Homeನ್ಯಾಯ ಪಥಅತ್ಯಾಚಾರಗಳು ಹೆಚ್ಚಾಗಲು ಈ ಸಿನಿಮಾಗಳ ಪಾಲೆಷ್ಟು? ಅತ್ಯಾಚಾರ ಮತ್ತು ಸಿನಿಮಾ ನೈತಿಕತೆ...

ಅತ್ಯಾಚಾರಗಳು ಹೆಚ್ಚಾಗಲು ಈ ಸಿನಿಮಾಗಳ ಪಾಲೆಷ್ಟು? ಅತ್ಯಾಚಾರ ಮತ್ತು ಸಿನಿಮಾ ನೈತಿಕತೆ…

- Advertisement -
- Advertisement -

ಹೈದರಾಬಾದ್ ಅತ್ಯಾಚಾರ ಪ್ರಕರಣ ಕಂಡು ಇಡೀ ದೇಶವೇ ಮರುಕಪಟ್ಟಿತು. ಫಿಲ್ಮ್ ಇಂಡಸ್ಟ್ರಿಯೂ ಕಂಬನಿ ಮಿಡಿದು, ಅತ್ಯಾಚಾರಿಗಳ ವಿರುದ್ಧ ಕಿಡಿಕಾರಿತು. ಇದೇ ಮೊದಲಲ್ಲ 2012ರ ನಿರ್ಭಯಾ ಪ್ರಕರಣದಲ್ಲಿರಲಿ, ಅಥವಾ ಇಂತಹುದೇ ಮಹಿಳಾ ದೌರ್ಜನ್ಯದ ಪ್ರಕರಣಗಳು ಬೆಳಕಿಗೆ ಬಂದಾಗ ಸಿನಿಮಂದಿ ಆಕ್ರೋಶದಿಂದ ಮಾತನಾಡೋದು ಸಿನಿಮಾ ಡೈಲಾಗ್‍ಗಳಷ್ಟೇ ಸಹಜವಾಗಿದೆ. ಆದರೆ, ತನ್ನ ಸಾಮಾಜಿಕ ಹೊಣೆಗಾರಿಕೆಯನ್ನು ಮರೆತು ಲಾಭದ ಬೆನ್ನು ಹತ್ತಿರುವ ಸಿನಿಮೋದ್ಯಮಕ್ಕೆ, ಅದರ ಪಾಲುದಾರರಿಗೆ ನಿಜಕ್ಕೂ ಹೀಗೆಲ್ಲ ಆಕ್ರೋಶ ಹೊರಹಾಕುವ ನೈತಿಕತೆ ಉಳಿದಿದೆಯಾ ಅನ್ನೋದು ಚರ್ಚೆಯಾಗಬೇಕಿರುವ ಸಂಗತಿ.

ಕೆಲವು ವರ್ಷಗಳ ಹಿಂದೆ ಅತ್ಯಾಚಾರಿಯೊಬ್ಬ ತಾನು ಅತ್ಯಾಚಾರವೆಸಗಲು `ದಂಡುಪಾಳ್ಯ’ ಸಿನಿಮಾದ ವಿಕೃತ ಪ್ರಚೋದನೆಯೇ ಕಾರಣ ಅನ್ನೋದನ್ನು ವಿಚಾರಣೆ ಸಂದರ್ಭದಲ್ಲಿ ಹೇಳಿಕೊಂಡಿದ್ದ. ಇದು ಒಂದು ಸಿನಿಮಾಗೆ ಸೀಮಿತವಾದುದಲ್ಲ ಅಥವಾ ಒಬ್ಬ ಕಾಮಾಂಧನ ಪ್ರೇರಣೆಗೂ ಸೀಮಿತವಾದುದಲ್ಲ. ಕಮರ್ಷಿಯಲ್ ಸಕ್ಸಸ್‍ನ ಜಾಡುಹಿಡಿದು ಹೊರಟಿರುವ ಬಹುತೇಕ ಸಿನಿಮಾಗಳ ನಿರ್ಮಾತೃಗಳು ಗೊತ್ತಿದ್ದೊ, ಗೊತ್ತಿಲ್ಲದೆಯೋ ಇಂಥಾ ಶೋಷಣೆಗಳನ್ನು ವಿಜೃಂಭಿಸುತ್ತಾ ಬಂದಿರೋದು ಇವತ್ತಿನ ವಾಸ್ತವ.

ಸಿನಿಮಾರಂಗ ಬೆಳೆದಂತೆ, 21ನೇ ಶತಮಾನದ ಮೊದಲ ದಶಕದ ಕೊನೆಯ ವರ್ಷದವರೆಗಿನ ಬಹುತೇಕ ಸಿನಿಮಾಗಳ ಕತೆಗಳಲ್ಲಿ ಅತ್ಯಾಚಾರವೆಂಬುದು ಸಾಮಾನ್ಯ ವಸ್ತುವಾಗಿ ಕಾಣಿಸಿಕೊಳ್ಳುತ್ತವೆ. ಪ್ರೀತಿ-ಪ್ರೇಮ-ಕಾಮ, ಆಸೆ, ಆಕರ್ಷಣೆ, ಸೇಡು, ದ್ವೇಷ ಇದೆಲ್ಲದಕ್ಕೂ ಕೇಂದ್ರವಾಗಿ ಅತ್ಯಾಚಾರದ ದೃಶ್ಯಗಳು ರಾರಾಜಿಸುತ್ತಿವೆ. ಅದಲ್ಲದೆ ಅನೈತಿಕ ಸಂಬಂಧದ ಕತೆ-ದೃಶ್ಯಗಳು ನೋಡುಗರಿಗೆ ಪ್ರಚೋದನೆಯ ಹೊಸ ಹುಮ್ಮಸ್ಸನ್ನು ತಂದೊಡ್ಡುವುದರ ಜೊತೆಗೆ ಸಿನಿಮಾದಲ್ಲಿ ನಟನೊಬ್ಬ ಎಸಗುವ ಅತ್ಯಾಚಾರ ಕೃತ್ಯವು ಆ ಪಾತ್ರದ ಗಂಡಸ್ತನದ ಅಹಮ್ಮಿಕೆಯನ್ನಾಗಿಯೋ, ಸ್ತ್ರೀ ಪಾತ್ರವನ್ನು ಅವಮಾನಿಸುವ ಸಾಧನವಾಗಿಯೋ ಬಳಕೆಯಾಗುತ್ತಲೇ ಇದೆ.

ಸಿನಿಮಾ ಎಂಬುದು ಸಮಾಜದ ಕನ್ನಡಿಯಿದ್ದಂತೆ, ಸಮಾಜದಲ್ಲಿ ನಡೆಯೋದನ್ನೇ ಸಿನಿಮಾದಲ್ಲಿ ತೋರಿಸಬೇಕಾಗುತ್ತೆ ಎಂಬ ವಾದವನ್ನು ಕೆಲವರು ಮುಂದಿಡಬಹುದು. ಆದರೆ ಅಂತವರು, ನೈಜತೆಯ ನೆಪದಲ್ಲಿ ಇಂತಹ ವಿಕೃತಿಗಳನ್ನು ಹಸಿಹಸಿಯಾಗಿ ಬಿತ್ತರಿಸುವ ಅದೇ ಸಿನಿಮಾ ಸಮಾಜವನ್ನು ತಿದ್ದಿ ತೀಡುವ ಇನ್ನುಳಿದ ಹೊಣೆಗಾರಿಕೆಯನ್ನು ಎಷ್ಟರಮಟ್ಟಿಗೆ ನಿಭಾಯಿಸುತ್ತಿದೆ ಎಂಬ ಪ್ರಶ್ನೆಯನ್ನೂ ಕೇಳಿಕೊಳ್ಳಬೇಕಾಗುತ್ತದೆ.
ತಾನು ಪ್ರೀತಿಸಿದವಳು ತನಗೆ ಸಿಗಲಿಲ್ಲವೆಂದರೆ, ಆಕೆ ಬೇರಾರಿಗೂ ಸಿಗಬಾರದೆಂದು ಆಕೆಯನ್ನು ಅತ್ಯಾಚಾರಗೈಯುವ ಅಥವಾ ಕುಡಿದ ಮತ್ತಿನಲ್ಲಿ ಹೀರೋ ಎಸಗುವ ಅತ್ಯಾಚಾರವು ಆಕೆಯನ್ನು ಮದುವೆ ಆಗಿಬಿಟ್ಟರೆ ಎಲ್ಲವೂ ಸರಿಹೋಗಿಬಿಡುತ್ತದೆಂಬ ದೃಶ್ಯದೊಂದಿಗೆ ಕೊನೆಗಾಣುತ್ತದೆ. ಇವೆಲ್ಲವೂ ಅತ್ಯಾಚಾರಿಗಳಿಗೆ ಎಷ್ಟೊಂದು ಸುಲಭವೆಂಬಂತೆ ಪ್ರಭಾವಿಸುತ್ತವೆ.

ಸಿನಿಮಾದಲ್ಲಿ ಅತ್ಯಾಚಾರಗೈದವನು ಇವತ್ತು ಅವಳ ಸೊಕ್ಕು ಇಳಿಸಿದ್ದೇನೆಂದು ಗರ್ವದಿಂದ ಹೇಳಿಕೊಳ್ಳುವಂತಹ ಹಾಗೂ ನಿಷ್ಕರ್ಷ ಸಿನಿಮಾದಲ್ಲಿ ಖಳನಟನೊಬ್ಬ `ಇವಳಿಗೆ ಯೌವನ ತುಂಬಿ ತುಳುಕ್ತಾಯಿದೆ ಸ್ವಲ್ಪ ಖಾಲಿ ಮಾಡು’ ಎನ್ನುವ ಮತ್ತು ಆತ ಅತ್ಯಾಚಾರಗೈಯುವ ದೃಶ್ಯಗಳು ಹೆಣ್ಣಿನ ಬಾಯಿ ಮುಚ್ಚಿಸಲು ಅಥವಾ ಆಕೆಯನ್ನು ತನ್ನ ಅಡಿಯಾಳಾಗಿಸಿಕೊಳ್ಳಲು ಅತ್ಯಾಚಾರವೊಂದು ಸಾಧನ ಎಂಬುದನ್ನು ಸುಪ್ತವಾಗಿ ಸಮಾಜಕ್ಕೆ ದಾಟಿಸಿಬಿಡುತ್ತವೆ. ಜಾತಿ, ವರ್ಗ ಮತ್ತು ಕಾಮದ ಅಮಲನ್ನು ನೆತ್ತಿಗೇರಿಸಿಕೊಂಡವನಿಗೆ ಮತ್ತಷ್ಟು ಪ್ರಚೋದನೆಯನ್ನು ನೀಡುತ್ತವೆ. ಇಂತಹ ಸಿನಿಮಾಗಳು ಅತ್ಯಾಚಾರವಷ್ಟೇ ಅಲ್ಲದೆ ಆಸಿಡ್ ದಾಳಿ, ಹಿಂಸೆ, ಕಿರುಕುಳಗಳೂ ಮಹಿಳಾ ದೌರ್ಜನ್ಯದ ಪ್ರವೃತ್ತಿಯನ್ನು ಹೆಚ್ಚಿಸುತ್ತವೆ ಮತ್ತು ಪ್ರಚೋದಿಸುತ್ತವೆ.

ಅಲ್ಲದೆ, ಸಿನಿಮಾಗಳಲ್ಲಿ ಅವಕಾಶಬೇಕೆಂದರೆ ಸ್ವಲ್ಪ ಅಡ್ಜಸ್ಟ್ ಮಾಡ್ಕೋಬೇಕು ಎಂದು ಹೇಳುವ ನಿರ್ದೇಶಕರೂ, ನಿರ್ಮಾಪಕರೂ ಸಿನಿಮಾ ಇಂಡಸ್ಟ್ರಿಯಲ್ಲಿರುವುದು ಮತ್ತೊಂದು ದುರಂತ. ಇತ್ತೀಚೆಗೆ ಸದ್ದು ಮಾಡಿದ ಮೀಟೂ ಪ್ರಕರಣಗಳಲ್ಲಿ ಆರೋಪಿಗಳಾಗಿದ್ದ ಹೀರೋ, ನಿರ್ದೇಶಕ, ನಿರ್ಮಾಪಕರ ಪರವಾಗಿ ನಿಲ್ಲುವ `ಫೇವರಿಸಂ’ ಮನಸ್ಥಿತಿ ಸಿನಿಮಾ ರಂಗದ ಯಾವ ನೈತಿಕತೆಯನ್ನು ಪ್ರತಿನಿಧಿಸುತ್ತದೆ. ತಮ್ಮ ಮೇಲಾದ ಲೈಂಗಿಕ ಶೋಷಣೆಯನ್ನು ಹೇಳಿಕೊಂಡ ನಟಿಯರ ಸಿನಿ ಭವಿಷ್ಯಕ್ಕೆ ತಣ್ಣೀರೆರಚುವ ಇಂಡಸ್ರ್ಟಿಯು ಅತ್ಯಾಚಾರದ ವಿರುದ್ಧ ಮಾತನಾಡುತ್ತಿರುವುದು ನೈತಿಕತೆಯ ಪ್ರಶ್ನೆಯನ್ನು ಮತ್ತೆಮತ್ತೆ ಮುನ್ನೆಲೆಗೆ ತರುತ್ತಿದೆ.

ಇಂದು ಸಿನಿಮಾಗಳಿಂದ ಪ್ರೇರೇಪಿಸಲ್ಪಡುವ ಯುವಸಮುದಾಯ ಬೆಳೆಯುತ್ತಿದೆ. ಇಂತಹ ಯುವಜನಾಂಗಕ್ಕೆ ಆದರ್ಶವಾಗಬೇಕಿರುವ ಸಿನಿಮಾಗಳು ಮಹಿಳೆಯರನ್ನು ಗೌರವಿಸುವ, ಮಾನವ ಪ್ರೀತಿಯನ್ನು ಹಂಚುವ, ಸುತ್ತಮುತ್ತಲಿನ ವಾತಾವರಣವನ್ನು ಸ್ವಚ್ಛವಾಗಿರಿಸುವಂತಹ ಹಾಗೂ ಆರೋಗ್ಯಕರ ಮನರಂಜನೆಯ ವಾಹಿನಿಯಾಗಿರಬೇಕೇ ಹೊರತು ಹಾದಿ ತಪ್ಪಿಸಿ, ಸಮಾಜದಲ್ಲಿ ಕೊಳಕನ್ನು ಬಿತ್ತುವ ಮಾಧ್ಯಮವಾಗಬಾರದು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...