Homeಮುಖಪುಟ’ವೇಟಿಂಗ್ ಪಾರ್ ಗಾಡೋ’ ; ನಮ್ಮನ್ನು ಉದ್ದೇಶಿಸಿ ಮಾತನಾಡುವ ನಾಟಕ...

’ವೇಟಿಂಗ್ ಪಾರ್ ಗಾಡೋ’ ; ನಮ್ಮನ್ನು ಉದ್ದೇಶಿಸಿ ಮಾತನಾಡುವ ನಾಟಕ…

ಎರಡು ಮಹಾಯುದ್ದಗಳನ್ನು ಕಣ್ಣಾರೆ ಕಂಡ ಬೆಕೆಟ್, ಯುದ್ದದ ಸಂರ್ಭದಲ್ಲಿ ನಡೆದ ಸಾವು ನೋವುಗಳು ಅವರ ಮನಕಲಿಕಿದವು. ಯುದ್ದದ ಕ್ರೌರ್ಯ, ಮಾನಸಿಕ ವೇದನೆ, ತವಕ-ತಲ್ಲಣಗಳ ಕುರಿತು ತನ್ನ ಕೃತಿಗಳಲ್ಲಿ ಕಟ್ಟಿಕೊಟ್ಟ ಅವರು ಆಹೊತ್ತಿನ ಭೀಕರತೆ, ಭೀಭತ್ಸತೆಗೆ ಕನ್ನಡಿ ಹಿಡಿದು ಓದುಗರನ್ನು ಮನಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.

- Advertisement -
- Advertisement -

ಸ್ಯಾಮುಯಲ್ ಬೆಕೆಟ್ ಐರಿಷ್ ಕವಿ. ಅವನೊಬ್ಬ ಶ್ರೇಷ್ಟ ಕಾದಂಬರಿಕಾರ. ಕಥೆಗಾರ ಹಾಗೆಯೇ ನಾಟಕಕಾರ. ಅಷ್ಟೇ ಅಲ್ಲ ಭಾಷಾಂತರಕಾರ ಕೂಡ. ಫ್ರೆಂಚ್ ಮತ್ತು ಐರೀಷ್ ಎರಡು ಭಾಷೆಗಳಲ್ಲೂ ಹಲವು ಶ್ರೇಷ್ಟಮಟ್ಟದ ಕೃತಿಗಳನ್ನು ರಚಿಸಿರುವ ಬೆಕೆಟ್ 1906 ರಲ್ಲಿ ಜನಿಸಿ 1989ರಲ್ಲಿ ತೀರಿಕೊಂಡ. ಜೀವಿತದ ಅವಧಿಯಲ್ಲಿ ಮರ್ಫಿ, ವಾಲ್, ಮಲೋನೆ ಡೈಸ್, ವೈಟಿಂಗ್ ಫಾರ್ ಗಾಡೋ, ಎಂಡ್ ಗೇಮ್ ಹೀಗೆ ಹತ್ತಾರು ಪ್ರಮುಖ ಕೃತಿಗಳನ್ನು ರಚಿಸಿದ್ದು ಈತನಿಗೆ 1969ರಲ್ಲಿ ನೊಬೆಲ್ ಪ್ರಶಸ್ತಿ ಲಭಿಸಿದೆ.

ಎರಡು ಮಹಾಯುದ್ದಗಳನ್ನು ಕಣ್ಣಾರೆ ಕಂಡ ಬೆಕೆಟ್, ಯುದ್ದದ ಸಂರ್ಭದಲ್ಲಿ ನಡೆದ ಸಾವು ನೋವುಗಳು ಅವರ ಮನಕಲಿಕಿದವು. ಯುದ್ದದ ಕ್ರೌರ್ಯ, ಮಾನಸಿಕ ವೇದನೆ, ತವಕ-ತಲ್ಲಣಗಳ ಕುರಿತು ತನ್ನ ಕೃತಿಗಳಲ್ಲಿ ಕಟ್ಟಿಕೊಟ್ಟ ಅವರು ಆಹೊತ್ತಿನ ಭೀಕರತೆ, ಭೀಭತ್ಸತೆಗೆ ಕನ್ನಡಿ ಹಿಡಿದು ಓದುಗರನ್ನು ಮನಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಬೆಕೆಟ್ ನ ‘ವೇಟಿಂಗ್ ಫಾರ್ ಗಾಡೋ ನಾಟಕ ‘ಸುಖದುಃಖಾಂತ್ಯ’ ನಾಟಕ. ಕೇವಲ ಐದೇ ಐದು ಪಾತ್ರಗಳು ಮನುಷ್ಯನ ದುಖಃ, ಸುಖ, ನೋವಿಗೆ ತಾವಾಗಿಯೇ ತೆರೆದುಕೊಳ್ಳುತ್ತವೆ. ತಮ್ಮೊಳಗಿನ ಗೊಂದಲಗಳನ್ನು ಪ್ರೇಕ್ಷಕರ ಮುಂದೆ ಇಡುತ್ತವೆ. ನಾಳೆಗಳ ಕನಸುಗಳನ್ನು ಕಟ್ಟಿಕೊಳ್ಳುತ್ತಲೇ ಆ ಕನಸುಗಳನ್ನು ಕೊಂದುಕೊಳ್ಳುತ್ತವೆ. ಇಂಥದ್ದೊಂದು ನಾಟಕವನ್ನು ತುಮಕೂರಿನಲ್ಲಿ ಪ್ರದರ್ಶಿಸಲಾಯಿತು. ಲೋಕಚರಿತ ರಂಗ ಕೇಂದ್ರ ಎಂಬ ಚಿಕ್ಕದಾಳವಟ್ಟದ ಗ್ರಾಮೀಣ ಸಂಘಟನೆ ಬೆಕೆಟ್ ನ ವೇಟಿಂಗ್ ಫಾರ್ ಗಾಡೋ ನಾಟಕ ಪ್ರದರ್ಶನಕ್ಕೆ ವೇದಿಕೆ ಒದಗಿಸಿತ್ತು. ರಂಗ ತಂಡದ ಕಲಾವಿದರು ಪುಟ್ಟ ಹೆಜ್ಜೆಗಳನ್ನು ಇಡುತ್ತಿದ್ದರೂ ಅವು ದೃಢವಾಗಿದ್ದವು. ಅವರು ಪ್ರತಿಯೊಂದು ಸನ್ನಿವೇಶದಲ್ಲೂ ಸಭಿಕರ ಮನಸ್ಸನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾದರು.

ಬರಡುಭೂಮಿ, ಬೆಟ್ಟಗುಡ್ಡಗಳು, ಎಲೆಗಳೇ ಇಲ್ಲದ ಮರಗಳು. ಅಂಥ ಪ್ರದೇಶದಲ್ಲಿ ಇಬ್ಬರು ದಿಕ್ಕುದೆಸ (ಬೇವರ್ಸಿಗಳು) ಇಲ್ಲದ ಅಬ್ಬೇಪಾರಿಗಳು. ಮೊದಲಿಗೆ ಗುಡ್ಡವೊಂದರ ಮೇಲೆ ಕುಳಿತು ತನ್ನ ಎಡಗಾಲಿನ ಬೂಟು ಬಿಚ್ಚುವ ದೃಶ್ಯದಿಂದ ಆರಂಭವಾಗುವ ನಾಟಕ ಮುಂದೆ ತನ್ನ ಕಥಾಹಂದರವನ್ನು ಬಿಚ್ಚಿಕೊಳ್ಳುತ್ತಾ ಹೋಗುತ್ತದೆ. ಮೊದಲು ಗುಡ್ಡದ ಮೇಲೆ ಕುಳಿತ ವ್ಯಕ್ತಿಯ ಜೊತೆಗೆ ಮತ್ತೊಬ್ಬ ವ್ಯಕ್ತಿ ಸೇರಿಕೊಂಡು ಅಮೂರ್ತ ರೂಪದ ಗಾಡೋನಿಗಾಗಿ ಕಾಯುವುದು. ಕಾಲದೂಡಲು, ಬೇಸರ ನಿವಾರಣೆಗೆ ಮತ್ತು ಮೌನ ವಾತಾವರಣ ಮುರಿದು ಹಾಕಲು ಇಬ್ಬರು ಬೇವರ್ಸಿಗಳು ಮಾತಿಗೆ ಆರಂಭಿಸುತ್ತಾರೆ. ಅವರ ಮಾತುಗಳು ಎಲ್ಲೆಲ್ಲೋ ಹೋಗುತ್ತವೆ. ಇಬ್ಬರು ಅಬ್ಬೇಪಾರಿಗಳ ನಡುವಿನ ಸಂಭಾಷಣೆ ಅಸಂಬದ್ದವಾಗಿರುತ್ತದೆ. ತಾಳತಪ್ಪುತ್ತದೆ. ಒಂದಕ್ಕೊಂದು ಸಂಬಂಧವೇ ಇಲ್ಲದಂತೆ ಆಗುತ್ತದೆ. ಇದು ಎರಡು ಮಹಾಯುದ್ದದ ಸಮಯದಲ್ಲಾದ ಸನ್ನಿವೇಶಕ್ಕೆ ಹಿಡಿದ ಕನ್ನಡಿಯಾಗಿದೆ.

ಈ ನಾಟಕ ಸಂಪೂರ್ಣವಾಗಿ ಸಂಗತವೂ ಅಲ್ಲದ, ಅಸಂಗತವೂ ಅಲ್ಲದ ಸ್ಥಿತಿಯಲ್ಲಿ ಮುಂದುವರಿಯುತ್ತದೆ. ಶಬರಿ ರಾಮನಿಗಾಗಿ ವರ್ಷಾನುಗಟ್ಟಲೆ ಕಾಯುವಂತೆ (ಕೊನೆಗೂ ಶಬರಿಗೆ ರಾಮನ ದರ್ಶನವಾಗುತ್ತದೆ.) ಈ ಇಬ್ಬರು ಬೇವರ್ಸಿಗಳು ತಾವೂ ನೋಡಿಯೇ ಇಲ್ಲದ, ಪರಿಚಯವೇ ಇಲ್ಲದ ಗಾಡೋನಿಗಾಗಿ ಕಾಯುತ್ತಾ ಎರಡು ಬಾರಿ ಆತ್ಮಹತ್ಯೆಗೆ ಯತ್ನಿಸುತ್ತಾರೆ. ಈ ಪಾತ್ರಗಳು ಪ್ರತಿಯೊಬ್ಬ ವ್ಯಕ್ತಿಯ ಮನದಾಳದ ಗೊಂದಲಗಳಿಗೆ ಮುಖಾಮುಖಿಯಾಗುತ್ತಾರೆ. ಇಂದಿನ ಸಮಾಜದಲ್ಲೂ ವ್ಯಕ್ತಿ ಯಾರನ್ನೋ ಕಾಯುತ್ತಾ, ನಿರೀಕ್ಷೆ ಮಾಡುತ್ತ, ಅವರು ಸಿಗದೇ, ಬೇಸರ, ನೋವು ತಡೆಯಲಾರದೆ ಆತ್ಮಹತ್ಯೆಗೆ ಯತ್ನಿಸುವ ಸನ್ನಿವೇಶಕ್ಕೂ ಈ ಪಾತ್ರಗಳು ಮುಖಾಮುಖಿಯಾಗುತ್ತವೆ. ಯುದ್ದದಂತಹ ಸನ್ನಿವೇಶದಲ್ಲಿ ಮನುಷ್ಯನ ಮನಸ್ಥಿತಿ ಹೇಗಿರುತ್ತದೆ ಎಂಬುದನ್ನು ಈ ಪಾತ್ರಗಳು ಕಟ್ಟಿಕೊಡುತ್ತವೆ.

ಮನುಷ್ಯನ ಮನಸ್ಸು ಕ್ಷಣಕ್ಷಣಕ್ಕೂ ಬದಲಾಗುತ್ತಿರುತ್ತದೆ. ಒಮ್ಮೆ ಆಡಿದ ಮಾತು ಮತ್ತೊಮ್ಮೆ ಆಡುವುದಿಲ್ಲ. ಹಾಗೆಯೇ ಈ ಬೇವರ್ಸಿ ಪಾತ್ರಗಳು ನಮ್ಮ ಕಣ್ಣ ಮುಂದೆ ನಿಲ್ಲುತ್ತವೆ. ನಮ್ಮ ನಿರೀಕ್ಷೆಗಳು ಸುಳ್ಳಾಗಬಹುದು. ನೋವು, ಸಂಕಟ, ದುಃಖ ಕ್ಷಣ ಕಾಲ ಮರೆಯಾಗಬಹುದು. ಆದರೆ ದುತ್ತೆಂದು ಒಕ್ಕರಿಸುತ್ತವೆ ಎಂಬುದನ್ನು ಈ ಪಾತ್ರಗಳು ಸಾಕ್ಷೀಕರಿಸುತ್ತವೆ. ಒಮ್ಮೆ ಒಣಗಿದ ಮರವೂ ಚಿಗುರಬಹುದು. ಹಾಗೆಯೇ ಮನುಷ್ಯನಲ್ಲೂ ಬದುಕುವ ಉತ್ಸಾಹ ಮೂಡಬಹುದು. ಅದು ಹೆಚ್ಚು ದಿನ ಇರುವುದಿಲ್ಲ. ಕೊನೆಗೆ ಆ ಎರಡು ಪಾತ್ರಗಳು ಹೀಗೆ ಸಾರುತ್ತವೆ. ನಾವು ನಾಳೆ ಇಲ್ಲಿಗೆ ಮರಳಿ ಬಂದರೆ ಬದುಕಿರುತ್ತೇವೆ. ಬಾರದೆ ಇದ್ದರೆ ನಾವು ಸತ್ತಂತೆ ಎಂಬಲ್ಲಿಗೆ ನಾಟಕ ಅಂತ್ಯವಾಗುತ್ತದೆ. ಇಡೀ ನಾಟಕದ ಉದ್ದಕ್ಕೂ ಎರಡು ಬೇವರ್ಸಿ ಪಾತ್ರಗಳೇ ಪ್ರಧಾನವಾಗಿವೆ.

ಈ ನಡುವೆ ಆ ಬರಡು ಭೂಮಿಯಲ್ಲಿದ್ದ ಇಬ್ಬರು ಬೇವರ್ಸಿ ಪಾತ್ರಗಳಗಳ ಜೊತೆಗೆ ಎಷ್ಟೋ ದಿನ ಕಳೆದ ಮೇಲೆ ಅಲ್ಲಿಗೆ ಪೋಜೋ ಅಲ್ಲಿಗೆ ಲಕ್ಕಿಯೊಂದಿಗೆ ಬರುತ್ತಾನೆ. ಆತ ವಿರಾಮ ಪಡೆಯಲು ಆ ಬೇವರ್ಸಿಗಳೊಂದಿಗೆ ಕೆಲಕಾಲ ಮಾತಿಗೆ ಇಳಿಯುತ್ತಾನೆ. ಅವರ ನಡುವೆ ನಡೆಯುವ ಸಂಭಾಷಣೆ ನಗೆಯುಕ್ಕಿಸುತ್ತದೆ. ಪೋಜೋ ಬಿಸುಟ ಮೋಟು ಬೀಡಿ, ಮೂಳೆ ಚಿಕನ್ ಗಳನ್ನು ಆ ಇಬ್ಬರು ಬೇವರ್ಸಿ ಪಾತ್ರಗಳು ತೆಗೆದುಕೊಂಡು ಮೋಜು ಮಾಡುತ್ತವೆ. ಲಕ್ಕಿಯದು ಪೋಜೇನ ಸಾಮಾನುಗಳನ್ನು ಹೊರುವ ಕೆಲಸ. ಹೇಳಿದ್ದು ಮಾಡುವ ಚಾಕರಿ. ಯುದ್ದದಂತಹ ಪರಿಸ್ಥಿತಿಯಲ್ಲಿ ಶ್ರೀಮಂತರು ಬಡವರನ್ನು ಗುಲಾಮರನ್ನಾಗಿ ಇಟ್ಟುಕೊಳ್ಳುತ್ತಿದ್ದರು ಎಂಬುದನ್ನು ಈ ಪಾತ್ರ ಹೇಳುತ್ತದೆ.  ಇವರ ನುಡವೆ ನಡೆಯುವ ಸಂಭಾಷಣೆಯಲ್ಲಿ ಕಪ್ಪು, ಬಿಳುಪು, ಹಸಿರು ಮೊದಲಾದ ಬಣ್ಣಗಳ ಕುರಿತು ವ್ಯಕ್ತವಾಗುವ ಮಾತುಗಳು ಅಸಂಬದ್ದತೆ ಪ್ರೇಕ್ಷಕರಲ್ಲಿ ನಗೆಗಡಲಲ್ಲಿ ತೇಲುವಂತೆ ಮಾಡುತ್ತವೆ.

ಹುಡುಗನ ಪಾತ್ರ ಎರಡೇ ಬಾರಿ ರಂಗದ ಮೇಲೆ ಕಂಡು ಬಂದರೂ ಗಮನ ಸೆಳೆಯುತ್ತದೆ. ಬೇವರ್ಸಿಗಳ ಬಳಿ ಬರುವ ಆ ಹುಡುಗ ನಾನು ಗಾಡೋನನ್ನು ನೋಡಿದ್ದೇನೆ. ಅವನ ಬಳಿಯಿಂದಲೇ ಬಂದಿದ್ದೇನೆ ಎನ್ನುತ್ತಾನೆ. ಅದಕ್ಕೆ ಬೇವರ್ಸಿಗಳು ನಾವು ಗಾಡೋಗಾಗಿ ಕಾಯುತ್ತಿದ್ದೇವೆ ಎಂಬುದನ್ನು ತಿಳಿಸುವಂತೆ ಆ ಹುಡುಗನಿಗೆ ಹೇಳುತ್ತಾರೆ. ಆದರೆ ಆ ಹುಡುಗ ಎರಡನೇ ಬಾರಿ ಬಂದಾಗ ನಾನು ನೆನ್ನೆ ಬಂದ ಹುಡುಗನಲ್ಲ. ನಾನು ಗಾಡೋ ನೋಡಿಲ್ಲ. ನೀವು ಯಾರು? ನಿಮ್ಮನ್ನೂ ನಾನು ಭೇಟಿ ಮಾಡಿಲ್ಲ ಎಂದು ಪ್ರೇಕ್ಷಕರನ್ನು ಗೊಂದಲದಲ್ಲಿ ಕೆಡವುತ್ತಾನೆ. ಮತ್ತೆ ಆ ಬೇವರ್ಸಿಗಳು ನಿನ್ನೆ ನೀನು ಬಂದಿದ್ದೆ ಎಂಬುದನ್ನು ಮನವರಿಕೆ ಮಾಡಿಕೊಟ್ಟರೂ ಒಪ್ಪಿಕೊಳ್ಳುವುದಿಲ್ಲ ಆ ಹುಡುಗ. ಇಂದು ಕೂಡ ಅಂಥವೇ ಸಂಗತಿಗಳು ನಮ್ಮ ನಡುವೆ ನಡೆಯುತ್ತಿರುವುದನ್ನು ನೋಡುತ್ತೇವೆ.

ಜಗತ್ತಿನಲ್ಲಿ ಜನಾಂಗೀಯ ದಬ್ಬಾಳಿಕೆ ನಡೆಯುತ್ತಿರುವುದಕ್ಕೆ, ಸಮಾಜದಲ್ಲಿ ತಾರತಮ್ಯದ ಮನೋಭಾವ ಇಂದಿಗೂ ಇರುವ ಬಗ್ಗೆ ಮಾರ್ಮಿಕವಾಗಿ ಧ್ವನಿಸುತ್ತದೆ. ಆಧುನಿಕ ಜಗತ್ತಿನ ನಾಗಾಲೋಟದಲ್ಲಿ ಮನುಷ್ಯ ಕ್ಷಣ ನಿಂತು ಆಲೋಚಿಸುವುದಕ್ಕೂ ಸಮಯವಿಲ್ಲದ ಪರಿಯನ್ನು ಹೇಳುತ್ತದೆ. ಗೊಂದಲದಲ್ಲಿರುವ ಮನುಷ್ಯನ ಮಾನಸಲೋಕದ ಅಲ್ಲೋಲಕಲ್ಲೋಲಗಳಿಗೆ ಪಾತ್ರಗಳು ಜೀವ ತುಂಬುತ್ತವೆ. ವೇಟಿಂಗ್ ಪಾರ್ ಗಾಡೋ ಇಂದಿಗೂ ಪ್ರಸ್ತುತವಾಗಿದೆ. ಮನುಷ್ಯನಲ್ಲಾಗುವ ಬದಲಾವಣೆಗಳನ್ನು ಹೇಳುತ್ತದೆ.

ರವಿಶಂಕರ್ ಆರ್ ನೀನಾಸಂ ನಿರ್ದೇಶನದಲ್ಲಿ ನಾಟಕ ಚನ್ನಾಗಿ ಮೂಡಿಬಂತು. ಚನ್ನಕೇಶವ, ಜಿತೇಂದ್ರ, ಜಿ.ಎಸ್. ಮೋಹನ್, ಶ್ರೀಕಾಂತ್, ಸುಮಂತ್ ಜಿ.ಜಿ. ವೇಟಿಮಗ್ ಫಾರ್ ಗಾಡೋ ನಾಟಕದ ಪಾತ್ರಗಳಿಗೆ ಜೀವ ತುಂಬಿದರು. ಲೋಕಚರಿತ ರಂಗ ಕೇಂದ್ರದ ಮುಖ್ಯಸ್ಥ ಅನಿಲ್ ಕುಮಾರ್ ಚಿಕ್ಕದಾಳವಟ್ಟ ಉಪಸ್ಥಿತರಿದ್ದರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2029ರ ವೇಳೆಗೆ 21 NDA ಆಡಳಿತದ ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ: ಮುಂಬೈನಲ್ಲಿ ಗೃಹ ಸಚಿವ ಅಮಿತ್ ಶಾ ಘೋಷಣೆ

ವಿವಾಹ, ವಿಚ್ಛೇದನ, ಪಿತ್ರಾರ್ಜಿತ ಆಸ್ತಿ ಮತ್ತು ದತ್ತು ಸ್ವೀಕಾರದಂತಹ ವೈಯಕ್ತಿಕ ಕಾನೂನುಗಳಲ್ಲಿ ಧರ್ಮಾತೀತವಾಗಿ ಏಕರೂಪತೆ ತರುವ 'ಏಕರೂಪ ನಾಗರಿಕ ಸಂಹಿತೆ'ಯನ್ನು (UCC) 2029ರ ವೇಳೆಗೆ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21...

KPSC ಯನ್ನು ರದ್ದು ಮಾಡುತ್ತಾ ಸರ್ಕಾರ? ಹೊಸ ಚರ್ಚೆ ಹುಟ್ಟುಹಾಕಿದ ಸಚಿವ ಈಶ್ವರ್ ಖಂಡ್ರೆ ಹೇಳಿಕೆ

ಕರ್ನಾಟಕ ಲೋಕಸೇವಾ ಆಯೋಗವನ್ನು (KPSC) ಮುಚ್ಚುವ ಅಥವಾ ಸಂಪೂರ್ಣವಾಗಿ ರದ್ದುಗೊಳಿಸುವ ಕುರಿತು ಅರಣ್ಯ ಹಾಗೂ ಜೀವಿಶಾಸ್ತ್ರ ಸಚಿವ ಈಶ್ವರ್ ಖಂಡ್ರೆ ನೀಡಿರುವ ಹೇಳಿಕೆಯು ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿದ್ದು, ಲಕ್ಷಾಂತರ ಸ್ಪರ್ಧಾತ್ಮಕ...

ಹುಬ್ಬಳ್ಳಿಯಲ್ಲಿ ಗಣೇಶ ಮೆರವಣಿಗೆ ವೇಳೆ ಮಹಿಳೆಯರೊಂದಿಗೆ ಅಸಭ್ಯ ವರ್ತನೆ

ಹುಬ್ಬಳ್ಳಿಯಲ್ಲಿ ಗಣೇಶೋತ್ಸವದ ಮೂರ್ತಿ ತರುವ ಸಂಭ್ರಮದ ಮೆರವಣಿಗೆಯನ್ನೇ ನೆಪವಾಗಿಸಿಕೊಂಡು ಅಪರಿಚಿತ ಕಿಡಿಗೇಡಿಗಳು ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸಿದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಹಬ್ಬದ ನೆಪದಲ್ಲಿ ಸಾರ್ವಜನಿಕ ಸೌಹಾರ್ದತೆ ಮತ್ತು ಮಹಿಳೆಯರ ಸುರಕ್ಷತೆಗೆ...

ಗಣಪತಿ ಹಬ್ಬದ ನೆಪದಲ್ಲಿ ಮೈಸೂರಿನಲ್ಲಿ ಸೌಹಾರ್ದತೆ ಕೆಡಿಸಲು ಯತ್ನ? ಭದ್ರತಾ ನಿಯಮಗಳನ್ನೇ ಧಿಕ್ಕರಿಸಿದ BJP ನಾಯಕರು

ಗಣೇಶೋತ್ಸವದ ಮೆರವಣಿಗೆಗಳನ್ನು ನೆಪವಾಗಿಸಿಕೊಂಡು ಕೋಮು ಸೌಹಾರ್ದತೆಗೆ ಧಕ್ಕೆ ತರುವ, ಸೂಕ್ಷ್ಮ ಪ್ರದೇಶಗಳಲ್ಲಿ ಪ್ರಚೋದನಾಕಾರಿ ಘೋಷಣೆಗಳನ್ನು ಕೂಗಿ ಗಲಭೆಗೆ ಪ್ರೇರೇಪಿಸುವ ರಕ್ತದಾಹಿ ಕೃತ್ಯಗಳಿಗೆ ಬ್ರೇಕ್ ಹಾಕಲು ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ....

SIR: ವಿಶೇಷ ತೀವ್ರ ಪರಿಷ್ಕರಣೆ’ ಎಂಬ ಪ್ರಹಸನ, ಆಯೋಗದ ತಪ್ಪುಗಳಿಗೆ ಮತದಾರರು ಪ್ರಾಯಶ್ಚಿತ್ತ ಪಡಬೇಕೇ?

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಹೆಸರಿನಲ್ಲಿ ರಾಜ್ಯಾದ್ಯಂತ ಮತದಾರರನ್ನು 2002ರ ಮತದಾರರ ಪಟ್ಟಿಯೊಂದಿಗೆ ‘ಮ್ಯಾಪಿಂಗ್’ ಮಾಡುವ ಬೃಹತ್ ಪ್ರಕ್ರಿಯೆಯನ್ನು ಚುನಾವಣಾ ಆಯೋಗವು ಕೈಗೆತ್ತಿಕೊಂಡಿದೆ. 2002ರಲ್ಲಿದ್ದ ದತ್ತಾಂಶವನ್ನು ಇಂದಿನ ಪಟ್ಟಿಯೊಂದಿಗೆ ಹೋಲಿಸಿ,...

ಯೋಗಿ ಆದಿತ್ಯನಾಥ್ ಅವರನ್ನು ಪ್ರಶ್ನಿಸಿದ್ದ ಪತ್ರಕರ್ತೆ ದಿವ್ಯಾ ಶ್ರೀವಾಸ್ತವ್‌ಗೆ ಬೆದರಿಕೆ

ಶನಿವಾರ (ಸೆ. 12) ನಡೆದಿದ್ದ ಸುದ್ದಿಗೋಷ್ಠಿಯೊಂದರಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಪ್ರಶ್ನಿಸಿದ ಪತ್ರಕರ್ತೆ ದಿವ್ಯಾ ಶ್ರೀವಾಸ್ತವ ಅವರ ವೀಡಿಯೊ ವೈರಲ್ ಆದ ಬಳಿಕ, ಅವರು ಆನ್‌ಲೈನ್ ಬೆದರಿಕೆಗಳು ಮತ್ತು...

ಅಲಿಗಢ ಮುಸ್ಲಿಂ ವಿವಿ ಪ್ರತಿಭಟನೆಯ ‘ಪಕ್ಷಪಾತಿ’ ನಿರೂಪಣೆ : ಝೀ ನ್ಯೂಸ್‌ಗೆ ₹2 ಲಕ್ಷ ದಂಡ ವಿಧಿಸಿದ ಎನ್‌ಬಿಡಿಎಸ್‌ಎ

ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ (AMU) ನಡೆದ ವಿದ್ಯಾರ್ಥಿ ಪ್ರತಿಭಟನೆಯ ವೇಳೆ ಪ್ಯಾಲೆಸ್ತೀನ್ ಪರ ಘೋಷಣೆಗಳನ್ನು ಕೂಗಿದ ಘಟನೆಯನ್ನು ವರದಿ ಮಾಡುವಾಗ ಪ್ರಸಾರ ನೀತಿ ಸಂಹಿತೆಯನ್ನು ಉಲ್ಲಂಘಿಸಿದೆ ಎಂದು ಪರಿಗಣಿಸಿ, 'ಝೀ ನ್ಯೂಸ್' (Zee...

‘ಕೆಲವರು ಮುಸ್ಲಿಮರನ್ನು ಬೈದ್ರೆ ಮಾತ್ರ ಲೀಡರ್‌ ಆಗೋದು ಅನ್ಕೊಂಡಿದಾರೆ!’: ಆರ್‌. ಅಶೋಕ್‌ ಹಳೆಯ ಹೇಳಿಕೆ ಮುಂದಿಟ್ಟು ಪ್ರಿಯಾಂಕ್ ಖರ್ಗೆ ಟೀಕೆ!

ಮೈಸೂರಿನ ಟಿ. ನರಸೀಪುರದಲ್ಲಿ ಗಣಪತಿ ಮೆರವಣಿಗೆ ಸಾಗುವ ಮಾರ್ಗದ ವಿಚಾರವಾಗಿ ಬಿಜೆಪಿ ಪ್ರತಿಭಟನೆಗೆ ಮುಂದಾಗಿರುವ ಬೆನ್ನಲ್ಲೇ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌. ಅಶೋಕ್‌ ವಿರುದ್ಧ ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ...

ಠಾಣೆಗೆ ನುಸುಳುತ್ತೇನೆ ಎಂದ ಪ್ರತಾಪ್ ಸಿಂಹನಿಗೆ ಪರಪ್ಪನ ಜೈಲಿಗೂ ರೆಡಿಯಾಗಿ ಎಂದ ಸಚಿವ ಪ್ರಿಯಾಂಕ್ ಖರ್ಗೆ

ಮಾಜಿ ಸಂಸದ ಪ್ರತಾಪ್ ಸಿಂಹ ಅವರನ್ನು ನೇರವಾಗಿ ಗುರಿಯಾಗಿಸಿಕೊಂಡು ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ವಾಗ್ದಾಳಿ ನಡೆಸಿದ್ದು, ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸುವ ಅಥವಾ ಅವರಿಗೆ ಬೆದರಿಕೆ ಹಾಕುವ ರೀತಿಯಲ್ಲಿ ಮಾತನಾಡುವವರ ವಿರುದ್ಧ ಸರ್ಕಾರ...

ಆಹಾರ ಪದ್ಧತಿ- ಧಾರ್ಮಿಕ ಆಚರಣೆಗಳನ್ನು ಆರಿಸಿಕೊಳ್ಳಲು ಜನರಿಗೆ ಸ್ವಾತಂತ್ರ್ಯವಿದೆ: ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ

ದುರ್ಗಾ ಪೂಜೆಯ ಸಂದರ್ಭದಲ್ಲಿ ಬಂಗಾಳಿಗಳು ಮಾಂಸಾಹಾರ ಸೇವಿಸುವುದರ ಕುರಿತು ಬಾಗೇಶ್ವರ ಬಾಬಾ ಎಂದೇ ಜನಪ್ರಿಯರಾಗಿರುವ ಧೀರೇಂದ್ರ ಶಾಸ್ತ್ರಿ ಅವರ ಹೇಳಿಕೆಗೆ ಪರೋಕ್ಷವಾಗಿ ಪ್ರತಿಕ್ರಿಯಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ, "ತಮ್ಮ ಆಹಾರ...