HomeಎಕಾನಮಿRCEP ಯಿಂದ ಭಾರತ ತಾತ್ಕಾಲಿಕ ಹಿಂತೆಗೆತ: ಏಕೆ ಮತ್ತು ಮುಂದೇನು?

RCEP ಯಿಂದ ಭಾರತ ತಾತ್ಕಾಲಿಕ ಹಿಂತೆಗೆತ: ಏಕೆ ಮತ್ತು ಮುಂದೇನು?

ಸರ್ಕಾರದ ಮೇಲೆ RCEP ಗೆ ಮುಂದೆಯೂ ಸಹಿ ಹಾಕದಂತೆ ಪರಿಣಾಮಕಾರಿಯಾಗಿ ಒತ್ತಡ ಹಾಕುವ, ಹೋರಾಟ ರೂಪಿಸುವ ಅವಶ್ಯಕತೆಯಿದೆ.

- Advertisement -
- Advertisement -

ಈ ಕೆಳಗಿನ ಟೇಬಲುಗಳನ್ನು ಗಮನಿಸಿ. ಮೊದಲನೇ ಟೇಬಲಿನಲ್ಲಿ ಭಾರತ RCEPಯ ದೇಶಗಳಲ್ಲಿ ಯಾವ್ಯಾವ ದೇಶದ ಜೊತೆ ಎಷ್ಟೆಷ್ಟು ವ್ಯಾಪಾರದ ಕೊರತೆ ಹೊಂದಿದೆ (2018-19 ರಲ್ಲಿ) ಎಂಬ ಅಂಕಿಅಂಶಗಳಿವೆ. ಎರಡನೇ ಟೇಬಲಿನಲ್ಲಿ ಯಾವ್ಯಾವ ಉತ್ಪನ್ನಗಳನ್ನು ಎಷ್ಟೆಷ್ಟು ರಫ್ತು ಮಾಡುತ್ತಿದೆ ಮತ್ತು ಆಮದು ಮಾಡಿಕೊಳ್ಳುತ್ತಿದೆ ಎಂಬ (2018-19 ರಲ್ಲಿ) ಅಂಕಿಅಂಶಗಳಿವೆ.

ಚಿತ್ರಕೃಪೆ: ಎಸ್‌ಬಿಐ ಇಂಡಿಯಾ

ಈ ಟೇಬಲನ್ನು ನೋಡಿ. ಭಾರತ RCEPಯ ಕೇವಲ ನಾಲ್ಕು ದೇಶಗಳನ್ನು ಲಾವೋಸ್, ಕಾಂಬೋಡಿಯಾ, ಮಯನ್ಮಾರ್ ಮತ್ತು ಫಿಲಿಪೀನ್ಸ್ ಬಿಟ್ಟು ಇತರ ಹನ್ನೊಂದು ದೇಶಗಳ ಜೊತೆಗೆ ವ್ಯಾಪಾರದ ಕೊರತೆ ಅನುಭವಿಸುತ್ತಿದೆ.

ಒಟ್ಟಾರೆಯಾಗಿ 2018-19 ರಲ್ಲಿ, ಈ ದೇಶಗಳಿಂದ 172.93 ಬಿಲಿಯನ್ ಡಾಲರುಗಳಷ್ಟು ಸರಕು ಸೇವೆಗಳನ್ನು ಆಮದು ಮಾಡಿಕೊಂಡಿದ್ದು, 67.69 ಬಿಲಿಯನ್ ಡಾಲರುಗಳಷ್ಟನ್ನು ಮಾತ್ರ ಈ ದೇಶಗಳಿಗೆ ರಫ್ತು ಮಾಡಿದೆ. ಹಾಗಾಗಿ ಭಾರತ, ಒಟ್ಟು 105.24 ಬಿಲಿಯನ್ ಡಾಲರುಗಳಷ್ಟು ವ್ಯಾಪಾರದ ಕೊರತೆಯನ್ನು ಈ ದೇಶಗಳ ಜೊತೆ ಹೊಂದಿದೆ.

ಹಾಗೆಯೇ ಭಾರತ ತನ್ನ ಒಟ್ಟು ಆಮದಿನಲ್ಲಿ (508 ಬಿಲಿಯನ್ ಡಾಲರುಗಳು) ಶೇಕಡಾ 34 ರಷ್ಟನ್ನು (172.93 ಬಿಲಿಯನ್ ಡಾಲರುಗಳು) RCEP ದೇಶಗಳಿಂದ ಮಾಡಿಕೊಳ್ಳುತ್ತಿದೆ. ತನ್ನ ಒಟ್ಟು ರಫ್ತಿನಲ್ಲಿ (322 ಬಿಲಿಯನ್ ಡಾಲರುಗಳು) ಶೇಕಡಾ 21 ರಷ್ಟನ್ನು (67.69 ಬಿಲಿಯನ್ ಡಾಲರುಗಳು) ಈ RCEP ದೇಶಗಳಿಗೆ ಮಾಡುತ್ತಿದೆ.

ಒಟ್ಟಾಗಿ ಭಾರತ ಜಗತ್ತಿನ ದೇಶಗಳೊಡನೆ 2018-19 ರಲ್ಲಿ ಒಟ್ಟು 186 ಬಿಲಿಯನ್ ಡಾಲರುಗಳಷ್ಟು ವ್ಯಾಪಾರದ ಕೊರತೆ ಅನುಭವಿಸುತ್ತಿದೆ.

ಇದೇ ಟೇಬಲಿನಲ್ಲಿ ಭಾರತ ಚೀನಾ ಜೊತೆ ಹೊಂದಿರುವ 53.5 ಬಿಲಿಯನ್ ಡಾಲರುಗಳಷ್ಟು ಭಾರೀ ವ್ಯಾಪಾರದ ಕೊರತೆಯನ್ನು ಗಮನಿಸಿ. ಜೊತೆಗೆ ಇಂಡೋನೇಷಿಯ, ಮಲೇಷ್ಯಾ, ಥೈಲಾಂಡಿನಂಥ ದೇಶಗಳ ಜತೆಗಿನ ವ್ಯಾಪಾರದ ಕೊರತೆಯನ್ನೂ ನೋಡಿ.

ಚಿತ್ರಕೃಪೆ: ಎಸ್‌ಬಿಐ ಇಂಡಿಯಾ

ಇನ್ನು ಎರಡನೇ ಟೇಬಲನ್ನು ಗಮನಿಸಿದಾಗ ಭಾರತ ವ್ಯವಸಾಯೋತ್ಪನ್ನಗಳು, ಟೆಕ್ಟ್ಸ್ಟೈಲ್ಸ್, ಮುತ್ತು ಮತ್ತು ಆಭರಣಗಳನ್ನು ಬಿಟ್ಟು ಉಳಿದೆಲ್ಲ ಉತ್ಪನ್ನಗಳಲ್ಲೂ ಇತರ ದೇಶಗಳ ಜತೆ ವ್ಯಾಪಾರ ಕೊರತೆ ಎದುರಿಸುತ್ತಿದೆ. ಮೇಲಿನ ಮೂರೇ ಮೂರು ಉತ್ಪನ್ನಗಳಲ್ಲಿ ಭಾರತ ಹೆಚ್ಚುವರಿ ವ್ಯಾಪಾರ ಹೊಂದಿದ್ದರೂ ಆಮದು ರಫ್ತಿನ ಅಂತರ ತುಂಬ ಕಡಿಮೆಯಿರುವುದು ಕಾಣುತ್ತದೆ. ಅದರರ್ಥ RCEP ಬಂದರೆ ಈ ಮೂರು ಉತ್ಪನ್ನಗಳಲ್ಲೂ ಭಾರತ ಕೊರತೆ ಎದುರಿಸಬೇಕಾಗುತ್ತದೆ. ಜೊತೆಗೆ, ತಯಾರಿಕಾ ಉತ್ಪನ್ನಗಳು (manufacturing goods), ಎಲೆಕ್ಟ್ರಾನಿಕ್ ಗೂಡ್ಸ್, ಕೆಮಿಕಲ್ಸ್ ಯಾವುದನ್ನೇ ನೋಡಿದರೂ ಭಾರತ RCEP ದೇಶಗಳ ಜತೆ ಭಾರೀ ವ್ಯಾಪಾರದ ಕೊರತೆ ಹೊಂದಿದೆ.

ಹೀಗೆ ನಾವು ನೋಡಿದಾಗ ಭಾರತ ತಾನು ವಿವಿಧ ಉತ್ಪನ್ನಗಳನ್ನು ಬೇರೆ ದೇಶಗಳಿಗೆ ರಫ್ತು ಮಾಡುವುದಕ್ಕಿಂತ ಮೂರು ಪಟ್ಟು ಹೆಚ್ಚಿಗೆ ಬೇರೆ ದೇಶದ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುತ್ತಿರುವುದು ನಮಗೆ ಗೊತ್ತಾಗುತ್ತದೆ.

ಇನ್ನು ಇಂಥಾ ಪರಿಸ್ಥಿತಿಯಲ್ಲಿ RCEP ಗೆ ಸಹಿ ಹಾಕಿದರೆ ಈ ವ್ಯಾಪಾರ ಕೊರತೆ ಮತ್ತಷ್ಟು ಹೆಚ್ಚಿ ಭಾರತ ಹೊರದೇಶಗಳ ಉತ್ಪನ್ನಗಳಿಗೆ ಇನ್ನೂ ದೊಡ್ಡ ಮಾರುಕಟ್ಟೆಯಾಗುವುದು ಖಚಿತ.

ಹೀಗೆ ತಾನಿನ್ನೂ ಇತರೆ ಸದಸ್ಯ ದೇಶಗಳ ಜತೆ ಸ್ಪರ್ಧಾತ್ಮಕತೆಯಲ್ಲಿ ಹಿಂದೆ ಬಿದ್ದಿರುವುದರಿಂದ ಭಾರತ ಸರ್ಕಾರ ಅಂದರೆ ಪ್ರಧಾನಿ ಮೋದಿಯವರು (ಈಗ ಸರ್ಕಾರ ಅಂದರೆ ಮೋದಿ ಅನ್ನುವಂತಾಗಿದೆ) ಈಗ ಸದ್ಯಕ್ಕೆ RCEPಗೆ ಸಹಿ ಹಾಕಲು ನಿರಾಕರಿಸಿದ್ದಾರೆಯೇ ಎಂದು ನೋಡಿದರೆ ವಾಸ್ತವ ಹಾಗೆ ಕಾಣಿಸುವುದಿಲ್ಲ.

ಯಾಕೆಂದರೆ, ಇವತ್ತಿಗೂ ಖಅಇPಯ ಯಾವ್ಯಾವ ನಿಯಮಗಳಿಗೆ ಸಂಬಂಧಿಸಿದಂತೆ ಸರ್ಕಾರಕ್ಕೆ ಒಪ್ಪಿಗೆಯಿಲ್ಲ ಎಂಬುದನ್ನು ಕೇಂದ್ರ ಸರ್ಕಾರ ನಮ್ಮ ನಾಗರಿಕರಿಗಾಗಲೀ ಅಥವಾ ಕನಿಷ್ಟ ನಮ್ಮ ಸಂಸದರಿಗಾಗಲೀ ಏನನ್ನೂ ತಿಳಿಸಿಲ್ಲ.

ಇದನ್ನೂ ಓದಿ: ಭಾರತದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯ ಮೇಲೆ RCEP ಪರಿಣಾಮಗಳು

ನಮ್ಮ ದೇಶದ ಹಲವಾರು ರೈತ ಸಂಘಟನೆಗಳು, ಕಾರ್ಮಿಕ ಸಂಘಟನೆಗಳು ಮತ್ತು ಹಲವು ಜನಪರ ಗುಂಪುಗಳು RCEP ಯ ಬಗ್ಗೆ ಜನರನ್ನು ಎಚ್ಚರಿಸಿ ಹಲವು ಪ್ರತಿಭಟನೆಗಳ ಮೂಲಕ ಸರ್ಕಾರದ ಮೇಲೆ ಒತ್ತಡ ಹಾಕಿದ್ದು ಸರ್ಕಾರ RCEP ಗೆ ಸಹಿ ಹಾಕದಿರಲು ಮುಖ್ಯ ಕಾರಣ.

ಹಾಗೆಯೇ, ಹಲವು ಸಣ್ಣ ಹಾಗೂ ಮಧ್ಯಮ ಗಾತ್ರದ ಕೈಗಾರಿಕಾ ಸಂಘಟನೆಗಳು, ಆಟೋಮೋಬೈಲ್ ಉದ್ದಿಮೆಯ ಸಂಘಟನೆಗಳು, ಟೆಕ್ಟ್ಸ್ಟೈಲ್ ಉದ್ದಿಮೆ ಸಂಘಟನೆಗಳು ಸರ್ಕಾರದ ಮೇಲೆ ಹಾಕಿದ ಒತ್ತಡವೂ ಸರ್ಕಾರ ಈಗ RCEP ಗೆ ಸಹಿ ಹಾಕದಂತೆ ತಡೆದಿದೆ.

ಆದರೆ ಈಗಾಗಲೇ CII ( Confederation of Indian Industries) ಮುಂದೆ ಭಾರತ RCEPಗೆ ಸಹಿ ಹಾಕಬೇಕಾಗುತ್ತದೆ ಎಂದು ಹೇಳಿದೆ. ಯಾಕೆಂದರೆ ಈ RCEP ಯಿಂದ ರೈತರಿಗೆ ಮತ್ತು ಸಣ್ಣ ಮಧ್ಯಮ ಕೈಗಾರಿಕೆಗಳಿಗೆ ತೊಂದರೆಯಾಗುತ್ತದೆಯೇ ಹೊರತು ಬೃಹತ್ ಉದ್ಯಮಿಗಳಿಗೆ RCEP ಯಲ್ಲಿ ಲಾಭವೇ ಆಗುತ್ತದೆ. ಯಾಕೆಂದರೆ ರಿಲಯನ್ಸ್, ಅದಾನಿಯಂತಹ ಉದ್ಯಮಿಗಳು RCEP ಯ ಯಾವ ದೇಶದಲ್ಲಿ ಅನುಕೂಲವಿದೆಯೋ ಅಲ್ಲಿಯೇ ತಮ್ಮ ಉತ್ಪಾದನಾ ಘಟಕ ಸ್ಥಾಪಿಸಿ ಅಲ್ಲಿಂದಲೇ ಭಾರತ ಮತ್ತು ಇತರೆ ದೇಶಗಳಿಗೆ ರಫ್ತು ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ಅಥವಾ ಬೇರೆ ದೇಶಗಳಿಂದ ಕಡಿಮೆ ಬೆಲೆಗೆ ಖರೀದಿಸಿ ಭಾರತದಲ್ಲಿ ಲಾಭಕ್ಕೆ ಮಾರಿ ಮಾರುಕಟ್ಟೆ ಏಕಸ್ವಾಮ್ಯ ಗಳಿಸುವ ಸಾಮರ್ಥ್ಯ ಹೊಂದಿದ್ದಾರೆ.

ಈ ರೀತಿಯ ಬೃಹತ್ ಉದ್ದಿಮೆಗಳ ಒತ್ತಡ ಮತ್ತು ಅಂತಾರಾಷ್ಟ್ರೀಯ ಒತ್ತಡದಿಂದಾಗಿ ಕೇಂದ್ರ ಸರ್ಕಾರ ಮುಂದಿನ ದಿನಗಳಲ್ಲಿ ( ಬಹುಶಃ ಇನ್ನು ಮೂರು ತಿಂಗಳುಗಳಲ್ಲಿ – ಫೆಬ್ರವರಿ 2020) RCEP ಗೆ ಸಹಿ ಹಾಕುವ ಸಾಧ್ಯತೆ ದಟ್ಟವಾಗಿದೆ. ಹಾಗೂ ಅದಕ್ಕೆ ಪೂರಕವಾಗಿ ಜನಾಭಿಪ್ರಾಯ ರೂಪಿಸುವ ಕೆಲಸವೂ ಸದ್ದಿಲ್ಲದೆ ನಡೆಯುವ ಸಾಧ್ಯತೆಗಳೂ ಇವೆ.

ಆದುದರಿಂದ, ಈ ತಾತ್ಕಾಲಿಕ ಜಯದಲ್ಲಿ ಮೈಮರೆಯದೆ ಈ ದೇಶದ ರೈತರು, ಕಾರ್ಮಿಕರು, ಪತ್ರಕರ್ತರು, ಬರಹಗಾರರು, ಕಲಾವಿದರು ಒಟ್ಟಾರೆ ಈ ದೇಶದ ಬಗ್ಗೆ ಕಳಕಳಿ ಇರುವವರೆಲ್ಲರೂ ಸರ್ಕಾರದ ಮೇಲೆ RCEP ಗೆ ಮುಂದೆಯೂ ಸಹಿ ಹಾಕದಂತೆ ಪರಿಣಾಮಕಾರಿಯಾಗಿ ಒತ್ತಡ ಹಾಕುವ, ಹೋರಾಟ ರೂಪಿಸುವ ಅವಶ್ಯಕತೆಯಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...