Homeಮುಖಪುಟದಾದಾ ಸಾಹೇಬ್‌ ಫಾಲ್ಕೆ ಪ್ರಶಸ್ತಿಯನ್ನು ತಮ್ಮ ‘ಗುರು’ ಬಾಲಚಂದರ್‌ಗೆ ಅರ್ಪಿಸಿದ ಸೂಪರ್‌ಸ್ಟಾರ್‌

ದಾದಾ ಸಾಹೇಬ್‌ ಫಾಲ್ಕೆ ಪ್ರಶಸ್ತಿಯನ್ನು ತಮ್ಮ ‘ಗುರು’ ಬಾಲಚಂದರ್‌ಗೆ ಅರ್ಪಿಸಿದ ಸೂಪರ್‌ಸ್ಟಾರ್‌

ನಾನು ಬಸ್‌ ಕಂಡಕ್ಟರ್‌ ಆಗಿದ್ದಾಗ ನನ್ನಲ್ಲಿರುವ ನಟನಾ ಪ್ರತಿಭೆಯನ್ನು ಗುರುತಿಸಿ ಸಿನಿಮಾ ಸೇರಲು ಪ್ರೋತ್ಸಾಹಿಸಿದವರು ಕರ್ನಾಟಕದ ನನ್ನ ಸ್ನೇಹಿತ, ನನ್ನ ಸಹೋದ್ಯೋಗಿ ರಾಜ್‌ ಬಹದ್ದೂರ್‌...

- Advertisement -
- Advertisement -

’ಈ ಪ್ರಶಸ್ತಿಯನ್ನು ನಾನು ನನ್ನ ಮೆಂಟರ್‌, ಗುರು ಕೆ. ಬಾಲಚಂದರ್‌ ಅವರಿಗೆ ಅರ್ಪಿಸುತ್ತೇನೆ. ನಾನು ಅವರನ್ನು ಬಹಳ ಕೃತಜ್ಞತೆಯಿಂದ ಸ್ಮರಿಸುತ್ತೇನೆ. ನನ್ನ ತಂದೆಯಂತಿರುವ ನನ್ನ ಸಹೋದರ ಸತ್ಯನಾರಾಯಣ ರಾವ್‌ ಗಾಯಕ್ವಾಡ್‌ ಅವರು ನನಗೆ ಮೌಲ್ಯಗಳನ್ನು ಕಲಿಸುವ ಮತ್ತು ಆಧ್ಯಾತ್ಮಿಕತೆಯನ್ನು ಪರಿಚಯಿಸುವ ಮೂಲಕ ನನ್ನನ್ನು ಬೆಳೆಸಿದರು’ ಎಂದು ದಾದಾ ಸಾಹೇಬ್‌ ಪ್ರಶಸ್ತಿ ಸ್ವೀಕರಿಸಿದ ರಜನಿಕಾಂತ್‌ ಅವರು ತನ್ನ ಜೀವನದಲ್ಲಿ ಪ್ರಮುಖ ಪಾತ್ರವಹಿಸಿದವರೆಲ್ಲರಿಗೂ ಕೃತಜ್ಞತೆಗಳನ್ನು ತಿಳಿಸಿದರು.

ದೆಹಲಿಯ ವಿಜ್ಞಾನ ಭವನದಲ್ಲಿ ನಡೆದ 67ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತರನ್ನು ಗೌರವಿಸುವ ಸಮಾರಂಭದಲ್ಲಿ ಸೂಪರ್‌ ಸ್ಟಾರ್‌ ರಜನಿಕಾಂತ್‌ ಅವರಿಗೆ ದಾದಾಸಾಹೇಬ್‌ ಫಾಲ್ಕೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರಿಂದ ಗೌರವ ಸ್ವೀಕರಿಸಲು ವೇದಿಕೆಯೆಡೆಗೆ ಹೆಜ್ಜೆಹಾಕಿದ ಸೂಪರ್‌ಸ್ಟಾರ್‌ಗೆ ಎಲ್ಲರೂ ಗೌರವ ಸೂಚಿಸಿ ಎದ್ದುನಿಂತು ಚಪ್ಪಾಳೆಯ ಮೂಲಕ ಅಭಿನಂದನೆ ಸಲ್ಲಿಸಿದರು. ಪ್ರಶಸ್ತಿ ಸ್ವೀಕರಿಸುವ ಮೊದಲು ಮೋಹನ್‌ಲಾಲ್‌, ಖುಷ್ಬು, ಅಮಿತಾಬ್‌ ಬಚ್ಚನ್‌ ಮತ್ತು ಸಂಗೀತ ನಿರ್ದೇಶಕ ಎ.ಆರ್‌. ರೆಹಮಾನ್‌ರ ವಿಶೇಷ ಸಂದೇಶಗಳನ್ನು ಹೊಂದಿದ್ದ ವೀಡಿಯೋವನ್ನು ಪ್ಲೇ ಮಾಡಲಾಯಿತು. ಈ ಸಮಾರಂಭದಲ್ಲಿ ರಜನಿಕಾಂತ್‌ ಅವರ ಪತ್ನಿ ಲತಾ ಮತ್ತು ಅಳಿಯ ಧನುಷ್‌ ಕಾರ್ಯಕ್ರಮದಲ್ಲಿ ಹಾಜರಿದ್ದರು. ಅಸುರನ್‌ ಸಿನಿಮಾದ ನಟೆನೆಗಾಗಿ ಧನುಷ್‌ ಅವರು ಅತ್ಯುತ್ತಮ ನಟ ವಿಭಾಗದಲ್ಲಿ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದರು.

ಸಿನಿಮಾದ ಬಗ್ಗೆ ಅವರಿಗಿದ್ದ ಪ್ರೇಮ, ಚಿತ್ರರಂಗ ಪರಿಚಯವಾದ ಮೊದಲ ದಿನಗಳ ಬಗ್ಗೆ ಮಾತನಾಡಿದ್ದ ರಜಿನಿಕಾಂತ್, ‘ಕರ್ನಾಟಕದ ನನ್ನ ಸ್ನೇಹಿತ, ನನ್ನ ಸಹೋದ್ಯೋಗಿ ರಾಜ್‌ ಬಹದ್ದೂರ್‌, ನಾನು ಬಸ್‌ ಕಂಡಕ್ಟರ್‌ ಆಗಿದ್ದಾಗ ನನ್ನಲ್ಲಿರುವ ನಟನಾ ಪ್ರತಿಭೆಯನ್ನು ಗುರುತಿಸಿ ಸಿನಿಮಾ ಸೇರಲು ಪ್ರೋತ್ಸಾಹಿಸಿದವರು. ನನ್ನೊಂದಿಗೆ ಕೆಲಸ ಮಾಡಿದ ನನ್ನ ಎಲ್ಲಾ ನಿರ್ಮಾಪಕರು, ನಿರ್ದೇಶಕರು, ತಂತ್ರಜ್ಞರು, ಸಹ ಕಲಾವಿದರು, ವಿತರಕರು, ನಿರ್ವಾಹಕರು, ಮಾಧ್ಯಮದವರು ಮತ್ತು ನನ್ನೆಲ್ಲಾ ಅಭಿಮಾನಿಗಳು ಹಾಗೂ ನನಗೆ ಜೀವ ನೀಡಿದ ತಮಿಳು ಜನರಿಗೆ ಧನ್ಯವಾದ ಹೇಳುತ್ತೇನೆ. ಜೈ ಹಿಂದ್‌!’  ಎಂದರು.

ರಜಿನಿಕಾಂತ್‌ ಅವರ ಪ್ರತಿಭೆಯನ್ನು ಪೋಷಿಸುವಲ್ಲಿ, ನಟನಾ ವೃತ್ತಿಯನ್ನು ಪ್ರೋತ್ಸಾಹಿಸುತ್ತಾ ಮತ್ತು  ಅವರನ್ನು ನಟನಾಗಿ ರೂಪಿಸಿದವರಲ್ಲಿ ಬಾಲಚಂದರ್‌ ಅವರದು ಬಹುದೊಡ್ಡ ಪಾತ್ರ. ರಜನಿಕಾಂತ್‌ ಅವರು ಅಪೂರ್ವ ರಾಗಂಗಲ್‌ ಚಿತ್ರದಲ್ಲಿ ಚಿಕ್ಕ ಪಾತ್ರ ನಿರ್ವಹಿಸುವ ಮೂಲಕ ಹಿರಿತೆರೆಗೆ ಪಾದಾರ್ಪಣೆ ಮಾಡಿದರು. 1975ರಿಂದ ರಜನಿಕಾಂತ್‌ ಭಾರತೀಯ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸುತ್ತಾ ಬಂದಿದ್ದಾರೆ. ಇದುವರೆಗೆ ತಮಿಳು ಸೇರಿದಂತೆ ಹಲವು ಭಾಷೆಗಳಲ್ಲಿ 160ಕ್ಕೂ ಹೆಚ್ಚು ಚಿತ್ರಗಳಲ್ಲಿ ಅವರು ನಟಿಸಿದ್ದಾರೆ. ತಮಿಳು ಭಾಷೆಯ ಇವರ ಸಿನಿಮಾಗಳು ಅಚ್ಚಳಿಯದಂತೆ ಉಳಿದಿವೆ.

ಭಾನುವಾರ ದೆಹಲಿಗೆ ತೆರಳುವ ಮುನ್ನ, ಪೋಯಸ್ ಗಾರ್ಡನ್‌ನಲ್ಲಿರುವ ತಮ್ಮ ನಿವಾಸದ ಹೊರಗೆ ಮಾಧ್ಯಮಗಳೊಂದಿಗೆ ಸಂವಾದ ನಡೆಸಿದ ಅವರು, ಈ ಗೌರವವನ್ನು ಕೆ. ಬಾಲಚಂದರ್ ಅವರೊಂದಿಗೆ ಆಚರಿಸಲು ಸಾಧ್ಯವಾಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದರು.

‘ಭಾರತೀಯ ಚಿತ್ರರಂಗದ ಅತ್ಯುನ್ನತ ಗೌರವವಾದ ದಾದಾಸಾಹೇಬ್‌ ಫಾಲ್ಕೆ ಪ್ರಶಸ್ತಿಯನ್ನು ಸ್ವೀಕರಿಸಲು ನನಗೆ ತುಂಬಾ ಸಂತೋಷವಾಗಿದೆ. ಈ ಸಮಯದಲ್ಲಿ ಕೆ. ಬಾಲಚಂದರ್‌ (ಕೆ.ಬಿ) ಸರ್‌ ನಮ್ಮೊಂದಿಗೆ ಇಲ್ಲದಿರುವುದಕ್ಕೆ ಬೇಸರವಾಗಿದೆ’. ಪ್ರಶಸ್ತಿ ಸ್ವೀಕರಿಸಿದ ನಂತರ ಈ ಬಗ್ಗೆ ಮಾತನಾಡುವುದಾಗಿಯೂ ತಿಳಿಸಿದ್ದರು.

ರಜನಿಕಾಂತ್‌ ನಟನೆಯ ಶಿವ ನಿರ್ದೇಶನದ ಅಣ್ಣಾತೆ ಸಿನಿಮಾವು ತೆರೆಗೆ ಬರಲು ಕಾಯುತ್ತಿದ್ದು, ನವೆಂಬರ್‌ 4 ರಂದು ಈ ಸಿನಿಮಾ ತೆರೆಗೆ ಬರಲಿದೆ.


ಇದನ್ನೂ ಓದಿ: 67ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ: ಧನುಷ್, ಮನೋಜ್ ಬಾಜಪೇಯಿ, ಕಂಗನಾ ರಣಾವತ್‌ಗೆ ಅತ್ಯುತ್ತಮ ನಟ,ನಟಿಯ ಗರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಗೆ ಸಂಸದ ಸಂಗಣ್ಣ ಕರಡಿ ರಾಜೀನಾಮೆ: ಕಾಂಗ್ರೆಸ್ ಸೇರ್ಪಡೆ ಸಾಧ್ಯತೆ

0
ಲೋಕಸಭೆ ಚುನಾವಣೆಯಲ್ಲಿ ಕೊಪ್ಪಳ ಕ್ಷೇತ್ರದ ಟಿಕೆಟ್‌ ಕೈತಪ್ಪಿದ ಹಿನ್ನೆಲೆ ಬಿಜೆಪಿ ವಿರುದ್ದ ಮುನಿಸಿಕೊಂಡಿದ್ದ ಹಾಲಿ ಸಂಸದ ಸಂಗಣ್ಣ ಕರಡಿ ಅವರು ತಮ್ಮ ಸಂಸದ ಸ್ಥಾನಕ್ಕೆ ಮತ್ತು ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ...