Homeಕರ್ನಾಟಕಅಸಹ್ಯ ಹುಟ್ಟಿಸುವ ಪ್ರತಾಪ್ ಸಿಂಹನ ಲೈಂಗಿಕ ಹಗರಣ

ಅಸಹ್ಯ ಹುಟ್ಟಿಸುವ ಪ್ರತಾಪ್ ಸಿಂಹನ ಲೈಂಗಿಕ ಹಗರಣ

- Advertisement -
- Advertisement -

ತೇಜಸ್ವಿ ಸೂರ್ಯನ ಸೆಕ್ಸ್ ಹಗರಣದ ಬಗ್ಗೆ ಸಂತ್ರಸ್ತರು ದೂರಿದ್ದು ಇದೇ ವ್ಯಕ್ತಿಗೆ! ಆದರೆ ಈ ವ್ಯಕ್ತಿಯ ಕಥೆ ಕೇಳಿದರೆ ಬೆಚ್ಚಿ ಬೀಳುತ್ತೀರಿ?

ಏಪ್ರಿಲ್ 16ರ ಸಂಜೆಯ ಹೊತ್ತಿಗೆ ಮೈಸೂರು ಭಾಗದ ಕೆಲವರ ಮೊಬೈಲ್‍ಗೆ ಎರಡು ಆಡಿಯೋಗಳು, ಹುಡುಗಿಯೊಬ್ಬಳು ಹಸ್ತಾಕ್ಷರದಲ್ಲಿ ಬರೆದ 8 ಪುಟಗಳ ಪತ್ರ ಮತ್ತು ಸ್ಕ್ರೀನ್‍ಷಾಟ್‍ಗಳು ತಲುಪಿದವು. ಅದನ್ನು ಮೇಲ್ನೋಟಕ್ಕೆ ನೋಡಿದವರು ಕೂಡಲೇ ಇನ್ನಷ್ಟು ಜನರಿಗೆ ಫಾರ್ವರ್ಡ್ ಮಾಡಿದರು. ನಂತರ ಸಮಯ ಸಿಕ್ಕಾಗ ಆ ಸ್ಕ್ರೀನ್‍ಷಾಟ್‍ಗಳನ್ನು ಓದಿ, ಆಡಿಯೋ ಕೇಳಿದರು. ತೀರಾ ಅಶ್ಲೀಲವಾಗಿದ್ದ ಕಾರಣಕ್ಕೆ, ಮೊದಲು ಫಾರ್ವರ್ಡ್ ಮಾಡಿದ್ದಕ್ಕೆ ಮುಜುಗರ ಪಟ್ಟುಕೊಂಡು, ಕ್ಷಮೆ ಕೇಳಿ ಮತ್ತೆ ಮೆಸೇಜ್ ಮಾಡಿದರು.

ಆ ವಾಟ್ಸಾಪ್ ಫಾರ್ವರ್ಡ್‍ಗಳಲ್ಲಿದ್ದದ್ದು ಮೈಸೂರಿನ ಬಿಜೆಪಿ ಸಂಸದ ಪ್ರತಾಪ್ ಸಿಂಹರ ಲೈಂಗಿಕ ಪುರಾಣ. ಆಡಿಯೋ ಕೇಳಿದ ಎಲ್ಲರಿಗೂ ಅದು ಪ್ರತಾಪ್ ಸಿಂಹರದ್ದೇ ಎಂಬುದರಲ್ಲಿ ಯಾವ ಸಂದೇಹವೂ ಉಳಿಯುವುದಿಲ್ಲ. ಅದರ ಆಚೆಗೆ ಹಸ್ತಾಕ್ಷರದಲ್ಲಿರುವ ಪತ್ರದಲ್ಲಿ ಮಾಡಿರುವ ಆರೋಪಗಳನ್ನು ನೋಡಿದರೆ, ಅಥವಾ ಆಡಿಯೋ ಕೇಳಿದರೆ ಎರಡು ವಿಚಾರಗಳು ಸ್ಪಷ್ಟವಾಗುತ್ತದೆ. ಒಂದು, ಸಂಬಂಧಿಸಿದ ಹುಡುಗಿಯೂ ಸೋಕಾಲ್ಡ್ ಪ್ರೇಮ ಅಥವಾ ಸಂಬಂಧದಲ್ಲಿ ಒಪ್ಪಿಗೆಯಿಂದಲೇ ಆತನ ಜೊತೆಗೆ ಲೈಂಗಿಕ ಸಂಬಂಧ ಇಟ್ಟುಕೊಂಡಿದ್ದಾರೆ ಮತ್ತು ಪ್ರತಾಪ್ ಸಿಂಹ ಸಾರ್ವಜನಿಕವಾಗಿ ಚಾಲ್ತಿಯಲ್ಲಿರುವ ಮೌಲ್ಯಗಳಿಗನುಸಾರ ಅತ್ಯಂತ ಅನೈತಿಕವಾದ ಮತ್ತು ವಿಕೃತವಾದ ಲೈಂಗಿಕ ಆಸಕ್ತಿಗಳನ್ನು ಇಟ್ಟುಕೊಂಡಿದ್ದಾರೆ. ಏಕಕಾಲದಲ್ಲಿ ಹಲವರ ಜೊತೆಗೆ ಲೈಂಗಿಕ ಸಂಬಂಧಗಳನ್ನು ಇಟ್ಟುಕೊಳ್ಳುವ ಚಾಳಿ ಇರುವ ಒಂದು ವರ್ತುಲವನ್ನೇ ಅವರು ಬಿಲ್ಡ್ ಮಾಡಿಕೊಂಡಿದ್ದಾರೆ.

ಇವೆಲ್ಲವನ್ನೂ ಅವರವರ ವ್ಯಕ್ತಿಗತ ವಿಚಾರ ಎಂದು ತಳ್ಳಿ ಹಾಕಲಾಗದು.
ಕಾರಣವಿಷ್ಟೇ. ಪ್ರತಾಪ್ ಸಂಸತ್ ಸದಸ್ಯನಂತಹ ಸ್ಥಾನದಲ್ಲಿರುವ ವ್ಯಕ್ತಿ. ಈ ಸ್ಥಾನವೇ ಹಲವರನ್ನು ಆಕರ್ಷಿಸುವ, ಆಮಿಷ ಒಡ್ಡುವ, ಬೆದರಿಕೆ ಒಡ್ಡುವ ಸಾಧ್ಯತೆಗಳನ್ನು ಕಲ್ಪಿಸಿಕೊಡುತ್ತದೆ. ಹಾಗಾಗಿ ಅದರ ಎಲ್ಲಾ ಬಗೆಯ ದುರ್ಬಳಕೆ ಮಾಡಿಕೊಂಡು ಅಮಾಯಕರಾದ ಎಷ್ಟೋ ಹುಡುಗಿಯರನ್ನು ಬಲೆಗೆ ಕೆಡವಿಕೊಂಡಿರುವ ಸಾಧ್ಯತೆ ಇದ್ದೇ ಇರುತ್ತದೆ. ಅದನ್ನು ಪ್ರತಾಪ್ ಸಿಂಹ ಮಾಡಿದ್ದಾರೆ ಎಂದು ನಂಬುವಂತಹ ಸಾಕ್ಷ್ಯಾಧಾರಗಳು ಸದರಿ ವಾಟ್ಸಾಪ್ ಫಾರ್ವರ್ಡ್‍ಗಳಲ್ಲಿವೆ.

ಎರಡನೆಯದಾಗಿ, ಭಾರತೀಯ ಸಂಸ್ಕೃತಿ, ಸಚ್ಚಾರಿತ್ರ್ಯ ಇತ್ಯಾದಿಗಳ ಕುರಿತು ಮಾತನಾಡುವ ಆರೆಸ್ಸೆಸ್ ಜೊತೆಗೆ ಅಭಿಮಾನ ಪೂರ್ವಕ ಹೆಮ್ಮೆಯ ಸಂಬಂಧವನ್ನಿಟ್ಟುಕೊಂಡಿರುವುದಾಗಿ ಘೋಷಿಸುವ ಇಂತಹ ವ್ಯಕ್ತಿಗಳು ಹೀಗೇಕೆ ಎಂಬ ಪ್ರಶ್ನೆ ಏಳುತ್ತದೆ. ಮಾತಿಗೂ, ಕೃತಿಗೂ ಸಂಬಂಧವೇ ಇಲ್ಲ. ಅದರಲ್ಲೂ ಹೆಣ್ಣನ್ನು ಇವರುಗಳು ಭೋಗದ ವಸ್ತುವೆಂದಲ್ಲದೇ ಬೇರ್ಯಾವ ರೀತಿಯಲ್ಲೂ ನೋಡುವಂತೆ ಕಾಣುವುದಿಲ್ಲ.
ಬಹಳಷ್ಟು ಜನರಿಗೆ ಗೊತ್ತಿಲ್ಲದ ಸಂಗತಿಯೇನೆಂದರೆ, ರಾಷ್ಟ್ರೀಯ ಸ್ವಯಂಸೇವಕ ಸಂಘದಲ್ಲಿ ಮಹಿಳೆಯರಿಗೆ ಸದಸ್ಯತ್ವವೇ ಇಲ್ಲ. ರಾಷ್ಟ್ರ ಸೇವಿಕಾ ಸಂಘ ಇದೆಯಲ್ಲಾ ಎಂದು ಯಾರಾದರೂ ಕೇಳಬಹುದು. ಭಜರಂಗದಳ, ವಿಶ್ವ ಹಿಂದೂ ಪರಿಷತ್ ರೀತಿಯಲ್ಲಿ ಅದೂ ಒಂದು ಅಂಗಸಂಸ್ಥೆ ಮಾತ್ರವೇ ಆಗಿದೆ. ಕಾಂಗ್ರೆಸ್ ಅಥವಾ ಸಿಪಿಎಂ ಥರದ ಪಕ್ಷಗಳೂ ಹಾಗೆಯೇ ಅಲ್ಲವೇ ಎಂದು ಕೆಲವರು ಅಮಾಯಕ ಪ್ರಶ್ನೆಯನ್ನು ಹಾಕಬಹುದು. ಇಲ್ಲ, ಕಾಂಗ್ರೆಸ್ ಅಥವಾ ಸಿಪಿಎಂ ಪಕ್ಷಗಳಲ್ಲಿ ಮಹಿಳೆಯರೂ ಸದಸ್ಯರು. ಅದರಲ್ಲಿ ತಾರತಮ್ಯ ಇರುವುದಿಲ್ಲ. ಅದರ ಅಧ್ಯಕ್ಷರೂ ಆಗಬಹುದು. ಅದಲ್ಲದೇ ಮಹಿಳಾ ವಿಭಾಗವೂ ಇರುತ್ತದೆ ಅಷ್ಟೇ.

ಆದರೆ, ಇಲ್ಲಿ ಆರೆಸ್ಸೆಸ್‍ನ ನಾಯಕರಾಗುವುದು ಹೋಗಲಿ, ಸದಸ್ಯೆಯರಾಗೂ ಮಹಿಳೆಯರು ಇರುವಂತಿಲ್ಲ. ಮಹಿಳೆಯರು ಎರಡನೆಯ ದರ್ಜೆಯ ಪ್ರಜೆಗಳು, ಅವರು ಮನೆಗೆಲಸ ಮಾಡುವುದಕ್ಕೆ, ಸೇವೆ ಮಾಡುವುದಕ್ಕೆ, ಪುರುಷರ ಭೋಗಕ್ಕೆ ಬಳಕೆಯಾಗಲು ಅಷ್ಟೇ ಇದ್ದಾರೆ ಎಂಬ ಮನೋಭಾವ ಇದ್ದಾಗ, ಅದರ ಸುತ್ತಲಿನ ಪರಿವಾರ ಹೀಗೇ ಇರಲು ಸಾಧ್ಯ. ಹಾಗಾಗಿಯೇ ಕರ್ನಾಟಕವೊಂದರಲ್ಲೇ ಇಂತಹವರ (ಇದು ಆರೆಸ್ಸೆಸ್‍ನ ಲೈಂಗಿಕ ಹಗರಣಗಳ ಪಟ್ಟಿಯಲ್ಲ, ಕಳೆದ 10 ವರ್ಷಗಳಿಂದ ಕರ್ನಾಟಕದಲ್ಲಿ ಸಾರ್ವಜನಿಕವಾಗಿ ಚರ್ಚೆಯಾಗಿರುವ ಬಿಜೆಪಿ ನಾಯಕರ ಲೈಂಗಿಕ ಹಗರಣಗಳಲ್ಲಿ ಭಾಗಿಯಾಗಿರುವ ನಾಯಕರ ಪಟ್ಟಿ) ದೊಡ್ಡ ಪಟ್ಟಿ ಸಿಗುತ್ತದೆ. ಹಾಲಪ್ಪ, ರಘುಪತಿ ಭಟ್, ರೇಣುಕಾಚಾರ್ಯ, ಸಿದ್ದು ಸವಡಿ, ಕೃಷ್ಣ ಪಾಲೇಮಾರ್, ಸಿ.ಸಿ.ಪಾಟೀಲ, ತೇಜಸ್ವಿ ಸೂರ್ಯ, ಪ್ರತಾಪ್ ಸಿಂಹ.
ಇದು ಇಷ್ಟಕ್ಕೇ ಸೀಮಿತವಾಗಿರದು. ಏಕೆಂದರೆ ತೇಜಸ್ವಿ ಸೂರ್ಯನಿಂದ ಕಿರುಕುಳಕ್ಕೆ ಒಳಗಾದ ಇಬ್ಬರು ಮಹಿಳೆಯರು ತಮಗೆ ನೆರವಾಗಬೇಕೆಂದು ಪ್ರತಾಪ್ ಸಿಂಹನ ಮೊರೆ ಹೋಗಿದ್ದಾರೆಂದು ಈಗಾಗಲೇ ಬಹಿರಂಗವಾಗಿದೆ. ಯಾವ ಸಮಸ್ಯೆಯ ಕುರಿತು ಯಾರ ಬಳಿ ಹೋಗಿದ್ದಾರೆಂದು ನೋಡಿದರೆ ಆಘಾತವಾಗುತ್ತದೆ.

ಇಂತಹ ಹಗರಣಗಳು ಬಿಜೆಪಿಗೆ ಮಾತ್ರ ಸೀಮಿತವಾಗಿದೆಯೆಂದು ಅರ್ಥವಲ್ಲ. ಉಳಿದ ಪಕ್ಷಗಳಲ್ಲೂ ನಡೆದಿರುವ ಎಲ್ಲಾ ಹಗರಣಗಳೂ ಹೊರಗೆ ಬಂದಿವೆಯೆಂದೂ ಹೇಳಲಾಗದು. ಆದರೆ, ಬಿಜೆಪಿಯು ನೆಹರೂರಂಥ ನಾಯಕರು ಕುರಿತು ಸುಳ್ಳು ಸುದ್ದಿ, ಫೋಟೋಷಾಪ್ ಫೋಟೋಗಳನ್ನು ಸೃಷ್ಟಿ ಮಾಡುವ ದೊಡ್ಡ ಪಡೆಯನ್ನೇ ಹೊಂದಿದೆ. ತಮ್ಮ ಒಳಗೇ ಅಸಹ್ಯಕರ ಹುಳುಕುಗಳನ್ನು ಇಟ್ಟುಕೊಂಡಿದೆ.
ಬಿಜೆಪಿಯ ಯುವನಾಯಕರುಗಳಿಗೆ ಕೂಡಲೇ ಸೆಕ್ಸ್ ತಜ್ಞರಿಂದ ಕೌನ್ಸೆಲಿಂಗ್‍ನ ಅಗತ್ಯವಿದೆ. ಅದಕ್ಕೆ ವ್ಯವಸ್ಥೆ ಆಗದಿದ್ದರೆ, ಅವರು ದೊಡ್ಡ ಸಮಸ್ಯೆಯನ್ನು ಉಂಟು ಮಾಡಲಿದ್ದಾರೆ.

ಅಪ್‍ಡೇಟ್:
ಮೇಲೆ ಹೇಳಲಾದ ವಾಟ್ಸಾಪ್ ಫಾರ್ವರ್ಡ್‍ಗಳೊಂದಿಗೆ (ಪತ್ರಿಕೆಗೆ ಆ ಫೋಟೋಗಳು ಬಂದಿರಲಿಲ್ಲ) ಪ್ರತಾಪ್ ಸಿಂಹ ಒಬ್ಬ ಹುಡುಗಿಯ ಜೊತೆಗೆ ಇರುವ ಫೋಟೋ ಸಹಾ ಇತ್ತೆಂದು ಹೇಳಲಾಗುತ್ತಿದೆ. ಆ ಫೋಟೋದಲ್ಲಿರುವ ಹುಡುಗಿ ಜಿಲ್ಲಾ ಚುನಾವಣಾಧಿಕಾರಿಗಳಿಗೆ ಸದರಿ ಸುದ್ದಿ ಸುಳ್ಳೆಂದು ದೂರು ನೀಡಿರುವ ಕುರಿತು ವರದಿಯಾಗಿದೆ. ಆದರೆ, ಆಡಿಯೋದಲ್ಲಿ ಮಾತಾಡಿರುವ ಹುಡುಗಿ ಮತ್ತು ಈ ಹುಡುಗಿ ಒಬ್ಬರೇನಾ ಬೇರೆಯವರಾ ಎಂಬುದು ಗೊತ್ತಿಲ್ಲ.
ಈ ಕುರಿತು ನಡೆಯುವ ಇತರ ಬೆಳವಣಿಗೆಗಳ ಕುರಿತು ಈ ಪೇಜ್‍ನಲ್ಲಿ ನಂತರ ಅಪ್‍ಡೇಟ್ ಮಾಡಲಾಗುವುದು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಡಿಜಿಟಲೀಕರಣಗೊಂಡ 2002ರ ಮತದಾರರ ಪಟ್ಟಿಯಿಂದ ಬೆಂಗಳೂರಿನ ಮತಗಟ್ಟೆಗಳೇ ಮಾಯ: ಮಾಹಿತಿ ಸಿಗದೆ ಆತಂಕದಲ್ಲಿ ನೂರಾರು ಮತದಾರರು

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಹಲವು ಭಾಗಗಳಲ್ಲಿ 2002ರ ಡಿಜಿಟಲೀಕರಣಗೊಂಡ ಮತದಾರರ ಪಟ್ಟಿಯಿಂದ ಇಡೀ ಮತಗಟ್ಟೆಗಳೇ ಕಾಣೆಯಾಗಿರುವ ಗಂಭೀರ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇದರಿಂದಾಗಿ ನೂರಾರು ಮತದಾರರು ಆತಂಕ ಮತ್ತು ಗೊಂದಲಕ್ಕೊಳಗಾಗಿದ್ದಾರೆ ಎಂದು...

‘ರಾಮನಿಗೆ ಅವಮಾನಿಸಿದ್ದಕ್ಕೆ ಶಾಯಿ ಎರಚಿದೆ’: ಜಂತರ್ ಮಂತರ್‌ನಲ್ಲಿ ಅಭಿಜೀತ್ ದೀಪ್ಕೆ ಮೇಲಿನ ದಾಳಿಯನ್ನು ಸಮರ್ಥಿಸಿಕೊಂಡ ಬರ್ಖಾ ಟ್ರೆಹಾನ್

ನವದೆಹಲಿ: ದೇಶದ ರಾಜಧಾನಿಯ ಜಂತರ್ ಮಂತರ್‌ನಲ್ಲಿ ಜುಲೈ 18 ರ ಶನಿವಾರದಂದು ನಡೆದ ಪ್ರತಿಭಟನಾ ಸಭೆಯಲ್ಲಿ ಭಾಷಣ ಮಾಡುತ್ತಿದ್ದ ‘ಜಿರಳೆ ಜನತಾ ಪಕ್ಷ’ದ ಸಂಸ್ಥಾಪಕ ಅಭಿಜೀತ್ ದೀಪ್ಕೆ ಅವರ ಮೇಲೆ ಶಾಯಿ ಎರಚಿದ...

ಸರ್ವಪಕ್ಷ ಸಭೆ: TMC ಬಂಡಾಯ ಸಂಸದರಿಗೆ ಸ್ಪೆಷಲ್ ಸೀಟು, INDIA ಮೈತ್ರಿಕೂಟದ ಸಂಸದರು ವಾಕೌಟ್

ಸಂಸತ್ತಿನ ಮುಂಗಾರು ಅಧಿವೇಶನ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇರುವಾಗ, ರವಿವಾರ ನಡೆದ ಸರ್ವಪಕ್ಷಗಳ ಸಭೆಯು ತೀವ್ರ ರಾಜಕೀಯ ಸಂಘರ್ಷಕ್ಕೆ ಸಾಕ್ಷಿಯಾಗಿದೆ. ತೃಣಮೂಲ ಕಾಂಗ್ರೆಸ್ (TMC) ಪಕ್ಷದಿಂದ ಬಂಡಾಯವೆದ್ದ ಸಂಸದರಿಗೆ ಕೇಂದ್ರ ಸರ್ಕಾರವು...

ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ಹಾದಿ ತಪ್ಪಿಸಲು BJP ಪಿತೂರಿ: ಸಿಜೆಪಿ ಗಂಭೀರ ಆರೋಪ

ದೇಶಾದ್ಯಂತ ಭಾರಿ ಸಂಚಲನ ಸೃಷ್ಟಿಸಿರುವ ನೀಟ್ (NEET) ಪರೀಕ್ಷಾ ಹಗರಣದ ವಿರುದ್ಧ ಜಂತರ್ ಮಂತರ್‌ನಲ್ಲಿ ಸೋನಮ್ ವಾಂಗ್ಚುಕ್ ಹಾಗೂ ಕಾಕ್ರೋಚ್ ಜನತಾ ಪಾರ್ಟಿ (CJP) ಯುವಜನರು ನಡೆಸುತ್ತಿರುವ ಹೋರಾಟದ ಮೈದಾನದಿಂದ ಆತಂಕಕಾರಿ ವರದಿಗಳು...

‘ನಿಮ್ಮ ಮೌನ ಸ್ವೀಕಾರಾರ್ಹವಲ್ಲ’: ರಾಮ ಮಂದಿರ ದೇಣಿಗೆ ‘ಕಳ್ಳತನ’ದ ತನಿಖೆಗೆ ಮೋದಿಗೆ ಖರ್ಗೆ-ರಾಹುಲ್ ಗಾಂಧಿ ಪತ್ರ

ನವದೆಹಲಿ: ಸಂಸತ್ತಿನ ಮಳೆಗಾಲದ ಅಧಿವೇಶನ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇರುವಾಗ, ಅಯೋಧ್ಯೆ ರಾಮ ಮಂದಿರ ನಿರ್ಮಾಣದ ದೇಣಿಗೆಯಲ್ಲಿ ನಡೆದಿದೆ ಎನ್ನಲಾದ ಬೃಹತ್ ಆರ್ಥಿಕ ಅಕ್ರಮ ಹಾಗೂ ‘ಕಳ್ಳತನ’ದ ವಿಷಯ ರಾಷ್ಟ್ರ ರಾಜಕಾರಣದಲ್ಲಿ...

ಶಾಂತಿಯುತ ಪ್ರತಿಭಟನೆಗಳನ್ನು ಮೋದಿ ಸರ್ಕಾರ ಹತ್ತಿಕ್ಕುತ್ತಿದೆ: ರಾಹುಲ್ ಗಾಂಧಿ

ದೆಹಲಿಯ ಜಂತರ್ ಮಂತರ್‌ನಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಪರಿಸರ ಕಾರ್ಯಕರ್ತ ಸೋನಮ್ ವಾಂಗ್‌ಚುಕ್ ಅವರನ್ನು ಬಲವಂತವಾಗಿ ಆಸ್ಪತ್ರೆಗೆ ಸಾಗಿಸಿದ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶನಿವಾರ ಮೌನ ಮುರಿದಿದ್ದಾರೆ. "ಶಾಂತಿಯುತ ಪ್ರತಿಭಟನೆಗಳನ್ನು...

ಸೋನಮ್ ವಾಂಗ್‌ಚುಕ್ ಬಲವಂತದ ಬಂಧನ; ಕಣ್ಣೀರಿಟ್ಟು ಉಪವಾಸ ಸತ್ಯಾಗ್ರಹ ಆರಂಭಿಸಿದ ಅಭಿಜೀತ್ ದಿಪ್ಕೆ

ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ಉಪವಾಸ ಸತ್ಯಾಗ್ರಹ ಕೈಗೊಂಡಿರುವ ಸೋನಮ್ ವಾಂಗ್‌ಚುಕ್ ಅವರನ್ನು ದೆಹಲಿ ಪೊಲೀಸ್ ಸಿಬ್ಬಂದಿ ಬಲವಂತವಾಗಿ, ಬಲಪ್ರಯೋಗದ ಮೂಲಕ ಆಸ್ಪತ್ರೆಗೆ ಕರೆದೊಯ್ಯುವಾಗ ಜಂತರ್ ಮಂತರ್‌ನ ಪ್ರತಿಭಟನಾ ಸ್ಥಳದಲ್ಲಿ ಗದ್ದಲ ಉಂಟಾಯಿತು....

ಜಮ್ಮು-ಕಾಶ್ಮೀರ| ಭದ್ರತಾ ಸಿಬ್ಬಂದಿ ಗುಂಡಿಗೆ ವ್ಯಕ್ತಿ ಸಾವು; ಭುಗಿಲೆದ್ದ ಪ್ರತಿಭಟನೆ

ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯ ಭದೇರ್ವಾದ ಜೈ ಕಣಿವೆ ಪ್ರದೇಶದಲ್ಲಿ ಗುರುವಾರ ತಡರಾತ್ರಿ ನಡೆದ ಗುಂಡಿನ ದಾಳಿಯಲ್ಲಿ 30 ವರ್ಷದ ನಾಗರಿಕನೊಬ್ಬ ಸಾವನ್ನಪ್ಪಿ ಇಬ್ಬರು ಗಾಯಗೊಂಡಿದ್ದು ವ್ಯಾಪಕ ಪ್ರತಿಭಟನೆಗಳಿಗೆ ಕಾರಣವಾಗಿದೆ. ಮೃತರನ್ನು...

ಸಿಜೆಪಿ ಪ್ರತಿಭಟನೆ ಮೇಲೆ ಕೇಂದ್ರದ ಬಲಪ್ರಯೋಗ: ಸೋನಮ್ ವಾಂಗ್‌ಚುಕ್ ಅವರನ್ನು ಬಂಧಿಸಿ ಆಸ್ಪತ್ರೆಗೆ ಕರೆದೊಯ್ದ ಪೊಲೀಸರು

ದೆಹಲಿಯ ಜಂತರ್ ಮಂತರ್‌ನಲ್ಲಿ 21 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಪರಿಸರ ಕಾರ್ಯಕರ್ತ ಸೋನಮ್ ವಾಂಗ್‌ಚುಕ್ ಅವರನ್ನು ಪ್ರತಿಭಟನಾ ಸ್ಥಳದಿಂದ ಪೊಲೀಸರು ಬಲವಂತವಾಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಶನಿವಾರ ಬೆಳಿಗ್ಗೆ ಪೊಲೀಸರು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ...

ಪ್ರಶ್ನೆಪತ್ರಿಕೆ ಸೋರಿಕೆಗೆ ಇಡೀ ವ್ಯವಸ್ಥೆಯನ್ನೇ ದೂಷಿಸಿದ ವಿಪಕ್ಷ ನಾಯಕ ರಾಹುಲ್ ಗಾಂಧಿ

ರಾಜಕೀಯ ಪಕ್ಷ ಅಥವಾ ಸಂಘಟನೆಯು ಯಾವುದೇ ಶಿಕ್ಷಣ ಸಂಸ್ಥೆಗಳ ಮೇಲೆ ಹಿಡಿತ ಸಾಧಿಸಬಾರದು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (ಜು.17) ರಂದು ಹೇಳಿದ್ದಾರೆ. ಪ್ರಶ್ನೆಪತ್ರಿಕೆ ಸೋರಿಕೆಯ ವಿಷಯದ ಬಗ್ಗೆ ರಾಜಕೀಯ ಒಮ್ಮತಕ್ಕೆ ಕರೆ...