Homeಮುಖಪುಟಸಮರ್ಪಕವಾಗಿ ಕಾರ್ಯನಿರ್ವಹಿಸದ ಕಾರಣ ವಿಸರ್ಜನೆಯತ್ತ ರಾಯಚೂರು ಜಿ.ಪಂ: ಇದು ನಿಮ್ಮೂರಿನ ಪರಿಸ್ಥಿತಿಯು ಆಗಿರಬಹುದು

ಸಮರ್ಪಕವಾಗಿ ಕಾರ್ಯನಿರ್ವಹಿಸದ ಕಾರಣ ವಿಸರ್ಜನೆಯತ್ತ ರಾಯಚೂರು ಜಿ.ಪಂ: ಇದು ನಿಮ್ಮೂರಿನ ಪರಿಸ್ಥಿತಿಯು ಆಗಿರಬಹುದು

ಪಂಚಾಯತ್ ರಾಜ್ ಅಧಿನಿಯಮ 1993 ರ 268/2 ರ ಅನ್ವಯ ಯಾವುದೇ ಪಂಚಾಯ್ತಿ ಸತತವಾಗಿ ತನ್ನ ಕರ್ತವ್ಯಗಳನ್ನು ನಿರ್ವಹಿಸುವಲ್ಲಿ ವಿಫಲವಾದಲ್ಲಿ ಅಂತಹ ಪಂಚಾಯ್ತಿಯನ್ನು ವಿಸರ್ಜನೆಗೊಳಿಸಿ ಮರುಚುನಾವಣೆ ನಡೆಸಬೇಕು ಎಂಬ ನಿಯಮವಿದೆ ಎನ್ನುತ್ತಾರೆ ರಾಯಚೂರಿನ ಹೋರಾಟಗಾರ ರಝಾಕ್ ಉಸ್ತಾದ್.

- Advertisement -
- Advertisement -

ಕರ್ನಾಟಕದ ಹಿಂದುಳಿದ ಜಿಲ್ಲೆಗಳಲ್ಲಿ ರಾಯಚೂರು ಸಹ ಒಂದು. ಡಿ.ಎಂ ನಂಜುಂಡಪ್ಪ ವರದಿಯ ಪ್ರಕಾರ ಅತಿಹೆಚ್ಚು ಹಿಂದುಳಿದ ತಾಲ್ಲೂಕು ರಾಯಚೂರಿನ ದೇವದುರ್ಗ. ಇಂತಹ ಸಮಯದಲ್ಲಿ ಜನರ ಸತತ ಹೋರಾಟದ ಫಲವಾಗಿ ದಕ್ಕಿದ 371ಜೆ ವಿಶೇಷ ಸ್ಥಾನಮಾನ, ಹಲವು ನೀರಾವರಿ ಯೋಜನೆಗಳು ಸೇರಿದಂತೆ ಇತ್ಯಾದಿ ಕಾರ್‍ಯಕ್ರಮಗಳು ಜಿಲ್ಲೆಯನ್ನು ಅಭಿವೃದ್ಧಿಯತ್ತ ಕೊಂಡೊಯ್ಯಬೇಕಿತ್ತು. ಆದರೆ ಅದು ಆಗಲೇ ಇಲ್ಲ. ಸರ್ಕಾರದ ಇಚ್ಛಾಶಕ್ತಿಯ ಕೊರತೆ, ಜನಪ್ರತಿನಿಧಿಗಳ ನಿರ್ಲಕ್ಷ್ಯ ಇದಕ್ಕೆ ಕಾರಣ. ಆದರೆ ಅಷ್ಟೇ ಮತ್ತೊಂದು ಪ್ರಮುಖ ಕಾರಣವೆಂದರೆ ಇಲ್ಲಿನ ಸ್ಥಳೀಯ ಆಡಳಿತದ ವೈಫಲ್ಯ. ಅಂದರೆ ಜಿಲ್ಲಾ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ ಮತ್ತು ಗ್ರಾಮ ಪಂಚಾಯ್ತಿಗಳು ತಮಗಿರುವ ಅಧಿಕಾರವನ್ನು ಬಳಸಿ ಸಮರ್ಪಕವಾಗಿ ಕೆಲಸ ನಿರ್ವಹಿಸದೇ ಹೋದುದಾಗಿದೆ.

ಪಂಚಾಯತ್ ರಾಜ್ ವ್ಯವಸ್ಥೆಗೆ ತನ್ನದೇ ಆದ ಮಹತ್ವವಿದೆ. ಗಾಂಧೀಜಿಯವರ ಗ್ರಾಮಸ್ವರಾಜ್ಯವನ್ನು ಸಾಕಾರಗೊಳಿಸುವ ಉತ್ತಮ ಆಯುಧವಾದ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಬಲಪಡಿಸಲು ಅನೇಕರು ಶ್ರಮಿಸಿದ್ದಾರೆ. ಅಧಿಕಾರ ವಿಕೇಂದ್ರಿಕರಣದ ಪ್ರಧಾನ ಸಂಸ್ಥೆಗಳಾಗಿ ಇವುಗಳು ಉನ್ನತ ಅಧಿಕಾರಗಳನ್ನು ಹೊಂದಿವೆ. ಪಂಚಾಯ್ತಿಗಳು ಸರ್ಕಾರದ ಎಲ್ಲಾ ಯೋಜನೆಗಳನ್ನು ಅನುಷ್ಠಾನಗೊಳಿಸುವ ಮೇಲುಸ್ತುವಾರಿ ಸಮಿತಿಗಳಾಗಿವೆ. ಆದರೆ ಅದರ ಮಹತ್ವ ಅಲ್ಲಿರುವ ಸ್ಥಳೀಯ ಜನಪ್ರತಿನಿಧಿಗಳಿಗೆ ಅರಿವಾಗದಿರುವುದು ದೊಡ್ಡ ದುರಂತ.

ಇಷ್ಟೆಲ್ಲಾ ಏಕೆ ಹೇಳಬೇಕಾಗಿದೆಯೆಂದರೆ ರಾಯಚೂರು ಜಿಲ್ಲಾ ಪಂಚಾಯ್ತಿಯು ವಿಸರ್ಜನೆಯಾಗುವ ಹಂತಕ್ಕೆ ಬಂದು ನಿಂತಿದೆ. ಸರ್ಕಾರ ಕಾನೂನುಪ್ರಕಾರ ನಡೆದುಕೊಂಡಿದ್ದಲ್ಲಿ ಅದು ಈಗಾಗಲೇ ವಿಸರ್ಜನೆಯಾಗಬೇಕಾದಷ್ಟು ಕರ್ತವ್ಯ ಲೋಪ ಮತ್ತು ಅಸಡ್ಡೆ ತೋರಿದೆ. ಅದು ಎಸಗಿರುವ ಗುರುತರ ಪ್ರಮಾದವೆಂದರೆ ತನ್ನ ಪ್ರಾಥಮಿಕ ಕರ್ತವ್ಯವಾದ ಸಭೆ ಸೇರುವುದನ್ನೇ ಸತತವಾಗಿ ಉಲ್ಲಂಘಿಸುತ್ತಾ ಬಂದಿರುವುದಾಗಿದೆ. ಪಂಚಾಯತ್ ಕಾಯ್ದೆ ಪ್ರಕಾರ ಪ್ರತಿ ಎರಡು ತಿಂಗಳಿಗೊಮ್ಮೆ ಪಂಚಾಯ್ತಿಯ ಸಾಮಾನ್ಯ ಸಭೆ ಸೇರುವುದು, ಪ್ರತಿ ತಿಂಗಳು ಕೆಡಿಪಿ (ಕರ್ನಾಟಕ ಡೆವಲಪ್‌ಮೆಂಟ್ಸ್ ಪ್ರೋಗ್ರಾಮ್ಸ್) ಸಭೆ ನಡೆಸುವುದು, ಈ ಸಭೆಗಳಿಗೆ ಮುಂಚಿತವಾಗಿ ಸ್ಥಾಯಿ ಸಮಿತಿಗಳು ಸಭೆ ಸೇರುವುದು ಕಡ್ಡಾಯ. ಆದರೆ ಪಂಚಾಯ್ತಿಯೊಂದು ಸಭೆಯೇ ಸೇರದಿದ್ದರೆ ಅಲ್ಲಿನ ಪ್ರಗತಿ ಹೇಗೆ ಸಾಧ್ಯ? ಪಂಚಾಯತ್ ರಾಜ್ ಅಧಿನಿಯಮ 1993ರ ಅನ್ವಯ ಅಧ್ಯಕ್ಷರು ಸಭೆ ಕರೆಯದಿದ್ದರೆ ಉಪಾಧ್ಯಕ್ಷರು ಕರೆಯಬಹುದು. ಅವರೂ ಕರೆಯದಿದ್ದರೆ ಮೂರನೇ ಒಂದು ಭಾಗದ ಸದಸ್ಯರು ಸೇರಿ ಸಿಇಓಗೆ ಪತ್ರ ನೀಡಿ ಸಭೆ ಕರೆಯಬೇಕು. ಅದೂ ಆಗದಿದ್ದರೆ ಸಿಇಓ ಸರ್ಕಾರಕ್ಕೆ ಪತ್ರ ಬರೆದು ಕ್ರಮ ಕೈಗೊಳ್ಳುವುದಾಗಿದೆ. ದುರಾದೃಷ್ಟವೆಂದರೆ ಇವರಲ್ಲಿ ಯಾರೂ ಸಹ ಸಭೆ ಕರೆಯದೇ ಕಾಲ ದೂಡಿದ್ದಾರೆ.

ರಾಯಚೂರು ಜಿ.ಪಂ ಸಾಮಾನ್ಯ ಸಭೆಯ ಚಿತ್ರ

ಕೊರೊನಾ ಕಾಲದಲ್ಲಿ ಸಭೆ ಸೇರುವುದು ಕಷ್ಟವಲ್ಲವೇ ಎಂದು ನಿಮಗೆ ಅನಿಸಬಹುದು. ಆದರೆ ನಾವೀಗ ಮಾತನಾಡುತ್ತಿರುವುದು ಕೊರೊನಾ ಕಾಲದಲ್ಲಿ ಅಲ್ಲ. ರಾಯಚೂರು ಹಾಲಿ ಜಿಲ್ಲಾ ಪಂಚಾಯ್ತಿಯು 52 ತಿಂಗಳುಗಳನ್ನು ಪೂರೈಸಿದೆ. ಅಂದರೆ ಅದು ಇಷ್ಟರಲ್ಲಿ 26 ಸಾಮಾನ್ಯ ಸಭೆಗಳನ್ನು ನಡೆಸಬೇಕಿತ್ತು. ಆದರೆ ಅದು ಕೇವಲ 9 ಸಭೆಗಳನ್ನು ಮಾತ್ರ ನಡೆಸಿದೆ. 20 ತಿಂಗಳ ಹಿಂದೆಯೇ ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿಯ ಹಿರಿಯ ಮುಖಂಡರಾದ ಡಾ. ರಝಾಕ್ ಉಸ್ತಾದ್‌ರವರು ಈ ಕುರಿತು ದೂರು ನೀಡಿದ್ದರು. ಮೇ ತಿಂಗಳಿನಲ್ಲಿ ಸಿಇಓ ಈ ಕುರಿತು ಸರ್ಕಾರಕ್ಕೆ ಮೂರು ಪುಟಗಳ ವರದಿ ನೀಡಿ ’ಸಭೆಗಳು ನಡೆಯುತ್ತಿಲ್ಲ ಎನ್ನುವುದು ನಿಜ, ಬಹಳಷ್ಟು ಸದಸ್ಯರು ಅಸಮರ್ಥರಿದ್ದಾರೆ, ಅವರಿಗೆ ತರಬೇತಿಯ ಅಗತ್ಯವಿದೆ’ ಎಂದು ಬರೆದಿದ್ದರು. ಅದರನ್ವಯ ಅಧ್ಯಕ್ಷರು, ಉಪಾಧ್ಯಕ್ಷರಿಗೆ ಈ ವಿಚಾರವಾಗಿ ನೋಟಿಸ್ ಹೋಗಿದೆ. ನಿಮ್ಮನ್ನು ಮತ್ತು ಪಂಚಾಯ್ತಿಯನ್ನು ವಜಾಗೊಳಿಸಬೇಕಾಗುತ್ತದೆ ಎಂದು ಎಚ್ಚರಿಕೆ ಸಹ ನೀಡಲಾಗಿದೆ. ಆದರೂ ಅಲ್ಲಿಯ ಜಿಲ್ಲಾ ಪಂಚಾಯ್ತಿಯು ಕೇವಲ ಒಮ್ಮೆ ಮಾತ್ರ ಸಭೆ ಸೇರಿದೆಯೆಂದರೆ ಅದರ ದರ್ಪ ಎಷ್ಟಿರಬೇಡ?

ಕಾನೂನು ಏನು ಹೇಳುತ್ತದೆ?
ಪಂಚಾಯತ್ ರಾಜ್ ಅಧಿನಿಯಮ 1993 ರ 268/2 ರ ಅನ್ವಯ ಯಾವುದೇ ಪಂಚಾಯ್ತಿ ಸತತವಾಗಿ ತನ್ನ ಕರ್ತವ್ಯಗಳನ್ನು ನಿರ್ವಹಿಸುವಲ್ಲಿ ವಿಫಲವಾದಲ್ಲಿ ಅಂತಹ ಪಂಚಾಯ್ತಿಯನ್ನು ವಿಸರ್ಜನೆಗೊಳಿಸಿ ಮರುಚುನಾವಣೆ ನಡೆಸಬೇಕು ಎಂಬ ನಿಯಮವಿದೆ. ಇದರನ್ವಯ 2019ರ ಜನವರಿಯಲ್ಲಿ ಡಾ. ರಝಾಕ್ ಉಸ್ತಾದ್‌ರವರು ಸರ್ಕಾರಕ್ಕೆ ದೂರು ನೀಡಿ ಪಂಚಾಯ್ತಿ ವಿಸರ್ಜಿಸಲು ಆಗ್ರಹಿಸಿದ್ದರು. ಆಗಿನ ಪಂಚಾಯತ್ ರಾಜ್ ಮತ್ತು ಗ್ರಾಮೀಣ ಅಭಿವೃದ್ಧಿ ಸಚಿವರಾದ ಕೃಷ್ಣಭೈರೇಗೌಡರು ಅದನ್ನು ಪರಿಶೀಲಿಸಿ ವಿಸರ್ಜನೆಗೆ ಶಿಫಾರಸ್ಸು ಸಹ ಮಾಡಿದ್ದರು. ಆದರೆ ಅಷ್ಟರಲ್ಲಿ ಜೆಡಿಎಸ್-ಕಾಂಗ್ರೆಸ್ ಸರ್ಕಾರ ಬಿದ್ದುಹೋಗಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿತ್ತು. ಅಲ್ಲಿಗೆ ಆ ಶಿಫಾರಸ್ಸು ಮೂಲೆ ಸೇರಿತು. ಏಕೆಂದರೆ ರಾಯಚೂರು ಜಿಲ್ಲಾ ಪಂಚಾಯ್ತಿ ಅಧ್ಯಕ್ಷರು ಬಿಜೆಪಿಯವರಾಗಿರುವುದು.

ತಮ್ಮ ಜಿಲ್ಲಾ ಪಂಚಾಯಿತಿಯಲ್ಲಿ ಸಭೆ ನಡೆಯುತ್ತಿಲ್ಲ, ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ ಎಂಬುದು ಎಲ್ಲರಿಗಿಂತ ಅಲ್ಲಿನ ಸಿಇಓಗೆ ಗೊತ್ತಿರುತ್ತದೆ. ಅದನ್ನು ಸರ್ಕಾರಕ್ಕೆ ವರದಿ ಮಾಡಿ ಕೆಲಸ ಮಾಡಿಸುವಂತೆ ಮಾಡುವುದು ಅವರ ಕರ್ತವ್ಯ ಸಹ. ಆದರೆ ಸಿಇಓ ಮಾತ್ರ ಈ ವಿಚಾರವಾಗಿ ಕೈಚೆಲ್ಲಿ ಕೂತಿದ್ದಾರೆ.

ಆದರೆ ರಝಾಕ್ ಉಸ್ತಾದ್‌ರವರು ತಮ್ಮ ಪಟ್ಟುಬಿಡದೆ ಸರ್ಕಾರದ ಮೇಲೆ ಒತ್ತಡ ತಂದಿದ್ದರಿಂದ, 2020ರ ಜೂನ್‌ನಲ್ಲಿ ಸರ್ಕಾರ ಪ್ರಾದೇಶಿಕ ಆಯಕ್ತರ ಕಚೇರಿಗೆ (ಕಲಬುರಗಿ) ಈ ಕುರಿತು ತನಿಖೆ ನಡೆಸಿ ವರದಿ ನೀಡಲು ಆದೇಶಿಸಿತ್ತು. ಅಂತೆಯೆ ಅದು ಜುಲೈ 3ರಂದು ತನ್ನ ವರದಿ ಸಲ್ಲಿಸಿದ್ದು, ರಾಯಚೂರು ಜಿಲ್ಲಾ ಪಂಚಾಯ್ತಿ ಸತತವಾಗಿ ಕೆಲಸ ಮಾಡಿಲ್ಲದಿರುವುದು ಕಂಡುಬಂದಿದ್ದು, ನಿಯಮ 268/2ರ ಪ್ರಕಾರ ಜಿಲ್ಲಾ ಪಂಚಾಯ್ತಿಯನ್ನು ವಿಸರ್ಜನೆಗೊಳಿಸಿ, ಇದರ ವಿರುದ್ಧ ಕ್ರಮ ಜರುಗಿಸಬಹುದು ಎಂದು ಹೇಳಿದೆ. ಆದರೂ ಈಗಿನ ಸಚಿವರಾದ ಕೆ.ಎಸ್ ಈಶ್ವರಪ್ಪನವರು ಮೌನಕ್ಕೆ ಶರಣಾಗಿದ್ದಾರೆ.

ನಿಲ್ಲದ ಹೋರಾಟ
ಇನ್ನು ರಿಟ್ ಆಫ್ ಮ್ಯಾಂಡಮಸ್ ಮೂಲಕ ಕೋರ್ಟಿಗೆ ಹೋಗಿ ನಿರ್ದೇಶನ ತೆಗೆದುಕೊಳ್ಳಬೇಕೆಂದು ಉಸ್ತಾದ್‌ರವರು ನಿರ್ಧರಿಸಿದ್ದಾರೆ. ಜಿಲ್ಲಾ ಪಂಚಾಯ್ತಿಯ ಅಧಿಕಾರಾವಧಿ ಇನ್ನು ಕೇವಲ 7 ತಿಂಗಳು ಉಳಿದಿದೆ. ಆದರೂ ಅವರು ಹೋರಾಟ ಬಿಟ್ಟಿಲ್ಲ. ಕೇವಲ ಒಂದು ತಿಂಗಳ ಮೊದಲು ವಿಸರ್ಜನೆಯಾದರೂ ಪರವಾಗಿಲ್ಲ, ಜಿಪಂ ವಿಸರ್ಜನೆ ಆಗಲೇಬೇಕು. ಏಕೆಂದರೆ ಇದು ಉಳಿದ ಜಿಲ್ಲೆಗಳಿಗೂ, ಮುಂದೆ ಅಧಿಕಾರಕ್ಕೆ ಬರುವ ಸದಸ್ಯರಿಗೂ ಪಾಠವಾಗಬೇಕಿದೆ. 2020-21ನೇ ಸಾಲಿನ ಕ್ರಿಯಾಯೋಜನೆಯ ಅನುಮೋದನೆಗಾಗಿ ಇಲ್ಲಿಯವರೆಗೆ ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆ ನಡೆದಿಲ್ಲ, ಕ್ರಿಯಾಯೋಜನೆ ಅನುಮೋದನೆಯಾಗಿಲ್ಲ ಅಂದರೆ ಕೆಲಸ ಯಾವಾಗ ಮಾಡುತ್ತಾರೆ? ಎಂದು ಉಸ್ತಾದ್‌ರವರು ಪ್ರಶ್ನಿಸಿದ್ದಾರೆ.

ಡಾ.ರಝಾಕ್ ಉಸ್ತಾದ್ ನೇತೃತ್ವದಲ್ಲಿ ಪತ್ರಿಕಾಗೋಷ್ಠಿ

2018ರಿಂದ ಇಲ್ಲಿಯವರೆಗೂ ಕೇವಲ 3 ಸಾಮಾನ್ಯಸಭೆಗಳು ಮಾತ್ರ ನಡೆದಿವೆ. ಅದು ಸಹ ಕ್ರಿಯಾಯೋಜನೆಗೆ ಅನುಮೋದನೆ ಪಡೆಯುವ ಕಾರಣಕ್ಕಾಗಿ ಮಾತ್ರ ಮಾಡಿದ್ದಾರೆ ಅಷ್ಟೇ. ಇದು ಕೇವಲ ರಾಯಚೂರು ಜಿಲ್ಲಾ ಪಂಚಾಯ್ತಿಯ ವಿಷಯ ಮಾತ್ರವಲ್ಲ. ರಾಜ್ಯದ ಅರ್ಧಕ್ಕರ್ಧ ಜಿಲ್ಲಾ ಪಂಚಾಯ್ತಿಗಳು, ತಾಲ್ಲೂಕು, ಗ್ರಾಮಪಂಚಾಯ್ತಿಗಳು ಹೀಗೆಯೇ ಕೆಲಸ ಮಾಡುತ್ತಿವೆ. ಹಾಗಾಗಿ ರಾಯಚೂರು ಜಿಲ್ಲಾ ಪಂಚಾಯ್ತಿಯನ್ನು ವಿಸರ್ಜನೆ ಮಾಡಿದರೆ ಅದು ಇಡೀ ರಾಜ್ಯಕ್ಕೆ ಪಾಠವಾಗುತ್ತದೆ. ಸರ್ಕಾರ ಜಿಲ್ಲಾ ಪಂಚಾಯತ್ ಸದಸ್ಯರ ಮೇಲೆ ಕ್ರಮ ಜರುಗಿಸಬಹುದು ಎಂಬುದಾದರೂ ಜನರ ಅರಿವಿಗೆ ಬರಲಿ ಎಂಬುದು ಅವರ ಆಶಯ.

ಪ್ರತಿಪಕ್ಷ ಕಾಂಗ್ರೆಸ್ ಏನು ಮಾಡುತ್ತಿದೆ?
ರಾಯಚೂರಿನಲ್ಲಿ 3 ಕಾಂಗ್ರೆಸ್ ಶಾಸಕರು, ಇಬ್ಬರು ಎಂಎಲ್‌ಸಿಗಳು ಇದ್ದಾರೆ. ಆದರೆ ಜಿ.ಪಂನ ವಿರೋಧಪಕ್ಷವಾಗಿ ಅವರ್‍ಯಾರು ಸಹ ಜಿಲ್ಲಾ ಪಂಚಾಯತ್‌ನ ಈ ನಿರ್ಲಕ್ಷ್ಯದ ಕುರಿತು ಮಾತನಾಡಿಲ್ಲ. ಏಕೆಂದರೆ ಜಿಲ್ಲೆಯ ಅಭಿವೃದ್ಧಿ ಕುರಿತು ಅವರಿಗೂ ಕಾಳಜಿಯಿಲ್ಲ. ಬಹುತೇಕ ಜಿಲ್ಲಾ ಪಂಚಾಯ್ತಿಗಳು ಈ ರೀತಿ ಕೆಲಸ ಮಾಡುತ್ತಿಲ್ಲ. ಜಿ.ಪಂ ಸದಸ್ಯರು ಅವರ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿದ್ದಾರೆ. ಇನ್ನು ಹಲವು ಶಾಸಕರಿಗೆ ಜಿಲ್ಲಾ ಪಂಚಾಯ್ತಿಗಳು ಇರುವುದು ಬೇಕಿಲ್ಲ. ಏಕೆಂದರೆ ಜಿ.ಪಂ ಸದಸ್ಯರು ತಮಗೆ ಸರಿಸಮಾನವಾಗಿ ಕೂಡುತ್ತಾರೆ ಎಂಬ ಅಹಂ ಕೆಲಸ ಮಾಡುತ್ತದೆ.

ಜಿ.ಪಂ ಸದಸ್ಯರ ವಾದ
ನಮಗೆ ಪ್ರತ್ಯೇಕ ಅನುದಾನ ಇಲ್ಲ ಅಂದಮೇಲೆ ನಾವು ಸಭೆ ಸೇರಿ ಏನು ಪ್ರಯೋಜನ? ಶಾಸಕರಿಗೆ ವಾರ್ಷಿಕ 2 ಕೋಟಿ ವಿಶೇಷ ಅನುದಾನವಿರುತ್ತದೆ. ಇನ್ನು ಸಂಸತ್ ಸದಸ್ಯರಿಗೆ 5 ಕೋಟಿ ರೂ ಇರುತ್ತದೆ. ಈ ರೀತಿಯಾಗಿ ನಮಗೆ ಹೆಚ್ಚಿನ ಅನುದಾನ ಇಲ್ಲ ಎನ್ನುವುದು ಜಿ.ಪಂ ಸದಸ್ಯರ ತಕರಾರು. ಕೇವಲ 5 ಲಕ್ಷ ಹಣ ಬಂದರೆ ನಮ್ಮ ವ್ಯಾಪ್ತಿಯಲ್ಲಿ 20ಕ್ಕೂ ಹೆಚ್ಚು ಹಳ್ಳಿಗಳಿರುತ್ತವೆ. ಅದರಿಂದ ನಾವು ಏನು ಮಾಡಲು ಸಾಧ್ಯ ಎಂದು ಪ್ರಶ್ನಿಸುತ್ತಾರೆ.

ಆದರೆ ಕ್ರಿಯಾಯೋಜನೆ ತಯಾರು ಮಾಡುವಾಗ ನಮ್ಮ ರಾಯಚೂರು ಜಿ.ಪಂ.ಗೆ 300ಕೋಟಿ ರೂ ಅನುದಾನವಿದೆ. ಇದು ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸೇರಿ ಎಲ್ಲಾ ಇಲಾಖೆಗಳಿಗೆ ಸಂಬಂಧಿಸಿರುತ್ತದೆ. ಆದರೆ ಈ ಅನುದಾನ ಜಿ.ಪಂ ಸದಸ್ಯರಿಗೆ ಬೇಕಿಲ್ಲ. ಏಕೆಂದರೆ ಅವರ ಕೈಗೆ ಹಣ ಬರುವಂತಹ ಅನುದಾನಗಳು ಅವರಿಗೆ ಬೇಕು, ಆಗ ಮಾತ್ರ ದುಡ್ಡು ನುಂಗಲು ಸಾಧ್ಯ ಎನ್ನುವ ದುರಾಲೋಚನೆ ಅವರದು. ಈ ಮೇಲಿನ ಅನುದಾನ ಬಳಸಿ ತಮ್ಮ ಕ್ಷೇತ್ರವನ್ನು ಅಭಿವೃದ್ಧಿ ಮಾಡಲು, ಜನರ ಹಿತ ಕಾಯಲು ಅವರಿಗೆ ಮನಸ್ಸಿಲ್ಲ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ ಎನ್ನುತ್ತಾರೆ ಡಾ. ರಝಾಕ್ ಉಸ್ತಾದ್‌ರವರು.

ಈ ಮೊದಲೇ ಹೇಳಿದಂತೆ ಇದು ಕೇವಲ ರಾಯಚೂರು ಜಿ.ಪಂನ ಲೋಪವಲ್ಲ. ಇದು ಇಡೀ ರಾಜ್ಯದ ಹಲವು ಜಿಲ್ಲೆಗಳ ಶೋಚನೀಯ ಪರಿಸ್ಥಿತಿಯಾಗಿದೆ. ಜಿ.ಪಂ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಾಗ ಎಲ್ಲಾ ಸದಸ್ಯರು ಹಾಜರಿರುತ್ತಾರೆ. ಅದೇನೂ ಉತ್ಸಾಹ ತೋರಿಸುತ್ತಾರೆ. ಆದರೆ ಒಮ್ಮೆ ಆಯ್ಕೆಯಾದಮೇಲೆ ಮುಗೀತು, ಇತ್ತ ತಲೆಹಾಕುವುದಿಲ್ಲ. ಜಿ.ಪಂ ಅಧ್ಯಕ್ಷರಿಗೆ ಕ್ಯಾಬಿನೆಟ್ ಸಚಿವ ಸ್ಥಾನಮಾನವಿದೆ. ಸಾಕಷ್ಟು ಅಧಿಕಾರವಿದೆ. ಆದರೂ ಅವರು ಕೆಲಸ ಮಾಡುತ್ತಿಲ್ಲ ಎಂದರೆ ಅವರು ಆ ಸ್ಥಾನದಲ್ಲಿ ಏಕಿರಬೇಕು ಅಲ್ಲವೇ? ಇದು ರಾಯಚೂರಿನ ವರದಿ. ನೀವು ನಿಮ್ಮ ಜಿ.ಪಂ.ಗಳು ಸರಿಯಾಗಿ ಕೆಲಸ ನಿರ್ವಹಿಸುತ್ತಿವೆಯೇ ಎಂದು ಪರಿಶೀಲಿಸುತ್ತೀರಿ ಅಲ್ಲವೇ?

– ಮುತ್ತುರಾಜು


ಇದನ್ನೂ ಓದಿ: ಗಾಂಧಿ ಪ್ರತಿಮೆ ಇರುವ ಪ್ರದೇಶ ಧಾರ್ಮಿಕ ಸ್ಥಳವಲ್ಲ: ಕರ್ನಾಟಕ ಹೈಕೋರ್ಟ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...