Homeಅಂಕಣಗಳುಸಾಣೆಹಳ್ಳಿ ಶ್ರೀಗಳು ಸರಿಯಾದವರಿಗೆ ಪ್ರಶಸ್ತಿ ಕೊಡಿ ಎಂದರಲ್ಲಾ..

ಸಾಣೆಹಳ್ಳಿ ಶ್ರೀಗಳು ಸರಿಯಾದವರಿಗೆ ಪ್ರಶಸ್ತಿ ಕೊಡಿ ಎಂದರಲ್ಲಾ..

- Advertisement -
- Advertisement -

| ಯಾಹೂ |

ಹಾದರಕ್ಕೆ ಹುಟ್ಟಿದವರು ಯಾರಿಗೂ ಬೇಡವಾಗಿ ಅನಾಥಾಶ್ರಮ ಸೇರುವಂತೆ, ಅಡ್ನಾಡಿ ಕುಮಾರಣ್ಣನ ಕೊಟ್ಟಿಗೆಯಿಂದ ಕುಲಗೇಡಿ ಎಡೂರಪ್ಪನ ದೊಡ್ಡಿ ಸೇರಿದ್ದ ಅನರ್ಹ ಶಾಸಕರು ಈಗ ಎಡೂರಪ್ಪನಿಗೂ ಬೇಡವಾಗಿದ್ದಾರಂತಲ್ಲಾ. ಬಿಜೆಪಿ ಹುಟ್ಟಿದ ಕಾಲದಿಂದಲೂ ಅವುಗಳ ಹುಟ್ಟುಗುಣವೇನೆಂದರೆ, ನಂಬಿಸಿ ಮೋಸ ಮಾಡುವುದು. ನಿಮ್ಮ ಆಸ್ತಿ ನೋಡಿ ಹತ್ತಿರ ಬರುತ್ತವೆ. ಅದು ಖಾಲಿಯಾಗುತ್ತಿದ್ದಂತೆ ಜಾಗ ಖಾಲಿ ಮಾಡುತ್ತವೆ. ನಿಮ್ಮ ಖ್ಯಾತಿಯನ್ನು ನೋಡಿ ಹತ್ತಿರ ಬರುತ್ತವೆ. ಅಪಖ್ಯಾತಿ ಅಂಟಿಸಿ ಮಾಯವಾಗುತ್ತವೆ. ನಿಮ್ಮ ತುಂಬಿದ ಜೇಬನ್ನು ಗ್ರಹಿಸಿ ಜೊತೆಯಾಗುತ್ತವೆ. ಖಾಲಿ ಜೇಬಾದ ಕೂಡಲೇ ಮಾತು ಬಿಡುತ್ತವೆ. ಹಾದರ ಮಾಡುತ್ತವೆ ಪಾತಿವ್ರತ್ಯ ಬೋಧಿಸುತ್ತವೆ. ಭ್ರಷ್ಟ ಕೆಲಸ ಮಾಡುತ್ತಲೇ ಪ್ರಾಮಾಣಿಕತೆ ಬೋಧಿಸುತ್ತವೆ. ಪಾರ್ಟಿ ನಿಷ್ಠೆ ಬೋಧಿಸುತ್ತವೆ. ಬೇರೆ ಪಾರ್ಟಿಯಿಂದ ಬಾಡಿಗಳನ್ನ ಯಾಮಾರಿಸುತ್ತವೆ. ಈಗ ಸಂದಿಗ್ಧಕ್ಕೆ ಸಿಕ್ಕ ಇಂತಹ ಬಾಡಿಗಳು ಎಡೂರಪ್ಪನ ಮಾತಿಂದ ಯಕ್ಕ ಎದ್ದು ಹೋಗಲಿವೆಯಂತಲ್ಲಾ. ಎಡೂರಪ್ಪನ ಅಂತಹ ಮಾತೇನು ಎಂದರೆ, ಅನರ್ಹ ಶಾಸಕರಿಗೂ ನಮಗೂ ಯಾವ ಸಂಬಂಧವೂ ಇಲ್ಲ. ಅವರು ಎಲ್ಲಿಗಾದರೂ ಹೋಗಲಿ. ಯಾವ ಪಕ್ಷವನ್ನಾದರೂ ಸೇರಲಿ ಎಂಬುದಾಗಿದೆಯಲ್ಲ. ನಂಬಿಕೆದ್ರೋಹವೆಂದರೆ ಇದೇ ಅಲ್ಲವೆ, ಥೂತ್ತೇರಿ.

ಬಿಜೆಪಿಗಳ ಆಮಿಷ ಮತ್ತು ಕುತಂತ್ರಗಳಿಗೆ ಬಗ್ಗದ ಡಿ.ಕೆ. ಶಿವಕುಮಾರ್ ಇಡಿ ಟ್ರೀಟ್‌ಮೆಂಟುಗಳಿಗೆ ಒಳಗಾಗಿ ಜೈಲುವಾಸ ಅನುಭವಿಸಿ ಬಂದಾಗ ವಿಮಾನ ನಿಲ್ದಾಣದಿಂದ ಹೊರಬರುತ್ತಿದ್ದಂತೆ ಸಿಕ್ಕ ಭವ್ಯ ಸ್ವಾಗತ ನೋಡಿದ ಬಿಜೆಪಿಗಳು ಅಪರಾಧ ಮಾಡಿಬಂದವರನ್ನು ಹೀಗೆ ಸ್ವಾಗತಿಸುವುದೆ ಎಂದು ಉದ್ಘಾರ ತೆಗೆದವಲ್ಲಾ. ತಮ್ಮನ್ನು ತಾವು ಎಂದೂ ಬಗ್ಗಿ ನೋಡಿಕೊಳ್ಳದ ಚೆಡ್ಡಿಗಳು ತಮ್ಮವರು ಮಾಡಿದ ಎಲ್ಲ ಅಪರಾಧಗಳ ಸಮಯದಲ್ಲಿ ಪಟಾಕಿ ಹೊಡೆದು ಸಂಭ್ರಮಿಸಿವೆ. ಕೊಲೆಗಾರರು ಬಿಡುಗಡೆಯಾದಾಗ, ವಿಜಯೋತ್ಸವ ಆಚರಿಸಿವೆ. ಗಾಂಧಿ ಕೊಂದವನಿಗೆ ಗುಡಿ ಕಟ್ಟಲು ಹೊರಟಿವೆ. ಇದೆಲ್ಲಕ್ಕಿಂತಲೂ ಮುಖ್ಯವಾಗಿ ಜೈಲಿಗೆ ಹೋಗಿ ಬಂದ ಎಡೂರಪ್ಪನನ್ನು ಕಂಡ ಕೂಡಲೇ ಲಾಗಾ ಹೊಡೆದಿದ್ದವು. ಆಗ ಮನೆಗೆ ಬಂದ ಎಡೂರಪ್ಪನನ್ನ ನೋಡಿದ ಅವರ ಮೊಮ್ಮಗಳು ’ತಾತ ಜೈಲಿಂದ ಬಂತು ತಾತ ಜೈಲಿಂದ ಬಂತು’ ಎಂದು ಕೂಗಿಕೊಂಡಿತ್ತು. ಸಂಬಂಧಿಕರು ಸುಮ್ಮನಿರಿಸಲು ಯತ್ನಿಸಿದರೂ ಮಗು ಮುಗಿಲು ಮುಟ್ಟುವಂತೆ ಕೂಗುತ್ತ ಸಂಭ್ರಮಿಸಿತಂತಲ್ಲಾ ಥೂತ್ತೇರಿ.

ರಾಜ್ಯೋತ್ಸವದಂದು ಕೊಡಮಾಡುವ ಪ್ರಶಸ್ತಿಗಳನ್ನು ಫಲಾನುಭವಿಗಳು ಪಡೆದಾಗಿದೆ. ಇನ್ನೇನಿದ್ದರೂ ಸರಕಾರದ ಚೆಕ್ಕುಗಳು ಕ್ಯಾಷಾಗಬೇಕಷ್ಟೆ. ಇಂತಿರುವಾಗ ಸಾಣೇಹಳ್ಳಿಯ ಪಂಡಿತಾರಾಧ್ಯ ಶ್ರೀಗಳು ಪ್ರಶಸ್ತಿಗಳನ್ನ ಕೊಡುವಾಗ ವ್ಯಕ್ತಿಯ ನೈತಿಕ ಜೀವನ ಅಳೆದುಕೊಡಬೇಕೆಂದು ಹೇಳಿದ್ದಾರಲ್ಲಾ. ಈ ಮಾತಿನ ಜಾಡನ್ನ ಹಿಡಿದು ನೋಡಿದಾಗ, ಸಿದ್ಧರಾಮಯ್ಯನವರ ಸರಕಾರ ನೇಮಿಸಿದ ನಾಗಮೋಹನದಾಸ್ ರಚಿಸಿ ಕೊಟ್ಟ ಗೈಡ್‌ಲೈನಿನ ಗಡಿ ಮೀರಿದಂತೆ ಕಾಣುತ್ತಿದೆಯಲ್ಲಾ. ಇದಕ್ಕೆ ಸಾಕ್ಷಾಧಾರವಾಗಿ, ಆಯ್ಕೆ ಕಮಿಟಿಯಲ್ಲಿದ್ದ ನಿರುಪಮಾ ಎಂಬುವವರು ನಾನು ಹಗಲುರಾತ್ರಿ ಎಡೂರಪ್ಪನ ಮನೆಗೂ ಸಿ.ಟಿ. ರವಿ ಮನೆಗೂ ಓಡಾಡಿ ಐದು ಜನರಿಗೆ ಪ್ರಶಸ್ತಿ ಕೊಡಿಸಿದೆ ಎಂದಿದ್ದಾರಲ್ಲಾ. ನಿಜಕ್ಕೂ ಇದೊಂದು ಧೀರೋದಾತ್ತ ಸಾಹಸ. ಮುಖ್ಯಮಂತ್ರಿ, ಸಂಸ್ಕೃತಿ ಸಚಿವ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಕಮಿಟಿ ಮೀರಿ ಐದು ಜನರಿಗೆ ಪ್ರಶಸ್ತಿ ಕೊಡಿಸಿದ ನಿರುಪಮಾ ಖಂಡಿತ ನಿರುಪಯುಕ್ತ ಮಹಿಳೆಯಲ್ಲ. ಮುಂದಿನ ವರ್ಷ ಪ್ರಶಸ್ತಿ ಬೇಕಾದವರು ನಿರುಪಮಾನನ್ನು ಹಿಡಿದು ನಿಯತ್ತಿನಿಂದ ನೋಡಿಕೊಂಡರೆ, ನಿಮಗೂ ಪ್ರಶಸ್ತಿ ಗ್ಯಾರಂಟಿ ಎಂದು ಫಲಾನುಭವಿಗಳು ಹೇಳಿಲ್ಲವಂತಲ್ಲಾ, ಥೂತ್ತೇರಿ.

ತನಗೇನೇ ಇನ್ನೂ ರಾಜ್ಯೋತ್ಸವ ಪ್ರಶಸ್ತಿ ಕೊಟ್ಟಿಲ್ಲ ಎಂದು ಪ್ರತಿಭಟಿಸಿದ ಸತ್ಯನಾರಾಯಣ ಎಂಬ ಆಸಾಮಿ, ಸರಕಾರಕ್ಕೆ ತರಾಟೆ ತೆಗೆದುಕೊಂಡಿದ್ದಲ್ಲದೆ, ಕೋರ್ಟಿಗೂ ಹೋಗಿದ್ದರಲ್ಲಾ. ಆ ಕಾರಣವಾಗಿ ನಾಗಮೋಹನ ದಾಸ್ ಕಮಿಟಿ ನೇಮಕವಾಗಿ ಪ್ರಶಸ್ತಿ ಸಂಖ್ಯೆ ರಾಜ್ಯೋತ್ಸವ ವರ್ಷದ ಸಂಖ್ಯೆಗೆ ಇಳಿದಿದ್ದು ಮತ್ತು ಅರವತ್ತು ವರ್ಷ ತುಂಬಿರಬೇಕೆಂಬ ನಿಯಮ ಬಂದಿದ್ದು. ಇದಿಲ್ಲದಿದ್ದರೆ, ಈ ಬಿಜೆಪಿಗಳು ಪ್ರತಿ ಜಿಲ್ಲೆಯ ಕನಿಷ್ಟ ಹತ್ತು ಚಡ್ಡಿಗಳಿಗೆ ಪ್ರಶಸ್ತಿ ಕೊಟ್ಟು ಗಬ್ಬೆಬ್ಬಿಸುತ್ತಿದ್ದರು. ಕಳೆದ ಬಾರಿ ಪ್ರಶಸ್ತಿ ವಿಜೇತರ ಪಟ್ಟಿ ತರಿಸಿಕೊಂಡ ಡಿ.ಕೆ. ಶಿವಕುಮಾರ್, ಅತ್ಯಂತ ಯೋಗ್ಯರಾದ ಹತ್ತು ಜನರನ್ನು ತೆಗೆದು ಬಿಸಾಡಿ, ತನ್ನ ಕಡೆಯ ಹತ್ತು ಹೆಸರನ್ನ ಸೇರಿಸಿ ಪ್ರಕಟಿಸಿದ್ದರು. ಇದರಲ್ಲಿ ರಸ್ತೆ ಮಾಡಿದವರು, ಡಿಕೆಶಿಗೆ ಪಾಠ ಹೇಳಿದವರು ಇದ್ದರು. ಈಗ ಸಿ.ಟಿ. ರವಿ ಇನ್ನೂ ಮುಂದೆಹೋಗಿ ತನಗೆ ಹೊಟೇಲಿನಲ್ಲಿ ರೂಮು ಕೊಟ್ಟವನಿಗೊಂದು ಪ್ರಶಸ್ತಿ ಕೊಟ್ಟಿದ್ದಾನಂತಲ್ಲ. ಮುಂದಿನ ವರ್ಷ ರವಿ ಹೆಂಡತಿಯನ್ನು ತುಂಬಾ ಸಮಾರಂಭಗಳಿಗೆ ಅತಿಥಿಯಾಗಿ ಕರೆದವನನ್ನು ಕರೆದು ರಾಜ್ಯೋತ್ಸವ ಪ್ರಶಸ್ತಿ ಕೊಡುವುದು ಗ್ಯಾರಂಟಿ ಎಂದು ಚಿಕ್ಕಮಗಳೂರು ಜನ ಚಿಕ್ಕದಾಗಿ ಬಾಯಿ ತೆರೆದು ದೊಡ್ಡದಾಗಿ ನಕ್ಕರಂತಲ್ಲಾ, ಥೂತ್ತೇರಿ.

ಹಾಗೆ ನೋಡಿದರೆ ಸಾಣೆಹಳ್ಳಿ ಶ್ರೀಗಳು ಹೇಳಿದ್ದಕ್ಕೆ ಸಾಕ್ಷಾಧಾರಗಳು ದಾವಣಗೆರೆ ಜಿಲ್ಲೆಯಲ್ಲೇ ಸಿಗುತ್ತದಂತಲ್ಲಾ. ದಾವಣಗೆರೆ ಜಿಲ್ಲೆಯ ಚನ್ನಪ್ಪನವರಿಗೆ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಲಭ್ಯವಾಗಿದೆ. ಸದಾ ಸಮಾಜ ಸೇವೆಗಾಗಿ ದುಡಿಯುವ ಚನ್ನಪ್ಪನವರಿಗೆ ರಾಜ್ಯೋತ್ಸವ ಪ್ರಶಸ್ತಿ ಎಂದೊ ಹುಡುಕಿಕೊಂಡು ಬರಬೇಕಿತ್ತು. ಈ ಚೆನ್ನಪ್ಪನವರ ಸಮಾಜ ಸೇವೆಯಲ್ಲಿ ಪ್ರಶಸ್ತಿಗೆ ಯೋಗ್ಯವಾದ ಸಾಧನೆಯಾವುದೆಂದರೆ, ಯಾರದ್ದೊ ಮನೆಯಲ್ಲಿ ಸಂತಾನಭಾಗ್ಯವಿಲ್ಲ. ಆಗ ಹೋರಿ ಕರುವಿನಂತೆ ಓಡಾಡುತ್ತಿದ್ದ ಚನ್ನಪ್ಪನನ್ನು ಕರೆದ ಅಜ್ಜಿ ’ಚನ್ನಪ್ಪ ನನ್ನ ಮೊಮ್ಮಗಳಿಗೆ ಮಗು ಇಲ್ಲ ಕಣಪ್ಪ. ಅದರ ಹೊಟ್ಟೇಲಿ ಯಂತದಾರ ಹುಳ ನೋಡಿ ಸಾಯಬೇಕು ಅನ್ನಿಸಿದೆ. ಮಾಡಿಕೊಡಪ್ಪ’ ಎಂದಿತಂತೆ. ಕರಗಿಹೋದ ಚನ್ನಪ್ಪ ನಮ್ಮ ಎಸ್ಸೆಲ್ ಭೈರಪ್ಪ ಹೇಳಿದಂತಹ ನಿಯೋಗ ಸಾಧನೆಯಿಂದ ಅಜ್ಜಿ ಮನೆ ವಂಶ ಬೆಳೆಸಿದರಂತೆ. ಇದನ್ನು ನಾವು ಚನ್ನಪ್ಪನವರ ಆತ್ಮಕತೆಯಿಂದ ತೆಗೆದು ದಾಖಲಿಸುತ್ತಿದ್ದೇವೆಯೇ ಹೊರತು, ನಮ್ಮ ಕಿಡಿಗೇಡಿತನದಿಂದಲ್ಲ. ಅಂತೂ ಚಡ್ಡಿಗಳು ಹಂಚುವ ಪ್ರಶಸ್ತಿಗಳು ಚೆಡ್ಡಿ ಸಮಸ್ಯೆಯನ್ನು ಪರಿಗಣಿಸುತ್ತಿವೆಯಲ್ಲಾ, ಥೂತ್ತೇರಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...