Homeಅಂಕಣಗಳುಹೆಣ್ಮಕ್ಕಳ ಮೂಕವೇದನೆ ಕೊನೆಯಾಗಲಿ

ಹೆಣ್ಮಕ್ಕಳ ಮೂಕವೇದನೆ ಕೊನೆಯಾಗಲಿ

- Advertisement -
- Advertisement -
ರಾಜಕುಮಾರನಾಗಿದ್ದ ಸಿದ್ಧಾರ್ಥ, ಬುದ್ಧನಾದ. ಬುದ್ಧನಾದ ಮೇಲೆ ಭಾರತದ ಎಲ್ಲ ಕಡೆ ಪ್ರವಾಸಕ್ಕೆ ಹೊರಟ. ಹಾಗೆ ಹೊರಟವನು ಒಮ್ಮೆ ತನ್ನ ಊರಾದ ಕಪಿಲವಸ್ತುವಿಗೂ ಭೇಟಿ ನೀಡಿದ. ಕಪಿಲವಸ್ತುವಿನಲ್ಲಿ ಮೊಕ್ಕಾಂ ಹೂಡಿದಾಗ, ಬುದ್ಧನ ಸೇವೆಯಲ್ಲಿದ್ದ ಸಿದ್ದಾರ್ಥನ ಸೋದರಳಿಯ ಆನಂದ ಬುದ್ಧನ ಪೂರ್ವಾಶ್ರಮದ ಮಡದಿ ಯಶೋಧರಾ ಅವರನ್ನು ಕಾಣಲು ಅವಳ ಅರಮನೆಗೆ ಬಂದ. ಆಕೆ ಪೂರ್ವಾಶ್ರಮದ ಗಂಡ ಸಿದ್ಧಾರ್ಥನ ಯೋಗಕ್ಷೆÃಮ ವಿಚಾರಿಸಿದಳು. ಬುದ್ಧನ ಕೀರ್ತಿ ಭಾರತದಲ್ಲಿ ಪಸರಿಸುತ್ತಿರುವುದನ್ನು ಕೇಳಿ ತಿಳಿದು ಸಂಪ್ರಿÃತಳಾದಳು. ಪೂರ್ವಾಶ್ರಮದ ಮಡದಿಯಾದ ಯಶೋಧರೆ ತನ್ನ ಮನೆಗೆ ಆತಿಥ್ಯ ಸ್ವಿÃಕರಿಸಲು ಬುದ್ಧನನ್ನು ಆನಂದನ ಮೂಲಕ ಆಹ್ವಾನಿಸಿದಳು. ಹಿಂತಿರುಗಿ ಬಂದ ಆನಂದ ಯಶೋಧರೆಯ ಆಹ್ವಾನದ ಬಗೆಗೆ ಬುದ್ದನಿಗೆ ತಿಳಿಸಿದ. ಮನೆ ತೊರೆದು ಸನ್ಯಾಸ ಸ್ವಿÃಕರಿಸಿದವರು ತನ್ನ ಪೂರ್ವಾಶ್ರಮದ ಮಡದಿ-ಮಕ್ಕಳನ್ನು ನೋಡಲು ಹೋಗುವುದು ಆ ದಿನಗಳಲ್ಲಿ ನಿಷೇಧಿಸಲ್ಪಟ್ಟಿತ್ತು. ಬುದ್ದ ಈ ನಿಯಮವನ್ನು ಮೀರಲು ತೀರ್ಮಾನಿಸಿದ. ಯಶೋಧರೆಯ ಕೋರಿಕೆಯನ್ನು ಮನ್ನಿಸಿ ಆಕೆಯ ಅರಮನೆಗೆ ಹೊರಟ.
ಯಶೋಧರೆ ಬುದ್ದನನ್ನು ಸಡಗರದಿಂದ, ಭಕ್ತಿಯಿಂದ ಸ್ವಾಗತಿಸಿದಳು. ತನಗೂ ದೀಕ್ಷೆ ನೀಡಬೇಕೆಂದು ವಿನಂತಿಸಿಕೊಂಡಳು. ಹೆಂಗಸರಿಗೆ ದೀಕ್ಷೆ ನೀಡಿದರೆ ನನ್ನ ಧರ್ಮಕ್ಕೆ ಅರ್ಧಾಯಸ್ಸು; ಆದ್ದರಿಂದ ದೀಕ್ಷೆ ಕೊಡಲೊಲ್ಲೆ ಎಂದರು ಬುದ್ದ. ಯಶೋಧರೆ ಕೆರಳಿದ ಸಿಂಹಿಣಿಯಂತಾದಳು. ಬುದ್ಧನಿಗೆ ಕಠಿಣ ಪ್ರಶ್ನೆಗಳನ್ನು ಕೇಳಿದಳು. ಪುರುಷರಿಗೆ ಮಾತ್ರ ಮನ್ನಣೆ ನೀಡುವ ಈ ನಿಮ್ಮ ಧರ್ಮದಲ್ಲಿ ಪರಿಪೂರ್ಣತೆಯಿಲ್ಲ; ಅದು ಮುಕ್ಕಾದ ಧರ್ಮ. ಈ ನಿಮ್ಮ ನಿಲುವನ್ನು ಒಪ್ಪಲಾಗುವುದಿಲ್ಲ’ ಎಂದಳು. ಬುದ್ಧ ಜಿಜ್ಞಾಸೆಗೆ ತೊಡಗಿದ. ಈ ಚರ್ಚೆಯ ಪರಿಣಾಮವಾಗಿ, ಯಶೋಧರೆಯ ಅಪೇಕ್ಷೆಯಂತೆ ಬುದ್ಧ ಆಕೆಗೆ ಧರ್ಮ ದೀಕ್ಷೆ ನೀಡಿದ.

ಬುದ್ದ ಹೆಂಗಸರಿಗೂ ಧರ್ಮ ದೀಕ್ಷೆ ನೀಡಿದ್ದರಿಂದ ಬೌದ್ಧ ಧರ್ಮಕ್ಕೆ ಅರ್ಧಾಯಸ್ಸು ಆದಂತೆ ಕಾಣುತ್ತಿಲ್ಲ. ಹಲವು ದೇಶಗಳಿಗೆ ವಿಸ್ತರಿಸಿ ಗಟ್ಟಿಯಾಗೇ ಬೇರುಬಿಟ್ಟಂತೆ ಕಾಣುತ್ತಿದೆ. ಹಾಗೆಯೇ ಮಹಿಳೆಯರಿಗೂ ಧರ್ಮ ದೀಕ್ಷೆ ಕೊಡುವ ಬುದ್ಧನ ನೀತಿ ವ್ಯಾಪಕ ಪರಿಣಾಮ ಬೀರಿದ್ದಂತೂ ನಿಜ. ಕಾಲದಿಂದ ಕಾಲಕ್ಕೆ ಈ ಸಾಮಾಜಿಕ ಜಾಗೃತಿ ವಿಸ್ತರಿಸುತ್ತಾ ಸಾಗಿದೆ. ಈಗಿನ ಕಾಲದಲ್ಲಿ ಸಿನಿಮಾ, ನಾಟಕ ಕಂಪನಿಗಳಲ್ಲಿ, ಸರ್ಕಾರದಲ್ಲಿ, ಖಾಸಗಿ ಕಂಪನಿಗಳಲ್ಲಿ, ಮಿಲ್ಲುಗಳಲ್ಲಿ, ಐಟಿ ಬಿಟಿಗಳಲ್ಲಿ, ಖಾಸಗಿ ಮತ್ತು ಸರ್ಕಾರಿ ಶಾಲೆ-ಕಾಲೇಜುಗಳಲ್ಲಿ ಪುರುಷರು ಮತ್ತು ಸ್ತಿçÃಯರು ಒಟ್ಟಿಗೆ ಕೆಲಸ ಮಾಡುವ ಅವಕಾಶಗಳು ಹೆಚ್ಚುತ್ತಾ ಸಾಗಿವೆ. ಈ ಅವಕಾಶಗಳು ಹೆಚ್ಚಿದಂತೆಲ್ಲಾ ಸ್ತಿçÃಯರ ಮೇಲಿನ ದೌರ್ಜನ್ಯ, ಲಂಪಟತನ ಮಿತಿಮೀರಿ ಬೆಳೆದಿರುವುದಂತೂ ನಿಜ. ಇದಕ್ಕೆ ಮೊದಲು ನಮ್ಮ ದೇಶದಲ್ಲಿ ಇದೆಲ್ಲ ಇರಲಿಲ್ಲವೇ? ಇತ್ತು, ಸೀಮಿತವಾಗಿತ್ತು.

ನಮ್ಮ ಹೆಣ್ಣು ಮಕ್ಕಳು ಕಳೆದ 50 ವರ್ಷಗಳಿಂದ ಈ ಬಗೆಯ ದೌರ್ಜನ್ಯವನ್ನು ಮೌನವಾಗಿ ಅನುಭವಿಸಿಕೊಂಡು ಬಂದಿದ್ದಾರೆ. ಮುಚ್ಚುಮರೆಯಲ್ಲಿ ನಡೆಯುತ್ತಿದ್ದ ಈ ಬಗೆಯ ದೌರ್ಜನ್ಯ ಈಗ ಮಿತಿಮೀರಿದೆಯಾಗಿ, ಹೆಣ್ಣು ಮಕ್ಕಳು ಒಬ್ಬೊಬ್ಬರೇ ತಮಗಾದ ಅಪಮಾನವನ್ನು ಬಾಯ್ತೆರೆದು ಹೇಳಿಕೊಳ್ಳುತ್ತಿದ್ದಾರೆ. ಹೇಳಿಕೊಂಡರೆ ತಮ್ಮ ಭವಿಷ್ಯ ಹಾಳಾಗುವುದೆಂದು ಭಾವಿಸಿ ಬಾಯಿಯನ್ನು ಬಿಗಿಯಾಗಿ ಹಿಡಿದುಕೊಂಡು ಮೂಕವೇದನೆ ಅನುಭವಿಸುತ್ತಿರುವ ಸಹಸ್ರಾರು ಹೆಣ್ಣು ಮಕ್ಕಳು ನಮ್ಮ ನಡುವೆಯೇ ಇದ್ದಾರೆ. ಬಹಳ ಕಾಲದಿಂದ ನಡೆದು ಬಂದಿರುವ ಕಿರುಕುಳ ತಾಳಲಾದರೆ, ಆಕ್ರೊÃಶಗೊಂಡು ಕೆಂಡಾಮಂಡಲರಾದ ಅಸಹಾಯಕ ಸ್ತಿçÃಯರು ಈಗ ಒಬ್ಬೊಬ್ಬರಾಗಿ ಭುಗಿಲೆದ್ದು ತಮ್ಮ ಆಕ್ರೊÃಶ ವ್ಯಕ್ತ ಪಡಿಸುತ್ತಿದ್ದಾರೆ. ಈ ಪ್ರತಿಕ್ರಿಯೆ ಸಹಜವಾದುದು. ನೊಂದ ಹೆಣ್ಣುಮಕ್ಕಳ ಪರವಾಗಿ ದನಿಯೆತ್ತುವುದು ಸಮಾಜದ ಸ್ವಾಸ್ಥö್ಯ ಬಯಸುವ ಎಲ್ಲರ ಕರ್ತವ್ಯ.
ಈ ಸಂದರ್ಭದಲ್ಲಿ ಸರ್ಕಾರಗಳು, ನ್ಯಾಯಾಲಯಗಳು ಕಾನೂನಿನ ಮಿತಿಯಲ್ಲಿ ತಾನೇನು ಕ್ರಮಗಳನ್ನು ಕೈಗೊಳ್ಳಬೇಕೋ ಅದನ್ನು ತೆಗೆದುಕೊಂಡಿವೆ ಎಂಬುದು ನಿಜ. ಆದರೆ ಈ ಸಾಮಾಜಿಕ ಪಿಡುಗನ್ನು ತಡೆಗಟ್ಟಲು ಇದಿಷ್ಟೆÃ ಸಾಕೆ? ಖಂಡಿತ ಸಾಲದು.
ಈ ಸಾಮಾಜಿಕ ಪಿಡುಗಿಗೆ ನಮ್ಮ ಸಮಾಜದ ಚಾರಿತ್ರö್ಯದ ಕೊರತೆ ಪ್ರಮುಖ ಕಾರಣ. ಚಾರಿತ್ರö್ಯವಿಲ್ಲದ ಜನ ಮತ್ತು ಚಾರಿತ್ರö್ಯವಿಲ್ಲದ ದೇಶಕ್ಕೆ ಭವಿಷ್ಯವಿಲ್ಲ. ಆದ್ದರಿಂದ ವಿದ್ಯೆ ಕಲಿಸುವಾಗ ಚಾರಿತ್ರö್ಯ ವೃದ್ಧಿಯ ಶಿಕ್ಷಣವನ್ನು ಜೊತೆಜೊತೆಗೆ ನೀಡಬೇಕು. ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳುವ ಶಿಕ್ಷಣವನ್ನು ನಾವು ಕೊಡುತ್ತಿಲ್ಲ. ಹೀಗಾಗಿ ಅನೈತಿಕತೆ, ದ್ವೆÃಷ ಭಾವನೆ, ಕಾಮಾತುರತೆ, ದುರಾಸೆ, ಅಹಂಕಾರ, ಸೇಡಿನ ಮನೋಭಾವ ಇವೆಲ್ಲವೂ ಏಕಕಾಲದಲ್ಲಿ ನಮ್ಮ ಸಮಾಜವನ್ನು ಕಾಡುತ್ತಿವೆ.
* ಪ್ರಾಥಮಿಕ ಶಾಲೆಗಳಲ್ಲಿ ಕೋ-ಎಜುಕೇಷನ್ ಇರಬೇಕು, ಇಲ್ಲಿ ಶಿಕ್ಷಕರು ಎಲ್ಲರೂ ಮಹಿಳೆಯರೇ ಇದ್ದರೆ ಚೆನ್ನ. ಹಾಗೆ ಅಲ್ಲಿಂದ ಮುಂದಕ್ಕೆ ತಕ್ಷಣದ ಕ್ರಮವಾಗಿ, ಹುಡುಗರಿಗೆ ಮತ್ತು ಹುಡುಗಿಯರಿಗೆ ಪ್ರತ್ಯೆÃಕ ಶಾಲೆಗಳನ್ನು ಮಾಡುವುದು ಒಳ್ಳೆಯದು. ಹೆಣ್ಣುಮಕ್ಕಳ ಶಾಲೆಗಳಲ್ಲಿ ಪೂರ್ತಿ ಮಹಿಳಾ ಶಿಕ್ಷಕಿಯರೇ ಇರುವಂತೆಯೂ ಹಾಗೂ ಗಂಡುಮಕ್ಕಳ ಶಾಲೆಗಳಲ್ಲಿ ಪುರುಷ ಶಿಕ್ಷಕರು ಇರುವಂತೆಯೂ ವ್ಯವಸ್ಥೆ ಮಾಡಬೇಕು. ಇದು ಶಾಶ್ವತ ಪರಿಹಾರವಲ್ಲವಾದರೂ ಬಿಗಡಾಯಿಸಿರುವ ಇಂದಿನ ಪರಿಸ್ಥಿತಿಗೆ ಒಂದು ತಾತ್ಕಾಲಿಕ ಉಪಕ್ರಮ ಆಗಬಹುದು.
* ಹೆಂಗಸರು ಗಂಡಸರು ಕೂಡಿ ಕೆಲಸ ಮಾಡುವ ಎಲ್ಲೆಡೆಯೂ ಹೆಣ್ಣು ಮಕ್ಕಳ ವಿಜಿಲೆನ್ಸ್ ಕಮಿಟಿ ರಚಿಸಬೇಕು. ಈ ಸಲಹಾ ಸಮಿತಿ ನೀಡುವ ವರದಿಯನ್ನು ಪರಿಶೀಲಿಸಿ ನ್ಯಾಯಯುತ ತೀರ್ಮಾನ ತೆಗೆದುಕೊಳ್ಳಲು, ಜೊತೆಜೊತೆಗೇ ಒಂದು ನಿಷ್ಪಕ್ಷವಾದ ಉನ್ನತ ಸಮಿತಿಯನ್ನು ರಚಿಸಬೇಕು. ತಪ್ಪಿತಸ್ಥರು ದೊಡ್ಡ ಅಧಿಕಾರಿಯಾಗಿರಲಿ, ಸಾಮಾನ್ಯ ನೌಕರರಾಗಿರಲಿ ಎಲ್ಲರಿಗೂ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು. ಅಪರಾಧ ಎಸಗಿದವರನ್ನು ಕೆಲಸದಿಂದ ಕಿತ್ತೆಸೆಯಬೇಕು. ಹೀಗೆ ಮಾಡುವುದರಿಂದ ಬಹುಮಟ್ಟಿಗೆ ಮಹಿಳೆಯರ ಮೇಲಿನ ದೌರ್ಜನ್ಯ ಇಳಿಮುಖವಾಗುವುದೆಂದು ನಾನು ಭಾವಿಸುತ್ತೆÃನೆ.
* ಮುಂದಿನ ಪೀಳಿಗೆಯಲ್ಲಾದರೂ ಈ ಪಿಡುಗು ಸಮಾಜದಿಂದ ದೂರವಾಗಲಿ ಎಂಬ ಧ್ಯೆÃಯ ನಮ್ಮದಾದರೆ, ಶಾಲೆಯ ಮಕ್ಕಳಿಗೆ ಅರಿಷಡ್ವರ್ಗಗಳನ್ನು ದೂರ ಮಾಡುವ ಶಿಕ್ಷಣ ನೀಡಬೇಕು. ಕಾಮ, ಕ್ರೊÃಧ, ಮೋಹ, ಲೋಭ, ಮದ, ಮತ್ಸರಗಳು ಅರಿಷಡ್ವರ್ಗಗಳು. ಇವು ನಮ್ಮ ಅರಿಗಳು, ಶತ್ರುಗಳು. ಈ ಅರಿಷಡ್ವರ್ಗಗಳನ್ನು ಗೆದ್ದರೆ ಮನುಷ್ಯ ಸ್ವಚ್ಛಮನಸ್ಸಿನವನಾಗುತ್ತಾನೆ.
ಈ ಅರಿಷಡ್ವರ್ಗಗಳಲ್ಲಿ ಈಗ ನಮ್ಮ ಸಮಾಜವನ್ನು ಕಾಡುತ್ತಿರುವ ಅತಿ ದೊಡ್ಡ ಶತ್ರುವೆಂದರೆ ಕಾಮ. ಕಾಮವನ್ನು ಗೆಲ್ಲಬೇಕಾದರೆ ಮನಸ್ಸಿನ ಮೇಲೆ ಹತೋಟಿ ಇಟ್ಟುಕೊಳ್ಳುವುದನ್ನು ಕಲಿಸಬೇಕು. ಕಾಮ ಎನ್ನುವ ಶತ್ರು ಕಾಡುತ್ತಾ ಬಂದಾಗ ನಮ್ಮ ಮನಸ್ಸನ್ನು ನಿಗ್ರಹಿಸುವ ಶಕ್ತಿ ಬೆಳೆಸಿಕೊಳ್ಳಬೇಕು. ಆಮೆ ತನ್ನ ಶತ್ರುವನ್ನು ಕಂಡೊಡನೆ ಹೇಗೆ ತನ್ನ ಶರೀರವನ್ನು ತನ್ನ ಚಿಪ್ಪಿನೊಳಕ್ಕೆ ಎಳೆದುಕೊಳ್ಳುತ್ತದೆಯೋ ಹಾಗೆ ಕೆಟ್ಟ ವಿಷಯಗಳು ಮನಸ್ಸನ್ನು ಆಕ್ರಮಿಸಿದಾಗ ನಾವು ನಮ್ಮ ಮನಸ್ಸನ್ನು ನಮ್ಮ ಹತೋಟಿಯಲ್ಲಿಟ್ಟುಕೊಂಡು, ಆ ಕೆಟ್ಟ ವಿಚಾರಗಳು ನಮ್ಮನ್ನು ಅಧೋಗತಿಗಿಳಿಸುವುದನ್ನು ತಡೆಗಟ್ಟಬಹುದು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶ್ರೀಲಂಕಾ | 2019ರ ಈಸ್ಟರ್ ಬಾಂಬ್ ಸ್ಫೋಟ ಪ್ರಕರಣ: ಇಬ್ಬರು ಮಾಜಿ ಅಧಿಕಾರಿಗಳಿಗೆ ಮರಣದಂಡನೆ ವಿಧಿಸಿದ ಕೋರ್ಟ್

ಬರೋಬ್ಬರಿ 260ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾಗಿದ್ದ 2019ರ ಶ್ರೀಲಂಕಾದ 'ಈಸ್ಟರ್ ಸಂಡೇ' ಬಾಂಬ್ ಸ್ಫೋಟ ಪ್ರಕರಣದಲ್ಲಿ ಕ್ರಿಮಿನಲ್ ನಿರ್ಲಕ್ಷ್ಯ ಆರೋಪ ಸಾಬೀತಾದ ಹಿನ್ನೆಲೆ, ಪೊಲೀಸ್ ಮಾಜಿ ಮುಖ್ಯಸ್ಥ ಮತ್ತು ರಕ್ಷಣಾ ಸಚಿವಾಲಯದ...

ಅಮೆರಿಕ ಓದಿಗೆ ಎಲ್ಲಿಂದ ಬಂತು ಹಣ? CJP ಸ್ಥಾಪಕ ಅಭಿಜೀತ್ ದೀಪ್ಕೆ ತಂದೆಯ ಆಸ್ತಿ ತನಿಖೆಗೆ RTI ಕಾರ್ಯಕರ್ತ ಆಗ್ರಹ

ಕಾಕ್ರೋಚ್ ಜನತಾ ಪಾರ್ಟಿ (CJP) ಸ್ಥಾಪಕ ಅಭಿಜೀತ್ ದೀಪ್ಕೆ ಅವರ ತಂದೆ, ಮಹಾರಾಷ್ಟ್ರ ಸರ್ಕಾರದ ನಿವೃತ್ತ ಉದ್ಯೋಗಿ ಭಗವಾನ್‌ರಾವ್ ದೀಪ್ಕೆ ಅವರ ಆದಾಯ ಮತ್ತು ಅಕ್ರಮ ಆಸ್ತಿ ಗಳಿಕೆ ಕುರಿತು ಸಮಗ್ರ ತನಿಖೆ...

ಕಾವೇರಿ ವಿಚಾರದಲ್ಲಿ ರಾಜಕೀಯ ಪಕ್ಕಕ್ಕಿಟ್ಟು ರಾಜ್ಯದ ಹಿತ ಕಾಯೋಣ: ಸರ್ವಪಕ್ಷ ಸಭೆಯಲ್ಲಿ ಸಿಎಂ ಡಿ.ಕೆ. ಶಿವಕುಮಾರ್ ಕರೆ

ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಪರಿಸ್ಥಿತಿ ಸುಧಾರಿಸುವ ಲಕ್ಷಣಗಳು ಕಂಡುಬರುತ್ತಿದ್ದು, ನದಿ ನೀರಿನ ಹಂಚಿಕೆಯಲ್ಲಿ ಸೌಹಾರ್ದಯುತವಾಗಿ ಸಮಸ್ಯೆ ನಿವಾರಿಸುವುದೇ ಸರ್ಕಾರದ ಮೊದಲ ಆದ್ಯತೆಯಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಕಾವೇರಿ...

ಉತ್ತರ ಪ್ರದೇಶ : 33 ವರ್ಷಗಳ ಬಳಿಕ ದೇಶದ್ರೋಹ ಪ್ರಕರಣದಿಂದ ಮುಸ್ಲಿಂ ವ್ಯಕ್ತಿ ಖುಲಾಸೆ

ಪ್ರಾಸಿಕ್ಯೂಷನ್ ಆರೋಪಗಳನ್ನು ಸಾಂದರ್ಭಿಕ ಪುರಾವೆಗಳೊಂದಿಗೆ ಸಾಬೀತುಪಡಿಸಲು ವಿಫಲವಾಗಿದೆ ಮತ್ತು ಆರೋಪಿಯನ್ನು ಕೃತ್ಯಕ್ಕೆ ಲಿಂಕ್ ಮಾಡುವ ಪ್ರಮುಖ ಪುರಾವೆಗಳು ಕಾಣೆಯಾಗಿವೆ ಎಂದು ಅಭಿಪ್ರಾಯಪಟ್ಟ ಲಕ್ನೋದ ವಿಶೇಷ ರಾಷ್ಟ್ರೀಯ ತನಿಖಾ ದಳ (ಎನ್ಐಎ) ನ್ಯಾಯಾಲಯ, ದೇಶದ್ರೋಹ...

‘ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು’ ಎಂಬಂತೆ NTA ಯಿಂದ ₹7.5 ಕೋಟಿಯ ಬೃಹತ್ ಸೆಕ್ಯೂರಿಟಿ ಟೆಂಡರ್

ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯಾಗಿ, ಅಮಾಯಕ ವಿದ್ಯಾರ್ಥಿಗಳ ಜೀವ-ಭವಿಷ್ಯ ಹಾಳಾದ ಮೇಲೆ, ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು ಎಂಬಂತೆ ಈಗ ಎನ್‌ಟಿಎ (NTA) ₹7.5 ಕೋಟಿ ವೆಚ್ಚದ ಭದ್ರತಾ ಟೆಂಡರ್...

SIR: ನಮೂನೆಯೂ ಇಲ್ಲ, ನೋಟಿಸ್‌ ಇಲ್ಲ ಸ್ವಂತ ಮನೆಯಲ್ಲಿದ್ದವರ ಹೆಸರನ್ನೇ ಅಳಿಸಿಹಾಕಿದ ಚುನಾವಣಾ ಆಯೋಗ

ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಒಂದಾದ ಮೇಲೊಂದರಂತೆ ಆತಂಕಕಾರಿ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಮನೆಮನೆಗೆ ತೆರಳಿ ಎನ್ಯುಮರೇಷನ್ ನಮೂನೆ ವಿತರಿಸುವ ಮೊದಲ ಹಂತದ ಪ್ರಕ್ರಿಯೆ...

ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಅಮಾನತುಗೊಂಡಿದ್ದ ಯುಪಿ ಪೊಲೀಸ್ ಕಾನ್‌ಸ್ಟೇಬಲ್; ಮರುನೇಮಕದ ಬೆನ್ನಲ್ಲೇ ಬಾಲಕಿಯ ಅತ್ಯಾಚಾರ, ಕೊಲೆ!

ಹತ್ತು ವರ್ಷದ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ, ಆಕೆಯ ಸಾವಿಗೆ ಕಾರಣನಾದ ಆರೋಪದ ಮೇಲೆ ಬಂಧಿತನಾದ ಉತ್ತರ ಪ್ರದೇಶದ ಪೊಲೀಸ್ ಕಾನ್‌ಸ್ಟೇಬಲ್ ಅಭಿಷೇಕ್ ಯಾದವ್‌ನನ್ನು ವೈದ್ಯಕೀಯ ತಪಾಸಣೆಗಾಗಿ ಗೋರಖ್‌ಪುರದ ಜಿಲ್ಲಾಸ್ಪತ್ರೆಗೆ ಕರೆತಂದಾಗ, ಅಲ್ಲಿನ...

BJP ವಿರುದ್ಧದ ಆಕ್ರೋಶವೇ Gen-Z ಹೋರಾಟದ ಮೂಲ: ವಿಪಕ್ಷಗಳಿಗೆ ಇದು ದೊಡ್ಡ ಪಾಠ

ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿಗಳ ಹೋರಾಟವನ್ನು ನಿಮ್ಮ ರಾಜಕೀಯ ದೃಷ್ಟಿಕೋನಕ್ಕೆ ತಕ್ಕಂತೆ ನೀವು ಕ್ರಾಂತಿ ಎಂದಾದರೂ ನೋಡಬಹುದು, ಅಥವಾ ಕ್ಷಣಿಕವಾಗಿ ಎದ್ದ ಬಿರುಗಾಳಿ ಎಂದಾದರೂ ಭಾವಿಸಬಹುದು. ಆದರೆ ಇಲ್ಲಿ ನಿಜವಾಗಿಯೂ ಆಗಿದ್ದೇನು ಮತ್ತು...

ಇನ್‌ಸ್ಟಾಗ್ರಾಮ್‌ನಲ್ಲಿ ಕ್ಷಮಿಸಿದರೆ ಸಾಲದು, ವಿದ್ಯಾರ್ಥಿಗಳ ಮೇಲಿನ ಕೇಸ್ ವಾಪಸ್ ಪಡೆಯಿರಿ: ಪ್ರಧಾನಿಗೆ ದೀಪ್ಕೆ ನೇರ ಪ್ರಶ್ನೆ

ಪ್ರಧಾನಿ ನರೇಂದ್ರ ಮೋದಿ ಅವರು ಇನ್‌ಸ್ಟಾಗ್ರಾಮ್ ವಿಡಿಯೋವೊಂದರಲ್ಲಿ ತಮ್ಮ ವಿರುದ್ಧ ನಿಂದನಾತ್ಮಕ ಪದ ಬಳಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಕ್ಷಮಿಸಿದ್ದೇನೆ ಎಂದು ಹೇಳಿರುವುದಕ್ಕೆ ಸಿಜೆಪಿ ಸಂಸ್ಥಾಪಕ ಅಭಿಜೀತ್...

ಪ್ರತಿಭಟನೆ ಭೀತಿ : ಸಿಜೆಐ ಸೂರ್ಯಕಾಂತ್ ಭಾಗವಹಿಸಬೇಕಿದ್ದ ಘಟಿಕೋತ್ಸವ ದಿಢೀರ್ ಮುಂದೂಡಿದ TISS

ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (ಟಿಐಎಸ್‌ಎಸ್‌) ಸಂಸ್ಥೆಯು ಆಗಸ್ಟ್ 2ರಂದು ನಡೆಸಲು ನಿಗದಿಪಡಿಸಿದ್ದ ತನ್ನ 86ನೇ ವಾರ್ಷಿಕ ಘಟಿಕೋತ್ಸವವನ್ನು ದಿಢೀರ್ ಮುಂದೂಡಿದೆ. ಕ್ಯಾಂಪಸ್ ಭದ್ರತೆಯ ಬಗೆಗಿನ ಕಳವಳಗಳು ಮತ್ತು ವಿದ್ಯಾರ್ಥಿಗಳ...