Homeಮುಖಪುಟಪಾಸ್ ಪರ್ಮಿಷನ್ ಐಲಾಟ - ವಲಸೆ ಕಾರ್ಮಿಕರ ಗೋಳಾಟ: ತನ್ನ ಜನರನ್ನು ತನ್ನ ನೆಲದಲ್ಲೇ...

ಪಾಸ್ ಪರ್ಮಿಷನ್ ಐಲಾಟ – ವಲಸೆ ಕಾರ್ಮಿಕರ ಗೋಳಾಟ: ತನ್ನ ಜನರನ್ನು ತನ್ನ ನೆಲದಲ್ಲೇ ಪರದೇಶಿಗಳನ್ನಾಗಿಸಿದ ಸರ್ಕಾರ

- Advertisement -
- Advertisement -

ಕೊರೊನಾ ಸಂಕಷ್ಟ ನಿಭಾಯಿಸಲು ಹೆಣಗಾಡುತ್ತಿರುವ ಸರ್ಕಾರ ಪ್ರಜ್ಞಾಪೂರ್ವಕವಾಗಿ ಈ ದೇಶದ ಸಾಮಾನ್ಯ ಜನರನ್ನು ಮರೆತು ಉಳ್ಳವರ ಹಿತ ಕಾಯಲು ಟೊಂಕ ಕಟ್ಟಿನಿಂತಿರುವುದು ಜಗಜ್ಜಾಹೀರಾಗಿದೆ. ಈ ದೇಶದ ಕಾನೂನು -ಕಟ್ಟುಪಾಡುಗಳು ಎಂತಹುದ್ದದೇ ಸಂಕಷ್ಟದ ಕಾಲದಲ್ಲೂ ಬಡವರ, ಕೂಲಿ ಕಾರ್ಮಿಕರ, ದುಡಿಯುವ ವರ್ಗಗಳ ವಿರುದ್ಧವೇ ಚಲಾವಣೆಯಾಗುತ್ತಿರುವುದಕ್ಕೆ ಪ್ರತಿದಿನವೂ ಉದಾಹರಣೆಗಳು ಕಾಣ ಸಿಗುತ್ತಿವೆ.

ವಿದೇಶಿದಲ್ಲಿನ ಸುಮಾರು ನಾಲ್ಕು ಲಕ್ಷ ಭಾರತೀಯರನ್ನು ಭಾರತಕ್ಕೆ ಕರೆತರಲು ರೆಡ್ ಕಾರ್ಪೇಟ್ ಹಾಸಿರುವ ಕೇಂದ್ರ ಸರ್ಕಾರ ದೇಶದೊಳಗೆ ತಮ್ಮ ತಮ್ಮ ಊರುಗಳಿಗೆ ತಲುಪಲಾಗದೆ ಅನ್ನ, ನೀರು, ನೆಲೆ ಕಳೆದುಕೊಂಡು ಪರಿತಪಿಸುತ್ತಿರುವ ಲಕ್ಷಾಂತರ ಜನರ ಗೋಳಿಗೆ ಕಿವುಡಾಗಿ ವರ್ತಿಸುತ್ತಿದೆ. ವಿದೇಶದಲ್ಲಿನ ಭಾರತೀಯರನ್ನು ಸ್ವದೇಶಕ್ಕೆ ಕರೆತರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ‘ಐತಿಹಾಸಿಕ ಏರ್ ಲಿಪ್ಟ್,’ ‘ಆಪರೇಶನ್ ಏರ್ ಲಿಪ್ಟ್,’, ವಿದೇಶಿದಲ್ಲಿನ ಭಾರತೀಯರಿಗೆ ಮೋದಿ ಆಪತ್ಭಾಂಧವ ಎಂದು ಬಣ್ಣಿಸುತ್ತಿರುವ ಮಾಧ್ಯಮಗಳು ಭಾರತದಲ್ಲಿಯೇ ಹೊಟ್ಟೆ ಪಾಡಿಗಾಗಿ ಬೇರೆ ಬೇರೆ ಜಿಲ್ಲೆಗಳಿಗೆ, ರಾಜ್ಯಗಳಿಗೆ ಹೋಗಿ ಸಿಲುಕಿರುವ ದುಡಿಯವು ವರ್ಗಗಳನ್ನು ಕನಿಷ್ಟ ‘ರೋಡ್ ಲಿಪ್ಟ್ ‘ ಮೂಲಕ ತಮ್ಮ ತಮ್ಮ ಊರು, ಹಳ್ಳಿ, ಪಟ್ಟಣಗಳಿಗೆ ತಲುಪಿಸಲಾಗದ ಸರ್ಕಾರದ ಹೊಣೆಗೇಡಿತನವನ್ನು ಮರೆಮಾಚುತ್ತಿವೆ.

ಇನ್ನೂ ಕರ್ನಾಟಕ ರಾಜ್ಯದಲ್ಲಿ ಬೆಂಗಳೂರಿನಿಂದ ತಮ್ಮ ತಮ್ಮ ಊರುಗಳಿಗೆ ಹೊರಟ ಶ್ರಮಿಕರಿಂದ ಬಸ್‌ಚಾರ್ಜ್ ವಸೂಲಿಗಿಳಿದ ರಾಜ್ಯ ಸರ್ಕಾರ ತನ್ನ ವಿಕೃತ ನಿರ್ಧಾರವನ್ನು ಪ್ರತಿಪಕ್ಷಗಳ ಹೋರಾಟ, ಸಾಮಾಜಿಕ ಜಾಲತಾಣಗಳಲ್ಲಿನ ತೀವ್ರ ಟೀಕೆಗಳ ಕಾರಣ ಹಿಂಪಡೆಯುತ್ತದೆ. ಹಲವಾರು ದಿನಗಳಿಂದ ಅನ್ನ, ನೀರು, ನಿದ್ದೆಗಳಿಲ್ಲದೆ ಬಳಲಿದ್ದ ದುಡಿಯುವ ವರ್ಗಗಳಿಂದಲೂ ಟಿಕೆಟ್ ದರ ವಸೂಲಿಗಿಳಿದ ಸರ್ಕಾರದ ನಿರ್ಲಜ್ಜಗೇಡಿಗತನವನ್ನು ಖಂಡಿಸದ ಮಾಧ್ಯಮಗಳು ನಾಗರೀಕರ, ವಿಪಕ್ಷಗಳು ಮಾಡಿದ ಮಂಗಳಾರತಿಯಿಂದ ಸರ್ಕಾರ ಟಿಕೆಟ್ ದರ ವಸೂಲಿಯ ನಿರ್ಧಾರ ಹಿಂಪಡೆದದ್ದನ್ನು ‘ಕಷ್ಟಕ್ಕೆ ಕರಗಿದ ಸರ್ಕಾರ’ ಎಂದು ತುತ್ತೂರಿ ಊದುತ್ತವೆ ಎಂದರೆ ಇಂತಹ ಮಾಧ್ಯಮಗಳ ಸಂವೇದನೆ ಸತ್ತು ಹೋಗಿರುವುದು ನಿಚ್ಚಳವಾಗಿ ಗೋಚರಿಸುತ್ತದೆ.

ಇಂದಿಗೂ ವಲಸೆಯ ಪರ್ವ ಮುಗಿಯುತ್ತಿಲ್ಲ. ಕೂಲಿ, ನಾಲಿಗೆ ವಲಸೆ ಹೋಗಿರುವ ದುಡಿಯುವ ವರ್ಗಗಳು ತಮ್ಮ ತಮ್ಮ ಊರುಗಳಿಗೆ ತಲುಪಲಾಗದೆ ಪರಿತಪಿಸುತ್ತಿವೆ. ರಾಜ್ಯದಲ್ಲಿ ಕಳೆದರೆಡು ದಿನಗಳಿಂದ ಪಾಸ್ ವ್ಯವಸ್ಥೆ ಮೂಲಕ ಮತ್ತು ಬೆಂಗಳೂರಿನಿಂದ ತಮ್ಮ ತಮ್ಮ ಊರುಗಳಿಗೆ ತಲುಪಲು ಅವಕಾಶ ಕೊಡಲಾಗಿದೆ ಸರಿಯಷ್ಟೆ. ಆದರೆ ಪಾಸ್ ಪಡೆದುಕೊಳ್ಳಲು ಸಾಧ್ಯವಾಗದ ಸ್ಥಿತಿಯಲ್ಲಿರುವ ಬೆಂಗಳೂರು ಸೇರಿದಂತೆ ಅನೇಕ ಇತರೆ ಜಿಲ್ಲೆಗಳಲ್ಲಿನ ವಲಸೆ ಕಾರ್ಮಿಕರು ತಮ್ಮ ಕುಟುಂಬಗಳೊಂದಿಗೆ ತಮ್ಮ ಊರು ಮನೆ ಸೇರಿಕೊಳ್ಳಲು ನಡೆದುಕೊಂಡು ಅಥವಾ ದ್ವಿಚಕ್ರವಾಹನಗಳಲ್ಲಿ ಹಳ್ಳಿ, ಹಳ್ಳ, ಕೊಳ್ಳ, ಕಾಡು ಮೇಡುಗಳ ಬಳಸು ದಾರಿಯಲ್ಲಿ ಬಂದರೂ ಅವರು ತಮ್ಮ ತಮ್ಮ ಜಿಲ್ಲೆಗಳ ಒಳ ಪ್ರವೇಶಿಸಲು ಚೆಕ್ ಪೋಸ್ಟ್ ಗಳಲ್ಲಿ ಪಾಸ್ ಇಲ್ಲದ ನೆಪದಿಂದ ಅವರನ್ನು ಒಳಬಿಟ್ಟುಕೊಳ್ಳಲಾಗುತ್ತಿಲ್ಲ. ಹಾಗೊಮ್ಮೆ ಒಳಬಂದರೂ ಅವರನ್ನು ನುಸುಳುಕೋರರಂತೆ ಬಂಧಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿಗಳು, ಪೊಲೀಸರು ಇಂತಹ ವಲಸಿಗ ರೊಂದಿಗೆ ಅತ್ಯಂತ ಅಮಾನವೀಯವಾಗಿ ವರ್ತಿಸುತ್ತಿದ್ದಾರೆ. ನೆಲೆ. ಅನ್ನ, ನೀರು ಇಲ್ಲದೆ ಮೊದಲೇ ಬಳಲಿ ಬೆಂಡಾಗಿರುವ ಈ ವಲಸಿಗ ಕುಟುಂಬಗಳು ಈಗ ತಮ್ಮದೇ ನೆಲದಲ್ಲಿ ಪರಕೀಯರಾಗಿ ತಿರಸ್ಕರಿಸಲ್ಪಡುತ್ತಿವೆ. ಅತ್ತ ಬಂದ ಜಿಲ್ಲೆಗೂ ಹೋಗಲಾರದೆ. ಇತ್ತ ತಮ್ಮ ಊರಿಗೂ ಪ್ರವೇಶ ಸಿಗದೆ ಸಾವಿರಾರು ದುಡಿಯುವ ಜನಸಮುದಾಯ ಮಕ್ಕಳು,ಮರಿಗಳನ್ನು ಕಟ್ಟಿಕೊಂಡು ಅಲೆದಾಡುವತ್ತಾ ನಿಷ್ಕಾರುಣ್ಯವಾಗಿ ವರ್ತಿಸುತ್ತಿರುವ ಆಡಳಿತ ವ್ಯವಸ್ಥೆಯ ಕಾಲು ಕಟ್ಟಿಕೊಟ್ಟು ರೋಧಿಸುತ್ತಿವೆ. ಹಳ್ಳಿಗಳಲ್ಲೂ ಕೂಡ ಅಪರಿಚಿತರನ್ನು ಒಳ ಬಿಟ್ಟುಕೊಳ್ಳದೆ ಅಮಾನವೀಯವಾಗಿ ನಡೆದುಕೊಳ್ಳುತ್ತಿರುವುದು ವಲಸಿಗರ ಪಾಡು ಹೇಳತೀರದಾಗಿದೆ.

ಕೇವಲ ಪಾಸ್ ಮುಖ್ಯವಾಗಿಟ್ಟುಕೊಂಡು ವಲಸಿಗರನ್ನು ಅವರ ಊರುಗಳ ಒಳಬಿಟ್ಟುಕೊಳ್ಳದ ಕೆಲಸವನ್ನು ಜಿಲ್ಲಾಡಳಿತಗಳೇ ಮಾಡುತ್ತಿದ್ದು, ಬಹಳಷ್ಟು ಕಡೆ ಇಂತಹ ವಲಸಿಗರ ಮೇಲೆ ಪೊಲೀಸರು ಹಲ್ಲೆ ನಡೆಸಿ ಹೊರ ತಳ್ಳುವ ಘಟನೆಗಳು ನಡೆದಿವೆ. ಹೀಗೆ ವಲಸೆ ಬರುವವರನ್ನು ಆರೋಗ್ಯ ತಪಾಸಣೆ ಮಾಡಿ ಅಗತ್ಯ ಬಿದ್ದಲ್ಲಿ ಕ್ವಾರಂಟೈನ್ ಗೆ ಒಳಪಡಿಸುವ ಮೂಲಕ ಅಂತಹ ಈ ವಲಸಿಗ ಕುಟುಂಬಗಳಿಗೆ ಕನಿಷ್ಟ ಅನ್ನ, ಆಹಾರ, ನೆಲೆಯನ್ನು ಒದಗಿಸಬಹುದಾಗಿದ್ದರೂ ಆಡಳಿತ ವ್ಯವಸ್ಥೆಗಳು ಇದಾವುದನ್ನು ಮಾಡದೆ ವಲಸಿಗರನ್ನು ನಗರದ ಒಳಬಿಟ್ಟುಕೊಳ್ಳದೆ ಓಡಿಸುತ್ತಿವೆ. ಕೂಲಿ ಕುಟುಂಬಗಳ ಬದುಕು ಈಗ ‘ಅತ್ತ ದರಿ ಇತ್ತ ಪುಲಿ’ ಎಂಬಂತಾಗಿದೆ. ಕಾಯ್ದೆ-ಕಾನೂನುಗಳ ಉದ್ದೇಶ ಅಂತಿಮವಾಗಿ ಆ ನೆಲದ ಜನರ ಕಲ್ಯಾಣವೇ ಆಗಿರುತ್ತದೆ. ಆದರೆ ಜನರ ಹಿತ ಕಾಯದ ಕಾನೂನು ಕಟ್ಟಳೆಗಳು ಇರುವುದಾದರೂ ಏತಕ್ಕೆ ?, ಅನೇಕ ಸಂದರ್ಭಗಳಲ್ಲಿ ಕಾಯ್ದೆ-ಕಾನೂನುಗಳು ಜನರಿಗೆ ಮಾರಕವಾದಾಗಲೇ ದಂಗೆ, ಕ್ರಾಂತಿಗಳು ಭುಗಿಲೇಳುತ್ತವೆ. ಅಂತಹ ಕಾನೂನುಗಳನ್ನು ಮುರಿದು ಮುನ್ನುಗ್ಗುವ ಸಂದರ್ಭಗಳು ಸೃಷ್ಟಿಯಾಗುತ್ತವೆ. ಇದನ್ನು ಆಳುವವರು ಅರ್ಥಮಾಡಿಕೊಳ್ಳಬೇಕು.

ಮೊನ್ನೆ ಬೆಂಗಳೂರಿನಲ್ಲಿ ಬಿಹಾರಿ ಕಾರ್ಮಿಕರ ಸಿಟ್ಟು ಸ್ಪೋಟಗೊಂಡು ಪೊಲೀಸ್ ಅಧಿಕಾರಿಯೊಬ್ಬನ ತಲೆ ಒಡೆಯುವಂತಾಗಿದೆ. ದುಡಿಯುವ ವರ್ಗದ ಸಿಟ್ಟು ರಟ್ಟೆಗೆ ಬಂದಾಗ ಇಂತಹ ಘಟನೆಗಳು ನಡೆಯುತ್ತವೆ. ಇದು ಕಾನೂನು ಭಂಗವಲ್ಲ. ಆಡಳಿತ ವ್ಯವಸ್ಥೆಯ ವೈಫಲ್ಯಕ್ಕೆ ತೋರಿದ ಪ್ರತಿರೋಧವಾಗುತ್ತದೆ. ಗುಜರಾತ್ ನ ಸೂರತ್ ನಲ್ಲಿ ವಲಸೆ ಕಾರ್ಮಿಕರ ಗುಂಪಿನ ದಂಗೆ ಕೂಡ ಇದೆ ಆಗಿದೆ. ಇದನ್ನು ಆಳುವವರು ಅರ್ಥಮಾಡಿಕೊಳ್ಳಬೇಕು. ವಿದೇಶದಲ್ಲಿನ ಭಾರತೀಯರನ್ನು ಕರೆತರಲು ಹಾತೊರೆವ ಕೇಂದ್ರ ಸರ್ಕಾರ ಭಾರತದೊಳಗೆ ಇರುವ ವಲಸೆ ಕಾರ್ಮಿಕರನ್ನು ಅವರವರ ನೆಲೆಗೆ ತಲುಪಿಸಲು ಅಕ್ಷಮ್ಯ ನಿರ್ಲಕ್ಷ್ಯವನ್ನು ತೋರುತ್ತಿದೆ.

ಕೊರೊನಾ ಸೋಂಕು ವಿದೇಶದಿಂದಲೆ ಭಾರತಕ್ಕೆ ನುಸುಳಿದ್ದು, ಶ್ರೀಮಂತರು ತಂದ ಕಾಯಿಲೆಗೆ ಭಾರತದ ಬಡಜನಸಮುದಾಯ ಬರ್ಬರವಾಗಿ ನರಳುತ್ತಿದೆ. ಲಾಕ್ ಡೌನ್ ಘೋಷಣೆಯಾದ ಬೆನ್ನಲ್ಲೇ ರಸ್ತೆ ಹಿಡಿದು ಹೊರಟ ಈ ದೇಶದ ಆರ್ಥಿಕ ಅಭಿವೃದ್ದಿಗೆ ಬೆನ್ನೆಲುಬಾದ ದುಡಿಯುವ ವರ್ಗಗಳ ಧಾರುಣವಾದ ಮಹಾವಲಸೆ ಸರ್ಕಾರಕ್ಕಾಗಲಿ , ಮಾಧ್ಯಮಗಳಿಗಾಗಲಿ ಅದೊಂದು ಈ ದೇಶದ, ಈ ನಾಡಿನ ಜನಸಮುದಾಯದ ಗೋಳು ಎಂದು ಅನಿಸಲೇ ಇಲ್ಲ. ಇಂತಹ ಹೊತ್ತಿನಲ್ಲಿ ಈ ಬಡಸಮುದಾಯವನ್ನು , ದುಡಿಯವ ವರ್ಗದ ಹಿತ ಕಾಯಬೇಕಾದ ಸರ್ಕಾರ ಭಾರತದ ಬಡಜನರ ನಿರ್ನಾಮಕ್ಕೆ ವಿದೇಶದಿಂದ ಸೋಂಕು ಆಮದು ಮಾಡಿಕೊಳ್ಳಲು ಸಡಗರದಲ್ಲಿದೆ.

ಕರ್ನಾಟಕದ ಮುಖ್ಯಮಂತ್ರಿ ಯಡಿಯೂರಪ್ಪನವರು ಬೆಂಗಳೂರು ವಿಮಾನನಿಲ್ದಾಣದಲ್ಲಿ ವಿದೇಶಿಗಳಿಂದ ಬರುವ ಭಾರತೀಯರನ್ನು ಸ್ವಾಗತಿಸಿ ಐಷಾರಾಮಿ ಹೊಟೇಲ್ , ಬಂಗ್ಲೆಗಳಿಗೆ ಬೀಳ್ಕೊಡುವ ಮುಂಚೆ ಪಾಸ್, ಪರ‍್ಮಿಷನ್, ಲೊಟ್ಟೆ-ಲೊಸಗು ಎಂಬ ನಿರ್ಬಂಧಗಳನ್ನು ತೆಗೆದು ತಮ್ಮದೇ ನೆಲದ ವಲಸೆ ಕಾರ್ಮಿಕ ಸಮುದಾಯವನ್ನು ಅವರವರ ಊರುಮನೆಗಳಿಗೆ ತಲುಪಿಸಿ ಅನ್ನ,ನೀರು ಕೊಡಬೇಕಾಗಿದೆ. ಇದು ಒಂದು ನಾಗರೀಕ ಸರ್ಕಾರವೆನಿಸಿಕೊಳ್ಳಲು ಘನತೆಯ ಮಾರ್ಗವಾಗಿರುತ್ತದೆ.

(ಲೇಖಕರು ಪತ್ರಕರ್ತರು ಮತ್ತು ಬರಹಗಾರರು. ಅಭಿಪ್ರಾಯಗಳು ವಯಕ್ತಿಕವಾದವು)


ಇದನ್ನೂ ಓದಿ: ಬಿಲ್ಡರ್‌ ಲಾಬಿಗೆ ಮಣಿದು ರೈಲುಸೇವೆ ರದ್ದುಗೊಳಿಸಿದ ರಾಜ್ಯಸರ್ಕಾರ: ಸಂಕಷ್ಟದಲ್ಲಿ ಕಾರ್ಮಿಕರು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...