Homeಕರ್ನಾಟಕಪುತ್ತೂರು ದಲಿತ ಹುಡುಗಿಯ ಅಮಾನುಷ ಅತ್ಯಾಚಾರಕ್ಕೆ ನ್ಯಾಯ ಸಿಗಬೇಕಿದೆ... ಕಾರಣರಾದವರಿಗೆ ಗರಿಷ್ಠ ಶಿಕ್ಷೆಯಾಗಬೇಕಿದೆ

ಪುತ್ತೂರು ದಲಿತ ಹುಡುಗಿಯ ಅಮಾನುಷ ಅತ್ಯಾಚಾರಕ್ಕೆ ನ್ಯಾಯ ಸಿಗಬೇಕಿದೆ… ಕಾರಣರಾದವರಿಗೆ ಗರಿಷ್ಠ ಶಿಕ್ಷೆಯಾಗಬೇಕಿದೆ

- Advertisement -
- Advertisement -

ಪುತ್ತೂರಿನ ವಿವೇಕಾನಂದ ಕಾಲೇಜೆಂದರೆ ಶುದ್ದ ಸಂಘಪರಿವಾರದ ಸಂಸ್ಕಾರ- ಸಂಸ್ಕೃತಿಯ ವಿದ್ಯಾಸಂಸ್ಥೆ. ಹಿಂದೂತ್ವದ ಬ್ರೈನ್ ವಾಶಿಂಗ್ ಕೇಂದ್ರ; ಮತಾಂಧ ಆಕ್ರಮಣಶೀಲ ತರಬೇತಿಯ ಗರಡಿಮನೆ. ಎಬಿವಿಪಿ ಸಂಘಟನೆ ಒಂದನ್ನು ಬಿಟ್ಟು ಉಳಿದ್ಯಾವ ವಿದ್ಯಾರ್ಥಿ ಸಂಘಟನೆಗಳಿಗೂ ಈ ಕಾಲೇಜಿನಲ್ಲಿ ಅವಕಾಶವಿಲ್ಲ. ಕರಾವಳಿ ಸಂಘ ಅಂಗ ಪಡೆಗಳ ತೆರೆಮರೆಯ ರಿಂಗ್ ಮಾಸ್ಟರ್ ಕಲ್ಲಡ್ಕ ಪ್ರಭಾಕರ ಭಟ್ ಬಳಗದ ಯಜಮಾನಿಕೆಯಲ್ಲಿದೆ ವಿವೇಕಾನಂದ ಕಾಲೇಜು. ಹಿಂದು ಸಂಸ್ಕೃತಿಯಷ್ಟು ಪರಮ ಪವಿತ್ರ ಧರ್ಮ ಈ ಭೂಮಂಡಲದಲ್ಲೇ ಮತ್ತೊಂದಿಲ್ಲ ಎಂದು ಉದ್ದುದ್ದ ಭಾಷಣ ಬಿಗಿದು ಮುಗ್ಧ ಹಿಂದುಳಿದ ವರ್ಗದ ಯುವಕ/ಯುವತಿಯರ ದಿಕ್ಕು ತಪ್ಪಿಸುವ ಕಲ್ಲಡ್ಕ ಭಟ್ಟರ ಸದರಿ ಕಾಲೇಜಿನ ಐವರು ವಿದ್ಯಾರ್ಥಿಗಳು ಸಹಪಾಠಿ ದಲಿತ ವಿದ್ಯಾರ್ಥಿನಿಯನ್ನು ಕಾಡಿಗೆ ಅಪಹರಿಸಿ ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ. ಇಂತಹ ದುರ್ನಡತೆಯನ್ನು ಮೊಬೈಲ್‍ನಲ್ಲಿ ಚಿತ್ರೀಕರಿಸಿ ಹರಿಯಬಿಟ್ಟಿದ್ದಾರೆ.

ಅಲ್ಲಿಗೆ ಹಿಂದುತ್ವದ ಅಸಲಿ ಅವತಾರ ಜಗತ್ತಿನಾದ್ಯಂತ ವೈರಲ್ ಆಗಿ ಹೋಗಿದೆ. ರೇಪಿಸ್ಟ್ ಹುಡುಗರೆಲ್ಲರೂ ಎಬಿವಿಪಿಯಲ್ಲಿ ಪಳಗಿದವರು. ಸಂತ್ರಸ್ಥೆಯು ಸಹ ಇದೇ ಕೇಸರಿ ಒಕ್ಕೂಟದ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದ್ದವಳೆ. ಸ್ನೇಹ-ಸಲಿಗೆಯಲ್ಲಿದ್ದವರು. ಬುಡಕಟ್ಟು ಸಮುದಯಕ್ಕೆ ಸೇರಿದ ಈ ಹುಡುಗಿಯ ತಾಯಿ ಬಿಜೆಪಿಯಿಂದ ಗೆದ್ದಿರುವ ಗ್ರಾಮ ಪಂಚಾಯತ್ ಸದಸ್ಯೆ ಕೂಡ. ಹಿಂದುತ್ವ ಆರ್.ಎಸ್.ಎಸ್ ಬಿಜೆಪಿ ಎಬಿವಿಪಿ ಕಲಸುಮೇಲೋಗರಗೊಂಡ ಕೂಟವಿದು.! ಆ ಕಿರಾತಕ ಹುಡುಗರು ಅದ್ಯಾವಾಗ ಈ ಅಮಾಯಕ ಹುಡುಗಿಯ ಮೇಲೆ ಕಣ್ಣು ಹಾಕಿ ಸ್ಕೆಚ್ ಹಾಕಿದ್ದರೋ?

ಮೊನ್ನೆ ಆಕೆ ಕ್ಲಾಸ್ ಮುಗಿಸಿ ಮನೆಗೆ ಹೋಗಲು ಬಸ್ ಕಾಯುತ್ತಾ ನಿಂತಿದ್ದಳು. ಆಗ ಬಸ್ ಸ್ಟ್ಯಾಂಡಿಗೆ ಬಂದ ಪಂಚ ಪಾತಕ ಪಡೆ ಏನೋ ಅರ್ಜೆಂಟಾಗಿ ಮುಖ್ಯವಾದ ವಿಷಯ ಮಾತಾಡಲಿಕ್ಕಿದೆ ಬಾ ಎಂದು ಹುಡುಗಿಯನ್ನು ಕಾರಲ್ಲಿ ಕರೆದೊಯ್ದಿದ್ದಾರೆ. ಕಾರು ಊರು ಬಿಟ್ಟು ಕಾಡಿನ ದಾರಿ ಹಿಡಿಯುತ್ತಿದ್ದಂತೆಯೇ ಅಪಾಯದ ಅರಿವಾದ ಹುಡುಗಿ ಕಂಗಾಲಾಗಿದ್ದಾಳೆ. ಬೊಬ್ಬೆ ಹೊಡೆದಿದ್ದಾಳೆ, ಕೊಸರಾಡಿ ಚೀರಾಡಿದ್ದಾಳೆ. ಆಗ ಆಕೆಯ ಬಾಯಿ ಒತ್ತಿ ಹಿಡಿದು ಸದ್ದು ಮಾಡದಂತೆ ತಡೆದಿದ್ದಾರೆ. ಆಕೆಗೆ ಬಲಾತ್ಕಾರವಾಗಿ ಮತ್ತು ಬರುವ ತಿಂಡಿ ತುರುಕಿದ್ದಾರೆ. ಅದರಲ್ಲಿ ಗಾಂಜಾ ಬೆರೆಸಲಾಗಿತ್ತು ಎಂದು ಹೇಳಲಾಗುತ್ತಿದೆ. ಪ್ರಜ್ಞೆ ತಪ್ಪಿದ ಹುಡುಗಿಯನ್ನು ಸಾಮೂಹಿಕವಾಗಿ ಅತ್ಯಾಚಾರವೆಸಗಿ ಅದನ್ನು ವಿಡಿಯೋ ಮಾಡಿಕೊಂಡಿದ್ದಾರೆ. ಆ ಮುಗ್ಧ ಹುಡುಗಿಯನ್ನು ಹುರಿದು ತಿಂದ ಈ ಕಾಮುಕರು ಕಿಶನ್ ಆಚಾರಿ, ಪ್ರಜ್ವಲ್, ಗುರುನಂದನ್, ಸುನೀಲ್ ಮತ್ತು ಪ್ರಖ್ಯಾತ್ ರಾತ್ರಿ ಹೊತ್ತು ಆರ್‍ಎಸ್‍ಎಸ್ ಪ್ರಣೀತ ದನ ಕಾಯುವ ಧರ್ಮರಕ್ಷಣೆ ಎಂಬ ನಾಟಕ ಮಾಡುವವರೆ ಆಗಿದ್ದಾರೆ.

ಈ ಫಟಿಂಗರು ಈ ಘಟನೆಯನ್ನು ಬೇರೆ ಎಲ್ಲಾದರೂ ಬಾಯ್ಬಿಟ್ಟರೆ ನಿನ್ನನ್ನು ಕೊಂದೇ ಹಾಕುವುದಾಗಿ ಬೆದರಿಕೆ ಹಾಕಿ ಕಾಡಿನಿಂದ ಸಿಟಿಗೆ ತಂದು ಬಿಟ್ಟಿದ್ದಾರೆ. ಈ ರೇಪಿಸ್ಟ್ ಗಳಲ್ಲಿ ಕೆಲವರು ಬೆಳ್ತಂಗಡಿಯ ಶಾಸಕ ಹರೀಶ್ ಪೂಜಾರಿಯ ನಂಟಿನವರಾದರೆ ಇನ್ನು ಕೆಲವರು ಬಂಟ್ವಾಳದ ಶಾಸಕ ರಾಜೇಶ್ ನಾಯ್ಕ್‍ಗೆ ಹತ್ತಿರದವರು. ಹೀಗಾಗಿ ಕಂಪ್ಲೇಟು ಕೊಟ್ಟರೆ ತನಗೆ ತೊಂದರೆಯಾಗಬಹುದೆಂದು ಹುಡುಗಿಯ ಹೆತ್ತವರು ಹಿಂಜರಿದಿದ್ದಾರೆ. ಕಾಮುಕ ಹುಡುಗರು ತಾವು ಶಾಸಕರ ಜೊತೆಗಿರುವ ಫೋಟೊವನ್ನು ಫೇಸ್ಬುಕ್ಕಿನಲ್ಲಿ ಹಾಕಿಕೊಂಡು ಪ್ರಭಾವಿ ಇಮೇಜು ಬೆಳೆಸಿಕೊಂಡಿದ್ದಾರೆ. ಇದು ಹುಡುಗಿ ಮನೆಯವರಿಗೆ ಇಕ್ಕಟ್ಟಿಗೆ ಸಿಲುಕಿಸಿದೆ. ಅಂತ ಸಂದರ್ಭದಲ್ಲಿ ಕಳೆದ ಬುಧವಾರದಂದು ಊರಿಗೆಲ್ಲಾ ಸುದ್ದಿ ಗೊತ್ತಾಗಿದ್ದರಿಂದ ಈ ಆ ಅತ್ಯಾಚಾರದ ವಿಡಿಯೋವನ್ನು ಆ ಕಾಮುಕನೊಬ್ಬ ತನ್ನ ವಾಟ್ಸಾಪ್ ಸ್ಟೇಟಸ್‍ಗೆ ಹಾಕಿಕೊಂಡಿದ್ದಾನೆ. ಅದನ್ನು ನೋಡಿದ ಕಾಲೇಜಿನ ಚುನಾವಣೆಯಲ್ಲಿ ಆತನ ವಿರುದ್ಧ ಗುಂಪಿನಲ್ಲಿದ್ದವನು ಅದನ್ನು ವಾಟ್ಸಾಪಿನಲ್ಲಿ ಹರಿಯಬಿಟ್ಟಿದ್ದಾನೆ. ಅಲ್ಲಿಂದ ಎಲ್ಲಾ ಕಡೆಗೆ ಹಬ್ಬಿದೆ. ಇದನ್ನು ನೋಡಿದ ಜನ ಬೆಚ್ಚಿ ಬಿದ್ದಿದ್ದಾರೆ.

ಇಷ್ಟೆಲ್ಲಾ ಆದರೂ ಏನು ಆಗದವರಿಂತೆ ಪೋಸು ಕೊಡುತ್ತಿದ್ದ ಆ ಕಾಮುಕರನ್ನು ನೇರವಾಗಿ ಎಸ್ಪಿಯೇ ಕಾಲೇಜಿಗೆ ಬಂದು ಎತ್ತಾಕಿಕೊಂಡು ಹೋಗಿದ್ದಾರೆ. ರೇಪಿಸ್ಟ್ ಗಳು ಎಬಿವಿಪಿ ಮತ್ತು ಕೌಬಾಯ್ ಗ್ಯಾಂಗಿನ ಸಕ್ರಿಯ ಸದಸ್ಯರೆಂಬ ಸತ್ಯ ಸಾಕ್ಷಾತ್ಕಾರ ಆಗುತ್ತಲೇ ಸಂಘಪರಿವಾರದ ಹೈಕಮಾಂಡಿನಲ್ಲಿ ಚಡಪಡಿಕೆ ಶುರುವಾಗಿದೆ. ಎಬಿವಿಪಿ ತಕ್ಷಣಾ ಹೇಳಿಕೆ ಬಿಡುಗಡೆ ಮಾಡಿ ಅವರಿಗೂ ತಮಗೂ ಸಂಬಂಧವಿಲ್ಲ ಎಂದು ಕೈತೊಳೆದುಕೊಳ್ಳಲು ಹವಣಿಸಿದೆ. ಎಬಿವಿಪಿ, ಸಂಘ ಪರಿವಾರದವರೆಲ್ಲ ಅವರು ನಮ್ಮವರಲ್ಲ ಎಂದು ತೋರಿಸಿಕೊಳ್ಳಲು ಎಷ್ಟೇ ಪ್ರಯತ್ನ ನಡೆಸಿದರೂ ರೇಪಿಸ್ಟ್ ಗಳು ಎಬಿವಿಪಿಯವರೇ ಎಂಬುದನ್ನು ಮಾರೆ ಮಾಚಲು ಸಾಧ್ಯವಾಗಿಲ್ಲ. ಸಾಮೂಹಿಕ ಅತ್ಯಾಚಾರ ಮಾಡಿದವರು ಆರ್.ಎಸ್.ಎಸ್ ಶಾಖೆಗಳಲ್ಲಿ “ಸಂಸ್ಕಾರ” ದೀಕ್ಷೆ ಪಡೆದವರು, ಸ್ವಯಂ ಘೋಷಿತ ಗೋರಕ್ಷಕರು, ಶಾಸಕರ ಜೊತೆಗಿದ್ದವರು ಎಂಬ ಸತ್ಯ ಎಲ್ಲೆಡೆ ಹರಿದಾಡುತ್ತಿದ್ದು ಬಿಜೆಪಿಯವರ ಚಿಂತೆಯನ್ನು ಹೆಚ್ಚು ಮಾಡಿದೆ.

ತಮ್ಮವರು ಸಿಕ್ಕಿಬಿದ್ದಾಗ ಉದಾತ್ತತೆ, ನಾಗರೀಕ ಶಿಷ್ಠಾಚಾರ, ಮನುಷ್ಯತ್ವ, ಧರ್ಮಾತೀತತೆ, ಜಾತ್ಯಾತೀತತೆಯ ಬಗ್ಗೆ ಪ್ರವಚನ ಬಿಗಿಯುವ ತಂತ್ರಗಾರಿಕೆ ಸಂಘಪರಿವಾರಕ್ಕೆ ಲಗಾಯ್ತಿನಿಂದಲೂ ಕರಗತ. ಈ ಬಾರಿಯೂ ಅದೇ ಅಸ್ತ್ರ ಬಳಸಿದ್ದಾರೆ. ಪುತ್ತೂರಿನ ಕ್ರೌರ್ಯದ ವಿಚಾರದಲ್ಲಿ ಜಾತಿ ತರಬೇಡಿ, ಧರ್ಮ ತರಬೇಡಿ, ಕೇಸರಿ ತರಬೇಡಿ, ಹಸಿರು ತರಬೇಡಿ ಎಂದೆಲ್ಲಾ ವೇದಾಂತ ಸಂಘಿ ಸಿಂಫಥೈಸರ್‍ಗಳು ಅವಲತ್ತುಕೊಳ್ಳುತ್ತಿದ್ದಾರೆ. ಸಾಮಾಜಿಕ ಜಾಲತಾನದಲ್ಲಿ ಗುಳೋ ಅಂತ ಅಳುತ್ತಿದ್ದಾರೆ. ಆದರೆ ಈ ಮಂದಿಯೆಲ್ಲಾ ದಕ್ಷಿಣ ಕನ್ನಡದ ಸಣ್ಣ ಪುಟ್ಟ ಹಿಂದು-ಮುಸ್ಲಿಂ ಜಗಳ ವ್ಯಾಜ್ಯದಲ್ಲಿಯೂ ಧರ್ಮದ ಹೆಸರು ಎಳೆದು ತಂದು, ಧರ್ಮದ ಬಣ್ಣ ಹಚ್ಚಿ ಶೂದ್ರ ಕಾಲಾಳುಗಳನ್ನು ಹಿಂದುತ್ವ ರಕ್ಷಣೆಯ ಯುದ್ಧಕ್ಕೆ ಛೂ ಬಿಟ್ಟು ನೋಡಿದವರು. ಶಾಂತಿಯ ಸಮಾಜಕ್ಕೆ ಧರ್ಮದ ಬೆಂಕಿ ಹಚ್ಚಿ ಮೈ ಕಾಯಿಸಿಕೊಂಡವರು.

ಕರಾವಳಿಯ ಅನೈತಿಕ ಪೊಲೀಸ್‍ಗಿರಯ ಪ್ರತಿಯೊಂದು ಘಟನೆಯಲ್ಲಿಯೂ ಕೇಸರಿ ಗ್ಯಾಂಗಿಗೆ ಈಗವರು ಪ್ರತಿಪಾದಿಸುತ್ತಿರುವ “ಪುತ್ತೂರಿನ ನೀತಿಯನ್ನೇ” ಏಕೆ ಅನುಸರಿಸಿರಲಿಲ್ಲ. ಆಗ ಜಾತಿಧರ್ಮದ ಬಣ್ಣ ಹಚ್ಚಿ ರಾಜಕೀಯ ಲಾಭ ಪಡೆದವರು ಈಗ ಮಾತ್ರ ಆದರ್ಶದ ಮಾತಾಡುತ್ತಿದ್ದಾರೆ. ಇಂದಿನ ಅವರ ಆದರ್ಶದ ಮಾನಸಿಕತೆ ಕರಾವಳಿಯ ಪ್ರತಿಯೊಂದು ಘಟನೆಯಲ್ಲಿಯೂ ಇದ್ದಿದ್ದರೆ ಪುತ್ತೂರಿನ ರೇಪ್ ದುರ್ಘಟನೆ ನಡೆಯುತ್ತಲೇ ಇರಲಿಲ್ಲ. ಪಾಪ ಆ ದಲಿತ ಹುಡುಗಿ ಇವರಿಗೆ ಹಿಂದೂ ಅನ್ನಿಸಲಿಲ್ಲವೇ? ಒಂದು ವೇಳೆ ಅತ್ಯಾಚಾರವೆಸಗಿದ ಪಾತಕಿಗಳು ಮುಸ್ಲಿಮರಾಗಿದ್ದರೆ ಪರಿಸ್ಥಿತಿ ಏನಾಗುತ್ತಿತ್ತು ಯೋಚಿಸಿ? ಅದೃಷ್ಟವಶಾತ್ ಆ ಹುಡುಗಿ ಬದುಕಿದ್ದಾಳೆ. ಒಂದು ವೇಳೆ ಸತ್ತು ಹೋಗಿದ್ದರೆ? ಅದರಲ್ಲಿಯೂ ಅವಳು ಎಬಿವಿಪಿ ಹುಡುಗಿ ನಿಜವಾಗಿಯೂ ಈ ಪಾಪಿಗಳು ಅದನ್ನು ಮುಸ್ಲಿಂಮರ ತಲೆಗೆ ಕಟ್ಟಿ ರಾಡಿ ಎಬ್ಬಿಸಿ ಅಲ್ಲಿಯೂ ತಮ್ಮ ಬೇಳೆ ಬೇಯಿಸಿಕೊಂಡುಬಿಡುತ್ತಿದ್ದರು.

ಇದೆಂಥ ಹಿಂದುತ್ವ? ರೇಪ್ ಯಾವ ಧರ್ಮದವರು ಮಾಡಿದರು ಅದೂ ಘೋರ ಪಾಪವಲ್ಲವೇ? ಬರ್ಬರ ಅಮಾನುಷವಲ್ಲವೇ? ಈಗ ಬಿಜೆಪಿ ಬಳಗವೇಕೆ ಬಾಯಿಮುಚ್ಚಿ ಕುಳಿತಿದೆ. ಈ ಥರದ ಯಾವುದೇ ಘಟನೆ ಆದರೆ ಸಾಕು ಪ್ರತ್ಯಕ್ಷವಾಗಿ ಹಿಂದುತ್ವದ ರಣಕಹಳೆಯೂದುತ್ತಿದ್ದ ಕೂಗುಮಾರಿ ಶೋಭಾ ಕರಂದ್ಲಾಚೆಯವರು ಈಗ ಎಲ್ಲಿದ್ದಾರೆ? ಇದೇ ಪುತ್ತೂರು ಬಂಟ್ವಾಳ ಏರಿಯಾದಲ್ಲಿಯೂ ಹಲವು ಹಿಂದೂ ಹುಡುಗಿಯರಿಗೆ ಲೈಂಗಿಕ ತೊಂದರೆ ಕೊಟ್ಟು ಚಿನ್ನ ದೋಚಿ ಸೈನೈಡ್ ಕೊಟ್ಟು ಕೊಂದ ಸರಣಿ ಕಿಲ್ಲರ್ ಸೈನೈಡ್ ಮೋಹನನನ್ನು ‘ಹಿಂದೂ’ ಎಂಬ ಏಕೈಕ ಕಾರಣಕ್ಕೆ ಸಹಿಸಿಕೊಂಡ ಸಂಘಪರಿವಾರ ಪೂತ್ತೂರಿನ ಎಬಿವಿಪಿ ರಿಯಾಯಿತಿ ತೋರಿಸದೇ ಇರುತ್ತದಾ?

ಇನ್ನು ಎಬಿವಿಪಿ ಈ ಘಟನೆಯನ್ನು ಮರೆಮಾಚಲು ಗುರುವಾರ ಬಸ್ ಪಾಸ್ ಉಚಿತವಾಗಿ ಕೊಡುವಂತೆ ಒತ್ತಾಯಿಸಿ ಪ್ರತಿಭಟಿಸಿದೆ. ಅಂದರೆ ಸಮಾಜದ ಗಮನವನ್ನು ಬೇರೆಡೆಗೆ ಸೆಳೆಯುವ ಕುತಂತ್ರ ಎದ್ದು ಕಾಣುತ್ತಿದೆ. ಶಾಲೆಗಳು ಶುರುವಾಗಿ ಒಂದು ತಿಂಗಳ ನಂತರ ಹೋರಾಟ ಮಾಡುತ್ತದೆ ಎಂದರೆ ಪ್ರಕರಣವನ್ನು ಮುಚ್ಚಿಹಾಕಲು ಅದು ಎಷ್ಟು ಕ್ರಿಯಾಶಿಲವಾಗಿದೆ ನೋಡಿ. ಇದರ ಜೊತೆಗೆ ಕೆಲವು ಮತಾಂಧ ಕ್ರಿಮಿಗಳು ಫೇಸ್ ಬುಕ್ ನಲ್ಲಿ ಈ ಅತ್ಯಾಚಾರವನ್ನು ಬಹಿರಂಗವಾಗಿ ಬೆಂಬಲಿಸಿ ಪೋಸ್ಟ್ ಹಾಕಿದ್ದಾರೆ. ಈ ರೀತಿಯ ಘಟನೆ ಹಿಂದೆಂದೂ ನಡೆದಿರಲಿ

ಅಮಾಯಕ ಹುಡುಗಿಗಾದ ಅನ್ಯಾಯವನ್ನು ಖಂಡಿಸಿ ಉಳಿದ ಸಂಘಟನೆಗಳೇ ಹೋರಾಟ ರೂಪಿಸುತ್ತಿವೆ. ಸರ್ಕಾರ ಈಗಲಾದರೂ ಎಚ್ಚೆತ್ತುಕೊಂಡು ಅತ್ಯಚಾರಗಳು ಸಂಭವಿಸದಂತೆ ತಡೆಯಬೇಕಿದೆ. ಇದಕ್ಕಾಗಿ ಸಮಾಜದ ನಾಗರೀಕರೆಲ್ಲರೂ ದನಿಯೆತ್ತಬೇಕಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ನೋಯ್ಡಾ ಪೊಲೀಸ್ ಠಾಣೆಯೊಳಗೆ ವಕೀಲೆ ಮೇಲೆ ಲೈಂಗಿಕ ದೌರ್ಜನ್ಯ ಆರೋಪ; ಸಿಸಿಟಿವಿ ದೃಶ್ಯಾವಳಿ ಕೇಳಿದ ಸುಪ್ರೀಂ ಕೋರ್ಟ್

ಮಹಿಳಾ ವಕೀಲೆಯೊಬ್ಬರನ್ನು 14 ಗಂಟೆಗಳ ಕಾಲ ಅಕ್ರಮವಾಗಿ ಬಂಧಿಸಿ ಪೊಲೀಸರು ಲೈಂಗಿಕ ದೌರ್ಜನ್ಯ esgi, ಕಸ್ಟಡಿಯಲ್ಲಿ ಚಿತ್ರಹಿಂಸೆ ನೀಡಿದ ಆರೋಪದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಸುಪ್ರೀಂ ಕೋಡರ್ಟ್, ಮುಚ್ಚಿದ ಕವರ್‌ನಲ್ಲಿ ಸಿಸಿಟಿವಿ ದೃಶ್ಯಾವಳಿಗಳನ್ನು...

ಹಾಲು ಉತ್ಪಾದಕರಿಗೆ 1 ಲೀಟರ್ ಹಾಲಿನ ಪ್ರೋತ್ಸಾಹಧನ 5 ರಿಂದ 7 ರೂಗೆ ಏರಿಕೆ: ಅಧಿವೇಶನದಲ್ಲಿ ಸಿದ್ದರಾಮಯ್ಯ ಘೋಷಣೆ

ರೈತರ ಹಿತದೃಷ್ಠಿಯಿಂದ 1 ಲೀಟರ್ ಹಾಲಿಗೆ ಪ್ರೋತ್ಸಾಹಧನವನ್ನು 7 ರೂಪಾಯಿಗೆ ಏರಿಕೆ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ಡಿಸೆಂಬರ್ 19ರಂದು ಬೆಳಗಾವಿ ಅಧಿವೇಶನದ ಕೊನೆಯ ದಿನ ಮಾತನಾಡಿದ ಅವರು, ರೈತರಿಗೆ ಹಸುಗಳನ್ನು ಸಾಕಿ...

ಬಾಂಗ್ಲಾ ದಂಗೆ: ಮಾಧ್ಯಮ ಸಂಸ್ಥೆಗಳಿಗೆ ಬೆಂಕಿ ಹಚ್ಚಿದ ಪ್ರತಿಭಟನಾಕಾರರು, ಉರಿಯುತ್ತಿದ್ದ ಕಚೇರಿಗಳಿಂದ 25 ಕ್ಕೂ ಹೆಚ್ಚು ಪತ್ರಕರ್ತರ ರಕ್ಷಣೆ

ಜುಲೈ ದಂಗೆಯ ನಾಯಕ ಷರೀಫ್ ಉಸ್ಮಾನ್ ಹಾದಿ ಅವರ ನಿಧನದ ಸುದ್ದಿ ಕೇಳಿದ ಬೆನ್ನಲ್ಲೇ ಶುಕ್ರವಾರ ಬಾಂಗ್ಲಾದೇಶದ ವಿವಿಧ ಭಾಗಗಳಲ್ಲಿ ತೀವ್ರ ಪ್ರತಿಭಟನೆಗಳು ಆರಂಭವಾಗಿದ್ದು ಹಿಂಸಾಚಾರಕ್ಕೆ ನಾಂದಿ ಹಾಡಿವೆ. ಅನೇಕ ಪ್ರತಿಭಟನಾಕಾರರು ಬೀದಿಗಿಳಿದಿದ್ದು,...

ವಿಬಿ-ಜಿ ರಾಮ್ ಜಿ ಮಸೂದೆ ‘ರಾಜ್ಯ ವಿರೋಧಿ’ ಮತ್ತು ‘ಗ್ರಾಮ ವಿರೋಧಿ’: ರಾಹುಲ್ ಗಾಂಧಿ

ಎರಡು ದಶಕಗಳ ಕಾಲದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (ಎಂಜಿಎನ್‌ಆರ್‌ಇಜಿಎ)ಯನ್ನು ಒಂದೇ ದಿನದಲ್ಲಿ ಮೋದಿ ಸರ್ಕಾರ ರದ್ದುಗೊಳಿಸಿದೆ ಎಂದು ಕಾಂಗ್ರೆಸ್ ನಾಯಕ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ...

ಬಾಂಗ್ಲಾದೇಶದ ವಿದ್ಯಾರ್ಥಿ ನಾಯಕ ಷರೀಫ್ ಉಸ್ಮಾನ್ ಹಾದಿ ಸಾವಿನ ನಂತರ ರಾಜಧಾನಿ ಢಾಕಾದಲ್ಲಿ ಭುಗಿಲೆದ್ದ ಹಿಂಸಾಚಾರ

ಢಾಕಾ: ಬಾಂಗ್ಲಾದೇಶದ ವಿದ್ಯಾರ್ಥಿ ನಾಯಕ ಷರೀಫ್ ಉಸ್ಮಾನ್ ಹಾದಿ ಸಾವಿನ ಬಳಿಕ ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿ ಶುಕ್ರವಾರ ಬೆಳಗಿನ ಜಾವ ಹಿಂಸಾಚಾರ ಭುಗಿಲೆದ್ದಿದೆ. ಹತ್ಯೆ ಯತ್ನದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಉಸ್ಮಾನ್ ಹಾದಿ, ಸಿಂಗಾಪುರದ ಆಸ್ಪತ್ರೆಯಲ್ಲಿ...

ಸತ್ನಾದಲ್ಲಿ ಆರು ಮಕ್ಕಳಿಗೆ ಎಚ್‌ಐವಿ ಪಾಸಿಟಿವ್: ಮಧ್ಯಪ್ರದೇಶ ಸರ್ಕಾರದಿಂದ ರಕ್ತ ನಿಧಿಯ ಮುಖ್ಯಸ್ಥ ಸೇರಿ ಮೂವರು ಅಮಾನತು

ಭೋಪಾಲ್: ಸತ್ನಾ ಜಿಲ್ಲೆಯ ಸರ್ದಾರ್ ವಲ್ಲಭಭಾಯಿ ಪಟೇಲ್ ಸರ್ಕಾರಿ ಆಸ್ಪತ್ರೆಯಲ್ಲಿ ಆರು ಮಕ್ಕಳಿಗೆ ಎಚ್‌ಐವಿ ಪಾಸಿಟಿವ್ ಬಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧ್ಯಪ್ರದೇಶ ಸರ್ಕಾರ ಗುರುವಾರ ರಕ್ತ ನಿಧಿಯ ಉಸ್ತುವಾರಿ ಮತ್ತು ಇಬ್ಬರು ಪ್ರಯೋಗಾಲಯ...

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...