Homeಅಂಕಣಗಳುಹೆಣ್ಮಕ್ಕಳ ಮೂಕವೇದನೆ ಕೊನೆಯಾಗಲಿ

ಹೆಣ್ಮಕ್ಕಳ ಮೂಕವೇದನೆ ಕೊನೆಯಾಗಲಿ

- Advertisement -
- Advertisement -
ರಾಜಕುಮಾರನಾಗಿದ್ದ ಸಿದ್ಧಾರ್ಥ, ಬುದ್ಧನಾದ. ಬುದ್ಧನಾದ ಮೇಲೆ ಭಾರತದ ಎಲ್ಲ ಕಡೆ ಪ್ರವಾಸಕ್ಕೆ ಹೊರಟ. ಹಾಗೆ ಹೊರಟವನು ಒಮ್ಮೆ ತನ್ನ ಊರಾದ ಕಪಿಲವಸ್ತುವಿಗೂ ಭೇಟಿ ನೀಡಿದ. ಕಪಿಲವಸ್ತುವಿನಲ್ಲಿ ಮೊಕ್ಕಾಂ ಹೂಡಿದಾಗ, ಬುದ್ಧನ ಸೇವೆಯಲ್ಲಿದ್ದ ಸಿದ್ದಾರ್ಥನ ಸೋದರಳಿಯ ಆನಂದ ಬುದ್ಧನ ಪೂರ್ವಾಶ್ರಮದ ಮಡದಿ ಯಶೋಧರಾ ಅವರನ್ನು ಕಾಣಲು ಅವಳ ಅರಮನೆಗೆ ಬಂದ. ಆಕೆ ಪೂರ್ವಾಶ್ರಮದ ಗಂಡ ಸಿದ್ಧಾರ್ಥನ ಯೋಗಕ್ಷೆÃಮ ವಿಚಾರಿಸಿದಳು. ಬುದ್ಧನ ಕೀರ್ತಿ ಭಾರತದಲ್ಲಿ ಪಸರಿಸುತ್ತಿರುವುದನ್ನು ಕೇಳಿ ತಿಳಿದು ಸಂಪ್ರಿÃತಳಾದಳು. ಪೂರ್ವಾಶ್ರಮದ ಮಡದಿಯಾದ ಯಶೋಧರೆ ತನ್ನ ಮನೆಗೆ ಆತಿಥ್ಯ ಸ್ವಿÃಕರಿಸಲು ಬುದ್ಧನನ್ನು ಆನಂದನ ಮೂಲಕ ಆಹ್ವಾನಿಸಿದಳು. ಹಿಂತಿರುಗಿ ಬಂದ ಆನಂದ ಯಶೋಧರೆಯ ಆಹ್ವಾನದ ಬಗೆಗೆ ಬುದ್ದನಿಗೆ ತಿಳಿಸಿದ. ಮನೆ ತೊರೆದು ಸನ್ಯಾಸ ಸ್ವಿÃಕರಿಸಿದವರು ತನ್ನ ಪೂರ್ವಾಶ್ರಮದ ಮಡದಿ-ಮಕ್ಕಳನ್ನು ನೋಡಲು ಹೋಗುವುದು ಆ ದಿನಗಳಲ್ಲಿ ನಿಷೇಧಿಸಲ್ಪಟ್ಟಿತ್ತು. ಬುದ್ದ ಈ ನಿಯಮವನ್ನು ಮೀರಲು ತೀರ್ಮಾನಿಸಿದ. ಯಶೋಧರೆಯ ಕೋರಿಕೆಯನ್ನು ಮನ್ನಿಸಿ ಆಕೆಯ ಅರಮನೆಗೆ ಹೊರಟ.
ಯಶೋಧರೆ ಬುದ್ದನನ್ನು ಸಡಗರದಿಂದ, ಭಕ್ತಿಯಿಂದ ಸ್ವಾಗತಿಸಿದಳು. ತನಗೂ ದೀಕ್ಷೆ ನೀಡಬೇಕೆಂದು ವಿನಂತಿಸಿಕೊಂಡಳು. ಹೆಂಗಸರಿಗೆ ದೀಕ್ಷೆ ನೀಡಿದರೆ ನನ್ನ ಧರ್ಮಕ್ಕೆ ಅರ್ಧಾಯಸ್ಸು; ಆದ್ದರಿಂದ ದೀಕ್ಷೆ ಕೊಡಲೊಲ್ಲೆ ಎಂದರು ಬುದ್ದ. ಯಶೋಧರೆ ಕೆರಳಿದ ಸಿಂಹಿಣಿಯಂತಾದಳು. ಬುದ್ಧನಿಗೆ ಕಠಿಣ ಪ್ರಶ್ನೆಗಳನ್ನು ಕೇಳಿದಳು. ಪುರುಷರಿಗೆ ಮಾತ್ರ ಮನ್ನಣೆ ನೀಡುವ ಈ ನಿಮ್ಮ ಧರ್ಮದಲ್ಲಿ ಪರಿಪೂರ್ಣತೆಯಿಲ್ಲ; ಅದು ಮುಕ್ಕಾದ ಧರ್ಮ. ಈ ನಿಮ್ಮ ನಿಲುವನ್ನು ಒಪ್ಪಲಾಗುವುದಿಲ್ಲ’ ಎಂದಳು. ಬುದ್ಧ ಜಿಜ್ಞಾಸೆಗೆ ತೊಡಗಿದ. ಈ ಚರ್ಚೆಯ ಪರಿಣಾಮವಾಗಿ, ಯಶೋಧರೆಯ ಅಪೇಕ್ಷೆಯಂತೆ ಬುದ್ಧ ಆಕೆಗೆ ಧರ್ಮ ದೀಕ್ಷೆ ನೀಡಿದ.

ಬುದ್ದ ಹೆಂಗಸರಿಗೂ ಧರ್ಮ ದೀಕ್ಷೆ ನೀಡಿದ್ದರಿಂದ ಬೌದ್ಧ ಧರ್ಮಕ್ಕೆ ಅರ್ಧಾಯಸ್ಸು ಆದಂತೆ ಕಾಣುತ್ತಿಲ್ಲ. ಹಲವು ದೇಶಗಳಿಗೆ ವಿಸ್ತರಿಸಿ ಗಟ್ಟಿಯಾಗೇ ಬೇರುಬಿಟ್ಟಂತೆ ಕಾಣುತ್ತಿದೆ. ಹಾಗೆಯೇ ಮಹಿಳೆಯರಿಗೂ ಧರ್ಮ ದೀಕ್ಷೆ ಕೊಡುವ ಬುದ್ಧನ ನೀತಿ ವ್ಯಾಪಕ ಪರಿಣಾಮ ಬೀರಿದ್ದಂತೂ ನಿಜ. ಕಾಲದಿಂದ ಕಾಲಕ್ಕೆ ಈ ಸಾಮಾಜಿಕ ಜಾಗೃತಿ ವಿಸ್ತರಿಸುತ್ತಾ ಸಾಗಿದೆ. ಈಗಿನ ಕಾಲದಲ್ಲಿ ಸಿನಿಮಾ, ನಾಟಕ ಕಂಪನಿಗಳಲ್ಲಿ, ಸರ್ಕಾರದಲ್ಲಿ, ಖಾಸಗಿ ಕಂಪನಿಗಳಲ್ಲಿ, ಮಿಲ್ಲುಗಳಲ್ಲಿ, ಐಟಿ ಬಿಟಿಗಳಲ್ಲಿ, ಖಾಸಗಿ ಮತ್ತು ಸರ್ಕಾರಿ ಶಾಲೆ-ಕಾಲೇಜುಗಳಲ್ಲಿ ಪುರುಷರು ಮತ್ತು ಸ್ತಿçÃಯರು ಒಟ್ಟಿಗೆ ಕೆಲಸ ಮಾಡುವ ಅವಕಾಶಗಳು ಹೆಚ್ಚುತ್ತಾ ಸಾಗಿವೆ. ಈ ಅವಕಾಶಗಳು ಹೆಚ್ಚಿದಂತೆಲ್ಲಾ ಸ್ತಿçÃಯರ ಮೇಲಿನ ದೌರ್ಜನ್ಯ, ಲಂಪಟತನ ಮಿತಿಮೀರಿ ಬೆಳೆದಿರುವುದಂತೂ ನಿಜ. ಇದಕ್ಕೆ ಮೊದಲು ನಮ್ಮ ದೇಶದಲ್ಲಿ ಇದೆಲ್ಲ ಇರಲಿಲ್ಲವೇ? ಇತ್ತು, ಸೀಮಿತವಾಗಿತ್ತು.

ನಮ್ಮ ಹೆಣ್ಣು ಮಕ್ಕಳು ಕಳೆದ 50 ವರ್ಷಗಳಿಂದ ಈ ಬಗೆಯ ದೌರ್ಜನ್ಯವನ್ನು ಮೌನವಾಗಿ ಅನುಭವಿಸಿಕೊಂಡು ಬಂದಿದ್ದಾರೆ. ಮುಚ್ಚುಮರೆಯಲ್ಲಿ ನಡೆಯುತ್ತಿದ್ದ ಈ ಬಗೆಯ ದೌರ್ಜನ್ಯ ಈಗ ಮಿತಿಮೀರಿದೆಯಾಗಿ, ಹೆಣ್ಣು ಮಕ್ಕಳು ಒಬ್ಬೊಬ್ಬರೇ ತಮಗಾದ ಅಪಮಾನವನ್ನು ಬಾಯ್ತೆರೆದು ಹೇಳಿಕೊಳ್ಳುತ್ತಿದ್ದಾರೆ. ಹೇಳಿಕೊಂಡರೆ ತಮ್ಮ ಭವಿಷ್ಯ ಹಾಳಾಗುವುದೆಂದು ಭಾವಿಸಿ ಬಾಯಿಯನ್ನು ಬಿಗಿಯಾಗಿ ಹಿಡಿದುಕೊಂಡು ಮೂಕವೇದನೆ ಅನುಭವಿಸುತ್ತಿರುವ ಸಹಸ್ರಾರು ಹೆಣ್ಣು ಮಕ್ಕಳು ನಮ್ಮ ನಡುವೆಯೇ ಇದ್ದಾರೆ. ಬಹಳ ಕಾಲದಿಂದ ನಡೆದು ಬಂದಿರುವ ಕಿರುಕುಳ ತಾಳಲಾದರೆ, ಆಕ್ರೊÃಶಗೊಂಡು ಕೆಂಡಾಮಂಡಲರಾದ ಅಸಹಾಯಕ ಸ್ತಿçÃಯರು ಈಗ ಒಬ್ಬೊಬ್ಬರಾಗಿ ಭುಗಿಲೆದ್ದು ತಮ್ಮ ಆಕ್ರೊÃಶ ವ್ಯಕ್ತ ಪಡಿಸುತ್ತಿದ್ದಾರೆ. ಈ ಪ್ರತಿಕ್ರಿಯೆ ಸಹಜವಾದುದು. ನೊಂದ ಹೆಣ್ಣುಮಕ್ಕಳ ಪರವಾಗಿ ದನಿಯೆತ್ತುವುದು ಸಮಾಜದ ಸ್ವಾಸ್ಥö್ಯ ಬಯಸುವ ಎಲ್ಲರ ಕರ್ತವ್ಯ.
ಈ ಸಂದರ್ಭದಲ್ಲಿ ಸರ್ಕಾರಗಳು, ನ್ಯಾಯಾಲಯಗಳು ಕಾನೂನಿನ ಮಿತಿಯಲ್ಲಿ ತಾನೇನು ಕ್ರಮಗಳನ್ನು ಕೈಗೊಳ್ಳಬೇಕೋ ಅದನ್ನು ತೆಗೆದುಕೊಂಡಿವೆ ಎಂಬುದು ನಿಜ. ಆದರೆ ಈ ಸಾಮಾಜಿಕ ಪಿಡುಗನ್ನು ತಡೆಗಟ್ಟಲು ಇದಿಷ್ಟೆÃ ಸಾಕೆ? ಖಂಡಿತ ಸಾಲದು.
ಈ ಸಾಮಾಜಿಕ ಪಿಡುಗಿಗೆ ನಮ್ಮ ಸಮಾಜದ ಚಾರಿತ್ರö್ಯದ ಕೊರತೆ ಪ್ರಮುಖ ಕಾರಣ. ಚಾರಿತ್ರö್ಯವಿಲ್ಲದ ಜನ ಮತ್ತು ಚಾರಿತ್ರö್ಯವಿಲ್ಲದ ದೇಶಕ್ಕೆ ಭವಿಷ್ಯವಿಲ್ಲ. ಆದ್ದರಿಂದ ವಿದ್ಯೆ ಕಲಿಸುವಾಗ ಚಾರಿತ್ರö್ಯ ವೃದ್ಧಿಯ ಶಿಕ್ಷಣವನ್ನು ಜೊತೆಜೊತೆಗೆ ನೀಡಬೇಕು. ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳುವ ಶಿಕ್ಷಣವನ್ನು ನಾವು ಕೊಡುತ್ತಿಲ್ಲ. ಹೀಗಾಗಿ ಅನೈತಿಕತೆ, ದ್ವೆÃಷ ಭಾವನೆ, ಕಾಮಾತುರತೆ, ದುರಾಸೆ, ಅಹಂಕಾರ, ಸೇಡಿನ ಮನೋಭಾವ ಇವೆಲ್ಲವೂ ಏಕಕಾಲದಲ್ಲಿ ನಮ್ಮ ಸಮಾಜವನ್ನು ಕಾಡುತ್ತಿವೆ.
* ಪ್ರಾಥಮಿಕ ಶಾಲೆಗಳಲ್ಲಿ ಕೋ-ಎಜುಕೇಷನ್ ಇರಬೇಕು, ಇಲ್ಲಿ ಶಿಕ್ಷಕರು ಎಲ್ಲರೂ ಮಹಿಳೆಯರೇ ಇದ್ದರೆ ಚೆನ್ನ. ಹಾಗೆ ಅಲ್ಲಿಂದ ಮುಂದಕ್ಕೆ ತಕ್ಷಣದ ಕ್ರಮವಾಗಿ, ಹುಡುಗರಿಗೆ ಮತ್ತು ಹುಡುಗಿಯರಿಗೆ ಪ್ರತ್ಯೆÃಕ ಶಾಲೆಗಳನ್ನು ಮಾಡುವುದು ಒಳ್ಳೆಯದು. ಹೆಣ್ಣುಮಕ್ಕಳ ಶಾಲೆಗಳಲ್ಲಿ ಪೂರ್ತಿ ಮಹಿಳಾ ಶಿಕ್ಷಕಿಯರೇ ಇರುವಂತೆಯೂ ಹಾಗೂ ಗಂಡುಮಕ್ಕಳ ಶಾಲೆಗಳಲ್ಲಿ ಪುರುಷ ಶಿಕ್ಷಕರು ಇರುವಂತೆಯೂ ವ್ಯವಸ್ಥೆ ಮಾಡಬೇಕು. ಇದು ಶಾಶ್ವತ ಪರಿಹಾರವಲ್ಲವಾದರೂ ಬಿಗಡಾಯಿಸಿರುವ ಇಂದಿನ ಪರಿಸ್ಥಿತಿಗೆ ಒಂದು ತಾತ್ಕಾಲಿಕ ಉಪಕ್ರಮ ಆಗಬಹುದು.
* ಹೆಂಗಸರು ಗಂಡಸರು ಕೂಡಿ ಕೆಲಸ ಮಾಡುವ ಎಲ್ಲೆಡೆಯೂ ಹೆಣ್ಣು ಮಕ್ಕಳ ವಿಜಿಲೆನ್ಸ್ ಕಮಿಟಿ ರಚಿಸಬೇಕು. ಈ ಸಲಹಾ ಸಮಿತಿ ನೀಡುವ ವರದಿಯನ್ನು ಪರಿಶೀಲಿಸಿ ನ್ಯಾಯಯುತ ತೀರ್ಮಾನ ತೆಗೆದುಕೊಳ್ಳಲು, ಜೊತೆಜೊತೆಗೇ ಒಂದು ನಿಷ್ಪಕ್ಷವಾದ ಉನ್ನತ ಸಮಿತಿಯನ್ನು ರಚಿಸಬೇಕು. ತಪ್ಪಿತಸ್ಥರು ದೊಡ್ಡ ಅಧಿಕಾರಿಯಾಗಿರಲಿ, ಸಾಮಾನ್ಯ ನೌಕರರಾಗಿರಲಿ ಎಲ್ಲರಿಗೂ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು. ಅಪರಾಧ ಎಸಗಿದವರನ್ನು ಕೆಲಸದಿಂದ ಕಿತ್ತೆಸೆಯಬೇಕು. ಹೀಗೆ ಮಾಡುವುದರಿಂದ ಬಹುಮಟ್ಟಿಗೆ ಮಹಿಳೆಯರ ಮೇಲಿನ ದೌರ್ಜನ್ಯ ಇಳಿಮುಖವಾಗುವುದೆಂದು ನಾನು ಭಾವಿಸುತ್ತೆÃನೆ.
* ಮುಂದಿನ ಪೀಳಿಗೆಯಲ್ಲಾದರೂ ಈ ಪಿಡುಗು ಸಮಾಜದಿಂದ ದೂರವಾಗಲಿ ಎಂಬ ಧ್ಯೆÃಯ ನಮ್ಮದಾದರೆ, ಶಾಲೆಯ ಮಕ್ಕಳಿಗೆ ಅರಿಷಡ್ವರ್ಗಗಳನ್ನು ದೂರ ಮಾಡುವ ಶಿಕ್ಷಣ ನೀಡಬೇಕು. ಕಾಮ, ಕ್ರೊÃಧ, ಮೋಹ, ಲೋಭ, ಮದ, ಮತ್ಸರಗಳು ಅರಿಷಡ್ವರ್ಗಗಳು. ಇವು ನಮ್ಮ ಅರಿಗಳು, ಶತ್ರುಗಳು. ಈ ಅರಿಷಡ್ವರ್ಗಗಳನ್ನು ಗೆದ್ದರೆ ಮನುಷ್ಯ ಸ್ವಚ್ಛಮನಸ್ಸಿನವನಾಗುತ್ತಾನೆ.
ಈ ಅರಿಷಡ್ವರ್ಗಗಳಲ್ಲಿ ಈಗ ನಮ್ಮ ಸಮಾಜವನ್ನು ಕಾಡುತ್ತಿರುವ ಅತಿ ದೊಡ್ಡ ಶತ್ರುವೆಂದರೆ ಕಾಮ. ಕಾಮವನ್ನು ಗೆಲ್ಲಬೇಕಾದರೆ ಮನಸ್ಸಿನ ಮೇಲೆ ಹತೋಟಿ ಇಟ್ಟುಕೊಳ್ಳುವುದನ್ನು ಕಲಿಸಬೇಕು. ಕಾಮ ಎನ್ನುವ ಶತ್ರು ಕಾಡುತ್ತಾ ಬಂದಾಗ ನಮ್ಮ ಮನಸ್ಸನ್ನು ನಿಗ್ರಹಿಸುವ ಶಕ್ತಿ ಬೆಳೆಸಿಕೊಳ್ಳಬೇಕು. ಆಮೆ ತನ್ನ ಶತ್ರುವನ್ನು ಕಂಡೊಡನೆ ಹೇಗೆ ತನ್ನ ಶರೀರವನ್ನು ತನ್ನ ಚಿಪ್ಪಿನೊಳಕ್ಕೆ ಎಳೆದುಕೊಳ್ಳುತ್ತದೆಯೋ ಹಾಗೆ ಕೆಟ್ಟ ವಿಷಯಗಳು ಮನಸ್ಸನ್ನು ಆಕ್ರಮಿಸಿದಾಗ ನಾವು ನಮ್ಮ ಮನಸ್ಸನ್ನು ನಮ್ಮ ಹತೋಟಿಯಲ್ಲಿಟ್ಟುಕೊಂಡು, ಆ ಕೆಟ್ಟ ವಿಚಾರಗಳು ನಮ್ಮನ್ನು ಅಧೋಗತಿಗಿಳಿಸುವುದನ್ನು ತಡೆಗಟ್ಟಬಹುದು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...