Homeಮುಖಪುಟಗ್ಯಾಸ್ ಪುರಾಣ: ಗೃಹ ಬಳಕೆಯ ಗ್ಯಾಸ್ ಬೆಲೆ ಹೆಚ್ಚಾಗುತ್ತಿರುವುದಕ್ಕೆ ಕಾರಣಗಳಿವು

ಗ್ಯಾಸ್ ಪುರಾಣ: ಗೃಹ ಬಳಕೆಯ ಗ್ಯಾಸ್ ಬೆಲೆ ಹೆಚ್ಚಾಗುತ್ತಿರುವುದಕ್ಕೆ ಕಾರಣಗಳಿವು

ಶೀಘ್ರದಲ್ಲೇ ಗೃಹಬಳಕೆ ಸಿಲಿಂಡರ್ ಮಾಯವಾಗಿ ಕೇವಲ ವಾಣಿಜ್ಯ ಸಿಲಿಂಡರ್ ಮಾತ್ರ ಮಾರುಕಟ್ಟೆಯಲ್ಲಿ ಉಳಿದುಕೊಳ್ಳುತ್ತದೆ ಎಂಬುದರಲ್ಲಿ ಸಂದೇಹವಿಲ್ಲ...

- Advertisement -
- Advertisement -

ಇತ್ತೀಚೆಗೆ “ಪ್ರಾಕೃತಿಕ ಗ್ಯಾಸ್ ಬೆಲೆಯಲ್ಲಿ 40% ಹೆಚ್ಚಳ” ಎಂಬ ಸುದ್ದಿ ನೀವೆಲ್ಲರೂ ದೃಶ್ಯಮಾಧ್ಯಮದಲ್ಲಿ ಕೇಳಿರುತ್ತೀರಿ ಅಥವಾ ವೃತ್ತಪತ್ರಿಕೆಗಳಲ್ಲಿ ಓದಿರುತ್ತೀರಿ. ಗ್ಯಾಸ್ ಬೆಲೆ ಯೂನಿಟ್ಟಿಗೆ 6.10 ಡಾಲರ್ ನಿಂದ 8.57 ಡಾಲರ್ ಆಗಲಿದೆ ಅಂದರೆ ಸುಮಾರು 40% ಹೆಚ್ಚಳ ಆಗಲಿದೆ ಮತ್ತು ಅದರಿಂದ ಸಿ.ಎನ್.ಜಿ. ಮತ್ತು ಪಿ.ಎನ್.ಜಿ. ಗ್ರಾಹಕರಿಗೆ ಅದರ ಬಿಸಿ ತಟ್ಟಲಿದೆ ಎಂಬ ವಿವರ ಸುದ್ದಿಯಲ್ಲಿತ್ತು. ಇದರಲ್ಲಿ ಗಮನಿಸಬೇಕಾದ ವಿಷಯ ಅಥವಾ ಕೇಳಬೇಕಾದ ಪ್ರಶ್ನೆ: ಮೊದಲನೆಯದು, ಭಾರತದಲ್ಲಿ ಇರುವ ತೈಲನಿಕ್ಷೇಪದಿಂದ ಭಾರತದ ಕಂಪನಿಗಳೇ ಉತ್ಪಾದಿಸುತ್ತಿರುವ ಗ್ಯಾಸ್ ಬೆಲೆ “ಡಾಲರ್”ನಲ್ಲಿ ಏಕಿದೆ ಮತ್ತು  ಎರಡನೆಯದು, ಉತ್ಪಾದನಾ ವೆಚ್ಚಕ್ಕಿಂತ ನಾಲ್ಕೈದು ಪಟ್ಟು ಹೆಚ್ಚು ಬೆಲೆಗೆ ಖಾಸಗಿ ಕಂಪನಿಗಳು ಭಾರತದ ಗ್ರಾಹಕರಿಗೆ ಗ್ಯಾಸ್ ಮಾರಾಟ ಮಾಡಲು ಸರಕಾರ ಏಕೆ ಅನುವು ಮಾಡಿಕೊಟ್ಟಿದೆ ಎಂಬುದು. ಗ್ಯಾಸ್ ಉತ್ಪಾದನೆ ಮತ್ತು ಮಾರಾಟವನ್ನು  ಅಂಬಾನಿ ಮತ್ತು ಅದಾನಿ ಅವರಿಗೆ ಗುತ್ತಿಗೆ ನೀಡಿರುವುದರಿಂದ ಎರಡನೆಯ ಪ್ರಶ್ನೆಗೆ ಉತ್ತರ ಸಿಕ್ಕಿದೆ ಎಂದುಕೊಂಡಿದ್ದೇನೆ. ಮೊದಲನೆಯ ಪ್ರಶ್ನೆಯ ಉತ್ತರಕ್ಕೆ ನಂತರ ಬರೋಣ.

ಗೃಹಬಳಕೆಯ 14.2 ಕೆಜಿ ಎಲ್.ಪಿ.ಜಿ. ಸಿಲಿಂಡರ್ ಬೆಲೆ ರೂ.1050 ದಾಟಿದೆ ಮತ್ತು 19ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆ ಸುಮಾರು ರೂ.1900 ಇದೆ. ಅಂದರೆ ಗೃಹಬಳಕೆ ಗ್ಯಾಸ್ ರೂ.75/ಕೆಜಿ ಮತ್ತು ವಾಣಿಜ್ಯ ಗ್ಯಾಸ್ ರೂ.100/ಕೆಜಿ ಎಂದಾಯಿತು. ಗೃಹಬಳಕೆಯ ಸಿಲಿಂಡರ್ ಮೇಲೆ ಸರಕಾರ ಈಗಲೂ ಸಬ್ಸಿಡಿ ನೀಡುತ್ತಿದೆ ಎಂದು ಅವರ ವಾದ. ಆದರೆ ನಿಮ್ಮ ಖಾತೆಗೆ ಯಾವುದೇ ಹಣ ಬರುತ್ತಿಲ್ಲ ಎಂಬುದೂ ಸಹ  ಸತ್ಯ. ಸಿ.ಎನ್.ಜಿ. ಬೆಲೆ ರೂ.86/ಕೆಜಿ ಇದೆ. ಸರಕಾರ ಎಲ್ಲ ರೀತಿಯ ಸಬ್ಸಿಡಿ ನಿಲ್ಲಿಸಬೇಕೆಂದು ಪ್ರಯತ್ನ ಮಾಡುತ್ತಿರುವುದು ಎಲ್ಲರಿಗೂ ತಿಳಿದ ವಿಷಯ. ಶೀಘ್ರದಲ್ಲೇ ಗೃಹಬಳಕೆ ಸಿಲಿಂಡರ್ ಮಾಯವಾಗಿ ಕೇವಲ ವಾಣಿಜ್ಯ ಸಿಲಿಂಡರ್ ಮಾತ್ರ ಮಾರುಕಟ್ಟೆಯಲ್ಲಿ ಉಳಿದುಕೊಳ್ಳುತ್ತದೆ ಎಂಬುದರಲ್ಲಿ ಸಂದೇಹವಿಲ್ಲ.

ಭಾರತದ ಮಹಾನಗರಗಳಲ್ಲಿ ಈಗಾಗಲೇ ಹೆಚ್ಚಿನ ಮನೆಗಳಿಗೆ ಪೈಪ್-ಗ್ಯಾಸ್ (ಪಿ.ಎನ್.ಜಿ.) ಸಂಪರ್ಕ ಬಂದಾಗಿದೆ. ಕರ್ನಾಟಕದಲ್ಲೂ ತುಮಕೂರು, ಮೈಸೂರು ನಗರಗಲ್ಲಿ ಪೈಪ್ ಜೋಡಣೆ ಕಾರ್ಯ ಪ್ರಾರಂಭವಾಗಿದೆ. ಈ ಪೈಪ್ ಡ್ರೀಂ ಮಾರಾಟಗಾರರ ವಾದ ಏನೆಂದರೆ ನಿಮ್ಮ ಗೃಹಬಳಕೆಯ ಸಿಲಿಂಡರ್ ಬೆಲೆಗಿಂತ ಪೈಪ್ ಗ್ಯಾಸ್ ಬೆಲೆ ಸುಮಾರು 20-30% ಕಡಿಮೆ ಆಗುತ್ತದೆ, ನಿಮಗೆ 24 ಗಂಟೆ ಗ್ಯಾಸ್ ಬರುತ್ತದೆ, ಮೀಟರ್ ಪಾರದರ್ಶಕವಾಗಿ ನಿಮ್ಮ ಮುಂದೆ ಕಾಣುವಂತೆ ಇರುತ್ತದೆ ಮತ್ತು ನಿಮ್ಮ ಶಕ್ತ್ಯಾನುಸಾರ ಗ್ಯಾಸ್ ಬಳಕೆ ಮಾಡಬಹುದು ಹಾಗೂ ಮುಖ್ಯವಾಗಿ ಸಿಲಿಂಡರ್ ನಂತೆ ಪೈಪ್ ಬ್ಲಾಸ್ಟ್ ಆಗುವ ಸಂಭವ ತೀರ ಕಡಿಮೆ, ಇತ್ಯಾದಿ ಇತ್ಯಾದಿ.. ಪಿ.ಎನ್.ಜಿ. ಬೆಲೆ ಯೂನಿಟ್ಟಿಗೆ ರೂ.55 ಇದೆ ಅಂದರೆ ಗೃಹಬಳಕೆ ಸಿಲಿಂಡರ್ ಬೆಲೆಗೆ (ರೂ. 75/ಕೆಜಿ) ಹೋಲಿಸಿದರೆ ನಿಮಗೆ 20-30% ಉಳಿತಾಯ ಎಂದು ನಿಮ್ಮನ್ನು ನಂಬಿಸಲು ಮುಂದಾಗಿದ್ದಾರೆ.

ಈಗ ಇತ್ತೀಚಿನ ಪಿ.ಎನ್.ಜಿ. ಬೆಲೆ 40% ಏರಿಕೆ ಬಗ್ಗೆ ಬರೋಣ ಅಂದರೆ. ಈಗಿರುವ ರೂ.55/ಕೆಜಿ ಏನಾಗುತ್ತದೆ? ಅದು ರೂ.77/ಕೆಜಿ ಆಗುತ್ತದೆ. ಅಂದರೆ ಈಗಿರುವ ಗೃಹಬಳಕೆ ಸಿಲಿಂಡರ್ ಸಮಸಮಕ್ಕೆ ಬರುತ್ತದೆ ಅಥವಾ ಇನ್ನೂ ಸ್ವಲ್ಪ ಹೆಚ್ಚು ಅನ್ನಬಹುದು. ಮೇಲೆ ಹೇಳಿದಂತೆ ಗೃಹ ಬಳಕೆ ಸಿಲಿಂಡರ್ ಮಾಯವಾದರೆ ನೀವು ಯಾವುದಕ್ಕೆ ಬೆಲೆ ಹೋಲಿಸುತ್ತೀರಿ, ವಾಣಿಜ್ಯ ಸಿಲಿಂಡರ್ (ರೂ.100/ಕೆಜಿ) ತಾನೇ? ಇನ್ನು ಹೊಸ ಪೈಪ್ ಗ್ಯಾಸ್ ಕನೆಕ್ಷನ್ ತೆಗೆದುಕೊಳ್ಳಲು, ಅದಕ್ಕೆ ನೀಡಬೇಕಾದ ಮುಂಗಡ, ಇನ್ಸ್ಟಲೇಷನ್ ವೆಚ್ಚ, ಸೆಕ್ಯುರಿಟಿ ಡಿಪಾಸಿಟ್, ಎಲ್ಲಾ ಸೇರಿ ಸುಮಾರು ರೂ.6000/-ದಷ್ಟು ಎಲ್ಲಾ ನಿಮ್ಮ ಜೇಬಿನಿಂದ ಹೋಗುತ್ತದೆ. ಗ್ಯಾಸ್ ಸಂಪರ್ಕ ಖಾಸಗಿ ಕಂಪನಿಯಾಗಿರುವುದರಿಂದ ನಿಮಗೆ ಯಾವುದೇ ರೀತಿಯ ಸಬ್ಸಿಡಿ ಇರುವುದಿಲ್ಲ. ಮುಂದೆ ಅವರು ಆಡಿದ್ದೇ ಆಟ. ಈಗಲಾದರೂ ಅರ್ಥವಾಯಿತೇ ಸರಕಾರ ಹೇಗೆ ನಿಮ್ಮ ಕಿವಿಗೆ ಹೂವು ಮುಡಿಸುತ್ತಿದೆ ಎಂದು.

ಇನ್ನು ನಮ್ಮ ಮೊದಲನೆಯ ಪ್ರಶ್ನೆಗೆ ಬರೋಣ. ಗ್ಯಾಸ್ ಉತ್ಪಾದನೆ ದೇಶದ ಕೆ.ಜಿ.ಬೇಸಿನ್ ಹಳೆಯ ಬಾವಿಗಳಿಂದ ಆಗುತ್ತಿದೆ. ಇದರಲ್ಲಿ ಸಿಗುವ ಗ್ಯಾಸ್ ನಮ್ಮ ದೇಶದ ಸೊತ್ತು, ಯಾವುದೇ ವಿದೇಶದಿಂದ ಆಮದು ಮಾಡಿಕೊಂಡಂತಹ ಅನಿಲವಲ್ಲ. ಕೆಜಿ ಬೇಸಿನ್ ಗ್ಯಾಸ್ ಅನ್ವೇಷಣೆಗೆ ಭಾರತ ಸರಕಾರ ರಿಲಯನ್ಸ್ ಕಂಪನಿಗೆ ಗುತ್ತಿಗೆ ನೀಡಿತ್ತು ಅದರ ಖರ್ಚನ್ನು ಭಾರತ ಸರಕಾರ ಭರಿಸಿತ್ತು. ರಿಲಯನ್ಸ್ ಕಂಪನಿ ಈ ಖರ್ಚನ್ನು ಎರಡು ಬಿಲಿಯನ್ ಡಾಲರ್ ಎಂದು ಹೇಳಿತ್ತು. ಆದರೆ ವೆಚ್ಚ ಒಂದು ಬಿಲಿಯನ್ ಡಾಲರ್ ಸಹ ಆಗಲಿಲ್ಲ ಎಂಬುದು ಹಲವು ತೈಲ-ತಜ್ಞರ ವಾದ. ಭಾರತ ಸರಕಾರವಾಗಲೀ, ರಿಲಯನ್ಸ್ ಕಂಪನಿಯಾಗಲೀ ವೆಚ್ಚದ ಸಿ.ಎ.ಜಿ. ಆಡಿಟ್ಟಿಗೆ ಒಪ್ಪಲೇ ಇಲ್ಲ. ಇನ್ನು ತೈಲವನ್ನು ಹೊರಗೆ ಎಳೆಯುವ ವೆಚ್ಚ ಒಂದು ಮಿಲಿಯನ್ ಬ್ರಿಟಿಷ್ ಥರ್ಮಲ್ ಯೂನಿಟ್ಟಿಗೆ ಎರಡು ಡಾಲರ್ ಸಹ ಆಗುವುದಿಲ್ಲ ಎಂಬುದು ತೈಲ-ತಜ್ಞರ ವಾದ. ಆದರೆ ಭಾರತ ಸರಕಾರ ಇದಕ್ಕೆ 6.10 ಡಾಲರ್ ನಿಗದಿ ಮಾಡಿತ್ತು ಮತ್ತು ಇದನ್ನು ಈಗ 8.57 ಡಾಲರ್ ಪ್ರತಿ ಎಂಬಿಟಿಯುಗೆ ಏರಿಸಲಾಗಿದೆ. ಏಕೆಂದರೆ ಅಂತರಾಷ್ಟ್ರೀಯ ಮಟ್ಟದಲ್ಲಿ ಅನಿಲದ ಬೆಲೆ, ಯುಕ್ರೇನ್ ಯುದ್ಧ ಪ್ರಾರಂಭವಾದಾಗ ಇದಕ್ಕಿಂತ ಹೆಚ್ಚಾಗಿತ್ತು. (9.34ಡಾಲರ್/ಪ್ರತಿ ಯೂನಿಟ್ ವರೆಗೂ ಹೋಗಿತ್ತು) ಆದರೆ ಇಂದು ಬೆಲೆ 6.67ಡಾಲರ್/ಪ್ರತಿ ಯೂನಿಟ್ ಇದೆ. ಇಷ್ಟೇ ಅಲ್ಲ ಹಳೆಯ ಬಾವಿಗಳನ್ನು ಬಿಟ್ಟು, ಉತ್ಪಾದನೆ ಸ್ವಲ್ಪ ಕಷ್ಟಕರವಾದ ಸಮುದ್ರ ಮಧ್ಯದಲ್ಲಿರುವ ಡಿ6 ಬಾವಿಗಳಿಂದ ತೆಗೆಯುವ ಅನಿಲಕ್ಕೆ ಬೆಲೆಯನ್ನು 9.92ಡಾಲರ್/ಪ್ರತಿ ಎಂಬಿಟಿಯುಗೆ ನಿಂದ 12.6ಡಾಲರ್/ಪ್ರತಿ ಎಂಬಿಟಿಯುಗೆ ಹೆಚ್ಚಿಸಿದೆ. ಅನಿಲ ಬೆಲೆ ಏರಿಕೆ 2019ರಿಂದ ಇದು ಮೂರನೆಯದಾಗಿರುತ್ತದೆ. ರುಪಾಯಿ ಬೆಲೆ ಡಾಲರ್ ವಿರುದ್ಧ ಕುಸಿದಂತೆ ಡಾಲರ್ ಪಡೆಯುತ್ತಿರುವ ಕಂಪನಿಯ ಮಾಲೀಕರ ನಗು ಬಾಯಿ ತುಂಬಿ ಹೊರಸೂಸುತ್ತಿದೆ. ಮೋದಿಯವರು ತಮ್ಮ ಆಪ್ತಮಿತ್ರರಿಗೆ ಸಹಾಯ ಮಾಡಲು ಹೇಗೆ ಸರಕಾರದಿಂದ ಅನುವು ಮಾಡಿಕೊಡುತ್ತಿದ್ದಾರೆ ಎಂಬುದು ಬಹುಶಃ ಈಗಲಾದರೂ ತಮಗೆ ಅರ್ಥವಾಗಿರಬಹುದು.

ಜಿ.ಆರ್. ವಿದ್ಯಾರಣ್ಯ

(ಜಿ.ಆರ್ ವಿದ್ಯಾರಣ್ಯರವರು ಸುಮಾರು ಇಪ್ಪತ್ತೈದು ವರ್ಷ ವಾಣಿಜ್ಯ ಹಡಗುಗಳಲ್ಲಿ ಕಮ್ಯುನಿಕೇಷನ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದವರು. ಇದಲ್ಲದೆ ಕಂಪ್ಯೂಟರ್ ನೆಟವರ್ಕ್ ರೇಡಿಯೋ ಸುಪರಿಂಟೆಂಡೆಂಟ್ ಆಗಿ ಅಮೇರಿಕಾ, ಸಿಂಗಾಪುರ್, ಚೈನಾ, ಜಪಾನ್, ದೇಶಗಳಲ್ಲಿ ಕೆಲಸ ಮಾಡಿದ್ದಾರೆ. ನೂರಕ್ಕೂ ಹೆಚ್ಚು ದೇಶಗಳನ್ನು ಸುತ್ತಿ ಬಂದಿರುತ್ತಾರೆ. ಸಾಮಾಜಿಕ ಕಳಕಳಿಯುಳ್ಳ ಅವರು ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕು ಎಂಬ ಹಂಬಲದಿಂದ 2001 ರಲ್ಲಿ ಮುಂಬಯಿ ಬಿಟ್ಟು, ಮೈಸೂರಿನಲ್ಲಿ ನೆಲೆಸಿ ಹಲವು ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ)

ಇದನ್ನೂ ಓದಿ; ಪೆಟ್ರೋಲ್, ಡೀಸೆಲ್, ಗ್ಯಾಸ್ ಸೇರಿದಂತೆ ದಿನಬಳಕೆಯ ವಸ್ತುಗಳ ಬೆಲೆ ಏರಿಕೆ ನಿಂತಿಲ್ಲ: ಏಕೆ ಗೊತ್ತೆ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಬರೀ ರೈಲು ಬಿಟ್ಟಿದ್ದಾರೆ… ಜನಪರ ಕಾಳಜಿ ಅನ್ನೋ ಪದದಡಿ ಜನರನ್ನು ಹಾದಿತಾಪ್ಪಿಸುವ ಪ್ರಯತ್ನ…

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...