Homeಅಂಕಣಗಳುಸಾಣೆಹಳ್ಳಿ ಶ್ರೀಗಳು ಸರಿಯಾದವರಿಗೆ ಪ್ರಶಸ್ತಿ ಕೊಡಿ ಎಂದರಲ್ಲಾ..

ಸಾಣೆಹಳ್ಳಿ ಶ್ರೀಗಳು ಸರಿಯಾದವರಿಗೆ ಪ್ರಶಸ್ತಿ ಕೊಡಿ ಎಂದರಲ್ಲಾ..

- Advertisement -
- Advertisement -

| ಯಾಹೂ |

ಹಾದರಕ್ಕೆ ಹುಟ್ಟಿದವರು ಯಾರಿಗೂ ಬೇಡವಾಗಿ ಅನಾಥಾಶ್ರಮ ಸೇರುವಂತೆ, ಅಡ್ನಾಡಿ ಕುಮಾರಣ್ಣನ ಕೊಟ್ಟಿಗೆಯಿಂದ ಕುಲಗೇಡಿ ಎಡೂರಪ್ಪನ ದೊಡ್ಡಿ ಸೇರಿದ್ದ ಅನರ್ಹ ಶಾಸಕರು ಈಗ ಎಡೂರಪ್ಪನಿಗೂ ಬೇಡವಾಗಿದ್ದಾರಂತಲ್ಲಾ. ಬಿಜೆಪಿ ಹುಟ್ಟಿದ ಕಾಲದಿಂದಲೂ ಅವುಗಳ ಹುಟ್ಟುಗುಣವೇನೆಂದರೆ, ನಂಬಿಸಿ ಮೋಸ ಮಾಡುವುದು. ನಿಮ್ಮ ಆಸ್ತಿ ನೋಡಿ ಹತ್ತಿರ ಬರುತ್ತವೆ. ಅದು ಖಾಲಿಯಾಗುತ್ತಿದ್ದಂತೆ ಜಾಗ ಖಾಲಿ ಮಾಡುತ್ತವೆ. ನಿಮ್ಮ ಖ್ಯಾತಿಯನ್ನು ನೋಡಿ ಹತ್ತಿರ ಬರುತ್ತವೆ. ಅಪಖ್ಯಾತಿ ಅಂಟಿಸಿ ಮಾಯವಾಗುತ್ತವೆ. ನಿಮ್ಮ ತುಂಬಿದ ಜೇಬನ್ನು ಗ್ರಹಿಸಿ ಜೊತೆಯಾಗುತ್ತವೆ. ಖಾಲಿ ಜೇಬಾದ ಕೂಡಲೇ ಮಾತು ಬಿಡುತ್ತವೆ. ಹಾದರ ಮಾಡುತ್ತವೆ ಪಾತಿವ್ರತ್ಯ ಬೋಧಿಸುತ್ತವೆ. ಭ್ರಷ್ಟ ಕೆಲಸ ಮಾಡುತ್ತಲೇ ಪ್ರಾಮಾಣಿಕತೆ ಬೋಧಿಸುತ್ತವೆ. ಪಾರ್ಟಿ ನಿಷ್ಠೆ ಬೋಧಿಸುತ್ತವೆ. ಬೇರೆ ಪಾರ್ಟಿಯಿಂದ ಬಾಡಿಗಳನ್ನ ಯಾಮಾರಿಸುತ್ತವೆ. ಈಗ ಸಂದಿಗ್ಧಕ್ಕೆ ಸಿಕ್ಕ ಇಂತಹ ಬಾಡಿಗಳು ಎಡೂರಪ್ಪನ ಮಾತಿಂದ ಯಕ್ಕ ಎದ್ದು ಹೋಗಲಿವೆಯಂತಲ್ಲಾ. ಎಡೂರಪ್ಪನ ಅಂತಹ ಮಾತೇನು ಎಂದರೆ, ಅನರ್ಹ ಶಾಸಕರಿಗೂ ನಮಗೂ ಯಾವ ಸಂಬಂಧವೂ ಇಲ್ಲ. ಅವರು ಎಲ್ಲಿಗಾದರೂ ಹೋಗಲಿ. ಯಾವ ಪಕ್ಷವನ್ನಾದರೂ ಸೇರಲಿ ಎಂಬುದಾಗಿದೆಯಲ್ಲ. ನಂಬಿಕೆದ್ರೋಹವೆಂದರೆ ಇದೇ ಅಲ್ಲವೆ, ಥೂತ್ತೇರಿ.

ಬಿಜೆಪಿಗಳ ಆಮಿಷ ಮತ್ತು ಕುತಂತ್ರಗಳಿಗೆ ಬಗ್ಗದ ಡಿ.ಕೆ. ಶಿವಕುಮಾರ್ ಇಡಿ ಟ್ರೀಟ್‌ಮೆಂಟುಗಳಿಗೆ ಒಳಗಾಗಿ ಜೈಲುವಾಸ ಅನುಭವಿಸಿ ಬಂದಾಗ ವಿಮಾನ ನಿಲ್ದಾಣದಿಂದ ಹೊರಬರುತ್ತಿದ್ದಂತೆ ಸಿಕ್ಕ ಭವ್ಯ ಸ್ವಾಗತ ನೋಡಿದ ಬಿಜೆಪಿಗಳು ಅಪರಾಧ ಮಾಡಿಬಂದವರನ್ನು ಹೀಗೆ ಸ್ವಾಗತಿಸುವುದೆ ಎಂದು ಉದ್ಘಾರ ತೆಗೆದವಲ್ಲಾ. ತಮ್ಮನ್ನು ತಾವು ಎಂದೂ ಬಗ್ಗಿ ನೋಡಿಕೊಳ್ಳದ ಚೆಡ್ಡಿಗಳು ತಮ್ಮವರು ಮಾಡಿದ ಎಲ್ಲ ಅಪರಾಧಗಳ ಸಮಯದಲ್ಲಿ ಪಟಾಕಿ ಹೊಡೆದು ಸಂಭ್ರಮಿಸಿವೆ. ಕೊಲೆಗಾರರು ಬಿಡುಗಡೆಯಾದಾಗ, ವಿಜಯೋತ್ಸವ ಆಚರಿಸಿವೆ. ಗಾಂಧಿ ಕೊಂದವನಿಗೆ ಗುಡಿ ಕಟ್ಟಲು ಹೊರಟಿವೆ. ಇದೆಲ್ಲಕ್ಕಿಂತಲೂ ಮುಖ್ಯವಾಗಿ ಜೈಲಿಗೆ ಹೋಗಿ ಬಂದ ಎಡೂರಪ್ಪನನ್ನು ಕಂಡ ಕೂಡಲೇ ಲಾಗಾ ಹೊಡೆದಿದ್ದವು. ಆಗ ಮನೆಗೆ ಬಂದ ಎಡೂರಪ್ಪನನ್ನ ನೋಡಿದ ಅವರ ಮೊಮ್ಮಗಳು ’ತಾತ ಜೈಲಿಂದ ಬಂತು ತಾತ ಜೈಲಿಂದ ಬಂತು’ ಎಂದು ಕೂಗಿಕೊಂಡಿತ್ತು. ಸಂಬಂಧಿಕರು ಸುಮ್ಮನಿರಿಸಲು ಯತ್ನಿಸಿದರೂ ಮಗು ಮುಗಿಲು ಮುಟ್ಟುವಂತೆ ಕೂಗುತ್ತ ಸಂಭ್ರಮಿಸಿತಂತಲ್ಲಾ ಥೂತ್ತೇರಿ.

ರಾಜ್ಯೋತ್ಸವದಂದು ಕೊಡಮಾಡುವ ಪ್ರಶಸ್ತಿಗಳನ್ನು ಫಲಾನುಭವಿಗಳು ಪಡೆದಾಗಿದೆ. ಇನ್ನೇನಿದ್ದರೂ ಸರಕಾರದ ಚೆಕ್ಕುಗಳು ಕ್ಯಾಷಾಗಬೇಕಷ್ಟೆ. ಇಂತಿರುವಾಗ ಸಾಣೇಹಳ್ಳಿಯ ಪಂಡಿತಾರಾಧ್ಯ ಶ್ರೀಗಳು ಪ್ರಶಸ್ತಿಗಳನ್ನ ಕೊಡುವಾಗ ವ್ಯಕ್ತಿಯ ನೈತಿಕ ಜೀವನ ಅಳೆದುಕೊಡಬೇಕೆಂದು ಹೇಳಿದ್ದಾರಲ್ಲಾ. ಈ ಮಾತಿನ ಜಾಡನ್ನ ಹಿಡಿದು ನೋಡಿದಾಗ, ಸಿದ್ಧರಾಮಯ್ಯನವರ ಸರಕಾರ ನೇಮಿಸಿದ ನಾಗಮೋಹನದಾಸ್ ರಚಿಸಿ ಕೊಟ್ಟ ಗೈಡ್‌ಲೈನಿನ ಗಡಿ ಮೀರಿದಂತೆ ಕಾಣುತ್ತಿದೆಯಲ್ಲಾ. ಇದಕ್ಕೆ ಸಾಕ್ಷಾಧಾರವಾಗಿ, ಆಯ್ಕೆ ಕಮಿಟಿಯಲ್ಲಿದ್ದ ನಿರುಪಮಾ ಎಂಬುವವರು ನಾನು ಹಗಲುರಾತ್ರಿ ಎಡೂರಪ್ಪನ ಮನೆಗೂ ಸಿ.ಟಿ. ರವಿ ಮನೆಗೂ ಓಡಾಡಿ ಐದು ಜನರಿಗೆ ಪ್ರಶಸ್ತಿ ಕೊಡಿಸಿದೆ ಎಂದಿದ್ದಾರಲ್ಲಾ. ನಿಜಕ್ಕೂ ಇದೊಂದು ಧೀರೋದಾತ್ತ ಸಾಹಸ. ಮುಖ್ಯಮಂತ್ರಿ, ಸಂಸ್ಕೃತಿ ಸಚಿವ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಕಮಿಟಿ ಮೀರಿ ಐದು ಜನರಿಗೆ ಪ್ರಶಸ್ತಿ ಕೊಡಿಸಿದ ನಿರುಪಮಾ ಖಂಡಿತ ನಿರುಪಯುಕ್ತ ಮಹಿಳೆಯಲ್ಲ. ಮುಂದಿನ ವರ್ಷ ಪ್ರಶಸ್ತಿ ಬೇಕಾದವರು ನಿರುಪಮಾನನ್ನು ಹಿಡಿದು ನಿಯತ್ತಿನಿಂದ ನೋಡಿಕೊಂಡರೆ, ನಿಮಗೂ ಪ್ರಶಸ್ತಿ ಗ್ಯಾರಂಟಿ ಎಂದು ಫಲಾನುಭವಿಗಳು ಹೇಳಿಲ್ಲವಂತಲ್ಲಾ, ಥೂತ್ತೇರಿ.

ತನಗೇನೇ ಇನ್ನೂ ರಾಜ್ಯೋತ್ಸವ ಪ್ರಶಸ್ತಿ ಕೊಟ್ಟಿಲ್ಲ ಎಂದು ಪ್ರತಿಭಟಿಸಿದ ಸತ್ಯನಾರಾಯಣ ಎಂಬ ಆಸಾಮಿ, ಸರಕಾರಕ್ಕೆ ತರಾಟೆ ತೆಗೆದುಕೊಂಡಿದ್ದಲ್ಲದೆ, ಕೋರ್ಟಿಗೂ ಹೋಗಿದ್ದರಲ್ಲಾ. ಆ ಕಾರಣವಾಗಿ ನಾಗಮೋಹನ ದಾಸ್ ಕಮಿಟಿ ನೇಮಕವಾಗಿ ಪ್ರಶಸ್ತಿ ಸಂಖ್ಯೆ ರಾಜ್ಯೋತ್ಸವ ವರ್ಷದ ಸಂಖ್ಯೆಗೆ ಇಳಿದಿದ್ದು ಮತ್ತು ಅರವತ್ತು ವರ್ಷ ತುಂಬಿರಬೇಕೆಂಬ ನಿಯಮ ಬಂದಿದ್ದು. ಇದಿಲ್ಲದಿದ್ದರೆ, ಈ ಬಿಜೆಪಿಗಳು ಪ್ರತಿ ಜಿಲ್ಲೆಯ ಕನಿಷ್ಟ ಹತ್ತು ಚಡ್ಡಿಗಳಿಗೆ ಪ್ರಶಸ್ತಿ ಕೊಟ್ಟು ಗಬ್ಬೆಬ್ಬಿಸುತ್ತಿದ್ದರು. ಕಳೆದ ಬಾರಿ ಪ್ರಶಸ್ತಿ ವಿಜೇತರ ಪಟ್ಟಿ ತರಿಸಿಕೊಂಡ ಡಿ.ಕೆ. ಶಿವಕುಮಾರ್, ಅತ್ಯಂತ ಯೋಗ್ಯರಾದ ಹತ್ತು ಜನರನ್ನು ತೆಗೆದು ಬಿಸಾಡಿ, ತನ್ನ ಕಡೆಯ ಹತ್ತು ಹೆಸರನ್ನ ಸೇರಿಸಿ ಪ್ರಕಟಿಸಿದ್ದರು. ಇದರಲ್ಲಿ ರಸ್ತೆ ಮಾಡಿದವರು, ಡಿಕೆಶಿಗೆ ಪಾಠ ಹೇಳಿದವರು ಇದ್ದರು. ಈಗ ಸಿ.ಟಿ. ರವಿ ಇನ್ನೂ ಮುಂದೆಹೋಗಿ ತನಗೆ ಹೊಟೇಲಿನಲ್ಲಿ ರೂಮು ಕೊಟ್ಟವನಿಗೊಂದು ಪ್ರಶಸ್ತಿ ಕೊಟ್ಟಿದ್ದಾನಂತಲ್ಲ. ಮುಂದಿನ ವರ್ಷ ರವಿ ಹೆಂಡತಿಯನ್ನು ತುಂಬಾ ಸಮಾರಂಭಗಳಿಗೆ ಅತಿಥಿಯಾಗಿ ಕರೆದವನನ್ನು ಕರೆದು ರಾಜ್ಯೋತ್ಸವ ಪ್ರಶಸ್ತಿ ಕೊಡುವುದು ಗ್ಯಾರಂಟಿ ಎಂದು ಚಿಕ್ಕಮಗಳೂರು ಜನ ಚಿಕ್ಕದಾಗಿ ಬಾಯಿ ತೆರೆದು ದೊಡ್ಡದಾಗಿ ನಕ್ಕರಂತಲ್ಲಾ, ಥೂತ್ತೇರಿ.

ಹಾಗೆ ನೋಡಿದರೆ ಸಾಣೆಹಳ್ಳಿ ಶ್ರೀಗಳು ಹೇಳಿದ್ದಕ್ಕೆ ಸಾಕ್ಷಾಧಾರಗಳು ದಾವಣಗೆರೆ ಜಿಲ್ಲೆಯಲ್ಲೇ ಸಿಗುತ್ತದಂತಲ್ಲಾ. ದಾವಣಗೆರೆ ಜಿಲ್ಲೆಯ ಚನ್ನಪ್ಪನವರಿಗೆ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಲಭ್ಯವಾಗಿದೆ. ಸದಾ ಸಮಾಜ ಸೇವೆಗಾಗಿ ದುಡಿಯುವ ಚನ್ನಪ್ಪನವರಿಗೆ ರಾಜ್ಯೋತ್ಸವ ಪ್ರಶಸ್ತಿ ಎಂದೊ ಹುಡುಕಿಕೊಂಡು ಬರಬೇಕಿತ್ತು. ಈ ಚೆನ್ನಪ್ಪನವರ ಸಮಾಜ ಸೇವೆಯಲ್ಲಿ ಪ್ರಶಸ್ತಿಗೆ ಯೋಗ್ಯವಾದ ಸಾಧನೆಯಾವುದೆಂದರೆ, ಯಾರದ್ದೊ ಮನೆಯಲ್ಲಿ ಸಂತಾನಭಾಗ್ಯವಿಲ್ಲ. ಆಗ ಹೋರಿ ಕರುವಿನಂತೆ ಓಡಾಡುತ್ತಿದ್ದ ಚನ್ನಪ್ಪನನ್ನು ಕರೆದ ಅಜ್ಜಿ ’ಚನ್ನಪ್ಪ ನನ್ನ ಮೊಮ್ಮಗಳಿಗೆ ಮಗು ಇಲ್ಲ ಕಣಪ್ಪ. ಅದರ ಹೊಟ್ಟೇಲಿ ಯಂತದಾರ ಹುಳ ನೋಡಿ ಸಾಯಬೇಕು ಅನ್ನಿಸಿದೆ. ಮಾಡಿಕೊಡಪ್ಪ’ ಎಂದಿತಂತೆ. ಕರಗಿಹೋದ ಚನ್ನಪ್ಪ ನಮ್ಮ ಎಸ್ಸೆಲ್ ಭೈರಪ್ಪ ಹೇಳಿದಂತಹ ನಿಯೋಗ ಸಾಧನೆಯಿಂದ ಅಜ್ಜಿ ಮನೆ ವಂಶ ಬೆಳೆಸಿದರಂತೆ. ಇದನ್ನು ನಾವು ಚನ್ನಪ್ಪನವರ ಆತ್ಮಕತೆಯಿಂದ ತೆಗೆದು ದಾಖಲಿಸುತ್ತಿದ್ದೇವೆಯೇ ಹೊರತು, ನಮ್ಮ ಕಿಡಿಗೇಡಿತನದಿಂದಲ್ಲ. ಅಂತೂ ಚಡ್ಡಿಗಳು ಹಂಚುವ ಪ್ರಶಸ್ತಿಗಳು ಚೆಡ್ಡಿ ಸಮಸ್ಯೆಯನ್ನು ಪರಿಗಣಿಸುತ್ತಿವೆಯಲ್ಲಾ, ಥೂತ್ತೇರಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತೆಲಂಗಾಣ : ಪೋಕ್ಸೋ ಪ್ರಕರಣದ ಆರೋಪಿಯಿಂದ ಸಂತ್ರಸ್ತೆ ಸೇರಿ 6 ಜನರ ಹತ್ಯೆ

ಪೋಕ್ಸೋ ಪ್ರಕರಣದ ಆರೋಪಿಯೊಬ್ಬ ಸಂತ್ರಸ್ತೆ ಸೇರಿದಂತೆ ಒಟ್ಟು ಆರು ಜನರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್ ಮಂಡಲದಲ್ಲಿ ಶುಕ್ರವಾರ (ಜು.10) ರಾತ್ರಿ ನಡೆದಿದೆ. 28 ವರ್ಷ ವಯಸ್ಸಿನ...

‘ನನ್ನನ್ನು ಮೌನಗೊಳಿಸಲು, ನೀವು ನನ್ನನ್ನು ಕೊಲ್ಲಬೇಕಾಗುತ್ತದೆ’: ಟಿಎಂಸಿ ಬಿಕ್ಕಟ್ಟಿನ ನಡುವೆ ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ಆಕ್ರೋಶ  

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ತಾರಕಕ್ಕೇರಿರುವ ಬೆನ್ನಲ್ಲೇ, ಪಕ್ಷದ ಸುಪ್ರೀಮೋ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇತ್ತೀಚಿನ ತಿಂಗಳುಗಳಲ್ಲೇ ಅತ್ಯಂತ ಪ್ರಬಲವಾದ ರಾಜಕೀಯ...

ಸುಪ್ರೀಂ ಕೋರ್ಟ್‌ನಲ್ಲಿ ಜಡ್ಜ್‌ಗಳನ್ನೇ ‘ನ್ಯಾಯಾಂಗ ಸೇವಕರು’ ಎಂದ ಅರ್ಜಿದರ

ಸುಪ್ರೀಂ ಕೋರ್ಟ್‌ನಲ್ಲಿ ಶುಕ್ರವಾರ ಅತ್ಯಂತ ನಾಟಕೀಯ ಹಾಗೂ ಆಘಾತಕಾರಿ ದೃಶ್ಯವೊಂದು ತೆರೆದುಕೊಂಡಿದೆ. ಪ್ರಕರಣವೊಂದರ ವಿಚಾರಣೆ ವೇಳೆ ಖುದ್ದಾಗಿ ಹಾಜರಾಗಿದ್ದ ಅರ್ಜಿದಾರನೊಬ್ಬ, ಲಕ್ನೋದ ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧ ಎಫ್‌ಐಆರ್ (FIR) ದಾಖಲಿಸಲು ನಾನು ನ್ಯಾಯಪೀಠಕ್ಕೆ...

ಮದ್ಯದ ಅಮಲಿನಲ್ಲಿ ಸಾರಿಗೆ ಬಸ್‌ ಅಪಹರಿಸಿದ ವ್ಯಕ್ತಿ; 21 ಕಿ.ಮೀ. ಪ್ರಯಾಣದ ನಂತರ ಅಪಘಾತ

ತೆಲಂಗಾಣದ ಜನಗಾಂವ್ ಬಸ್ ನಿಲ್ದಾಣದಲ್ಲಿ ನಿಂತಿದ್ದ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ (ಟಿಜಿಎಸ್‌ಆರ್‌ಟಿಸಿ) ಬಸ್‌ ಅನ್ನು ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಕದ್ದಿದ್ದಾನೆ. ನಂತರ ಅದನ್ನು ಸುಮಾರು 21 ಕಿ.ಮೀ. ದೂರ ಓಡಿಸಿ,...

ಬೆಂಗಳೂರಿನಲ್ಲಿ: ರಸ್ತೆ ಬದಿ ವಾರಗಟ್ಟಲೆ ವಾಹನ ನಿಲ್ಲಿಸಿದರೆ ಜಪ್ತಿ ಮಾಡಿ ‘ಹರಾಜು’ ಹಾಕಲಿದೆ ಸರ್ಕಾರ!

ಸಿಲಿಕಾನ್ ಸಿಟಿಯ ಟ್ರಾಫಿಕ್ ದಟ್ಟಣೆಗೆ ಮುಕ್ತಿ ಹಾಡಲು ಮತ್ತು ಪಾದಚಾರಿಗಳ ಹಕ್ಕನ್ನು ರಕ್ಷಿಸಲು ರಾಜ್ಯ ಸರ್ಕಾರ ಈಗ ಅತ್ಯಂತ ಕಠಿಣ ಹೆಜ್ಜೆಯನ್ನಿಟ್ಟಿದೆ. ನಗರದ ರಸ್ತೆ ಬದಿ ಹಾಗೂ ಫುಟ್‌ಪಾತ್‌ಗಳಲ್ಲಿ ತಿಂಗಳುಗಟ್ಟಲೆ ಧೂಳು ತಿನ್ನುತ್ತಾ...

ಸರ್ಕಾರಿ ಶಾಲೆಗಳಲ್ಲಿ 86 ಲಕ್ಷ ವಿದ್ಯಾರ್ಥಿಗಳ ಕುಸಿತ, ಖಾಸಗಿ ಶಾಲೆಗಳತ್ತ ಮುಖ ಮಾಡಿದ 88 ಲಕ್ಷ ಮಕ್ಕಳು: ಕಳವಳಕಾರಿ ವರದಿ

ನವದೆಹಲಿ: ದೇಶದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಗಳು ಕಂಡುಬರುತ್ತಿದ್ದು, ಸರ್ಕಾರಿ ಶಾಲೆಗಳ ದಾಖಲಾತಿಯಲ್ಲಿ ಭಾರಿ ಕುಸಿತ ಉಂಟಾಗಿದೆ. 2023–24 ಮತ್ತು 2025–26ರ ಶೈಕ್ಷಣಿಕ ವರ್ಷಗಳ ನಡುವಿನ ಅವಧಿಯಲ್ಲಿ ದೇಶಾದ್ಯಂತ ಸರ್ಕಾರಿ ಶಾಲೆಗಳಲ್ಲಿ...

ಬಿಹಾರ: ನಕಲಿ ದಾಖಲೆ ನೀಡಿ ಕೆಲಸ ಗಿಟ್ಟಿಸಿದ್ದ 3,000ಕ್ಕೂ ಹೆಚ್ಚು ಶಿಕ್ಷಕರು ವಜಾ!

ನಕಲಿ ಪದವಿ ಹಾಗೂ ನಕಲಿ ಶೈಕ್ಷಣಿಕ ಪ್ರಮಾಣಪತ್ರಗಳನ್ನು ನೀಡಿ ಸರ್ಕಾರಿ ಶಾಲೆಗಳಲ್ಲಿ ಉದ್ಯೋಗ ಗಿಟ್ಟಿಸಿಕೊಂಡಿದ್ದ 3,000ಕ್ಕೂ ಹೆಚ್ಚು ಶಿಕ್ಷಕರನ್ನು ಸೇವೆಯಿಂದ ವಜಾಗೊಳಿಸಲು ಬಿಹಾರ ಸರ್ಕಾರ ನಿರ್ಧರಿಸಿದೆ. ಈ ಕುರಿತು ಶುಕ್ರವಾರ ಅಧಿಕೃತ ಪ್ರಕಟಣೆ...

TMC ತೊರೆದು BJP ಸೇರಿದ ಮಾಜಿ ಸಂಸದರಿಗೆ ಬಿಜೆಪಿಯಿಂದ ರಾಜ್ಯಸಭಾ ಟಿಕೆಟ್

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (TMC) ಪಕ್ಷದ ರಾಜ್ಯಸಭಾ ಸ್ಥಾನಗಳಿಗೆ ರಾಜೀನಾಮೆ ನೀಡಿದ ಕೆಲವೇ ವಾರಗಳಲ್ಲಿ, ಆ ಮೂವರು ಮಾಜಿ ಸಂಸದರು ಈಗ ಬೇರೆ ಬಣ್ಣದ (BJP) ಶಾಲು ಧರಿಸಿ ಮತ್ತೆ...

ಪಶ್ಚಿಮ ಬಂಗಾಳ: ಟಿಎಂಸಿ ಖಾತೆ ಫ್ರೀಜ್ ಮಾಡಿದ್ದ ಪೊಲೀಸರಿಗೆ ಕಲ್ಕತ್ತಾ ಹೈಕೋರ್ಟ್ ತರಾಟೆ!

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಹಲವು ಬ್ಯಾಂಕ್ ಖಾತೆಗಳನ್ನು ಜಾರಿ ನಿರ್ದೇಶನಾಲಯ (ಇಡಿ) ಮುಟ್ಟುಗೋಲು ಹಾಕಿಕೊಂಡ ಮರುದಿನವೇ, ಪಶ್ಚಿಮ ಬಂಗಾಳ ಪೊಲೀಸರು ಮುಟ್ಟುಗೋಲು ಹಾಕಿಕೊಂಡಿದ್ದ ಪಕ್ಷದ ಮೂರು ಬ್ಯಾಂಕ್...

ಬಂಗಾಳದ ಬಿಸಿಯೂಟ ಇಸ್ಕಾನ್‌ಗೆ ಹಸ್ತಾಂತರವಿಲ್ಲ: ಸರ್ಕಾರದ ಸ್ಪಷ್ಟನೆ, ಕಲ್ಕತ್ತಾ ಹೈಕೋರ್ಟ್‌ನಿಂದ ಅಫಿಡವಿಟ್‌ಗೆ ನಿರ್ದೇಶನ 

ಕೋಲ್ಕತ್ತಾ: ರಾಜ್ಯದ ಶಾಲೆಗಳಲ್ಲಿ ಜಾರಿಯಲ್ಲಿರುವ ಪಿಎಂ-ಪೋಷಣ್ (ಮಧ್ಯಾಹ್ನದ ಬಿಸಿಯೂಟ) ಯೋಜನೆಯ ನಿರ್ವಹಣೆಯನ್ನು ಇಸ್ಕಾನ್ ಸಂಸ್ಥೆಗೆ ಹಸ್ತಾಂತರಿಸುವ ಯಾವುದೇ ಅನುಮೋದಿತ ಪ್ರಸ್ತಾಪ ಸರ್ಕಾರಕ್ಕಿಲ್ಲ ಎಂದು ಪಶ್ಚಿಮ ಬಂಗಾಳ ಸರ್ಕಾರ ಸ್ಪಷ್ಟಪಡಿಸಿದೆ. ಈ ಕುರಿತು ಅಫಿಡವಿಟ್...