Homeಮುಖಪುಟ’ವೇಟಿಂಗ್ ಪಾರ್ ಗಾಡೋ’ ; ನಮ್ಮನ್ನು ಉದ್ದೇಶಿಸಿ ಮಾತನಾಡುವ ನಾಟಕ...

’ವೇಟಿಂಗ್ ಪಾರ್ ಗಾಡೋ’ ; ನಮ್ಮನ್ನು ಉದ್ದೇಶಿಸಿ ಮಾತನಾಡುವ ನಾಟಕ…

ಎರಡು ಮಹಾಯುದ್ದಗಳನ್ನು ಕಣ್ಣಾರೆ ಕಂಡ ಬೆಕೆಟ್, ಯುದ್ದದ ಸಂರ್ಭದಲ್ಲಿ ನಡೆದ ಸಾವು ನೋವುಗಳು ಅವರ ಮನಕಲಿಕಿದವು. ಯುದ್ದದ ಕ್ರೌರ್ಯ, ಮಾನಸಿಕ ವೇದನೆ, ತವಕ-ತಲ್ಲಣಗಳ ಕುರಿತು ತನ್ನ ಕೃತಿಗಳಲ್ಲಿ ಕಟ್ಟಿಕೊಟ್ಟ ಅವರು ಆಹೊತ್ತಿನ ಭೀಕರತೆ, ಭೀಭತ್ಸತೆಗೆ ಕನ್ನಡಿ ಹಿಡಿದು ಓದುಗರನ್ನು ಮನಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.

- Advertisement -
- Advertisement -

ಸ್ಯಾಮುಯಲ್ ಬೆಕೆಟ್ ಐರಿಷ್ ಕವಿ. ಅವನೊಬ್ಬ ಶ್ರೇಷ್ಟ ಕಾದಂಬರಿಕಾರ. ಕಥೆಗಾರ ಹಾಗೆಯೇ ನಾಟಕಕಾರ. ಅಷ್ಟೇ ಅಲ್ಲ ಭಾಷಾಂತರಕಾರ ಕೂಡ. ಫ್ರೆಂಚ್ ಮತ್ತು ಐರೀಷ್ ಎರಡು ಭಾಷೆಗಳಲ್ಲೂ ಹಲವು ಶ್ರೇಷ್ಟಮಟ್ಟದ ಕೃತಿಗಳನ್ನು ರಚಿಸಿರುವ ಬೆಕೆಟ್ 1906 ರಲ್ಲಿ ಜನಿಸಿ 1989ರಲ್ಲಿ ತೀರಿಕೊಂಡ. ಜೀವಿತದ ಅವಧಿಯಲ್ಲಿ ಮರ್ಫಿ, ವಾಲ್, ಮಲೋನೆ ಡೈಸ್, ವೈಟಿಂಗ್ ಫಾರ್ ಗಾಡೋ, ಎಂಡ್ ಗೇಮ್ ಹೀಗೆ ಹತ್ತಾರು ಪ್ರಮುಖ ಕೃತಿಗಳನ್ನು ರಚಿಸಿದ್ದು ಈತನಿಗೆ 1969ರಲ್ಲಿ ನೊಬೆಲ್ ಪ್ರಶಸ್ತಿ ಲಭಿಸಿದೆ.

ಎರಡು ಮಹಾಯುದ್ದಗಳನ್ನು ಕಣ್ಣಾರೆ ಕಂಡ ಬೆಕೆಟ್, ಯುದ್ದದ ಸಂರ್ಭದಲ್ಲಿ ನಡೆದ ಸಾವು ನೋವುಗಳು ಅವರ ಮನಕಲಿಕಿದವು. ಯುದ್ದದ ಕ್ರೌರ್ಯ, ಮಾನಸಿಕ ವೇದನೆ, ತವಕ-ತಲ್ಲಣಗಳ ಕುರಿತು ತನ್ನ ಕೃತಿಗಳಲ್ಲಿ ಕಟ್ಟಿಕೊಟ್ಟ ಅವರು ಆಹೊತ್ತಿನ ಭೀಕರತೆ, ಭೀಭತ್ಸತೆಗೆ ಕನ್ನಡಿ ಹಿಡಿದು ಓದುಗರನ್ನು ಮನಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಬೆಕೆಟ್ ನ ‘ವೇಟಿಂಗ್ ಫಾರ್ ಗಾಡೋ ನಾಟಕ ‘ಸುಖದುಃಖಾಂತ್ಯ’ ನಾಟಕ. ಕೇವಲ ಐದೇ ಐದು ಪಾತ್ರಗಳು ಮನುಷ್ಯನ ದುಖಃ, ಸುಖ, ನೋವಿಗೆ ತಾವಾಗಿಯೇ ತೆರೆದುಕೊಳ್ಳುತ್ತವೆ. ತಮ್ಮೊಳಗಿನ ಗೊಂದಲಗಳನ್ನು ಪ್ರೇಕ್ಷಕರ ಮುಂದೆ ಇಡುತ್ತವೆ. ನಾಳೆಗಳ ಕನಸುಗಳನ್ನು ಕಟ್ಟಿಕೊಳ್ಳುತ್ತಲೇ ಆ ಕನಸುಗಳನ್ನು ಕೊಂದುಕೊಳ್ಳುತ್ತವೆ. ಇಂಥದ್ದೊಂದು ನಾಟಕವನ್ನು ತುಮಕೂರಿನಲ್ಲಿ ಪ್ರದರ್ಶಿಸಲಾಯಿತು. ಲೋಕಚರಿತ ರಂಗ ಕೇಂದ್ರ ಎಂಬ ಚಿಕ್ಕದಾಳವಟ್ಟದ ಗ್ರಾಮೀಣ ಸಂಘಟನೆ ಬೆಕೆಟ್ ನ ವೇಟಿಂಗ್ ಫಾರ್ ಗಾಡೋ ನಾಟಕ ಪ್ರದರ್ಶನಕ್ಕೆ ವೇದಿಕೆ ಒದಗಿಸಿತ್ತು. ರಂಗ ತಂಡದ ಕಲಾವಿದರು ಪುಟ್ಟ ಹೆಜ್ಜೆಗಳನ್ನು ಇಡುತ್ತಿದ್ದರೂ ಅವು ದೃಢವಾಗಿದ್ದವು. ಅವರು ಪ್ರತಿಯೊಂದು ಸನ್ನಿವೇಶದಲ್ಲೂ ಸಭಿಕರ ಮನಸ್ಸನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾದರು.

ಬರಡುಭೂಮಿ, ಬೆಟ್ಟಗುಡ್ಡಗಳು, ಎಲೆಗಳೇ ಇಲ್ಲದ ಮರಗಳು. ಅಂಥ ಪ್ರದೇಶದಲ್ಲಿ ಇಬ್ಬರು ದಿಕ್ಕುದೆಸ (ಬೇವರ್ಸಿಗಳು) ಇಲ್ಲದ ಅಬ್ಬೇಪಾರಿಗಳು. ಮೊದಲಿಗೆ ಗುಡ್ಡವೊಂದರ ಮೇಲೆ ಕುಳಿತು ತನ್ನ ಎಡಗಾಲಿನ ಬೂಟು ಬಿಚ್ಚುವ ದೃಶ್ಯದಿಂದ ಆರಂಭವಾಗುವ ನಾಟಕ ಮುಂದೆ ತನ್ನ ಕಥಾಹಂದರವನ್ನು ಬಿಚ್ಚಿಕೊಳ್ಳುತ್ತಾ ಹೋಗುತ್ತದೆ. ಮೊದಲು ಗುಡ್ಡದ ಮೇಲೆ ಕುಳಿತ ವ್ಯಕ್ತಿಯ ಜೊತೆಗೆ ಮತ್ತೊಬ್ಬ ವ್ಯಕ್ತಿ ಸೇರಿಕೊಂಡು ಅಮೂರ್ತ ರೂಪದ ಗಾಡೋನಿಗಾಗಿ ಕಾಯುವುದು. ಕಾಲದೂಡಲು, ಬೇಸರ ನಿವಾರಣೆಗೆ ಮತ್ತು ಮೌನ ವಾತಾವರಣ ಮುರಿದು ಹಾಕಲು ಇಬ್ಬರು ಬೇವರ್ಸಿಗಳು ಮಾತಿಗೆ ಆರಂಭಿಸುತ್ತಾರೆ. ಅವರ ಮಾತುಗಳು ಎಲ್ಲೆಲ್ಲೋ ಹೋಗುತ್ತವೆ. ಇಬ್ಬರು ಅಬ್ಬೇಪಾರಿಗಳ ನಡುವಿನ ಸಂಭಾಷಣೆ ಅಸಂಬದ್ದವಾಗಿರುತ್ತದೆ. ತಾಳತಪ್ಪುತ್ತದೆ. ಒಂದಕ್ಕೊಂದು ಸಂಬಂಧವೇ ಇಲ್ಲದಂತೆ ಆಗುತ್ತದೆ. ಇದು ಎರಡು ಮಹಾಯುದ್ದದ ಸಮಯದಲ್ಲಾದ ಸನ್ನಿವೇಶಕ್ಕೆ ಹಿಡಿದ ಕನ್ನಡಿಯಾಗಿದೆ.

ಈ ನಾಟಕ ಸಂಪೂರ್ಣವಾಗಿ ಸಂಗತವೂ ಅಲ್ಲದ, ಅಸಂಗತವೂ ಅಲ್ಲದ ಸ್ಥಿತಿಯಲ್ಲಿ ಮುಂದುವರಿಯುತ್ತದೆ. ಶಬರಿ ರಾಮನಿಗಾಗಿ ವರ್ಷಾನುಗಟ್ಟಲೆ ಕಾಯುವಂತೆ (ಕೊನೆಗೂ ಶಬರಿಗೆ ರಾಮನ ದರ್ಶನವಾಗುತ್ತದೆ.) ಈ ಇಬ್ಬರು ಬೇವರ್ಸಿಗಳು ತಾವೂ ನೋಡಿಯೇ ಇಲ್ಲದ, ಪರಿಚಯವೇ ಇಲ್ಲದ ಗಾಡೋನಿಗಾಗಿ ಕಾಯುತ್ತಾ ಎರಡು ಬಾರಿ ಆತ್ಮಹತ್ಯೆಗೆ ಯತ್ನಿಸುತ್ತಾರೆ. ಈ ಪಾತ್ರಗಳು ಪ್ರತಿಯೊಬ್ಬ ವ್ಯಕ್ತಿಯ ಮನದಾಳದ ಗೊಂದಲಗಳಿಗೆ ಮುಖಾಮುಖಿಯಾಗುತ್ತಾರೆ. ಇಂದಿನ ಸಮಾಜದಲ್ಲೂ ವ್ಯಕ್ತಿ ಯಾರನ್ನೋ ಕಾಯುತ್ತಾ, ನಿರೀಕ್ಷೆ ಮಾಡುತ್ತ, ಅವರು ಸಿಗದೇ, ಬೇಸರ, ನೋವು ತಡೆಯಲಾರದೆ ಆತ್ಮಹತ್ಯೆಗೆ ಯತ್ನಿಸುವ ಸನ್ನಿವೇಶಕ್ಕೂ ಈ ಪಾತ್ರಗಳು ಮುಖಾಮುಖಿಯಾಗುತ್ತವೆ. ಯುದ್ದದಂತಹ ಸನ್ನಿವೇಶದಲ್ಲಿ ಮನುಷ್ಯನ ಮನಸ್ಥಿತಿ ಹೇಗಿರುತ್ತದೆ ಎಂಬುದನ್ನು ಈ ಪಾತ್ರಗಳು ಕಟ್ಟಿಕೊಡುತ್ತವೆ.

ಮನುಷ್ಯನ ಮನಸ್ಸು ಕ್ಷಣಕ್ಷಣಕ್ಕೂ ಬದಲಾಗುತ್ತಿರುತ್ತದೆ. ಒಮ್ಮೆ ಆಡಿದ ಮಾತು ಮತ್ತೊಮ್ಮೆ ಆಡುವುದಿಲ್ಲ. ಹಾಗೆಯೇ ಈ ಬೇವರ್ಸಿ ಪಾತ್ರಗಳು ನಮ್ಮ ಕಣ್ಣ ಮುಂದೆ ನಿಲ್ಲುತ್ತವೆ. ನಮ್ಮ ನಿರೀಕ್ಷೆಗಳು ಸುಳ್ಳಾಗಬಹುದು. ನೋವು, ಸಂಕಟ, ದುಃಖ ಕ್ಷಣ ಕಾಲ ಮರೆಯಾಗಬಹುದು. ಆದರೆ ದುತ್ತೆಂದು ಒಕ್ಕರಿಸುತ್ತವೆ ಎಂಬುದನ್ನು ಈ ಪಾತ್ರಗಳು ಸಾಕ್ಷೀಕರಿಸುತ್ತವೆ. ಒಮ್ಮೆ ಒಣಗಿದ ಮರವೂ ಚಿಗುರಬಹುದು. ಹಾಗೆಯೇ ಮನುಷ್ಯನಲ್ಲೂ ಬದುಕುವ ಉತ್ಸಾಹ ಮೂಡಬಹುದು. ಅದು ಹೆಚ್ಚು ದಿನ ಇರುವುದಿಲ್ಲ. ಕೊನೆಗೆ ಆ ಎರಡು ಪಾತ್ರಗಳು ಹೀಗೆ ಸಾರುತ್ತವೆ. ನಾವು ನಾಳೆ ಇಲ್ಲಿಗೆ ಮರಳಿ ಬಂದರೆ ಬದುಕಿರುತ್ತೇವೆ. ಬಾರದೆ ಇದ್ದರೆ ನಾವು ಸತ್ತಂತೆ ಎಂಬಲ್ಲಿಗೆ ನಾಟಕ ಅಂತ್ಯವಾಗುತ್ತದೆ. ಇಡೀ ನಾಟಕದ ಉದ್ದಕ್ಕೂ ಎರಡು ಬೇವರ್ಸಿ ಪಾತ್ರಗಳೇ ಪ್ರಧಾನವಾಗಿವೆ.

ಈ ನಡುವೆ ಆ ಬರಡು ಭೂಮಿಯಲ್ಲಿದ್ದ ಇಬ್ಬರು ಬೇವರ್ಸಿ ಪಾತ್ರಗಳಗಳ ಜೊತೆಗೆ ಎಷ್ಟೋ ದಿನ ಕಳೆದ ಮೇಲೆ ಅಲ್ಲಿಗೆ ಪೋಜೋ ಅಲ್ಲಿಗೆ ಲಕ್ಕಿಯೊಂದಿಗೆ ಬರುತ್ತಾನೆ. ಆತ ವಿರಾಮ ಪಡೆಯಲು ಆ ಬೇವರ್ಸಿಗಳೊಂದಿಗೆ ಕೆಲಕಾಲ ಮಾತಿಗೆ ಇಳಿಯುತ್ತಾನೆ. ಅವರ ನಡುವೆ ನಡೆಯುವ ಸಂಭಾಷಣೆ ನಗೆಯುಕ್ಕಿಸುತ್ತದೆ. ಪೋಜೋ ಬಿಸುಟ ಮೋಟು ಬೀಡಿ, ಮೂಳೆ ಚಿಕನ್ ಗಳನ್ನು ಆ ಇಬ್ಬರು ಬೇವರ್ಸಿ ಪಾತ್ರಗಳು ತೆಗೆದುಕೊಂಡು ಮೋಜು ಮಾಡುತ್ತವೆ. ಲಕ್ಕಿಯದು ಪೋಜೇನ ಸಾಮಾನುಗಳನ್ನು ಹೊರುವ ಕೆಲಸ. ಹೇಳಿದ್ದು ಮಾಡುವ ಚಾಕರಿ. ಯುದ್ದದಂತಹ ಪರಿಸ್ಥಿತಿಯಲ್ಲಿ ಶ್ರೀಮಂತರು ಬಡವರನ್ನು ಗುಲಾಮರನ್ನಾಗಿ ಇಟ್ಟುಕೊಳ್ಳುತ್ತಿದ್ದರು ಎಂಬುದನ್ನು ಈ ಪಾತ್ರ ಹೇಳುತ್ತದೆ.  ಇವರ ನುಡವೆ ನಡೆಯುವ ಸಂಭಾಷಣೆಯಲ್ಲಿ ಕಪ್ಪು, ಬಿಳುಪು, ಹಸಿರು ಮೊದಲಾದ ಬಣ್ಣಗಳ ಕುರಿತು ವ್ಯಕ್ತವಾಗುವ ಮಾತುಗಳು ಅಸಂಬದ್ದತೆ ಪ್ರೇಕ್ಷಕರಲ್ಲಿ ನಗೆಗಡಲಲ್ಲಿ ತೇಲುವಂತೆ ಮಾಡುತ್ತವೆ.

ಹುಡುಗನ ಪಾತ್ರ ಎರಡೇ ಬಾರಿ ರಂಗದ ಮೇಲೆ ಕಂಡು ಬಂದರೂ ಗಮನ ಸೆಳೆಯುತ್ತದೆ. ಬೇವರ್ಸಿಗಳ ಬಳಿ ಬರುವ ಆ ಹುಡುಗ ನಾನು ಗಾಡೋನನ್ನು ನೋಡಿದ್ದೇನೆ. ಅವನ ಬಳಿಯಿಂದಲೇ ಬಂದಿದ್ದೇನೆ ಎನ್ನುತ್ತಾನೆ. ಅದಕ್ಕೆ ಬೇವರ್ಸಿಗಳು ನಾವು ಗಾಡೋಗಾಗಿ ಕಾಯುತ್ತಿದ್ದೇವೆ ಎಂಬುದನ್ನು ತಿಳಿಸುವಂತೆ ಆ ಹುಡುಗನಿಗೆ ಹೇಳುತ್ತಾರೆ. ಆದರೆ ಆ ಹುಡುಗ ಎರಡನೇ ಬಾರಿ ಬಂದಾಗ ನಾನು ನೆನ್ನೆ ಬಂದ ಹುಡುಗನಲ್ಲ. ನಾನು ಗಾಡೋ ನೋಡಿಲ್ಲ. ನೀವು ಯಾರು? ನಿಮ್ಮನ್ನೂ ನಾನು ಭೇಟಿ ಮಾಡಿಲ್ಲ ಎಂದು ಪ್ರೇಕ್ಷಕರನ್ನು ಗೊಂದಲದಲ್ಲಿ ಕೆಡವುತ್ತಾನೆ. ಮತ್ತೆ ಆ ಬೇವರ್ಸಿಗಳು ನಿನ್ನೆ ನೀನು ಬಂದಿದ್ದೆ ಎಂಬುದನ್ನು ಮನವರಿಕೆ ಮಾಡಿಕೊಟ್ಟರೂ ಒಪ್ಪಿಕೊಳ್ಳುವುದಿಲ್ಲ ಆ ಹುಡುಗ. ಇಂದು ಕೂಡ ಅಂಥವೇ ಸಂಗತಿಗಳು ನಮ್ಮ ನಡುವೆ ನಡೆಯುತ್ತಿರುವುದನ್ನು ನೋಡುತ್ತೇವೆ.

ಜಗತ್ತಿನಲ್ಲಿ ಜನಾಂಗೀಯ ದಬ್ಬಾಳಿಕೆ ನಡೆಯುತ್ತಿರುವುದಕ್ಕೆ, ಸಮಾಜದಲ್ಲಿ ತಾರತಮ್ಯದ ಮನೋಭಾವ ಇಂದಿಗೂ ಇರುವ ಬಗ್ಗೆ ಮಾರ್ಮಿಕವಾಗಿ ಧ್ವನಿಸುತ್ತದೆ. ಆಧುನಿಕ ಜಗತ್ತಿನ ನಾಗಾಲೋಟದಲ್ಲಿ ಮನುಷ್ಯ ಕ್ಷಣ ನಿಂತು ಆಲೋಚಿಸುವುದಕ್ಕೂ ಸಮಯವಿಲ್ಲದ ಪರಿಯನ್ನು ಹೇಳುತ್ತದೆ. ಗೊಂದಲದಲ್ಲಿರುವ ಮನುಷ್ಯನ ಮಾನಸಲೋಕದ ಅಲ್ಲೋಲಕಲ್ಲೋಲಗಳಿಗೆ ಪಾತ್ರಗಳು ಜೀವ ತುಂಬುತ್ತವೆ. ವೇಟಿಂಗ್ ಪಾರ್ ಗಾಡೋ ಇಂದಿಗೂ ಪ್ರಸ್ತುತವಾಗಿದೆ. ಮನುಷ್ಯನಲ್ಲಾಗುವ ಬದಲಾವಣೆಗಳನ್ನು ಹೇಳುತ್ತದೆ.

ರವಿಶಂಕರ್ ಆರ್ ನೀನಾಸಂ ನಿರ್ದೇಶನದಲ್ಲಿ ನಾಟಕ ಚನ್ನಾಗಿ ಮೂಡಿಬಂತು. ಚನ್ನಕೇಶವ, ಜಿತೇಂದ್ರ, ಜಿ.ಎಸ್. ಮೋಹನ್, ಶ್ರೀಕಾಂತ್, ಸುಮಂತ್ ಜಿ.ಜಿ. ವೇಟಿಮಗ್ ಫಾರ್ ಗಾಡೋ ನಾಟಕದ ಪಾತ್ರಗಳಿಗೆ ಜೀವ ತುಂಬಿದರು. ಲೋಕಚರಿತ ರಂಗ ಕೇಂದ್ರದ ಮುಖ್ಯಸ್ಥ ಅನಿಲ್ ಕುಮಾರ್ ಚಿಕ್ಕದಾಳವಟ್ಟ ಉಪಸ್ಥಿತರಿದ್ದರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...