ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಜಾರಿಗೆ ತಂದಿರುವ ‘ಅಗ್ನಿಪಥ್’ ಯೋಜನೆ ವಿರೋಧಿಸಿ ಮತ್ತು ಸೇನಾ ನೇಮಕಾತಿ ಮಾಡುವಂತೆ ಆಗ್ರಹಿಸಿ ಬಿಹಾರ, ಉತ್ತರ ಪ್ರದೇಶ, ಹರಿಯಾಣ ಮತ್ತು ಜಮ್ಮುವಿನಲ್ಲಿ ಸೇನಾ ಉದ್ಯೋಗಾಕಾಂಕ್ಷಿಗಳು ಭಾರಿ ಪ್ರತಿಭಟನೆ ನಡೆಸುತ್ತಿದ್ದಾರೆ. ಬಿಹಾರದಲ್ಲಿ ಪ್ರತಿಭಟನೆ ಹಿಂಸೆಗೆ ತಿರುಗಿದೆ.
ಇದೇ ವೇಳೆ ಬಿಹಾರದ ನಾವಡದಲ್ಲಿ ಬಿಜೆಪಿ ಕಚೇರಿಗೆ ಬೆಂಕಿ ಹಚ್ಚಲಾಗಿದ್ದು, ಕಚೇರಿಯನ್ನು ಧ್ವಂಸ ಮಾಡಲಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಬಿಹಾರದಲ್ಲಿ ಪ್ರತಿಭಟನೆ ಎರಡನೇ ದಿನವೂ ಮುಂದುವರೆದಿದ್ದು ರಾಜ್ಯದ ಹಲವು ಜಿಲ್ಲೆಗಳಿಗೆ ಹರಡಿದೆ. ಉದ್ರಿಕ್ತ ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿ ರೈಲು, ರಸ್ತೆ ತಡೆಯನ್ನು ನಡೆಸಿದ್ದಾರೆ. ಪೊಲೀಸರು ಜನರನ್ನು ಚದುರಿಸಲು ಲಾಠಿ ಚಾರ್ಜ್ ಮಾಡಿದ್ದು, ಆಶ್ರುವಾಯು ಹಾಗೂ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ.
#ಬಿಹಾರ: ಒಕ್ಕೂಟ ಸರ್ಕಾರದ #ಅಗ್ನಿಪಥ ಯೋಜನೆಯನ್ನು ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ, ಪ್ರತಿಭಟನಾಕಾರರು ಸರನ್ ಜಿಲ್ಲೆಯ ಛಾಪ್ರಾದಲ್ಲಿ ಪ್ಯಾಸೆಂಜರ್ ರೈಲಿಗೆ ಬೆಂಕಿ ಹಚ್ಚಲಾಯಿತು.#ಉದ್ಯೋಗಕೊಡಿ #NaanuGauri #Agnipath #Agniveer pic.twitter.com/A4XruCtay6
— Naanu Gauri (@naanugauri) June 16, 2022
“ಪಾಪದ ರೈತರು ಇಡೀ ವರ್ಷ ನಿಮ್ಮ ದೌರ್ಜನ್ಯವನ್ನು ಸಹಿಸಿಕೊಂಡರು. ಇವರು ಬಿಸಿ ರಕ್ತದ ಯುವಕರು, ಬಿಜೆಪಿಯವರನ್ನು 6 ತಿಂಗಳಲ್ಲಿ ಬೆತ್ತಲೆ ಮಾಡುತ್ತಾರೆ” ಎಂದು ದೆಹಲಿ ಶಾಸಕ ಗುಲಾಬ್ ಸಿಂಗ್ ಅವರು ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಯುವಕರು ರೈಲ್ವೇ ಹಳಿಯ ಮೇಲೆ ನಿಂತು ಬಸ್ಕಿ ಹೊಡೆಯುತ್ತಿರುವ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಪೊಸ್ಟ್ ಮಾಡಿದ್ದಾರೆ.
“ಪಾಪದ ರೈತರು ಇಡೀ ವರ್ಷ ನಿಮ್ಮ ದೌರ್ಜನ್ಯವನ್ನು ಸಹಿಸಿಕೊಂಡರು. ಇವರು ಬಿಸಿ ರಕ್ತದ ಯುವಕರು, ಬಿಜೆಪಿಯವರನ್ನು 6 ತಿಂಗಳಲ್ಲಿ ಬೆತ್ತಲೆ ಮಾಡುತ್ತಾರೆ” ಎಂದು ದೆಹಲಿ ಶಾಸಕ ಗುಲಾಬ್ ಸಿಂಗ್ ಅವರು ಕೆಂದ್ರದ #ಅಗ್ನಿಪಥ್ ಯೋಜನೆಯನ್ನು ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಯ ಬಗ್ಗೆ ಹೇಳಿದ್ದಾರೆ.#ಉದ್ಯೋಗಕೊಡಿ #Agnipath #Agniveer pic.twitter.com/rVzCC2f2va
— Naanu Gauri (@naanugauri) June 16, 2022
ಉತ್ತರ ಭಾರತದ ಭಾಗಲ್ಪುರ್, ಅರ್ವಾಲ್, ಬಕ್ಸರ್, ಗಯಾ, ಮುಂಗೇರ್, ನವಾಡ, ಸಹರ್ಸಾ, ಸಿವಾನ್ ಮತ್ತು ಔರಂಗಾಬಾದ್ ಜಿಲ್ಲೆಗಳಲ್ಲಿ ಅಗ್ನಿಪಥ್ ಯೋಜನೆ ವಿರೋಧಿಸಿ ಮತ್ತು ಸೇನಾ ನೇಮಕಾತಿ ಮಾಡುವಂತೆ ಆಗ್ರಹಿಸಿ ಪ್ರತಿಭಟನೆಗಳು ನಡೆಯುತ್ತಿವೆ.
ಉತ್ತರ ಭಾರತದ ಭಾಗಲ್ಪುರ್, ಅರ್ವಾಲ್, ಬಕ್ಸರ್, ಗಯಾ, ಮುಂಗೇರ್, ನವಾಡ, ಸಹರ್ಸಾ, ಸಿವಾನ್ ಮತ್ತು ಔರಂಗಾಬಾದ್ ಜಿಲ್ಲೆಗಳಿಂದ #ಅಗ್ನಿಪಥ್ ಯೋಜನೆ ವಿರೋಧಿಸಿ, #ಉದ್ಯೋಗ ಕ್ಕೆ ಆಗ್ರಹಿಸಿ ಪ್ರತಿಭಟನೆಗಳು ನಡೆಯುತ್ತಿರುವುದಾಗಿ ವರದಿಯಾಗಿವೆ.#ಉದ್ಯೋಗಕೊಡಿ #NaanuGauri #Agnipath #Agniveer pic.twitter.com/imtEyEMNZZ
— Naanu Gauri (@naanugauri) June 16, 2022
ಉತ್ತರ ಪ್ರದೇಶದ ಆಗ್ರಾದಲ್ಲಿ ಅಗ್ನಿಪಥ್ ಯೋಜನೆ ವಿರೋಧಿಸಿ ಪ್ರತಿಭಟಿಸಿದ ಯುವಕರನ್ನು ಲಾಠಿ ಚಾರ್ಜ್ ಮಾಡಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
#ಆಗ್ರಾ: #ಅಗ್ನಿಪಥ್ ಯೋಜನೆ ವಿರೋಧಿಸಿ, ಉದ್ಯೋಗಕ್ಕಾಗಿ ಆಗ್ರಹಿಸಿ ಪ್ರತಿಭಟಿಸುತ್ತಿರುವ ಯುವಕರನ್ನು ಲಾಠಿ ಚಾರ್ಜ್ ಮಾಡಿ ಬಂಧಿಸುತ್ತಿರುವ ಪೊಲೀಸರು#ಉದ್ಯೋಗಕೊಡಿ #NaanuGauri #Agnipath #Agniveer pic.twitter.com/FtJikPLWn6
— Naanu Gauri (@naanugauri) June 16, 2022
ಉತ್ತರ ಪ್ರದೇಶದ ಬುಲಂದ್ಶಹರ್ನಲ್ಲಿ ಅಲ್ಪಾವದಿ ಸೇನಾ ನೇಮಕಾತಿ ಯೋಜನೆಯಾದ ಅಗ್ನಿಪಥ್ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ಯುವಕರೊಂದಿಗೆ ಪೊಲೀಸರು ವಾಗ್ವಾದ ನಡೆಸಿದರು.
ಬುಲಂದ್ಶಹರ್ನಲ್ಲಿ ಸೇನಾ ನೇಮಕಾತಿ ಯೋಜನೆ #ಅಗ್ನಿಪಥ್ ಯೋಜನೆ ವಿರೋಧಿಸಿ, ಉದ್ಯೋಗಕ್ಕಾಗಿ ಆಗ್ರಹಿಸಿ ಪ್ರತಿಭಟನೆ#ಉದ್ಯೋಗಕೊಡಿ #NaanuGauri #Agnipath #Agniveers pic.twitter.com/50m6XdiMAj
— Naanu Gauri (@naanugauri) June 16, 2022
ಮೋದಿ ಸರ್ಕಾರ ಜಾರಿಗೆ ತಂದಿರುವ ಅಗ್ನಿಪಥ್ ಯೋಜನೆ ವಿರೋಧಿಸಿ ಬಿಹಾರದಾದ್ಯಂತ ಪ್ರತಿಭಟನೆ ನಡೆಯುತ್ತಿರುವ ವೇಳೆ, ರಾಜ್ಯ ನಾವಡದಲ್ಲಿ ಬಿಜೆಪಿ ಕಚೇರಿಗೆ ಬೆಂಕಿ ಹಚ್ಚಲಾಗಿದೆ ಎಂದು ವರದಿಯಾಗಿದೆ.
ಬಿಹಾರದ ನಾವಡದಲ್ಲಿ ಬಿಜೆಪಿ ಕಚೇರಿಗೆ ಬೆಂಕಿ ಹಚ್ಚಲಾಗಿದ್ದು, ಕಚೇರಿಯನ್ನು ಧ್ವಂಸ ಮಾಡಿದ್ದಾರೆ.#ಉದ್ಯೋಗಕೊಡಿ #NaanuGauri #Agnipath #Agniveer pic.twitter.com/NBT4itXXnK
— Naanu Gauri (@naanugauri) June 16, 2022
ಬಿಹಾರದ ಭಬುವಾ ನಗರದಲ್ಲಿ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, ಪ್ರತಿಭಟನಾಕಾರರು ರೈಲಿಗೆ ಬೆಂಕಿ ಹಚ್ಚಿದ್ದಾರೆ ಎಂದು ವರದಿಯಾಗಿದೆ.
#ಬಿಹಾರ ದ ಭಬುವಾ ನಗರದಲ್ಲಿ #ಬಿಜೆಪಿ ಸರ್ಕಾರದ #ಅಗ್ನಿಪಥ್ ಯೋಜನೆ ವಿರೋಧಿಸಿ ಮತ್ತು ಉದ್ಯೋಗಕ್ಕಾಗಿ ನಡೆಯುತ್ತಿರುವ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, ಪ್ರತಿಭಟನಾಕಾರರು ರೈಲಿಗೆ ಬೆಂಕಿ ಹಚ್ಚಿದ್ದಾರೆ#ಉದ್ಯೋಗಕೊಡಿ #NaanuGauri #Agnipath #Agniveer #ಅಗ್ನಿವೀರ್ pic.twitter.com/04V9G34tQE
— Naanu Gauri (@naanugauri) June 16, 2022
ಪ್ರತಿಭಟನೆಯ ವೇಳೆ ಬಿಹಾರದ ಅರಾ ರೈಲು ನಿಲ್ದಾಣದಲ್ಲಿ ಪೊಲೀಸರು ವಿದ್ಯಾರ್ಥಿಗಳ ಮೇಲೆ ಅಶ್ರುವಾಯು ಶೆಲ್ಗಳನ್ನು ಸಿಡಿಸಿದ್ದಾರೆ.
#ಬಿಹಾರ: ಅರಾ ರೈಲು ನಿಲ್ದಾಣದಲ್ಲಿ #ಬಿಜೆಪಿ ಸರ್ಕಾರದ #ಅಗ್ನಿಪಥ್ ಯೋಜನೆ ವಿರೋಧಿಸಿ ಮತ್ತು ಉದ್ಯೋಗಕ್ಕಾಗಿ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳ ಮೇಲೆ ಅಶ್ರುವಾಯು ಶೆಲ್ಗಳನ್ನು ಹಾರಿಸುತ್ತಿರುವ ಪೊಲೀಸರು.#ಉದ್ಯೋಗಕೊಡಿ #NaanuGauri #Agnipath #Agniveer pic.twitter.com/RaNllCiqP4
— Naanu Gauri (@naanugauri) June 16, 2022
ಪ್ರತಿಭಟನೆಯ ವೇಳೆ ಯುವಕರು ಪೊಲೀಸರೊಂದಿಗೆ ವಾಗ್ವಾದ ನಡೆಸಿದರು.
ಒಕ್ಕೂಟ ಸರ್ಕಾರದ #ಅಗ್ನಿಪಥ ಯೋಜನೆಯನ್ನು ವಿರೋಧಿಸಿ ಮತ್ತು ಉದ್ಯೋಗಕ್ಕಾಗಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಪೊಲೀಸರೊಂದಿಗೆ ವಾಗ್ವಾದ ನಡೆಸುತ್ತಿರುವ ಯುವಕರು.#ಉದ್ಯೋಗಕೊಡಿ #NaanuGauri #Agnipath #Agniveers pic.twitter.com/hs8rIWSYHK
— Naanu Gauri (@naanugauri) June 16, 2022
ಪ್ರತಿಭಟನಾಕಾರರು ಬಿಹಾರದ ಬಕ್ಸರ್ನಲ್ಲಿ ರೈಲ್ವೆ ನಿಲ್ದಾಣಕ್ಕೆ ನುಗ್ಗಿ ಬಿಜೆಪಿಯ ಮೋದಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ.
#ಅಗ್ನಿಪತ್ ಯೋಜನೆ ವಿರೋಧಿಸಿ ಬಿಹಾರದ ಬಕ್ಸರ್ನಲ್ಲಿ ಸೇನಾ ಆಕಾಂಕ್ಷಿಗಳು ರೈಲ್ವೆ ನಿಲ್ದಾಣಕ್ಕೆ ನುಗ್ಗಿ ಬಿಜೆಪಿಯ ಮೋದಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.#ಉದ್ಯೋಗಕೊಡಿ #NaanuGauri #Agnipath #Agniveer pic.twitter.com/bGxjNJWEcr
— Naanu Gauri (@naanugauri) June 16, 2022
ಪೊಲೀಸರು ಹರಿಯಾಣದ ರೇವಾರಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ಸೇನಾ ಉದ್ಯೋಗಾಕಾಂಕ್ಷಿಗಳ ಮೇಲೆ ಲಾಠಿ ಚಾರ್ಜ್ ಮಾಡಿದ್ದಾರೆ.
#ಮೋದಿ ಸರ್ಕಾರದ #ಅಗ್ನಿಪಥ್ ಯೋಜನೆಯನ್ನು ವಿರೋಧಿಸಿ ಹರಿಯಾಣದ ರೇವಾರಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ಸೇನಾ ಉದ್ಯೋಗಾಕಾಂಕ್ಷಿಗಳ ಮೇಲೆ ಲಾಠಿ ಚಾರ್ಜ್ ಮಾಡಿದ ಪೊಲೀಸರು#ಉದ್ಯೋಗಕೊಡಿ #NaanuGauri #Agnipath #Agniveer pic.twitter.com/139CQbAQ8P
— Naanu Gauri (@naanugauri) June 16, 2022
ಬಿಹಾರದ ಜೆಹಾನಾಬಾದ್ನಲ್ಲಿ ಸೇನಾ ಉದ್ಯೋಗಾಕಾಂಕ್ಷಿಗಳು ರಾಷ್ಟ್ರೀಯ ಹೆದ್ದಾರಿ-83 ರಲ್ಲಿ ಪ್ರತಿಭಟನೆ ನಡೆಸಿ, ಪಾಟ್ನಾ-ಗಯಾ ಪ್ಯಾಸೆಂಜರ್ ರೈಲನ್ನು ತಡೆದಿದ್ದಾರೆ.
#ಬಿಹಾರ: ಜೆಹಾನಾಬಾದ್ನಲ್ಲಿ ಸೇನಾ ನೇಮಕಾತಿಯ ಹೊಸ ಯೋಜನೆ '#ಅಗ್ನಿಪಥ್' ವಿರುದ್ಧ ಸೇನಾ ಉದ್ಯೋಗಾಕಾಂಕ್ಷಿಗಳು ರಾಷ್ಟ್ರೀಯ ಹೆದ್ದಾರಿ-83 ರಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ಪಾಟ್ನಾ-ಗಯಾ ಪ್ಯಾಸೆಂಜರ್ ರೈಲನ್ನು ಪ್ರತಿಭಟನಾಕಾರರು ತಡೆದಿದ್ದಾರೆ#ಉದ್ಯೋಗಕೊಡಿ #NaanuGauri #Agnipath #Agniveer pic.twitter.com/bIKNXqEGJc
— Naanu Gauri (@naanugauri) June 16, 2022
ಬಿಹಾರದ ಛಾಪ್ರಾದಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಪ್ರತಿಭಟನಾಕಾರರು ಬಸ್ನ ಗಾಜುಗಳನ್ನು ಒಡೆದು, ರಟ್ಟಿನ ಪೆಟ್ಟಿಗೆಗಳಿಗೆ ಬೆಂಕಿ ಹಚ್ಚಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
#ಮೋದಿ ಸರ್ಕಾರದ #ಅಗ್ನಿಪಥ್ ಯೋಜನೆ ವಿರೋಧಿಸಿ ಬಿಹಾರದ ಛಾಪ್ರಾದಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಪ್ರತಿಭಟನಾಕಾರರು ಬಸ್ನ ಗಾಜುಗಳನ್ನು ಒಡೆದು, ರಟ್ಟಿನ ಪೆಟ್ಟಿಗೆಗಳಿಗೆ ಬೆಂಕಿ ಹಚ್ಚಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.#ಉದ್ಯೋಗಕೊಡಿ #NaanuGauri #Agnipath #Agniveer pic.twitter.com/h28BBGvDpw
— Naanu Gauri (@naanugauri) June 16, 2022
ಉತ್ತರಪ್ರದೇಶದ ಉನ್ನಾವೋದಲ್ಲಿ ಅಗ್ನಿಪಥ್ ಯೋಜನೆ ವಿರೋಧಿಸಿ ಪ್ರತಿಭಟನೆ ನಡೆಸಿದ ಯುವಜನರು ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ವಿರುದ್ಧ ದಿಕ್ಕಾರ ಕೂಗಿದ್ದಾರೆ.
#ಉತ್ತರಪ್ರದೇಶ: ಉನ್ನಾವೋದಲ್ಲಿ #ಮೋದಿ ಸರ್ಕಾರದ #ಅಗ್ನಿಪಥ್ ಯೋಜನೆ ವಿರುದ್ಧ ಯುವಜನರು ಪ್ರತಿಭಟನೆ ನಡೆಸಿ, ಮೋದಿ-ಶಾ ಮುರ್ದಾಬಾದ್ ಎಂಬ ಘೋಷಣೆಗಳನ್ನು ಕೂಗಿದರು.#ಉದ್ಯೋಗಕೊಡಿ #NaanuGauri #Agnipath #Agniveer pic.twitter.com/cF6BPI4rDI
— Naanu Gauri (@naanugauri) June 16, 2022
ಉತ್ತರ ಪ್ರದೇಶದ ಬುಲಂದ್ಶಹರ್ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಯುವಕರನ್ನು ಪೊಲೀಸರು ಅಟ್ಟಾಡಿಸಿ ಲಾಠಿಚಾರ್ಜ್ ಮಾಡಿದ್ದಾರೆ.
#ಉತ್ತರ_ಪ್ರದೇಶ ದ ಬುಲಂದ್ಶಹರ್ನಲ್ಲಿ, ಮೋದಿ ಸರ್ಕಾರ ಜಾರಿಗೆ ತಂದಿರುವ #ಅಗ್ನಿಪಥ್ ಯೋಜನೆಯನ್ನು ವಿರೋಧಿಸಿ ಮತ್ತು ಉದ್ಯೋಗಕ್ಕಾಗಿ ಪ್ರತಿಭಟನೆ ಮಾಡುತ್ತಿರುವ ಯುವಕರನ್ನು ಅಟ್ಟಾಡಿಸುತ್ತಿರುವ ಪೊಲೀಸರು
#ಉದ್ಯೋಗಕೊಡಿ #NaanuGauri #Agnipath #Agniveer #ಬುಲಂದ್ಶಹರ್ #ಯುಪಿ pic.twitter.com/lOVQ7cEUkb— Naanu Gauri (@naanugauri) June 16, 2022
ಅಗ್ನಿಪಥ್ ಯೋಜನೆಗೆ ಹರಿಯಾಣದಲ್ಲೂ ವಿರೋಧ ವ್ಯಕ್ತವಾಗಿದ್ದು, ಸೇನಾ ಉದ್ಯೋಗಾಂಕ್ಷಿಗಳು ನಡೆಸುತ್ತಿದ್ದ ಪ್ರತಿಭಟನೆಯಲ್ಲಿ ಹಿಂಸೆ ಭುಗಿಲೆದ್ದಿದೆ. ಉದ್ರಿಕ್ತ ಯುವಕರ ಗುಂಪು ಹಲವಾರು ಪೊಲೀಸ್ ವಾಹನಗಳಿಗೆ ಬೆಂಕಿ ಹಚ್ಚಿ, ಡಿಸಿ ಕಚೇರಿ ಮೇಲೆ ಕಲ್ಲು ತೂರಾಟ ನಡೆಸಿದೆ. ಪೊಲೀಸರು ಅಶ್ರುವಾಯು ಶೆಲ್ಗಳನ್ನು ಸಿಡಿಸಿ, ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ.
#ಹರಿಯಾಣ:ಮೋದಿ ಸರ್ಕಾರದ #ಅಗ್ನಿಪಥ್ ಯೋಜನೆ ವಿರೋಧಿಸಿ ಸೇನಾ ಉದ್ಯೋಗಾಂಕ್ಷಿಗಳು ನಡೆಸುತ್ತಿದ್ದ ಪ್ರತಿಭಟನೆಯಲ್ಲಿ ಹಿಂಸೆ ಭುಗಿಲೆದ್ದಿದೆ
ಉದ್ರಿಕ್ತ ಯುವಕರ ಗುಂಪು ಹಲವಾರು ಪೊಲೀಸ್ ವಾಹನಗಳಿಗೆ ಬೆಂಕಿ ಹಚ್ಚಿ, ಡಿಸಿ ಕಚೇರಿ ಮೇಲೆ ಕಲ್ಲು ತೂರಾಟ ನಡೆಸಿದೆ. ಪೊಲೀಸರು ಅಶ್ರುವಾಯು ಶೆಲ್ಗಳನ್ನು ಸಿಡಿಸಿ, ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ pic.twitter.com/u5ZGt4s1H1
— Naanu Gauri (@naanugauri) June 16, 2022
ಹರಿಯಾಣದ ರೋಹ್ಟಕ್ನಲ್ಲಿ 4 ವರ್ಷಗಳಿಂದ ಸೇನಾ ನೇಮಕಾತಿಗೆ ತಯಾರಿ ನಡೆಸಿದ್ದ ‘ಸಚಿನ್’ ಎಂಬ ಯುವಕ ನೇಣು ಬಿಗಿದು ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ. ಅವರು ತಮ್ಮ ಪಿಜಿಯಲ್ಲಿ ನೇಣುಬಿಗಿದಿದ್ದಾಗಿ ವರದಿಗಳು ಉಲ್ಲೇಖಿಸಿವೆ. ರಾಜ್ಯದ ಪಲ್ವಾಲ್ನಲ್ಲಿ ಹಿಂಸೆ ಭುಗಿಲೆದ್ದಿದ್ದು ಸರ್ಕಾರಿ ವಾಹನಗಳನ್ನು ಧ್ವಂಸಗೊಳಿಸಲಾಗಿದೆ.
#ಹರಿಯಾಣ: ರೋಹ್ಟಕ್ನಲ್ಲಿ 4 ವರ್ಷಗಳಿಂದ ಸೇನಾ ನೇಮಕಾತಿಗೆ ತಯಾರಿ ನಡೆಸಿದ್ದ ಯುವಕನೊಬ್ಬ ನೇಣು ಬಿಗಿದು ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ. #ಅಗ್ನಿಪಥ್ ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಹಿಂಸೆ ಭುಗಿಲೆದ್ದು ಪಲ್ವಾಲ್ನಲ್ಲಿ ಸರ್ಕಾರಿ ವಾಹನಗಳನ್ನು ಧ್ವಂಸಗೊಳಿಸಲಾಗಿದೆ#ಉದ್ಯೋಗಕೊಡಿ #NaanuGauri #Agnipath #Agniveer pic.twitter.com/AOMJaZLgV7
— Naanu Gauri (@naanugauri) June 16, 2022
ಉತ್ತರ ಪ್ರದೇಶದ ಅಲಿಗಢ್ನಲ್ಲಿ ಉದ್ರಿಕ್ತ ಯುವಕರ ಗುಂಪು ಗಭಾನಾ ಬಳಿ ಬಸ್ನ ಗಾಜು ಒಡೆದು ಹಾಕಿ, ಟೈರ್ಗಳಿಗೆ ಬೆಂಕಿ ಹಚ್ಚಿದ್ದಾರೆ.
ಉತ್ತರ ಪ್ರದೇಶದ ಅಲಿಗಢ್ ನಲ್ಲಿ #ಅಗ್ನಿಪಥ್ ಯೋಜನೆ ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ, ಉದ್ರಿಕ್ತ ಯುವಕರ ಗುಂಪು ಗಭಾನಾ ಬಳಿ ರಸ್ತೆ ಮಾರ್ಗದ ಬಸ್ನ ಗಾಜು ಒಡೆದು ಹಾಕಿದೆ. ಟೈರ್ಗಳಿಗೆ ಬೆಂಕಿ ಹಾಕಿಲಾಗಿದೆ.#ಉದ್ಯೋಗಕೊಡಿ #NaanuGauri #Agnipath #Agniveer #ಅಲಿಗಢ್ #ಯುಪಿ pic.twitter.com/hxjcCxTWG6
— Naanu Gauri (@naanugauri) June 16, 2022
ಉದ್ರಿಕ್ತ ಪ್ರತಿಭಟನಾಕಾರರು ರಾಜ್ಯದ ಸರ್ಕಾರಿ ಬಸ್ಗಳ ಗಾಜುಗಳನ್ನು ಒಡೆದು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ.
#ಉತ್ತರ_ಪ್ರದೇಶ ಅಲಿಗಢದಲ್ಲಿ #ಮೋದಿ ಸರ್ಕಾರದ #ಅಗ್ನಿಪಥ್ ಯೋಜನೆ ವಿರೋಧಿಸಿ ನಡೆಸುತ್ತಿರುವ ಯುವಜನರು ರಾಜ್ಯದ ಸರ್ಕಾರ ಬಸ್ಗಳ ಗಾಜುಗಳನ್ನು ಒಡೆದು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು#ಉದ್ಯೋಗಕೊಡಿ #NaanuGauri #Agnipath #Agniveer pic.twitter.com/UgdHV6jOwY
— Naanu Gauri (@naanugauri) June 16, 2022
ಹರಿಯಾಣದ ಪಲ್ವಾಲ್ನಲ್ಲಿ ಪೊಲೀಸರು ಮೇಲೆ ಕಲ್ಲು ತೂರಾಟ ನಡೆಸಲಾಗಿದೆ.
#ಮೋದಿ ಸರ್ಕಾರ ಜಾರಿಗೆ ತಂದಿರುವ #ಅಗ್ನಿಪಥ್ ಯೋಜನೆ ವಿರೋಧಿಸಿ #ಸೇನಾ_ಉದ್ಯೋಗಾಕಾಂಕ್ಷಿ ಗಳು ನಡೆಸುತ್ತಿರುವ ಪ್ರತಿಭಟನೆಯಲ್ಲಿ ಹಿಂಸೆ ಭುಗಿಲೆದ್ದಿದ್ದು, ಹರಿಯಾಣದ ಪಲ್ವಾಲ್ನಲ್ಲಿ ಕಲ್ಲು ತೂರಾಟ ನಡೆದಿದೆ.#ಉದ್ಯೋಗಕೊಡಿ #NaanuGauri #Agnipath #Agniveer pic.twitter.com/HqirsPkHno
— Naanu Gauri (@naanugauri) June 16, 2022
ಬಿಹಾರದ ಮೋತಿಹಾರಿಯಲ್ಲಿ ರೈಲಿಗೆ ಕಲ್ಲು ತೂರಾಟ ನಡೆಸಲಾಗಿದೆ.
#ಮೋದಿ ಸರ್ಕಾರ ಜಾರಿಗೆ ತಂದಿರುವ #ಅಗ್ನಿಪಥ್ ಯೋಜನೆ ವಿರೋಧಿಸಿ #ಸೇನಾ_ಉದ್ಯೋಗಾಕಾಂಕ್ಷಿ ಗಳು ನಡೆಸುತ್ತಿರುವ ಪ್ರತಿಭಟನೆಯಲ್ಲಿ ಹಿಂಸೆ ಭುಗಿಲೆದ್ದಿದ್ದು, #ಬಿಹಾರ ದ ಮೋತಿಹಾರಿಯಲ್ಲಿ ರೈಲಿಗೆ ಕಲ್ಲು ತೂರಾಟ ನಡೆಸಲಾಗಿದೆ#ಉದ್ಯೋಗಕೊಡಿ #NaanuGauri #Agnipath #Agniveer pic.twitter.com/XeAQUo1U04
— Naanu Gauri (@naanugauri) June 16, 2022
ಮೋದಿ ಸರ್ಕಾರ ಜಾರಿಗೆ ತರುತ್ತಿರುವ ಅಗ್ನಿಪಥ್ ಯೋಜನೆ ವಿರುದ್ಧದ ಪ್ರತಿಭಟನೆಗಳು ಜಮ್ಮುವಿನಲ್ಲೂ ಪ್ರತಿಧ್ವನಿಸಿದ್ದು, ಸೇನಾ ಉದ್ಯೋಗಾಕಾಂಕ್ಷಿ ಪ್ರತಿಭಟನಾಕಾರರ ಮೇಲೆ ಪೊಲೀಸರು ಲಾಠಿಚಾರ್ಜ್ ನಡೆಸಿದ್ದಾರೆ.
#ಮೋದಿ ಸರ್ಕಾರ ಜಾರಿಗೆ ತರುತ್ತಿರುವ #ಅಗ್ನಿಪಥ್ ಯೋಜನೆ ವಿರುದ್ಧದ ಪ್ರತಿಭಟನೆಗಳು #ಜಮ್ಮು-ಕಾಶ್ಮೀರಕ್ಕೆ ತಲುಪಿದೆ.
ಸೇನಾ ಉದ್ಯೋಗಾಕಾಂಕ್ಷಿ ಪ್ರತಿಭಟನಾಕಾರರ ಮೇಲೆ ಪೊಲೀಸರು #ಲಾಠಿಚಾರ್ಜ್ ನಡೆಸಿದ್ದಾರೆ.#ಉದ್ಯೋಗಕೊಡಿ #NaanuGauri #Agnipath #Agniveer pic.twitter.com/OM7fK6rArl— Naanu Gauri (@naanugauri) June 16, 2022
ಸೇನಾ ಉದ್ಯೋಗಾಕಾಂಕ್ಷಿಗಳು ನಡೆಸುತ್ತಿರುವ ಪ್ರತಿಭಟನೆಯನ್ನು ಚದುರಿಸಲು ಹರಿಯಾಣದ ಪಲ್ವಾಲ್ನಲ್ಲಿ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ.
#ಮೋದಿ ಸರ್ಕಾರ ಜಾರಿಗೆ ತಂದಿರುವ #ಅಗ್ನಿಪಥ್ ಯೋಜನೆಯನ್ನು ವಿರೋಧಿಸಿ ಸೇನಾ ಉದ್ಯೋಗಾಕಾಂಕ್ಷಿಗಳು ನಡೆಸುತ್ತಿರುವ ಪ್ರತಿಭಟನೆಯನ್ನು ಚದುರಿಸಲು ಹರಿಯಾಣದ ಪಲ್ವಾಲ್ನಲ್ಲಿ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ#ಉದ್ಯೋಗಕೊಡಿ #NaanuGauri #Agnipath #Agniveer pic.twitter.com/DmXiXumeFj
— Naanu Gauri (@naanugauri) June 16, 2022
#ಮೋದಿ ಸರ್ಕಾರ ಜಾರಿಗೆ ತಂದಿರುವ #ಅಗ್ನಿಪಥ್ ಯೋಜನೆಯನ್ನು ವಿರೋಧಿಸಿ ಸೇನಾ ಉದ್ಯೋಗಾಕಾಂಕ್ಷಿಗಳು ಬಿಹಾರದ ಅರಾದಲ್ಲಿ ಹಿಂಸಾತ್ಮಕ ಪ್ರತಿಭಟನೆಗೆ ಇಳಿದಿದ್ದಾರೆ. ರೈಲ್ವೇ ನಿಲ್ದಾಣದಲ್ಲಿ ಕಲ್ಲು ತೂರಾಟ ನಡೆಸಲಾಗಿದೆ.#ಉದ್ಯೋಗಕೊಡಿ #NaanuGauri #Agnipath #Agniveer pic.twitter.com/DLAR8dk4jT
— Naanu Gauri (@naanugauri) June 16, 2022


