Homeಅಂಕಣಗಳುಸಾಣೆಹಳ್ಳಿ ಶ್ರೀಗಳು ಸರಿಯಾದವರಿಗೆ ಪ್ರಶಸ್ತಿ ಕೊಡಿ ಎಂದರಲ್ಲಾ..

ಸಾಣೆಹಳ್ಳಿ ಶ್ರೀಗಳು ಸರಿಯಾದವರಿಗೆ ಪ್ರಶಸ್ತಿ ಕೊಡಿ ಎಂದರಲ್ಲಾ..

- Advertisement -
- Advertisement -

| ಯಾಹೂ |

ಹಾದರಕ್ಕೆ ಹುಟ್ಟಿದವರು ಯಾರಿಗೂ ಬೇಡವಾಗಿ ಅನಾಥಾಶ್ರಮ ಸೇರುವಂತೆ, ಅಡ್ನಾಡಿ ಕುಮಾರಣ್ಣನ ಕೊಟ್ಟಿಗೆಯಿಂದ ಕುಲಗೇಡಿ ಎಡೂರಪ್ಪನ ದೊಡ್ಡಿ ಸೇರಿದ್ದ ಅನರ್ಹ ಶಾಸಕರು ಈಗ ಎಡೂರಪ್ಪನಿಗೂ ಬೇಡವಾಗಿದ್ದಾರಂತಲ್ಲಾ. ಬಿಜೆಪಿ ಹುಟ್ಟಿದ ಕಾಲದಿಂದಲೂ ಅವುಗಳ ಹುಟ್ಟುಗುಣವೇನೆಂದರೆ, ನಂಬಿಸಿ ಮೋಸ ಮಾಡುವುದು. ನಿಮ್ಮ ಆಸ್ತಿ ನೋಡಿ ಹತ್ತಿರ ಬರುತ್ತವೆ. ಅದು ಖಾಲಿಯಾಗುತ್ತಿದ್ದಂತೆ ಜಾಗ ಖಾಲಿ ಮಾಡುತ್ತವೆ. ನಿಮ್ಮ ಖ್ಯಾತಿಯನ್ನು ನೋಡಿ ಹತ್ತಿರ ಬರುತ್ತವೆ. ಅಪಖ್ಯಾತಿ ಅಂಟಿಸಿ ಮಾಯವಾಗುತ್ತವೆ. ನಿಮ್ಮ ತುಂಬಿದ ಜೇಬನ್ನು ಗ್ರಹಿಸಿ ಜೊತೆಯಾಗುತ್ತವೆ. ಖಾಲಿ ಜೇಬಾದ ಕೂಡಲೇ ಮಾತು ಬಿಡುತ್ತವೆ. ಹಾದರ ಮಾಡುತ್ತವೆ ಪಾತಿವ್ರತ್ಯ ಬೋಧಿಸುತ್ತವೆ. ಭ್ರಷ್ಟ ಕೆಲಸ ಮಾಡುತ್ತಲೇ ಪ್ರಾಮಾಣಿಕತೆ ಬೋಧಿಸುತ್ತವೆ. ಪಾರ್ಟಿ ನಿಷ್ಠೆ ಬೋಧಿಸುತ್ತವೆ. ಬೇರೆ ಪಾರ್ಟಿಯಿಂದ ಬಾಡಿಗಳನ್ನ ಯಾಮಾರಿಸುತ್ತವೆ. ಈಗ ಸಂದಿಗ್ಧಕ್ಕೆ ಸಿಕ್ಕ ಇಂತಹ ಬಾಡಿಗಳು ಎಡೂರಪ್ಪನ ಮಾತಿಂದ ಯಕ್ಕ ಎದ್ದು ಹೋಗಲಿವೆಯಂತಲ್ಲಾ. ಎಡೂರಪ್ಪನ ಅಂತಹ ಮಾತೇನು ಎಂದರೆ, ಅನರ್ಹ ಶಾಸಕರಿಗೂ ನಮಗೂ ಯಾವ ಸಂಬಂಧವೂ ಇಲ್ಲ. ಅವರು ಎಲ್ಲಿಗಾದರೂ ಹೋಗಲಿ. ಯಾವ ಪಕ್ಷವನ್ನಾದರೂ ಸೇರಲಿ ಎಂಬುದಾಗಿದೆಯಲ್ಲ. ನಂಬಿಕೆದ್ರೋಹವೆಂದರೆ ಇದೇ ಅಲ್ಲವೆ, ಥೂತ್ತೇರಿ.

ಬಿಜೆಪಿಗಳ ಆಮಿಷ ಮತ್ತು ಕುತಂತ್ರಗಳಿಗೆ ಬಗ್ಗದ ಡಿ.ಕೆ. ಶಿವಕುಮಾರ್ ಇಡಿ ಟ್ರೀಟ್‌ಮೆಂಟುಗಳಿಗೆ ಒಳಗಾಗಿ ಜೈಲುವಾಸ ಅನುಭವಿಸಿ ಬಂದಾಗ ವಿಮಾನ ನಿಲ್ದಾಣದಿಂದ ಹೊರಬರುತ್ತಿದ್ದಂತೆ ಸಿಕ್ಕ ಭವ್ಯ ಸ್ವಾಗತ ನೋಡಿದ ಬಿಜೆಪಿಗಳು ಅಪರಾಧ ಮಾಡಿಬಂದವರನ್ನು ಹೀಗೆ ಸ್ವಾಗತಿಸುವುದೆ ಎಂದು ಉದ್ಘಾರ ತೆಗೆದವಲ್ಲಾ. ತಮ್ಮನ್ನು ತಾವು ಎಂದೂ ಬಗ್ಗಿ ನೋಡಿಕೊಳ್ಳದ ಚೆಡ್ಡಿಗಳು ತಮ್ಮವರು ಮಾಡಿದ ಎಲ್ಲ ಅಪರಾಧಗಳ ಸಮಯದಲ್ಲಿ ಪಟಾಕಿ ಹೊಡೆದು ಸಂಭ್ರಮಿಸಿವೆ. ಕೊಲೆಗಾರರು ಬಿಡುಗಡೆಯಾದಾಗ, ವಿಜಯೋತ್ಸವ ಆಚರಿಸಿವೆ. ಗಾಂಧಿ ಕೊಂದವನಿಗೆ ಗುಡಿ ಕಟ್ಟಲು ಹೊರಟಿವೆ. ಇದೆಲ್ಲಕ್ಕಿಂತಲೂ ಮುಖ್ಯವಾಗಿ ಜೈಲಿಗೆ ಹೋಗಿ ಬಂದ ಎಡೂರಪ್ಪನನ್ನು ಕಂಡ ಕೂಡಲೇ ಲಾಗಾ ಹೊಡೆದಿದ್ದವು. ಆಗ ಮನೆಗೆ ಬಂದ ಎಡೂರಪ್ಪನನ್ನ ನೋಡಿದ ಅವರ ಮೊಮ್ಮಗಳು ’ತಾತ ಜೈಲಿಂದ ಬಂತು ತಾತ ಜೈಲಿಂದ ಬಂತು’ ಎಂದು ಕೂಗಿಕೊಂಡಿತ್ತು. ಸಂಬಂಧಿಕರು ಸುಮ್ಮನಿರಿಸಲು ಯತ್ನಿಸಿದರೂ ಮಗು ಮುಗಿಲು ಮುಟ್ಟುವಂತೆ ಕೂಗುತ್ತ ಸಂಭ್ರಮಿಸಿತಂತಲ್ಲಾ ಥೂತ್ತೇರಿ.

ರಾಜ್ಯೋತ್ಸವದಂದು ಕೊಡಮಾಡುವ ಪ್ರಶಸ್ತಿಗಳನ್ನು ಫಲಾನುಭವಿಗಳು ಪಡೆದಾಗಿದೆ. ಇನ್ನೇನಿದ್ದರೂ ಸರಕಾರದ ಚೆಕ್ಕುಗಳು ಕ್ಯಾಷಾಗಬೇಕಷ್ಟೆ. ಇಂತಿರುವಾಗ ಸಾಣೇಹಳ್ಳಿಯ ಪಂಡಿತಾರಾಧ್ಯ ಶ್ರೀಗಳು ಪ್ರಶಸ್ತಿಗಳನ್ನ ಕೊಡುವಾಗ ವ್ಯಕ್ತಿಯ ನೈತಿಕ ಜೀವನ ಅಳೆದುಕೊಡಬೇಕೆಂದು ಹೇಳಿದ್ದಾರಲ್ಲಾ. ಈ ಮಾತಿನ ಜಾಡನ್ನ ಹಿಡಿದು ನೋಡಿದಾಗ, ಸಿದ್ಧರಾಮಯ್ಯನವರ ಸರಕಾರ ನೇಮಿಸಿದ ನಾಗಮೋಹನದಾಸ್ ರಚಿಸಿ ಕೊಟ್ಟ ಗೈಡ್‌ಲೈನಿನ ಗಡಿ ಮೀರಿದಂತೆ ಕಾಣುತ್ತಿದೆಯಲ್ಲಾ. ಇದಕ್ಕೆ ಸಾಕ್ಷಾಧಾರವಾಗಿ, ಆಯ್ಕೆ ಕಮಿಟಿಯಲ್ಲಿದ್ದ ನಿರುಪಮಾ ಎಂಬುವವರು ನಾನು ಹಗಲುರಾತ್ರಿ ಎಡೂರಪ್ಪನ ಮನೆಗೂ ಸಿ.ಟಿ. ರವಿ ಮನೆಗೂ ಓಡಾಡಿ ಐದು ಜನರಿಗೆ ಪ್ರಶಸ್ತಿ ಕೊಡಿಸಿದೆ ಎಂದಿದ್ದಾರಲ್ಲಾ. ನಿಜಕ್ಕೂ ಇದೊಂದು ಧೀರೋದಾತ್ತ ಸಾಹಸ. ಮುಖ್ಯಮಂತ್ರಿ, ಸಂಸ್ಕೃತಿ ಸಚಿವ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಕಮಿಟಿ ಮೀರಿ ಐದು ಜನರಿಗೆ ಪ್ರಶಸ್ತಿ ಕೊಡಿಸಿದ ನಿರುಪಮಾ ಖಂಡಿತ ನಿರುಪಯುಕ್ತ ಮಹಿಳೆಯಲ್ಲ. ಮುಂದಿನ ವರ್ಷ ಪ್ರಶಸ್ತಿ ಬೇಕಾದವರು ನಿರುಪಮಾನನ್ನು ಹಿಡಿದು ನಿಯತ್ತಿನಿಂದ ನೋಡಿಕೊಂಡರೆ, ನಿಮಗೂ ಪ್ರಶಸ್ತಿ ಗ್ಯಾರಂಟಿ ಎಂದು ಫಲಾನುಭವಿಗಳು ಹೇಳಿಲ್ಲವಂತಲ್ಲಾ, ಥೂತ್ತೇರಿ.

ತನಗೇನೇ ಇನ್ನೂ ರಾಜ್ಯೋತ್ಸವ ಪ್ರಶಸ್ತಿ ಕೊಟ್ಟಿಲ್ಲ ಎಂದು ಪ್ರತಿಭಟಿಸಿದ ಸತ್ಯನಾರಾಯಣ ಎಂಬ ಆಸಾಮಿ, ಸರಕಾರಕ್ಕೆ ತರಾಟೆ ತೆಗೆದುಕೊಂಡಿದ್ದಲ್ಲದೆ, ಕೋರ್ಟಿಗೂ ಹೋಗಿದ್ದರಲ್ಲಾ. ಆ ಕಾರಣವಾಗಿ ನಾಗಮೋಹನ ದಾಸ್ ಕಮಿಟಿ ನೇಮಕವಾಗಿ ಪ್ರಶಸ್ತಿ ಸಂಖ್ಯೆ ರಾಜ್ಯೋತ್ಸವ ವರ್ಷದ ಸಂಖ್ಯೆಗೆ ಇಳಿದಿದ್ದು ಮತ್ತು ಅರವತ್ತು ವರ್ಷ ತುಂಬಿರಬೇಕೆಂಬ ನಿಯಮ ಬಂದಿದ್ದು. ಇದಿಲ್ಲದಿದ್ದರೆ, ಈ ಬಿಜೆಪಿಗಳು ಪ್ರತಿ ಜಿಲ್ಲೆಯ ಕನಿಷ್ಟ ಹತ್ತು ಚಡ್ಡಿಗಳಿಗೆ ಪ್ರಶಸ್ತಿ ಕೊಟ್ಟು ಗಬ್ಬೆಬ್ಬಿಸುತ್ತಿದ್ದರು. ಕಳೆದ ಬಾರಿ ಪ್ರಶಸ್ತಿ ವಿಜೇತರ ಪಟ್ಟಿ ತರಿಸಿಕೊಂಡ ಡಿ.ಕೆ. ಶಿವಕುಮಾರ್, ಅತ್ಯಂತ ಯೋಗ್ಯರಾದ ಹತ್ತು ಜನರನ್ನು ತೆಗೆದು ಬಿಸಾಡಿ, ತನ್ನ ಕಡೆಯ ಹತ್ತು ಹೆಸರನ್ನ ಸೇರಿಸಿ ಪ್ರಕಟಿಸಿದ್ದರು. ಇದರಲ್ಲಿ ರಸ್ತೆ ಮಾಡಿದವರು, ಡಿಕೆಶಿಗೆ ಪಾಠ ಹೇಳಿದವರು ಇದ್ದರು. ಈಗ ಸಿ.ಟಿ. ರವಿ ಇನ್ನೂ ಮುಂದೆಹೋಗಿ ತನಗೆ ಹೊಟೇಲಿನಲ್ಲಿ ರೂಮು ಕೊಟ್ಟವನಿಗೊಂದು ಪ್ರಶಸ್ತಿ ಕೊಟ್ಟಿದ್ದಾನಂತಲ್ಲ. ಮುಂದಿನ ವರ್ಷ ರವಿ ಹೆಂಡತಿಯನ್ನು ತುಂಬಾ ಸಮಾರಂಭಗಳಿಗೆ ಅತಿಥಿಯಾಗಿ ಕರೆದವನನ್ನು ಕರೆದು ರಾಜ್ಯೋತ್ಸವ ಪ್ರಶಸ್ತಿ ಕೊಡುವುದು ಗ್ಯಾರಂಟಿ ಎಂದು ಚಿಕ್ಕಮಗಳೂರು ಜನ ಚಿಕ್ಕದಾಗಿ ಬಾಯಿ ತೆರೆದು ದೊಡ್ಡದಾಗಿ ನಕ್ಕರಂತಲ್ಲಾ, ಥೂತ್ತೇರಿ.

ಹಾಗೆ ನೋಡಿದರೆ ಸಾಣೆಹಳ್ಳಿ ಶ್ರೀಗಳು ಹೇಳಿದ್ದಕ್ಕೆ ಸಾಕ್ಷಾಧಾರಗಳು ದಾವಣಗೆರೆ ಜಿಲ್ಲೆಯಲ್ಲೇ ಸಿಗುತ್ತದಂತಲ್ಲಾ. ದಾವಣಗೆರೆ ಜಿಲ್ಲೆಯ ಚನ್ನಪ್ಪನವರಿಗೆ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಲಭ್ಯವಾಗಿದೆ. ಸದಾ ಸಮಾಜ ಸೇವೆಗಾಗಿ ದುಡಿಯುವ ಚನ್ನಪ್ಪನವರಿಗೆ ರಾಜ್ಯೋತ್ಸವ ಪ್ರಶಸ್ತಿ ಎಂದೊ ಹುಡುಕಿಕೊಂಡು ಬರಬೇಕಿತ್ತು. ಈ ಚೆನ್ನಪ್ಪನವರ ಸಮಾಜ ಸೇವೆಯಲ್ಲಿ ಪ್ರಶಸ್ತಿಗೆ ಯೋಗ್ಯವಾದ ಸಾಧನೆಯಾವುದೆಂದರೆ, ಯಾರದ್ದೊ ಮನೆಯಲ್ಲಿ ಸಂತಾನಭಾಗ್ಯವಿಲ್ಲ. ಆಗ ಹೋರಿ ಕರುವಿನಂತೆ ಓಡಾಡುತ್ತಿದ್ದ ಚನ್ನಪ್ಪನನ್ನು ಕರೆದ ಅಜ್ಜಿ ’ಚನ್ನಪ್ಪ ನನ್ನ ಮೊಮ್ಮಗಳಿಗೆ ಮಗು ಇಲ್ಲ ಕಣಪ್ಪ. ಅದರ ಹೊಟ್ಟೇಲಿ ಯಂತದಾರ ಹುಳ ನೋಡಿ ಸಾಯಬೇಕು ಅನ್ನಿಸಿದೆ. ಮಾಡಿಕೊಡಪ್ಪ’ ಎಂದಿತಂತೆ. ಕರಗಿಹೋದ ಚನ್ನಪ್ಪ ನಮ್ಮ ಎಸ್ಸೆಲ್ ಭೈರಪ್ಪ ಹೇಳಿದಂತಹ ನಿಯೋಗ ಸಾಧನೆಯಿಂದ ಅಜ್ಜಿ ಮನೆ ವಂಶ ಬೆಳೆಸಿದರಂತೆ. ಇದನ್ನು ನಾವು ಚನ್ನಪ್ಪನವರ ಆತ್ಮಕತೆಯಿಂದ ತೆಗೆದು ದಾಖಲಿಸುತ್ತಿದ್ದೇವೆಯೇ ಹೊರತು, ನಮ್ಮ ಕಿಡಿಗೇಡಿತನದಿಂದಲ್ಲ. ಅಂತೂ ಚಡ್ಡಿಗಳು ಹಂಚುವ ಪ್ರಶಸ್ತಿಗಳು ಚೆಡ್ಡಿ ಸಮಸ್ಯೆಯನ್ನು ಪರಿಗಣಿಸುತ್ತಿವೆಯಲ್ಲಾ, ಥೂತ್ತೇರಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...