಜಸ್ವಿ ಸೂರ್ಯನಿಂದ ಕಿರುಕುಳಕ್ಕೆ ಒಳಗಾದ ಇಬ್ಬರು ಮಹಿಳೆಯರು ತಮಗೆ ನೆರವಾಗಬೇಕೆಂದು ಪ್ರತಾಪ್ ಸಿಂಹನ ಮೊರೆ ಹೋಗಿದ್ದಾರೆಂದು ಈಗಾಗಲೇ ಬಹಿರಂಗವಾಗಿದೆ. ಯಾವ ಸಮಸ್ಯೆಯ ಕುರಿತು ಯಾರ ಬಳಿ ಹೋಗಿದ್ದಾರೆಂದು ನೋಡಿದರೆ ಆಘಾತವಾಗುತ್ತದೆ.

ಇಂತಹ ಹಗರಣಗಳು ಬಿಜೆಪಿಗೆ ಮಾತ್ರ ಸೀಮಿತವಾಗಿದೆಯೆಂದು ಅರ್ಥವಲ್ಲ. ಉಳಿದ ಪಕ್ಷಗಳಲ್ಲೂ ನಡೆದಿರುವ ಎಲ್ಲಾ ಹಗರಣಗಳೂ ಹೊರಗೆ ಬಂದಿವೆಯೆಂದೂ ಹೇಳಲಾಗದು. ಆದರೆ, ಬಿಜೆಪಿಯು ನೆಹರೂರಂಥ ನಾಯಕರು ಕುರಿತು ಸುಳ್ಳು ಸುದ್ದಿ, ಫೋಟೋಷಾಪ್ ಫೋಟೋಗಳನ್ನು ಸೃಷ್ಟಿ ಮಾಡುವ ದೊಡ್ಡ ಪಡೆಯನ್ನೇ ಹೊಂದಿದೆ. ತಮ್ಮ ಒಳಗೇ ಅಸಹ್ಯಕರ ಹುಳುಕುಗಳನ್ನು ಇಟ್ಟುಕೊಂಡಿದೆ.
ಬಿಜೆಪಿಯ ಯುವನಾಯಕರುಗಳಿಗೆ ಕೂಡಲೇ ಸೆಕ್ಸ್ ತಜ್ಞರಿಂದ ಕೌನ್ಸೆಲಿಂಗ್‍ನ ಅಗತ್ಯವಿದೆ. ಅದಕ್ಕೆ ವ್ಯವಸ್ಥೆ ಆಗದಿದ್ದರೆ, ಅವರು ದೊಡ್ಡ ಸಮಸ್ಯೆಯನ್ನು ಉಂಟು ಮಾಡಲಿದ್ದಾರೆ.

ಅಪ್‍ಡೇಟ್:
ಮೇಲೆ ಹೇಳಲಾದ ವಾಟ್ಸಾಪ್ ಫಾರ್ವರ್ಡ್‍ಗಳೊಂದಿಗೆ (ಪತ್ರಿಕೆಗೆ ಆ ಫೋಟೋಗಳು ಬಂದಿರಲಿಲ್ಲ) ಪ್ರತಾಪ್ ಸಿಂಹ ಒಬ್ಬ ಹುಡುಗಿಯ ಜೊತೆಗೆ ಇರುವ ಫೋಟೋ ಸಹಾ ಇತ್ತೆಂದು ಹೇಳಲಾಗುತ್ತಿದೆ. ಆ ಫೋಟೋದಲ್ಲಿರುವ ಹುಡುಗಿ ಜಿಲ್ಲಾ ಚುನಾವಣಾಧಿಕಾರಿಗಳಿಗೆ ಸದರಿ ಸುದ್ದಿ ಸುಳ್ಳೆಂದು ದೂರು ನೀಡಿರುವ ಕುರಿತು ವರದಿಯಾಗಿದೆ. ಆದರೆ, ಆಡಿಯೋದಲ್ಲಿ ಮಾತಾಡಿರುವ ಹುಡುಗಿ ಮತ್ತು ಈ ಹುಡುಗಿ ಒಬ್ಬರೇನಾ ಬೇರೆಯವರಾ ಎಂಬುದು ಗೊತ್ತಿಲ್ಲ.
ಈ ಕುರಿತು ನಡೆಯುವ ಇತರ ಬೆಳವಣಿಗೆಗಳ ಕುರಿತು ಈ ಪೇಜ್‍ನಲ್ಲಿ ನಂತರ ಅಪ್‍ಡೇಟ್ ಮಾಡಲಾಗುವುದು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಆರು ಮಕ್ಕಳಿದ್ದರೆ ನೀವು ಮತದಾನದ ಹಕ್ಕನ್ನು ಕಳೆದುಕೊಳ್ಳಬಹುದು: ಮತದಾರರ ಪಟ್ಟಿ ‘ಕ್ಲೀನ್’ ಮಾಡಲು ECI ಹೊಸ ಪ್ಲಾನ್!

ಭಾರತದಲ್ಲಿ 'ಆರು ಅಥವಾ ಅದಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದ್ದಾರೆ' ಎಂಬ ಕಾರಣಕ್ಕೆ ಯಾರಾದರೂ ಮತದಾನದ ಹಕ್ಕನ್ನು ಕಳೆದುಕೊಳ್ಳಲು ಸಾಧ್ಯವೇ? ಮೇಲ್ನೋಟಕ್ಕೆ ಹೌದು ಎನ್ನುವಂತಿದೆ ಉತ್ತರ ಪ್ರದೇಶದ ವಾರಾಣಸಿಯ ಕ್ಯಾಂಟೋನ್ಮೆಂಟ್ ಕ್ಷೇತ್ರದ ಮತದಾರ ಸೋನು...

ಕದನ ವಿರಾಮವೆಂಬ ಕಳ್ಳಾಟ : ಗಾಝಾದಿಂದ ಸಿರಿಯಾವರೆಗೆ ಮುಂದುವರಿದ ಇಸ್ರೇಲ್ ನರಮೇಧ

ಬರೋಬ್ಬರಿ ಎಪ್ಪತ್ತು ಸಾವಿರದಷ್ಟು (ವರದಿಗಳ ಪ್ರಕಾರ 67, 900) ಜನರನ್ನು ಹತ್ಯೆಗೈದು, ಶೇಕಡ 90ರಷ್ಟು ಜನರನ್ನು ನಿರಾಶ್ರಿತರನ್ನಾಗಿ ಮಾಡಿದ ಬಳಿಕ, ಅಕ್ಟೋಬರ್ 10, 2025ರಂದು ಗಾಝಾ ಮೇಲಿನ ಆಕ್ರಮಣಕ್ಕೆ ಸಂಬಂಧಿಸಿದಂತೆ ಇಸ್ರೇಲ್ ಕದನ...

ಚುನಾವಣಾ ಆಯೋಗಕ್ಕೆ ಪೌರತ್ವ ನಿರ್ಧಾರ ಮಾಡುವ ಹಕ್ಕಿದೆಯೇ? SIR ತೀರ್ಪಿನ ಬಗ್ಗೆ ಸುಪ್ರೀಂ ಕೋರ್ಟ್ ಹೇಳಿದ್ದೇನು?

ಮೇ 27 ರಂದು 'ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಮತ್ತು ಭಾರತೀಯ ಚುನಾವಣಾ ಆಯೋಗ (ECI)' ನಡುವಿನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಚುನಾವಣಾ ಪಟ್ಟಿಗಳ 'ವಿಶೇಷ ತೀವ್ರ ಪರಿಷ್ಕರಣೆ'...

ಮಹಾರಾಷ್ಟ್ರ: 80 ಲಕ್ಷ ಮಹಿಳೆಯರು ‘ಲಡ್ಕಿ ಬಹಿನ್’ ಯೋಜನೆಗೆ ಅನರ್ಹ: ಆರ್ಥಿಕ ಬಿಕ್ಕಟ್ಟಿಗೆ ಸಾಕ್ಷಿ ಎಂದು ವಿಪಕ್ಷಗಳ ಆರೋಪ

ಮುಂಬೈ: ಮಹಾರಾಷ್ಟ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದ 'ಮುಖ್ಯಮಂತ್ರಿ ಮಾಝಿ ಲಡ್ಕಿ ಬಹಿನ್' ಇ-ಕೆವೈಸಿ (e-KYC) ಪ್ರಕ್ರಿಯೆ ಪೂರ್ಣಗೊಳಿಸಲು ನೀಡಿದ್ದ ಗಡುವು ಮುಗಿದಿದ್ದು, ಸುಮಾರು 80 ಲಕ್ಷ ಮಹಿಳೆಯರು ಯೋಜನೆಯಿಂದ ಅನರ್ಹರಾಗಿದ್ದಾರೆ. ರಾಜ್ಯ ಸರ್ಕಾರವು...

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...

ಜನರಿಗೆ ಇಂಧನ ಉಳಿಸುವ ಪಾಠ, ಪ್ರಧಾನಿಗೆ ರೋಡ್‌ಶೋಗಳ ಆಟ

ಮೇ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಿತವ್ಯಯದ ಅಪೀಲು ಮಾಡಿದ್ದು, ಇಂಧನ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಕೋರಿದ್ದರು. ಜನರು ಖಾಸಗಿ ವಾಹನಗಳ ಬಳಕೆಯನ್ನು ಬಿಟ್ಟು ಸಾರ್ವಜನಿಕ ಸಾರಿಗೆಯನ್ನು...

ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ವಿನೇಶ್ ಫೋಗಟ್‌ಗೆ ಅನುಮತಿಸಿದ ಭಾರತೀಯ ಕುಸ್ತಿ ಒಕ್ಕೂಟ

ಮಾಜಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಅವರು (ಮೇ 30) ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟ...