Homeಮುಖಪುಟಗ್ಯಾಸ್ ಪುರಾಣ: ಗೃಹ ಬಳಕೆಯ ಗ್ಯಾಸ್ ಬೆಲೆ ಹೆಚ್ಚಾಗುತ್ತಿರುವುದಕ್ಕೆ ಕಾರಣಗಳಿವು

ಗ್ಯಾಸ್ ಪುರಾಣ: ಗೃಹ ಬಳಕೆಯ ಗ್ಯಾಸ್ ಬೆಲೆ ಹೆಚ್ಚಾಗುತ್ತಿರುವುದಕ್ಕೆ ಕಾರಣಗಳಿವು

ಶೀಘ್ರದಲ್ಲೇ ಗೃಹಬಳಕೆ ಸಿಲಿಂಡರ್ ಮಾಯವಾಗಿ ಕೇವಲ ವಾಣಿಜ್ಯ ಸಿಲಿಂಡರ್ ಮಾತ್ರ ಮಾರುಕಟ್ಟೆಯಲ್ಲಿ ಉಳಿದುಕೊಳ್ಳುತ್ತದೆ ಎಂಬುದರಲ್ಲಿ ಸಂದೇಹವಿಲ್ಲ...

- Advertisement -
- Advertisement -

ಇತ್ತೀಚೆಗೆ “ಪ್ರಾಕೃತಿಕ ಗ್ಯಾಸ್ ಬೆಲೆಯಲ್ಲಿ 40% ಹೆಚ್ಚಳ” ಎಂಬ ಸುದ್ದಿ ನೀವೆಲ್ಲರೂ ದೃಶ್ಯಮಾಧ್ಯಮದಲ್ಲಿ ಕೇಳಿರುತ್ತೀರಿ ಅಥವಾ ವೃತ್ತಪತ್ರಿಕೆಗಳಲ್ಲಿ ಓದಿರುತ್ತೀರಿ. ಗ್ಯಾಸ್ ಬೆಲೆ ಯೂನಿಟ್ಟಿಗೆ 6.10 ಡಾಲರ್ ನಿಂದ 8.57 ಡಾಲರ್ ಆಗಲಿದೆ ಅಂದರೆ ಸುಮಾರು 40% ಹೆಚ್ಚಳ ಆಗಲಿದೆ ಮತ್ತು ಅದರಿಂದ ಸಿ.ಎನ್.ಜಿ. ಮತ್ತು ಪಿ.ಎನ್.ಜಿ. ಗ್ರಾಹಕರಿಗೆ ಅದರ ಬಿಸಿ ತಟ್ಟಲಿದೆ ಎಂಬ ವಿವರ ಸುದ್ದಿಯಲ್ಲಿತ್ತು. ಇದರಲ್ಲಿ ಗಮನಿಸಬೇಕಾದ ವಿಷಯ ಅಥವಾ ಕೇಳಬೇಕಾದ ಪ್ರಶ್ನೆ: ಮೊದಲನೆಯದು, ಭಾರತದಲ್ಲಿ ಇರುವ ತೈಲನಿಕ್ಷೇಪದಿಂದ ಭಾರತದ ಕಂಪನಿಗಳೇ ಉತ್ಪಾದಿಸುತ್ತಿರುವ ಗ್ಯಾಸ್ ಬೆಲೆ “ಡಾಲರ್”ನಲ್ಲಿ ಏಕಿದೆ ಮತ್ತು  ಎರಡನೆಯದು, ಉತ್ಪಾದನಾ ವೆಚ್ಚಕ್ಕಿಂತ ನಾಲ್ಕೈದು ಪಟ್ಟು ಹೆಚ್ಚು ಬೆಲೆಗೆ ಖಾಸಗಿ ಕಂಪನಿಗಳು ಭಾರತದ ಗ್ರಾಹಕರಿಗೆ ಗ್ಯಾಸ್ ಮಾರಾಟ ಮಾಡಲು ಸರಕಾರ ಏಕೆ ಅನುವು ಮಾಡಿಕೊಟ್ಟಿದೆ ಎಂಬುದು. ಗ್ಯಾಸ್ ಉತ್ಪಾದನೆ ಮತ್ತು ಮಾರಾಟವನ್ನು  ಅಂಬಾನಿ ಮತ್ತು ಅದಾನಿ ಅವರಿಗೆ ಗುತ್ತಿಗೆ ನೀಡಿರುವುದರಿಂದ ಎರಡನೆಯ ಪ್ರಶ್ನೆಗೆ ಉತ್ತರ ಸಿಕ್ಕಿದೆ ಎಂದುಕೊಂಡಿದ್ದೇನೆ. ಮೊದಲನೆಯ ಪ್ರಶ್ನೆಯ ಉತ್ತರಕ್ಕೆ ನಂತರ ಬರೋಣ.

ಗೃಹಬಳಕೆಯ 14.2 ಕೆಜಿ ಎಲ್.ಪಿ.ಜಿ. ಸಿಲಿಂಡರ್ ಬೆಲೆ ರೂ.1050 ದಾಟಿದೆ ಮತ್ತು 19ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆ ಸುಮಾರು ರೂ.1900 ಇದೆ. ಅಂದರೆ ಗೃಹಬಳಕೆ ಗ್ಯಾಸ್ ರೂ.75/ಕೆಜಿ ಮತ್ತು ವಾಣಿಜ್ಯ ಗ್ಯಾಸ್ ರೂ.100/ಕೆಜಿ ಎಂದಾಯಿತು. ಗೃಹಬಳಕೆಯ ಸಿಲಿಂಡರ್ ಮೇಲೆ ಸರಕಾರ ಈಗಲೂ ಸಬ್ಸಿಡಿ ನೀಡುತ್ತಿದೆ ಎಂದು ಅವರ ವಾದ. ಆದರೆ ನಿಮ್ಮ ಖಾತೆಗೆ ಯಾವುದೇ ಹಣ ಬರುತ್ತಿಲ್ಲ ಎಂಬುದೂ ಸಹ  ಸತ್ಯ. ಸಿ.ಎನ್.ಜಿ. ಬೆಲೆ ರೂ.86/ಕೆಜಿ ಇದೆ. ಸರಕಾರ ಎಲ್ಲ ರೀತಿಯ ಸಬ್ಸಿಡಿ ನಿಲ್ಲಿಸಬೇಕೆಂದು ಪ್ರಯತ್ನ ಮಾಡುತ್ತಿರುವುದು ಎಲ್ಲರಿಗೂ ತಿಳಿದ ವಿಷಯ. ಶೀಘ್ರದಲ್ಲೇ ಗೃಹಬಳಕೆ ಸಿಲಿಂಡರ್ ಮಾಯವಾಗಿ ಕೇವಲ ವಾಣಿಜ್ಯ ಸಿಲಿಂಡರ್ ಮಾತ್ರ ಮಾರುಕಟ್ಟೆಯಲ್ಲಿ ಉಳಿದುಕೊಳ್ಳುತ್ತದೆ ಎಂಬುದರಲ್ಲಿ ಸಂದೇಹವಿಲ್ಲ.

ಭಾರತದ ಮಹಾನಗರಗಳಲ್ಲಿ ಈಗಾಗಲೇ ಹೆಚ್ಚಿನ ಮನೆಗಳಿಗೆ ಪೈಪ್-ಗ್ಯಾಸ್ (ಪಿ.ಎನ್.ಜಿ.) ಸಂಪರ್ಕ ಬಂದಾಗಿದೆ. ಕರ್ನಾಟಕದಲ್ಲೂ ತುಮಕೂರು, ಮೈಸೂರು ನಗರಗಲ್ಲಿ ಪೈಪ್ ಜೋಡಣೆ ಕಾರ್ಯ ಪ್ರಾರಂಭವಾಗಿದೆ. ಈ ಪೈಪ್ ಡ್ರೀಂ ಮಾರಾಟಗಾರರ ವಾದ ಏನೆಂದರೆ ನಿಮ್ಮ ಗೃಹಬಳಕೆಯ ಸಿಲಿಂಡರ್ ಬೆಲೆಗಿಂತ ಪೈಪ್ ಗ್ಯಾಸ್ ಬೆಲೆ ಸುಮಾರು 20-30% ಕಡಿಮೆ ಆಗುತ್ತದೆ, ನಿಮಗೆ 24 ಗಂಟೆ ಗ್ಯಾಸ್ ಬರುತ್ತದೆ, ಮೀಟರ್ ಪಾರದರ್ಶಕವಾಗಿ ನಿಮ್ಮ ಮುಂದೆ ಕಾಣುವಂತೆ ಇರುತ್ತದೆ ಮತ್ತು ನಿಮ್ಮ ಶಕ್ತ್ಯಾನುಸಾರ ಗ್ಯಾಸ್ ಬಳಕೆ ಮಾಡಬಹುದು ಹಾಗೂ ಮುಖ್ಯವಾಗಿ ಸಿಲಿಂಡರ್ ನಂತೆ ಪೈಪ್ ಬ್ಲಾಸ್ಟ್ ಆಗುವ ಸಂಭವ ತೀರ ಕಡಿಮೆ, ಇತ್ಯಾದಿ ಇತ್ಯಾದಿ.. ಪಿ.ಎನ್.ಜಿ. ಬೆಲೆ ಯೂನಿಟ್ಟಿಗೆ ರೂ.55 ಇದೆ ಅಂದರೆ ಗೃಹಬಳಕೆ ಸಿಲಿಂಡರ್ ಬೆಲೆಗೆ (ರೂ. 75/ಕೆಜಿ) ಹೋಲಿಸಿದರೆ ನಿಮಗೆ 20-30% ಉಳಿತಾಯ ಎಂದು ನಿಮ್ಮನ್ನು ನಂಬಿಸಲು ಮುಂದಾಗಿದ್ದಾರೆ.

ಈಗ ಇತ್ತೀಚಿನ ಪಿ.ಎನ್.ಜಿ. ಬೆಲೆ 40% ಏರಿಕೆ ಬಗ್ಗೆ ಬರೋಣ ಅಂದರೆ. ಈಗಿರುವ ರೂ.55/ಕೆಜಿ ಏನಾಗುತ್ತದೆ? ಅದು ರೂ.77/ಕೆಜಿ ಆಗುತ್ತದೆ. ಅಂದರೆ ಈಗಿರುವ ಗೃಹಬಳಕೆ ಸಿಲಿಂಡರ್ ಸಮಸಮಕ್ಕೆ ಬರುತ್ತದೆ ಅಥವಾ ಇನ್ನೂ ಸ್ವಲ್ಪ ಹೆಚ್ಚು ಅನ್ನಬಹುದು. ಮೇಲೆ ಹೇಳಿದಂತೆ ಗೃಹ ಬಳಕೆ ಸಿಲಿಂಡರ್ ಮಾಯವಾದರೆ ನೀವು ಯಾವುದಕ್ಕೆ ಬೆಲೆ ಹೋಲಿಸುತ್ತೀರಿ, ವಾಣಿಜ್ಯ ಸಿಲಿಂಡರ್ (ರೂ.100/ಕೆಜಿ) ತಾನೇ? ಇನ್ನು ಹೊಸ ಪೈಪ್ ಗ್ಯಾಸ್ ಕನೆಕ್ಷನ್ ತೆಗೆದುಕೊಳ್ಳಲು, ಅದಕ್ಕೆ ನೀಡಬೇಕಾದ ಮುಂಗಡ, ಇನ್ಸ್ಟಲೇಷನ್ ವೆಚ್ಚ, ಸೆಕ್ಯುರಿಟಿ ಡಿಪಾಸಿಟ್, ಎಲ್ಲಾ ಸೇರಿ ಸುಮಾರು ರೂ.6000/-ದಷ್ಟು ಎಲ್ಲಾ ನಿಮ್ಮ ಜೇಬಿನಿಂದ ಹೋಗುತ್ತದೆ. ಗ್ಯಾಸ್ ಸಂಪರ್ಕ ಖಾಸಗಿ ಕಂಪನಿಯಾಗಿರುವುದರಿಂದ ನಿಮಗೆ ಯಾವುದೇ ರೀತಿಯ ಸಬ್ಸಿಡಿ ಇರುವುದಿಲ್ಲ. ಮುಂದೆ ಅವರು ಆಡಿದ್ದೇ ಆಟ. ಈಗಲಾದರೂ ಅರ್ಥವಾಯಿತೇ ಸರಕಾರ ಹೇಗೆ ನಿಮ್ಮ ಕಿವಿಗೆ ಹೂವು ಮುಡಿಸುತ್ತಿದೆ ಎಂದು.

ಇನ್ನು ನಮ್ಮ ಮೊದಲನೆಯ ಪ್ರಶ್ನೆಗೆ ಬರೋಣ. ಗ್ಯಾಸ್ ಉತ್ಪಾದನೆ ದೇಶದ ಕೆ.ಜಿ.ಬೇಸಿನ್ ಹಳೆಯ ಬಾವಿಗಳಿಂದ ಆಗುತ್ತಿದೆ. ಇದರಲ್ಲಿ ಸಿಗುವ ಗ್ಯಾಸ್ ನಮ್ಮ ದೇಶದ ಸೊತ್ತು, ಯಾವುದೇ ವಿದೇಶದಿಂದ ಆಮದು ಮಾಡಿಕೊಂಡಂತಹ ಅನಿಲವಲ್ಲ. ಕೆಜಿ ಬೇಸಿನ್ ಗ್ಯಾಸ್ ಅನ್ವೇಷಣೆಗೆ ಭಾರತ ಸರಕಾರ ರಿಲಯನ್ಸ್ ಕಂಪನಿಗೆ ಗುತ್ತಿಗೆ ನೀಡಿತ್ತು ಅದರ ಖರ್ಚನ್ನು ಭಾರತ ಸರಕಾರ ಭರಿಸಿತ್ತು. ರಿಲಯನ್ಸ್ ಕಂಪನಿ ಈ ಖರ್ಚನ್ನು ಎರಡು ಬಿಲಿಯನ್ ಡಾಲರ್ ಎಂದು ಹೇಳಿತ್ತು. ಆದರೆ ವೆಚ್ಚ ಒಂದು ಬಿಲಿಯನ್ ಡಾಲರ್ ಸಹ ಆಗಲಿಲ್ಲ ಎಂಬುದು ಹಲವು ತೈಲ-ತಜ್ಞರ ವಾದ. ಭಾರತ ಸರಕಾರವಾಗಲೀ, ರಿಲಯನ್ಸ್ ಕಂಪನಿಯಾಗಲೀ ವೆಚ್ಚದ ಸಿ.ಎ.ಜಿ. ಆಡಿಟ್ಟಿಗೆ ಒಪ್ಪಲೇ ಇಲ್ಲ. ಇನ್ನು ತೈಲವನ್ನು ಹೊರಗೆ ಎಳೆಯುವ ವೆಚ್ಚ ಒಂದು ಮಿಲಿಯನ್ ಬ್ರಿಟಿಷ್ ಥರ್ಮಲ್ ಯೂನಿಟ್ಟಿಗೆ ಎರಡು ಡಾಲರ್ ಸಹ ಆಗುವುದಿಲ್ಲ ಎಂಬುದು ತೈಲ-ತಜ್ಞರ ವಾದ. ಆದರೆ ಭಾರತ ಸರಕಾರ ಇದಕ್ಕೆ 6.10 ಡಾಲರ್ ನಿಗದಿ ಮಾಡಿತ್ತು ಮತ್ತು ಇದನ್ನು ಈಗ 8.57 ಡಾಲರ್ ಪ್ರತಿ ಎಂಬಿಟಿಯುಗೆ ಏರಿಸಲಾಗಿದೆ. ಏಕೆಂದರೆ ಅಂತರಾಷ್ಟ್ರೀಯ ಮಟ್ಟದಲ್ಲಿ ಅನಿಲದ ಬೆಲೆ, ಯುಕ್ರೇನ್ ಯುದ್ಧ ಪ್ರಾರಂಭವಾದಾಗ ಇದಕ್ಕಿಂತ ಹೆಚ್ಚಾಗಿತ್ತು. (9.34ಡಾಲರ್/ಪ್ರತಿ ಯೂನಿಟ್ ವರೆಗೂ ಹೋಗಿತ್ತು) ಆದರೆ ಇಂದು ಬೆಲೆ 6.67ಡಾಲರ್/ಪ್ರತಿ ಯೂನಿಟ್ ಇದೆ. ಇಷ್ಟೇ ಅಲ್ಲ ಹಳೆಯ ಬಾವಿಗಳನ್ನು ಬಿಟ್ಟು, ಉತ್ಪಾದನೆ ಸ್ವಲ್ಪ ಕಷ್ಟಕರವಾದ ಸಮುದ್ರ ಮಧ್ಯದಲ್ಲಿರುವ ಡಿ6 ಬಾವಿಗಳಿಂದ ತೆಗೆಯುವ ಅನಿಲಕ್ಕೆ ಬೆಲೆಯನ್ನು 9.92ಡಾಲರ್/ಪ್ರತಿ ಎಂಬಿಟಿಯುಗೆ ನಿಂದ 12.6ಡಾಲರ್/ಪ್ರತಿ ಎಂಬಿಟಿಯುಗೆ ಹೆಚ್ಚಿಸಿದೆ. ಅನಿಲ ಬೆಲೆ ಏರಿಕೆ 2019ರಿಂದ ಇದು ಮೂರನೆಯದಾಗಿರುತ್ತದೆ. ರುಪಾಯಿ ಬೆಲೆ ಡಾಲರ್ ವಿರುದ್ಧ ಕುಸಿದಂತೆ ಡಾಲರ್ ಪಡೆಯುತ್ತಿರುವ ಕಂಪನಿಯ ಮಾಲೀಕರ ನಗು ಬಾಯಿ ತುಂಬಿ ಹೊರಸೂಸುತ್ತಿದೆ. ಮೋದಿಯವರು ತಮ್ಮ ಆಪ್ತಮಿತ್ರರಿಗೆ ಸಹಾಯ ಮಾಡಲು ಹೇಗೆ ಸರಕಾರದಿಂದ ಅನುವು ಮಾಡಿಕೊಡುತ್ತಿದ್ದಾರೆ ಎಂಬುದು ಬಹುಶಃ ಈಗಲಾದರೂ ತಮಗೆ ಅರ್ಥವಾಗಿರಬಹುದು.

ಜಿ.ಆರ್. ವಿದ್ಯಾರಣ್ಯ

(ಜಿ.ಆರ್ ವಿದ್ಯಾರಣ್ಯರವರು ಸುಮಾರು ಇಪ್ಪತ್ತೈದು ವರ್ಷ ವಾಣಿಜ್ಯ ಹಡಗುಗಳಲ್ಲಿ ಕಮ್ಯುನಿಕೇಷನ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದವರು. ಇದಲ್ಲದೆ ಕಂಪ್ಯೂಟರ್ ನೆಟವರ್ಕ್ ರೇಡಿಯೋ ಸುಪರಿಂಟೆಂಡೆಂಟ್ ಆಗಿ ಅಮೇರಿಕಾ, ಸಿಂಗಾಪುರ್, ಚೈನಾ, ಜಪಾನ್, ದೇಶಗಳಲ್ಲಿ ಕೆಲಸ ಮಾಡಿದ್ದಾರೆ. ನೂರಕ್ಕೂ ಹೆಚ್ಚು ದೇಶಗಳನ್ನು ಸುತ್ತಿ ಬಂದಿರುತ್ತಾರೆ. ಸಾಮಾಜಿಕ ಕಳಕಳಿಯುಳ್ಳ ಅವರು ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕು ಎಂಬ ಹಂಬಲದಿಂದ 2001 ರಲ್ಲಿ ಮುಂಬಯಿ ಬಿಟ್ಟು, ಮೈಸೂರಿನಲ್ಲಿ ನೆಲೆಸಿ ಹಲವು ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ)

ಇದನ್ನೂ ಓದಿ; ಪೆಟ್ರೋಲ್, ಡೀಸೆಲ್, ಗ್ಯಾಸ್ ಸೇರಿದಂತೆ ದಿನಬಳಕೆಯ ವಸ್ತುಗಳ ಬೆಲೆ ಏರಿಕೆ ನಿಂತಿಲ್ಲ: ಏಕೆ ಗೊತ್ತೆ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಬರೀ ರೈಲು ಬಿಟ್ಟಿದ್ದಾರೆ… ಜನಪರ ಕಾಳಜಿ ಅನ್ನೋ ಪದದಡಿ ಜನರನ್ನು ಹಾದಿತಾಪ್ಪಿಸುವ ಪ್ರಯತ್ನ…

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...