HomeಎಕಾನಮಿRCEP ಯಿಂದ ಭಾರತ ತಾತ್ಕಾಲಿಕ ಹಿಂತೆಗೆತ: ಏಕೆ ಮತ್ತು ಮುಂದೇನು?

RCEP ಯಿಂದ ಭಾರತ ತಾತ್ಕಾಲಿಕ ಹಿಂತೆಗೆತ: ಏಕೆ ಮತ್ತು ಮುಂದೇನು?

ಸರ್ಕಾರದ ಮೇಲೆ RCEP ಗೆ ಮುಂದೆಯೂ ಸಹಿ ಹಾಕದಂತೆ ಪರಿಣಾಮಕಾರಿಯಾಗಿ ಒತ್ತಡ ಹಾಕುವ, ಹೋರಾಟ ರೂಪಿಸುವ ಅವಶ್ಯಕತೆಯಿದೆ.

- Advertisement -
- Advertisement -

ಈ ಕೆಳಗಿನ ಟೇಬಲುಗಳನ್ನು ಗಮನಿಸಿ. ಮೊದಲನೇ ಟೇಬಲಿನಲ್ಲಿ ಭಾರತ RCEPಯ ದೇಶಗಳಲ್ಲಿ ಯಾವ್ಯಾವ ದೇಶದ ಜೊತೆ ಎಷ್ಟೆಷ್ಟು ವ್ಯಾಪಾರದ ಕೊರತೆ ಹೊಂದಿದೆ (2018-19 ರಲ್ಲಿ) ಎಂಬ ಅಂಕಿಅಂಶಗಳಿವೆ. ಎರಡನೇ ಟೇಬಲಿನಲ್ಲಿ ಯಾವ್ಯಾವ ಉತ್ಪನ್ನಗಳನ್ನು ಎಷ್ಟೆಷ್ಟು ರಫ್ತು ಮಾಡುತ್ತಿದೆ ಮತ್ತು ಆಮದು ಮಾಡಿಕೊಳ್ಳುತ್ತಿದೆ ಎಂಬ (2018-19 ರಲ್ಲಿ) ಅಂಕಿಅಂಶಗಳಿವೆ.

ಚಿತ್ರಕೃಪೆ: ಎಸ್‌ಬಿಐ ಇಂಡಿಯಾ

ಈ ಟೇಬಲನ್ನು ನೋಡಿ. ಭಾರತ RCEPಯ ಕೇವಲ ನಾಲ್ಕು ದೇಶಗಳನ್ನು ಲಾವೋಸ್, ಕಾಂಬೋಡಿಯಾ, ಮಯನ್ಮಾರ್ ಮತ್ತು ಫಿಲಿಪೀನ್ಸ್ ಬಿಟ್ಟು ಇತರ ಹನ್ನೊಂದು ದೇಶಗಳ ಜೊತೆಗೆ ವ್ಯಾಪಾರದ ಕೊರತೆ ಅನುಭವಿಸುತ್ತಿದೆ.

ಒಟ್ಟಾರೆಯಾಗಿ 2018-19 ರಲ್ಲಿ, ಈ ದೇಶಗಳಿಂದ 172.93 ಬಿಲಿಯನ್ ಡಾಲರುಗಳಷ್ಟು ಸರಕು ಸೇವೆಗಳನ್ನು ಆಮದು ಮಾಡಿಕೊಂಡಿದ್ದು, 67.69 ಬಿಲಿಯನ್ ಡಾಲರುಗಳಷ್ಟನ್ನು ಮಾತ್ರ ಈ ದೇಶಗಳಿಗೆ ರಫ್ತು ಮಾಡಿದೆ. ಹಾಗಾಗಿ ಭಾರತ, ಒಟ್ಟು 105.24 ಬಿಲಿಯನ್ ಡಾಲರುಗಳಷ್ಟು ವ್ಯಾಪಾರದ ಕೊರತೆಯನ್ನು ಈ ದೇಶಗಳ ಜೊತೆ ಹೊಂದಿದೆ.

ಹಾಗೆಯೇ ಭಾರತ ತನ್ನ ಒಟ್ಟು ಆಮದಿನಲ್ಲಿ (508 ಬಿಲಿಯನ್ ಡಾಲರುಗಳು) ಶೇಕಡಾ 34 ರಷ್ಟನ್ನು (172.93 ಬಿಲಿಯನ್ ಡಾಲರುಗಳು) RCEP ದೇಶಗಳಿಂದ ಮಾಡಿಕೊಳ್ಳುತ್ತಿದೆ. ತನ್ನ ಒಟ್ಟು ರಫ್ತಿನಲ್ಲಿ (322 ಬಿಲಿಯನ್ ಡಾಲರುಗಳು) ಶೇಕಡಾ 21 ರಷ್ಟನ್ನು (67.69 ಬಿಲಿಯನ್ ಡಾಲರುಗಳು) ಈ RCEP ದೇಶಗಳಿಗೆ ಮಾಡುತ್ತಿದೆ.

ಒಟ್ಟಾಗಿ ಭಾರತ ಜಗತ್ತಿನ ದೇಶಗಳೊಡನೆ 2018-19 ರಲ್ಲಿ ಒಟ್ಟು 186 ಬಿಲಿಯನ್ ಡಾಲರುಗಳಷ್ಟು ವ್ಯಾಪಾರದ ಕೊರತೆ ಅನುಭವಿಸುತ್ತಿದೆ.

ಇದೇ ಟೇಬಲಿನಲ್ಲಿ ಭಾರತ ಚೀನಾ ಜೊತೆ ಹೊಂದಿರುವ 53.5 ಬಿಲಿಯನ್ ಡಾಲರುಗಳಷ್ಟು ಭಾರೀ ವ್ಯಾಪಾರದ ಕೊರತೆಯನ್ನು ಗಮನಿಸಿ. ಜೊತೆಗೆ ಇಂಡೋನೇಷಿಯ, ಮಲೇಷ್ಯಾ, ಥೈಲಾಂಡಿನಂಥ ದೇಶಗಳ ಜತೆಗಿನ ವ್ಯಾಪಾರದ ಕೊರತೆಯನ್ನೂ ನೋಡಿ.

ಚಿತ್ರಕೃಪೆ: ಎಸ್‌ಬಿಐ ಇಂಡಿಯಾ

ಇನ್ನು ಎರಡನೇ ಟೇಬಲನ್ನು ಗಮನಿಸಿದಾಗ ಭಾರತ ವ್ಯವಸಾಯೋತ್ಪನ್ನಗಳು, ಟೆಕ್ಟ್ಸ್ಟೈಲ್ಸ್, ಮುತ್ತು ಮತ್ತು ಆಭರಣಗಳನ್ನು ಬಿಟ್ಟು ಉಳಿದೆಲ್ಲ ಉತ್ಪನ್ನಗಳಲ್ಲೂ ಇತರ ದೇಶಗಳ ಜತೆ ವ್ಯಾಪಾರ ಕೊರತೆ ಎದುರಿಸುತ್ತಿದೆ. ಮೇಲಿನ ಮೂರೇ ಮೂರು ಉತ್ಪನ್ನಗಳಲ್ಲಿ ಭಾರತ ಹೆಚ್ಚುವರಿ ವ್ಯಾಪಾರ ಹೊಂದಿದ್ದರೂ ಆಮದು ರಫ್ತಿನ ಅಂತರ ತುಂಬ ಕಡಿಮೆಯಿರುವುದು ಕಾಣುತ್ತದೆ. ಅದರರ್ಥ RCEP ಬಂದರೆ ಈ ಮೂರು ಉತ್ಪನ್ನಗಳಲ್ಲೂ ಭಾರತ ಕೊರತೆ ಎದುರಿಸಬೇಕಾಗುತ್ತದೆ. ಜೊತೆಗೆ, ತಯಾರಿಕಾ ಉತ್ಪನ್ನಗಳು (manufacturing goods), ಎಲೆಕ್ಟ್ರಾನಿಕ್ ಗೂಡ್ಸ್, ಕೆಮಿಕಲ್ಸ್ ಯಾವುದನ್ನೇ ನೋಡಿದರೂ ಭಾರತ RCEP ದೇಶಗಳ ಜತೆ ಭಾರೀ ವ್ಯಾಪಾರದ ಕೊರತೆ ಹೊಂದಿದೆ.

ಹೀಗೆ ನಾವು ನೋಡಿದಾಗ ಭಾರತ ತಾನು ವಿವಿಧ ಉತ್ಪನ್ನಗಳನ್ನು ಬೇರೆ ದೇಶಗಳಿಗೆ ರಫ್ತು ಮಾಡುವುದಕ್ಕಿಂತ ಮೂರು ಪಟ್ಟು ಹೆಚ್ಚಿಗೆ ಬೇರೆ ದೇಶದ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುತ್ತಿರುವುದು ನಮಗೆ ಗೊತ್ತಾಗುತ್ತದೆ.

ಇನ್ನು ಇಂಥಾ ಪರಿಸ್ಥಿತಿಯಲ್ಲಿ RCEP ಗೆ ಸಹಿ ಹಾಕಿದರೆ ಈ ವ್ಯಾಪಾರ ಕೊರತೆ ಮತ್ತಷ್ಟು ಹೆಚ್ಚಿ ಭಾರತ ಹೊರದೇಶಗಳ ಉತ್ಪನ್ನಗಳಿಗೆ ಇನ್ನೂ ದೊಡ್ಡ ಮಾರುಕಟ್ಟೆಯಾಗುವುದು ಖಚಿತ.

ಹೀಗೆ ತಾನಿನ್ನೂ ಇತರೆ ಸದಸ್ಯ ದೇಶಗಳ ಜತೆ ಸ್ಪರ್ಧಾತ್ಮಕತೆಯಲ್ಲಿ ಹಿಂದೆ ಬಿದ್ದಿರುವುದರಿಂದ ಭಾರತ ಸರ್ಕಾರ ಅಂದರೆ ಪ್ರಧಾನಿ ಮೋದಿಯವರು (ಈಗ ಸರ್ಕಾರ ಅಂದರೆ ಮೋದಿ ಅನ್ನುವಂತಾಗಿದೆ) ಈಗ ಸದ್ಯಕ್ಕೆ RCEPಗೆ ಸಹಿ ಹಾಕಲು ನಿರಾಕರಿಸಿದ್ದಾರೆಯೇ ಎಂದು ನೋಡಿದರೆ ವಾಸ್ತವ ಹಾಗೆ ಕಾಣಿಸುವುದಿಲ್ಲ.

ಯಾಕೆಂದರೆ, ಇವತ್ತಿಗೂ ಖಅಇPಯ ಯಾವ್ಯಾವ ನಿಯಮಗಳಿಗೆ ಸಂಬಂಧಿಸಿದಂತೆ ಸರ್ಕಾರಕ್ಕೆ ಒಪ್ಪಿಗೆಯಿಲ್ಲ ಎಂಬುದನ್ನು ಕೇಂದ್ರ ಸರ್ಕಾರ ನಮ್ಮ ನಾಗರಿಕರಿಗಾಗಲೀ ಅಥವಾ ಕನಿಷ್ಟ ನಮ್ಮ ಸಂಸದರಿಗಾಗಲೀ ಏನನ್ನೂ ತಿಳಿಸಿಲ್ಲ.

ಇದನ್ನೂ ಓದಿ: ಭಾರತದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯ ಮೇಲೆ RCEP ಪರಿಣಾಮಗಳು

ನಮ್ಮ ದೇಶದ ಹಲವಾರು ರೈತ ಸಂಘಟನೆಗಳು, ಕಾರ್ಮಿಕ ಸಂಘಟನೆಗಳು ಮತ್ತು ಹಲವು ಜನಪರ ಗುಂಪುಗಳು RCEP ಯ ಬಗ್ಗೆ ಜನರನ್ನು ಎಚ್ಚರಿಸಿ ಹಲವು ಪ್ರತಿಭಟನೆಗಳ ಮೂಲಕ ಸರ್ಕಾರದ ಮೇಲೆ ಒತ್ತಡ ಹಾಕಿದ್ದು ಸರ್ಕಾರ RCEP ಗೆ ಸಹಿ ಹಾಕದಿರಲು ಮುಖ್ಯ ಕಾರಣ.

ಹಾಗೆಯೇ, ಹಲವು ಸಣ್ಣ ಹಾಗೂ ಮಧ್ಯಮ ಗಾತ್ರದ ಕೈಗಾರಿಕಾ ಸಂಘಟನೆಗಳು, ಆಟೋಮೋಬೈಲ್ ಉದ್ದಿಮೆಯ ಸಂಘಟನೆಗಳು, ಟೆಕ್ಟ್ಸ್ಟೈಲ್ ಉದ್ದಿಮೆ ಸಂಘಟನೆಗಳು ಸರ್ಕಾರದ ಮೇಲೆ ಹಾಕಿದ ಒತ್ತಡವೂ ಸರ್ಕಾರ ಈಗ RCEP ಗೆ ಸಹಿ ಹಾಕದಂತೆ ತಡೆದಿದೆ.

ಆದರೆ ಈಗಾಗಲೇ CII ( Confederation of Indian Industries) ಮುಂದೆ ಭಾರತ RCEPಗೆ ಸಹಿ ಹಾಕಬೇಕಾಗುತ್ತದೆ ಎಂದು ಹೇಳಿದೆ. ಯಾಕೆಂದರೆ ಈ RCEP ಯಿಂದ ರೈತರಿಗೆ ಮತ್ತು ಸಣ್ಣ ಮಧ್ಯಮ ಕೈಗಾರಿಕೆಗಳಿಗೆ ತೊಂದರೆಯಾಗುತ್ತದೆಯೇ ಹೊರತು ಬೃಹತ್ ಉದ್ಯಮಿಗಳಿಗೆ RCEP ಯಲ್ಲಿ ಲಾಭವೇ ಆಗುತ್ತದೆ. ಯಾಕೆಂದರೆ ರಿಲಯನ್ಸ್, ಅದಾನಿಯಂತಹ ಉದ್ಯಮಿಗಳು RCEP ಯ ಯಾವ ದೇಶದಲ್ಲಿ ಅನುಕೂಲವಿದೆಯೋ ಅಲ್ಲಿಯೇ ತಮ್ಮ ಉತ್ಪಾದನಾ ಘಟಕ ಸ್ಥಾಪಿಸಿ ಅಲ್ಲಿಂದಲೇ ಭಾರತ ಮತ್ತು ಇತರೆ ದೇಶಗಳಿಗೆ ರಫ್ತು ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ಅಥವಾ ಬೇರೆ ದೇಶಗಳಿಂದ ಕಡಿಮೆ ಬೆಲೆಗೆ ಖರೀದಿಸಿ ಭಾರತದಲ್ಲಿ ಲಾಭಕ್ಕೆ ಮಾರಿ ಮಾರುಕಟ್ಟೆ ಏಕಸ್ವಾಮ್ಯ ಗಳಿಸುವ ಸಾಮರ್ಥ್ಯ ಹೊಂದಿದ್ದಾರೆ.

ಈ ರೀತಿಯ ಬೃಹತ್ ಉದ್ದಿಮೆಗಳ ಒತ್ತಡ ಮತ್ತು ಅಂತಾರಾಷ್ಟ್ರೀಯ ಒತ್ತಡದಿಂದಾಗಿ ಕೇಂದ್ರ ಸರ್ಕಾರ ಮುಂದಿನ ದಿನಗಳಲ್ಲಿ ( ಬಹುಶಃ ಇನ್ನು ಮೂರು ತಿಂಗಳುಗಳಲ್ಲಿ – ಫೆಬ್ರವರಿ 2020) RCEP ಗೆ ಸಹಿ ಹಾಕುವ ಸಾಧ್ಯತೆ ದಟ್ಟವಾಗಿದೆ. ಹಾಗೂ ಅದಕ್ಕೆ ಪೂರಕವಾಗಿ ಜನಾಭಿಪ್ರಾಯ ರೂಪಿಸುವ ಕೆಲಸವೂ ಸದ್ದಿಲ್ಲದೆ ನಡೆಯುವ ಸಾಧ್ಯತೆಗಳೂ ಇವೆ.

ಆದುದರಿಂದ, ಈ ತಾತ್ಕಾಲಿಕ ಜಯದಲ್ಲಿ ಮೈಮರೆಯದೆ ಈ ದೇಶದ ರೈತರು, ಕಾರ್ಮಿಕರು, ಪತ್ರಕರ್ತರು, ಬರಹಗಾರರು, ಕಲಾವಿದರು ಒಟ್ಟಾರೆ ಈ ದೇಶದ ಬಗ್ಗೆ ಕಳಕಳಿ ಇರುವವರೆಲ್ಲರೂ ಸರ್ಕಾರದ ಮೇಲೆ RCEP ಗೆ ಮುಂದೆಯೂ ಸಹಿ ಹಾಕದಂತೆ ಪರಿಣಾಮಕಾರಿಯಾಗಿ ಒತ್ತಡ ಹಾಕುವ, ಹೋರಾಟ ರೂಪಿಸುವ ಅವಶ್ಯಕತೆಯಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...