Homeಮುಖಪುಟಮಿಜೋರಾಂನಲ್ಲಿ ಬುಡಕಟ್ಟು ಜನಾಂಗದಿಂದ ಪ್ರತಿಭಟನೆ: ಮೋದಿ, ಬಿರೇನ್ ಸಿಂಗ್ ಪ್ರತಿಕೃತಿ ಸುಟ್ಟು ಆಕ್ರೋಶ

ಮಿಜೋರಾಂನಲ್ಲಿ ಬುಡಕಟ್ಟು ಜನಾಂಗದಿಂದ ಪ್ರತಿಭಟನೆ: ಮೋದಿ, ಬಿರೇನ್ ಸಿಂಗ್ ಪ್ರತಿಕೃತಿ ಸುಟ್ಟು ಆಕ್ರೋಶ

- Advertisement -
- Advertisement -

ಮಿಜೋರಾಂನಲ್ಲಿ ಬುಧವಾರ ಐಜ್ವಾಲ್‌ನಲ್ಲಿ ಝೋ ರಿಯೂನಿಫಿಕೇಶನ್ ಆರ್ಗನೈಸೇಶನ್ (ZORO) ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಪ್ರತಿಭಟನಾಕಾರರು ಪ್ರಧಾನಿ ನರೇಂದ್ರ ಮೋದಿ ಮತ್ತು ಮಣಿಪುರ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಅವರ ಪ್ರತಿಕೃತಿಗಳನ್ನು ಸುಟ್ಟುಹಾಕಿದ್ದಾರೆ.

ಮಣಿಪುರದಲ್ಲಿ ಝೋ ಬುಡಕಟ್ಟು ಜನಾಂಗದವರ ಒಗ್ಗಟ್ಟು ಪ್ರದರ್ಶಿಸಲು ಪ್ರತಿಭಟನೆ ನಡೆಸಲಾಯಿತು. ಈ ವೇಳೆ ಮೋದಿ ಹಾಗೂ ಬಿರೇನ್ ಸಿಂಗ್ ಪ್ರತಿಕೃತಿಗೆ ಬೆಂಕಿ ಹಚ್ಚಲಾಯಿತು.

ಸುಮಾರು 300 ಜನರು ಮಣಿಪುರ ಸಿಎಂ ಬಿರೇನ್ ಸಿಂಗ್, ಪ್ರಧಾನಿ ಮೋದಿ ಮತ್ತು ಡೇವಿಡ್ ಥೀಕ್ ಕೊಲೆಗಾರನ ಪ್ರತಿಕೃತಿಯನ್ನು ಸುಟ್ಟಿದ್ದಾರೆ. ನೆರೆಯ ರಾಜ್ಯ ಮಣಿಪುರದಲ್ಲಿ ತಮ್ಮ ಸಹವರ್ತಿ ಬುಡಕಟ್ಟು ಜನಾಂಗದವರಿಗೆ ಬೆಂಬಲ ಸೂಚಿಸಲು ಪ್ರತಿಭಟನೆ ನಡೆಸಲಾಯಿತು. ಈ ವೇಳೆ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಜನರ ಸಾಮೂಹಿಕ ಆಕ್ರೋಶದ ಸಂಕೇತವಾಗಿ ರಾಜ್ಯ ನಾಯಕರ ಪ್ರತಿಕೃತಿಗಳಿಗೂ ಬೆಂಕಿ ಇಡಲಾಯಿತು.

ZORO ಎನ್ನುವ ಜನಪ್ರಿಯ ಸಂಸ್ಥೆಯು ಈ ಹಿಂದೆ ಮೇ ಕೊನೆಯ ವಾರದಲ್ಲಿ ರ್ಯಾಲಿಯನ್ನು ಆಯೋಜಿಸಿತ್ತು. ಈ ವೇಳೆ ಅವರು ಜನಾಂಗೀಯ ಝೋ ಬುಡಕಟ್ಟುಗಳನ್ನು ಶಾಂತಿಯುತ ವಿಧಾನಗಳ ಮೂಲಕ ಒಂದು ಆಡಳಿತಾತ್ಮಕ ಸೆಟಪ್ ಅಡಿಯಲ್ಲಿ ತರಲು ಝೋ ಬುಡಕಟ್ಟುಗಳ ಮರು-ಏಕೀಕರಣಕ್ಕಾಗಿ ಕ್ರಮಗಳನ್ನು ತಗೆದುಕೊಳ್ಳುವ ಹಲವಾರು ನಿರ್ಣಯಗಳನ್ನು ಅಂಗೀಕರಿಸಿದರು.

ಬುಧವಾರ ರ್ಯಾಲಿಯಲ್ಲಿ ಮೂರು ನಿರ್ಣಯಗಳನ್ನು ಅಂಗೀಕರಿಸಲಾಯಿತು. ಒಂದು ನಿರ್ಣಯವೆಂದರೆ, ”ಮಣಿಪುರದಲ್ಲಿ ತಮ್ಮ ಜೀವ, ಆಸ್ತಿ, ಜೀವನೋಪಾಯಗಳನ್ನು ಕಳೆದುಕೊಂಡಿರುವ ತಮ್ಮ ಸಹೋದರ ಸಹೋದರಿಯರೊಂದಿಗೆ ಒಗ್ಗಟ್ಟಿನಿಂದ ನಿಲ್ಲುವುದು, ಅವರ ಉಳಿವಿಗಾಗಿ ಹೋರಾಟ ಮಾಡುವುದು ಮತ್ತು ಪ್ರತ್ಯೇಕ ಆಡಳಿತದ ಬೇಡಿಕೆ ಇರಿಸುವುದಾಗಿದೆ.

ಎರಡನೆಯದು, ”ಮಣಿಪುರದಲ್ಲಿ ಝೋ ಜನಾಂಗೀಯ ಜನರಿಗೆ ಪ್ರತ್ಯೇಕ ಆಡಳಿತವನ್ನು ನೀಡುವಂತೆ ಭಾರತ ಸರ್ಕಾರಕ್ಕೆ ಮನವಿ ಮಾಡುವುದು. ಅದರ ಮೂರನೇ ನಿರ್ಣಯವು ಪ್ರಪಂಚದಾದ್ಯಂತ ಝೋ ಜನಾಂಗೀಯ ಜನರ ಏಕತೆಯ ಕಡೆಗೆ ಕೆಲಸ ಮಾಡುವುದು.”

ರ್ಯಾಲಿಯಲ್ಲಿ, ZORO ಅಧ್ಯಕ್ಷ ಆರ್. ಸಾಂಗ್ಕಾವಿಯಾ ಅವರು, ”ಕುಕಿ ಬುಡಕಟ್ಟು ಜನಾಂಗದವರನ್ನು ಮಣಿಪುರದ ರಾಜ್ಯ ನಾಯಕರು ನಿರ್ಲಕ್ಷಿಸಿರುವ ವಿವಿಧ ವಿಧಾನಗಳನ್ನು ಎತ್ತಿ ತೋರಿಸಿದರು. ಈ ಹಿಂಸಾಚಾರ ನಡೆಯುತ್ತಿದ್ದರೂ ಕೇಂದ್ರ ಸರ್ಕಾರದ ಮೌನವಾಗಿರುವುದನ್ನು ಪ್ರಶ್ನಿಸಿದರು. ”ಭಾರತವು ಝೋ ಜನರನ್ನು ವಿದೇಶಿಯರಂತೆ ಪರಿಗಣಿಸುತ್ತದೆಯೇ ಅದು ನಮ್ಮನ್ನು ಈ ಮಟ್ಟಿಗೆ ನಿರ್ಲಕ್ಷಿಸಿದೆಯೇ?” ಎಂದು ಅಮಸಧಾನ ಹೊರಹಾಕಿದರು.

ಝೋ ರಿಯೂನಿಫಿಕೇಶನ್ ಆರ್ಗನೈಸೇಶನ್ ರೆಫ್ಯೂಜಿಯ ಕಾರ್ಯದರ್ಶಿ ರಿನಿ ರಾಲ್ಟೆ ಕೂಡ ಕೇಂದ್ರ ಸರ್ಕಾರದ ಮೌನವನ್ನು ಪ್ರಶ್ನಿಸಿದ್ದಾರೆ. ”ಕೇಂದ್ರ ಸರ್ಕಾರದ ಮೌನಕ್ಕಾಗಿ ನಮ್ಮ ಕೋಪವನ್ನು ವ್ಯಕ್ತಪಡಿಸಲು ನಾವು ಒಟ್ಟಾಗಿ ಬರುತ್ತಿದ್ದೇವೆ” ಎಂದು ತಿಳಿಸಿದರು.

”ಪ್ರಧಾನಿ ಈ ಸಂದರ್ಭದಲ್ಲಿ ಮಾತನಾಡಬೇಕಿತ್ತು, ಅವರ ಒಂದು ಸಮಾಧಾನದ ಮಾತು ಶಾಂತಿಯನ್ನು ತರಬಹುದು, ಅವರು ಇಲ್ಲಿಯವರೆಗೆ ಏಕೆ ಮಾತನಾಡುತ್ತಿಲ್ಲ? ಅವರಿಗೆ ಧ್ವನಿ ಇಲ್ಲ, ಬಾಯಿ ಇಲ್ಲ, ಜವಾಬ್ದಾರಿಯನ್ನು ನಿರ್ವಹಿಸಲು ಬೆನ್ನುಮೂಳೆ ಇಲ್ಲ, ಆದ್ದರಿಂದ ನಾವು ಇಂದು ಐಜ್ವಾಲ್‌ನಲ್ಲಿ ZORO ಆಗಿ ಮಣಿಪುರದ ನಮ್ಮ ಸಹೋದರ ಸಹೋದರಿಯರೊಂದಿಗೆ ಒಗ್ಗಟ್ಟಿನಿಂದ ಒಗ್ಗೂಡುತ್ತಿದ್ದೇವೆ” ಎಂದರು.

ಈ ಬುಡಕಟ್ಟು ಜನರು ಪ್ರತ್ಯೇಕ ಆಡಳಿತವನ್ನು ಹೊಂದಲು ತಮ್ಮ ಹಕ್ಕಿಗಾಗಿ ಮಾತ್ರ ಒತ್ತಾಯಿಸುತ್ತಿದ್ದಾರೆ ಎಂದು ರಾಲ್ಟರ್ ಹೇಳಿದರು. ಮೈತಿ ಸಮುದಾಯವು ಇನ್ನು ಮುಂದೆ ಆದಿವಾಸಿಗಳಿಂದಿಗೆ ಹೊಂದಾಣಿಕೆಯಿಂದ ಇರುವುದಿಲ್ಲ, ಹಾಗಿದ್ದಾರೆ ಒಟ್ಟಿಗೆ ಇರುವುದರಲ್ಲಿ ಅರ್ಥವೇನಿದೆ? ಪ್ರತ್ಯೇಕತೆ ಅವರಿಗೆ ಇರುವ ಏಕೈಕ ಆಯ್ಕೆಯಾಗಿದೆ” ಎಂದು ರಾಲ್ಟೆ ಹೇಳಿದರು.

ಮಣಿಪುರ ಹಿಂಸಾಚಾರದ ಬಗ್ಗೆ ಮೌನವಾಗಿರುವುದನ್ನು ಪ್ರದರ್ಶಿಸಲು ಪ್ರಧಾನ ಮಂತ್ರಿಯ ಪ್ರತಿಕೃತಿಯಲ್ಲಿ ಅವರ ತುಟಿಗಳ ಮೇಲೆ ಟೇಪ್‌ ಅಂಟಿಸಿ ಗುರುತಿಸಲಾಗಿತ್ತು. ಏಕೆಂದರೆ ಇದು ಪ್ರಧಾನಿಯ ಮೌನದ ಸಂಕೇತವಾಗಿತ್ತು.

ಇನ್ನು ಮಣಿಪುರ ಮುಖ್ಯಮಂತ್ರಿ ಸಿಂಗ್ ಪ್ರತಿಕೃತಿಗೆ “ಮಾಫಿಯಾ ಗಾಡ್‌ಫಾದರ್” ಎಂಬ ಬಿರುದನ್ನು ನೀಡಲಾಯಿತು. ಸಿಂಗ್ ಅವರ ಪ್ರತಿಕೃತಿ ದಹನವು “ಅವರು ಸಾಯಲು ಅರ್ಹರು” ಎಂಬ ಪ್ರದರ್ಶನವಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದರು.

ಪ್ರತಿಕೃತಿಗೆ ಬೆಂಕಿ ಇಡುತ್ತಿದಂತೆಯೇ ಮೋದಿ ಹಾಗೂ ಸಿಂಗ್ ವಿರುದ್ಧ ಮಣಿಪುರಿ ಭಾಷೆಯಲ್ಲಿ ಶಾಪಗಳನ್ನು ಕೂಗುತ್ತಾ ಆಕ್ರೋಶ ವ್ಯಕ್ತಪಡಿಸಿದರು.

ZORO ಹಂಚಿಕೊಂಡ ಮಾಹಿತಿಯ ಪ್ರಕಾರ, ಮಣಿಪುರದಲ್ಲಿ ಸಾವಿನ ಸಂಖ್ಯೆ 124ಕ್ಕಿಂತ ಹೆಚ್ಚಾಗಿದೆ. 60 ಕಾಣೆಯಾಗಿದ್ದಾರೆ, ಬುಡಕಟ್ಟು ಸಂಸ್ಥೆಯ ಪ್ರಕಾರ 290 ಹಳ್ಳಿಗಳನ್ನು ಸುಡಲಾಗಿದೆ. 357 ಚರ್ಚ್‌ಗಳು ಮತ್ತು ಕ್ವಾರ್ಟರ್‌ಗಳು ಸುಟ್ಟುಹೋಗಿವೆ ಮತ್ತು ಸುಮಾರು 41,425 ಜನರು ಸ್ಥಳಾಂತರಗೊಂಡಿದ್ದಾರೆ.ಇ

ಇದನ್ನೂ ಓದಿ: ಇನ್ನೂ ಸುಡುತ್ತಿರುವ ಮಣಿಪುರ; ಸಣ್ಣಸಣ್ಣ ಸಮುದಾಯಗಳ ಬಗ್ಗೆ ಪ್ರಭುತ್ವದ ನಿರ್ಲಜ್ಜ ನಿರ್ಲಕ್ಷ್ಯ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...