Homeಕರ್ನಾಟಕಹಿಜಾಬ್ ಕುರಿತ ತಪ್ಪಾದ ವರದಿ ಬಗ್ಗೆ ಚರ್ಚೆಗೂ ತಯಾರಿಲ್ಲದ ಪಬ್ಲಿಕ್‌ ಟಿವಿ: ‘ಹೇಟ್‌ ಸ್ಪೀಚ್‌ ಬೇಡ’...

ಹಿಜಾಬ್ ಕುರಿತ ತಪ್ಪಾದ ವರದಿ ಬಗ್ಗೆ ಚರ್ಚೆಗೂ ತಯಾರಿಲ್ಲದ ಪಬ್ಲಿಕ್‌ ಟಿವಿ: ‘ಹೇಟ್‌ ಸ್ಪೀಚ್‌ ಬೇಡ’ ತಂಡ ಆಕ್ರೋಶ

- Advertisement -
- Advertisement -

ಹಿಜಾಬ್ ಕುರಿತು ಮಾಡಲಾಗುತ್ತಿರುವ ತಪ್ಪಾದ ವರದಿಗಳ ಬಗ್ಗೆ ಚರ್ಚಿಸಲು ಕನ್ನಡದ ಸುದ್ದಿ ಮಾಧ್ಯಮ ಪಬ್ಲಿಕ್ ಟಿವಿಯ ಕಚೇರಿಗೆ ತೆರಳಿದ್ದವರನ್ನು ಕಚೇರಿಯ ಹೊರಗೆ ಗಂಟೆಗಳ ಕಾಲ ಕಾಯಿಸಿ ಮಾತನಾಡಲು ನಿರಾಕರಿಸಿದ್ದಾರೆ ಎಂದು “ಹೇಟ್‌ ಸ್ಪೀಚ್‌‌ ಬೇಡ” ಅಭಿಯಾನದ ಸಂಘಟಕರು ಹೇಳಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಹೇಟ್‌ ಸ್ಪೀಚ್‌ ಬೇಡ ತಂಡವು, “ಪಬ್ಲಿಕ್ ಟಿವಿಗೆ ಪಬ್ಲಿಕ್ ಜೊತೆಗೆ ಮಾತನಾಡಲು ಏನು ಸಂಕಷ್ಟ, ಸಾರ್ವಜನಿಕರ ಜೊತೆಗೆ ಮಾತನಾಡಲು ಅವರಿಗೆ ನಿರ್ಬಂಧವಿದೆಯೆ” ಎಂದು ಆಕ್ರೋಶ ವ್ಯಕ್ತಪಡಿಸಿದೆ.

ಈ ಬಗ್ಗೆ ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿರುವ ‘ಹೇಟ್‌ ಸ್ಪೀಚ್‌ ಬೇಡ’ ಅಭಿಯಾನದ ತಂಡ, “Campaign Against Hate Speech ವತಿಯಿಂದ ಒಂದು ತಂಡವಾಗಿ ಪಬ್ಲಿಕ್‌‌ ಟಿವಿಯ ಸಂಪಾದಕರು ಮತ್ತು ಪತ್ರಕರ್ತರನ್ನು ಭೇಟಿ ಮಾಡಿ, ಚಾನೆಲ್ಲಿನ ಇತ್ತೀಚಿನ ಹಿಜಾಬ್ ವಿಷಯದ ವರದಿಗಾರಿಕೆಯ ಬಗ್ಗೆ ಚರ್ಚೆ ಮಾಡಲು ತೆರಳಿದ್ದವು. ಆದರೆ ಅಲ್ಲಿ ಸಾರ್ವಜನಿಕರಿಗೆ ಕೊರೊನಾ ನಿಯಮಾವಳಿಯ ಪ್ರಕಾರ ಪ್ರವೇಶವಿಲ್ಲವೆಂದು ನಮ್ಮನ್ನು ಹೊರಗೆ ನಿಲ್ಲಿಸಿದರು. ಸ್ವಲ್ಪ ಸಮಯ ಕಳೆದ ನಂತರ, ಒಬ್ಬೊಬ್ಬರಾಗಿ ಮೂರು ವರದಿಗಾರರು ಬಂದು ನಮ್ಮ ಪತ್ರವನ್ನು ಓದಿ ಹೋದರೇ ಹೊರತು ಸಂಪಾದಕರು ಅಥವಾ ಹಿರಿಯ ಸಂಪಾದಕರು ಚರ್ಚೆಗೆ ಬರಲು ನಮ್ಮ ಮನವಿಯನ್ನು ಒಪ್ಪಿಕೊಳ್ಳಲಿಲ್ಲ” ಎಂದು ಹೇಳಿದೆ.

“ಒಂದು ಘಂಟೆಯವರೆಗೂ ನಮ್ಮನ್ನು ಕಾಯಿಸಿದ್ದಾರೆ. ‘ಪತ್ರವನ್ನು ಸ್ವೀಕರಿಸಿದ್ದೇವೆ ಎಂದು ಅಂಗೀಕರಿಸಿ ಕೊಡಿ’ ಎನ್ನುವ ನಮ್ಮ ಮನವಿಯನ್ನು ಕೂಡ ಒಪ್ಪಲ್ಲಿಲ್ಲ. ಕಾನೂನಿನ ನೋಟಿಸ್ ಕಳುಹಿಸಿ ಅದಕ್ಕೆ ನಾವು ಉತ್ತರ ಕೊಡುತ್ತೇವೆ ಎಂದು ನಮ್ಮ ಚರ್ಚೆಯ ಮನವಿಯನ್ನು ಚಾನೆಲ್‌ ನಿರಾಕರಿಸಿದೆ” ಎಂದು ‘ಹೇಟ್‌ ಸ್ಪೀಟ್‌ ಬೇಡ’ ತಂಡ ಹೇಳಿದೆ.

ಚಾನೆಲ್‌ನ ನಡೆಗೆ ಆಕ್ರೋಶ ವ್ಯಕ್ತಪಡಿಸಿರುವ ‘ಹೇಟ್‌ ಸ್ಪೀಟ್‌ ಬೇಡ’ ತಂಡ, “ಚಾನೆಲ್‌ನ ಈ ನಡೆಯಿಂದಾಗಿ ವೀಕ್ಷಕರಾದ ನಮಗೆ ತುಂಬಾ ಬೇಸರವಾಗಿದ್ದು, ಪಬ್ಲಿಕ್‌ ಟಿವಿಗೆ ಸಾರ್ವಜನಿಕರ ಜೊತೆಗೆ ಮಾತಾಡಲು ಏನು ಸಂಕಷ್ಟ? ಅವರಿಗೆ ಸಾರ್ವಜನಿಕರ ಜೊತೆ ಮಾತಾಡಲು ನಿರ್ಬಂಧವಿದೆಯೇ? ಕೇವಲ ಕಾನೂನಿನ ಮೂಲಕ ಚಾನೆಲ್‌ಗಳ ಜೊತೆ ಮಾತನಾಡ ಬೇಕೆ?” ಎಂದು ಪ್ರಶ್ನಿಸಿದೆ.

ಮಾಧ್ಯಮಗಳಲ್ಲಿ ನಡೆಸಲಾಗುವ ದ್ವೇಷದ ವರದಿಗಾರಿಕೆಯನ್ನು ವಿರೋಧಿಸಿ ‘ಹೇಟ್‌ ಸ್ಪೀಚ್‌ ಬೇಡ’ ಅಭಿಯಾನದ ತಂಡವು ನಿರಂತರವಾಗಿ ಹೋರಾಡುತ್ತಿದೆ. ಕೊರೊನಾ ಪ್ರಾರಂಭದ ಸಮಯದಲ್ಲಿ ‘ತಬ್ಲೀಘಿ ವೈರಸ್‌’ ಎಂದು ಒಂದು ಸಮುದಾಯದ ಮೇಲೆ ಪೂರ್ವಾಗ್ರಹದಿಂದ ವರದಿ ಮಾಡಿದ್ದ ‘ಟೈಮ್ಸ್‌ ನೌ’, ‘ಸುವರ್ಣ ನ್ಯೂಸ್‌’ ಮತ್ತು ‘ನ್ಯೂಸ್‌18ಕನ್ನಡ’ ಚಾನೆಲ್‌ಗಳ ವಿರುದ್ಧ ಹೋರಾಟ ನಡೆಸಿತ್ತು. ಈ ಹೋರಾಟದ ಪರಿಣಾಮವಾಗಿ ನ್ಯೂಸ್‌18ಕನ್ನಡ ಮತ್ತು ಸುವರ್ಣ ನ್ಯೂಸ್‌‌ಗಳಿಗೆ ನ್ಯೂಸ್ ಬ್ರಾಡ್ಕಾಸ್ಟಿಂಗ್ ಸ್ಟ್ಯಾಂಡರ್ಡ್ಸ್ ಅಥಾರಿಟಿ (NBSA) ಯು ಕ್ರಮವಾಗಿ 1 ಲಕ್ಷ ಮತ್ತು 50 ಸಾವಿರ ದಂಡವನ್ನು ವಿಧಿಸಿತ್ತು. ಜೊತೆಗೆ ಇದೇ ವಿಷಯಕ್ಕೆ ಇಂಗ್ಲಿಷ್ ನ್ಯೂಸ್ ಚಾನೆಲ್ ಟೈಮ್ಸ್ ನೌ ಅನ್ನು NBSA ಖಂಡಿಸಿತ್ತು.

ಇದನ್ನೂ ಓದಿ: ತಬ್ಲೀಘಿಗಳನ್ನು ಕೆಟ್ಟದಾಗಿ ಬಿಂಬಿಸಿದ್ದಕ್ಕೆ ಕ್ಷಮೆ ಕೇಳಿದ ‘ನ್ಯೂಸ್‌18 ಕನ್ನಡ’! 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

4 COMMENTS

  1. “ನಾವು ಹೇಳಿದ್ದೇ ಸತ್ಯ. ನಾವು ಪ್ರಶ್ನಾತೀತರು” ಎಂಬುದು ಮನುವಾದಿ ಮಾಧ್ಯಮಗಳ ನಿಲುವು. ಇಂತವರ ಜೊತೆಗೆ ಚರ್ಚೆಗೆ ಹೋಗುವುದು ಸಮಯದ ವ್ಯರ್ಥ.

  2. ನನ್ನ ಪ್ರಕಾರ ಇದಂತೂ ಸಣ್ಣ ವಿಷಯ.ದೊಡ್ಡ ದೊಡ್ಡ ವಿಷಯಗಳನ್ನೇ ಚರ್ಚೆ ಮಾಡದೇ ಕೇವಲ ದ್ವೇಶದ ಆಧಾರದ ಮೇಲೆ ಸಂಘಿಗಳು ಚುನಾವಣಾ ವಿಷಯ ಮಾಡಿಕೊಂಡು,ಕೆಲವನ್ನ ಜಾರಿ ಕೂಡಾ ಮಾಡಿಲ್ಲವೆ?

    ಏಕರೂಪ ನಾಗರೀಕ ಸಂಹಿತೆ,ಆರ್ಟಿಕಲ್ ೩೭೦,
    ನೋಟಬಂದಿ,ಕೃಷಿ ಬಿಲ್ಲುಗಳು ಯಾವುದನ್ನ ಇವರು ಪಬ್ಲಿಕ್ಕಾಗಿ ಚರ್ಚಿಸಿದ್ದಾರೆ?

  3. ನಗರ ನಕ್ಸಲೀಯರ ಗುಂಪೆ, ತಮ್ಮ ಹಿಂದೂ ವಿರೋಧಿ ಮನಸ್ಥಿತಿ ತಿಳಿದಿರುವುದೇ, ನೀವು ನಂಬಿರುವುದೇ ನಿಜ, ನೀವೇ ಎಲ್ಲವನ್ನು ಕೆಂಪಾಗಿಸುವ ಆತುರದಲ್ಲಿ ಕೆಲವು ಬಣ್ಣಗಳನ್ನು ದ್ವೇಷಿಸುವುದು ಕೆಲವು ಬಣ್ಣಗಳನ್ನು ಸಮಜಾಯಿಸುವುದು ಪೂರ್ಣ ಸತ್ಯ

  4. ಅದೊಂದು ಬಿಜೆಪಿ ಪರವೆಂದು ಘಂಟಾಘೋಷವಾಗಿ ತೋರಿಸಿ ಕೊಳ್ಳುವ ಚಾನಲ್. ರಂಗನಾಥ ಅಂತೂ ಕೇಂದ್ರ ಸರ್ಕಾರವನ್ನು ಅಪ್ಪತಪ್ಪಿಯೂ ಟೀಕಿಸುವುದಿಲ್ಲ.‌ಅಂತಹವರ ಜೊತೆ ಮಾತೇ ವ್ಯರ್ಥ, ಆವಯ್ಯಂದು ಏನಿದ್ರೂ ಬಾಯಿ ಮಾತಿನ ಸತ್ಯ ನೇರ ಅಷ್ಟೇ. ಮಾಧ್ಯಮಗಳು ಸಮಾಜದ‌ ಸಾಮರಸ್ಯ ಕಾಪಾಡಬೇಕೇ‌ ಹೊರತು ಕದಡಬಾರದೆಂಬ ಸಾಮಾನ್ಯ ಜ್ಞಾನವೂ ಇಲ್ಲದ‌ಮಾಧ್ಯಮಗಳಿಂದ ದೇಶಕ್ಕೆ ಏನೂ ಪ್ರಯೋಜನವಿಲ್ಲ.

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...