Homeಕರ್ನಾಟಕಬಿಜೆಪಿಯಲ್ಲೇ ಉಳಿಯಲು ರಾಮದಾಸ್ ನಿರ್ಧಾರ; ಭಾವನಾತ್ಮಕ ಭಾಷಣದಲ್ಲಿ ಹೇಳಿದ್ದೇನು?

ಬಿಜೆಪಿಯಲ್ಲೇ ಉಳಿಯಲು ರಾಮದಾಸ್ ನಿರ್ಧಾರ; ಭಾವನಾತ್ಮಕ ಭಾಷಣದಲ್ಲಿ ಹೇಳಿದ್ದೇನು?

- Advertisement -
- Advertisement -

ಮೈಸೂರಿನ ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಹಾಲಿ ಬಿಜೆಪಿ ಶಾಸಕ ಎಸ್.ಎ.ರಾಮದಾಸ್ ಅವರಿಗೆ ಟಿಕೆಟ್ ಕೈತಪ್ಪಿದ ಬೆನ್ನಲ್ಲೇ ಅವರು ಮಂಗಳವಾರ ಸಂಜೆ ಜನರೊಂದಿಗೆ ಸಭೆ ನಡೆಸಿದ್ದು ತಮ್ಮ ಮುಂದಿನ ನಡೆಯನ್ನು ಸ್ಪಷ್ಟಪಡಿಸಿದ್ದಾರೆ.

ಬಿಜೆಪಿ ಮುಖಂಡರ ಭೇಟಿಗೂ ನಿರಾಕರಿಸಿದ್ದ ರಾಮದಾಸ್ ಅವರು ಬಂಡಾಯ ಏಳುವ ಸೂಚನೆಗಳು ದೊರೆತ್ತಿದ್ದವು. ಆದರೆ ಅಂತಿಮವಾಗಿ ಪಕ್ಷದಲ್ಲೇ ಉಳಿಯಲು ನಿರ್ಧರಿಸಿದ್ದಾರೆ.

ಕ್ಷೇತ್ರದ ಜನರೊಂದಿಗೆ ಮಾತನಾಡಿದ ಅವರು, ತಾವು ನಡೆದುಬಂದ ರಾಜಕಾರಣವನ್ನು ಮೆಲುಕು ಹಾಕಿದರು. ಕ್ಷೇತ್ರದಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳನ್ನು ಉಲ್ಲೇಖಿಸಿದರು. “ನಾನು ಶಾಸಕನಾಗಿರಲಿ, ಇಲ್ಲದಿರಲಿ ನನ್ನ ಕಚೇರಿ ತೆರೆದಿರುತ್ತದೆ. ಕ್ಷೇತ್ರದ ಪ್ರತಿ ವಾರ್ಡ್‌ನ ಮನೆಗೂ ಭೇಟಿ ನೀಡಿ ಊಟ ಉಪಚಾರ ಮಾಡುತ್ತೇನೆ. ಕ್ಷೇತ್ರದಲ್ಲಿ ನಿರಂತರ ಸಂಪರ್ಕದಲ್ಲಿ ಇರುತ್ತೇನೆ” ಎಂದು ಘೋಷಿಸಿದ್ದಾರೆ.

“ಶಾಸಕನಾದ ನಾನು ಪ್ರತಿಯೊಂದು ಬೂತ್‌ನ ಅಧ್ಯಕ್ಷರ ಮನೆಗೆ ಬರುತ್ತೇನೆ. ನಿಮ್ಮ ಮನೆಯಲ್ಲೇ ಊಟ ಮಾಡುತ್ತೇನೆ. ನಿಮ್ಮ ಯೋಗಕ್ಷೇಮ ವಿಚಾರಿಸುತ್ತೇನೆ. ಕಾರ್ಯಕರ್ತರೇ ಆಸ್ತಿ. ನನ್ನನ್ನು ಅಣ್ಣನ ಸ್ಥಾನದಲ್ಲಿ ನೋಡುತ್ತಿದ್ದೀರಿ. ಕೊನೆಯುಸಿರು ಇರುವವರೆಗೂ ನಿಮ್ಮ ಕ್ಷೇಮವನ್ನು ವಿಚಾರಿಸುತ್ತೇನೆ. ಶಾಸಕರ ಕಚೇರಿ ಇದೆ. ನಾನು ಶಾಸಕನಾಗಿ ಇರುತ್ತೇನೋ ಬಿಡುತ್ತೇನೋ ಬೇರೆ ವಿಷಯ. ಆದರೆ ನನ್ನ ಕಚೇರಿ ಜನರ ಸೇವೆಗಾಗಿ ತೆರೆದಿರುತ್ತದೆ” ಎಂದಿದ್ದಾರೆ.

“ಶಾಸಕನಾಗಿ ಸೇವೆ ಮಾಡುವುದಕ್ಕಾಗಿ ಸರ್ವೇ ಮಾಡಿಸಿದೆ. ಜಾತಿ ಮತ ಎಲ್ಲವನ್ನೂ ಮೀರಿ ನನಗೆ ಬೆಂಬಲ ನೀಡಿದ್ದಾರೆ. ಚುನಾವಣೆಯಲ್ಲಿ ನಿಂತರೆ ಹನ್ನೊಂದರಿಂದ ಹನ್ನೆರಡು ಸಾವಿರ ಮತಗಳಲ್ಲಿ ಗೆಲ್ಲುತ್ತೇನೆ ಅಂತ ಸಮೀಕ್ಷೆಯಲ್ಲಿ ತಿಳಿದುಬಂದಿದೆ.

“ಮೋದಿಯವರು ಮಾಡಿದ ಪ್ರಶಂಸೆ ನನಗೆ ನೆನಪಿದೆ. ಪಕ್ಷ ಮುಖ್ಯನಾ? ನೋವು ಮುಖ್ಯನಾ ಎಂದು ಪ್ರಶ್ನೆ ಬರುತ್ತದೆ. ಜಗದೀಶ್‌ ಶೆಟ್ಟರು ನಮ್ಮ ಮುಂದೆ ಇದ್ದಾರೆ. ಅವರಿಗೆ ಅನಿಸಿದ ನಿರ್ಧಾರ ತೆಗೆದುಕೊಂಡಿದ್ದಾರೆ. ವೈಯಕ್ತಿಕ ವಿಷಯ ಮುಖ್ಯನಾ? ಪಕ್ಷದ ವಿಚಾರ ಮುಖ್ಯನಾ? ದೇಶವನ್ನು ಕಾಪಾಡುತ್ತಿರುವ ಮಹಾನ್ ನಾಯಕ ಮೋದಿಯವರು ಮುಖ್ಯನಾ? ಎಂಬ ತೊಳಲಾಟದಲ್ಲಿ ಇದ್ದೇನೆ. ಹನ್ನೊಂದು ಸಾವಿರ ಪ್ರಮುಖರು ನನ್ನನ್ನು ಮನೆಯ ಮಗ ಎಂದು ಸ್ವೀಕರಿಸಿದ್ದೀರಿ. ಕಠಿಣವಾದ ಸಂದರ್ಭದಲ್ಲಿ ಯಾವ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂಬುದು ಮುಖ್ಯವಾಗುತ್ತದೆ” ಎಂದು ತಮ್ಮ ಭಾಷಣದಲ್ಲಿ ಹೇಳಿದರು.

“ನನ್ನ ನಿರ್ಧಾರ ನಿಮಗೆ ಕೆಟ್ಟದ್ದು ಅನಿಸಿದರೂ ಅದು ಒಳ್ಳೆಯ ನಿರ್ಧಾರವೆಂದು ನಾನು ಭಾವಿಸಿರುವೆ. ಅದನ್ನು ದಯವಿಟ್ಟು ಸ್ವೀಕರಿಸಬೇಕು. ಆರ್‌ಎಸ್‌ಎಸ್‌ನ ಸ್ವಯಂಸೇವಕನಾದ ನಾನು ಹೇಗೆ ಪಕ್ಷವನ್ನು ಕಟ್ಟಿ ಬೆಳೆಸಿದೆನೋ ಹಾಗೆಯೇ ನಡೆದುಕೊಂಡು ಹೋಗಬೇಕಾಗಿರುವುದು ಮುಖ್ಯವಾಗುತ್ತದೆ” ಎಂದಿದ್ದಾರೆ.

“ಪಕ್ಷದ ನಿರ್ಣಯವನ್ನು ತೆಗೆದುಕೊಳ್ಳಬೇಕು. ಭಾರತಾಂಬೆಯ ಗೌರವವನ್ನು ಹೆಚ್ಚಿಸುವ ಸಂದರ್ಭ ಇದು. ನಿಮ್ಮ ಶಾಸಕ ನಿಮ್ಮ ಮನೆಯಲ್ಲಿಯೇ ಇರುತ್ತಾನೆ. ಭಾರತೀಯ ಜನತಾ ಪಕ್ಷವನ್ನು ನಡೆಸಿಕೊಂಡು ಹೋಗಬೇಕಾಗಿದೆ. ಯಾವುದೇ ನಿರ್ಧಾರವನ್ನು ತೆಗೆದುಕೊಂಡರೂ ನಿಮ್ಮ ಹಿತದೃಷ್ಟಿಯಿಂದ ಮತ್ತು ಕ್ಷೇತ್ರದ ಹಿತಾದೃಷ್ಟಿಯಿಂದ ಆಗಿರುತ್ತದೆ” ಎಂದು ಸ್ಪಷ್ಟಪಡಿಸಿದ್ದಾರೆ.

“ಈ ಮೂರು ದಿನಗಳ ಅವಧಿಯಲ್ಲಿ ಯಾರ್‍ಯಾರು ಹೋದರು, ಯಾರ್‍ಯಾರು ಬಂದರು ಎಂದು ತಿಳಿಸಿದೆ. ಈ ಕ್ಷೇತ್ರದ ಶೇ. 90ರಷ್ಟು ಪದಾಧಿಕಾರಿಗಳು ನನ್ನ ಜೊತೆ ಇದ್ದೀರಿ. ಇದಕ್ಕೆ ನನ್ನ ಜೀವನ ಸಾರ್ಥಕವಾಯಿತು” ಎಂದು ಭಾವುಕವಾಗಿ ನುಡಿದ್ದಾರೆ.

“ಕಾರ್ಯಕರ್ತರ ಯೋಗ ಕ್ಷೇಮ ಮಾಡುತ್ತಿದ್ದೇನೆ. 400 ಕಿಮೀ ರಸ್ತೆ ಆಗಿದೆ, ಇನ್ನೊಂದಿಷ್ಟು ಆಗಬೇಕಾಗಿದೆ.
ಕಬಿನಿಯಿಂದ ನೀರು ಸರಬರಾಜು ಆಗುತ್ತಿದೆ. 120 ಪಾರ್ಕ್‌ಗಳ ಅಭಿವೃದ್ಧಿಯಾಗಿದೆ. ರಾಜಕಾಲುವೆ ಒತ್ತುವರಿ ತೆರವು ಮಾಡಿಸುತ್ತಿದ್ದೇವೆ. ಬಾಡಿಗೆ ಮನೆಯಲ್ಲಿರುವವರಿಗೆ ಮನೆ ಕೊಡಿಸಲು 4500 ಮನೆ ನಿರ್ಮಾಣ ಮಾಡುತ್ತಿದ್ದೇವೆ. ಮನೆಗಳ ಕಾರ್ಯ ಆರಂಭವಾಗಿದೆ. ಬ್ಯಾಂಕ್‌ಗಳು ಒಪ್ಪಿಗೆ ಕೊಟ್ಟಿವೆ” ಎಂದು ವಿವರಿಸಿದ್ದಾರೆ.

“ಇಷ್ಟೆಲ್ಲ ಕೆಲಸ ನಿರಂತರವಾಗಿ ಮಾಡಿದ್ದೇನೆ. 265 ಬೂತ್‌ಗಳಲ್ಲಿ ಸಭೆ ಕರೆದು ಅಭಿಪ್ರಾಯ ತಿಳಿಸಿದ್ದೀರಿ. ನಿಮ್ಮ ಭಾವನೆಗಳನ್ನು ಸ್ಪಷ್ಟಪಡಿಸಿದ್ದೀರಿ. ನಾನು ಒಂದು ಪಕ್ಷದ ವ್ಯವಸ್ಥೆಯಲ್ಲಿ ಬಂದಿರುವವನು. ಬಿ.ಎಸ್.ಯಡಿಯೂರಪ್ಪ ಮತ್ತು ಅನಂತಕುಮಾರ್‌ ಅವರಿಂದಾಗಿ ಎರಡು ಅವಧಿಯಲ್ಲಿ ರಾಜ್ಯ ಯುವ ಮೋರ್ಚಾ ಅಧ್ಯಕ್ಷನಾಗಿದ್ದೆ. ಅದನ್ನು ನಾನು ಮರೆಯಲ್ಲ. ಪಕ್ಷ ನನ್ನ ತಾಯಿ ಸಮಾನ” ಎಂದು ಬಣ್ಣಿಸಿದ್ದಾರೆ.

ಇದನ್ನೂ ಓದಿರಿ: ಅನಂತಕುಮಾರ್‌ ನೆಟ್ಟ ಗಿಡ ಉಳಿಸಬೇಕಿದೆ: ರಾಜಕೀಯ ಅರ್ಥ ಧ್ವನಿಸಿತೇ ತೇಜಸ್ವಿನಿ ಟ್ವೀಟ್?

ನೋವುಗಳನ್ನು ಅನುಭವಿಸಿದ್ದೇನೆ. ಮಂತ್ರಿ ಸ್ಥಾನ ಸಿಗದಿದ್ದಾಗ ಅನೇಕ ಕಡೆ ಬೆಂಕಿ ಹಚ್ಚಿದವರಿದ್ದಾರೆ. ನನ್ನ ಕ್ಷೇತ್ರದ ಜನ ಯಾವತ್ತೂ ಜಗಳ ಮಾಡಲಿಲ್ಲ. ಈ ಬಾರಿ ಕೂಡ ಮಂತ್ರಿ ಸ್ಥಾನ ಕೊಡಲಿಲ್ಲ. ಹೊರಗಿನವರಿಗೆ ಕೊಟ್ಟರು. ನಾನು ಆಗಲೂ ಮಾತನಾಡಲಿಲ್ಲ. ನೀವು ತಾಳ್ಮೆಯಿಂದ ಇದ್ದೀರಿ. ಐದು ವರ್ಷಗಳಿಂದ ಮಂತ್ರಿ ಸ್ಥಾನವನ್ನು ನೀಡಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಹನ್ನೊಂದು ಶಾಸಕರು ಈ ಭಾಗದಲ್ಲಿ ಬಂದು ಹೋಗಿದ್ದಾರೆ. ಉಳಿದವನು ನಾನೊಬ್ಬ ಮಾತ್ರ. ಈ ಮೂವತ್ತು ವರ್ಷಗಳ ಕಾಲ ಎಲ್ಲ ನೋವುಗಳನ್ನು ಸಹಿಸಿಕೊಂಡು ಸ್ವಯಂ ಸೇವಕನಾಗಿ ಜೀವನ ನಡೆಸುತ್ತಾ ಬಂದಿರುವೆ. ರಾಜಕಾರಣದಲ್ಲಿ ಆಪಾದನೆಗಳು ಬರುತ್ತವೆ. ನೋವಾಗುತ್ತವೆ. ಆದರೆ ಮಹಾಭಾರತ ನೆನಪಾಗುತ್ತದೆ. ಕೃಷ್ಣನನ್ನೇ ಕಳ್ಳ ಎಂದರು, ನೀನ್ಯಾವ ಮಹಾ ಎನಿಸುತ್ತದೆ ಎಂದು ಮೆಲುಕು ಹಾಕಿದ್ದಾರೆ.

“ನನ್ನ ಜೀವನ ಇರುವವರೆಗೂ ಕಾರ್ಯಕರ್ತರ ಮನೆಯಾಳು. ಅವರ ಯೋಗಕ್ಷೇಮಕ್ಕಾಗಿ ಇರುತ್ತೇನೆ. ಆಗಿಬೇಕಾಗಿರುವ ಕೆಲಸಗಳು ಮುಂದೆ ಪೂರ್ಣವಾಗುತ್ತವೆಯೋ ಇಲ್ಲವೋ ಇಲ್ಲವೋ ಎಂಬ ಆತಂಕವಿದೆ” ಎಂದೂ ತಿಳಿಸಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ಒಳಮೀಸಲಾತಿ ಇಲ್ಲದೆ 56 ಸಾವಿರ ಹುದ್ದೆಗಳ ನೇಮಕಾತಿ ಇಲ್ಲ: ಸಚಿವ ಮುನಿಯಪ್ಪ

“ಒಳಮೀಸಲಾತಿ ಇಲ್ಲದೆ ಒಂದೇ ಒಂದು ಹುದ್ದೆಯನ್ನೂ ನೇಮಕ ಮಾಡಲು ಬಿಡುವುದಿಲ್ಲ, ಮುಖ್ಯಮಂತ್ರಿಗಳು ಈ ಬಗ್ಗೆ ಒಪ್ಪಿಕೊಂಡಿದ್ದಾರೆ. 27ರಂದು ನಡೆಯುವ ಸಚಿವ ಸಂಪುಟ ಸಭೆ ನಮಗೆ ಚಾರಿತ್ರಿಕವಾಗಲಿದೆ. ಮುಖ್ಯಮಂತ್ರಿಗಳ ಮೇಲೆ ವಿಶ್ವಾಸ ಇರಲಿ” ಎಂದು...

ಪಶ್ಚಿಮ ಏಷ್ಯಾ ಸಂಘರ್ಷ| ‘ಈ ಯುದ್ಧವನ್ನು ಕೊನೆಗೊಳಿಸಲು ಒಂದೇ ಮಾರ್ಗ…’: ಮೂರು ಷರತ್ತುಗಳನ್ನು ಮುಂದಿಟ್ಟ ಇರಾನ್

ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರು ಅಮೆರಿಕ ಮತ್ತು ಇಸ್ರೇಲ್ ಜೊತೆಗಿನ ನಡೆಯುತ್ತಿರುವ ಸಂಘರ್ಷವನ್ನು ಕೊನೆಗೊಳಿಸಲು ಮೂರು ಷರತ್ತುಗಳನ್ನು ನಿಗದಿಪಡಿಸಿದ್ದಾರೆ. ಇದರಲ್ಲಿ ದೇಶವು ಭವಿಷ್ಯದ ದಾಳಿಗಳನ್ನು ಎದುರಿಸುವುದಿಲ್ಲ ಎಂಬ ಖಾತರಿಗಳು ಸೇರಿವೆ. ಬುಧವಾರ ತಮ್ಮ...

ಖಾಸಗಿ ಜಾಗದ ನಮಾಝ್‌ಗೆ ಅಧಿಕಾರಿಗಳಿಂದ ಅಡ್ಡಿ : ಮುಸ್ಲಿಂ ವ್ಯಕ್ತಿಗೆ ಭದ್ರತೆ ಒದಗಿಸಲು ಕೋರ್ಟ್ ಆದೇಶ

ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಮುಸ್ಲಿಂ ವ್ಯಕ್ತಿಯೊಬ್ಬರು ತಮ್ಮ ಖಾಸಗಿ ಜಾಗದಲ್ಲಿ ಇತರರೊಂದಿಗೆ ನಮಾಝ್ ಮಾಡುವುದಕ್ಕೆ ಅಡ್ಡಿಪಡಿಸಲಾಗಿದೆ ಎಂದು ಆರೋಪಿಸಿದ ಹಿನ್ನೆಲೆ, ಅವರಿಗೆ ದಿನದ 24 ಗಂಟೆಯೂ ರಕ್ಷಣೆ ನೀಡಲು ಇಬ್ಬರು ಭದ್ರತಾ...

‘ಒಳಮೀಸಲಾತಿ ಜಾರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಿಡುತ್ತಿಲ್ಲ’: ಮಂದಕೃಷ್ಣ ಮಾದಿಗ ಆರೋಪ

‘ಒಳಮೀಸಲಾತಿ ಜಾರಿಗೆ ತರುತ್ತೇವೆಂದು ಹೇಳಿದ್ದ ಕಾಂಗ್ರೆಸ್, ಈಗ ಒಳಮೀಸಲಾತಿ ಅನುಷ್ಠಾನದಲ್ಲಿ ಮೀನಾಮೇಷ ಎಣಿಸುತ್ತಿದೆ. ಕಾಂಗ್ರೆಸ್ ನ ಹೈಕಮಾಂಡ್ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ. ಈ ಮೂವರನ್ನು ನಿಯಂತ್ರಿಸುವವರು ಕಾಂಗ್ರೆಸ್...

ಸಾವರ್ಕರ್ ಕುರಿತು ಹೇಳಿಕೆ : ರಾಹುಲ್ ಗಾಂಧಿ ವಿರುದ್ಧದ ಮಾನನಷ್ಟ ಮೊಕದ್ದಮೆ ರದ್ದು

ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ (2022ರಲ್ಲಿ) ಹಿಂದುತ್ವ ಸಿದ್ಧಾಂತವಾದಿ ವಿನಾಯಕ ದಾಮೋದರ್ ಸಾವರ್ಕರ್ ಕುರಿತು ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿದ್ದ ಮಾನನಷ್ಟ ಮೊಕದ್ದಮೆಯನ್ನು...

‘ಒಳಮೀಸಲಾತಿ ಜಾರಿಯಲ್ಲಿ ಸರ್ಕಾರ ನಿರ್ಲಕ್ಷ್ಯ ಧೋರಣೆ ತೋರಿದರೆ ಹೋರಾಟ ವಿಧಾನಸೌಧಕ್ಕೆ ಸ್ಥಳಾಂತರವಾಗುತ್ತದೆ’: ಮಾದರ ಚೆನ್ನಯ್ಯ ಸ್ವಾಮೀಜಿ

ಕಳೆದ 35 ವರ್ಷಗಳಿಂದ ಹಲವಾರು ಹೋರಾಟಗಾರರು ತಮ್ಮ ಜೀವ-ಜೀವನವನ್ನು ಅರ್ಪಿಸಿ, ಮನೆ-ಮಠವನ್ನು ಬಿಟ್ಟು ಒಳಮೀಸಲಾತಿ ಹೋರಾಟವನ್ನು ಅಂತಿಮ ಘಟ್ಟಕ್ಕೆ ತಂದಿದ್ದಾರೆ. ಅನೇಕರು ಬದುಕನ್ನು ಮಾತ್ರವಲ್ಲ, ಪ್ರಾಣವನ್ನೂ ಕಳೆದುಕೊಂಡಿದ್ದಾರೆ. ಇದು 2ನೇ ಸ್ವಾತಂತ್ರ್ಯ ಹೋರಾಟವಾಗಿದೆ....

ಎಸ್‌ಎನ್‌ಡಿಪಿ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ವೆಳ್ಳಾಪ್ಪಳ್ಳಿ ನಟೇಶನ್ ಅನರ್ಹ

ಶ್ರೀ ನಾರಾಯಣ ಧರ್ಮ ಪರಿಪಾಲನ ಯೋಗಂ (ಎಸ್‌ಎನ್‌ಡಿಪಿ ಯೋಗಂ) ನ ಪ್ರಧಾನ ಕಾರ್ಯದರ್ಶಿ ಮತ್ತು ಮತ್ತು ಎಸ್‌ಎನ್ ಟ್ರಸ್ಟ್‌ನ ಕಾರ್ಯದರ್ಶಿ ಸ್ಥಾನದಿಂದ ವೆಳ್ಳಾಪ್ಪಳ್ಳಿ ನಟೇಶನ್ ಅವರನ್ನು ಕೇರಳ ಹೈಕೋರ್ಟ್ ಗುರುವಾರ (ಮಾ.12) ಅನರ್ಹಗೊಳಿಸಿದ್ದು,...

‘ಫಾರೂಕ್ ಅಬ್ದುಲ್ಲಾರನ್ನು ಕೊಲ್ಲುವುದು ಸರ್ಕಾರದ ಉದ್ದೇಶವೇ?’..ರಾಜ್ಯ ಸಭೆಯಲ್ಲಿ ಖರ್ಗೆ ಪ್ರಶ್ನೆ

ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಪಕ್ಷದ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಅವರ ಹತ್ಯೆ ಯತ್ನ ವಿಚಾರವನ್ನು ವಿಪಕ್ಷ ಸದಸ್ಯರು ಗುರುವಾರ (ಮಾ.12) ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದರು. ಘಟನೆ ಬಗ್ಗೆ...

56 ಸಾವಿರ ಹುದ್ದೆಗಳ ನೇಮಕಾತಿಯಲ್ಲಿ ಒಳಮೀಸಲಾತಿ ಅನ್ವಯಕ್ಕೆ ಆಗ್ರಹಿಸಿ ಎಡಗೈ ಸಮುದಾಯದಿಂದ ಬೃಹತ್ ಪ್ರತಿಭಟನೆ 

ಸರ್ಕಾರವು ಒಳ ಮೀಸಲಾತಿಯನ್ನು ತಪ್ಪಿಸುವ ಹುನ್ನಾರದಿಂದ ತರಾತುರಿಯಲ್ಲಿ 56,432 ಹುದ್ದೆಗಳ ನೇಮಕಾತಿಗೆ ಆದೇಶ ಹೊರಡಿಸಿದೆ. ನೇಮಕಾತಿಯಲ್ಲಿ ಒಳಮೀಸಲಾತಿ ಅಳವಡಿಸದೆ, ಎಡಗೈ ಸಮುದಾಯಗಳಿಗೆ ಸರ್ಕಾರ ಮತ್ತೆ ವಂಚಿಸುತ್ತಿದೆ ಎಂದು ‘ಒಳಮೀಸಲಾತಿ ಹೋರಾಟ ಸಮಿತಿ’ ಆರೋಪಿಸಿದೆ....

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಸೋಲು

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧ ವಿರೋಧ ಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯವು ಬುಧವಾರ (ಮಾ.11) ಧ್ವನಿ ಮತದ ಮೂಲಕ ತಿರಸ್ಕಾರಗೊಂಡಿದೆ. ಸದನದಲ್ಲಿ ವಿರೋಧ ಪಕ್ಷಗಳ ತೀವ್ರ ಗದ್ದಲ ಮತ್ತು ಘೋಷಣೆಗಳ ನಡುವೆಯೇ ಸ್ಪೀಕರ್...