Homeಮುಖಪುಟಗ್ಯಾಸ್ ಪುರಾಣ: ಗೃಹ ಬಳಕೆಯ ಗ್ಯಾಸ್ ಬೆಲೆ ಹೆಚ್ಚಾಗುತ್ತಿರುವುದಕ್ಕೆ ಕಾರಣಗಳಿವು

ಗ್ಯಾಸ್ ಪುರಾಣ: ಗೃಹ ಬಳಕೆಯ ಗ್ಯಾಸ್ ಬೆಲೆ ಹೆಚ್ಚಾಗುತ್ತಿರುವುದಕ್ಕೆ ಕಾರಣಗಳಿವು

ಶೀಘ್ರದಲ್ಲೇ ಗೃಹಬಳಕೆ ಸಿಲಿಂಡರ್ ಮಾಯವಾಗಿ ಕೇವಲ ವಾಣಿಜ್ಯ ಸಿಲಿಂಡರ್ ಮಾತ್ರ ಮಾರುಕಟ್ಟೆಯಲ್ಲಿ ಉಳಿದುಕೊಳ್ಳುತ್ತದೆ ಎಂಬುದರಲ್ಲಿ ಸಂದೇಹವಿಲ್ಲ...

- Advertisement -
- Advertisement -

ಇತ್ತೀಚೆಗೆ “ಪ್ರಾಕೃತಿಕ ಗ್ಯಾಸ್ ಬೆಲೆಯಲ್ಲಿ 40% ಹೆಚ್ಚಳ” ಎಂಬ ಸುದ್ದಿ ನೀವೆಲ್ಲರೂ ದೃಶ್ಯಮಾಧ್ಯಮದಲ್ಲಿ ಕೇಳಿರುತ್ತೀರಿ ಅಥವಾ ವೃತ್ತಪತ್ರಿಕೆಗಳಲ್ಲಿ ಓದಿರುತ್ತೀರಿ. ಗ್ಯಾಸ್ ಬೆಲೆ ಯೂನಿಟ್ಟಿಗೆ 6.10 ಡಾಲರ್ ನಿಂದ 8.57 ಡಾಲರ್ ಆಗಲಿದೆ ಅಂದರೆ ಸುಮಾರು 40% ಹೆಚ್ಚಳ ಆಗಲಿದೆ ಮತ್ತು ಅದರಿಂದ ಸಿ.ಎನ್.ಜಿ. ಮತ್ತು ಪಿ.ಎನ್.ಜಿ. ಗ್ರಾಹಕರಿಗೆ ಅದರ ಬಿಸಿ ತಟ್ಟಲಿದೆ ಎಂಬ ವಿವರ ಸುದ್ದಿಯಲ್ಲಿತ್ತು. ಇದರಲ್ಲಿ ಗಮನಿಸಬೇಕಾದ ವಿಷಯ ಅಥವಾ ಕೇಳಬೇಕಾದ ಪ್ರಶ್ನೆ: ಮೊದಲನೆಯದು, ಭಾರತದಲ್ಲಿ ಇರುವ ತೈಲನಿಕ್ಷೇಪದಿಂದ ಭಾರತದ ಕಂಪನಿಗಳೇ ಉತ್ಪಾದಿಸುತ್ತಿರುವ ಗ್ಯಾಸ್ ಬೆಲೆ “ಡಾಲರ್”ನಲ್ಲಿ ಏಕಿದೆ ಮತ್ತು  ಎರಡನೆಯದು, ಉತ್ಪಾದನಾ ವೆಚ್ಚಕ್ಕಿಂತ ನಾಲ್ಕೈದು ಪಟ್ಟು ಹೆಚ್ಚು ಬೆಲೆಗೆ ಖಾಸಗಿ ಕಂಪನಿಗಳು ಭಾರತದ ಗ್ರಾಹಕರಿಗೆ ಗ್ಯಾಸ್ ಮಾರಾಟ ಮಾಡಲು ಸರಕಾರ ಏಕೆ ಅನುವು ಮಾಡಿಕೊಟ್ಟಿದೆ ಎಂಬುದು. ಗ್ಯಾಸ್ ಉತ್ಪಾದನೆ ಮತ್ತು ಮಾರಾಟವನ್ನು  ಅಂಬಾನಿ ಮತ್ತು ಅದಾನಿ ಅವರಿಗೆ ಗುತ್ತಿಗೆ ನೀಡಿರುವುದರಿಂದ ಎರಡನೆಯ ಪ್ರಶ್ನೆಗೆ ಉತ್ತರ ಸಿಕ್ಕಿದೆ ಎಂದುಕೊಂಡಿದ್ದೇನೆ. ಮೊದಲನೆಯ ಪ್ರಶ್ನೆಯ ಉತ್ತರಕ್ಕೆ ನಂತರ ಬರೋಣ.

ಗೃಹಬಳಕೆಯ 14.2 ಕೆಜಿ ಎಲ್.ಪಿ.ಜಿ. ಸಿಲಿಂಡರ್ ಬೆಲೆ ರೂ.1050 ದಾಟಿದೆ ಮತ್ತು 19ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆ ಸುಮಾರು ರೂ.1900 ಇದೆ. ಅಂದರೆ ಗೃಹಬಳಕೆ ಗ್ಯಾಸ್ ರೂ.75/ಕೆಜಿ ಮತ್ತು ವಾಣಿಜ್ಯ ಗ್ಯಾಸ್ ರೂ.100/ಕೆಜಿ ಎಂದಾಯಿತು. ಗೃಹಬಳಕೆಯ ಸಿಲಿಂಡರ್ ಮೇಲೆ ಸರಕಾರ ಈಗಲೂ ಸಬ್ಸಿಡಿ ನೀಡುತ್ತಿದೆ ಎಂದು ಅವರ ವಾದ. ಆದರೆ ನಿಮ್ಮ ಖಾತೆಗೆ ಯಾವುದೇ ಹಣ ಬರುತ್ತಿಲ್ಲ ಎಂಬುದೂ ಸಹ  ಸತ್ಯ. ಸಿ.ಎನ್.ಜಿ. ಬೆಲೆ ರೂ.86/ಕೆಜಿ ಇದೆ. ಸರಕಾರ ಎಲ್ಲ ರೀತಿಯ ಸಬ್ಸಿಡಿ ನಿಲ್ಲಿಸಬೇಕೆಂದು ಪ್ರಯತ್ನ ಮಾಡುತ್ತಿರುವುದು ಎಲ್ಲರಿಗೂ ತಿಳಿದ ವಿಷಯ. ಶೀಘ್ರದಲ್ಲೇ ಗೃಹಬಳಕೆ ಸಿಲಿಂಡರ್ ಮಾಯವಾಗಿ ಕೇವಲ ವಾಣಿಜ್ಯ ಸಿಲಿಂಡರ್ ಮಾತ್ರ ಮಾರುಕಟ್ಟೆಯಲ್ಲಿ ಉಳಿದುಕೊಳ್ಳುತ್ತದೆ ಎಂಬುದರಲ್ಲಿ ಸಂದೇಹವಿಲ್ಲ.

ಭಾರತದ ಮಹಾನಗರಗಳಲ್ಲಿ ಈಗಾಗಲೇ ಹೆಚ್ಚಿನ ಮನೆಗಳಿಗೆ ಪೈಪ್-ಗ್ಯಾಸ್ (ಪಿ.ಎನ್.ಜಿ.) ಸಂಪರ್ಕ ಬಂದಾಗಿದೆ. ಕರ್ನಾಟಕದಲ್ಲೂ ತುಮಕೂರು, ಮೈಸೂರು ನಗರಗಲ್ಲಿ ಪೈಪ್ ಜೋಡಣೆ ಕಾರ್ಯ ಪ್ರಾರಂಭವಾಗಿದೆ. ಈ ಪೈಪ್ ಡ್ರೀಂ ಮಾರಾಟಗಾರರ ವಾದ ಏನೆಂದರೆ ನಿಮ್ಮ ಗೃಹಬಳಕೆಯ ಸಿಲಿಂಡರ್ ಬೆಲೆಗಿಂತ ಪೈಪ್ ಗ್ಯಾಸ್ ಬೆಲೆ ಸುಮಾರು 20-30% ಕಡಿಮೆ ಆಗುತ್ತದೆ, ನಿಮಗೆ 24 ಗಂಟೆ ಗ್ಯಾಸ್ ಬರುತ್ತದೆ, ಮೀಟರ್ ಪಾರದರ್ಶಕವಾಗಿ ನಿಮ್ಮ ಮುಂದೆ ಕಾಣುವಂತೆ ಇರುತ್ತದೆ ಮತ್ತು ನಿಮ್ಮ ಶಕ್ತ್ಯಾನುಸಾರ ಗ್ಯಾಸ್ ಬಳಕೆ ಮಾಡಬಹುದು ಹಾಗೂ ಮುಖ್ಯವಾಗಿ ಸಿಲಿಂಡರ್ ನಂತೆ ಪೈಪ್ ಬ್ಲಾಸ್ಟ್ ಆಗುವ ಸಂಭವ ತೀರ ಕಡಿಮೆ, ಇತ್ಯಾದಿ ಇತ್ಯಾದಿ.. ಪಿ.ಎನ್.ಜಿ. ಬೆಲೆ ಯೂನಿಟ್ಟಿಗೆ ರೂ.55 ಇದೆ ಅಂದರೆ ಗೃಹಬಳಕೆ ಸಿಲಿಂಡರ್ ಬೆಲೆಗೆ (ರೂ. 75/ಕೆಜಿ) ಹೋಲಿಸಿದರೆ ನಿಮಗೆ 20-30% ಉಳಿತಾಯ ಎಂದು ನಿಮ್ಮನ್ನು ನಂಬಿಸಲು ಮುಂದಾಗಿದ್ದಾರೆ.

ಈಗ ಇತ್ತೀಚಿನ ಪಿ.ಎನ್.ಜಿ. ಬೆಲೆ 40% ಏರಿಕೆ ಬಗ್ಗೆ ಬರೋಣ ಅಂದರೆ. ಈಗಿರುವ ರೂ.55/ಕೆಜಿ ಏನಾಗುತ್ತದೆ? ಅದು ರೂ.77/ಕೆಜಿ ಆಗುತ್ತದೆ. ಅಂದರೆ ಈಗಿರುವ ಗೃಹಬಳಕೆ ಸಿಲಿಂಡರ್ ಸಮಸಮಕ್ಕೆ ಬರುತ್ತದೆ ಅಥವಾ ಇನ್ನೂ ಸ್ವಲ್ಪ ಹೆಚ್ಚು ಅನ್ನಬಹುದು. ಮೇಲೆ ಹೇಳಿದಂತೆ ಗೃಹ ಬಳಕೆ ಸಿಲಿಂಡರ್ ಮಾಯವಾದರೆ ನೀವು ಯಾವುದಕ್ಕೆ ಬೆಲೆ ಹೋಲಿಸುತ್ತೀರಿ, ವಾಣಿಜ್ಯ ಸಿಲಿಂಡರ್ (ರೂ.100/ಕೆಜಿ) ತಾನೇ? ಇನ್ನು ಹೊಸ ಪೈಪ್ ಗ್ಯಾಸ್ ಕನೆಕ್ಷನ್ ತೆಗೆದುಕೊಳ್ಳಲು, ಅದಕ್ಕೆ ನೀಡಬೇಕಾದ ಮುಂಗಡ, ಇನ್ಸ್ಟಲೇಷನ್ ವೆಚ್ಚ, ಸೆಕ್ಯುರಿಟಿ ಡಿಪಾಸಿಟ್, ಎಲ್ಲಾ ಸೇರಿ ಸುಮಾರು ರೂ.6000/-ದಷ್ಟು ಎಲ್ಲಾ ನಿಮ್ಮ ಜೇಬಿನಿಂದ ಹೋಗುತ್ತದೆ. ಗ್ಯಾಸ್ ಸಂಪರ್ಕ ಖಾಸಗಿ ಕಂಪನಿಯಾಗಿರುವುದರಿಂದ ನಿಮಗೆ ಯಾವುದೇ ರೀತಿಯ ಸಬ್ಸಿಡಿ ಇರುವುದಿಲ್ಲ. ಮುಂದೆ ಅವರು ಆಡಿದ್ದೇ ಆಟ. ಈಗಲಾದರೂ ಅರ್ಥವಾಯಿತೇ ಸರಕಾರ ಹೇಗೆ ನಿಮ್ಮ ಕಿವಿಗೆ ಹೂವು ಮುಡಿಸುತ್ತಿದೆ ಎಂದು.

ಇನ್ನು ನಮ್ಮ ಮೊದಲನೆಯ ಪ್ರಶ್ನೆಗೆ ಬರೋಣ. ಗ್ಯಾಸ್ ಉತ್ಪಾದನೆ ದೇಶದ ಕೆ.ಜಿ.ಬೇಸಿನ್ ಹಳೆಯ ಬಾವಿಗಳಿಂದ ಆಗುತ್ತಿದೆ. ಇದರಲ್ಲಿ ಸಿಗುವ ಗ್ಯಾಸ್ ನಮ್ಮ ದೇಶದ ಸೊತ್ತು, ಯಾವುದೇ ವಿದೇಶದಿಂದ ಆಮದು ಮಾಡಿಕೊಂಡಂತಹ ಅನಿಲವಲ್ಲ. ಕೆಜಿ ಬೇಸಿನ್ ಗ್ಯಾಸ್ ಅನ್ವೇಷಣೆಗೆ ಭಾರತ ಸರಕಾರ ರಿಲಯನ್ಸ್ ಕಂಪನಿಗೆ ಗುತ್ತಿಗೆ ನೀಡಿತ್ತು ಅದರ ಖರ್ಚನ್ನು ಭಾರತ ಸರಕಾರ ಭರಿಸಿತ್ತು. ರಿಲಯನ್ಸ್ ಕಂಪನಿ ಈ ಖರ್ಚನ್ನು ಎರಡು ಬಿಲಿಯನ್ ಡಾಲರ್ ಎಂದು ಹೇಳಿತ್ತು. ಆದರೆ ವೆಚ್ಚ ಒಂದು ಬಿಲಿಯನ್ ಡಾಲರ್ ಸಹ ಆಗಲಿಲ್ಲ ಎಂಬುದು ಹಲವು ತೈಲ-ತಜ್ಞರ ವಾದ. ಭಾರತ ಸರಕಾರವಾಗಲೀ, ರಿಲಯನ್ಸ್ ಕಂಪನಿಯಾಗಲೀ ವೆಚ್ಚದ ಸಿ.ಎ.ಜಿ. ಆಡಿಟ್ಟಿಗೆ ಒಪ್ಪಲೇ ಇಲ್ಲ. ಇನ್ನು ತೈಲವನ್ನು ಹೊರಗೆ ಎಳೆಯುವ ವೆಚ್ಚ ಒಂದು ಮಿಲಿಯನ್ ಬ್ರಿಟಿಷ್ ಥರ್ಮಲ್ ಯೂನಿಟ್ಟಿಗೆ ಎರಡು ಡಾಲರ್ ಸಹ ಆಗುವುದಿಲ್ಲ ಎಂಬುದು ತೈಲ-ತಜ್ಞರ ವಾದ. ಆದರೆ ಭಾರತ ಸರಕಾರ ಇದಕ್ಕೆ 6.10 ಡಾಲರ್ ನಿಗದಿ ಮಾಡಿತ್ತು ಮತ್ತು ಇದನ್ನು ಈಗ 8.57 ಡಾಲರ್ ಪ್ರತಿ ಎಂಬಿಟಿಯುಗೆ ಏರಿಸಲಾಗಿದೆ. ಏಕೆಂದರೆ ಅಂತರಾಷ್ಟ್ರೀಯ ಮಟ್ಟದಲ್ಲಿ ಅನಿಲದ ಬೆಲೆ, ಯುಕ್ರೇನ್ ಯುದ್ಧ ಪ್ರಾರಂಭವಾದಾಗ ಇದಕ್ಕಿಂತ ಹೆಚ್ಚಾಗಿತ್ತು. (9.34ಡಾಲರ್/ಪ್ರತಿ ಯೂನಿಟ್ ವರೆಗೂ ಹೋಗಿತ್ತು) ಆದರೆ ಇಂದು ಬೆಲೆ 6.67ಡಾಲರ್/ಪ್ರತಿ ಯೂನಿಟ್ ಇದೆ. ಇಷ್ಟೇ ಅಲ್ಲ ಹಳೆಯ ಬಾವಿಗಳನ್ನು ಬಿಟ್ಟು, ಉತ್ಪಾದನೆ ಸ್ವಲ್ಪ ಕಷ್ಟಕರವಾದ ಸಮುದ್ರ ಮಧ್ಯದಲ್ಲಿರುವ ಡಿ6 ಬಾವಿಗಳಿಂದ ತೆಗೆಯುವ ಅನಿಲಕ್ಕೆ ಬೆಲೆಯನ್ನು 9.92ಡಾಲರ್/ಪ್ರತಿ ಎಂಬಿಟಿಯುಗೆ ನಿಂದ 12.6ಡಾಲರ್/ಪ್ರತಿ ಎಂಬಿಟಿಯುಗೆ ಹೆಚ್ಚಿಸಿದೆ. ಅನಿಲ ಬೆಲೆ ಏರಿಕೆ 2019ರಿಂದ ಇದು ಮೂರನೆಯದಾಗಿರುತ್ತದೆ. ರುಪಾಯಿ ಬೆಲೆ ಡಾಲರ್ ವಿರುದ್ಧ ಕುಸಿದಂತೆ ಡಾಲರ್ ಪಡೆಯುತ್ತಿರುವ ಕಂಪನಿಯ ಮಾಲೀಕರ ನಗು ಬಾಯಿ ತುಂಬಿ ಹೊರಸೂಸುತ್ತಿದೆ. ಮೋದಿಯವರು ತಮ್ಮ ಆಪ್ತಮಿತ್ರರಿಗೆ ಸಹಾಯ ಮಾಡಲು ಹೇಗೆ ಸರಕಾರದಿಂದ ಅನುವು ಮಾಡಿಕೊಡುತ್ತಿದ್ದಾರೆ ಎಂಬುದು ಬಹುಶಃ ಈಗಲಾದರೂ ತಮಗೆ ಅರ್ಥವಾಗಿರಬಹುದು.

ಜಿ.ಆರ್. ವಿದ್ಯಾರಣ್ಯ

(ಜಿ.ಆರ್ ವಿದ್ಯಾರಣ್ಯರವರು ಸುಮಾರು ಇಪ್ಪತ್ತೈದು ವರ್ಷ ವಾಣಿಜ್ಯ ಹಡಗುಗಳಲ್ಲಿ ಕಮ್ಯುನಿಕೇಷನ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದವರು. ಇದಲ್ಲದೆ ಕಂಪ್ಯೂಟರ್ ನೆಟವರ್ಕ್ ರೇಡಿಯೋ ಸುಪರಿಂಟೆಂಡೆಂಟ್ ಆಗಿ ಅಮೇರಿಕಾ, ಸಿಂಗಾಪುರ್, ಚೈನಾ, ಜಪಾನ್, ದೇಶಗಳಲ್ಲಿ ಕೆಲಸ ಮಾಡಿದ್ದಾರೆ. ನೂರಕ್ಕೂ ಹೆಚ್ಚು ದೇಶಗಳನ್ನು ಸುತ್ತಿ ಬಂದಿರುತ್ತಾರೆ. ಸಾಮಾಜಿಕ ಕಳಕಳಿಯುಳ್ಳ ಅವರು ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕು ಎಂಬ ಹಂಬಲದಿಂದ 2001 ರಲ್ಲಿ ಮುಂಬಯಿ ಬಿಟ್ಟು, ಮೈಸೂರಿನಲ್ಲಿ ನೆಲೆಸಿ ಹಲವು ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ)

ಇದನ್ನೂ ಓದಿ; ಪೆಟ್ರೋಲ್, ಡೀಸೆಲ್, ಗ್ಯಾಸ್ ಸೇರಿದಂತೆ ದಿನಬಳಕೆಯ ವಸ್ತುಗಳ ಬೆಲೆ ಏರಿಕೆ ನಿಂತಿಲ್ಲ: ಏಕೆ ಗೊತ್ತೆ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಬರೀ ರೈಲು ಬಿಟ್ಟಿದ್ದಾರೆ… ಜನಪರ ಕಾಳಜಿ ಅನ್ನೋ ಪದದಡಿ ಜನರನ್ನು ಹಾದಿತಾಪ್ಪಿಸುವ ಪ್ರಯತ್ನ…

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...