Homeಮುಖಪುಟಸಿಎಂಗೆ ಸಂಭಾಲ್ ಹಿಂಸಾಚಾರದ ವರದಿ ಸಲ್ಲಿಕೆ: ಹಿಂದೂ ವಲಸೆಯತ್ತ ಆಯೋಗದ ಒತ್ತು, ನಿಜಾಂಶವಿಲ್ಲ ಎಂದ ಜನ

ಸಿಎಂಗೆ ಸಂಭಾಲ್ ಹಿಂಸಾಚಾರದ ವರದಿ ಸಲ್ಲಿಕೆ: ಹಿಂದೂ ವಲಸೆಯತ್ತ ಆಯೋಗದ ಒತ್ತು, ನಿಜಾಂಶವಿಲ್ಲ ಎಂದ ಜನ

- Advertisement -
- Advertisement -

ಸಂಭಾಲ್: 9 ತಿಂಗಳುಗಳ ನಂತರ ಸಂಭಾಲ್ ಹಿಂಸಾಚಾರ ಕುರಿತು ರಚಿಸಿದ್ದ ನ್ಯಾಯಾಂಗ ತನಿಖಾ ಆಯೋಗವು 450 ಪುಟಗಳ ವರದಿಯನ್ನು ಗುರುವಾರ ಮುಖ್ಯಮಂತ್ರಿ ಅವರಿಗೆ ಸಲ್ಲಿಸಿದೆ.

ಉತ್ತರಪ್ರದೇಶದ ಸಂಭಾಲ್‌ನಲ್ಲಿ ಸಂಭವಿಸಿದ ಹಿಂಸಾಚಾರ ಕುರಿತ ನ್ಯಾಯಾಂಗ ತನಿಖಾ ವರದಿ ಸೋರಿಕೆ ಆದ ನಂತರ ವಿವಾದ ಉಂಟಾಗಿ ತೀವ್ರ ಪ್ರತಿಕ್ರಿಯೆಗಳನ್ನು ಹುಟ್ಟು ಹಾಕಿದೆ. ಮುಸ್ಲಿಂ ಸಮುದಾಯದವರು ವರದಿಯ ವಿಶ್ವಾಸಾರ್ಹತೆಯನ್ನು ಪ್ರಶ್ನಿಸಿ, ಸರ್ಕಾರ ಈ ದುರಂತವನ್ನು ಸಮುದಾಯದ ನಡುವಣ ದ್ವೇಷವನ್ನು ಹೆಚ್ಚಿಸಲು ಬಳಸುತ್ತಿದೆ ಎಂದು ಆರೋಪಿಸಿದ್ದಾರೆ.

ಕಳೆದ ವರ್ಷದ ನವೆಂಬರ್ 24ರಂದು ಸಂಭಾಲ್‌ನ ಐತಿಹಾಸಿಕ ಶಾಹಿ ಜಾಮಾ ಮಸೀದಿ ಬಳಿ ನಡೆದ ಸರಕಾರದ ಸಮೀಕ್ಷೆ ವೇಳೆ ಹಿಂಸಾಚಾರವು ಉದ್ಭವಿಸಿತ್ತು. ಆ ವೇಳೆ ಪೊಲೀಸ್ ಗುಂಡಿನ ದಾಳಿಯಲ್ಲಿ ಐದು ಮುಸ್ಲಿಂ ಯುವಕರು ಮೃತರಾದರು, ಅನೇಕರಿಗೆ ಗಾಯಗಳಾದವು ಮತ್ತು ಹಲವಾರು ವಾಹನಗಳಿಗೆ ಬೆಂಕಿ ಹಚ್ಚಲಾಯಿತು. ಈ ಗಲಭೆಯ ನಂತರ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ನಿವೃತ್ತ ನ್ಯಾಯಾಧೀಶ ದೇವೇಂದ್ರಕುಮಾರ್ ಅರೋರಾ ನೇತೃತ್ವದ ನ್ಯಾಯಾಂಗ ಆಯೋಗವನ್ನು ರಚಿಸಿದರು. ಅವರೊಂದಿಗೆ ನಿವೃತ್ತ ಐಎಎಸ್ ಅಮಿತ್ ಮೋಹನ್ ಮತ್ತು ನಿವೃತ್ತ ಐಪಿಎಸ್ ಅರ್ವಿಂದ್ ಕುಮಾರ್ ಜೈನ್ ಇದ್ದರು.

ಹಿಂಸಾಚಾರದ ವಿಷಯಕ್ಕೆ ಸಂಬಂಧಿಸಿ ಕಾರಣವೇನು ಎಂಬ ಕುರಿತು ಈ ವರದಿ ಒತ್ತು ನೀಡಬೇಕಿತ್ತು. ಆದರೆ ಅದು ಹಿಂದೂ ಜನಸಂಖ್ಯೆಯ ವಲಸೆ ವಿಚಾರಕ್ಕೆ ಹೆಚ್ಚಿನ ಒತ್ತುಕೊಡುತ್ತದೆ. ವರದಿಯ ಪ್ರಕಾರ, ಸಂಭಾಲ್‌ನ ಹಿಂದೂ ಜನಸಂಖ್ಯೆ ಸ್ವಾತಂತ್ರ್ಯದ ಕಾಲದಲ್ಲಿ 45 ಶೇಕಡದಿಂದ ಇಂದಿಗೆ 15 ಶೇಕಡಕ್ಕೆ ಇಳಿದಿದೆ. ಸುಮಾರು 30 ಶೇಕಡ ಇಳಿಕೆ ನಡೆದಿದೆ, ಅದು ಗಲಭೆಗಳು ಮತ್ತು ಬೆದರಿಕೆಗಳ ಕಾರಣದಿಂದ ಸಂಭವಿಸಿದೆ ಎಂಬ ಆರೋಪವಿದೆ.

ಈ ವರದಿಯು ಸಂಭಾಲ್‌ನ ಮುಸ್ಲಿಂ ಸಮುದಾಯದಲ್ಲಿ ಅಸಹಮತಿಯ ಅಲೆ ಎಬ್ಬಿಸಿದೆ. ಶಾಹಿ ಜಾಮಾ ಮಸೀದಿ ಸಮಿತಿಯ ಪರವಾಗಿ ವಕೀಲ ಶಕೀಲ್ ವಾರ್ಸಿ ಅವರು ಮಾತನಾಡುತ್ತಾ, “ಇಂತಹ ವರದಿಯ ಆಧಾರದ ಮೇಲೆ ಯಾರನ್ನೂ ದಂಡಿಸಲಾಗದು. ನಿಜವಾದ ಸತ್ಯವನ್ನು ನ್ಯಾಯಾಲಯವೇ ನಿರ್ಧರಿಸಬೇಕು. ಹಿಂಸಾಚಾರವನ್ನು ಹಿಂದೂ ವಲಸೆಯೊಂದಿಗೆ ತಳಕುಹಾಕುವುದು ಅಡಳಿತಾತ್ಮಕ ರಾಜಕೀಯಕ್ಕೆ ಸೇರಿದ್ದು, ಅರ್ಥವಿಲ್ಲದದ್ದು,” ಎಂದರು.

ಪ್ರಮುಖ ಪತ್ರಕರ್ತ ಶಮ್ಸ್ ಸಿದ್ಧೀಕಿ ಅವರು ಕೂಡ ವರದಿಯ ಮಾಹಿತಿಯನ್ನು ಪ್ರಶ್ನಿಸಿದರು. “ಈ ವರದಿ ಇತಿಹಾಸದ ದಾಖಲೆಯೊಂದಿಗೆ ಹೊಂದಿಕೆಯಾಗುವುದಿಲ್ಲ. ಅವರು 1947ರಲ್ಲಿ ಹಿಂದೂ ಜನಸಂಖ್ಯೆ 45 ಶೇಕಡವೆಂದು ಹೇಳುವುದು ಸುಳ್ಳು, ಏಕೆಂದರೆ ಜನಗಣತಿಯ ಮಾಹಿತಿ ಇದನ್ನು ಸಮರ್ಥಿಸದು. ಇದು ಹಿಂಸಾಚಾರದ ವಿಚಾರಣೆಯ ವರದಿಯೇನಾ, ಅಥವಾ ಜನಗಣತಿಯ ಸಮೀಕ್ಷೆಯಾ? ವರದಿ ನಂಬಲರ್ಹವಲ್ಲ,” ಎಂದು ಹೇಳಿದರು.

ಇನ್ನೊಬ್ಬ ಮುಸ್ಲಿಂ ಹಿರಿಯರು ಸರ್ಕಾರಿ ನಡವಳಿಕೆಯನ್ನು ಆಕ್ರೋಶದಿಂದ ಟೀಕಿಸಿದರು: “ನಾವು ಮಸೀದಿಗಳ ಮೇಲೆ ತ್ರಿವರ್ಣ ಧ್ವಜ ಹಾರಿಸಿ ದೇಶಭಕ್ತಿಯನ್ನು ತೋರಿಸಿದ್ದರೂ, ಇನ್ನೂ ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ. ಇದು ಅಪಾಯಕರ ಮತ್ತು ಅಸಮಾನತೆಯದ್ದಾಗಿದೆ,” ಎಂದು ಹೇಳಿದರು.

ಈ ವರದಿಯನ್ನು ಮುಸ್ಲಿಂ ಮುಖಂಡರು ತಿರಸ್ಕರಿಸಿದರೆ, ಹಿಂದೂ ಪ್ರತಿನಿಧಿಗಳಿಂದ ವಿಭಿನ್ನ ಪ್ರತಿಕ್ರಿಯೆಗಳು ಬಂದಿವೆ. ಸ್ಥಳೀಯ ಹಿಂದೂ ಪ್ರತಿನಿಧಿ ಗೋಪಾಲ್ ಅವರು, “ಹೌದು, ಕೆಲವರು ವಾಸಸ್ಥಾನ ಬದಲಾಯಿಸುತ್ತಿದ್ದಾರೆ. ಆದರೆ ಅದು ಮುಸ್ಲಿಂ ಭಯದಿಂದಲ್ಲ. ಹೆಚ್ಚಿನ ವ್ಯವಹಾರ ಅವಕಾಶಗಳಿಗಾಗಿ ಇತರ ದೊಡ್ಡ ನಗರಗಳಿಗೆ ಹೋಗುತ್ತಿದ್ದಾರೆ. ಮುಸ್ಲಿಂ ಸಮುದಾಯವನ್ನು ಗುರಿಯಾಗಿಸುವುದು ತಪ್ಪು,” ಎಂದು ಹೇಳಿದರು.

ಆದರೆ ವಿವಾದಾತ್ಮಕ ಹನುಮಾನ್‌ಗಢಿ ಪೀಠದ ಪುಜಾರಿ ರಾಜು ದಾಸ್ ಅವರು ಈ ವರದಿಯನ್ನು ಆಧಾರವನ್ನಾಗಿ ಮಾಡಿಕೊಂಡು ಕಿಡಿಕಾರಿದರು. “ಇದು ಸ್ಪಷ್ಟವಾಗಿಸುತ್ತದೆ — ಹಿಂದೂಗಳು ಬಲವಂತವಾಗಿ ವಲಸೆ ಹೋಗುತ್ತಿದ್ದಾರೆ. ಇವತ್ತಿಗೆ ಕೇವಲ 15 ಶೇಕಡ ಮಾತ್ರ ಉಳಿದಿದ್ದಾರೆ. ಎಲ್ಲೆಲ್ಲಿ ಮುಸ್ಲಿಂ ಸಂಖ್ಯಾಬಲ ಹೆಚ್ಚಿದೆಯೋ ಅಲ್ಲಿ ಗಲಭೆ ಮತ್ತು ಭಯ ವಾತಾವರಣ ಇರುತ್ತದೆ,” ಎಂದು ಆರೋಪಿಸಿದರು.

ಅವರ ಈ ಹೇಳಿಕೆಗಳು ಮುಸ್ಲಿಂ ಸಮುದಾಯವನ್ನು ಆಕ್ರೋಶಕ್ಕೆ ದೂಡಿವೆ. ಸಂಭಾಲ್‌ನ ಒಬ್ಬ ಮುಸ್ಲಿಂ ಅಂಗಡಿ ಮಾಲೀಕರು ಪ್ರತಿಕ್ರಿಯಿಸಿ, “ಹಿಂದೂಗಳು ಉದ್ಯೋಗಕ್ಕಾಗಿ ಹೋಗುತ್ತಿದ್ದರೆ ಅದಕ್ಕೆ ನಾವು ಹೊಣೆ ಹೇಗೆ? ನಾವು ಎಪ್ಪತ್ತು ವರ್ಷಗಳಿಂದ ಜೊತೆಯಾಗಿ ಬದುಕುತ್ತಿದ್ದೇವೆ. ಇಂತಹ ಹೇಳಿಕೆಗಳು ಕೇವಲ ದ್ವೇಷವನ್ನೇ ಹೆಚ್ಚಿಸುತ್ತವೆ” ಎಂದು ಹೇಳಿದರು.

ಪರಿಶೀಲಕರು ಆಕ್ಷೇಪಿಸಿದ್ದು, ನವೆಂಬರ್ 2024ರ ಹಿಂಸಾಚಾರದಲ್ಲಿ ಸತ್ತವರ ಕುಟುಂಬಗಳು ಇಂದಿಗೂ ನ್ಯಾಯಕ್ಕಾಗಿ ಕಾಯುತ್ತಿರುವಾಗ, ಸರ್ಕಾರ ಈ ವರದಿಯನ್ನು ಮುನ್ನೆಡೆಸಿಕೊಂಡು ಸಂಭಾಲ್‌ ಅನ್ನು ಹಿಂದೂಗಳಿಗೆ ಅಪಾಯಕಾರಿಯಾದ ಪ್ರದೇಶವೆಂಬಂತೆ ಬಿಂಬಿಸಲು ಯತ್ನಿಸುತ್ತಿದೆ ಎಂದಿದ್ದಾರೆ.

ವಿರೋಧಿ ಪತ್ರಕರ್ತ ಶಮ್ಸ್ ಸಿದ್ಧೀಕಿ ಅವರು, “ಈ ಸೋರಿಕೆ ಆದ ವರದಿ ಚುನಾವಣೆಗಳ ಮುನ್ನ ನಿರ್ದಿಷ್ಟ ವಾದವನ್ನು ಬೆಂಬಲಿಸಲು ರೂಪುಗೊಂಡದಂತೆ ತೋರುತ್ತದೆ. ಸಂಪೂರ್ಣ ವರದಿ ಅಧಿಕೃತವಾಗಿ ಬಿಡುಗಡೆಯಾಗದವರೆಗೆ ಇಂತಹ ಲೀಕ್‌ಗಳ ಆಧಾರದ ಮೇಲೆ ನಂಬುವುದು ಅಪಾಯಕರ” ಎಂದು ಹೇಳಿದರು.

ಮುಸ್ಲಿಂ ನಾಯಕರೊಬ್ಬರು, ಸರ್ಕಾರವು ಸಂಪೂರ್ಣ ವರದಿಯನ್ನು ಪ್ರಕಟಿಸಬೇಕು ಹಾಗೂ ನಿಜವಾಗಿಯೂ ಹೊಣೆಗಾರರಾಗಿರುವವರಿಗೆ ಶಿಕ್ಷೆ ನೀಡಬೇಕು. ಸಂಪೂರ್ಣ ಸಮುದಾಯವನ್ನು ಗುರಿಯಾಗಿಸುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.

ಮರ್ಯಾದೆಗೇಡು ಹತ್ಯೆ: ದಲಿತ ವ್ಯಕ್ತಿಯನ್ನು ಥಳಿಸಿ ಕೊಂದ ಪತ್ನಿ ಸಂಬಂಧಿಕರು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಇನ್‌ಸ್ಟಾಗ್ರಾಮ್‌ನಲ್ಲಿ ಕ್ಷಮಿಸಿದರೆ ಸಾಲದು, ವಿದ್ಯಾರ್ಥಿಗಳ ಮೇಲಿನ ಕೇಸ್ ವಾಪಸ್ ಪಡೆಯಿರಿ: ಪ್ರಧಾನಿಗೆ ದೀಪ್ಕೆ ನೇರ ಪ್ರಶ್ನೆ

ಪ್ರಧಾನಿ ನರೇಂದ್ರ ಮೋದಿ ಅವರು ಇನ್‌ಸ್ಟಾಗ್ರಾಮ್ ವಿಡಿಯೋವೊಂದರಲ್ಲಿ ತಮ್ಮ ವಿರುದ್ಧ ನಿಂದನಾತ್ಮಕ ಪದ ಬಳಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಕ್ಷಮಿಸಿದ್ದೇನೆ ಎಂದು ಹೇಳಿರುವುದಕ್ಕೆ ಸಿಜೆಪಿ ಸಂಸ್ಥಾಪಕ ಅಭಿಜೀತ್...

ಪ್ರತಿಭಟನೆ ಭೀತಿ : ಸಿಜೆಐ ಸೂರ್ಯಕಾಂತ್ ಭಾಗವಹಿಸಬೇಕಿದ್ದ ಘಟಿಕೋತ್ಸವ ದಿಢೀರ್ ಮುಂದೂಡಿದ TISS

ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (ಟಿಐಎಸ್‌ಎಸ್‌) ಸಂಸ್ಥೆಯು ಆಗಸ್ಟ್ 2ರಂದು ನಡೆಸಲು ನಿಗದಿಪಡಿಸಿದ್ದ ತನ್ನ 86ನೇ ವಾರ್ಷಿಕ ಘಟಿಕೋತ್ಸವವನ್ನು ದಿಢೀರ್ ಮುಂದೂಡಿದೆ. ಕ್ಯಾಂಪಸ್ ಭದ್ರತೆಯ ಬಗೆಗಿನ ಕಳವಳಗಳು ಮತ್ತು ವಿದ್ಯಾರ್ಥಿಗಳ...

ಪ್ರಧಾನಿಗಳೇ ನಿಮ್ಮ ರೀಲ್‌ಗಳನ್ನು ಅಂಧಭಕ್ತರು ಮೆಚ್ಚಬಹುದು, ಆದರೆ ಇತಿಹಾಸ ನಿಮ್ಮನ್ನು ಕ್ಷಮಿಸುವುದಿಲ್ಲ: ಬಿ.ಕೆ. ಹರಿಪ್ರಸಾದ್

ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿರುವ ಇತ್ತೀಚಿನ ವಿಡಿಯೋ (ರೀಲ್) ಕುರಿತು ಕಾಂಗ್ರೆಸ್ ಹಿರಿಯ ನಾಯಕ ಮತ್ತು ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ. ಹರಿಪ್ರಸಾದ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ತಾನು ಮಾಡಿದರೆ ರಾಜತಂತ್ರ, ಬೇರೆಯವರು...

ಪ್ರಧಾನಿ ಮೋದಿ ವಿರುದ್ಧ ನಿಂದನೆ: ನನಗೆ ಕೇವಲ 15 ವರ್ಷ ‘ಅನ್ಯರ ಪ್ರಭಾವಕ್ಕೆ ಒಳಗಾಗಿದ್ದೆ’ ಎಂದು ಕ್ಷಮೆ ಕೇಳಿದ ವಿದ್ಯಾರ್ಥಿನಿ ವಿಡಿಯೋ ವೈರಲ್

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿ ಭಾರಿ ಆಕ್ರೋಶಕ್ಕೆ ಗುರಿಯಾಗಿದ್ದ ಸಿಜೆಪಿ (CJP) ಪ್ರತಿಭಟನಾಕಾರ ಯುವತಿಯೊಬ್ಬಳು ಸೋಶಿಯಲ್ ಮೀಡಿಯಾದಲ್ಲಿ ಕ್ಷಮೆಯಾಚಿಸಿದ್ದಾಳೆ ಎನ್ನಲಾದ ವೀಡಿಯೊವೊಂದು ಹರಿದಾಡುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್...

ಸ್ಪೇನ್‌ಗೆ ನುಗ್ಗಿದ ಸಾವಿರಾರು ಮೊರಾಕನ್ನರು : ಬೃಹತ್ ವಲಸೆಯ ಹಿಂದೆ ಇಸ್ರೇಲ್ ಕುತಂತ್ರ?

ಮೊರಾಕೊದಿಂದ ಸ್ಪೇನ್‌ನ ಸಿಯುಟಾ ನಗರಕ್ಕೆ ಸಾವಿರಾರು ವಲಸಿಗರು ನುಗ್ಗಿದ ಬಿಕ್ಕಟ್ಟಿನ ಹಿಂದೆ ಇಸ್ರೇಲ್ ಕೈವಾಡವಿದೆ ಎಂಬ ಆರೋಪಗಳು ಕೇಳಿ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇಸ್ರೇಲ್‌ನ ಕುತಂತ್ರ ಬುದ್ದಿಯ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ಇದೇ...

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...