Homeಮುಖಪುಟ’ವೇಟಿಂಗ್ ಪಾರ್ ಗಾಡೋ’ ; ನಮ್ಮನ್ನು ಉದ್ದೇಶಿಸಿ ಮಾತನಾಡುವ ನಾಟಕ...

’ವೇಟಿಂಗ್ ಪಾರ್ ಗಾಡೋ’ ; ನಮ್ಮನ್ನು ಉದ್ದೇಶಿಸಿ ಮಾತನಾಡುವ ನಾಟಕ…

ಎರಡು ಮಹಾಯುದ್ದಗಳನ್ನು ಕಣ್ಣಾರೆ ಕಂಡ ಬೆಕೆಟ್, ಯುದ್ದದ ಸಂರ್ಭದಲ್ಲಿ ನಡೆದ ಸಾವು ನೋವುಗಳು ಅವರ ಮನಕಲಿಕಿದವು. ಯುದ್ದದ ಕ್ರೌರ್ಯ, ಮಾನಸಿಕ ವೇದನೆ, ತವಕ-ತಲ್ಲಣಗಳ ಕುರಿತು ತನ್ನ ಕೃತಿಗಳಲ್ಲಿ ಕಟ್ಟಿಕೊಟ್ಟ ಅವರು ಆಹೊತ್ತಿನ ಭೀಕರತೆ, ಭೀಭತ್ಸತೆಗೆ ಕನ್ನಡಿ ಹಿಡಿದು ಓದುಗರನ್ನು ಮನಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.

- Advertisement -
- Advertisement -

ಸ್ಯಾಮುಯಲ್ ಬೆಕೆಟ್ ಐರಿಷ್ ಕವಿ. ಅವನೊಬ್ಬ ಶ್ರೇಷ್ಟ ಕಾದಂಬರಿಕಾರ. ಕಥೆಗಾರ ಹಾಗೆಯೇ ನಾಟಕಕಾರ. ಅಷ್ಟೇ ಅಲ್ಲ ಭಾಷಾಂತರಕಾರ ಕೂಡ. ಫ್ರೆಂಚ್ ಮತ್ತು ಐರೀಷ್ ಎರಡು ಭಾಷೆಗಳಲ್ಲೂ ಹಲವು ಶ್ರೇಷ್ಟಮಟ್ಟದ ಕೃತಿಗಳನ್ನು ರಚಿಸಿರುವ ಬೆಕೆಟ್ 1906 ರಲ್ಲಿ ಜನಿಸಿ 1989ರಲ್ಲಿ ತೀರಿಕೊಂಡ. ಜೀವಿತದ ಅವಧಿಯಲ್ಲಿ ಮರ್ಫಿ, ವಾಲ್, ಮಲೋನೆ ಡೈಸ್, ವೈಟಿಂಗ್ ಫಾರ್ ಗಾಡೋ, ಎಂಡ್ ಗೇಮ್ ಹೀಗೆ ಹತ್ತಾರು ಪ್ರಮುಖ ಕೃತಿಗಳನ್ನು ರಚಿಸಿದ್ದು ಈತನಿಗೆ 1969ರಲ್ಲಿ ನೊಬೆಲ್ ಪ್ರಶಸ್ತಿ ಲಭಿಸಿದೆ.

ಎರಡು ಮಹಾಯುದ್ದಗಳನ್ನು ಕಣ್ಣಾರೆ ಕಂಡ ಬೆಕೆಟ್, ಯುದ್ದದ ಸಂರ್ಭದಲ್ಲಿ ನಡೆದ ಸಾವು ನೋವುಗಳು ಅವರ ಮನಕಲಿಕಿದವು. ಯುದ್ದದ ಕ್ರೌರ್ಯ, ಮಾನಸಿಕ ವೇದನೆ, ತವಕ-ತಲ್ಲಣಗಳ ಕುರಿತು ತನ್ನ ಕೃತಿಗಳಲ್ಲಿ ಕಟ್ಟಿಕೊಟ್ಟ ಅವರು ಆಹೊತ್ತಿನ ಭೀಕರತೆ, ಭೀಭತ್ಸತೆಗೆ ಕನ್ನಡಿ ಹಿಡಿದು ಓದುಗರನ್ನು ಮನಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಬೆಕೆಟ್ ನ ‘ವೇಟಿಂಗ್ ಫಾರ್ ಗಾಡೋ ನಾಟಕ ‘ಸುಖದುಃಖಾಂತ್ಯ’ ನಾಟಕ. ಕೇವಲ ಐದೇ ಐದು ಪಾತ್ರಗಳು ಮನುಷ್ಯನ ದುಖಃ, ಸುಖ, ನೋವಿಗೆ ತಾವಾಗಿಯೇ ತೆರೆದುಕೊಳ್ಳುತ್ತವೆ. ತಮ್ಮೊಳಗಿನ ಗೊಂದಲಗಳನ್ನು ಪ್ರೇಕ್ಷಕರ ಮುಂದೆ ಇಡುತ್ತವೆ. ನಾಳೆಗಳ ಕನಸುಗಳನ್ನು ಕಟ್ಟಿಕೊಳ್ಳುತ್ತಲೇ ಆ ಕನಸುಗಳನ್ನು ಕೊಂದುಕೊಳ್ಳುತ್ತವೆ. ಇಂಥದ್ದೊಂದು ನಾಟಕವನ್ನು ತುಮಕೂರಿನಲ್ಲಿ ಪ್ರದರ್ಶಿಸಲಾಯಿತು. ಲೋಕಚರಿತ ರಂಗ ಕೇಂದ್ರ ಎಂಬ ಚಿಕ್ಕದಾಳವಟ್ಟದ ಗ್ರಾಮೀಣ ಸಂಘಟನೆ ಬೆಕೆಟ್ ನ ವೇಟಿಂಗ್ ಫಾರ್ ಗಾಡೋ ನಾಟಕ ಪ್ರದರ್ಶನಕ್ಕೆ ವೇದಿಕೆ ಒದಗಿಸಿತ್ತು. ರಂಗ ತಂಡದ ಕಲಾವಿದರು ಪುಟ್ಟ ಹೆಜ್ಜೆಗಳನ್ನು ಇಡುತ್ತಿದ್ದರೂ ಅವು ದೃಢವಾಗಿದ್ದವು. ಅವರು ಪ್ರತಿಯೊಂದು ಸನ್ನಿವೇಶದಲ್ಲೂ ಸಭಿಕರ ಮನಸ್ಸನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾದರು.

ಬರಡುಭೂಮಿ, ಬೆಟ್ಟಗುಡ್ಡಗಳು, ಎಲೆಗಳೇ ಇಲ್ಲದ ಮರಗಳು. ಅಂಥ ಪ್ರದೇಶದಲ್ಲಿ ಇಬ್ಬರು ದಿಕ್ಕುದೆಸ (ಬೇವರ್ಸಿಗಳು) ಇಲ್ಲದ ಅಬ್ಬೇಪಾರಿಗಳು. ಮೊದಲಿಗೆ ಗುಡ್ಡವೊಂದರ ಮೇಲೆ ಕುಳಿತು ತನ್ನ ಎಡಗಾಲಿನ ಬೂಟು ಬಿಚ್ಚುವ ದೃಶ್ಯದಿಂದ ಆರಂಭವಾಗುವ ನಾಟಕ ಮುಂದೆ ತನ್ನ ಕಥಾಹಂದರವನ್ನು ಬಿಚ್ಚಿಕೊಳ್ಳುತ್ತಾ ಹೋಗುತ್ತದೆ. ಮೊದಲು ಗುಡ್ಡದ ಮೇಲೆ ಕುಳಿತ ವ್ಯಕ್ತಿಯ ಜೊತೆಗೆ ಮತ್ತೊಬ್ಬ ವ್ಯಕ್ತಿ ಸೇರಿಕೊಂಡು ಅಮೂರ್ತ ರೂಪದ ಗಾಡೋನಿಗಾಗಿ ಕಾಯುವುದು. ಕಾಲದೂಡಲು, ಬೇಸರ ನಿವಾರಣೆಗೆ ಮತ್ತು ಮೌನ ವಾತಾವರಣ ಮುರಿದು ಹಾಕಲು ಇಬ್ಬರು ಬೇವರ್ಸಿಗಳು ಮಾತಿಗೆ ಆರಂಭಿಸುತ್ತಾರೆ. ಅವರ ಮಾತುಗಳು ಎಲ್ಲೆಲ್ಲೋ ಹೋಗುತ್ತವೆ. ಇಬ್ಬರು ಅಬ್ಬೇಪಾರಿಗಳ ನಡುವಿನ ಸಂಭಾಷಣೆ ಅಸಂಬದ್ದವಾಗಿರುತ್ತದೆ. ತಾಳತಪ್ಪುತ್ತದೆ. ಒಂದಕ್ಕೊಂದು ಸಂಬಂಧವೇ ಇಲ್ಲದಂತೆ ಆಗುತ್ತದೆ. ಇದು ಎರಡು ಮಹಾಯುದ್ದದ ಸಮಯದಲ್ಲಾದ ಸನ್ನಿವೇಶಕ್ಕೆ ಹಿಡಿದ ಕನ್ನಡಿಯಾಗಿದೆ.

ಈ ನಾಟಕ ಸಂಪೂರ್ಣವಾಗಿ ಸಂಗತವೂ ಅಲ್ಲದ, ಅಸಂಗತವೂ ಅಲ್ಲದ ಸ್ಥಿತಿಯಲ್ಲಿ ಮುಂದುವರಿಯುತ್ತದೆ. ಶಬರಿ ರಾಮನಿಗಾಗಿ ವರ್ಷಾನುಗಟ್ಟಲೆ ಕಾಯುವಂತೆ (ಕೊನೆಗೂ ಶಬರಿಗೆ ರಾಮನ ದರ್ಶನವಾಗುತ್ತದೆ.) ಈ ಇಬ್ಬರು ಬೇವರ್ಸಿಗಳು ತಾವೂ ನೋಡಿಯೇ ಇಲ್ಲದ, ಪರಿಚಯವೇ ಇಲ್ಲದ ಗಾಡೋನಿಗಾಗಿ ಕಾಯುತ್ತಾ ಎರಡು ಬಾರಿ ಆತ್ಮಹತ್ಯೆಗೆ ಯತ್ನಿಸುತ್ತಾರೆ. ಈ ಪಾತ್ರಗಳು ಪ್ರತಿಯೊಬ್ಬ ವ್ಯಕ್ತಿಯ ಮನದಾಳದ ಗೊಂದಲಗಳಿಗೆ ಮುಖಾಮುಖಿಯಾಗುತ್ತಾರೆ. ಇಂದಿನ ಸಮಾಜದಲ್ಲೂ ವ್ಯಕ್ತಿ ಯಾರನ್ನೋ ಕಾಯುತ್ತಾ, ನಿರೀಕ್ಷೆ ಮಾಡುತ್ತ, ಅವರು ಸಿಗದೇ, ಬೇಸರ, ನೋವು ತಡೆಯಲಾರದೆ ಆತ್ಮಹತ್ಯೆಗೆ ಯತ್ನಿಸುವ ಸನ್ನಿವೇಶಕ್ಕೂ ಈ ಪಾತ್ರಗಳು ಮುಖಾಮುಖಿಯಾಗುತ್ತವೆ. ಯುದ್ದದಂತಹ ಸನ್ನಿವೇಶದಲ್ಲಿ ಮನುಷ್ಯನ ಮನಸ್ಥಿತಿ ಹೇಗಿರುತ್ತದೆ ಎಂಬುದನ್ನು ಈ ಪಾತ್ರಗಳು ಕಟ್ಟಿಕೊಡುತ್ತವೆ.

ಮನುಷ್ಯನ ಮನಸ್ಸು ಕ್ಷಣಕ್ಷಣಕ್ಕೂ ಬದಲಾಗುತ್ತಿರುತ್ತದೆ. ಒಮ್ಮೆ ಆಡಿದ ಮಾತು ಮತ್ತೊಮ್ಮೆ ಆಡುವುದಿಲ್ಲ. ಹಾಗೆಯೇ ಈ ಬೇವರ್ಸಿ ಪಾತ್ರಗಳು ನಮ್ಮ ಕಣ್ಣ ಮುಂದೆ ನಿಲ್ಲುತ್ತವೆ. ನಮ್ಮ ನಿರೀಕ್ಷೆಗಳು ಸುಳ್ಳಾಗಬಹುದು. ನೋವು, ಸಂಕಟ, ದುಃಖ ಕ್ಷಣ ಕಾಲ ಮರೆಯಾಗಬಹುದು. ಆದರೆ ದುತ್ತೆಂದು ಒಕ್ಕರಿಸುತ್ತವೆ ಎಂಬುದನ್ನು ಈ ಪಾತ್ರಗಳು ಸಾಕ್ಷೀಕರಿಸುತ್ತವೆ. ಒಮ್ಮೆ ಒಣಗಿದ ಮರವೂ ಚಿಗುರಬಹುದು. ಹಾಗೆಯೇ ಮನುಷ್ಯನಲ್ಲೂ ಬದುಕುವ ಉತ್ಸಾಹ ಮೂಡಬಹುದು. ಅದು ಹೆಚ್ಚು ದಿನ ಇರುವುದಿಲ್ಲ. ಕೊನೆಗೆ ಆ ಎರಡು ಪಾತ್ರಗಳು ಹೀಗೆ ಸಾರುತ್ತವೆ. ನಾವು ನಾಳೆ ಇಲ್ಲಿಗೆ ಮರಳಿ ಬಂದರೆ ಬದುಕಿರುತ್ತೇವೆ. ಬಾರದೆ ಇದ್ದರೆ ನಾವು ಸತ್ತಂತೆ ಎಂಬಲ್ಲಿಗೆ ನಾಟಕ ಅಂತ್ಯವಾಗುತ್ತದೆ. ಇಡೀ ನಾಟಕದ ಉದ್ದಕ್ಕೂ ಎರಡು ಬೇವರ್ಸಿ ಪಾತ್ರಗಳೇ ಪ್ರಧಾನವಾಗಿವೆ.

ಈ ನಡುವೆ ಆ ಬರಡು ಭೂಮಿಯಲ್ಲಿದ್ದ ಇಬ್ಬರು ಬೇವರ್ಸಿ ಪಾತ್ರಗಳಗಳ ಜೊತೆಗೆ ಎಷ್ಟೋ ದಿನ ಕಳೆದ ಮೇಲೆ ಅಲ್ಲಿಗೆ ಪೋಜೋ ಅಲ್ಲಿಗೆ ಲಕ್ಕಿಯೊಂದಿಗೆ ಬರುತ್ತಾನೆ. ಆತ ವಿರಾಮ ಪಡೆಯಲು ಆ ಬೇವರ್ಸಿಗಳೊಂದಿಗೆ ಕೆಲಕಾಲ ಮಾತಿಗೆ ಇಳಿಯುತ್ತಾನೆ. ಅವರ ನಡುವೆ ನಡೆಯುವ ಸಂಭಾಷಣೆ ನಗೆಯುಕ್ಕಿಸುತ್ತದೆ. ಪೋಜೋ ಬಿಸುಟ ಮೋಟು ಬೀಡಿ, ಮೂಳೆ ಚಿಕನ್ ಗಳನ್ನು ಆ ಇಬ್ಬರು ಬೇವರ್ಸಿ ಪಾತ್ರಗಳು ತೆಗೆದುಕೊಂಡು ಮೋಜು ಮಾಡುತ್ತವೆ. ಲಕ್ಕಿಯದು ಪೋಜೇನ ಸಾಮಾನುಗಳನ್ನು ಹೊರುವ ಕೆಲಸ. ಹೇಳಿದ್ದು ಮಾಡುವ ಚಾಕರಿ. ಯುದ್ದದಂತಹ ಪರಿಸ್ಥಿತಿಯಲ್ಲಿ ಶ್ರೀಮಂತರು ಬಡವರನ್ನು ಗುಲಾಮರನ್ನಾಗಿ ಇಟ್ಟುಕೊಳ್ಳುತ್ತಿದ್ದರು ಎಂಬುದನ್ನು ಈ ಪಾತ್ರ ಹೇಳುತ್ತದೆ.  ಇವರ ನುಡವೆ ನಡೆಯುವ ಸಂಭಾಷಣೆಯಲ್ಲಿ ಕಪ್ಪು, ಬಿಳುಪು, ಹಸಿರು ಮೊದಲಾದ ಬಣ್ಣಗಳ ಕುರಿತು ವ್ಯಕ್ತವಾಗುವ ಮಾತುಗಳು ಅಸಂಬದ್ದತೆ ಪ್ರೇಕ್ಷಕರಲ್ಲಿ ನಗೆಗಡಲಲ್ಲಿ ತೇಲುವಂತೆ ಮಾಡುತ್ತವೆ.

ಹುಡುಗನ ಪಾತ್ರ ಎರಡೇ ಬಾರಿ ರಂಗದ ಮೇಲೆ ಕಂಡು ಬಂದರೂ ಗಮನ ಸೆಳೆಯುತ್ತದೆ. ಬೇವರ್ಸಿಗಳ ಬಳಿ ಬರುವ ಆ ಹುಡುಗ ನಾನು ಗಾಡೋನನ್ನು ನೋಡಿದ್ದೇನೆ. ಅವನ ಬಳಿಯಿಂದಲೇ ಬಂದಿದ್ದೇನೆ ಎನ್ನುತ್ತಾನೆ. ಅದಕ್ಕೆ ಬೇವರ್ಸಿಗಳು ನಾವು ಗಾಡೋಗಾಗಿ ಕಾಯುತ್ತಿದ್ದೇವೆ ಎಂಬುದನ್ನು ತಿಳಿಸುವಂತೆ ಆ ಹುಡುಗನಿಗೆ ಹೇಳುತ್ತಾರೆ. ಆದರೆ ಆ ಹುಡುಗ ಎರಡನೇ ಬಾರಿ ಬಂದಾಗ ನಾನು ನೆನ್ನೆ ಬಂದ ಹುಡುಗನಲ್ಲ. ನಾನು ಗಾಡೋ ನೋಡಿಲ್ಲ. ನೀವು ಯಾರು? ನಿಮ್ಮನ್ನೂ ನಾನು ಭೇಟಿ ಮಾಡಿಲ್ಲ ಎಂದು ಪ್ರೇಕ್ಷಕರನ್ನು ಗೊಂದಲದಲ್ಲಿ ಕೆಡವುತ್ತಾನೆ. ಮತ್ತೆ ಆ ಬೇವರ್ಸಿಗಳು ನಿನ್ನೆ ನೀನು ಬಂದಿದ್ದೆ ಎಂಬುದನ್ನು ಮನವರಿಕೆ ಮಾಡಿಕೊಟ್ಟರೂ ಒಪ್ಪಿಕೊಳ್ಳುವುದಿಲ್ಲ ಆ ಹುಡುಗ. ಇಂದು ಕೂಡ ಅಂಥವೇ ಸಂಗತಿಗಳು ನಮ್ಮ ನಡುವೆ ನಡೆಯುತ್ತಿರುವುದನ್ನು ನೋಡುತ್ತೇವೆ.

ಜಗತ್ತಿನಲ್ಲಿ ಜನಾಂಗೀಯ ದಬ್ಬಾಳಿಕೆ ನಡೆಯುತ್ತಿರುವುದಕ್ಕೆ, ಸಮಾಜದಲ್ಲಿ ತಾರತಮ್ಯದ ಮನೋಭಾವ ಇಂದಿಗೂ ಇರುವ ಬಗ್ಗೆ ಮಾರ್ಮಿಕವಾಗಿ ಧ್ವನಿಸುತ್ತದೆ. ಆಧುನಿಕ ಜಗತ್ತಿನ ನಾಗಾಲೋಟದಲ್ಲಿ ಮನುಷ್ಯ ಕ್ಷಣ ನಿಂತು ಆಲೋಚಿಸುವುದಕ್ಕೂ ಸಮಯವಿಲ್ಲದ ಪರಿಯನ್ನು ಹೇಳುತ್ತದೆ. ಗೊಂದಲದಲ್ಲಿರುವ ಮನುಷ್ಯನ ಮಾನಸಲೋಕದ ಅಲ್ಲೋಲಕಲ್ಲೋಲಗಳಿಗೆ ಪಾತ್ರಗಳು ಜೀವ ತುಂಬುತ್ತವೆ. ವೇಟಿಂಗ್ ಪಾರ್ ಗಾಡೋ ಇಂದಿಗೂ ಪ್ರಸ್ತುತವಾಗಿದೆ. ಮನುಷ್ಯನಲ್ಲಾಗುವ ಬದಲಾವಣೆಗಳನ್ನು ಹೇಳುತ್ತದೆ.

ರವಿಶಂಕರ್ ಆರ್ ನೀನಾಸಂ ನಿರ್ದೇಶನದಲ್ಲಿ ನಾಟಕ ಚನ್ನಾಗಿ ಮೂಡಿಬಂತು. ಚನ್ನಕೇಶವ, ಜಿತೇಂದ್ರ, ಜಿ.ಎಸ್. ಮೋಹನ್, ಶ್ರೀಕಾಂತ್, ಸುಮಂತ್ ಜಿ.ಜಿ. ವೇಟಿಮಗ್ ಫಾರ್ ಗಾಡೋ ನಾಟಕದ ಪಾತ್ರಗಳಿಗೆ ಜೀವ ತುಂಬಿದರು. ಲೋಕಚರಿತ ರಂಗ ಕೇಂದ್ರದ ಮುಖ್ಯಸ್ಥ ಅನಿಲ್ ಕುಮಾರ್ ಚಿಕ್ಕದಾಳವಟ್ಟ ಉಪಸ್ಥಿತರಿದ್ದರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಅಸ್ಸಾಂ ಪ್ರವಾಹದ ಭೀಕರತೆ: 78 ಬಲಿ, 3 ಲಕ್ಷ ಜನರ ಬದುಕು ಸಂಕಷ್ಟಕ್ಕೆ: ವ್ಯವಸ್ಥೆಯ ವೈಫಲ್ಯಕ್ಕೆ ಬೆಲೆ ತೆತ್ತುತ್ತಿರುವ ನಾಗರಿಕರು

ಈಶಾನ್ಯ ಭಾರತದ ಗೇಟ್‌ವೇ ಎಂದೇ ಕರೆಯಲ್ಪಡುವ ಅಸ್ಸಾಂನಲ್ಲಿ ಪ್ರವಾಹದ ಅಟ್ಟಹಾಸ ಮುಂದುವರಿದಿದ್ದು, ಸಾವಿನ ಸಂಖ್ಯೆ 78ಕ್ಕೆ ಏರಿಕೆಯಾಗಿದೆ. ಇತ್ತೀಚಿನ ಅಧಿಕೃತ ವರದಿಗಳ ಪ್ರಕಾರ, ಶಿವಸಾಗರ್ ಜಿಲ್ಲೆಯಲ್ಲಿ ಇಬ್ಬರು ಹಾಗೂ ಗೋಲಾಘಾಟ್‌ನಲ್ಲಿ ಒಬ್ಬರು ನೀರಿನಲ್ಲಿ...

ನೀಟ್ ಪ್ರತಿಭಟನೆಯಲ್ಲಿ ಪೆಲೆಟ್ ಗನ್ ಬಳಕೆ ಆರೋಪ; RAF ಮದ್ದುಗುಂಡುಗಳ ದಾಖಲೆ ಕೇಳಿದ ಸುಪ್ರೀಂ ಕೋರ್ಟ್

ನೀಟ್-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆಯ ಸಂದರ್ಭದಲ್ಲಿ ಜಂತರ್ ಮಂತರ್‌ನಲ್ಲಿ ನಿಯೋಜಿಸಲಾಗಿದ್ದ ಕ್ಷಿಪ್ರ ಕಾರ್ಯ ಪಡೆ (RAF) ಯ ಮದ್ದುಗುಂಡುಗಳ ದಾಖಲೆಯನ್ನು ಸಂರಕ್ಷಿಸುವಂತೆ ಸುಪ್ರೀಂ ಕೋರ್ಟ್ ಗುರುವಾರ (ಜುಲೈ...

ಕ್ರಿಸ್ತನಿಗಿಂತ ಮೊದಲೇ ಇಲ್ಲಿದ್ದೇವೆ..ನಮಗೆ ಯಾವುದೇ ದಾಖಲೆಗಳು ಬೇಡ : ಎಸ್‌ಐಆರ್ ತಿರಸ್ಕರಿಸಿದ ಜಾರ್ಖಂಡ್‌ನ ಆದಿವಾಸಿಗಳು

ಜಾರ್ಖಂಡ್‌ನ ಖುಂತಿ ಜಿಲ್ಲೆಯ ದಟ್ಟ ಅರಣ್ಯ ಭಾಗದಲ್ಲಿ ವಾಸಿಸುವ ಮುಂಡಾ ಬುಡಕಟ್ಟು ಸಮುದಾಯದ ಒಂದು ವರ್ಗವು ಚುನಾವಣಾ ಆಯೋಗದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯನ್ನು ತೀವ್ರವಾಗಿ ವಿರೋಧಿಸಿದ್ದು, ಆಧುನಿಕ...

NICE ನಲ್ಲಿ ಯೋಜನೆಯಲ್ಲಿ ‘ನೈಸ್’ ಎನ್ನುವಂತಹದ್ದು ಏನೂ ಇಲ್ಲ: ರಾಜ್ಯದ ಅತಿದೊಡ್ಡ ಹಗರಣ ಎಂದ ಹೈಕೋರ್ಟ್

ಬೆಂಗಳೂರು-ಮೈಸೂರು ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ ಯೋಜನೆ (ಬಿಎಂಐಸಿಪಿ) ಅಥವಾ 'ನೈಸ್' ಯೋಜನೆ ಕರ್ನಾಟಕದ ಇತಿಹಾಸದಲ್ಲೇ ಅತ್ಯಂತ ದೊಡ್ಡ ಹಗರಣಗಳಲ್ಲಿ ಒಂದಾಗಿ ಕಾಣಿಸುತ್ತಿದೆ ಎಂದು ಕರ್ನಾಟಕ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ನಂದಿ ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್...

ಪ್ರತಿಭಟನೆಗೆ ಹೋಗುವ ಮಹಿಳೆಯರು ಗ್ಯಾಂಗ್‌ರೇಪ್‌ ಆನಂದಿಸುತ್ತಾರೆ ಎಂದಿದ್ದ ಟಿ.ಜಿ. ಮೋಹನ್‌ದಾಸ್‌ ವಿರುದ್ಧ ಎಫ್‌ಐಆರ್‌ ದಾಖಲು

ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವವರ ಮೇಲೆ, ನನ್ನ ಕೈಯಲ್ಲಿ ಅಧಿಕಾರವಿದ್ದರೆ ಗುಂಡು ಹಾರಿಸುತ್ತಿದ್ದೆ ಎಂದು ಇತ್ತೀಚಿನ ಯೂಟ್ಯೂಬ್ ವೀಡಿಯೊದಲ್ಲಿ ಹೇಳಿಕೆ ನೀಡಿದ್ದ ಹಿಂದುತ್ವವಾದಿ ಚಿಂತಕ ಟಿ.ಜಿ. ಮೋಹನ್‌ದಾಸ್ ವಿರುದ್ಧ ತಿರುವನಂತಪುರಂ ಸಿಟಿ...

ಫ್ರಾನ್ಸ್‌ನಲ್ಲಿ ಕೆಲಸದ ಸಮಯ ಟ್ರ್ಯಾಕಿಂಗ್ ಲೋಪ: ಇನ್ಫೋಸಿಸ್‌ಗೆ ₹1.9 ಕೋಟಿ ದಂಡ: ನಾರಾಯಣಮೂರ್ತಿಯವರ ‘70 ಗಂಟೆ ಶ್ರಮ’ದ ಮಾದರಿ ಟ್ರೋಲ್

ಭಾರತೀಯ ಐಟಿ ರಫ್ತು ಸೇವಾ ರಂಗದ ಬೃಹತ್ ಸಂಸ್ಥೆಯಾದ ಇನ್ಫೋಸಿಸ್‌ಗೆ ಫ್ರಾನ್ಸ್‌ನಲ್ಲಿ ಹಿನ್ನಡೆಯಾಗಿದೆ. ಉದ್ಯೋಗಿಗಳ ಕೆಲಸದ ಸಮಯವನ್ನು ದಾಖಲಿಸುವ ವ್ಯವಸ್ಥೆಯಲ್ಲಿನ ನ್ಯೂನತೆಗಳು ಹಾಗೂ ಸ್ಥಳೀಯ ಕಾರ್ಮಿಕ ನಿಯಮಾವಳಿಗಳ ಪಾಲನೆಯಲ್ಲಿ ಕಂಡುಬಂದ ಲೋಪಗಳ ಹಿನ್ನೆಲೆಯಲ್ಲಿ...

ವೋಟರ್ ಐಡಿ, ಬ್ಯಾಂಕ್ ಪಾಸ್‌ಬುಕ್, ಆಧಾರ್, ಜಮೀನಿನ ಹಕ್ಕು ಪತ್ರ ಇದ್ದ ಮಾತ್ರಕ್ಕೆ ಭಾರತೀಯ ಪ್ರಜೆಯಾಗಲ್ಲ: ಕಲ್ಕತ್ತಾ ಹೈಕೋರ್ಟ್

ಆಧಾರ್ ಕಾರ್ಡ್, ಪಾನ್ ಕಾರ್ಡ್, ಮತದಾರರ ಗುರುತಿನ ಚೀಟಿ, ಬ್ಯಾಂಕ್ ಪಾಸ್‌ಬುಕ್ ಮತ್ತು ಪಿತ್ರಾರ್ಜಿತ ಜಮೀನಿನ ದಾಖಲೆಗಳು ಭಾರತೀಯ ಪೌರತ್ವವನ್ನು ನಿರೂಪಿಸಲು ಅಂತಿಮ ಅಥವಾ ನಿರ್ಣಾಯಕ ಪುರಾವೆಗಳಲ್ಲ ಎಂದು ಕಲ್ಕತ್ತಾ ಹೈಕೋರ್ಟ್ ಮಹತ್ವದ...

‘ನಿಮ್ಮ ಸಮಯ ಬಂದಿದೆ’: ಟೌನ್‌ಶಿಪ್ ಯೋಜನೆ ವಿರುದ್ಧದ ಪ್ರತಿಭಟನೆಗೆ 500 ದಿನ: ‘Gen-Z’ ಯುವಕರ ಬೆಂಬಲ ಕೋರಿದ ಬಿಡದಿ ರೈತರು

ಬೆಂಗಳೂರು: ಪ್ರಸ್ತಾವಿತ ಬಿಡದಿ ಟೌನ್‌ಶಿಪ್ ಯೋಜನೆ ವಿರುದ್ಧ ಕೃಷಿ ಭೂಮಿ ಉಳಿವಿಗಾಗಿ ನಡೆಯುತ್ತಿರುವ ರೈತರ ಸುದೀರ್ಘ ಹೋರಾಟವು ಇದೀಗ ಒಂದು ಪ್ರಮುಖ ಘಟ್ಟಕ್ಕೆ ಬಂದು ತಲುಪಿದೆ. ಭೂಸ್ವಾಧೀನದ ವಿರುದ್ಧ ಸತತವಾಗಿ ನಡೆಯುತ್ತಿರುವ ಈ...

ಕೊಡಗಿನ ಆದಿವಾಸಿ ಹಾಡಿಗಳಲ್ಲಿ ಎಸ್‌ಐಆರ್ ಅವ್ಯವಸ್ಥೆ : ಬಿಎಲ್‌ಒಗಳಿಗೆ ತರಬೇತಿಯ ಕೊರತೆ, ಇನ್ನೂ ತಲುಪದ ಗಣತಿ ಫಾರಂ

ಕರ್ನಾಟಕದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಬಹಳ ಯಶಸ್ವಿಯಾಗಿ ನಡೆಯುತ್ತಿದೆ, ಮತದಾರರಿಗೆ ಎಲ್ಲಾ ರೀತಿಯ ಸಹಾಯಗಳನ್ನು ಒದಗಿಸಲಾಗುತ್ತಿದೆ ಎಂದು ರಾಜ್ಯ ಮುಖ್ಯ ಚುನಾವಣಾ ಆಯುಕ್ತ ಅನ್ಬುಕುಮಾರ್ ಅವರು ಪದೇ...

SIR: ಉಡುಪಿಯಲ್ಲಿ ಕರ್ತವ್ಯನಿರತ BLO ಮೇಲೆ ಹಲ್ಲೆಗೆತ್ನಿಸಿದ ಮಾಜಿ ಪಂಚಾಯತ್ ಅಧ್ಯಕ್ಷ, FIR ದಾಖಲು

ಚುನಾವಣಾ ಮತದಾರರ ಪಟ್ಟಿ ಪರಿಷ್ಕರಣೆ (SIR) ಕರ್ತವ್ಯದಲ್ಲಿದ್ದ ಅಂಗನವಾಡಿ ಕಾರ್ಯಕರ್ತೆ ಹಾಗೂ ಬಿಎಲ್‌ಒ (BLO) ಮಹಿಳೆ ಮೇಲೆ ಕರ್ತವ್ಯಕ್ಕೆ ಅಡ್ಡಿಪಡಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೊಲೆ ಬೆದರಿಕೆ ಹಾಕಿದ ಗಂಭೀರ ಆರೋಪ ಉಡುಪಿ...