Homeಕರ್ನಾಟಕಅಸಹ್ಯ ಹುಟ್ಟಿಸುವ ಪ್ರತಾಪ್ ಸಿಂಹನ ಲೈಂಗಿಕ ಹಗರಣ

ಅಸಹ್ಯ ಹುಟ್ಟಿಸುವ ಪ್ರತಾಪ್ ಸಿಂಹನ ಲೈಂಗಿಕ ಹಗರಣ

- Advertisement -
- Advertisement -

ತೇಜಸ್ವಿ ಸೂರ್ಯನ ಸೆಕ್ಸ್ ಹಗರಣದ ಬಗ್ಗೆ ಸಂತ್ರಸ್ತರು ದೂರಿದ್ದು ಇದೇ ವ್ಯಕ್ತಿಗೆ! ಆದರೆ ಈ ವ್ಯಕ್ತಿಯ ಕಥೆ ಕೇಳಿದರೆ ಬೆಚ್ಚಿ ಬೀಳುತ್ತೀರಿ?

ಏಪ್ರಿಲ್ 16ರ ಸಂಜೆಯ ಹೊತ್ತಿಗೆ ಮೈಸೂರು ಭಾಗದ ಕೆಲವರ ಮೊಬೈಲ್‍ಗೆ ಎರಡು ಆಡಿಯೋಗಳು, ಹುಡುಗಿಯೊಬ್ಬಳು ಹಸ್ತಾಕ್ಷರದಲ್ಲಿ ಬರೆದ 8 ಪುಟಗಳ ಪತ್ರ ಮತ್ತು ಸ್ಕ್ರೀನ್‍ಷಾಟ್‍ಗಳು ತಲುಪಿದವು. ಅದನ್ನು ಮೇಲ್ನೋಟಕ್ಕೆ ನೋಡಿದವರು ಕೂಡಲೇ ಇನ್ನಷ್ಟು ಜನರಿಗೆ ಫಾರ್ವರ್ಡ್ ಮಾಡಿದರು. ನಂತರ ಸಮಯ ಸಿಕ್ಕಾಗ ಆ ಸ್ಕ್ರೀನ್‍ಷಾಟ್‍ಗಳನ್ನು ಓದಿ, ಆಡಿಯೋ ಕೇಳಿದರು. ತೀರಾ ಅಶ್ಲೀಲವಾಗಿದ್ದ ಕಾರಣಕ್ಕೆ, ಮೊದಲು ಫಾರ್ವರ್ಡ್ ಮಾಡಿದ್ದಕ್ಕೆ ಮುಜುಗರ ಪಟ್ಟುಕೊಂಡು, ಕ್ಷಮೆ ಕೇಳಿ ಮತ್ತೆ ಮೆಸೇಜ್ ಮಾಡಿದರು.

ಆ ವಾಟ್ಸಾಪ್ ಫಾರ್ವರ್ಡ್‍ಗಳಲ್ಲಿದ್ದದ್ದು ಮೈಸೂರಿನ ಬಿಜೆಪಿ ಸಂಸದ ಪ್ರತಾಪ್ ಸಿಂಹರ ಲೈಂಗಿಕ ಪುರಾಣ. ಆಡಿಯೋ ಕೇಳಿದ ಎಲ್ಲರಿಗೂ ಅದು ಪ್ರತಾಪ್ ಸಿಂಹರದ್ದೇ ಎಂಬುದರಲ್ಲಿ ಯಾವ ಸಂದೇಹವೂ ಉಳಿಯುವುದಿಲ್ಲ. ಅದರ ಆಚೆಗೆ ಹಸ್ತಾಕ್ಷರದಲ್ಲಿರುವ ಪತ್ರದಲ್ಲಿ ಮಾಡಿರುವ ಆರೋಪಗಳನ್ನು ನೋಡಿದರೆ, ಅಥವಾ ಆಡಿಯೋ ಕೇಳಿದರೆ ಎರಡು ವಿಚಾರಗಳು ಸ್ಪಷ್ಟವಾಗುತ್ತದೆ. ಒಂದು, ಸಂಬಂಧಿಸಿದ ಹುಡುಗಿಯೂ ಸೋಕಾಲ್ಡ್ ಪ್ರೇಮ ಅಥವಾ ಸಂಬಂಧದಲ್ಲಿ ಒಪ್ಪಿಗೆಯಿಂದಲೇ ಆತನ ಜೊತೆಗೆ ಲೈಂಗಿಕ ಸಂಬಂಧ ಇಟ್ಟುಕೊಂಡಿದ್ದಾರೆ ಮತ್ತು ಪ್ರತಾಪ್ ಸಿಂಹ ಸಾರ್ವಜನಿಕವಾಗಿ ಚಾಲ್ತಿಯಲ್ಲಿರುವ ಮೌಲ್ಯಗಳಿಗನುಸಾರ ಅತ್ಯಂತ ಅನೈತಿಕವಾದ ಮತ್ತು ವಿಕೃತವಾದ ಲೈಂಗಿಕ ಆಸಕ್ತಿಗಳನ್ನು ಇಟ್ಟುಕೊಂಡಿದ್ದಾರೆ. ಏಕಕಾಲದಲ್ಲಿ ಹಲವರ ಜೊತೆಗೆ ಲೈಂಗಿಕ ಸಂಬಂಧಗಳನ್ನು ಇಟ್ಟುಕೊಳ್ಳುವ ಚಾಳಿ ಇರುವ ಒಂದು ವರ್ತುಲವನ್ನೇ ಅವರು ಬಿಲ್ಡ್ ಮಾಡಿಕೊಂಡಿದ್ದಾರೆ.

ಇವೆಲ್ಲವನ್ನೂ ಅವರವರ ವ್ಯಕ್ತಿಗತ ವಿಚಾರ ಎಂದು ತಳ್ಳಿ ಹಾಕಲಾಗದು.
ಕಾರಣವಿಷ್ಟೇ. ಪ್ರತಾಪ್ ಸಂಸತ್ ಸದಸ್ಯನಂತಹ ಸ್ಥಾನದಲ್ಲಿರುವ ವ್ಯಕ್ತಿ. ಈ ಸ್ಥಾನವೇ ಹಲವರನ್ನು ಆಕರ್ಷಿಸುವ, ಆಮಿಷ ಒಡ್ಡುವ, ಬೆದರಿಕೆ ಒಡ್ಡುವ ಸಾಧ್ಯತೆಗಳನ್ನು ಕಲ್ಪಿಸಿಕೊಡುತ್ತದೆ. ಹಾಗಾಗಿ ಅದರ ಎಲ್ಲಾ ಬಗೆಯ ದುರ್ಬಳಕೆ ಮಾಡಿಕೊಂಡು ಅಮಾಯಕರಾದ ಎಷ್ಟೋ ಹುಡುಗಿಯರನ್ನು ಬಲೆಗೆ ಕೆಡವಿಕೊಂಡಿರುವ ಸಾಧ್ಯತೆ ಇದ್ದೇ ಇರುತ್ತದೆ. ಅದನ್ನು ಪ್ರತಾಪ್ ಸಿಂಹ ಮಾಡಿದ್ದಾರೆ ಎಂದು ನಂಬುವಂತಹ ಸಾಕ್ಷ್ಯಾಧಾರಗಳು ಸದರಿ ವಾಟ್ಸಾಪ್ ಫಾರ್ವರ್ಡ್‍ಗಳಲ್ಲಿವೆ.

ಎರಡನೆಯದಾಗಿ, ಭಾರತೀಯ ಸಂಸ್ಕೃತಿ, ಸಚ್ಚಾರಿತ್ರ್ಯ ಇತ್ಯಾದಿಗಳ ಕುರಿತು ಮಾತನಾಡುವ ಆರೆಸ್ಸೆಸ್ ಜೊತೆಗೆ ಅಭಿಮಾನ ಪೂರ್ವಕ ಹೆಮ್ಮೆಯ ಸಂಬಂಧವನ್ನಿಟ್ಟುಕೊಂಡಿರುವುದಾಗಿ ಘೋಷಿಸುವ ಇಂತಹ ವ್ಯಕ್ತಿಗಳು ಹೀಗೇಕೆ ಎಂಬ ಪ್ರಶ್ನೆ ಏಳುತ್ತದೆ. ಮಾತಿಗೂ, ಕೃತಿಗೂ ಸಂಬಂಧವೇ ಇಲ್ಲ. ಅದರಲ್ಲೂ ಹೆಣ್ಣನ್ನು ಇವರುಗಳು ಭೋಗದ ವಸ್ತುವೆಂದಲ್ಲದೇ ಬೇರ್ಯಾವ ರೀತಿಯಲ್ಲೂ ನೋಡುವಂತೆ ಕಾಣುವುದಿಲ್ಲ.
ಬಹಳಷ್ಟು ಜನರಿಗೆ ಗೊತ್ತಿಲ್ಲದ ಸಂಗತಿಯೇನೆಂದರೆ, ರಾಷ್ಟ್ರೀಯ ಸ್ವಯಂಸೇವಕ ಸಂಘದಲ್ಲಿ ಮಹಿಳೆಯರಿಗೆ ಸದಸ್ಯತ್ವವೇ ಇಲ್ಲ. ರಾಷ್ಟ್ರ ಸೇವಿಕಾ ಸಂಘ ಇದೆಯಲ್ಲಾ ಎಂದು ಯಾರಾದರೂ ಕೇಳಬಹುದು. ಭಜರಂಗದಳ, ವಿಶ್ವ ಹಿಂದೂ ಪರಿಷತ್ ರೀತಿಯಲ್ಲಿ ಅದೂ ಒಂದು ಅಂಗಸಂಸ್ಥೆ ಮಾತ್ರವೇ ಆಗಿದೆ. ಕಾಂಗ್ರೆಸ್ ಅಥವಾ ಸಿಪಿಎಂ ಥರದ ಪಕ್ಷಗಳೂ ಹಾಗೆಯೇ ಅಲ್ಲವೇ ಎಂದು ಕೆಲವರು ಅಮಾಯಕ ಪ್ರಶ್ನೆಯನ್ನು ಹಾಕಬಹುದು. ಇಲ್ಲ, ಕಾಂಗ್ರೆಸ್ ಅಥವಾ ಸಿಪಿಎಂ ಪಕ್ಷಗಳಲ್ಲಿ ಮಹಿಳೆಯರೂ ಸದಸ್ಯರು. ಅದರಲ್ಲಿ ತಾರತಮ್ಯ ಇರುವುದಿಲ್ಲ. ಅದರ ಅಧ್ಯಕ್ಷರೂ ಆಗಬಹುದು. ಅದಲ್ಲದೇ ಮಹಿಳಾ ವಿಭಾಗವೂ ಇರುತ್ತದೆ ಅಷ್ಟೇ.

ಆದರೆ, ಇಲ್ಲಿ ಆರೆಸ್ಸೆಸ್‍ನ ನಾಯಕರಾಗುವುದು ಹೋಗಲಿ, ಸದಸ್ಯೆಯರಾಗೂ ಮಹಿಳೆಯರು ಇರುವಂತಿಲ್ಲ. ಮಹಿಳೆಯರು ಎರಡನೆಯ ದರ್ಜೆಯ ಪ್ರಜೆಗಳು, ಅವರು ಮನೆಗೆಲಸ ಮಾಡುವುದಕ್ಕೆ, ಸೇವೆ ಮಾಡುವುದಕ್ಕೆ, ಪುರುಷರ ಭೋಗಕ್ಕೆ ಬಳಕೆಯಾಗಲು ಅಷ್ಟೇ ಇದ್ದಾರೆ ಎಂಬ ಮನೋಭಾವ ಇದ್ದಾಗ, ಅದರ ಸುತ್ತಲಿನ ಪರಿವಾರ ಹೀಗೇ ಇರಲು ಸಾಧ್ಯ. ಹಾಗಾಗಿಯೇ ಕರ್ನಾಟಕವೊಂದರಲ್ಲೇ ಇಂತಹವರ (ಇದು ಆರೆಸ್ಸೆಸ್‍ನ ಲೈಂಗಿಕ ಹಗರಣಗಳ ಪಟ್ಟಿಯಲ್ಲ, ಕಳೆದ 10 ವರ್ಷಗಳಿಂದ ಕರ್ನಾಟಕದಲ್ಲಿ ಸಾರ್ವಜನಿಕವಾಗಿ ಚರ್ಚೆಯಾಗಿರುವ ಬಿಜೆಪಿ ನಾಯಕರ ಲೈಂಗಿಕ ಹಗರಣಗಳಲ್ಲಿ ಭಾಗಿಯಾಗಿರುವ ನಾಯಕರ ಪಟ್ಟಿ) ದೊಡ್ಡ ಪಟ್ಟಿ ಸಿಗುತ್ತದೆ. ಹಾಲಪ್ಪ, ರಘುಪತಿ ಭಟ್, ರೇಣುಕಾಚಾರ್ಯ, ಸಿದ್ದು ಸವಡಿ, ಕೃಷ್ಣ ಪಾಲೇಮಾರ್, ಸಿ.ಸಿ.ಪಾಟೀಲ, ತೇಜಸ್ವಿ ಸೂರ್ಯ, ಪ್ರತಾಪ್ ಸಿಂಹ.
ಇದು ಇಷ್ಟಕ್ಕೇ ಸೀಮಿತವಾಗಿರದು. ಏಕೆಂದರೆ ತೇಜಸ್ವಿ ಸೂರ್ಯನಿಂದ ಕಿರುಕುಳಕ್ಕೆ ಒಳಗಾದ ಇಬ್ಬರು ಮಹಿಳೆಯರು ತಮಗೆ ನೆರವಾಗಬೇಕೆಂದು ಪ್ರತಾಪ್ ಸಿಂಹನ ಮೊರೆ ಹೋಗಿದ್ದಾರೆಂದು ಈಗಾಗಲೇ ಬಹಿರಂಗವಾಗಿದೆ. ಯಾವ ಸಮಸ್ಯೆಯ ಕುರಿತು ಯಾರ ಬಳಿ ಹೋಗಿದ್ದಾರೆಂದು ನೋಡಿದರೆ ಆಘಾತವಾಗುತ್ತದೆ.

ಇಂತಹ ಹಗರಣಗಳು ಬಿಜೆಪಿಗೆ ಮಾತ್ರ ಸೀಮಿತವಾಗಿದೆಯೆಂದು ಅರ್ಥವಲ್ಲ. ಉಳಿದ ಪಕ್ಷಗಳಲ್ಲೂ ನಡೆದಿರುವ ಎಲ್ಲಾ ಹಗರಣಗಳೂ ಹೊರಗೆ ಬಂದಿವೆಯೆಂದೂ ಹೇಳಲಾಗದು. ಆದರೆ, ಬಿಜೆಪಿಯು ನೆಹರೂರಂಥ ನಾಯಕರು ಕುರಿತು ಸುಳ್ಳು ಸುದ್ದಿ, ಫೋಟೋಷಾಪ್ ಫೋಟೋಗಳನ್ನು ಸೃಷ್ಟಿ ಮಾಡುವ ದೊಡ್ಡ ಪಡೆಯನ್ನೇ ಹೊಂದಿದೆ. ತಮ್ಮ ಒಳಗೇ ಅಸಹ್ಯಕರ ಹುಳುಕುಗಳನ್ನು ಇಟ್ಟುಕೊಂಡಿದೆ.
ಬಿಜೆಪಿಯ ಯುವನಾಯಕರುಗಳಿಗೆ ಕೂಡಲೇ ಸೆಕ್ಸ್ ತಜ್ಞರಿಂದ ಕೌನ್ಸೆಲಿಂಗ್‍ನ ಅಗತ್ಯವಿದೆ. ಅದಕ್ಕೆ ವ್ಯವಸ್ಥೆ ಆಗದಿದ್ದರೆ, ಅವರು ದೊಡ್ಡ ಸಮಸ್ಯೆಯನ್ನು ಉಂಟು ಮಾಡಲಿದ್ದಾರೆ.

ಅಪ್‍ಡೇಟ್:
ಮೇಲೆ ಹೇಳಲಾದ ವಾಟ್ಸಾಪ್ ಫಾರ್ವರ್ಡ್‍ಗಳೊಂದಿಗೆ (ಪತ್ರಿಕೆಗೆ ಆ ಫೋಟೋಗಳು ಬಂದಿರಲಿಲ್ಲ) ಪ್ರತಾಪ್ ಸಿಂಹ ಒಬ್ಬ ಹುಡುಗಿಯ ಜೊತೆಗೆ ಇರುವ ಫೋಟೋ ಸಹಾ ಇತ್ತೆಂದು ಹೇಳಲಾಗುತ್ತಿದೆ. ಆ ಫೋಟೋದಲ್ಲಿರುವ ಹುಡುಗಿ ಜಿಲ್ಲಾ ಚುನಾವಣಾಧಿಕಾರಿಗಳಿಗೆ ಸದರಿ ಸುದ್ದಿ ಸುಳ್ಳೆಂದು ದೂರು ನೀಡಿರುವ ಕುರಿತು ವರದಿಯಾಗಿದೆ. ಆದರೆ, ಆಡಿಯೋದಲ್ಲಿ ಮಾತಾಡಿರುವ ಹುಡುಗಿ ಮತ್ತು ಈ ಹುಡುಗಿ ಒಬ್ಬರೇನಾ ಬೇರೆಯವರಾ ಎಂಬುದು ಗೊತ್ತಿಲ್ಲ.
ಈ ಕುರಿತು ನಡೆಯುವ ಇತರ ಬೆಳವಣಿಗೆಗಳ ಕುರಿತು ಈ ಪೇಜ್‍ನಲ್ಲಿ ನಂತರ ಅಪ್‍ಡೇಟ್ ಮಾಡಲಾಗುವುದು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಇನ್‌ಸ್ಟಾಗ್ರಾಮ್‌ನಲ್ಲಿ ಕ್ಷಮಿಸಿದರೆ ಸಾಲದು, ವಿದ್ಯಾರ್ಥಿಗಳ ಮೇಲಿನ ಕೇಸ್ ವಾಪಸ್ ಪಡೆಯಿರಿ: ಪ್ರಧಾನಿಗೆ ದೀಪ್ಕೆ ನೇರ ಪ್ರಶ್ನೆ

ಪ್ರಧಾನಿ ನರೇಂದ್ರ ಮೋದಿ ಅವರು ಇನ್‌ಸ್ಟಾಗ್ರಾಮ್ ವಿಡಿಯೋವೊಂದರಲ್ಲಿ ತಮ್ಮ ವಿರುದ್ಧ ನಿಂದನಾತ್ಮಕ ಪದ ಬಳಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಕ್ಷಮಿಸಿದ್ದೇನೆ ಎಂದು ಹೇಳಿರುವುದಕ್ಕೆ ಸಿಜೆಪಿ ಸಂಸ್ಥಾಪಕ ಅಭಿಜೀತ್...

ಪ್ರತಿಭಟನೆ ಭೀತಿ : ಸಿಜೆಐ ಸೂರ್ಯಕಾಂತ್ ಭಾಗವಹಿಸಬೇಕಿದ್ದ ಘಟಿಕೋತ್ಸವ ದಿಢೀರ್ ಮುಂದೂಡಿದ TISS

ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (ಟಿಐಎಸ್‌ಎಸ್‌) ಸಂಸ್ಥೆಯು ಆಗಸ್ಟ್ 2ರಂದು ನಡೆಸಲು ನಿಗದಿಪಡಿಸಿದ್ದ ತನ್ನ 86ನೇ ವಾರ್ಷಿಕ ಘಟಿಕೋತ್ಸವವನ್ನು ದಿಢೀರ್ ಮುಂದೂಡಿದೆ. ಕ್ಯಾಂಪಸ್ ಭದ್ರತೆಯ ಬಗೆಗಿನ ಕಳವಳಗಳು ಮತ್ತು ವಿದ್ಯಾರ್ಥಿಗಳ...

ಪ್ರಧಾನಿಗಳೇ ನಿಮ್ಮ ರೀಲ್‌ಗಳನ್ನು ಅಂಧಭಕ್ತರು ಮೆಚ್ಚಬಹುದು, ಆದರೆ ಇತಿಹಾಸ ನಿಮ್ಮನ್ನು ಕ್ಷಮಿಸುವುದಿಲ್ಲ: ಬಿ.ಕೆ. ಹರಿಪ್ರಸಾದ್

ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿರುವ ಇತ್ತೀಚಿನ ವಿಡಿಯೋ (ರೀಲ್) ಕುರಿತು ಕಾಂಗ್ರೆಸ್ ಹಿರಿಯ ನಾಯಕ ಮತ್ತು ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ. ಹರಿಪ್ರಸಾದ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ತಾನು ಮಾಡಿದರೆ ರಾಜತಂತ್ರ, ಬೇರೆಯವರು...

ಪ್ರಧಾನಿ ಮೋದಿ ವಿರುದ್ಧ ನಿಂದನೆ: ನನಗೆ ಕೇವಲ 15 ವರ್ಷ ‘ಅನ್ಯರ ಪ್ರಭಾವಕ್ಕೆ ಒಳಗಾಗಿದ್ದೆ’ ಎಂದು ಕ್ಷಮೆ ಕೇಳಿದ ವಿದ್ಯಾರ್ಥಿನಿ ವಿಡಿಯೋ ವೈರಲ್

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿ ಭಾರಿ ಆಕ್ರೋಶಕ್ಕೆ ಗುರಿಯಾಗಿದ್ದ ಸಿಜೆಪಿ (CJP) ಪ್ರತಿಭಟನಾಕಾರ ಯುವತಿಯೊಬ್ಬಳು ಸೋಶಿಯಲ್ ಮೀಡಿಯಾದಲ್ಲಿ ಕ್ಷಮೆಯಾಚಿಸಿದ್ದಾಳೆ ಎನ್ನಲಾದ ವೀಡಿಯೊವೊಂದು ಹರಿದಾಡುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್...

ಸ್ಪೇನ್‌ಗೆ ನುಗ್ಗಿದ ಸಾವಿರಾರು ಮೊರಾಕನ್ನರು : ಬೃಹತ್ ವಲಸೆಯ ಹಿಂದೆ ಇಸ್ರೇಲ್ ಕುತಂತ್ರ?

ಮೊರಾಕೊದಿಂದ ಸ್ಪೇನ್‌ನ ಸಿಯುಟಾ ನಗರಕ್ಕೆ ಸಾವಿರಾರು ವಲಸಿಗರು ನುಗ್ಗಿದ ಬಿಕ್ಕಟ್ಟಿನ ಹಿಂದೆ ಇಸ್ರೇಲ್ ಕೈವಾಡವಿದೆ ಎಂಬ ಆರೋಪಗಳು ಕೇಳಿ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇಸ್ರೇಲ್‌ನ ಕುತಂತ್ರ ಬುದ್ದಿಯ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ಇದೇ...

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...