Homeಮುಖಪುಟಸಂಸತ್ತಿನಲ್ಲಿ ಪ್ರಧಾನಿ ಮೋದಿಯವರ ಭಾಗವಹಿಸುವಿಕೆ ಕೇವಲ 0.001% ಮಾತ್ರ: ಸಂಸದ ಡಾ ಜಾನ್ ಬಿಟ್ಟಾಸ್

ಸಂಸತ್ತಿನಲ್ಲಿ ಪ್ರಧಾನಿ ಮೋದಿಯವರ ಭಾಗವಹಿಸುವಿಕೆ ಕೇವಲ 0.001% ಮಾತ್ರ: ಸಂಸದ ಡಾ ಜಾನ್ ಬಿಟ್ಟಾಸ್

- Advertisement -
- Advertisement -

ಪ್ರಧಾನಿಯ ಅನುಪಸ್ಥಿತಿಯಲ್ಲಿ ವಿರೋಧ ಪಕ್ಷದ ನಾಯಕ ಮಾತನಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಈ ಸಂಸತ್ತಿನಲ್ಲಿ ಪ್ರಧಾನಿ ಮೋದಿಯವರ ಭಾಗವಹಿಸುವಿಕೆ ಕೇವಲ 0.001% ಮಾತ್ರ ಎಂದು ಕೇರಳ ಸಿಪಿಎಂ ರಾಜ್ಯಸಭಾ ಸಂಸದ ಡಾ. ಜಾನ್ ಬಿಟ್ಟಾಸ್ ಆರೋಪ ಮಾಡಿದ್ದಾರೆ.

ವಿಶೇಷ ಅಧಿವೇಶನದ ಸಂದರ್ಭದಲ್ಲಿ ಸಂಸತ್ತನ್ನು ಉದ್ದೇಶಿಸಿ ಮಾತನಾಡಿದ ಅವರ ಭಾಷಣ ಈದೀಗ ವೈರಲ್‌ ಆಗಿದೆ. ತಮ್ಮ ಭಾಷಣದಲ್ಲಿ ಸಂವಿಧಾನ ಪೀಠಿಕೆಯ ಕುರಿತು ಮಾತನಾಡಿದ್ದ ಜಾನ್‌ ಬ್ರಿಟ್ಟಾಸ್‌, ”ಸಂವಿಧಾನದ ಪೀಠಿಕೆಯಲ್ಲಿ ಸ್ವಾತಂತ್ರ್ಯ ಸಮಾನತೆ ಮತ್ತು ಭ್ರಾತೃತ್ವ ಎಂದಿದೆ. ಜೊತೆಗೆ ನ್ಯಾಯದಾನ ಕುರಿತು ಬರೆಯಲಾಗಿದೆ. ನ್ಯಾಯದಾನ ಬಗ್ಗೆ ನೋಡುವುದಾದರೆ ನಾವು ಈಗ ಬುಲ್ಡೋಝರ್‌ ಲೋಕಕ್ಕೆ ತಲುಪಿದ್ದೇವೆ. ಅದೇ ಈಗಿನ ಪ್ರಕಾರ ಅದೇ ನ್ಯಾಯದಾನ ವ್ಯವಸ್ಥೆ” ಎಂದು ಮಾರ್ಮಿಕವಾಗಿ ಹೇಳಿದ್ದಾರೆ.

”ಸಂವಿಧಾನದ ಪೀಠಿಕೆಯಲಿ ಪ್ರಜಾಪ್ರಭುತ್ವ ಎಂಬ ಪದವಿದೆ. ಸಂಸತ್ನಲ್ಲಿರುವ ಹೆಚ್ಚಿನ ಸದಸ್ಯರು ಪ್ರಜಾಪ್ರಭುತ್ವ ಎನ್ನುವುದು ಮೋದಿ ಪ್ರಭುತ್ವವಾಗಿ ಬದಲಾಗಿದೆ ಎನ್ನುವುದು ತಿಳಿದಿದ್ದಾರೆ. ಏಕೆಂದರೆ ಎಲ್ಲೆಡೆ ಪ್ರಧಾನಿ ಮೋದಿಯೇ ರಾರಾಜಿಸುತ್ತಿದ್ದಾರೆ” ಎಂದರು.

”ನಾನು ಸಂಸತ್ತನ್ನು ಹೊರಗಿನಿಂದ ನಿಂತು ನೋಡುತ್ತಿದ್ದೆ. ಈಗ ಈ ಸಂಸತ್ತಿನ ಭಾಗವಾಗಿದ್ದೇನೆ. ಸದಸ್ಯನಾಗಿ ಒಳಭಾಗದಲ್ಲಿ ಕುಳಿತು ನೋಡುತ್ತಿದ್ದೇನೆ. ಈ ಸದನದ ನಾಯಕ ಒಳ್ಳೆಯ ಮಾತುಗಾರ. ಆದರೆ ಅವರು ಜವಹರ್ ಲಾಲ್ ನೆಹರು ಅವರಂತ ಮಹಾನ್ ವ್ಯಕ್ತಿಗಳ ಹೆಸರನ್ನು ಬೇಕೆಂದೇ ಮರೆತಿದ್ದಾರೆ. ಧರ್ಮೇಂದ್ರ ಪ್ರಧಾನ್ ಅವರು ತಮ್ಮ ಭಾಷಣದಲ್ಲಿ ಆ ಮರೆತ ಹೆಸರನ್ನು ನೆನಪಿಸುವ ಪ್ರಯತ್ನ ಮಾಡಿದ್ದಾರೆ” ಎಂದರು.

”20 ಕೋಟಿ ಅಲ್ಪಸಂಖ್ಯಾತರಿರುವ ಈ ದೇಶದಲ್ಲಿ ಶಾಸಕಾಂಗ, ನ್ಯಾಯಾಂಗ, ಕಾರ್ಯಾಂಗ, ಮಾಧ್ಯಮಗಳಲ್ಲಿ ಅವರ ಪ್ರಾತಿನಿಧಿತ್ವ ಎಷ್ಟಿದೆ ಎನ್ನುವುದು ಎಲ್ಲರಿಗೂ ತಿಳಿದಿದೆ. ಈ ಸರ್ಕಾರ ಮೊಘಲರ ಬಗ್ಗೆ ಮಾತಾನಾಡುತ್ತದೆ. ಭಾರತೀಯರ ಬಗ್ಗೆ ಮಾತನಾಡುವುದಕ್ಕಿಂತ ಮೊಘಲರ ಬಗ್ಗೆ ಮಾತನಾಡುವುದು ಉತ್ತಮ. ಏಕೆಂದರೆ ಅದು ಅಕ್ಬರ್‌ನ ಸಂಸ್ಥಾನವಾಗಿರಲಿ, ಔರಂಗಜೇಬನದಾಗಿರಲಿ, ಅಲ್ಲಿ 50%ಕ್ಕಿಂತ ಹೆಚ್ಚಿನ ಸಚಿವರುಗಳು ಹಿಂದೂಗಳಿದ್ದರು. ಅಕ್ಬರ್‌ನ ಸಂಸ್ಥಾನದಲ್ಲಿದ್ದ ಬೀರಬಲ್ ಬಗ್ಗೆ ನಮಗೆಲ್ಲಾ ಗೊತ್ತಿದೆ. ಅತನೂ ಹಿಂದೂ ಆಗಿದ್ದ. ಈಗಿನ ಕೇಂದ್ರ ಸಚಿವ ಸಂಪುಟದಲ್ಲಿ ಒಬ್ಬರಾದರೂ ಅಲ್ಪಸಂಖ್ಯಾತರಿದ್ದಾರಾ?” ಎಂದು ಪ್ರಶ್ನಿಸಿದರು.

”ಪರಂಪರೆಯನ್ನು ನೋಡುವುದಾದರೆ, ನೆಹರೂ ಸರ್ಕಾರ ಮಾದರಿ ಸರ್ಕಾರವಾಗಿತ್ತು. ಅಲ್ಲಿ ಸಮಾಜದ ಪ್ರತೀ ವರ್ಗಕ್ಕೂ ಪ್ರತಿನಿಧಿತ್ವ ಇತ್ತು. ಮೌಲಾನಾ ಆಝಾದ್, ಶಾಮ್ ಪ್ರಸಾದ್ ಮುಖರ್ಜಿಯವರೂ ಆ ಸಂಪುಟದಲಿದ್ದರು. ಮೌಲಾನಾ ಆಝಾದ್ ಅವರು ಜುಮಾ ಮಸೀದಿಯ ಮೆಟ್ಟಿಲಲ್ಲಿ ನಿಂತು, ಇದು ನಮ್ಮ ದೇಶ. ಯಾರೂ ಇಲ್ಲಿಂದ ಹೊರಹೋಗುವ ಅವಶ್ಯಕತೆ ಇಲ್ಲ ಎಂದು ಹೇಳಿದ್ದರು. ಸಹೋದರತ್ವ ಅಥವಾ ಭಾತೃತ್ವ ಪದದ ಈಗಿನ ಹೊಸ ಬಳಕೆಯೇನು ಗೊತ್ತೇ? ಪಾಕಿಸ್ತಾನಕ್ಕೆ ಹೋಗಿ ಎನ್ನುವುದು. ಯಾರು ಏನೇ ಮಾತನಾಡಿದರೂ ಬರುವ ಕೊನೆಯ ಪದ ಪಾಕಿಸ್ತಾನಕ್ಕೆ ಹೋಗಿ ಎನ್ನುವುದು. ರಾಷ್ಟ್ರದ್ರೋಹ ಪದವನ್ನೂ ತಪ್ಪಾಗಿ ಅರ್ಥೈಸಲಾಗಿದೆ. ಈ ದೇಶದ ಬಗ್ಗೆ ನಿಮಗೆಷ್ಟು ದೇಶಭಕ್ತಿಯಿದೆಯೋ, ನಮಗೂ ಅಷ್ಟೇ ಇದೆ” ಎಂದು ಸಂಸದರು ಖಾರವಾಗಿ ನುಡಿದರು.

”ಸಾರ್ವಭೌಮತ್ವ ಎನ್ನುವುದು ಟ್ರಂಪ್ – ಬೈಡೆನ್ ನಂತಹಾ ನಾಯಕರನ್ನು ಕರೆಸಿ ಹೊಗಳುವುದು ಎನ್ನುವಂತಾಗಿದೆ. ನಮ್ಮಲ್ಲೇ ಇರುವ ನೆಹರುವನ್ನು ನೀವು ಮರೆತಿದ್ದೀರಿ. ಸಮಾಜವಾದ ಎನ್ನುವುದು ಅದಾನಿವಾದ ಆಗಿದೆ. ಈ ದೇಶದಲ್ಲಿ ಹಲವು ಜನರಿಗೆ ರಿಪಬ್ಲಿಕ್ (ಗಣರಾಜ್ಯ) ಎಂದರೆ ಅರ್ನಬ್ ಗೋಸ್ವಾಮಿ ಎಂಬಂತಾಗಿದೆ. ಇದು ಈ ದೇಶದ ಈಗಿನ ವ್ಯವಸ್ಥೆ” ಎಂದು ವ್ಯಂಗ್ಯವಾಡಿದರು.

”ಪ್ರಧಾನಿ ಕಚೇರಿಯಲ್ಲಿ ಕೂತ ಒಬ್ಬ ವ್ಯಕ್ತಿ ಈ ಸಂವಿಧಾನ ನಿರುಪಯುಕ್ತ. ಇದು ಕೇವಲ 17 ವರ್ಷ ಬಳಸಲು ಯೋಗ್ಯ. ನನಗೆ ಸಮಾಜವಾದ ಮತ್ತು ಜಾತ್ಯಾತೀತತೆ ಎಂಬ ಪದದ ಅರ್ಥಗಳೇ ಗೊತ್ತಿಲ್ಲ ಎನ್ನುತ್ತಾನೆ. ಅದೇ ವ್ಯಕ್ತಿ ಪ್ರಧಾನಿಯ ಆರ್ಥಿಕ ಸಲಹೆಗಾರ. ಆತನಿಗೆ ಹಾಗೆ ಹೇಳಲು ಅಷ್ಟೊಂದು ಧೈರ್ಯ ಇದೆಯೇ? ಯಾರಿಗಾದರೂ ಸಂಪುಟ ದರ್ಜೆಯ ಸಚಿವರಿಗೆ ಆತನಿಗೆ ಬಾಯಿ ಮುಚ್ಚು ಎಂದು ಹೇಳುವ ಧೈರ್ಯ ಇದೆಯೇ? ಯಾರಾದರೂ ಹೇಳಿದ್ದಾರೆಯೇ?” ಎಂದು ಪ್ರಶ್ನಿಸಿದರು.

ಇದನ್ನೂ ಓದಿ: ‘ನಗರ ನಕ್ಸಲ್ ಯಾರು? ಅವರ ಬಗ್ಗೆ ವಿವರ ನೀಡಿ..’: ಪ್ರಧಾನಿ ಹೇಳಿಕೆ ಕುರಿತು ಗೃಹ ಸಚಿವಾಲಯಕ್ಕೆ ಸಾಕೇತ್ ಗೋಖಲೆ ಪತ್ರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರ ಬಜೆಟ್ 2026: ‘ಇದು ನನ್ನ ರಾಜಕೀಯ ಜೀವನದ ಅತ್ಯಂತ ನಿರಾಶಾದಾಯಕ ಬಜೆಟ್’: ಸಿಎಂ ಸಿದ್ದರಾಮಯ್ಯ

‘ಮೋದಿ ಸರ್ಕಾರ ಆರ್ಥಿಕ ದೂರದೃಷ್ಟಿಕೋನಗಳಿಲ್ಲದೆ, ದೇಶವನ್ನು ಯಾವ ದಿಕ್ಕಿನತ್ತ ಮುನ್ನಡೆಸಬೇಕು ಎನ್ನುವುದರ ಬಗ್ಗೆ ಸ್ಪಷ್ಟತೆ ಇಲ್ಲದೆ ದಣಿದಿದೆ ಎಂಬುದರ ಸಂಕೇತ ಈ 2026 ಬಜೆಟ್’ ಎಂದು ಸಿಎಂ ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ.  ಕಲಬುರಗಿ ವಿಮಾನ...

ಕೇಂದ್ರ ಬಜೆಟ್ 2026: ಅಪರೂಪದ ಭೂಮಿಯ ಕಾರಿಡಾರ್‌ನಿಂದ ಹೈಸ್ಪೀಡ್ ರೈಲಿನವರೆಗೆ: ಚುನಾವಣೆ ನಡೆಯಲಿರುವ ರಾಜ್ಯಗಳಿಗೆ ಕೇಂದ್ರ ಬಜೆಟ್ ನಲ್ಲಿ ಸಿಕ್ಕಿದ್ದೇನು?

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾನುವಾರ ಲೋಕಸಭೆಯಲ್ಲಿ ತಮ್ಮ ಸತತ 9 ನೇ ಬಜೆಟ್ ಅನ್ನು ಮಂಡಿಸಿದ್ದಾರೆ. ಈ ಬಜೆಟ್ ನಲ್ಲಿ ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ ಮತ್ತು ಅಸ್ಸಾಂನಂತಹ ಚುನಾವಣೆ...

ಬಲೂಚಿಸ್ತಾನ: ಭದ್ರತಾ ಕಾರ್ಯಾಚರಣೆಯಲ್ಲಿ 15 ಪಾಕ್ ಸೈನಿಕರು, 92 ಭಯೋತ್ಪಾದಕರು ಸಾವು

ಬಲೂಚಿಸ್ತಾನ ಪ್ರಾಂತ್ಯದ ಸುಮಾರು 12 ಸ್ಥಳಗಳಲ್ಲಿ ನಡೆದ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳಲ್ಲಿ ಕನಿಷ್ಠ 15 ಪಾಕಿಸ್ತಾನಿ ಸೈನಿಕರು ಮತ್ತು 92 ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ ಎಂದು ಪಾಕಿಸ್ತಾನಿ ಸೇನೆ ತಿಳಿಸಿರುವುದಾಗಿ ಪಿಟಿಐ ವರದಿ...

ಕೇಂದ್ರ ಬಜೆಟ್ 2026 | ಯಾವುದು ಅಗ್ಗ ಮತ್ತು ಯಾವುದು ದುಬಾರಿ..? 

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾನುವಾರ (ಫೆಬ್ರವರಿ 1, 2026) ತಮ್ಮ ಒಂಬತ್ತನೇ ಬಜೆಟ್ ಮಂಡಿಸಿದ್ದಾರೆ. ಈ ವರ್ಷದ (2026-27 ಹಣಕಾಸು) ಬಜೆಟ್ ತೀವ್ರಗೊಳ್ಳುತ್ತಿರುವ ಜಾಗತಿಕ ವ್ಯಾಪಾರ ಉದ್ವಿಗ್ನತೆ, ರೂಪಾಯಿ ಮೌಲ್ಯದಲ್ಲಿ...

ಕೇಂದ್ರ ಬಜೆಟ್ 2026| ರಕ್ಷಣಾ ಇಲಾಖೆಗೆ 7.85 ಲಕ್ಷ ಕೋಟಿ ರೂ. ಮೀಸಲು

ಕೇಂದ್ರ ಸರ್ಕಾರದ ಬಜೆಟ್ 2026 ರಲ್ಲಿ ರಕ್ಷಣಾ ವೆಚ್ಚವನ್ನು ಗಣನೀಯವಾಗಿ ಹೆಚ್ಚಿಸಲಾಗಿದೆ. ಈ ವಲಯಕ್ಕೆ 7.85 ಲಕ್ಷ ಕೋಟಿ ರೂ.ಗಳನ್ನು ಮೀಸಲಿಟ್ಟಿದೆ. ಇದು ಕಳೆದ ವರ್ಷದ 6.81 ಲಕ್ಷ ಕೋಟಿ ರೂ.ಗಳಿಗಿಂತ ಗಮನಾರ್ಹ...

‘ಭಾರತ ವೆನೆಜುವೆಲಾದ ತೈಲ ಖರೀದಿಸಲಿದೆ’ ಎಂದ ಟ್ರಂಪ್: ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಕಾಂಗ್ರೆಸ್

ನವದೆಹಲಿ: ಭಾರತ ಇರಾನ್ ಬದಲು ವೆನೆಜುವೆಲಾದಿಂದ ತೈಲ ಖರೀದಿಸಲಿದೆ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಭಾನುವಾರ ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಅಮೆರಿಕದ ನಾಯಕ "ನಮ್ಮ...

ಕೇಂದ್ರ ಬಜೆಟ್ 2026: ಕ್ಯಾನ್ಸರ್ ಸೇರಿದಂತೆ ಇತರ 7 ಕಾಯಿಲೆಗಳ ಔಷಧಿ ಬೆಲೆಯಲ್ಲಿ ಇಳಿಕೆ

ಗಂಭೀರ ಖಾಯಿಲೆಗಳಿಂದ ಬಳುತ್ತಿರುವ ರೋಗಿಗಳಿಗೆ ಗಮನಾರ್ಹ ಪರಿಹಾರವಾಗಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2026 ರ ಬಜೆಟ್‌ನಲ್ಲಿ 17 ವಿಧದ ಕ್ಯಾನ್ಸರ್ ಮತ್ತು ಇತರ ಏಳು ಗಂಭೀರ ಕಾಯಿಲೆಗಳ ಚಿಕಿತ್ಸೆಗೆ ಬಳಸುವ ಔಷಧಿಗಳನ್ನು...

ಕೇಂದ್ರ ಬಜೆಟ್ 2026: ಹೊಸ ಆದಾಯ ತೆರಿಗೆ ಕಾಯ್ದೆ ಜಾರಿಗೆ; ವಿದೇಶಿ ಪ್ರವಾಸದ ಟಿಸಿಎಸ್ ದರ ಶೇ.2ಕ್ಕೆ ಇಳಿಕೆ

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾನುವಾರ ಕೇಂದ್ರ ಬಜೆಟ್ 2026 ಅನ್ನು ಮಂಡಿಸಿದರು. "2025ರ ಏಪ್ರಿಲ್ 1 ರಿಂದ ಹೊಸ ಆದಾಯ ತೆರಿಗೆ ಕಾಯ್ದೆ ಜಾರಿಗೆ ಬರಲಿದೆ, ಪ್ರಸ್ತುತ ಶೇ.5 ಮತ್ತು ಶೇ.20...

ಗಾಜಾದಲ್ಲಿ ಇಸ್ರೇಲ್ ನಡೆಸಿದ ಹೊಸ ಕದನ ವಿರಾಮ ಉಲ್ಲಂಘನೆಯಲ್ಲಿ ಮಕ್ಕಳು ಸೇರಿದಂತೆ 31 ಮಂದಿ ಸಾವು

ಮೇ 2024ರ ನಂತರ ಇಸ್ರೇಲ್ ಮೊದಲ ಬಾರಿಗೆ ಈಜಿಪ್ಟ್‌ನೊಂದಿಗೆ ರಫಾ ಕ್ರಾಸಿಂಗ್ ಅನ್ನು ಮತ್ತೆ ತೆರೆಯಲು ಸಜ್ಜಾಗುತ್ತಿರುವ ಒಂದು ದಿನ ಮೊದಲು, ಅಲ್ ಜಜೀರಾ ಜೊತೆ ಮಾತನಾಡಿದ ವೈದ್ಯಕೀಯ ಮೂಲಗಳು, ಬೆಳಗಿನ ಜಾವದಿಂದ...

ಶಬರಿಮಲೆ ಚಿನ್ನ ಕಳವು ಪ್ರಕರಣ: ಎರಡನೇ ಪ್ರಕರಣದಲ್ಲೂ ಜಾಮೀನು ಕೋರಿ ಅರ್ಜಿ ಸಲ್ಲಿಸಿದ ಪ್ರಮುಖ ಆರೋಪಿ ಉನ್ನಿಕೃಷ್ಣನ್ ಪೊಟ್ಟಿ

ಕೊಲ್ಲಂ (ಕೇರಳ): ಶಬರಿಮಲೆ ಚಿನ್ನ ಕಳವು ಪ್ರಕರಣದ ಪ್ರಮುಖ ಆರೋಪಿ ಉನ್ನಿಕೃಷ್ಣನ್ ಪೊಟ್ಟಿ, ತಮ್ಮ ವಿರುದ್ಧ ದಾಖಲಾಗಿರುವ ಎರಡನೇ ಪ್ರಕರಣದಲ್ಲಿ ಶಾಸನಬದ್ಧ ಜಾಮೀನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ದ್ವಾರಪಾಲಕ (ರಕ್ಷಕ ದೇವತೆ) ವಿಗ್ರಹ...