Homeಕರ್ನಾಟಕಹಿಜಾಬ್ ಕುರಿತ ತಪ್ಪಾದ ವರದಿ ಬಗ್ಗೆ ಚರ್ಚೆಗೂ ತಯಾರಿಲ್ಲದ ಪಬ್ಲಿಕ್‌ ಟಿವಿ: ‘ಹೇಟ್‌ ಸ್ಪೀಚ್‌ ಬೇಡ’...

ಹಿಜಾಬ್ ಕುರಿತ ತಪ್ಪಾದ ವರದಿ ಬಗ್ಗೆ ಚರ್ಚೆಗೂ ತಯಾರಿಲ್ಲದ ಪಬ್ಲಿಕ್‌ ಟಿವಿ: ‘ಹೇಟ್‌ ಸ್ಪೀಚ್‌ ಬೇಡ’ ತಂಡ ಆಕ್ರೋಶ

- Advertisement -
- Advertisement -

ಹಿಜಾಬ್ ಕುರಿತು ಮಾಡಲಾಗುತ್ತಿರುವ ತಪ್ಪಾದ ವರದಿಗಳ ಬಗ್ಗೆ ಚರ್ಚಿಸಲು ಕನ್ನಡದ ಸುದ್ದಿ ಮಾಧ್ಯಮ ಪಬ್ಲಿಕ್ ಟಿವಿಯ ಕಚೇರಿಗೆ ತೆರಳಿದ್ದವರನ್ನು ಕಚೇರಿಯ ಹೊರಗೆ ಗಂಟೆಗಳ ಕಾಲ ಕಾಯಿಸಿ ಮಾತನಾಡಲು ನಿರಾಕರಿಸಿದ್ದಾರೆ ಎಂದು “ಹೇಟ್‌ ಸ್ಪೀಚ್‌‌ ಬೇಡ” ಅಭಿಯಾನದ ಸಂಘಟಕರು ಹೇಳಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಹೇಟ್‌ ಸ್ಪೀಚ್‌ ಬೇಡ ತಂಡವು, “ಪಬ್ಲಿಕ್ ಟಿವಿಗೆ ಪಬ್ಲಿಕ್ ಜೊತೆಗೆ ಮಾತನಾಡಲು ಏನು ಸಂಕಷ್ಟ, ಸಾರ್ವಜನಿಕರ ಜೊತೆಗೆ ಮಾತನಾಡಲು ಅವರಿಗೆ ನಿರ್ಬಂಧವಿದೆಯೆ” ಎಂದು ಆಕ್ರೋಶ ವ್ಯಕ್ತಪಡಿಸಿದೆ.

ಈ ಬಗ್ಗೆ ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿರುವ ‘ಹೇಟ್‌ ಸ್ಪೀಚ್‌ ಬೇಡ’ ಅಭಿಯಾನದ ತಂಡ, “Campaign Against Hate Speech ವತಿಯಿಂದ ಒಂದು ತಂಡವಾಗಿ ಪಬ್ಲಿಕ್‌‌ ಟಿವಿಯ ಸಂಪಾದಕರು ಮತ್ತು ಪತ್ರಕರ್ತರನ್ನು ಭೇಟಿ ಮಾಡಿ, ಚಾನೆಲ್ಲಿನ ಇತ್ತೀಚಿನ ಹಿಜಾಬ್ ವಿಷಯದ ವರದಿಗಾರಿಕೆಯ ಬಗ್ಗೆ ಚರ್ಚೆ ಮಾಡಲು ತೆರಳಿದ್ದವು. ಆದರೆ ಅಲ್ಲಿ ಸಾರ್ವಜನಿಕರಿಗೆ ಕೊರೊನಾ ನಿಯಮಾವಳಿಯ ಪ್ರಕಾರ ಪ್ರವೇಶವಿಲ್ಲವೆಂದು ನಮ್ಮನ್ನು ಹೊರಗೆ ನಿಲ್ಲಿಸಿದರು. ಸ್ವಲ್ಪ ಸಮಯ ಕಳೆದ ನಂತರ, ಒಬ್ಬೊಬ್ಬರಾಗಿ ಮೂರು ವರದಿಗಾರರು ಬಂದು ನಮ್ಮ ಪತ್ರವನ್ನು ಓದಿ ಹೋದರೇ ಹೊರತು ಸಂಪಾದಕರು ಅಥವಾ ಹಿರಿಯ ಸಂಪಾದಕರು ಚರ್ಚೆಗೆ ಬರಲು ನಮ್ಮ ಮನವಿಯನ್ನು ಒಪ್ಪಿಕೊಳ್ಳಲಿಲ್ಲ” ಎಂದು ಹೇಳಿದೆ.

“ಒಂದು ಘಂಟೆಯವರೆಗೂ ನಮ್ಮನ್ನು ಕಾಯಿಸಿದ್ದಾರೆ. ‘ಪತ್ರವನ್ನು ಸ್ವೀಕರಿಸಿದ್ದೇವೆ ಎಂದು ಅಂಗೀಕರಿಸಿ ಕೊಡಿ’ ಎನ್ನುವ ನಮ್ಮ ಮನವಿಯನ್ನು ಕೂಡ ಒಪ್ಪಲ್ಲಿಲ್ಲ. ಕಾನೂನಿನ ನೋಟಿಸ್ ಕಳುಹಿಸಿ ಅದಕ್ಕೆ ನಾವು ಉತ್ತರ ಕೊಡುತ್ತೇವೆ ಎಂದು ನಮ್ಮ ಚರ್ಚೆಯ ಮನವಿಯನ್ನು ಚಾನೆಲ್‌ ನಿರಾಕರಿಸಿದೆ” ಎಂದು ‘ಹೇಟ್‌ ಸ್ಪೀಟ್‌ ಬೇಡ’ ತಂಡ ಹೇಳಿದೆ.

ಚಾನೆಲ್‌ನ ನಡೆಗೆ ಆಕ್ರೋಶ ವ್ಯಕ್ತಪಡಿಸಿರುವ ‘ಹೇಟ್‌ ಸ್ಪೀಟ್‌ ಬೇಡ’ ತಂಡ, “ಚಾನೆಲ್‌ನ ಈ ನಡೆಯಿಂದಾಗಿ ವೀಕ್ಷಕರಾದ ನಮಗೆ ತುಂಬಾ ಬೇಸರವಾಗಿದ್ದು, ಪಬ್ಲಿಕ್‌ ಟಿವಿಗೆ ಸಾರ್ವಜನಿಕರ ಜೊತೆಗೆ ಮಾತಾಡಲು ಏನು ಸಂಕಷ್ಟ? ಅವರಿಗೆ ಸಾರ್ವಜನಿಕರ ಜೊತೆ ಮಾತಾಡಲು ನಿರ್ಬಂಧವಿದೆಯೇ? ಕೇವಲ ಕಾನೂನಿನ ಮೂಲಕ ಚಾನೆಲ್‌ಗಳ ಜೊತೆ ಮಾತನಾಡ ಬೇಕೆ?” ಎಂದು ಪ್ರಶ್ನಿಸಿದೆ.

ಮಾಧ್ಯಮಗಳಲ್ಲಿ ನಡೆಸಲಾಗುವ ದ್ವೇಷದ ವರದಿಗಾರಿಕೆಯನ್ನು ವಿರೋಧಿಸಿ ‘ಹೇಟ್‌ ಸ್ಪೀಚ್‌ ಬೇಡ’ ಅಭಿಯಾನದ ತಂಡವು ನಿರಂತರವಾಗಿ ಹೋರಾಡುತ್ತಿದೆ. ಕೊರೊನಾ ಪ್ರಾರಂಭದ ಸಮಯದಲ್ಲಿ ‘ತಬ್ಲೀಘಿ ವೈರಸ್‌’ ಎಂದು ಒಂದು ಸಮುದಾಯದ ಮೇಲೆ ಪೂರ್ವಾಗ್ರಹದಿಂದ ವರದಿ ಮಾಡಿದ್ದ ‘ಟೈಮ್ಸ್‌ ನೌ’, ‘ಸುವರ್ಣ ನ್ಯೂಸ್‌’ ಮತ್ತು ‘ನ್ಯೂಸ್‌18ಕನ್ನಡ’ ಚಾನೆಲ್‌ಗಳ ವಿರುದ್ಧ ಹೋರಾಟ ನಡೆಸಿತ್ತು. ಈ ಹೋರಾಟದ ಪರಿಣಾಮವಾಗಿ ನ್ಯೂಸ್‌18ಕನ್ನಡ ಮತ್ತು ಸುವರ್ಣ ನ್ಯೂಸ್‌‌ಗಳಿಗೆ ನ್ಯೂಸ್ ಬ್ರಾಡ್ಕಾಸ್ಟಿಂಗ್ ಸ್ಟ್ಯಾಂಡರ್ಡ್ಸ್ ಅಥಾರಿಟಿ (NBSA) ಯು ಕ್ರಮವಾಗಿ 1 ಲಕ್ಷ ಮತ್ತು 50 ಸಾವಿರ ದಂಡವನ್ನು ವಿಧಿಸಿತ್ತು. ಜೊತೆಗೆ ಇದೇ ವಿಷಯಕ್ಕೆ ಇಂಗ್ಲಿಷ್ ನ್ಯೂಸ್ ಚಾನೆಲ್ ಟೈಮ್ಸ್ ನೌ ಅನ್ನು NBSA ಖಂಡಿಸಿತ್ತು.

ಇದನ್ನೂ ಓದಿ: ತಬ್ಲೀಘಿಗಳನ್ನು ಕೆಟ್ಟದಾಗಿ ಬಿಂಬಿಸಿದ್ದಕ್ಕೆ ಕ್ಷಮೆ ಕೇಳಿದ ‘ನ್ಯೂಸ್‌18 ಕನ್ನಡ’! 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

4 COMMENTS

  1. “ನಾವು ಹೇಳಿದ್ದೇ ಸತ್ಯ. ನಾವು ಪ್ರಶ್ನಾತೀತರು” ಎಂಬುದು ಮನುವಾದಿ ಮಾಧ್ಯಮಗಳ ನಿಲುವು. ಇಂತವರ ಜೊತೆಗೆ ಚರ್ಚೆಗೆ ಹೋಗುವುದು ಸಮಯದ ವ್ಯರ್ಥ.

  2. ನನ್ನ ಪ್ರಕಾರ ಇದಂತೂ ಸಣ್ಣ ವಿಷಯ.ದೊಡ್ಡ ದೊಡ್ಡ ವಿಷಯಗಳನ್ನೇ ಚರ್ಚೆ ಮಾಡದೇ ಕೇವಲ ದ್ವೇಶದ ಆಧಾರದ ಮೇಲೆ ಸಂಘಿಗಳು ಚುನಾವಣಾ ವಿಷಯ ಮಾಡಿಕೊಂಡು,ಕೆಲವನ್ನ ಜಾರಿ ಕೂಡಾ ಮಾಡಿಲ್ಲವೆ?

    ಏಕರೂಪ ನಾಗರೀಕ ಸಂಹಿತೆ,ಆರ್ಟಿಕಲ್ ೩೭೦,
    ನೋಟಬಂದಿ,ಕೃಷಿ ಬಿಲ್ಲುಗಳು ಯಾವುದನ್ನ ಇವರು ಪಬ್ಲಿಕ್ಕಾಗಿ ಚರ್ಚಿಸಿದ್ದಾರೆ?

  3. ನಗರ ನಕ್ಸಲೀಯರ ಗುಂಪೆ, ತಮ್ಮ ಹಿಂದೂ ವಿರೋಧಿ ಮನಸ್ಥಿತಿ ತಿಳಿದಿರುವುದೇ, ನೀವು ನಂಬಿರುವುದೇ ನಿಜ, ನೀವೇ ಎಲ್ಲವನ್ನು ಕೆಂಪಾಗಿಸುವ ಆತುರದಲ್ಲಿ ಕೆಲವು ಬಣ್ಣಗಳನ್ನು ದ್ವೇಷಿಸುವುದು ಕೆಲವು ಬಣ್ಣಗಳನ್ನು ಸಮಜಾಯಿಸುವುದು ಪೂರ್ಣ ಸತ್ಯ

  4. ಅದೊಂದು ಬಿಜೆಪಿ ಪರವೆಂದು ಘಂಟಾಘೋಷವಾಗಿ ತೋರಿಸಿ ಕೊಳ್ಳುವ ಚಾನಲ್. ರಂಗನಾಥ ಅಂತೂ ಕೇಂದ್ರ ಸರ್ಕಾರವನ್ನು ಅಪ್ಪತಪ್ಪಿಯೂ ಟೀಕಿಸುವುದಿಲ್ಲ.‌ಅಂತಹವರ ಜೊತೆ ಮಾತೇ ವ್ಯರ್ಥ, ಆವಯ್ಯಂದು ಏನಿದ್ರೂ ಬಾಯಿ ಮಾತಿನ ಸತ್ಯ ನೇರ ಅಷ್ಟೇ. ಮಾಧ್ಯಮಗಳು ಸಮಾಜದ‌ ಸಾಮರಸ್ಯ ಕಾಪಾಡಬೇಕೇ‌ ಹೊರತು ಕದಡಬಾರದೆಂಬ ಸಾಮಾನ್ಯ ಜ್ಞಾನವೂ ಇಲ್ಲದ‌ಮಾಧ್ಯಮಗಳಿಂದ ದೇಶಕ್ಕೆ ಏನೂ ಪ್ರಯೋಜನವಿಲ್ಲ.

LEAVE A REPLY

Please enter your comment!
Please enter your name here

- Advertisment -

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...

ತಾರತಮ್ಯ ಮುಕ್ತ ಕ್ಯಾಂಪಸ್ ನಿರ್ಮಾಣದತ್ತ ಮಹತ್ವದ ಹೆಜ್ಜೆ; ‘ರೋಹಿತ್ ವೇಮುಲ ಮಸೂದೆ’ಗೆ ಸಚಿವ ಸಂಪುಟ ಅನುಮೋದನೆ

ಕರ್ನಾಟಕ ಸರ್ಕಾರದ ಸಚಿವ ಸಂಪುಟ ಗುರುವಾರ (ಏ.16) ದಂದು ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ’ಗೆ ಅನುಮೋದನೆ ನೀಡಿದೆ. ಹೈದರಾಬಾದ್‌ನ ಕೆಂದ್ರೀಯ ವಿಶ್ವವಿದ್ಯಾಲಯದಲ್ಲಿ...