HomeಎಕಾನಮಿRCEP ಯಿಂದ ಭಾರತ ತಾತ್ಕಾಲಿಕ ಹಿಂತೆಗೆತ: ಏಕೆ ಮತ್ತು ಮುಂದೇನು?

RCEP ಯಿಂದ ಭಾರತ ತಾತ್ಕಾಲಿಕ ಹಿಂತೆಗೆತ: ಏಕೆ ಮತ್ತು ಮುಂದೇನು?

ಸರ್ಕಾರದ ಮೇಲೆ RCEP ಗೆ ಮುಂದೆಯೂ ಸಹಿ ಹಾಕದಂತೆ ಪರಿಣಾಮಕಾರಿಯಾಗಿ ಒತ್ತಡ ಹಾಕುವ, ಹೋರಾಟ ರೂಪಿಸುವ ಅವಶ್ಯಕತೆಯಿದೆ.

- Advertisement -
- Advertisement -

ಈ ಕೆಳಗಿನ ಟೇಬಲುಗಳನ್ನು ಗಮನಿಸಿ. ಮೊದಲನೇ ಟೇಬಲಿನಲ್ಲಿ ಭಾರತ RCEPಯ ದೇಶಗಳಲ್ಲಿ ಯಾವ್ಯಾವ ದೇಶದ ಜೊತೆ ಎಷ್ಟೆಷ್ಟು ವ್ಯಾಪಾರದ ಕೊರತೆ ಹೊಂದಿದೆ (2018-19 ರಲ್ಲಿ) ಎಂಬ ಅಂಕಿಅಂಶಗಳಿವೆ. ಎರಡನೇ ಟೇಬಲಿನಲ್ಲಿ ಯಾವ್ಯಾವ ಉತ್ಪನ್ನಗಳನ್ನು ಎಷ್ಟೆಷ್ಟು ರಫ್ತು ಮಾಡುತ್ತಿದೆ ಮತ್ತು ಆಮದು ಮಾಡಿಕೊಳ್ಳುತ್ತಿದೆ ಎಂಬ (2018-19 ರಲ್ಲಿ) ಅಂಕಿಅಂಶಗಳಿವೆ.

ಚಿತ್ರಕೃಪೆ: ಎಸ್‌ಬಿಐ ಇಂಡಿಯಾ

ಈ ಟೇಬಲನ್ನು ನೋಡಿ. ಭಾರತ RCEPಯ ಕೇವಲ ನಾಲ್ಕು ದೇಶಗಳನ್ನು ಲಾವೋಸ್, ಕಾಂಬೋಡಿಯಾ, ಮಯನ್ಮಾರ್ ಮತ್ತು ಫಿಲಿಪೀನ್ಸ್ ಬಿಟ್ಟು ಇತರ ಹನ್ನೊಂದು ದೇಶಗಳ ಜೊತೆಗೆ ವ್ಯಾಪಾರದ ಕೊರತೆ ಅನುಭವಿಸುತ್ತಿದೆ.

ಒಟ್ಟಾರೆಯಾಗಿ 2018-19 ರಲ್ಲಿ, ಈ ದೇಶಗಳಿಂದ 172.93 ಬಿಲಿಯನ್ ಡಾಲರುಗಳಷ್ಟು ಸರಕು ಸೇವೆಗಳನ್ನು ಆಮದು ಮಾಡಿಕೊಂಡಿದ್ದು, 67.69 ಬಿಲಿಯನ್ ಡಾಲರುಗಳಷ್ಟನ್ನು ಮಾತ್ರ ಈ ದೇಶಗಳಿಗೆ ರಫ್ತು ಮಾಡಿದೆ. ಹಾಗಾಗಿ ಭಾರತ, ಒಟ್ಟು 105.24 ಬಿಲಿಯನ್ ಡಾಲರುಗಳಷ್ಟು ವ್ಯಾಪಾರದ ಕೊರತೆಯನ್ನು ಈ ದೇಶಗಳ ಜೊತೆ ಹೊಂದಿದೆ.

ಹಾಗೆಯೇ ಭಾರತ ತನ್ನ ಒಟ್ಟು ಆಮದಿನಲ್ಲಿ (508 ಬಿಲಿಯನ್ ಡಾಲರುಗಳು) ಶೇಕಡಾ 34 ರಷ್ಟನ್ನು (172.93 ಬಿಲಿಯನ್ ಡಾಲರುಗಳು) RCEP ದೇಶಗಳಿಂದ ಮಾಡಿಕೊಳ್ಳುತ್ತಿದೆ. ತನ್ನ ಒಟ್ಟು ರಫ್ತಿನಲ್ಲಿ (322 ಬಿಲಿಯನ್ ಡಾಲರುಗಳು) ಶೇಕಡಾ 21 ರಷ್ಟನ್ನು (67.69 ಬಿಲಿಯನ್ ಡಾಲರುಗಳು) ಈ RCEP ದೇಶಗಳಿಗೆ ಮಾಡುತ್ತಿದೆ.

ಒಟ್ಟಾಗಿ ಭಾರತ ಜಗತ್ತಿನ ದೇಶಗಳೊಡನೆ 2018-19 ರಲ್ಲಿ ಒಟ್ಟು 186 ಬಿಲಿಯನ್ ಡಾಲರುಗಳಷ್ಟು ವ್ಯಾಪಾರದ ಕೊರತೆ ಅನುಭವಿಸುತ್ತಿದೆ.

ಇದೇ ಟೇಬಲಿನಲ್ಲಿ ಭಾರತ ಚೀನಾ ಜೊತೆ ಹೊಂದಿರುವ 53.5 ಬಿಲಿಯನ್ ಡಾಲರುಗಳಷ್ಟು ಭಾರೀ ವ್ಯಾಪಾರದ ಕೊರತೆಯನ್ನು ಗಮನಿಸಿ. ಜೊತೆಗೆ ಇಂಡೋನೇಷಿಯ, ಮಲೇಷ್ಯಾ, ಥೈಲಾಂಡಿನಂಥ ದೇಶಗಳ ಜತೆಗಿನ ವ್ಯಾಪಾರದ ಕೊರತೆಯನ್ನೂ ನೋಡಿ.

ಚಿತ್ರಕೃಪೆ: ಎಸ್‌ಬಿಐ ಇಂಡಿಯಾ

ಇನ್ನು ಎರಡನೇ ಟೇಬಲನ್ನು ಗಮನಿಸಿದಾಗ ಭಾರತ ವ್ಯವಸಾಯೋತ್ಪನ್ನಗಳು, ಟೆಕ್ಟ್ಸ್ಟೈಲ್ಸ್, ಮುತ್ತು ಮತ್ತು ಆಭರಣಗಳನ್ನು ಬಿಟ್ಟು ಉಳಿದೆಲ್ಲ ಉತ್ಪನ್ನಗಳಲ್ಲೂ ಇತರ ದೇಶಗಳ ಜತೆ ವ್ಯಾಪಾರ ಕೊರತೆ ಎದುರಿಸುತ್ತಿದೆ. ಮೇಲಿನ ಮೂರೇ ಮೂರು ಉತ್ಪನ್ನಗಳಲ್ಲಿ ಭಾರತ ಹೆಚ್ಚುವರಿ ವ್ಯಾಪಾರ ಹೊಂದಿದ್ದರೂ ಆಮದು ರಫ್ತಿನ ಅಂತರ ತುಂಬ ಕಡಿಮೆಯಿರುವುದು ಕಾಣುತ್ತದೆ. ಅದರರ್ಥ RCEP ಬಂದರೆ ಈ ಮೂರು ಉತ್ಪನ್ನಗಳಲ್ಲೂ ಭಾರತ ಕೊರತೆ ಎದುರಿಸಬೇಕಾಗುತ್ತದೆ. ಜೊತೆಗೆ, ತಯಾರಿಕಾ ಉತ್ಪನ್ನಗಳು (manufacturing goods), ಎಲೆಕ್ಟ್ರಾನಿಕ್ ಗೂಡ್ಸ್, ಕೆಮಿಕಲ್ಸ್ ಯಾವುದನ್ನೇ ನೋಡಿದರೂ ಭಾರತ RCEP ದೇಶಗಳ ಜತೆ ಭಾರೀ ವ್ಯಾಪಾರದ ಕೊರತೆ ಹೊಂದಿದೆ.

ಹೀಗೆ ನಾವು ನೋಡಿದಾಗ ಭಾರತ ತಾನು ವಿವಿಧ ಉತ್ಪನ್ನಗಳನ್ನು ಬೇರೆ ದೇಶಗಳಿಗೆ ರಫ್ತು ಮಾಡುವುದಕ್ಕಿಂತ ಮೂರು ಪಟ್ಟು ಹೆಚ್ಚಿಗೆ ಬೇರೆ ದೇಶದ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುತ್ತಿರುವುದು ನಮಗೆ ಗೊತ್ತಾಗುತ್ತದೆ.

ಇನ್ನು ಇಂಥಾ ಪರಿಸ್ಥಿತಿಯಲ್ಲಿ RCEP ಗೆ ಸಹಿ ಹಾಕಿದರೆ ಈ ವ್ಯಾಪಾರ ಕೊರತೆ ಮತ್ತಷ್ಟು ಹೆಚ್ಚಿ ಭಾರತ ಹೊರದೇಶಗಳ ಉತ್ಪನ್ನಗಳಿಗೆ ಇನ್ನೂ ದೊಡ್ಡ ಮಾರುಕಟ್ಟೆಯಾಗುವುದು ಖಚಿತ.

ಹೀಗೆ ತಾನಿನ್ನೂ ಇತರೆ ಸದಸ್ಯ ದೇಶಗಳ ಜತೆ ಸ್ಪರ್ಧಾತ್ಮಕತೆಯಲ್ಲಿ ಹಿಂದೆ ಬಿದ್ದಿರುವುದರಿಂದ ಭಾರತ ಸರ್ಕಾರ ಅಂದರೆ ಪ್ರಧಾನಿ ಮೋದಿಯವರು (ಈಗ ಸರ್ಕಾರ ಅಂದರೆ ಮೋದಿ ಅನ್ನುವಂತಾಗಿದೆ) ಈಗ ಸದ್ಯಕ್ಕೆ RCEPಗೆ ಸಹಿ ಹಾಕಲು ನಿರಾಕರಿಸಿದ್ದಾರೆಯೇ ಎಂದು ನೋಡಿದರೆ ವಾಸ್ತವ ಹಾಗೆ ಕಾಣಿಸುವುದಿಲ್ಲ.

ಯಾಕೆಂದರೆ, ಇವತ್ತಿಗೂ ಖಅಇPಯ ಯಾವ್ಯಾವ ನಿಯಮಗಳಿಗೆ ಸಂಬಂಧಿಸಿದಂತೆ ಸರ್ಕಾರಕ್ಕೆ ಒಪ್ಪಿಗೆಯಿಲ್ಲ ಎಂಬುದನ್ನು ಕೇಂದ್ರ ಸರ್ಕಾರ ನಮ್ಮ ನಾಗರಿಕರಿಗಾಗಲೀ ಅಥವಾ ಕನಿಷ್ಟ ನಮ್ಮ ಸಂಸದರಿಗಾಗಲೀ ಏನನ್ನೂ ತಿಳಿಸಿಲ್ಲ.

ಇದನ್ನೂ ಓದಿ: ಭಾರತದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯ ಮೇಲೆ RCEP ಪರಿಣಾಮಗಳು

ನಮ್ಮ ದೇಶದ ಹಲವಾರು ರೈತ ಸಂಘಟನೆಗಳು, ಕಾರ್ಮಿಕ ಸಂಘಟನೆಗಳು ಮತ್ತು ಹಲವು ಜನಪರ ಗುಂಪುಗಳು RCEP ಯ ಬಗ್ಗೆ ಜನರನ್ನು ಎಚ್ಚರಿಸಿ ಹಲವು ಪ್ರತಿಭಟನೆಗಳ ಮೂಲಕ ಸರ್ಕಾರದ ಮೇಲೆ ಒತ್ತಡ ಹಾಕಿದ್ದು ಸರ್ಕಾರ RCEP ಗೆ ಸಹಿ ಹಾಕದಿರಲು ಮುಖ್ಯ ಕಾರಣ.

ಹಾಗೆಯೇ, ಹಲವು ಸಣ್ಣ ಹಾಗೂ ಮಧ್ಯಮ ಗಾತ್ರದ ಕೈಗಾರಿಕಾ ಸಂಘಟನೆಗಳು, ಆಟೋಮೋಬೈಲ್ ಉದ್ದಿಮೆಯ ಸಂಘಟನೆಗಳು, ಟೆಕ್ಟ್ಸ್ಟೈಲ್ ಉದ್ದಿಮೆ ಸಂಘಟನೆಗಳು ಸರ್ಕಾರದ ಮೇಲೆ ಹಾಕಿದ ಒತ್ತಡವೂ ಸರ್ಕಾರ ಈಗ RCEP ಗೆ ಸಹಿ ಹಾಕದಂತೆ ತಡೆದಿದೆ.

ಆದರೆ ಈಗಾಗಲೇ CII ( Confederation of Indian Industries) ಮುಂದೆ ಭಾರತ RCEPಗೆ ಸಹಿ ಹಾಕಬೇಕಾಗುತ್ತದೆ ಎಂದು ಹೇಳಿದೆ. ಯಾಕೆಂದರೆ ಈ RCEP ಯಿಂದ ರೈತರಿಗೆ ಮತ್ತು ಸಣ್ಣ ಮಧ್ಯಮ ಕೈಗಾರಿಕೆಗಳಿಗೆ ತೊಂದರೆಯಾಗುತ್ತದೆಯೇ ಹೊರತು ಬೃಹತ್ ಉದ್ಯಮಿಗಳಿಗೆ RCEP ಯಲ್ಲಿ ಲಾಭವೇ ಆಗುತ್ತದೆ. ಯಾಕೆಂದರೆ ರಿಲಯನ್ಸ್, ಅದಾನಿಯಂತಹ ಉದ್ಯಮಿಗಳು RCEP ಯ ಯಾವ ದೇಶದಲ್ಲಿ ಅನುಕೂಲವಿದೆಯೋ ಅಲ್ಲಿಯೇ ತಮ್ಮ ಉತ್ಪಾದನಾ ಘಟಕ ಸ್ಥಾಪಿಸಿ ಅಲ್ಲಿಂದಲೇ ಭಾರತ ಮತ್ತು ಇತರೆ ದೇಶಗಳಿಗೆ ರಫ್ತು ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ಅಥವಾ ಬೇರೆ ದೇಶಗಳಿಂದ ಕಡಿಮೆ ಬೆಲೆಗೆ ಖರೀದಿಸಿ ಭಾರತದಲ್ಲಿ ಲಾಭಕ್ಕೆ ಮಾರಿ ಮಾರುಕಟ್ಟೆ ಏಕಸ್ವಾಮ್ಯ ಗಳಿಸುವ ಸಾಮರ್ಥ್ಯ ಹೊಂದಿದ್ದಾರೆ.

ಈ ರೀತಿಯ ಬೃಹತ್ ಉದ್ದಿಮೆಗಳ ಒತ್ತಡ ಮತ್ತು ಅಂತಾರಾಷ್ಟ್ರೀಯ ಒತ್ತಡದಿಂದಾಗಿ ಕೇಂದ್ರ ಸರ್ಕಾರ ಮುಂದಿನ ದಿನಗಳಲ್ಲಿ ( ಬಹುಶಃ ಇನ್ನು ಮೂರು ತಿಂಗಳುಗಳಲ್ಲಿ – ಫೆಬ್ರವರಿ 2020) RCEP ಗೆ ಸಹಿ ಹಾಕುವ ಸಾಧ್ಯತೆ ದಟ್ಟವಾಗಿದೆ. ಹಾಗೂ ಅದಕ್ಕೆ ಪೂರಕವಾಗಿ ಜನಾಭಿಪ್ರಾಯ ರೂಪಿಸುವ ಕೆಲಸವೂ ಸದ್ದಿಲ್ಲದೆ ನಡೆಯುವ ಸಾಧ್ಯತೆಗಳೂ ಇವೆ.

ಆದುದರಿಂದ, ಈ ತಾತ್ಕಾಲಿಕ ಜಯದಲ್ಲಿ ಮೈಮರೆಯದೆ ಈ ದೇಶದ ರೈತರು, ಕಾರ್ಮಿಕರು, ಪತ್ರಕರ್ತರು, ಬರಹಗಾರರು, ಕಲಾವಿದರು ಒಟ್ಟಾರೆ ಈ ದೇಶದ ಬಗ್ಗೆ ಕಳಕಳಿ ಇರುವವರೆಲ್ಲರೂ ಸರ್ಕಾರದ ಮೇಲೆ RCEP ಗೆ ಮುಂದೆಯೂ ಸಹಿ ಹಾಕದಂತೆ ಪರಿಣಾಮಕಾರಿಯಾಗಿ ಒತ್ತಡ ಹಾಕುವ, ಹೋರಾಟ ರೂಪಿಸುವ ಅವಶ್ಯಕತೆಯಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...