Homeಮುಖಪುಟ’ವೇಟಿಂಗ್ ಪಾರ್ ಗಾಡೋ’ ; ನಮ್ಮನ್ನು ಉದ್ದೇಶಿಸಿ ಮಾತನಾಡುವ ನಾಟಕ...

’ವೇಟಿಂಗ್ ಪಾರ್ ಗಾಡೋ’ ; ನಮ್ಮನ್ನು ಉದ್ದೇಶಿಸಿ ಮಾತನಾಡುವ ನಾಟಕ…

ಎರಡು ಮಹಾಯುದ್ದಗಳನ್ನು ಕಣ್ಣಾರೆ ಕಂಡ ಬೆಕೆಟ್, ಯುದ್ದದ ಸಂರ್ಭದಲ್ಲಿ ನಡೆದ ಸಾವು ನೋವುಗಳು ಅವರ ಮನಕಲಿಕಿದವು. ಯುದ್ದದ ಕ್ರೌರ್ಯ, ಮಾನಸಿಕ ವೇದನೆ, ತವಕ-ತಲ್ಲಣಗಳ ಕುರಿತು ತನ್ನ ಕೃತಿಗಳಲ್ಲಿ ಕಟ್ಟಿಕೊಟ್ಟ ಅವರು ಆಹೊತ್ತಿನ ಭೀಕರತೆ, ಭೀಭತ್ಸತೆಗೆ ಕನ್ನಡಿ ಹಿಡಿದು ಓದುಗರನ್ನು ಮನಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.

- Advertisement -
- Advertisement -

ಸ್ಯಾಮುಯಲ್ ಬೆಕೆಟ್ ಐರಿಷ್ ಕವಿ. ಅವನೊಬ್ಬ ಶ್ರೇಷ್ಟ ಕಾದಂಬರಿಕಾರ. ಕಥೆಗಾರ ಹಾಗೆಯೇ ನಾಟಕಕಾರ. ಅಷ್ಟೇ ಅಲ್ಲ ಭಾಷಾಂತರಕಾರ ಕೂಡ. ಫ್ರೆಂಚ್ ಮತ್ತು ಐರೀಷ್ ಎರಡು ಭಾಷೆಗಳಲ್ಲೂ ಹಲವು ಶ್ರೇಷ್ಟಮಟ್ಟದ ಕೃತಿಗಳನ್ನು ರಚಿಸಿರುವ ಬೆಕೆಟ್ 1906 ರಲ್ಲಿ ಜನಿಸಿ 1989ರಲ್ಲಿ ತೀರಿಕೊಂಡ. ಜೀವಿತದ ಅವಧಿಯಲ್ಲಿ ಮರ್ಫಿ, ವಾಲ್, ಮಲೋನೆ ಡೈಸ್, ವೈಟಿಂಗ್ ಫಾರ್ ಗಾಡೋ, ಎಂಡ್ ಗೇಮ್ ಹೀಗೆ ಹತ್ತಾರು ಪ್ರಮುಖ ಕೃತಿಗಳನ್ನು ರಚಿಸಿದ್ದು ಈತನಿಗೆ 1969ರಲ್ಲಿ ನೊಬೆಲ್ ಪ್ರಶಸ್ತಿ ಲಭಿಸಿದೆ.

ಎರಡು ಮಹಾಯುದ್ದಗಳನ್ನು ಕಣ್ಣಾರೆ ಕಂಡ ಬೆಕೆಟ್, ಯುದ್ದದ ಸಂರ್ಭದಲ್ಲಿ ನಡೆದ ಸಾವು ನೋವುಗಳು ಅವರ ಮನಕಲಿಕಿದವು. ಯುದ್ದದ ಕ್ರೌರ್ಯ, ಮಾನಸಿಕ ವೇದನೆ, ತವಕ-ತಲ್ಲಣಗಳ ಕುರಿತು ತನ್ನ ಕೃತಿಗಳಲ್ಲಿ ಕಟ್ಟಿಕೊಟ್ಟ ಅವರು ಆಹೊತ್ತಿನ ಭೀಕರತೆ, ಭೀಭತ್ಸತೆಗೆ ಕನ್ನಡಿ ಹಿಡಿದು ಓದುಗರನ್ನು ಮನಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಬೆಕೆಟ್ ನ ‘ವೇಟಿಂಗ್ ಫಾರ್ ಗಾಡೋ ನಾಟಕ ‘ಸುಖದುಃಖಾಂತ್ಯ’ ನಾಟಕ. ಕೇವಲ ಐದೇ ಐದು ಪಾತ್ರಗಳು ಮನುಷ್ಯನ ದುಖಃ, ಸುಖ, ನೋವಿಗೆ ತಾವಾಗಿಯೇ ತೆರೆದುಕೊಳ್ಳುತ್ತವೆ. ತಮ್ಮೊಳಗಿನ ಗೊಂದಲಗಳನ್ನು ಪ್ರೇಕ್ಷಕರ ಮುಂದೆ ಇಡುತ್ತವೆ. ನಾಳೆಗಳ ಕನಸುಗಳನ್ನು ಕಟ್ಟಿಕೊಳ್ಳುತ್ತಲೇ ಆ ಕನಸುಗಳನ್ನು ಕೊಂದುಕೊಳ್ಳುತ್ತವೆ. ಇಂಥದ್ದೊಂದು ನಾಟಕವನ್ನು ತುಮಕೂರಿನಲ್ಲಿ ಪ್ರದರ್ಶಿಸಲಾಯಿತು. ಲೋಕಚರಿತ ರಂಗ ಕೇಂದ್ರ ಎಂಬ ಚಿಕ್ಕದಾಳವಟ್ಟದ ಗ್ರಾಮೀಣ ಸಂಘಟನೆ ಬೆಕೆಟ್ ನ ವೇಟಿಂಗ್ ಫಾರ್ ಗಾಡೋ ನಾಟಕ ಪ್ರದರ್ಶನಕ್ಕೆ ವೇದಿಕೆ ಒದಗಿಸಿತ್ತು. ರಂಗ ತಂಡದ ಕಲಾವಿದರು ಪುಟ್ಟ ಹೆಜ್ಜೆಗಳನ್ನು ಇಡುತ್ತಿದ್ದರೂ ಅವು ದೃಢವಾಗಿದ್ದವು. ಅವರು ಪ್ರತಿಯೊಂದು ಸನ್ನಿವೇಶದಲ್ಲೂ ಸಭಿಕರ ಮನಸ್ಸನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾದರು.

ಬರಡುಭೂಮಿ, ಬೆಟ್ಟಗುಡ್ಡಗಳು, ಎಲೆಗಳೇ ಇಲ್ಲದ ಮರಗಳು. ಅಂಥ ಪ್ರದೇಶದಲ್ಲಿ ಇಬ್ಬರು ದಿಕ್ಕುದೆಸ (ಬೇವರ್ಸಿಗಳು) ಇಲ್ಲದ ಅಬ್ಬೇಪಾರಿಗಳು. ಮೊದಲಿಗೆ ಗುಡ್ಡವೊಂದರ ಮೇಲೆ ಕುಳಿತು ತನ್ನ ಎಡಗಾಲಿನ ಬೂಟು ಬಿಚ್ಚುವ ದೃಶ್ಯದಿಂದ ಆರಂಭವಾಗುವ ನಾಟಕ ಮುಂದೆ ತನ್ನ ಕಥಾಹಂದರವನ್ನು ಬಿಚ್ಚಿಕೊಳ್ಳುತ್ತಾ ಹೋಗುತ್ತದೆ. ಮೊದಲು ಗುಡ್ಡದ ಮೇಲೆ ಕುಳಿತ ವ್ಯಕ್ತಿಯ ಜೊತೆಗೆ ಮತ್ತೊಬ್ಬ ವ್ಯಕ್ತಿ ಸೇರಿಕೊಂಡು ಅಮೂರ್ತ ರೂಪದ ಗಾಡೋನಿಗಾಗಿ ಕಾಯುವುದು. ಕಾಲದೂಡಲು, ಬೇಸರ ನಿವಾರಣೆಗೆ ಮತ್ತು ಮೌನ ವಾತಾವರಣ ಮುರಿದು ಹಾಕಲು ಇಬ್ಬರು ಬೇವರ್ಸಿಗಳು ಮಾತಿಗೆ ಆರಂಭಿಸುತ್ತಾರೆ. ಅವರ ಮಾತುಗಳು ಎಲ್ಲೆಲ್ಲೋ ಹೋಗುತ್ತವೆ. ಇಬ್ಬರು ಅಬ್ಬೇಪಾರಿಗಳ ನಡುವಿನ ಸಂಭಾಷಣೆ ಅಸಂಬದ್ದವಾಗಿರುತ್ತದೆ. ತಾಳತಪ್ಪುತ್ತದೆ. ಒಂದಕ್ಕೊಂದು ಸಂಬಂಧವೇ ಇಲ್ಲದಂತೆ ಆಗುತ್ತದೆ. ಇದು ಎರಡು ಮಹಾಯುದ್ದದ ಸಮಯದಲ್ಲಾದ ಸನ್ನಿವೇಶಕ್ಕೆ ಹಿಡಿದ ಕನ್ನಡಿಯಾಗಿದೆ.

ಈ ನಾಟಕ ಸಂಪೂರ್ಣವಾಗಿ ಸಂಗತವೂ ಅಲ್ಲದ, ಅಸಂಗತವೂ ಅಲ್ಲದ ಸ್ಥಿತಿಯಲ್ಲಿ ಮುಂದುವರಿಯುತ್ತದೆ. ಶಬರಿ ರಾಮನಿಗಾಗಿ ವರ್ಷಾನುಗಟ್ಟಲೆ ಕಾಯುವಂತೆ (ಕೊನೆಗೂ ಶಬರಿಗೆ ರಾಮನ ದರ್ಶನವಾಗುತ್ತದೆ.) ಈ ಇಬ್ಬರು ಬೇವರ್ಸಿಗಳು ತಾವೂ ನೋಡಿಯೇ ಇಲ್ಲದ, ಪರಿಚಯವೇ ಇಲ್ಲದ ಗಾಡೋನಿಗಾಗಿ ಕಾಯುತ್ತಾ ಎರಡು ಬಾರಿ ಆತ್ಮಹತ್ಯೆಗೆ ಯತ್ನಿಸುತ್ತಾರೆ. ಈ ಪಾತ್ರಗಳು ಪ್ರತಿಯೊಬ್ಬ ವ್ಯಕ್ತಿಯ ಮನದಾಳದ ಗೊಂದಲಗಳಿಗೆ ಮುಖಾಮುಖಿಯಾಗುತ್ತಾರೆ. ಇಂದಿನ ಸಮಾಜದಲ್ಲೂ ವ್ಯಕ್ತಿ ಯಾರನ್ನೋ ಕಾಯುತ್ತಾ, ನಿರೀಕ್ಷೆ ಮಾಡುತ್ತ, ಅವರು ಸಿಗದೇ, ಬೇಸರ, ನೋವು ತಡೆಯಲಾರದೆ ಆತ್ಮಹತ್ಯೆಗೆ ಯತ್ನಿಸುವ ಸನ್ನಿವೇಶಕ್ಕೂ ಈ ಪಾತ್ರಗಳು ಮುಖಾಮುಖಿಯಾಗುತ್ತವೆ. ಯುದ್ದದಂತಹ ಸನ್ನಿವೇಶದಲ್ಲಿ ಮನುಷ್ಯನ ಮನಸ್ಥಿತಿ ಹೇಗಿರುತ್ತದೆ ಎಂಬುದನ್ನು ಈ ಪಾತ್ರಗಳು ಕಟ್ಟಿಕೊಡುತ್ತವೆ.

ಮನುಷ್ಯನ ಮನಸ್ಸು ಕ್ಷಣಕ್ಷಣಕ್ಕೂ ಬದಲಾಗುತ್ತಿರುತ್ತದೆ. ಒಮ್ಮೆ ಆಡಿದ ಮಾತು ಮತ್ತೊಮ್ಮೆ ಆಡುವುದಿಲ್ಲ. ಹಾಗೆಯೇ ಈ ಬೇವರ್ಸಿ ಪಾತ್ರಗಳು ನಮ್ಮ ಕಣ್ಣ ಮುಂದೆ ನಿಲ್ಲುತ್ತವೆ. ನಮ್ಮ ನಿರೀಕ್ಷೆಗಳು ಸುಳ್ಳಾಗಬಹುದು. ನೋವು, ಸಂಕಟ, ದುಃಖ ಕ್ಷಣ ಕಾಲ ಮರೆಯಾಗಬಹುದು. ಆದರೆ ದುತ್ತೆಂದು ಒಕ್ಕರಿಸುತ್ತವೆ ಎಂಬುದನ್ನು ಈ ಪಾತ್ರಗಳು ಸಾಕ್ಷೀಕರಿಸುತ್ತವೆ. ಒಮ್ಮೆ ಒಣಗಿದ ಮರವೂ ಚಿಗುರಬಹುದು. ಹಾಗೆಯೇ ಮನುಷ್ಯನಲ್ಲೂ ಬದುಕುವ ಉತ್ಸಾಹ ಮೂಡಬಹುದು. ಅದು ಹೆಚ್ಚು ದಿನ ಇರುವುದಿಲ್ಲ. ಕೊನೆಗೆ ಆ ಎರಡು ಪಾತ್ರಗಳು ಹೀಗೆ ಸಾರುತ್ತವೆ. ನಾವು ನಾಳೆ ಇಲ್ಲಿಗೆ ಮರಳಿ ಬಂದರೆ ಬದುಕಿರುತ್ತೇವೆ. ಬಾರದೆ ಇದ್ದರೆ ನಾವು ಸತ್ತಂತೆ ಎಂಬಲ್ಲಿಗೆ ನಾಟಕ ಅಂತ್ಯವಾಗುತ್ತದೆ. ಇಡೀ ನಾಟಕದ ಉದ್ದಕ್ಕೂ ಎರಡು ಬೇವರ್ಸಿ ಪಾತ್ರಗಳೇ ಪ್ರಧಾನವಾಗಿವೆ.

ಈ ನಡುವೆ ಆ ಬರಡು ಭೂಮಿಯಲ್ಲಿದ್ದ ಇಬ್ಬರು ಬೇವರ್ಸಿ ಪಾತ್ರಗಳಗಳ ಜೊತೆಗೆ ಎಷ್ಟೋ ದಿನ ಕಳೆದ ಮೇಲೆ ಅಲ್ಲಿಗೆ ಪೋಜೋ ಅಲ್ಲಿಗೆ ಲಕ್ಕಿಯೊಂದಿಗೆ ಬರುತ್ತಾನೆ. ಆತ ವಿರಾಮ ಪಡೆಯಲು ಆ ಬೇವರ್ಸಿಗಳೊಂದಿಗೆ ಕೆಲಕಾಲ ಮಾತಿಗೆ ಇಳಿಯುತ್ತಾನೆ. ಅವರ ನಡುವೆ ನಡೆಯುವ ಸಂಭಾಷಣೆ ನಗೆಯುಕ್ಕಿಸುತ್ತದೆ. ಪೋಜೋ ಬಿಸುಟ ಮೋಟು ಬೀಡಿ, ಮೂಳೆ ಚಿಕನ್ ಗಳನ್ನು ಆ ಇಬ್ಬರು ಬೇವರ್ಸಿ ಪಾತ್ರಗಳು ತೆಗೆದುಕೊಂಡು ಮೋಜು ಮಾಡುತ್ತವೆ. ಲಕ್ಕಿಯದು ಪೋಜೇನ ಸಾಮಾನುಗಳನ್ನು ಹೊರುವ ಕೆಲಸ. ಹೇಳಿದ್ದು ಮಾಡುವ ಚಾಕರಿ. ಯುದ್ದದಂತಹ ಪರಿಸ್ಥಿತಿಯಲ್ಲಿ ಶ್ರೀಮಂತರು ಬಡವರನ್ನು ಗುಲಾಮರನ್ನಾಗಿ ಇಟ್ಟುಕೊಳ್ಳುತ್ತಿದ್ದರು ಎಂಬುದನ್ನು ಈ ಪಾತ್ರ ಹೇಳುತ್ತದೆ.  ಇವರ ನುಡವೆ ನಡೆಯುವ ಸಂಭಾಷಣೆಯಲ್ಲಿ ಕಪ್ಪು, ಬಿಳುಪು, ಹಸಿರು ಮೊದಲಾದ ಬಣ್ಣಗಳ ಕುರಿತು ವ್ಯಕ್ತವಾಗುವ ಮಾತುಗಳು ಅಸಂಬದ್ದತೆ ಪ್ರೇಕ್ಷಕರಲ್ಲಿ ನಗೆಗಡಲಲ್ಲಿ ತೇಲುವಂತೆ ಮಾಡುತ್ತವೆ.

ಹುಡುಗನ ಪಾತ್ರ ಎರಡೇ ಬಾರಿ ರಂಗದ ಮೇಲೆ ಕಂಡು ಬಂದರೂ ಗಮನ ಸೆಳೆಯುತ್ತದೆ. ಬೇವರ್ಸಿಗಳ ಬಳಿ ಬರುವ ಆ ಹುಡುಗ ನಾನು ಗಾಡೋನನ್ನು ನೋಡಿದ್ದೇನೆ. ಅವನ ಬಳಿಯಿಂದಲೇ ಬಂದಿದ್ದೇನೆ ಎನ್ನುತ್ತಾನೆ. ಅದಕ್ಕೆ ಬೇವರ್ಸಿಗಳು ನಾವು ಗಾಡೋಗಾಗಿ ಕಾಯುತ್ತಿದ್ದೇವೆ ಎಂಬುದನ್ನು ತಿಳಿಸುವಂತೆ ಆ ಹುಡುಗನಿಗೆ ಹೇಳುತ್ತಾರೆ. ಆದರೆ ಆ ಹುಡುಗ ಎರಡನೇ ಬಾರಿ ಬಂದಾಗ ನಾನು ನೆನ್ನೆ ಬಂದ ಹುಡುಗನಲ್ಲ. ನಾನು ಗಾಡೋ ನೋಡಿಲ್ಲ. ನೀವು ಯಾರು? ನಿಮ್ಮನ್ನೂ ನಾನು ಭೇಟಿ ಮಾಡಿಲ್ಲ ಎಂದು ಪ್ರೇಕ್ಷಕರನ್ನು ಗೊಂದಲದಲ್ಲಿ ಕೆಡವುತ್ತಾನೆ. ಮತ್ತೆ ಆ ಬೇವರ್ಸಿಗಳು ನಿನ್ನೆ ನೀನು ಬಂದಿದ್ದೆ ಎಂಬುದನ್ನು ಮನವರಿಕೆ ಮಾಡಿಕೊಟ್ಟರೂ ಒಪ್ಪಿಕೊಳ್ಳುವುದಿಲ್ಲ ಆ ಹುಡುಗ. ಇಂದು ಕೂಡ ಅಂಥವೇ ಸಂಗತಿಗಳು ನಮ್ಮ ನಡುವೆ ನಡೆಯುತ್ತಿರುವುದನ್ನು ನೋಡುತ್ತೇವೆ.

ಜಗತ್ತಿನಲ್ಲಿ ಜನಾಂಗೀಯ ದಬ್ಬಾಳಿಕೆ ನಡೆಯುತ್ತಿರುವುದಕ್ಕೆ, ಸಮಾಜದಲ್ಲಿ ತಾರತಮ್ಯದ ಮನೋಭಾವ ಇಂದಿಗೂ ಇರುವ ಬಗ್ಗೆ ಮಾರ್ಮಿಕವಾಗಿ ಧ್ವನಿಸುತ್ತದೆ. ಆಧುನಿಕ ಜಗತ್ತಿನ ನಾಗಾಲೋಟದಲ್ಲಿ ಮನುಷ್ಯ ಕ್ಷಣ ನಿಂತು ಆಲೋಚಿಸುವುದಕ್ಕೂ ಸಮಯವಿಲ್ಲದ ಪರಿಯನ್ನು ಹೇಳುತ್ತದೆ. ಗೊಂದಲದಲ್ಲಿರುವ ಮನುಷ್ಯನ ಮಾನಸಲೋಕದ ಅಲ್ಲೋಲಕಲ್ಲೋಲಗಳಿಗೆ ಪಾತ್ರಗಳು ಜೀವ ತುಂಬುತ್ತವೆ. ವೇಟಿಂಗ್ ಪಾರ್ ಗಾಡೋ ಇಂದಿಗೂ ಪ್ರಸ್ತುತವಾಗಿದೆ. ಮನುಷ್ಯನಲ್ಲಾಗುವ ಬದಲಾವಣೆಗಳನ್ನು ಹೇಳುತ್ತದೆ.

ರವಿಶಂಕರ್ ಆರ್ ನೀನಾಸಂ ನಿರ್ದೇಶನದಲ್ಲಿ ನಾಟಕ ಚನ್ನಾಗಿ ಮೂಡಿಬಂತು. ಚನ್ನಕೇಶವ, ಜಿತೇಂದ್ರ, ಜಿ.ಎಸ್. ಮೋಹನ್, ಶ್ರೀಕಾಂತ್, ಸುಮಂತ್ ಜಿ.ಜಿ. ವೇಟಿಮಗ್ ಫಾರ್ ಗಾಡೋ ನಾಟಕದ ಪಾತ್ರಗಳಿಗೆ ಜೀವ ತುಂಬಿದರು. ಲೋಕಚರಿತ ರಂಗ ಕೇಂದ್ರದ ಮುಖ್ಯಸ್ಥ ಅನಿಲ್ ಕುಮಾರ್ ಚಿಕ್ಕದಾಳವಟ್ಟ ಉಪಸ್ಥಿತರಿದ್ದರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...