Homeಮುಖಪುಟಗ್ಯಾಸ್ ಪುರಾಣ: ಗೃಹ ಬಳಕೆಯ ಗ್ಯಾಸ್ ಬೆಲೆ ಹೆಚ್ಚಾಗುತ್ತಿರುವುದಕ್ಕೆ ಕಾರಣಗಳಿವು

ಗ್ಯಾಸ್ ಪುರಾಣ: ಗೃಹ ಬಳಕೆಯ ಗ್ಯಾಸ್ ಬೆಲೆ ಹೆಚ್ಚಾಗುತ್ತಿರುವುದಕ್ಕೆ ಕಾರಣಗಳಿವು

ಶೀಘ್ರದಲ್ಲೇ ಗೃಹಬಳಕೆ ಸಿಲಿಂಡರ್ ಮಾಯವಾಗಿ ಕೇವಲ ವಾಣಿಜ್ಯ ಸಿಲಿಂಡರ್ ಮಾತ್ರ ಮಾರುಕಟ್ಟೆಯಲ್ಲಿ ಉಳಿದುಕೊಳ್ಳುತ್ತದೆ ಎಂಬುದರಲ್ಲಿ ಸಂದೇಹವಿಲ್ಲ...

- Advertisement -
- Advertisement -

ಇತ್ತೀಚೆಗೆ “ಪ್ರಾಕೃತಿಕ ಗ್ಯಾಸ್ ಬೆಲೆಯಲ್ಲಿ 40% ಹೆಚ್ಚಳ” ಎಂಬ ಸುದ್ದಿ ನೀವೆಲ್ಲರೂ ದೃಶ್ಯಮಾಧ್ಯಮದಲ್ಲಿ ಕೇಳಿರುತ್ತೀರಿ ಅಥವಾ ವೃತ್ತಪತ್ರಿಕೆಗಳಲ್ಲಿ ಓದಿರುತ್ತೀರಿ. ಗ್ಯಾಸ್ ಬೆಲೆ ಯೂನಿಟ್ಟಿಗೆ 6.10 ಡಾಲರ್ ನಿಂದ 8.57 ಡಾಲರ್ ಆಗಲಿದೆ ಅಂದರೆ ಸುಮಾರು 40% ಹೆಚ್ಚಳ ಆಗಲಿದೆ ಮತ್ತು ಅದರಿಂದ ಸಿ.ಎನ್.ಜಿ. ಮತ್ತು ಪಿ.ಎನ್.ಜಿ. ಗ್ರಾಹಕರಿಗೆ ಅದರ ಬಿಸಿ ತಟ್ಟಲಿದೆ ಎಂಬ ವಿವರ ಸುದ್ದಿಯಲ್ಲಿತ್ತು. ಇದರಲ್ಲಿ ಗಮನಿಸಬೇಕಾದ ವಿಷಯ ಅಥವಾ ಕೇಳಬೇಕಾದ ಪ್ರಶ್ನೆ: ಮೊದಲನೆಯದು, ಭಾರತದಲ್ಲಿ ಇರುವ ತೈಲನಿಕ್ಷೇಪದಿಂದ ಭಾರತದ ಕಂಪನಿಗಳೇ ಉತ್ಪಾದಿಸುತ್ತಿರುವ ಗ್ಯಾಸ್ ಬೆಲೆ “ಡಾಲರ್”ನಲ್ಲಿ ಏಕಿದೆ ಮತ್ತು  ಎರಡನೆಯದು, ಉತ್ಪಾದನಾ ವೆಚ್ಚಕ್ಕಿಂತ ನಾಲ್ಕೈದು ಪಟ್ಟು ಹೆಚ್ಚು ಬೆಲೆಗೆ ಖಾಸಗಿ ಕಂಪನಿಗಳು ಭಾರತದ ಗ್ರಾಹಕರಿಗೆ ಗ್ಯಾಸ್ ಮಾರಾಟ ಮಾಡಲು ಸರಕಾರ ಏಕೆ ಅನುವು ಮಾಡಿಕೊಟ್ಟಿದೆ ಎಂಬುದು. ಗ್ಯಾಸ್ ಉತ್ಪಾದನೆ ಮತ್ತು ಮಾರಾಟವನ್ನು  ಅಂಬಾನಿ ಮತ್ತು ಅದಾನಿ ಅವರಿಗೆ ಗುತ್ತಿಗೆ ನೀಡಿರುವುದರಿಂದ ಎರಡನೆಯ ಪ್ರಶ್ನೆಗೆ ಉತ್ತರ ಸಿಕ್ಕಿದೆ ಎಂದುಕೊಂಡಿದ್ದೇನೆ. ಮೊದಲನೆಯ ಪ್ರಶ್ನೆಯ ಉತ್ತರಕ್ಕೆ ನಂತರ ಬರೋಣ.

ಗೃಹಬಳಕೆಯ 14.2 ಕೆಜಿ ಎಲ್.ಪಿ.ಜಿ. ಸಿಲಿಂಡರ್ ಬೆಲೆ ರೂ.1050 ದಾಟಿದೆ ಮತ್ತು 19ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆ ಸುಮಾರು ರೂ.1900 ಇದೆ. ಅಂದರೆ ಗೃಹಬಳಕೆ ಗ್ಯಾಸ್ ರೂ.75/ಕೆಜಿ ಮತ್ತು ವಾಣಿಜ್ಯ ಗ್ಯಾಸ್ ರೂ.100/ಕೆಜಿ ಎಂದಾಯಿತು. ಗೃಹಬಳಕೆಯ ಸಿಲಿಂಡರ್ ಮೇಲೆ ಸರಕಾರ ಈಗಲೂ ಸಬ್ಸಿಡಿ ನೀಡುತ್ತಿದೆ ಎಂದು ಅವರ ವಾದ. ಆದರೆ ನಿಮ್ಮ ಖಾತೆಗೆ ಯಾವುದೇ ಹಣ ಬರುತ್ತಿಲ್ಲ ಎಂಬುದೂ ಸಹ  ಸತ್ಯ. ಸಿ.ಎನ್.ಜಿ. ಬೆಲೆ ರೂ.86/ಕೆಜಿ ಇದೆ. ಸರಕಾರ ಎಲ್ಲ ರೀತಿಯ ಸಬ್ಸಿಡಿ ನಿಲ್ಲಿಸಬೇಕೆಂದು ಪ್ರಯತ್ನ ಮಾಡುತ್ತಿರುವುದು ಎಲ್ಲರಿಗೂ ತಿಳಿದ ವಿಷಯ. ಶೀಘ್ರದಲ್ಲೇ ಗೃಹಬಳಕೆ ಸಿಲಿಂಡರ್ ಮಾಯವಾಗಿ ಕೇವಲ ವಾಣಿಜ್ಯ ಸಿಲಿಂಡರ್ ಮಾತ್ರ ಮಾರುಕಟ್ಟೆಯಲ್ಲಿ ಉಳಿದುಕೊಳ್ಳುತ್ತದೆ ಎಂಬುದರಲ್ಲಿ ಸಂದೇಹವಿಲ್ಲ.

ಭಾರತದ ಮಹಾನಗರಗಳಲ್ಲಿ ಈಗಾಗಲೇ ಹೆಚ್ಚಿನ ಮನೆಗಳಿಗೆ ಪೈಪ್-ಗ್ಯಾಸ್ (ಪಿ.ಎನ್.ಜಿ.) ಸಂಪರ್ಕ ಬಂದಾಗಿದೆ. ಕರ್ನಾಟಕದಲ್ಲೂ ತುಮಕೂರು, ಮೈಸೂರು ನಗರಗಲ್ಲಿ ಪೈಪ್ ಜೋಡಣೆ ಕಾರ್ಯ ಪ್ರಾರಂಭವಾಗಿದೆ. ಈ ಪೈಪ್ ಡ್ರೀಂ ಮಾರಾಟಗಾರರ ವಾದ ಏನೆಂದರೆ ನಿಮ್ಮ ಗೃಹಬಳಕೆಯ ಸಿಲಿಂಡರ್ ಬೆಲೆಗಿಂತ ಪೈಪ್ ಗ್ಯಾಸ್ ಬೆಲೆ ಸುಮಾರು 20-30% ಕಡಿಮೆ ಆಗುತ್ತದೆ, ನಿಮಗೆ 24 ಗಂಟೆ ಗ್ಯಾಸ್ ಬರುತ್ತದೆ, ಮೀಟರ್ ಪಾರದರ್ಶಕವಾಗಿ ನಿಮ್ಮ ಮುಂದೆ ಕಾಣುವಂತೆ ಇರುತ್ತದೆ ಮತ್ತು ನಿಮ್ಮ ಶಕ್ತ್ಯಾನುಸಾರ ಗ್ಯಾಸ್ ಬಳಕೆ ಮಾಡಬಹುದು ಹಾಗೂ ಮುಖ್ಯವಾಗಿ ಸಿಲಿಂಡರ್ ನಂತೆ ಪೈಪ್ ಬ್ಲಾಸ್ಟ್ ಆಗುವ ಸಂಭವ ತೀರ ಕಡಿಮೆ, ಇತ್ಯಾದಿ ಇತ್ಯಾದಿ.. ಪಿ.ಎನ್.ಜಿ. ಬೆಲೆ ಯೂನಿಟ್ಟಿಗೆ ರೂ.55 ಇದೆ ಅಂದರೆ ಗೃಹಬಳಕೆ ಸಿಲಿಂಡರ್ ಬೆಲೆಗೆ (ರೂ. 75/ಕೆಜಿ) ಹೋಲಿಸಿದರೆ ನಿಮಗೆ 20-30% ಉಳಿತಾಯ ಎಂದು ನಿಮ್ಮನ್ನು ನಂಬಿಸಲು ಮುಂದಾಗಿದ್ದಾರೆ.

ಈಗ ಇತ್ತೀಚಿನ ಪಿ.ಎನ್.ಜಿ. ಬೆಲೆ 40% ಏರಿಕೆ ಬಗ್ಗೆ ಬರೋಣ ಅಂದರೆ. ಈಗಿರುವ ರೂ.55/ಕೆಜಿ ಏನಾಗುತ್ತದೆ? ಅದು ರೂ.77/ಕೆಜಿ ಆಗುತ್ತದೆ. ಅಂದರೆ ಈಗಿರುವ ಗೃಹಬಳಕೆ ಸಿಲಿಂಡರ್ ಸಮಸಮಕ್ಕೆ ಬರುತ್ತದೆ ಅಥವಾ ಇನ್ನೂ ಸ್ವಲ್ಪ ಹೆಚ್ಚು ಅನ್ನಬಹುದು. ಮೇಲೆ ಹೇಳಿದಂತೆ ಗೃಹ ಬಳಕೆ ಸಿಲಿಂಡರ್ ಮಾಯವಾದರೆ ನೀವು ಯಾವುದಕ್ಕೆ ಬೆಲೆ ಹೋಲಿಸುತ್ತೀರಿ, ವಾಣಿಜ್ಯ ಸಿಲಿಂಡರ್ (ರೂ.100/ಕೆಜಿ) ತಾನೇ? ಇನ್ನು ಹೊಸ ಪೈಪ್ ಗ್ಯಾಸ್ ಕನೆಕ್ಷನ್ ತೆಗೆದುಕೊಳ್ಳಲು, ಅದಕ್ಕೆ ನೀಡಬೇಕಾದ ಮುಂಗಡ, ಇನ್ಸ್ಟಲೇಷನ್ ವೆಚ್ಚ, ಸೆಕ್ಯುರಿಟಿ ಡಿಪಾಸಿಟ್, ಎಲ್ಲಾ ಸೇರಿ ಸುಮಾರು ರೂ.6000/-ದಷ್ಟು ಎಲ್ಲಾ ನಿಮ್ಮ ಜೇಬಿನಿಂದ ಹೋಗುತ್ತದೆ. ಗ್ಯಾಸ್ ಸಂಪರ್ಕ ಖಾಸಗಿ ಕಂಪನಿಯಾಗಿರುವುದರಿಂದ ನಿಮಗೆ ಯಾವುದೇ ರೀತಿಯ ಸಬ್ಸಿಡಿ ಇರುವುದಿಲ್ಲ. ಮುಂದೆ ಅವರು ಆಡಿದ್ದೇ ಆಟ. ಈಗಲಾದರೂ ಅರ್ಥವಾಯಿತೇ ಸರಕಾರ ಹೇಗೆ ನಿಮ್ಮ ಕಿವಿಗೆ ಹೂವು ಮುಡಿಸುತ್ತಿದೆ ಎಂದು.

ಇನ್ನು ನಮ್ಮ ಮೊದಲನೆಯ ಪ್ರಶ್ನೆಗೆ ಬರೋಣ. ಗ್ಯಾಸ್ ಉತ್ಪಾದನೆ ದೇಶದ ಕೆ.ಜಿ.ಬೇಸಿನ್ ಹಳೆಯ ಬಾವಿಗಳಿಂದ ಆಗುತ್ತಿದೆ. ಇದರಲ್ಲಿ ಸಿಗುವ ಗ್ಯಾಸ್ ನಮ್ಮ ದೇಶದ ಸೊತ್ತು, ಯಾವುದೇ ವಿದೇಶದಿಂದ ಆಮದು ಮಾಡಿಕೊಂಡಂತಹ ಅನಿಲವಲ್ಲ. ಕೆಜಿ ಬೇಸಿನ್ ಗ್ಯಾಸ್ ಅನ್ವೇಷಣೆಗೆ ಭಾರತ ಸರಕಾರ ರಿಲಯನ್ಸ್ ಕಂಪನಿಗೆ ಗುತ್ತಿಗೆ ನೀಡಿತ್ತು ಅದರ ಖರ್ಚನ್ನು ಭಾರತ ಸರಕಾರ ಭರಿಸಿತ್ತು. ರಿಲಯನ್ಸ್ ಕಂಪನಿ ಈ ಖರ್ಚನ್ನು ಎರಡು ಬಿಲಿಯನ್ ಡಾಲರ್ ಎಂದು ಹೇಳಿತ್ತು. ಆದರೆ ವೆಚ್ಚ ಒಂದು ಬಿಲಿಯನ್ ಡಾಲರ್ ಸಹ ಆಗಲಿಲ್ಲ ಎಂಬುದು ಹಲವು ತೈಲ-ತಜ್ಞರ ವಾದ. ಭಾರತ ಸರಕಾರವಾಗಲೀ, ರಿಲಯನ್ಸ್ ಕಂಪನಿಯಾಗಲೀ ವೆಚ್ಚದ ಸಿ.ಎ.ಜಿ. ಆಡಿಟ್ಟಿಗೆ ಒಪ್ಪಲೇ ಇಲ್ಲ. ಇನ್ನು ತೈಲವನ್ನು ಹೊರಗೆ ಎಳೆಯುವ ವೆಚ್ಚ ಒಂದು ಮಿಲಿಯನ್ ಬ್ರಿಟಿಷ್ ಥರ್ಮಲ್ ಯೂನಿಟ್ಟಿಗೆ ಎರಡು ಡಾಲರ್ ಸಹ ಆಗುವುದಿಲ್ಲ ಎಂಬುದು ತೈಲ-ತಜ್ಞರ ವಾದ. ಆದರೆ ಭಾರತ ಸರಕಾರ ಇದಕ್ಕೆ 6.10 ಡಾಲರ್ ನಿಗದಿ ಮಾಡಿತ್ತು ಮತ್ತು ಇದನ್ನು ಈಗ 8.57 ಡಾಲರ್ ಪ್ರತಿ ಎಂಬಿಟಿಯುಗೆ ಏರಿಸಲಾಗಿದೆ. ಏಕೆಂದರೆ ಅಂತರಾಷ್ಟ್ರೀಯ ಮಟ್ಟದಲ್ಲಿ ಅನಿಲದ ಬೆಲೆ, ಯುಕ್ರೇನ್ ಯುದ್ಧ ಪ್ರಾರಂಭವಾದಾಗ ಇದಕ್ಕಿಂತ ಹೆಚ್ಚಾಗಿತ್ತು. (9.34ಡಾಲರ್/ಪ್ರತಿ ಯೂನಿಟ್ ವರೆಗೂ ಹೋಗಿತ್ತು) ಆದರೆ ಇಂದು ಬೆಲೆ 6.67ಡಾಲರ್/ಪ್ರತಿ ಯೂನಿಟ್ ಇದೆ. ಇಷ್ಟೇ ಅಲ್ಲ ಹಳೆಯ ಬಾವಿಗಳನ್ನು ಬಿಟ್ಟು, ಉತ್ಪಾದನೆ ಸ್ವಲ್ಪ ಕಷ್ಟಕರವಾದ ಸಮುದ್ರ ಮಧ್ಯದಲ್ಲಿರುವ ಡಿ6 ಬಾವಿಗಳಿಂದ ತೆಗೆಯುವ ಅನಿಲಕ್ಕೆ ಬೆಲೆಯನ್ನು 9.92ಡಾಲರ್/ಪ್ರತಿ ಎಂಬಿಟಿಯುಗೆ ನಿಂದ 12.6ಡಾಲರ್/ಪ್ರತಿ ಎಂಬಿಟಿಯುಗೆ ಹೆಚ್ಚಿಸಿದೆ. ಅನಿಲ ಬೆಲೆ ಏರಿಕೆ 2019ರಿಂದ ಇದು ಮೂರನೆಯದಾಗಿರುತ್ತದೆ. ರುಪಾಯಿ ಬೆಲೆ ಡಾಲರ್ ವಿರುದ್ಧ ಕುಸಿದಂತೆ ಡಾಲರ್ ಪಡೆಯುತ್ತಿರುವ ಕಂಪನಿಯ ಮಾಲೀಕರ ನಗು ಬಾಯಿ ತುಂಬಿ ಹೊರಸೂಸುತ್ತಿದೆ. ಮೋದಿಯವರು ತಮ್ಮ ಆಪ್ತಮಿತ್ರರಿಗೆ ಸಹಾಯ ಮಾಡಲು ಹೇಗೆ ಸರಕಾರದಿಂದ ಅನುವು ಮಾಡಿಕೊಡುತ್ತಿದ್ದಾರೆ ಎಂಬುದು ಬಹುಶಃ ಈಗಲಾದರೂ ತಮಗೆ ಅರ್ಥವಾಗಿರಬಹುದು.

ಜಿ.ಆರ್. ವಿದ್ಯಾರಣ್ಯ

(ಜಿ.ಆರ್ ವಿದ್ಯಾರಣ್ಯರವರು ಸುಮಾರು ಇಪ್ಪತ್ತೈದು ವರ್ಷ ವಾಣಿಜ್ಯ ಹಡಗುಗಳಲ್ಲಿ ಕಮ್ಯುನಿಕೇಷನ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದವರು. ಇದಲ್ಲದೆ ಕಂಪ್ಯೂಟರ್ ನೆಟವರ್ಕ್ ರೇಡಿಯೋ ಸುಪರಿಂಟೆಂಡೆಂಟ್ ಆಗಿ ಅಮೇರಿಕಾ, ಸಿಂಗಾಪುರ್, ಚೈನಾ, ಜಪಾನ್, ದೇಶಗಳಲ್ಲಿ ಕೆಲಸ ಮಾಡಿದ್ದಾರೆ. ನೂರಕ್ಕೂ ಹೆಚ್ಚು ದೇಶಗಳನ್ನು ಸುತ್ತಿ ಬಂದಿರುತ್ತಾರೆ. ಸಾಮಾಜಿಕ ಕಳಕಳಿಯುಳ್ಳ ಅವರು ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕು ಎಂಬ ಹಂಬಲದಿಂದ 2001 ರಲ್ಲಿ ಮುಂಬಯಿ ಬಿಟ್ಟು, ಮೈಸೂರಿನಲ್ಲಿ ನೆಲೆಸಿ ಹಲವು ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ)

ಇದನ್ನೂ ಓದಿ; ಪೆಟ್ರೋಲ್, ಡೀಸೆಲ್, ಗ್ಯಾಸ್ ಸೇರಿದಂತೆ ದಿನಬಳಕೆಯ ವಸ್ತುಗಳ ಬೆಲೆ ಏರಿಕೆ ನಿಂತಿಲ್ಲ: ಏಕೆ ಗೊತ್ತೆ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಬರೀ ರೈಲು ಬಿಟ್ಟಿದ್ದಾರೆ… ಜನಪರ ಕಾಳಜಿ ಅನ್ನೋ ಪದದಡಿ ಜನರನ್ನು ಹಾದಿತಾಪ್ಪಿಸುವ ಪ್ರಯತ್ನ…

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...