Homeಮುಖಪುಟಕನ್ನಡ ಚಿತ್ರರಂಗದಲ್ಲಿ ಅಭಿಮಾನಿಗಳನ್ನು ಮೋಡಿ ಮಾಡಿದ್ದ ನಟಿ ರಮ್ಯಾ ಈಸ್ ಬ್ಯಾಕ್

ಕನ್ನಡ ಚಿತ್ರರಂಗದಲ್ಲಿ ಅಭಿಮಾನಿಗಳನ್ನು ಮೋಡಿ ಮಾಡಿದ್ದ ನಟಿ ರಮ್ಯಾ ಈಸ್ ಬ್ಯಾಕ್

- Advertisement -
- Advertisement -

ಪದ್ಮಾವತಿ ಈಸ್ ಬ್ಯಾಕ್

ಕನ್ನಡ ಚಿತ್ರರಂಗದಲ್ಲಿ ಅಭಿಮಾನಿಗಳನ್ನು ಮೋಡಿ ಮಾಡಿದ್ದ ನಟಿ ರಮ್ಯಾ. ಸ್ಯಾಂಡಲ್‍ವುಡ್ ಅಂಗಳಲ್ಲಿ ಒಳ್ಳೆ ನೇಮು ಫೇಮು ಗಿಟ್ಟಿಸಿಕೊಂಡಿದ್ದ ರಮ್ಯಾ, ರಾಜ್ಯಭಾರ ಮಾಡೋ ಮನಸ್ಸಾಗಿ ಚಿತ್ರರಂಗಕ್ಕೆ ಗುಡ್‍ಬೈ ಹೇಳಿ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದರು. ಎಂಟ್ರಿಯಲ್ಲೇ ಜಯಭೇರಿ ಬಾರಿಸಿದ ರಮ್ಯಾಗೆ ಆರು ತಿಂಗಳಷ್ಟೇ ರಾಜಕೀಯ ಅಧಿಕಾರ ಅನುಭವಿಸೋ ಚಾನ್ಸ್ ಸಿಕ್ಕಿದ್ದು. ಎರಡನೇ ಇನ್ನಿಂಗ್ಸ್‍ನಲ್ಲಿ ಸೋಲುಂಡ ಮೋಹಕ ತಾರೆ ರಾತ್ರೋರಾತ್ರಿ ಲಂಡನ್‍ಗೆ ಹಾರಿದರು. ಕಾಂಗ್ರೆಸ್ ಐಟಿ ಸೆಲ್ ಅಧ್ಯಕ್ಷೆ ಪಟ್ಟ ಗಿಟ್ಟಿಸಿಕೊಂಡು ಕಾಂಟ್ರೋವರ್ಸಿ ಪೋಸ್ಟ್ ಮೂಲಕ ಆಗಾಗ್ಗೆ ಟ್ರೋಲ್ ಆಗುತ್ತಿದ್ದ ರಮ್ಯಾ ‘ಅಲ್ಲಿ ಸಲ್ಲದವರು ಎಲ್ಲಿಯೂ ಸಲ್ಲರು’ ಎಂಬಂತೆ ಐಟಿ ಸೆಲ್‍ಗೂ ಗುಡ್‍ಬೈ ಹೇಳಿ ನಾಪತ್ತೆಯಾಗಿದ್ದರು. ರಾಜಕೀಯ ಜಂಜಾಟಕ್ಕಿಂತ ಸಿನಿಮಾ ಮಾಡ್ಕೊಂಡ್, ಅಭಿಮಾನಿಗಳಿಗೆ ಆಟೋಗ್ರಾಫ್ ಹಾಕೊಂಡ್ ಇರೋದೆ ವಾಸಿ ಅನ್ನೋದನ್ನ ಅರಿತುಕೊಂಡು ಈಗಲೂ ಸಿನಿಮಾ ಆಫರ್ ಬರ್ತಾಯಿವೆ, ಸಿನಿಮಾ ಮಾಡ್ತಿನಿ ಅಂತ ಹೇಳ್ತಿದ್ದಾರೆ. ಸದ್ಯಕ್ಕೆ ಈಗಾಗಲೇ ಸುಮಾರು ವರ್ಷಗಳ ಹಿಂದೆ ಚಿತ್ರೀಕರಣಗೊಂಡಿದ್ದ ಪ್ರಜ್ವಲ್ ದೇವರಾಜ್ ಅಭಿನಯಿಸುತ್ತಿರೋ ‘ದಿಲ್ ಕಾ ರಾಜಾ’ ಸಿನಿಮಾದಲ್ಲಿ ನಟಿಸಿದ್ದಾರೆ. ಅಂತೂ ಆಫ್ಟರ್ ಲಾಂಗ್ ಟೈಮ್ ಸಿನಿಮಾ ರಂಗಕ್ಕೆ ರಮ್ಯಾ ಅಭಿನಯದ ಸಿನಿಮಾ ರಿಲೀಸ್ ಆಗ್ತಿದೆ. ಆದರೆ ಮೋದಿ, ಬಿಜೆಪಿಗಳ ವಿರುದ್ಧ ಟೀಕಿಸಿ ಭಾಜಪಾ ಭಜನಾ ಮಂಡಳಿಯ ವಿರೋಧ ಕಟ್ಟಿಕೊಂಡಿರೋ ಕೆಂಪೇಗೌಡ ಕಟ್ಟಿದ್ ಊರಿನ ಪದ್ಮಾವತಿಯನ್ನ ಅಭಿಮಾನಿಗಳು ಅದ್ಯಾವ ರೀತಿ ವೆಲ್‍ಕಮ್ ಮಾಡ್ತಾರೋ ನೋಡಬೇಕು.

ಹಿರಿಯರನ್ನು ಮರೀತಿದ್ಯಾ ಸ್ಯಾಂಡಲ್‍ವುಡ್

ಕನ್ನಡ ಚಿತ್ರರಂಗದಲ್ಲಿ ಒಂದೆಡೆ ನಾಯಕ ನಟರು ಸ್ಟಾರ್‍ಗಳಾದ್ರೆ, ಮತ್ತೊಂದೆಡೆ ಕಾಮಿಡಿ ನಟರೇ ಹೀರೋಗಳಿಗಿಂತ ಸ್ಟಾರ್‍ಗಳಾಗಿ ಮಿಂಚುತ್ತಿದ್ದರು. ಅಭಿಮಾನಿಗಳು ಎಷ್ಟೋ ಸಿನಿಮಾಗಳಲ್ಲಿ ತಮ್ಮ ನೆಚ್ಚಿನ ಕಾಮಿಡಿ ನಟರಿದ್ದಾರೆಂಬ ಕಾರಣಕ್ಕೆ ಸಿನಿಮಾ ನೋಡಲು ಹೋಗುತ್ತಿದ್ದರು. ಈಗಲೂ ಆ ಟ್ರೆಂಡ್ ಹಾಗೇ ಉಳಿದಿದೆ. ಇಂತಹ ಟ್ರೆಂಡ್ ಕ್ರಿಯೇಟ್ ಮಾಡಿದವರಲ್ಲಿ ಹಾಸ್ಯ ನಟ ದೊಡ್ಡಣ್ಣ, ಹೊನ್ನವಳ್ಳಿ ಕೃಷ್ಣ, ಟೆನ್ನಿಸ್ ಕೃಷ್ಣ ಮೊದಲಿಗರು. ಸ್ಯಾಂಡಲ್‍ವುಡ್ ಸಿನಿಮಾಗಳಲ್ಲಿ ಹಾಸ್ಯದ ಔತಣ ನೀಡಿದ್ದ ಇಂತಹ ಪ್ರತಿಭೆಗಳು ಬೆಳ್ಳಿತೆರೆಯಲ್ಲಿ ಕಾಣಿಸಿಕೊಂಡು ವರ್ಷಗಳೇ ಕಳೆದು ಹೋಗಿವೆ. ಹಾಗೊಮ್ಮೆ ಹೀಗೊಮ್ಮೆ ಕಾಣಸಿಗುವ ನಟನೆಂದರೆ ಅದು ದೊಡ್ಡಣ್ಣ ಮಾತ್ರ. ಉಳಿದವರು ಇದ್ದಾರೆ ಎಂಬುದಕ್ಕೆ ಕುರುಹೂ ಇಲ್ಲದಷ್ಟು ಚಿತ್ರರಂಗದಿಂದ ದೂರ ಉಳಿದಿದ್ದಾರೆ. ಅಂದಹಾಗೆ ‘ರಾಜಲಕ್ಷ್ಮೀ’ ಟೈಟಲ್‍ನ ಸಿನಿಮಾದಲ್ಲಿ ನಟಿಸುತ್ತಿರುವ ಟೆನ್ನಿಸ್ ಕೃಷ್ಣರದ್ದೂ ಇದೇ ಮಾತು. ಕನ್ನಡ ಇಂಡಸ್ಟ್ರಿಯಲ್ಲಿ ಹಳಬರಿಗೆ ಅವಕಾಶವಿಲ್ಲ. ವಯಸ್ಸಾಗ್ತಿದ್ದಂತೆ ಮೂಲೆಗೆ ತಳ್ಳಿಬಿಡುತ್ತಾರೆ. ಅಭಿಮಾನಿಗಳೇ ನೀವು ಸಿನಿಮಾದಲ್ಲಿ ಕಾಣಸಿಗುತ್ತಿಲ್ಲವಲ್ಲಾ, ಯಾಕೆ ಎಂದು ಕೇಳುತ್ತಾರೆ. ಆದರೆ ಸಿನಿಮಾ ಮಾಡೋರಿಗೆ ಹಿರಿಯರ ಅವಶ್ಯಕತೆ ಇಲ್ಲದಂತಾಗಿದೆ ಅಂತಾರೆ ಟೆನ್ನಿಸ್.

ಲತಾ ಮಂಗೇಶ್ಕರ್ ಆರೋಗ್ಯಸ್ಥಿತಿ ಗಂಭೀರ

ಗಾಯನ ಕ್ಷೇತ್ರದಲ್ಲಿ ಖ್ಯಾತಿ ಪಡೆದು ಭಾರತ ರತ್ನ ಪ್ರಶಸ್ತಿ ಪಡೆದ ಏಕೈಕ ಗಾಯಕಿ ಲತಾ ಮಂಗೇಶ್ಕರ್.
90 ವಸಂತಗಳನ್ನು ದಾಟಿರುವ ಲತಾ ಮಂಗೇಶ್ಕರ್ ಉಸಿರಾಟದ ಸಮಸ್ಯೆಯಿಂದ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸೋಮವಾರ ಬೆಳಗಿನ ಜಾವ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದ್ದು ಪರಿಸ್ಥಿತಿ ಗಂಭೀರವಾಗಿರುವ ಹಿನ್ನೆಲೆಯಲ್ಲಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಿಕಿತ್ಸೆಯ ಬಳಿಕ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ.

ರೂಲರ್ ಈಸ್ ದ ಮಾಡೆಲ್

ಈಗಿನ ಜನರೇಷನ್ ಹೈಕ್ಳಿಗೆ ಸಿನಿಮಾ ಸ್ಟಾರ್‍ಗಳೇ ಯೂತ್ ಐಕಾನ್‍ಗಳು. ಯಾವುದೇ ಹುಡಗನ್ನ ಕೇಳಿದ್ರು ಅವರು ಯಾವುದಾದ್ರು ಒಬ್ಬ ನಟನ ಹೆಸರೇಳಿ ಅವನೇ ನಮ್ಮ ರೋಲ್ ಮಾಡಲ್ ಅಂತ ಹೇಳ್ತಾರೆ. ಹಂಗೇನೇ ಸಿನಿಮಾ ಸ್ಟಾರ್‍ಗಳಿಗೂ ಯಾರಾದ್ರು ಒಬ್ರು ರೋಲ್ ಮಾಡಲ್‍ಗಳು ಇದ್ದೇಯಿರ್ತಾರೆ. ಸದ್ಯಕ್ಕೆ ಮ್ಯಾಟ್ರು ಏನಪ್ಪಾ ಅಂದ್ರೆ. ತನ್ನ ಪ್ರತಿ ಸಿನಿಮಾದಲ್ಲೂ ಒಬ್ಬೊಬ್ಬರ ಹೆಸರೇಳ್ಕಂಡು ಬೆಳೆದು ಬಂದ ರಾಕಿಂಗ್ ಸ್ಟಾರ್ ಯಶ್‍ನ ರೋಲ್ ಮಾಡೆಲ್ ಯಾರು ಅನ್ನೋದು. ರಾಮಾಚಾರಿ ಸಿನಿಮಾದಲ್ಲಿ ವಿಷ್ಣು ಟ್ಯಾಟೂ ಹಾಕಂಡ್ ವಿಷ್ಣು ಅಭಿಮಾನಿಗಳನ್ನೂ, ಗಜಕೇಸರಿಯಲ್ಲಿ ರಾಜ್‍ಕುಮಾರ್ ಅಭಿಮಾನಿಗಳನ್ನೂ, ಡ್ರಾಮಾ ಸಿನಿಮಾದಲ್ಲಿ ಅಂಬಿ ಜೊತೆ ಆ್ಯಕ್ಟ್ ಮಾಡಿದ ನಂತರ ಅಂಬಿ ಅಣ್ಣ ಅಂತ ಅಂಬಿಯ ಅಭಿಮಾನಿಗಳನ್ನು ತನ್ನತ್ತ ಸೆಳೆದುಕೊಂಡ ಯಶ್ ಅಂಬಿ ಇರುವವರೆಗೂ ಅಂಬಿಯೇ ತನ್ನ ರೋಲ್ ಮಾಡೆಲ್ ಎಂಬಂತೆ ಹೇಳಿಕೊಳ್ಳುತ್ತಿದ್ದರು. ಇವಾಗ ಇದ್ದಕ್ಕಿದ್ದಂಗೆ ರೋಲ್ ಮಾಡಲ್ ಚೇಂಜ್ ಮಾಡ್ಕಂಡಿರೋ ಯಶ್, ನಿಮ್ಮ ಸ್ಫೂರ್ತಿ ಯಾರು ಅಂದ್ರೆ ಮೋದಿ ಅಂದ್ಬುಟ್ಟಿದ್ದಾರೆ. ಅಂದಹಾಗೆ 2014ರಲ್ಲಿ ಮೋದಿ ಅಧಿಕಾರಕ್ಕೆ ಬರೋಕಿಂತ ಮುಂಚೆ ಮೋದಿ ಗೊತ್ತಿತ್ತೋ ಇಲ್ವೋ ಗೊತ್ತಿಲ್ಲ. ಆದ್ರೆ ಸದ್ಯಕ್ಕೆ ಎಲ್ಲರನ್ನೂ ಸೆಳೀತಿರೋ ಮೋದಿನೇ ನನ್ನ ರೋಲ್ ಮಾಡ್ಲು ಅಂತ ಯಶ್ ಹೊಗುಳ್ತಾಯಿರೋದು ನೋಡಿದ್ರೆ ಅಂಬಿ ಮೇಲಿನ ಅಭಿಮಾನ ಕಡ್ಮೆ ಆಗೋಯ್ತಾ ಅನ್ನುಸ್ತದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...