Homeರಾಜಕೀಯಕುತ್ತಿಗೆಗೇ ಸುತ್ತಿಕೊಳ್ಳುತ್ತಿದೆ ರಫೇಲ್‌ಕುಣಿಕೆ!

ಕುತ್ತಿಗೆಗೇ ಸುತ್ತಿಕೊಳ್ಳುತ್ತಿದೆ ರಫೇಲ್‌ಕುಣಿಕೆ!

- Advertisement -
- Advertisement -

‘ರಫೇಲ್ ಅವ್ಯವಹಾರದ ಬಗ್ಗೆ ಸೀರಿಯಸ್ ತನಿಖೆ ನಡೆದಿದ್ದೆ ಆದಲ್ಲಿ ಪ್ರಧಾನಿ ಮೋದಿಯವರನ್ನ ಬಚಾವು ಮಾಡಲು ಯಾರಿಂದಲೂ ಸಾಧ್ಯವಿಲ್ಲ’. ಇದು ಮೊನ್ನೆ ಕಾಂಗ್ರೆಸ್‌ನ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ ಮಾತಿನ ಸಾರಾಂಶ. ಎಷ್ಟೆÃ ಆಗಲಿ ರಾಹುಲ್ ಒಬ್ಬ ರಾಜಕಾರಣಿ. ಅದರಲ್ಲೂ ಮೋದಿಯವರ ಎದುರಾಳಿ ಪಕ್ಷದ ಪ್ರೆಸಿಡೆಂಟು. ಹಾಗಾಗಿ ರಾಹುಲ್ ಆರೋಪದಲ್ಲಿ ಒಂದಷ್ಟು ರಾಜಕಾರಣದ ಛಾಯೆಯನ್ನು ಕಾಣುವ ಸಂಭವ ಇದ್ದೆÃ ಇರುತ್ತೆ. ಆದರೆ ರಫೇಲ್ ಲಫಡಾವನ್ನು ಬಯಲಿಗೆಳೆದಿದ್ದು ಕಾಂಗ್ರೆಸ್ಸೂ ಅಲ್ಲ, ರಾಹುಲ್ಲೂ ಅಲ್ಲ. ತಮ್ಮ ವೃತ್ತಿ ಧರ್ಮದ ಬಗ್ಗೆ ನಿಷ್ಠೆ ಕಾಪಿಟ್ಟುಕೊಂಡಿರುವ ದಿ ವೈರ್, ಕ್ಯಾರಾವಾನ್, ನ್ಯೂಸ್ ಕ್ಲಿಕ್, ದಿ ಪ್ರಿಂಟ್‌ನಂತಹ ಮಾಧ್ಯಮಗಳು ಹಾಗೂ ಸ್ವತಃ ಈ ಒಟ್ಟಾರೆ ಹಗರಣದ ಜೋಡಿ ಪಾಲುದಾರ ಸಂಸ್ಥೆಗಳಾದ ಫ್ರಾನ್ಸಿನ ಡೆಸಾಲ್ಟ್ ಮತ್ತು ಭಾರತದ ಅನಿಲ್ ಅಂಬಾನಿಯ ರಿಲಾಯನ್ಸ್ ಏರೋಸ್ಟçಕ್ಚರ್ ಕಂಪನಿಗಳ ವಾರ್ಷಿಕ ಆಯವ್ಯಯದ ಲೆಕ್ಕಪತ್ರಗಳು! ಆನಂತರವೂ ಇದನ್ನು ಜನರ ಮುಂದೆ ಚರ್ಚೆಗಿಡುವ ಸಾಹಸ ಮಾಡಿದ್ದು ಸಹಾ ಯಾರೋ ಕಾಂಗ್ರೆಸ್‌ವಾಲಾಗಳಲ್ಲ, ಇದೇ ಬಿಜೆಪಿಯ ಯಶವಂತ್ ಸಿನ್ಹಾ, ಅರುಣ್ ಶೌರಿ, ಸ್ವರಾಜ್ ಇಂಡಿಯಾದ ಪ್ರಶಾಂತ್ ಭೂಷಣ್‌ರಂತವರು. ಸಿಬಿಐಗೆ ಕಂಪ್ಲೆಂಟ್ ಕೊಟ್ಟಿದ್ದೂ ಇವರೇ, ಸುಪ್ರಿÃಂ ಕೋರ್ಟ್ಗೆ ಪಿಐಎಲ್ ಸಲ್ಲಿಸಿರೋದೂ ಇವರೇ!!
ಇಷ್ಟೆಲ್ಲಾ ಇದ್ದರೂ, `ಸುಳ್ಳ’ನ್ನೆÃ ತಮ್ಮ `ಬೆಲೆ’ಯಾಗಿಸಿಕೊಂಡು ಮಾತಿನ ಚಕ್ರವರ್ತಿಯಂತೆ ಮಿಂಡ್ಳು ಮೆರೆಯುತ್ತಿರುವ ಕೆಲವರು ಇಡೀ ರಫೇಲ್ ಹಗರಣವನ್ನು ರಾಹುಲ್‌ಗಾಂಧಿ ಎಂಬ ಒಬ್ಬ ಕಾಂಗ್ರೆಸಿಗ ಕಂ ನೆಹರೂ ವಂಶಸ್ಥ, ಮೋದಿಯವರ ಮೇಲೆ ಮಾಡುತ್ತಿರುವ ಯಕಶ್ಚಿತ್ ರಾಜಕೀಯ ಆರೋಪದಂತೆ ಬಿಂಬಿಸಲು ಲೀಟರುಗಟ್ಟಲೆ ಸುಳ್ಳುಗಳನ್ನು ಸುರಿಸುತ್ತಾ ಮುಕ್ಕಾಲು ತಾಸುಗಳ ವೀಡಿಯೋ ಮಾಡಿಕೊಂಡು ಪರದಾಡುತ್ತಿರೋದನ್ನ ನೋಡಿದರೆ ನಗು ಬರುತ್ತೆ. ಅಂತವರ ಹೊಟ್ಟೆಪಾಡಿನ ವಿಚಾರ ಒತ್ತಟ್ಟಿಗಿರಲಿ, ಈಗ ಅಸಲೀ ಸಂಗತಿಗೆ ಬರೋಣ. ದಿನದಿಂದ ದಿನಕ್ಕೆ ರಫೇಲ್ ವ್ಯವಹಾರದಲ್ಲಿ ಹೊರಬರುತ್ತಿರುವ ಅಚ್ಚರಿ, ಆಘಾತಗಳನ್ನು ನೋಡಿದರೆ ಮೋದಿಯವರು ಈ ಕುಣಿಕೆಯಿಂದ ಬಚಾವಾಗುವ ಛಾನ್ಸು ಕ್ಷಿÃಣಿಸಿಂದತೆಯೇ ಭಾಸವಾಗುತ್ತಿದೆ. ಸಿಬಿಐ ಅಂಗಳದಲ್ಲಿ ರಫೇಲ್ ಕೇಸು ದರ್ಜಾಗುತ್ತಿದ್ದಂತೆಯೇ ಸಮಸ್ತ ಸಿಬಿಐ ಆಂತರ್ಯಕ್ಕೆÃ ಒಳಜಗಳದ ಬೆಂಕಿ ಹತ್ತಿಕೊಂಡು ಧಗಧಗಿಸುತ್ತಿರೋದು ತೀರಾ ಕಾಕತಾಳೀಯ ಅನ್ನಿಸದಿರೋದು ಸಹಾ ಇದೇ ಕಾರಣಕ್ಕೆ. ಹಿಂದಿನ ಸಂಚಿಕೆಯಲ್ಲಿ ನಮ್ಮ ತಂಡದ ದೊಡ್ಡಿಪಾಳ್ಯ ನರಸಿಂಹಮೂರ್ತಿಯವರು ಈ ರಫೇಲ್ ಪ್ರೆÃರಿತ ಸಿಬಿಐ ಸಂಚಿನ ಬಗ್ಗೆ ವಿವರವಾಗಿ ಬಿಚ್ಚಿಟ್ಟಿರೋದ್ರಿಂದ ಇಲ್ಲಿ ನಾವು ರಫೇಲ್‌ನ ಹೊಸ ತಿರುವುಗಳತ್ತ ಗಮನ ಹರಿಸೋಣ.
ಸ್ವತಃ ಸುಪ್ರಿÃಂಕೋರ್ಟ್ ಮಧ್ಯಪ್ರವೇಶ ಮಾಡಿರೋದು, ಅದಕ್ಕಿಂತ ಮುಖ್ಯವಾಗಿ ಅದು ಮಧ್ಯಪ್ರವೇಶ ಮಾಡುವ ವೇಳೆಗೆ ಸರಿಯಾಗಿ ಅದರ ಚುಕ್ಕಾಣಿ ದೀಪಕ್ ಮಿಶ್ರಾರ ಕೈಯಿಂದ ಜಾರಿ ರಂಜನ್ ಗೊಗಾಯ್‌ರಂತಹ ರೆಬೆಲ್ ವ್ಯಕ್ತಿತ್ವದ ನ್ಯಾಯಾಧೀಶರ ಕೈಸೇರಿರೋದು ಈ ವ್ಯವಹಾರದಲ್ಲಿ ಭಾಗಿಯಾದವರ ಉಸಿರು ಬಿಗಿಹಿಡಿಯುವಂತೆ ಮಾಡಿದೆ. ಹಿಂದಿನ ಯುಪಿಎ ಸರ್ಕಾರ 126 ರಫೇಲ್ ವಿಮಾನಗಳನ್ನು ಟೆಕ್ನಾಲಜಿ ವರ್ಗಾವಣೆ ಸಹಿತ, ಎಚ್‌ಎಎಲ್ ಸಾರ್ವಜನಿಕ ಸಂಸ್ಥೆಯ ಸಹಭಾಗಿ ನಿರ್ಮಾಣದ ಒಪ್ಪಂದದೊಂದಿಗೆ ಫ್ರಾನ್ಸ್ನ ಡೆಸ್ಸಾಲ್ಟ್ ಕಂಪನಿಯಿಂದ ಖರೀದಿಸಲು ಮಾಡಿಕೊಂಡಿದ್ದ ಒಪ್ಪಂದವನ್ನು ಮೋದಿಯವರು ಏಕಾಏಕಿ ರದ್ದು ಮಾಡಿದಾಗಿನಿಂದಲೂ ಇಲ್ಲೊಂದು ಹಗರಣದ ದುರ್ನಾತ ವಾಸನೆಯಾಡುತ್ತಲೇ ಇತ್ತು. ಆದರೆ 18 ನವೆಂಬರ್ 2016ರಂದು ಪಾರ್ಲಿಮೆಂಟಿನಲ್ಲಿ ಕೇಳಲಾದ ಲಿಖಿತ ಪ್ರಶ್ನೆಯೊಂದಕ್ಕೆ ರಕ್ಷಣಾ ಇಲಾಖೆಯ ರಾಜ್ಯಖಾತೆ ಸಚಿವರಾದ ಸುಭಾಷ್ ಭಮ್ರೆಯವರೆ ಉತ್ತರ ಹೇಳುತ್ತಾ ಹೊಸ ಒಪ್ಪಂದದಲ್ಲಿ ಪ್ರತಿ ವಿಮಾನಕ್ಕೆ ಕೇವಲ 670 ಕೋಟಿ ರೂಪಾಯಿ ದರ ನಿಗದಿಯಾಗಿದೆ ಅಂತ ತಿಳಿಸಿದ ಮೇಲೆ ಎಲ್ಲರೂ ತಣ್ಣಗಾಗಿದ್ದರು. ಯಾಕೆಂದರೆ ಯುಪಿಎ ಸರ್ಕಾರದ ಒಪ್ಪಂದ ಪ್ರತಿ ವಿಮಾನಕ್ಕೆ ನಿಗದಿ ಮಾಡಿದ್ದು 610 ಕೋಟಿ ರೂಪಾಯಿ. ಹಳೆಯ ದರಕ್ಕೂ ಹೊಸ ದರಗಳಿಗೂ ಹೆಚ್ಚೆÃನು ವ್ಯತ್ಯಾಸ ಇಲ್ಲದೇ ಇದ್ದುದರಿಂದ ಹಗರಣ ನಡೆದಿಲ್ಲ ಎಂದು ನಂಬಲಾಗಿತ್ತು. ಅನುಭವಿ, ಸರ್ಕಾರಿ ಸ್ವಾಮ್ಯದ ಎಚ್‌ಎಎಲ್ ಸಂಸ್ಥೆಯನ್ನು ಹೊರಗಿಟ್ಟು ಅನುಭವವೇ ಇಲ್ಲದ, ಹೊಸ ಒಪ್ಪಂದಕ್ಕೂ ಕೇವಲ ಹದಿಮೂರು ದಿನಗಳ ಹಿಂದಷ್ಟೆÃ ಹುಟ್ಟಿಕೊಂಡ ಅನಿಲ್ ಅಂಬಾನಿಯ ಖಾಸಗಿ ಕಂಪನಿಗೆ ಒಪ್ಪಂದ ವಹಿಸಿದ್ದೆÃಕೆ ಎಂಬ ಪ್ರಶ್ನೆ ಹಾಗೇ ಉಳಿದಿತ್ತಾದರು ಹಣದ ವಿಚಾರದಲ್ಲಿ ಲಫಡಾ ನಡೆದಿಲ್ಲ ಎಂಬ `ಜನಪ್ರಿಯ’ ನಂಬಿಕೆಯಿಂದಾಗಿ ರಫೇಲ್ ವ್ಯವಹಾರ, ಚರ್ಚೆಯಿಂದ ದೂರವೇ ಉಳಿದಿತ್ತು. ಆದರೆ ಯಾವಾಗ ಫ್ರಾನ್ಸ್ನ ಡೆಸ್ಸಾಲ್ಟ್ ಕಂಪನಿ ತನ್ನ ವಾರ್ಷಿಕ ಆಯವ್ಯಯದ ರಿಪೋರ್ಟಿನಲ್ಲಿ ರಫೇಲ್ ವ್ಯವಹಾರದ ಗಾತ್ರ ರೂ.59,000 ಕೋಟಿಯದ್ದು ಎಂದು ಬಹಿರಂಗಪಡಿಸಿತೊ ಆಗಲೇ ನೋಡಿ ಭಾರತೀಯರು ಹೌಹಾರಿದ್ದು. ಯಾಕೆಂದ್ರೆ ಮೋದಿಯವರ ಹೊಸ ಒಪ್ಪಂದದಲ್ಲಿ ಖರೀದಿಸಲಾಗುತ್ತಿರೋದು ಕೇವಲ 36 ವಿಮಾನಗಳನ್ನು, ಅದೂ ಟೆಕ್ನಾಲಜಿ ವರ್ಗಾವಣೆ ಇಲ್ಲದೆ. ಅಂದರೆ ಪ್ರತಿ ವಿಮಾನಕ್ಕೆ 1,660 ಕೋಟಿ ರೂಪಾಯಿಯನ್ನು ಭಾರತದ ಬೊಕ್ಕಸದಿಂದ ತೆರುತ್ತಿರೋದು ಇದರಿಂದ ಬಯಲಾಗಿತ್ತು. ಒಂದು ವಿಮಾನಕ್ಕೆ ರೂ.610 ಕೋಟಿ ಎಲ್ಲಿ, ಅದೇ ಒಂದು ವಿಮಾನಕ್ಕೆ ಅಜಮಾಸು ಮೂರು ಪಟ್ಟು ಹೆಚ್ಚು ಅಂದರೆ ರೂ.1,660 ಕೋಟಿ ಎಲ್ಲಿ!!
ಯಾವಾಗ ರಫೇಲ್ ಭಾನ್ಗಡಿ ಇಷ್ಟು ನೇರಾನೇರ ಬಯಲಾಯ್ತೊ ಆಗಲೇ ಸುಪ್ರಿÃಂ ಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ದೂರುಗಳು ದಾಖಲಾದವು. ಒಂದು ದೂರನ್ನು ಅರುಣ್‌ಶೌರಿ, ಪ್ರಶಾಂತ್ ಭೂಷಣ್ ಮತ್ತು ಯಶವಂತ್ ಸಿನ್ಹಾ ಜಂಟಿಯಾಗಿ ದಾಖಲಿಸಿದ್ದರೆ, ಇನ್ನೆರಡನ್ನು ಮನೋಹರ್ ಲಾಲ್ ಶರ್ಮಾ ಹಾಗೂ ವಿವೇಕ್ ದಂಡಾ ಎಂಬ ಅಡ್ವೊಕೇಟ್‌ಗಳು ಪ್ರತ್ಯೆÃಕವಾಗಿ ದಾಖಲಿಸಿದ್ದಾರೆ. ಇವಕ್ಕೂ ಮೊದಲು ಕಾಂಗ್ರೆಸ್ ನಾಯಕ ತೆಹಸೀನ್ ಎಸ್ ಪೋನಾವಾಲಾ ಕೂಡಾ ದೂರು ದಾಖಲಿಸಿದ್ದಾರೆ. ಆನಂತರ ಆಮ್ ಆದ್ಮಿ ಪಾರ್ಟಿಯ ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್ ಕೂಡಾ ಪಿಐಎಲ್ ದಾಖಲಿಸಿದ್ದಾರೆ. ಈ ದೂರುಗಳನ್ನು ಕೈಗೆತ್ತಿಕೊಂಡು ವಿಚಾರಣೆಗೆ ಮುಂದಾದಾಗಲೂ ಸರ್ಕಾರ ಈ ಮೊದಲು ಮಾಡಿದಂತೆ `ರಕ್ಷಣಾ ಗೌಪ್ಯತೆ’ಯನ್ನು ಮುಂದೆ ಮಾಡಿ ಬೆಲೆಗಳನ್ನು ಬಹಿರಂಗಪಡಿಸುವುದರಿಂದ ನುಣುಚಿಕೊಳ್ಳಲಿದೆ ಎಂದೇ ಅಂದಾಜಿಸಲಾಗಿತ್ತು.
ರಂಜನ್ ಗೊಗಾಯ್, ಎಸ್.ಕೆ.ಕೌಲ್ ಮತ್ತು ಕೆ.ಎಂ.ಜೋಸೆಫ್‌ರ ತ್ರಿಸದಸ್ಯ ಪೀಠ ವಿಚಾರಣೆ ಶುರು ಮಾಡಿದಾಗಲೂ ಸರ್ಕಾರದ ಪರವಾಗಿ ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ಅದೇ ಗೌಪ್ಯತೆ ವಾದವನ್ನೆÃ ಮುಂದಿಟ್ಟರು. ಆದರೆ ಸುಪ್ರಿÃಂಕೋರ್ಟ್ ಈ ವಿಚಾರದಲ್ಲಿ ತಾನು ಕೇಂದ್ರದ ತಾಳಕ್ಕೆ ಕುಣಿಯಲಾರೆ ಎಂಬ ಸಂದೇಶವನ್ನು ಬಲು ಜಾಣ್ಮೆಯಿಂದ ಹೊರಹಾಕಿದೆ. ಬೆಲೆಗಳನ್ನು ಬಹಿರಂಗ ಪಡಿಸಲಾಗದು ಎನ್ನುವುದಾದರೆ ಅದನ್ನು ಒಂದು ಅಫಿಡವಿಟ್‌ನ ಮೂಲಕ ತನಗೆ ಸಲ್ಲಿಸುವಂತೆ ಸರ್ಕಾರಕ್ಕೆ ತಿಳಿಸಿರೋದಲ್ಲದೆ, ವ್ಯವಹಾರದ ತಾಂತ್ರಿಕ ಗೌಪ್ಯತೆಗಳಿಗೆ ಲೋಪಬಾರದಂತೆ ಆಫ್‌ಸೆಟ್ ಪಾರ್ಟನರ್ ಆಯ್ಕೆಯ ಪ್ರಕ್ರಿಯೆ, ದರ ನಿಗದಿ ಮಾಡಿದ ಮಾನದಂಡ ಇತ್ಯಾದಿಗಳನ್ನು ಮುಚ್ಚಿದ ಲಕೋಟೆಯಲ್ಲಿ ತನಗೆ ಸಲ್ಲಿಸುವಂತೆ ಮೌಖಿಕ ನಿರ್ದೇಶನ ನೀಡಿದೆ. ಗಮನಿಸಬೇಕಾದ ಸಂಗತಿಯೆಂದರೆ ತನ್ನಲ್ಲಿ ಸಲ್ಲಿಕೆಯಾಗಿರುವ ಪಿಐಎಲ್‌ಗಳು (ಎಂ.ಎಲ್.ಶರ್ಮಾ ಮತ್ತು ವಿವೇಕ್ ದಂಡಾ) ಹಲವು `ಅಸಮರ್ಪಕತೆ’ಗಳನ್ನು ಒಳಗೊಂಡಿವೆ ಎಂದು ಸ್ವತಃ ನ್ಯಾಯಾಲಯವೇ ಘೋಷಿಸಿಕೊಂಡಿದೆಯಲ್ಲದೆ, ತಾನು ಈಗ ಬಯಸಿರುವ ವಿವರಗಳು ಕೇವಲ ತನ್ನ ಬಯಕೆಗಳನ್ನು ತೃಪ್ತಿಪಡಿಸಿಕೊಳ್ಳಲಷ್ಟೆÃ ಎಂಬ ಸಡಿಲಿಕೆಯನ್ನೂ ನೀಡಿದೆ. ಸರ್ಕಾರದ ಜೊತೆ ಸಂಘರ್ಷಕ್ಕಿಳಿಯಲು ಅದು ಹೋಗಿಲ್ಲ. ಹಾಗೇನಾದರು ಆಗಿದ್ದಲ್ಲಿ ಶಾಸಕಾಂಗ ಮತ್ತು ನ್ಯಾಯಾಂಗದ ನಡುವೆ ಕದನವೇರ್ಪಟ್ಟು ಮೂಲ ವಿಷಯ ಮೂಲೆಗುಂಪಾಗುವ ಸಂಭವವಿತ್ತು. ಸರ್ಕಾರಕ್ಕೆ ನೋಟಿಸ್ ನೀಡುವ ಬದಲು ಮೌಖಿಕ ನಿರ್ದೇಶನ ನೀಡಿದ್ದೂ ಕೂಡಾ ಜಾಣ್ಮೆಯ ನಡೆ.
ಅಸಲಿಗೆ ಗೌಪ್ಯತೆಯ ನಿಯಮಗಳು ವಿಮಾನದ ತಾಂತ್ರಿಕ ಸಂಗತಿಗಳು ಹಾಗೂ ಅದರ ಕಾರ್ಯವೈಖರಿ ತಂತ್ರಜ್ಞಾನಕ್ಕೆ ಸಂಬಂಧಿಸಿರುತ್ತವೆಯೇ ಹೊರತು ಬೆಲೆಗಳಿಗೆ ಸಂಬಂಧಿಸುವುದೇ ಇಲ್ಲ. ಒಂದೊಮ್ಮೆ ಬೆಲೆ ಗೌಪ್ಯ ಸಂಗತಿ ಎನ್ನುವುದೇ ಆಗಿದ್ದರೆ ಈ ಹಿಂದೆ ಇದೇ ಸರ್ಕಾರದ ರಕ್ಷಣಾ ಇಲಾಖೆಯ ರಾಜ್ಯಖಾತೆ ಸಚಿವ ಭಮ್ರೆಯವರು ಸಂಸತ್ತಿನಲ್ಲಿ ಲಿಖಿತ ರೂಪದಲ್ಲೆÃಕೆ ಬಹಿರಂಗಪಡಿಸಿದ್ದರು? ಹಾಗೆ ನೋಡಿದರೆ, ಡೆಸ್ಸಾಲ್ಟ್ ಕಂಪನಿ ತನ್ನ ಆಯವ್ಯಯ ಲೆಕ್ಕಪತ್ರದಲ್ಲಿ ಇದನ್ನಾಗಲೇ ಬಹಿರಂಗಪಡಿಸಿದೆ. ಹಾಗಿರುವಾಗ ಗೌಪ್ಯತೆ ಎಲ್ಲಿಂದ ಬಂತು? ಸಾಲದ್ದಕ್ಕೆ, ಇದೇ ವರ್ಷದ ಮಾರ್ಚ್ನಲ್ಲಿ ಫ್ರಾನ್ಸ್ನ ಅಧ್ಯಕ್ಷ ಇಮ್ಯಾನುಯಲ್ ಮಾರ್ಕೋನ್ `ಭಾರತ ಸರ್ಕಾರ ತನ್ನ ಸಂಸತ್ತು ಮತ್ತು ವಿರೋಧ ಪಕ್ಷಗಳ ಮುಂದೆ ಬೆಲೆಗಳನ್ನು ಬಹಿರಂಗಪಡಿಸುವುದಾದರೆ ನಮ್ಮದೇನೂ ಅಭ್ಯಂತರವಿಲ್ಲ’ ಎಂದು ಹೇಳಿದ್ದಾರೆ. ಹಿಂದೊಮ್ಮೆ (ಹಳೆಯ ಯುಪಿಎ ಸರ್ಕಾರದ ಒಪ್ಪಂದ ರದ್ದಾಗುವುದಕ್ಕೂ ಮುನ್ನ) ಸ್ವತಃ ಅಂದಿನ ರಕ್ಷಣಾ ಸಚಿವರೇ, `ಶಸ್ತçಸಜ್ಜಿತ 126 ರಫೇಲ್ ವಿಮಾನಗಳಿಗೆ 90,000 ಕೋಟಿ ರೂಪಾಯಿ ವೆಚ್ಚವಾಗಲಿದೆ’ ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ಇವೆಲ್ಲವೂ ದರಗಳು ಗೌಪ್ಯತೆ ನಿಯಮಕ್ಕೆ ಅನ್ವಯಿಸುವುದಿಲ್ಲ ಅನ್ನೊÃದನ್ನು ಸ್ಪಷ್ಟಪಡಿಸುತ್ತಿವೆ. ಒಂದು ವಿಮಾನಕ್ಕೆ ಮೂರುಪಟ್ಟು ಹೆಚ್ಚು ದರ ತೆತ್ತಿರುವ ಲೋಪವನ್ನು ಮುಚ್ಚಿಕೊಳ್ಳುವುದಕ್ಕೆÃ ಸರ್ಕಾರ `ಗೌಪ್ಯತೆ’ ನಿಯಮವನ್ನು ಗುರಾಣಿಯಾಗಿ ಬಳಸುತ್ತಿದೆಯೇ ಎಂಬ ಅನುಮಾನ ಎಂತವರಲ್ಲೂ ಮೂಡುತ್ತದೆ.
ಮುಂದಿನ ವಿಚಾರಣೆ ನವೆಂಬರ್ 14ಕ್ಕೆ ನಿಗದಿಯಾಗಿದೆ. ನ್ಯಾಯಾಲಯದ ನಡೆ ಏನಾಗುತ್ತೊÃ ಬಲ್ಲವರಿಲ್ಲ. ಆದರೆ ಸ್ಥೂಲವಾಗಿ ನೋಡಿದಾಗ ಇಲ್ಲಿ ಎರಡೇ ಸಾಧ್ಯತೆಗಳಿರೋದು. ಒಂದು, ಮುಚ್ಚಿದ ಲಕೋಟೆಯಲ್ಲಿ ಸಲ್ಲಿಕೆಯಾಗುವ ವಿವರಗಳಲ್ಲಿ ಹಗರಣ ನಡೆದಿರುವುದು ಕೋರ್ಟ್ನ ಗಮನಕ್ಕೆ ಬಂದರೆ ಅದು ವಿಶೇಷ ತನಿಖೆಗೆ ಆದೇಶಿಸಲಿದೆ. ಎರಡನೆಯದು, ಅಂಕಿಅಂಶಗಳು ಸರಿಯಾಗಿವೆ ಅಂತ ಘೋಷಿಸಿ ಮೋದಿ ಸರ್ಕಾರಕ್ಕೆ ಕ್ಲಿÃನ್ ಚಿಟ್ ನೀಡೋದು. ರಫೇಲ್ ಹಗರಣವನ್ನು ಹತ್ತಿರದಿಂದ ಬಲ್ಲವರ ಪ್ರಕಾರ ಎರಡನೆಯ ಸಾಧ್ಯತೆಯ ಸಂಭವ ತೀರಾ ಕಮ್ಮಿ. ಹಾಗೊಮ್ಮೆ ಅಪ್ಪಿತಪ್ಪಿ ಕ್ಲಿÃನ್‌ಚಿಟ್ ಏನಾದರು ಸಿಕ್ಕಿಬಿಟ್ಟರೆ, ಈಗಷ್ಟೆÃ ಅಲ್ಲ ಮುಂದಿನ ದಿನಗಳಲ್ಲೂ ರಫೇಲ್ ವ್ಯವಹಾರದ ಮೇಲೆ ಕೇಳಿಬರುವ ಎಲ್ಲಾ ಆಪಾದನೆಗಳಿಗೂ ಸಮಾಧಿ ಕಟ್ಟಿದಂತಾಗುತ್ತೆ.

  • – ಗಿರೀಶ್ ತಾಳಿಕಟ್ಟೆ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಎಎಪಿಯ ರಾಜ್ಯಸಭಾ ಉಪನಾಯಕ ಸ್ಥಾನದಿಂದ ರಾಘವ್ ಚಡ್ಡಾಗೆ ಕೋಕ್, ಅಶೋಕ್ ಮಿತ್ತಲ್ ಗೆ ಅಧಿಕಾರ: ವರದಿ

ಮಹತ್ವದ ಬೆಳವಣಿಗೆಯೊಂದರಲ್ಲಿ, ಆಮ್ ಆದ್ಮಿ ಪಕ್ಷ (ಎಎಪಿ) ರಾಜ್ಯಸಭೆಯಲ್ಲಿ ರಾಘವ್ ಚಡ್ಡಾ ಅವರನ್ನು ಉಪನಾಯಕ ಹುದ್ದೆಯಿಂದ ಬದಲಾಯಿಸಲು ಮುಂದಾಗಿದ್ದು, ಇದು ಪಕ್ಷದೊಳಗಿನ ಆಂತರಿಕ ಬಿರುಕು ಉಂಟಾಗಿರುವ ಲಕ್ಷಣಗಳನ್ನು ಸೂಚಿಸುತ್ತದೆ. ಮೇಲ್ಮನೆಯಲ್ಲಿ ಪಕ್ಷದ ಹೊಸ...

ಜಾರ್ಖಂಡ್| ವಾಮಾಚಾರ ಆಚರಣೆಗೆ ಅಪ್ರಾಪ್ತ ಬಾಲಕಿ ಬಲಿ; ತಾಯಿ ಸೇರಿದಂತೆ ಮೂವರ ಬಂಧನ

ಜಾರ್ಖಂಡ್‌ನ ಹಜಾರಿಬಾಗ್ ಬಳಿಕ ಕುಸುಂಭ ಗ್ರಾಮದಲ್ಲಿ ಬಲಿದಾನದ ಆಚರಣೆಯಲ್ಲಿ ಕತ್ತು ಹಿಸುಕಿ ಕೊಂದ ಹದಿಹರೆಯದ ಹುಡುಗಿಯ 35 ವರ್ಷದ ತಾಯಿಯನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ. ಜೊತೆಗೆ, ಮಾಂತ್ರಿಕ ಮತ್ತು ಓರ್ವ ವ್ಯಕ್ತಿಯನ್ನು ಬಂಧಿಸಿರುವುದಾಗಿ...

ಪ. ಬಂಗಾಳ | ಎಸ್‌ಐಆರ್ ಕರ್ತವ್ಯದಲ್ಲಿದ್ದ ನ್ಯಾಯಾಧೀಶರನ್ನು ಒತ್ತೆಯಾಳಾಗಿಟ್ಟುಕೊಂಡ ಆರೋಪ : ತೀವ್ರ ಕಳವಳ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್, ಕೇಂದ್ರ ಪಡೆಗಳ ನಿಯೋಜನೆಗೆ ನಿರ್ದೇಶನ

ನಿನ್ನೆ (ಏ.1) ಮಧ್ಯಾಹ್ನದಿಂದ ಮಧ್ಯರಾತ್ರಿಯವರೆಗೆ ಪಶ್ಚಿಮ ಬಂಗಾಳದಲ್ಲಿ ನಡೆದ ಪ್ರತಿಭಟನೆಯ ವೇಳೆ, ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಕಾರ್ಯದಲ್ಲಿ ತೊಡಗಿದ್ದ ನ್ಯಾಯಾಂಗ ಅಧಿಕಾರಿಗಳನ್ನು ಪ್ರತಿಭಟನಾಕಾರರು ಒತ್ತೆಯಾಳಾಗಿ ಇರಿಸಿಕೊಂಡಿದ್ದರು ಎಂದು ಆರೋಪಿಸಲಾಗಿದೆ....

ಉತ್ತರ ಪ್ರದೇಶ| ಮುಸ್ಲಿಂ ಯುವಕನನ್ನು ಥಳಿಸಿ ದರೋಡೆ ಮಾಡಿದ ಗುಂಪು; ಹಿಂದೂ ಶ್ಲೋಕ ಪಠಿಸುವಂತೆ ಒತ್ತಾಯ

ಉತ್ತರ ಪ್ರದೇಶದ ಬರೇಲಿ ಜಿಲ್ಲೆಯಲ್ಲಿ ಹಿಂದುತ್ವವಾದಿ ಗುಂಪೊಂದು ಮುಸ್ಲಿಂ ಯುವಕನನ್ನು ನಿರ್ದಯವಾಗಿ ಥಳಿಸಿ, ಅವಮಾನಿಸಿ, ಹಿಂದುತ್ವ ಶ್ಲೋಕಗಳನ್ನು ಪಠಿಸುವಂತೆ ಒತ್ತಾಯಿಸಿದೆ ಎಂದು ಪೊಲೀಸರನ್ನು ಉಲ್ಲೇಖಿಸಿ 'ಕ್ಲಾರಿಯನ್ ಇಂಡಿಯಾ' ವರದಿ ಮಾಡಿದೆ. ಮಾರ್ಚ್ 28...

‘ಇರಾನ್‌ಗೆ ಅಮೆರಿಕನ್ನರ ವಿರುದ್ಧ ಯಾವುದೇ ದ್ವೇಷವಿಲ್ಲ’: ಅಮೆರಿಕದ ಸಾರ್ವಜನಿಕರಿಗೆ ‘ಮುಕ್ತ ಪತ್ರ’ ಬರೆದ ಇರಾನ್ ಅಧ್ಯಕ್ಷ ಪೆಜೆಶ್ಕಿಯಾನ್

ಪಶ್ಚಿಮ ಏಷ್ಯಾ ಸಂಘರ್ಷ ತೀವ್ರವಾಗುತ್ತಿರುವಾಗಲೇ ಅಮೆರಿಕ ಸಾರ್ವಜನಿಕರನ್ನು ಉದ್ದೇಶಿಸಿ ದೀರ್ಘ ಪತ್ರ ಬರೆದಿರುವ ಇರಾನ್ ಅಧ್ಯಕ್ಷ ಮಸೌದ್ ಪಜೆಶ್ಕಿಯಾನ್, ಅಮೆರಿಕನ್ನರ ವಿರುದ್ಧ ಇರಾನ್ ಯಾವುದೇ ದ್ವೇಷವನ್ನು ಹೊಂದಿಲ್ಲ ಎಂದು ಹೇಳಿದ್ದಾರೆ. ಆದರೆ  ಜಾಗತಿಕ ನಿರೂಪಣೆಗಳಲ್ಲಿ...

ಬಿಜು ಪಟ್ನಾಯಕ್ ವಿರುದ್ಧ ಹೇಳಿಕೆ : ಬೇಷರತ್ ಕ್ಷಮೆಯಾಚಿಸಿದ ಬಿಜೆಪಿ ಸಂಸದ ನಿಶಿಕಾಂತ್ ದುಬೆ

ಒಡಿಶಾದ ಮಾಜಿ ಮುಖ್ಯಮಂತ್ರಿ ಬಿಜು ಪಟ್ನಾಯಕ್ ಅವರ ಕುರಿತು ನೀಡಿದ ಹೇಳಿಕೆ ವಿರುದ್ದ ದೇಶದಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾದ ಹಿನ್ನೆಲೆ, ಬಿಜೆಪಿ ಸಂಸದ ನಿಶಿಕಾಂತ್ ದುಬೆ ಬುಧವಾರ (ಏ.1) ಬೇಷರತ್ ಕ್ಷಮೆಯಾಚಿಸಿದ್ದಾರೆ. "ಬಿಜು ಬಾಬು...

ಮಹಾರಾಷ್ಟ್ರ: ‘ನಿನ್ನ ಮಗಳನ್ನು ನನ್ನ ಬಳಿ ಕಳುಹಿಸು’; ಬಂಧಿತ ಮಹಿಳಾ ಆರೋಪಿಗೆ ಲೈಂಗಿಕ ಕಿರುಕುಳ ನೀಡಿದ್ದ ಪೊಲೀಸ್ ಅಮಾನತು 

ಮಹಾರಾಷ್ಟ್ರ: ಅಕೋಲಾದಲ್ಲಿ ನಡೆದ ಆಘಾತಕಾರಿ ಘಟನೆಯೊಂದರಲ್ಲಿ, ಕಸ್ಟಡಿಯಲ್ಲಿರುವ ಮಹಿಳೆಯೊಬ್ಬರಿಂದ ಲೈಂಗಿಕ ಕಿರುಕುಳಕ್ಕೆ ಬೇಡಿಕೆ ಇಟ್ಟಿದ್ದ ಮತ್ತು ಆಕೆಯ ಮಗಳನ್ನು ತನ್ನ ಬಳಿಗೆ ಕಳುಹಿಸುವಂತೆ ಕೇಳಿದ್ದಕ್ಕಾಗಿ ಸಹಾಯಕ ಪೊಲೀಸ್ ಸಬ್-ಇನ್ಸ್‌ಪೆಕ್ಟರ್ (ಎಎಸ್‌ಐ) ಒಬ್ಬರನ್ನು ಅಮಾನತುಗೊಳಿಸಲಾಗಿದೆ.  80...

ನಾಗ್ಪುರ-ಮುಂಬೈ ಎಕ್ಸ್‌ಪ್ರೆಸ್‌ವೇಯಲ್ಲಿ ಅಪಘಾತ : 8 ಮಹಿಳಾ ಕಾರ್ಮಿಕರು ಸಾವು

ವೇಗವಾಗಿ ಬಂದ ಟ್ರಕ್ ಟೆಂಪೋಗೆ ಡಿಕ್ಕಿ ಹೊಡೆದ ಪರಿಣಾಮ ಎಂಟು ಮಹಿಳಾ ಕಾರ್ಮಿಕರು ಸಾವನ್ನಪ್ಪಿ, ಮೂವರು ಗಾಯಗೊಂಡ ಘಟನೆ ಮಹಾರಾಷ್ಟ್ರದ ಜಲ್ನಾ ಜಿಲ್ಲೆಯ ನಾಗ್ಪುರ-ಮುಂಬೈ ಎಕ್ಸ್‌ಪ್ರೆಸ್‌ವೇಯಲ್ಲಿ ಬುಧವಾರ (ಏ.1) ಸಂಜೆ ನಡೆದಿದೆ. ಎಕ್ಸ್‌ಪ್ರೆಸ್‌ವೇಯ...

ಭಾರತದಲ್ಲಿ 12 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಿದ ಒರಾಕಲ್ : ಜಾಗತಿಕವಾಗಿ 30 ಸಾವಿರ ಜನರ ಕೆಲಸಕ್ಕೆ ಕುತ್ತು

ಐಟಿ ದೈತ್ಯ ಒರಾಕಲ್ ಜಾಗತಿಕ ಮಟ್ಟದಲ್ಲಿ ಸುಮಾರು 30,000 ಉದ್ಯೋಗಿಗಳನ್ನು ವಜಾಗೊಳಿಸಲು ನಿರ್ಧರಿಸಿದ್ದು, ಇದು ಭಾರತದ ಮೇಲೂ ತೀವ್ರ ಪರಿಣಾಮ ಬೀರಿದೆ. ವರದಿಗಳ ಪ್ರಕಾರ, ಭಾರತವೊಂದರಲ್ಲೇ ಸುಮಾರು 12,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ಕಂಪನಿಯು ತನ್ನ ಒಟ್ಟು ಉದ್ಯೋಗಿಳ...

ಗೋವಾ ನೈಟ್‌ಕ್ಲಬ್ ಬೆಂಕಿ ಪ್ರಕರಣ: ಮಾಲೀಕರಾದ ಸೌರಭ್ ಲೂತ್ರಾ, ಗೌರವ್ ಲೂತ್ರಾ ಸಹೋದರರಿಗೆ ಜಾಮೀನು

ಪಣಜಿ: ಕಳೆದ ಡಿಸೆಂಬರ್‌ನಲ್ಲಿ 25 ಜನರ ಸಾವಿಗೆ ಕಾರಣವಾದ ವಿನಾಶಕಾರಿ ಬೆಂಕಿ ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಬಿರ್ಚ್ ಬೈ ರೋಮಿಯೋ ಲೇನ್ ನೈಟ್‌ಕ್ಲಬ್‌ನ ಮಾಲೀಕರಾದ ಸೌರಭ್ ಲೂತ್ರಾ ಮತ್ತು ಗೌರವ್ ಲೂತ್ರಾ ಅವರಿಗೆ...