Homeಮುಖಪುಟಸಿಎಂಗೆ ಸಂಭಾಲ್ ಹಿಂಸಾಚಾರದ ವರದಿ ಸಲ್ಲಿಕೆ: ಹಿಂದೂ ವಲಸೆಯತ್ತ ಆಯೋಗದ ಒತ್ತು, ನಿಜಾಂಶವಿಲ್ಲ ಎಂದ ಜನ

ಸಿಎಂಗೆ ಸಂಭಾಲ್ ಹಿಂಸಾಚಾರದ ವರದಿ ಸಲ್ಲಿಕೆ: ಹಿಂದೂ ವಲಸೆಯತ್ತ ಆಯೋಗದ ಒತ್ತು, ನಿಜಾಂಶವಿಲ್ಲ ಎಂದ ಜನ

- Advertisement -
- Advertisement -

ಸಂಭಾಲ್: 9 ತಿಂಗಳುಗಳ ನಂತರ ಸಂಭಾಲ್ ಹಿಂಸಾಚಾರ ಕುರಿತು ರಚಿಸಿದ್ದ ನ್ಯಾಯಾಂಗ ತನಿಖಾ ಆಯೋಗವು 450 ಪುಟಗಳ ವರದಿಯನ್ನು ಗುರುವಾರ ಮುಖ್ಯಮಂತ್ರಿ ಅವರಿಗೆ ಸಲ್ಲಿಸಿದೆ.

ಉತ್ತರಪ್ರದೇಶದ ಸಂಭಾಲ್‌ನಲ್ಲಿ ಸಂಭವಿಸಿದ ಹಿಂಸಾಚಾರ ಕುರಿತ ನ್ಯಾಯಾಂಗ ತನಿಖಾ ವರದಿ ಸೋರಿಕೆ ಆದ ನಂತರ ವಿವಾದ ಉಂಟಾಗಿ ತೀವ್ರ ಪ್ರತಿಕ್ರಿಯೆಗಳನ್ನು ಹುಟ್ಟು ಹಾಕಿದೆ. ಮುಸ್ಲಿಂ ಸಮುದಾಯದವರು ವರದಿಯ ವಿಶ್ವಾಸಾರ್ಹತೆಯನ್ನು ಪ್ರಶ್ನಿಸಿ, ಸರ್ಕಾರ ಈ ದುರಂತವನ್ನು ಸಮುದಾಯದ ನಡುವಣ ದ್ವೇಷವನ್ನು ಹೆಚ್ಚಿಸಲು ಬಳಸುತ್ತಿದೆ ಎಂದು ಆರೋಪಿಸಿದ್ದಾರೆ.

ಕಳೆದ ವರ್ಷದ ನವೆಂಬರ್ 24ರಂದು ಸಂಭಾಲ್‌ನ ಐತಿಹಾಸಿಕ ಶಾಹಿ ಜಾಮಾ ಮಸೀದಿ ಬಳಿ ನಡೆದ ಸರಕಾರದ ಸಮೀಕ್ಷೆ ವೇಳೆ ಹಿಂಸಾಚಾರವು ಉದ್ಭವಿಸಿತ್ತು. ಆ ವೇಳೆ ಪೊಲೀಸ್ ಗುಂಡಿನ ದಾಳಿಯಲ್ಲಿ ಐದು ಮುಸ್ಲಿಂ ಯುವಕರು ಮೃತರಾದರು, ಅನೇಕರಿಗೆ ಗಾಯಗಳಾದವು ಮತ್ತು ಹಲವಾರು ವಾಹನಗಳಿಗೆ ಬೆಂಕಿ ಹಚ್ಚಲಾಯಿತು. ಈ ಗಲಭೆಯ ನಂತರ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ನಿವೃತ್ತ ನ್ಯಾಯಾಧೀಶ ದೇವೇಂದ್ರಕುಮಾರ್ ಅರೋರಾ ನೇತೃತ್ವದ ನ್ಯಾಯಾಂಗ ಆಯೋಗವನ್ನು ರಚಿಸಿದರು. ಅವರೊಂದಿಗೆ ನಿವೃತ್ತ ಐಎಎಸ್ ಅಮಿತ್ ಮೋಹನ್ ಮತ್ತು ನಿವೃತ್ತ ಐಪಿಎಸ್ ಅರ್ವಿಂದ್ ಕುಮಾರ್ ಜೈನ್ ಇದ್ದರು.

ಹಿಂಸಾಚಾರದ ವಿಷಯಕ್ಕೆ ಸಂಬಂಧಿಸಿ ಕಾರಣವೇನು ಎಂಬ ಕುರಿತು ಈ ವರದಿ ಒತ್ತು ನೀಡಬೇಕಿತ್ತು. ಆದರೆ ಅದು ಹಿಂದೂ ಜನಸಂಖ್ಯೆಯ ವಲಸೆ ವಿಚಾರಕ್ಕೆ ಹೆಚ್ಚಿನ ಒತ್ತುಕೊಡುತ್ತದೆ. ವರದಿಯ ಪ್ರಕಾರ, ಸಂಭಾಲ್‌ನ ಹಿಂದೂ ಜನಸಂಖ್ಯೆ ಸ್ವಾತಂತ್ರ್ಯದ ಕಾಲದಲ್ಲಿ 45 ಶೇಕಡದಿಂದ ಇಂದಿಗೆ 15 ಶೇಕಡಕ್ಕೆ ಇಳಿದಿದೆ. ಸುಮಾರು 30 ಶೇಕಡ ಇಳಿಕೆ ನಡೆದಿದೆ, ಅದು ಗಲಭೆಗಳು ಮತ್ತು ಬೆದರಿಕೆಗಳ ಕಾರಣದಿಂದ ಸಂಭವಿಸಿದೆ ಎಂಬ ಆರೋಪವಿದೆ.

ಈ ವರದಿಯು ಸಂಭಾಲ್‌ನ ಮುಸ್ಲಿಂ ಸಮುದಾಯದಲ್ಲಿ ಅಸಹಮತಿಯ ಅಲೆ ಎಬ್ಬಿಸಿದೆ. ಶಾಹಿ ಜಾಮಾ ಮಸೀದಿ ಸಮಿತಿಯ ಪರವಾಗಿ ವಕೀಲ ಶಕೀಲ್ ವಾರ್ಸಿ ಅವರು ಮಾತನಾಡುತ್ತಾ, “ಇಂತಹ ವರದಿಯ ಆಧಾರದ ಮೇಲೆ ಯಾರನ್ನೂ ದಂಡಿಸಲಾಗದು. ನಿಜವಾದ ಸತ್ಯವನ್ನು ನ್ಯಾಯಾಲಯವೇ ನಿರ್ಧರಿಸಬೇಕು. ಹಿಂಸಾಚಾರವನ್ನು ಹಿಂದೂ ವಲಸೆಯೊಂದಿಗೆ ತಳಕುಹಾಕುವುದು ಅಡಳಿತಾತ್ಮಕ ರಾಜಕೀಯಕ್ಕೆ ಸೇರಿದ್ದು, ಅರ್ಥವಿಲ್ಲದದ್ದು,” ಎಂದರು.

ಪ್ರಮುಖ ಪತ್ರಕರ್ತ ಶಮ್ಸ್ ಸಿದ್ಧೀಕಿ ಅವರು ಕೂಡ ವರದಿಯ ಮಾಹಿತಿಯನ್ನು ಪ್ರಶ್ನಿಸಿದರು. “ಈ ವರದಿ ಇತಿಹಾಸದ ದಾಖಲೆಯೊಂದಿಗೆ ಹೊಂದಿಕೆಯಾಗುವುದಿಲ್ಲ. ಅವರು 1947ರಲ್ಲಿ ಹಿಂದೂ ಜನಸಂಖ್ಯೆ 45 ಶೇಕಡವೆಂದು ಹೇಳುವುದು ಸುಳ್ಳು, ಏಕೆಂದರೆ ಜನಗಣತಿಯ ಮಾಹಿತಿ ಇದನ್ನು ಸಮರ್ಥಿಸದು. ಇದು ಹಿಂಸಾಚಾರದ ವಿಚಾರಣೆಯ ವರದಿಯೇನಾ, ಅಥವಾ ಜನಗಣತಿಯ ಸಮೀಕ್ಷೆಯಾ? ವರದಿ ನಂಬಲರ್ಹವಲ್ಲ,” ಎಂದು ಹೇಳಿದರು.

ಇನ್ನೊಬ್ಬ ಮುಸ್ಲಿಂ ಹಿರಿಯರು ಸರ್ಕಾರಿ ನಡವಳಿಕೆಯನ್ನು ಆಕ್ರೋಶದಿಂದ ಟೀಕಿಸಿದರು: “ನಾವು ಮಸೀದಿಗಳ ಮೇಲೆ ತ್ರಿವರ್ಣ ಧ್ವಜ ಹಾರಿಸಿ ದೇಶಭಕ್ತಿಯನ್ನು ತೋರಿಸಿದ್ದರೂ, ಇನ್ನೂ ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ. ಇದು ಅಪಾಯಕರ ಮತ್ತು ಅಸಮಾನತೆಯದ್ದಾಗಿದೆ,” ಎಂದು ಹೇಳಿದರು.

ಈ ವರದಿಯನ್ನು ಮುಸ್ಲಿಂ ಮುಖಂಡರು ತಿರಸ್ಕರಿಸಿದರೆ, ಹಿಂದೂ ಪ್ರತಿನಿಧಿಗಳಿಂದ ವಿಭಿನ್ನ ಪ್ರತಿಕ್ರಿಯೆಗಳು ಬಂದಿವೆ. ಸ್ಥಳೀಯ ಹಿಂದೂ ಪ್ರತಿನಿಧಿ ಗೋಪಾಲ್ ಅವರು, “ಹೌದು, ಕೆಲವರು ವಾಸಸ್ಥಾನ ಬದಲಾಯಿಸುತ್ತಿದ್ದಾರೆ. ಆದರೆ ಅದು ಮುಸ್ಲಿಂ ಭಯದಿಂದಲ್ಲ. ಹೆಚ್ಚಿನ ವ್ಯವಹಾರ ಅವಕಾಶಗಳಿಗಾಗಿ ಇತರ ದೊಡ್ಡ ನಗರಗಳಿಗೆ ಹೋಗುತ್ತಿದ್ದಾರೆ. ಮುಸ್ಲಿಂ ಸಮುದಾಯವನ್ನು ಗುರಿಯಾಗಿಸುವುದು ತಪ್ಪು,” ಎಂದು ಹೇಳಿದರು.

ಆದರೆ ವಿವಾದಾತ್ಮಕ ಹನುಮಾನ್‌ಗಢಿ ಪೀಠದ ಪುಜಾರಿ ರಾಜು ದಾಸ್ ಅವರು ಈ ವರದಿಯನ್ನು ಆಧಾರವನ್ನಾಗಿ ಮಾಡಿಕೊಂಡು ಕಿಡಿಕಾರಿದರು. “ಇದು ಸ್ಪಷ್ಟವಾಗಿಸುತ್ತದೆ — ಹಿಂದೂಗಳು ಬಲವಂತವಾಗಿ ವಲಸೆ ಹೋಗುತ್ತಿದ್ದಾರೆ. ಇವತ್ತಿಗೆ ಕೇವಲ 15 ಶೇಕಡ ಮಾತ್ರ ಉಳಿದಿದ್ದಾರೆ. ಎಲ್ಲೆಲ್ಲಿ ಮುಸ್ಲಿಂ ಸಂಖ್ಯಾಬಲ ಹೆಚ್ಚಿದೆಯೋ ಅಲ್ಲಿ ಗಲಭೆ ಮತ್ತು ಭಯ ವಾತಾವರಣ ಇರುತ್ತದೆ,” ಎಂದು ಆರೋಪಿಸಿದರು.

ಅವರ ಈ ಹೇಳಿಕೆಗಳು ಮುಸ್ಲಿಂ ಸಮುದಾಯವನ್ನು ಆಕ್ರೋಶಕ್ಕೆ ದೂಡಿವೆ. ಸಂಭಾಲ್‌ನ ಒಬ್ಬ ಮುಸ್ಲಿಂ ಅಂಗಡಿ ಮಾಲೀಕರು ಪ್ರತಿಕ್ರಿಯಿಸಿ, “ಹಿಂದೂಗಳು ಉದ್ಯೋಗಕ್ಕಾಗಿ ಹೋಗುತ್ತಿದ್ದರೆ ಅದಕ್ಕೆ ನಾವು ಹೊಣೆ ಹೇಗೆ? ನಾವು ಎಪ್ಪತ್ತು ವರ್ಷಗಳಿಂದ ಜೊತೆಯಾಗಿ ಬದುಕುತ್ತಿದ್ದೇವೆ. ಇಂತಹ ಹೇಳಿಕೆಗಳು ಕೇವಲ ದ್ವೇಷವನ್ನೇ ಹೆಚ್ಚಿಸುತ್ತವೆ” ಎಂದು ಹೇಳಿದರು.

ಪರಿಶೀಲಕರು ಆಕ್ಷೇಪಿಸಿದ್ದು, ನವೆಂಬರ್ 2024ರ ಹಿಂಸಾಚಾರದಲ್ಲಿ ಸತ್ತವರ ಕುಟುಂಬಗಳು ಇಂದಿಗೂ ನ್ಯಾಯಕ್ಕಾಗಿ ಕಾಯುತ್ತಿರುವಾಗ, ಸರ್ಕಾರ ಈ ವರದಿಯನ್ನು ಮುನ್ನೆಡೆಸಿಕೊಂಡು ಸಂಭಾಲ್‌ ಅನ್ನು ಹಿಂದೂಗಳಿಗೆ ಅಪಾಯಕಾರಿಯಾದ ಪ್ರದೇಶವೆಂಬಂತೆ ಬಿಂಬಿಸಲು ಯತ್ನಿಸುತ್ತಿದೆ ಎಂದಿದ್ದಾರೆ.

ವಿರೋಧಿ ಪತ್ರಕರ್ತ ಶಮ್ಸ್ ಸಿದ್ಧೀಕಿ ಅವರು, “ಈ ಸೋರಿಕೆ ಆದ ವರದಿ ಚುನಾವಣೆಗಳ ಮುನ್ನ ನಿರ್ದಿಷ್ಟ ವಾದವನ್ನು ಬೆಂಬಲಿಸಲು ರೂಪುಗೊಂಡದಂತೆ ತೋರುತ್ತದೆ. ಸಂಪೂರ್ಣ ವರದಿ ಅಧಿಕೃತವಾಗಿ ಬಿಡುಗಡೆಯಾಗದವರೆಗೆ ಇಂತಹ ಲೀಕ್‌ಗಳ ಆಧಾರದ ಮೇಲೆ ನಂಬುವುದು ಅಪಾಯಕರ” ಎಂದು ಹೇಳಿದರು.

ಮುಸ್ಲಿಂ ನಾಯಕರೊಬ್ಬರು, ಸರ್ಕಾರವು ಸಂಪೂರ್ಣ ವರದಿಯನ್ನು ಪ್ರಕಟಿಸಬೇಕು ಹಾಗೂ ನಿಜವಾಗಿಯೂ ಹೊಣೆಗಾರರಾಗಿರುವವರಿಗೆ ಶಿಕ್ಷೆ ನೀಡಬೇಕು. ಸಂಪೂರ್ಣ ಸಮುದಾಯವನ್ನು ಗುರಿಯಾಗಿಸುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.

ಮರ್ಯಾದೆಗೇಡು ಹತ್ಯೆ: ದಲಿತ ವ್ಯಕ್ತಿಯನ್ನು ಥಳಿಸಿ ಕೊಂದ ಪತ್ನಿ ಸಂಬಂಧಿಕರು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...