Homeಮುಖಪುಟಸಿಎಂಗೆ ಸಂಭಾಲ್ ಹಿಂಸಾಚಾರದ ವರದಿ ಸಲ್ಲಿಕೆ: ಹಿಂದೂ ವಲಸೆಯತ್ತ ಆಯೋಗದ ಒತ್ತು, ನಿಜಾಂಶವಿಲ್ಲ ಎಂದ ಜನ

ಸಿಎಂಗೆ ಸಂಭಾಲ್ ಹಿಂಸಾಚಾರದ ವರದಿ ಸಲ್ಲಿಕೆ: ಹಿಂದೂ ವಲಸೆಯತ್ತ ಆಯೋಗದ ಒತ್ತು, ನಿಜಾಂಶವಿಲ್ಲ ಎಂದ ಜನ

- Advertisement -
- Advertisement -

ಸಂಭಾಲ್: 9 ತಿಂಗಳುಗಳ ನಂತರ ಸಂಭಾಲ್ ಹಿಂಸಾಚಾರ ಕುರಿತು ರಚಿಸಿದ್ದ ನ್ಯಾಯಾಂಗ ತನಿಖಾ ಆಯೋಗವು 450 ಪುಟಗಳ ವರದಿಯನ್ನು ಗುರುವಾರ ಮುಖ್ಯಮಂತ್ರಿ ಅವರಿಗೆ ಸಲ್ಲಿಸಿದೆ.

ಉತ್ತರಪ್ರದೇಶದ ಸಂಭಾಲ್‌ನಲ್ಲಿ ಸಂಭವಿಸಿದ ಹಿಂಸಾಚಾರ ಕುರಿತ ನ್ಯಾಯಾಂಗ ತನಿಖಾ ವರದಿ ಸೋರಿಕೆ ಆದ ನಂತರ ವಿವಾದ ಉಂಟಾಗಿ ತೀವ್ರ ಪ್ರತಿಕ್ರಿಯೆಗಳನ್ನು ಹುಟ್ಟು ಹಾಕಿದೆ. ಮುಸ್ಲಿಂ ಸಮುದಾಯದವರು ವರದಿಯ ವಿಶ್ವಾಸಾರ್ಹತೆಯನ್ನು ಪ್ರಶ್ನಿಸಿ, ಸರ್ಕಾರ ಈ ದುರಂತವನ್ನು ಸಮುದಾಯದ ನಡುವಣ ದ್ವೇಷವನ್ನು ಹೆಚ್ಚಿಸಲು ಬಳಸುತ್ತಿದೆ ಎಂದು ಆರೋಪಿಸಿದ್ದಾರೆ.

ಕಳೆದ ವರ್ಷದ ನವೆಂಬರ್ 24ರಂದು ಸಂಭಾಲ್‌ನ ಐತಿಹಾಸಿಕ ಶಾಹಿ ಜಾಮಾ ಮಸೀದಿ ಬಳಿ ನಡೆದ ಸರಕಾರದ ಸಮೀಕ್ಷೆ ವೇಳೆ ಹಿಂಸಾಚಾರವು ಉದ್ಭವಿಸಿತ್ತು. ಆ ವೇಳೆ ಪೊಲೀಸ್ ಗುಂಡಿನ ದಾಳಿಯಲ್ಲಿ ಐದು ಮುಸ್ಲಿಂ ಯುವಕರು ಮೃತರಾದರು, ಅನೇಕರಿಗೆ ಗಾಯಗಳಾದವು ಮತ್ತು ಹಲವಾರು ವಾಹನಗಳಿಗೆ ಬೆಂಕಿ ಹಚ್ಚಲಾಯಿತು. ಈ ಗಲಭೆಯ ನಂತರ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ನಿವೃತ್ತ ನ್ಯಾಯಾಧೀಶ ದೇವೇಂದ್ರಕುಮಾರ್ ಅರೋರಾ ನೇತೃತ್ವದ ನ್ಯಾಯಾಂಗ ಆಯೋಗವನ್ನು ರಚಿಸಿದರು. ಅವರೊಂದಿಗೆ ನಿವೃತ್ತ ಐಎಎಸ್ ಅಮಿತ್ ಮೋಹನ್ ಮತ್ತು ನಿವೃತ್ತ ಐಪಿಎಸ್ ಅರ್ವಿಂದ್ ಕುಮಾರ್ ಜೈನ್ ಇದ್ದರು.

ಹಿಂಸಾಚಾರದ ವಿಷಯಕ್ಕೆ ಸಂಬಂಧಿಸಿ ಕಾರಣವೇನು ಎಂಬ ಕುರಿತು ಈ ವರದಿ ಒತ್ತು ನೀಡಬೇಕಿತ್ತು. ಆದರೆ ಅದು ಹಿಂದೂ ಜನಸಂಖ್ಯೆಯ ವಲಸೆ ವಿಚಾರಕ್ಕೆ ಹೆಚ್ಚಿನ ಒತ್ತುಕೊಡುತ್ತದೆ. ವರದಿಯ ಪ್ರಕಾರ, ಸಂಭಾಲ್‌ನ ಹಿಂದೂ ಜನಸಂಖ್ಯೆ ಸ್ವಾತಂತ್ರ್ಯದ ಕಾಲದಲ್ಲಿ 45 ಶೇಕಡದಿಂದ ಇಂದಿಗೆ 15 ಶೇಕಡಕ್ಕೆ ಇಳಿದಿದೆ. ಸುಮಾರು 30 ಶೇಕಡ ಇಳಿಕೆ ನಡೆದಿದೆ, ಅದು ಗಲಭೆಗಳು ಮತ್ತು ಬೆದರಿಕೆಗಳ ಕಾರಣದಿಂದ ಸಂಭವಿಸಿದೆ ಎಂಬ ಆರೋಪವಿದೆ.

ಈ ವರದಿಯು ಸಂಭಾಲ್‌ನ ಮುಸ್ಲಿಂ ಸಮುದಾಯದಲ್ಲಿ ಅಸಹಮತಿಯ ಅಲೆ ಎಬ್ಬಿಸಿದೆ. ಶಾಹಿ ಜಾಮಾ ಮಸೀದಿ ಸಮಿತಿಯ ಪರವಾಗಿ ವಕೀಲ ಶಕೀಲ್ ವಾರ್ಸಿ ಅವರು ಮಾತನಾಡುತ್ತಾ, “ಇಂತಹ ವರದಿಯ ಆಧಾರದ ಮೇಲೆ ಯಾರನ್ನೂ ದಂಡಿಸಲಾಗದು. ನಿಜವಾದ ಸತ್ಯವನ್ನು ನ್ಯಾಯಾಲಯವೇ ನಿರ್ಧರಿಸಬೇಕು. ಹಿಂಸಾಚಾರವನ್ನು ಹಿಂದೂ ವಲಸೆಯೊಂದಿಗೆ ತಳಕುಹಾಕುವುದು ಅಡಳಿತಾತ್ಮಕ ರಾಜಕೀಯಕ್ಕೆ ಸೇರಿದ್ದು, ಅರ್ಥವಿಲ್ಲದದ್ದು,” ಎಂದರು.

ಪ್ರಮುಖ ಪತ್ರಕರ್ತ ಶಮ್ಸ್ ಸಿದ್ಧೀಕಿ ಅವರು ಕೂಡ ವರದಿಯ ಮಾಹಿತಿಯನ್ನು ಪ್ರಶ್ನಿಸಿದರು. “ಈ ವರದಿ ಇತಿಹಾಸದ ದಾಖಲೆಯೊಂದಿಗೆ ಹೊಂದಿಕೆಯಾಗುವುದಿಲ್ಲ. ಅವರು 1947ರಲ್ಲಿ ಹಿಂದೂ ಜನಸಂಖ್ಯೆ 45 ಶೇಕಡವೆಂದು ಹೇಳುವುದು ಸುಳ್ಳು, ಏಕೆಂದರೆ ಜನಗಣತಿಯ ಮಾಹಿತಿ ಇದನ್ನು ಸಮರ್ಥಿಸದು. ಇದು ಹಿಂಸಾಚಾರದ ವಿಚಾರಣೆಯ ವರದಿಯೇನಾ, ಅಥವಾ ಜನಗಣತಿಯ ಸಮೀಕ್ಷೆಯಾ? ವರದಿ ನಂಬಲರ್ಹವಲ್ಲ,” ಎಂದು ಹೇಳಿದರು.

ಇನ್ನೊಬ್ಬ ಮುಸ್ಲಿಂ ಹಿರಿಯರು ಸರ್ಕಾರಿ ನಡವಳಿಕೆಯನ್ನು ಆಕ್ರೋಶದಿಂದ ಟೀಕಿಸಿದರು: “ನಾವು ಮಸೀದಿಗಳ ಮೇಲೆ ತ್ರಿವರ್ಣ ಧ್ವಜ ಹಾರಿಸಿ ದೇಶಭಕ್ತಿಯನ್ನು ತೋರಿಸಿದ್ದರೂ, ಇನ್ನೂ ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ. ಇದು ಅಪಾಯಕರ ಮತ್ತು ಅಸಮಾನತೆಯದ್ದಾಗಿದೆ,” ಎಂದು ಹೇಳಿದರು.

ಈ ವರದಿಯನ್ನು ಮುಸ್ಲಿಂ ಮುಖಂಡರು ತಿರಸ್ಕರಿಸಿದರೆ, ಹಿಂದೂ ಪ್ರತಿನಿಧಿಗಳಿಂದ ವಿಭಿನ್ನ ಪ್ರತಿಕ್ರಿಯೆಗಳು ಬಂದಿವೆ. ಸ್ಥಳೀಯ ಹಿಂದೂ ಪ್ರತಿನಿಧಿ ಗೋಪಾಲ್ ಅವರು, “ಹೌದು, ಕೆಲವರು ವಾಸಸ್ಥಾನ ಬದಲಾಯಿಸುತ್ತಿದ್ದಾರೆ. ಆದರೆ ಅದು ಮುಸ್ಲಿಂ ಭಯದಿಂದಲ್ಲ. ಹೆಚ್ಚಿನ ವ್ಯವಹಾರ ಅವಕಾಶಗಳಿಗಾಗಿ ಇತರ ದೊಡ್ಡ ನಗರಗಳಿಗೆ ಹೋಗುತ್ತಿದ್ದಾರೆ. ಮುಸ್ಲಿಂ ಸಮುದಾಯವನ್ನು ಗುರಿಯಾಗಿಸುವುದು ತಪ್ಪು,” ಎಂದು ಹೇಳಿದರು.

ಆದರೆ ವಿವಾದಾತ್ಮಕ ಹನುಮಾನ್‌ಗಢಿ ಪೀಠದ ಪುಜಾರಿ ರಾಜು ದಾಸ್ ಅವರು ಈ ವರದಿಯನ್ನು ಆಧಾರವನ್ನಾಗಿ ಮಾಡಿಕೊಂಡು ಕಿಡಿಕಾರಿದರು. “ಇದು ಸ್ಪಷ್ಟವಾಗಿಸುತ್ತದೆ — ಹಿಂದೂಗಳು ಬಲವಂತವಾಗಿ ವಲಸೆ ಹೋಗುತ್ತಿದ್ದಾರೆ. ಇವತ್ತಿಗೆ ಕೇವಲ 15 ಶೇಕಡ ಮಾತ್ರ ಉಳಿದಿದ್ದಾರೆ. ಎಲ್ಲೆಲ್ಲಿ ಮುಸ್ಲಿಂ ಸಂಖ್ಯಾಬಲ ಹೆಚ್ಚಿದೆಯೋ ಅಲ್ಲಿ ಗಲಭೆ ಮತ್ತು ಭಯ ವಾತಾವರಣ ಇರುತ್ತದೆ,” ಎಂದು ಆರೋಪಿಸಿದರು.

ಅವರ ಈ ಹೇಳಿಕೆಗಳು ಮುಸ್ಲಿಂ ಸಮುದಾಯವನ್ನು ಆಕ್ರೋಶಕ್ಕೆ ದೂಡಿವೆ. ಸಂಭಾಲ್‌ನ ಒಬ್ಬ ಮುಸ್ಲಿಂ ಅಂಗಡಿ ಮಾಲೀಕರು ಪ್ರತಿಕ್ರಿಯಿಸಿ, “ಹಿಂದೂಗಳು ಉದ್ಯೋಗಕ್ಕಾಗಿ ಹೋಗುತ್ತಿದ್ದರೆ ಅದಕ್ಕೆ ನಾವು ಹೊಣೆ ಹೇಗೆ? ನಾವು ಎಪ್ಪತ್ತು ವರ್ಷಗಳಿಂದ ಜೊತೆಯಾಗಿ ಬದುಕುತ್ತಿದ್ದೇವೆ. ಇಂತಹ ಹೇಳಿಕೆಗಳು ಕೇವಲ ದ್ವೇಷವನ್ನೇ ಹೆಚ್ಚಿಸುತ್ತವೆ” ಎಂದು ಹೇಳಿದರು.

ಪರಿಶೀಲಕರು ಆಕ್ಷೇಪಿಸಿದ್ದು, ನವೆಂಬರ್ 2024ರ ಹಿಂಸಾಚಾರದಲ್ಲಿ ಸತ್ತವರ ಕುಟುಂಬಗಳು ಇಂದಿಗೂ ನ್ಯಾಯಕ್ಕಾಗಿ ಕಾಯುತ್ತಿರುವಾಗ, ಸರ್ಕಾರ ಈ ವರದಿಯನ್ನು ಮುನ್ನೆಡೆಸಿಕೊಂಡು ಸಂಭಾಲ್‌ ಅನ್ನು ಹಿಂದೂಗಳಿಗೆ ಅಪಾಯಕಾರಿಯಾದ ಪ್ರದೇಶವೆಂಬಂತೆ ಬಿಂಬಿಸಲು ಯತ್ನಿಸುತ್ತಿದೆ ಎಂದಿದ್ದಾರೆ.

ವಿರೋಧಿ ಪತ್ರಕರ್ತ ಶಮ್ಸ್ ಸಿದ್ಧೀಕಿ ಅವರು, “ಈ ಸೋರಿಕೆ ಆದ ವರದಿ ಚುನಾವಣೆಗಳ ಮುನ್ನ ನಿರ್ದಿಷ್ಟ ವಾದವನ್ನು ಬೆಂಬಲಿಸಲು ರೂಪುಗೊಂಡದಂತೆ ತೋರುತ್ತದೆ. ಸಂಪೂರ್ಣ ವರದಿ ಅಧಿಕೃತವಾಗಿ ಬಿಡುಗಡೆಯಾಗದವರೆಗೆ ಇಂತಹ ಲೀಕ್‌ಗಳ ಆಧಾರದ ಮೇಲೆ ನಂಬುವುದು ಅಪಾಯಕರ” ಎಂದು ಹೇಳಿದರು.

ಮುಸ್ಲಿಂ ನಾಯಕರೊಬ್ಬರು, ಸರ್ಕಾರವು ಸಂಪೂರ್ಣ ವರದಿಯನ್ನು ಪ್ರಕಟಿಸಬೇಕು ಹಾಗೂ ನಿಜವಾಗಿಯೂ ಹೊಣೆಗಾರರಾಗಿರುವವರಿಗೆ ಶಿಕ್ಷೆ ನೀಡಬೇಕು. ಸಂಪೂರ್ಣ ಸಮುದಾಯವನ್ನು ಗುರಿಯಾಗಿಸುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.

ಮರ್ಯಾದೆಗೇಡು ಹತ್ಯೆ: ದಲಿತ ವ್ಯಕ್ತಿಯನ್ನು ಥಳಿಸಿ ಕೊಂದ ಪತ್ನಿ ಸಂಬಂಧಿಕರು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...