Homeಮುಖಪುಟಏರುತ್ತಿರುವ ಜಾಗತಿಕ ತಾಪಮಾನ: ಈ ಶತಮಾನದ ಅಂತ್ಯದೊಳಗೆ ಮಂಗಳೂರು-ಮುಂಬೈ ಸಮುದ್ರ ಸಮಾಧಿ!

ಏರುತ್ತಿರುವ ಜಾಗತಿಕ ತಾಪಮಾನ: ಈ ಶತಮಾನದ ಅಂತ್ಯದೊಳಗೆ ಮಂಗಳೂರು-ಮುಂಬೈ ಸಮುದ್ರ ಸಮಾಧಿ!

- Advertisement -
- Advertisement -

ಒಂದೇ ಸಮನೆ ಏರಿಕೆಯಾಗುತ್ತಿರುವ ಜಾಗತಿಕ ತಾಪಮಾನ ಇನ್ನೊಂದು ದಶಕದಲ್ಲಿ ಅಂದಾಜು ಮಟ್ಟಕ್ಕಿಂತ ಹೆಚ್ಚಾಗಲಿದೆ. ಇದರಿಂದ ಪ್ರಕೃತಿ ವಿಕೋಪವಾಗಿ ಜೀವ ಜಾಲಕ್ಕೆ ಗಂಡಾಂತರ ಎದುರಾಗಲಿದೆಯೆಂದು ವಿಶ್ವ ಸಂಸ್ಥೆಯ ಹವಾಮಾನ ಬದಲಾವಣೆ ಕುರಿತ ವರದಿ ಆಘಾತಕಾರಿ ಎಚ್ಚರಿಕೆ ಈಚೆಗಷ್ಟೆ ನೀಡಿತ್ತು. ವಿಶ್ವ ಸಂಸ್ಥೆಯ ಈ ಸಮಿತಿ 1988ರಿಂದ 5-7 ವರ್ಷಕ್ಕೊಮ್ಮೆ ತಾಪಮಾನ ಏರಿಕೆ, ಹಸಿರು ಮನೆ ಅನಿಲ ಪರಿಣಾಮ, ಸಮುದ್ರ ಮಟ್ಟ, ಮಂಜು ಕರಗುವಿಕೆ ಬಗ್ಗೆ ವರದಿ ಕೊಡುತ್ತಿದೆ.

ವಿಶ್ವ ಸಂಸ್ಥೆಯ ಭೂ ತಾಪಮಾನದ ವರದಿ ಆಧರಿಸಿ ಅಮೆರಿಕಾದ ಬಾಹ್ಯಾಕಾಶ ಸಂಸ್ಥೆ ನಾಸಾ ಪ್ರಕಟಿಸಿರುವ ತನ್ನ 6ನೇ ಮೌಲ್ಯ ಮಾಪನ ವರದಿಯಲ್ಲಿ ಬೆಚ್ಚಿಬೀಳಿಸುವ ಸಂಗತಿಗಳಿವೆ! ಜಾಗತಿಕ ತಾಪಮಾನ ಏರು ಗತಿಯಲ್ಲಿರುವುದರಿಂದ ಸಮುದ್ರ ಮಟ್ಟದಲ್ಲೂ ದೊಡ್ಡ ಏರಿಕೆಯಾಗುತ್ತಿದೆ. ಹೀಗಾಗಿ ಕಡಲಂಚಿನ ಊರೂರುಗಳನ್ನು ಸಮುದ್ರ ಆಪೋಷನ ಪಡೆಯಲಿದೆ. ಭಾರತದ ಮಂಗಳೂರು, ಮುಂಬೈ, ಕೊಚ್ಚಿ, ವಿಶಾಖಪಟ್ಟಣಂ… ಮುಂತಾದ 12ಕ್ಕಿಂತ ಹೆಚ್ಚು ಮಹಾನಗರಗಳು 2100ರ ಒಳಗಾಗಿ ಸಮುದ್ರ ಪಾಲಾಗಲಿದೆಯೆಂದು ನಾಸಾ ಸ್ಪಷ್ಟವಾಗಿ ಹೇಳಿದೆ.

ಜಗತ್ತಿನಾದ್ಯಂತ ಸಮುದ್ರದಲ್ಲಾಗತ್ತಿರುವ ಏರುಪೇರಿನ ಆಧಾರದಲ್ಲಿ ವರದಿ ಸಿದ್ಧಪಡಿಸಿರುವ ನಾಸಾ, ಸಮುದ್ರದ ಈಗಿನ ಸ್ಥಿತಿ-ಗತಿ ಪ್ರಕಾರ ಸಮುದ್ರ ಏರಿದರೆ ಇನ್ನೆರಡು ಅಡಿ ಏರುತ್ತದೆ ಎಂದಿದೆ. ಶತಮಾನದ ಅಂತ್ಯದೊಳಗೆ ಇದು ಇನ್ನಷ್ಟು ತೀವ್ರಗೊಂಡರೆ 2100ರ ಕೊನೆಗೆ 3 ಅಡಿಯಷ್ಟು ಉಕ್ಕೇರುತ್ತದೆ. ಆಗ ಮಂಗಳೂರು, ಮಂಬೈ, ಮರ್ಮಗೋವಾ, ಕೊಚ್ಚಿ, ವಿಶಾಖಪಟ್ಟಣಂ, ಪಾರಾದೀಪ್, ಖದೀರ್ಪುರ್, ಚೆನ್ನೈ, ತೂತ್ತುಕುಡಿ, ಕಂಡ್ಲಾ, ಒಖಾ, ಭಾವನಗರ್ ಕಡಲಲ್ಲಿ ಕರಗಲಿವೆ ಎಂಬುದು ನಾಸಾ ಲೆಕ್ಕಾಚಾರವಾಗಿದೆ.

ಏಷ್ಯಾದ ಸುತ್ತಲಿನ ಸಮುದ್ರ ಮಟ್ಟವು ಜಾಗತಿಕ ಸರಾಸರಿ ದರಕ್ಕಿಂತ ವೇಗವಾಗಿ ಏರುತ್ತಿದೆ. ಈ ರೀತಿಯ ಸಮುದ್ರ ಮಟ್ಟ ಬದಲಾವಣೆ ಸಾಮನ್ಯವಾಗಿ 100 ವರ್ಷಕ್ಕೊಮ್ಮೆ ಆಗುತ್ತಿತ್ತು. ಇನ್ನು ಮುಂದೆ 2050ರ ತನಕ 6ರಿಂದ 9ವರ್ಷಕ್ಕೊಮ್ಮೆ ಸಂಭವಿಸಬಹುದು. 2006ರಿಂದ 2018ರ ತನಕ ನಡೆಸಿದ ಅಧ್ಯಯನ ಅಂದಾಜಿನಂತೆ ಸಮುದ್ರದ ಜಾಗತಿಕ ಸರಾಸರಿ ಮಟ್ಟ ಪ್ರತಿ ವರ್ಷ ಸುಮಾರು 3.7 ಮಿಲಿ ಮೀಟರ್ ನಷ್ಟು ಏರಿಕೆಯಾಗುತ್ತಿದೆ ಎಂದು ನಾಸಾ ಅಧ್ಯಯನ ವರದಿಯಲ್ಲಿ ಉಲ್ಲೇಖವಾಗಿದೆ.

ನಾಸಾ ಪ್ರಕಟಪಡಿಸಿರುವ ವರದಿಯಂತೆ ಕರ್ನಾಟಕದ ಬರಿ ಮಂಗಳೂರು ಮಾತ್ರವಲ್ಲ, ಕಡಲಂಚಿನ ಕಾರವಾರ, ಕುಮಟಾ, ಹೊನ್ನಾವರ, ಭಟ್ಕಳ ಮತ್ತು ಉಡುಪಿ ಜಿಲ್ಲೆಯ ಹಲವು ಪ್ರದೇಶಗಳು ಸಮುದ್ರದಲ್ಲಿ ಲೀನವಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ! ಸಾರ್ವಜನಿಕರಿಗಾಗಿ ನಾಸಾ ಸ್ಥಳೀಯ ಸಮುದ್ರ ಮಟ್ಟವನ್ನು ತಿಳಿಯುವ ಆನ್‌ಲೈನ್ ಸಾಧನ ಕಂಡುಹಿಡಿದಿದೆ. 2020 ರಿಂದ 2150ರ ಒಳಗಿನ ದಶಕಗಳನ್ನು ಆಯ್ದುಕೊಂಡು ನಮಗೆ ಬೇಕಾದ ಪ್ರದೇಶದ ಸಮುದ್ರ ಮಟ್ಟ ತಿಳಿಯಬಹುದಾಗಿದೆ. ಮಾಹಿತಿಯನ್ನು ಡೌನ್ಲೋಡ್ ಮಾಡಿಕೊಳ್ಳ ಬಹುದಾಗಿದೆ.

ಮಂಗಳೂರಿನ ಸಮುದ್ರ ಮಟ್ಟ 2100ರ ಒಳಗೆ 1.87 ಅಡಿ ಏರಿಕೆಯಾಗಲಿದೆಯೆಂಬ ಎಚ್ಚರಿಕೆ ಕೊಟ್ಟಿದೆ. ಅಂದರೆ ಕಡಲು ಕ್ರಮೇಣ ಮಂಗಳೂರನ್ನು ಕಬಳಿಸಲಿದೆ ಎಂದರ್ಥ. ನಾಸಾ ವಿಜ್ಞಾನಿಗಳ ಮುಳುಗಡೆ ವರದಿ ಬಗ್ಗೆ ನಾನಾ ನಮೂನೆಯ ಜಿಜ್ಞಾಸೆ ಶುರುವಾಗಿದೆ. ಇದೆಲ್ಲ ಬರಿ ಸುಳ್ಳು; ಹಿಂದೆ ಜಗತ್ತೆ ಮುಳುಗುತ್ತದೆಂದು ಬೊಬ್ಬೆ ಎಬ್ಬಿಸಲಾಗಿತ್ತಲ್ಲ ಹಾಗೇ ಇದೆಂಬ ಅಭಿಪಾಯ ವ್ಯಕ್ತವಾಗುತ್ತಿದೆ. ಈ ಬಗ್ಗೆ ಟ್ರೋಲ್‌ಗಳೂ ನಡೆದಿದೆ. ಇನ್ನೊಂದೆಡೆ ನಾಸಾ ವಿಜ್ಞಾನಿಗಳೇಕೆ ಸುಳ್ಳು ಹೇಳುತ್ತಾರೆ; ಇಂಥ ಗಂಭೀರ ವಿಷಯ ಆಳವಾದ ಅಧ್ಯಯನವಿಲ್ಲದೆ ಹೇಳಲು ಸಾಧ್ಯವೇ ಇಲ್ಲ; ನಾಸಾ ವಿಜ್ಞಾನಿಗಳ ಅಭಿಪ್ರಾಯ ಕರಾರುವಾಕ್ ಆಗಿದೆ ಎನ್ನುವ ಚರ್ಚೆ ನಡೆದಿದೆ.

ನಾಸಾ ವಿಜ್ಞಾನಿಗಳು ಕೊಟ್ಟಿರುವ ಮಾಹಿತಿ ಸರಿಯಾದದ್ದು; ಮುಂದಿನ ದಿನಗಳ ಸಂಭವನೀಯ ಘಟನೆ ಎಂದು ಮಂಗಳೂರಿನ ಪಿಲಿಕುಳ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ-ಸಂಶೋಧಕ ಪ್ರೊ.ಕೆವಿ.ರಾವ್ ಹೇಳುತ್ತಾರೆ. ನಿತ್ಯ ನಗರೀಕರಣ, ಕಾರ್ಖಾನೆಗಳ ಹೆಚ್ಚಳವೇ ಮುಂತಾದ ಕಾರಣದಿಂದ ಜಾಗತಿಕ ಮಾಲಿನ್ಯ ವಿಪರೀತವಾಗುತ್ತಿದೆ. ಇದೇ ಗತಿಯಲ್ಲಿ ಮಾಲಿನ್ಯ ಹೆಚ್ಚಳವಾದರೆ ಮನುಷ್ಯನ ಕೈತಪ್ಪಿ ಜಗತ್ತಿನ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು ಅಷ್ಟು ಸುಲಭವಲ್ಲವೆಂದು ಪ್ರೊ.ರಾವ್ ಅಭಿಪ್ರಾಯ.

ಪ್ರೊ.ಕೆವಿ.ರಾವ್

ಪ್ರಕೃತಿ ನಮಗೆ ಆಕ್ಸಿಜನ್, ನೈಟ್ರೋಜನ್ ಮತ್ತಿತರ ಅನಿಲವನ್ನು ಸಾಕಷ್ಟು ನೀಡುತ್ತಿದೆ. ಪ್ರಕೃತಿ ನೀಡಿರುವ ಪೂರಕ ವಾತಾವರಣವನ್ನು ನಾವೇ ಹಾಳುಮಾಡುತ್ತಿದ್ದೇವೆ; ಕಾಡು ನಾಶವಾಗಿ ನಗರಗಳಾಗಿವೆ; ಇದರಿಂದ ಜಾಗತಿಕ ತಾಪಮಾನ ಹದಗೆಟ್ಟಿ ಪರಿಸರ ಸಂರಕ್ಷಿಸದೇ ಇರುವುದರಿಂದ ಸಾಗರದ ಹಿಮ ಗಡ್ಡೆಗಳು ನಿರೀಕ್ಷೆಗಿಂತ ವೇಗವಾಗಿ ಕರಗುತ್ತಿವೆ. ನಮ್ಮ ಸುತ್ತಲಿನ ಜಾಗವನ್ನು ಕಾಳಜಿಯಿಂದ ಕಾಪಾಡಿಕೊಳ್ಳದಿದ್ದರೆ ವಾತಾವರಣದ ಉಷ್ಣತೆ ಏರಿಕೆಯಾಗಿ ನೀರ್ಗಲ್ಲುಗಳು ಕರಗಿ ಸಮುದ್ರ ಉಕ್ಕೇರುವುದು ಸಹಜ ಪ್ರಕ್ರಿಯೆ; ಆಗ ಕಡಲ ತಡಿಯ ಪ್ರದೇಶ ಸಮುದ್ರದ ಪಾಲಾಗುತ್ತದೆ. ಇದನ್ನೆ ನಾಸಾ ಅಧ್ಯಯನದ ಮೂಲಕ ತಿಳಿಸಿದೆಯೆಂದು ಪ್ರೊ.ರಾವ್ ಹೇಳಿದ್ದಾರೆ.

ಹಾಲಿ ವೇಗದಲ್ಲೇ ನೀರ್ಗಲ್ಲುಗಳು ಕರಗುತ್ತ ಹೋದರೆ ಸಮಸ್ಯೆ ಏನಾಗಬಹುದೆಂದು ನಾಸಾ ವಿಜ್ಞಾನಿಗಳು ಲೆಕ್ಕ ಹಾಕಿದಾಗ ನಿರೀಕ್ಷಗಿಂತಲೂ ಆಘಾತಕಾರಿ ಅಂಶಗಳು ಗೋಚರಿಸಿದೆ. ದಕ್ಷಿಣದ ಮಹಾನಗರಗಳಾದ ಮುಂಬೈ, ಮಂಗಳೂರು ಸಮುದ್ರಕ್ಕೆ ಹತ್ತಿರದಲ್ಲಿದೆ. ಸಮುದ್ರದಲ್ಲಿ ಒಂದು ಮೀಟರ್ ನೀರು ಜಾಸ್ತಿಯಾದರೂ ಬಹಳಷ್ಟು ನಗರಗಳು ಮುಳುಗುತ್ತವೆ. ಈ ಕುರಿತು ವಿಶ್ವ ಸಂಸ್ಥೆ, ಜಾಗತಿಕ ಸಂಸ್ಥೆಗಳಲ್ಲಿ ತುಂಬ ಚರ್ಚೆಯಾಗಿದೆ.

ಸಮುದ್ರ ಒಮ್ಮೆ ಮುನ್ನುಗ್ಗಿದರೆ ಮತ್ತೆ ಹಿಂದಕ್ಕೆ ಬರಲಾರದು. ವಾತಾವರಣ, ಪ್ರಕೃತಿಯನ್ನು ಮನುಷ್ಯ ಕಾಪಾಡಿಕೊಳ್ಳದಿದ್ದರೆ ಮುಂದೆ ದೊಡ್ಡ ಅನಾಹುತ ಕಾದಿದೆ. ಈಗಾಗಲೆ ವಾತಾವರಣ ಇದ್ದಕ್ಕಿದ್ದಂತೆ ಅನಾಹುತಕಾರಿಯಾಗಿ ಬದಲಾಗುತ್ತಿದೆ. ಅತಿವೃಷ್ಟಿಯಾಗುತ್ತಿದೆ; ಮೇಘ ಸ್ಪೋಟದಿಂದ ನರೆಯೇರುತ್ತಿದೆ; ಸಮುದ್ರದ ನೀರು ತಂತಾನೆ ಉಕ್ಕಿ ಹರಿಯುವುದು, ಸುನಾಮಿ, ಸೈಕ್ಲೋನ್ ಅಪ್ಪಳಿಸುತ್ತಿರುವುದೆಲ್ಲ ವಾತಾವರಣ ಕಲುಷಿತಗೊಂಡಿರುವುದಕ್ಕೆ ಸಂಕೇತ ಎಂದು ವಾತಾವರಣದ ಅನಾಹುತ ವಿವರಿಸುವ ಪ್ರೊ.ರಾವ್, ಮನು ಕುಲ-ಜೀವ ಸಂಕುಲ ಉಳಿಯಬೇಕೆಂದರೆ ಪರಿಸರ ಸಂರಕ್ಷಣೆ ಆಗಲೇಬೇಕೆನ್ನುತ್ತಾರೆ.

ಜಾಗತಿಕ ತಾಪಮಾನ ಬದಲಾವಣೆಯಿಂದ ಹಿಮಾಲಯದ ನೀರ್ಗಲ್ಲುಗಳು ಕರಗುತ್ತಿವೆ; ಕಾರ್ಬನ್ ಡೈಆಕ್ಸೈಡ್‌ ಉಷ್ಣತೆ ಹೆಚ್ಚುತ್ತಿದೆ. ಉಷ್ಣತೆಯಿಂದ ನೀರಾವಿ ಹೆಚ್ಚುತ್ತದೆ. ನೀರಾವಿ ಏರಿಕೆಯಾದರೆ ಹಸಿರು ಮನೆ ಅನಿಲದ ಮೇಲೆ ಪರಿಣಾವಾಗುತ್ತದೆ. ದೇಶದ ಬೆನ್ನೆಲುಬಾದ ಕೃಷಿಯನ್ನು ನಿರ್ಧರಿಸುವ ಮಾನ್ಸೂನ್ ಮಾರುತದ ದಿಕ್ಕನ್ನೇ ತಪ್ಪಿಸಲಿದೆ ಜಾಗತಿಕ ತಾಪಮಾನ ಹೆಚ್ಚಳ. ಇದೆಲ್ಲದರ ಒಟ್ಟೂ ಪರಿಣಾಮವೇ ಹವಾಮಾನ ವೈಪರಿತ್ಯ. ಹೀಗಾಗಿ ಕಡಲಂಚಿನ ಹಲವು ನಗರಗಳು ಮುಳುಗುವ ಆತಂಕ ಎದುರಾಗಿದೆ ಎಂದು ವಿಜ್ಞಾನಿಗಳು ಎಚ್ಚರಿಕೆ ಕೊಟ್ಟಿದ್ದಾರೆ!


ಇದನ್ನೂ ಓದಿ: ಕಾಳಿ ನದಿ ಮೇಲೆ ಸಚಿವ ನಿರಾಣಿ ಸಹೋದರರ ಕಣ್ಣು!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್: ಐಟಿ ದಾಳಿ ಒತ್ತಡದಿಂದ ಆತ್ಮಹತ್ಯೆ ಶಂಕೆ

ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ (Confident Group) ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರು ಶುಕ್ರವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಕೇರಳ...

ಕಾಂಗ್ರೆಸ್ ಆಳ್ವಿಕೆಯಲ್ಲಿ ನುಸುಳಲುಕೋರರು ಬಹುಸಂಖ್ಯಾತರಾದರು; ನುಸುಳುಕೋರರಿಂದ ಅಸ್ಸಾಂ ರಕ್ಷಿಸಲು ಬಿಜೆಪಿಗೆ ಮತ ಹಾಕಿ: ಅಮಿತ್ ಶಾ

ಧೇಮಾಜಿ (ಅಸ್ಸಾಂ): ಕಾಂಗ್ರೆಸ್ ಆಳ್ವಿಕೆಯಲ್ಲಿ ಅಸ್ಸಾಂನ ಜನಸಂಖ್ಯಾಶಾಸ್ತ್ರ ಬದಲಾಗಿದೆ ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ , ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನೇತೃತ್ವದ ಸರ್ಕಾರ ಈ ಪ್ರವೃತ್ತಿಯನ್ನು...

ಕೊಲ್ಕತ್ತಾ ಅಗ್ನಿ ಅವಘಡ| ಈವರೆಗೆ ವಾವ್ ಮೊಮೋ ಕಂಪನಿ ಗೋದಾಮು ಸೇರಿದಂತೆ ಇತರೆಡೆ 21 ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯ  

ಜನವರಿ 26 ರ ಮುಂಜಾನೆ ಕೋಲ್ಕತ್ತಾದ ಆನಂದಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 21 ಕ್ಕೆ ಏರಿದ್ದು, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ.  ಬೆಂಕಿಯ ಅವಘಡದಲ್ಲಿ ಎರಡು ಗೋದಾಮುಗಳು...

ಮುಟ್ಟಿನ ಆರೋಗ್ಯ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ : ಸುಪ್ರೀಂ ಕೋರ್ಟ್

ಮುಟ್ಟಿನ ಆರೋಗ್ಯ ಸಂವಿಧಾನದ 21ನೇ ವಿಧಿಯಡಿ ಖಾತ್ರಿಪಡಿಸಿದ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ (ಜ.30) ಮಹತ್ವದ ತೀರ್ಪು ನೀಡಿದೆ. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಿ,...

ಅತ್ಯಾಚಾರ ಪ್ರಕರಣದಲ್ಲಿ ಎಸ್‌ಪಿ ನಾಯಕ ಮೊಯಿದ್ ಖಾನ್ ಖುಲಾಸೆ: ಬಂಧನದ ಎರಡು ವರ್ಷಗಳ ನಂತರ ಬುಲ್ಡೋಜರ್ ನಿಂದ ಮನೆ ಕೆಡವಿದ್ದ ಯೋಗಿ ಸರ್ಕಾರ

2024 ರಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಸಮಾಜವಾದಿ ಪಕ್ಷದ ನಾಯಕ ಮೊಯಿದ್ ಖಾನ್ ಅವರನ್ನು ಉತ್ತರ ಪ್ರದೇಶದ ಅಯೋಧ್ಯೆಯ ಪೋಕ್ಸೋ ನ್ಯಾಯಾಲಯವು ಖುಲಾಸೆಗೊಳಿಸಿದೆ.  ಅಪ್ರಾಪ್ತ ಬಾಲಕಿಯ ಮೇಲೆ ನಡೆದ...

ಸಿಎಂ ಸಿದ್ದರಾಮಯ್ಯ, ಡಿಕೆಶಿ ವಿರುದ್ಧ ‘ಸ್ಕ್ಯಾಮ್ ಲಾರ್ಡ್’ ಪೋಸ್ಟ್: ಕರ್ನಾಟಕ ಬಿಜೆಪಿ ಎಕ್ಸ್ ಹ್ಯಾಂಡಲ್ ವಿರುದ್ಧ ಪ್ರಕರಣ ದಾಖಲು

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಇತರ ಸಚಿವರನ್ನು ಗುರಿಯಾಗಿಸಿಕೊಂಡು "ಮಾನಹಾನಿಕರ" ಪೋಸ್ಟ್ ಪೋಸ್ಟ್ ಮಾಡಿದ್ದಕ್ಕಾಗಿ ಮತ್ತು ರಾಜ್ಯವನ್ನು "ಲೂಟಿ" ಮಾಡುವಲ್ಲಿ ಅವರು ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಬಿಜೆಪಿಯ 'ಎಕ್ಸ್'...

‘ನೀವು ಮುಂದೆ ಬರಲು ಸಿದ್ಧರಿದ್ದೀರಾ, ಅಥವಾ ಟ್ವೀಟ್ ಮಾಡುತ್ತಲೇ ಇರುತ್ತೀರಾ?’; ಮೋಹನ್ ದಾಸ್ ಪೈಗೆ ರಾಮಲಿಂಗಾರೆಡ್ಡಿ ಓಪನ್ ಚಾಲೆಂಜ್..!

ಬೆಂಗಳೂರಿನಲ್ಲಿ ಬಿಎಂಟಿಸಿ (BMTC) ಬಸ್‌ಗಳ ಕೊರತೆಯನ್ನು ಎತ್ತಿ, ಖಾಸಗಿ ಕಂಪನಿಗಳಿಗೆ ನಗರ ಬಸ್ ಸೇವೆಗೆ ಅವಕಾಶ ನೀಡಬೇಕು ಎಂದು ಸಲಹೆ ನೀಡಿದ್ದ, ಮೋಹನ್ ದಾಸ್ ಪೈ ಹೇಳಿಕೆಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ...

ಪ್ಯಾಲೆಸ್ತೀನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಣೆ; ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿಭಟಿಸಬೇಕು : ನಟ ಪ್ರಕಾಶ್ ರಾಜ್

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ಯಾಲೆಸ್ತೀನಿಯನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿರೋಧಿಸಬೇಕು, ಪ್ರತಿಭಟಿಸಬೇಕು ಎಂದು ನಟ ಪ್ರಕಾಶ್ ರಾಜ್ ಒತ್ತಾಯಿಸಿದರು. ಗುರುವಾರ (ಜ.29) ಸಂಜೆ...

ಗೌರಿ ಲಂಕೇಶರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ‘ಲ್ಯಾಂಡ್‍ ಲಾರ್ಡ್‌’ನಂತಹ ಸಿನಿಮಾ ಮಾಡಲು ಕೈ ಹಾಕಿದ್ದೇನೆ: ನಟ ದುನಿಯಾ ವಿಜಯ್

ಗೌರಿ ಲಂಕೇಶ್ ಹಾಗೂ ಇತರ ಹೋರಾಟಗಾರರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ನಾನು 'ಲ್ಯಾಂಡ್‍ಲಾರ್ಡ್' ನಂತಹ ಸಿನೆಮಾ ಮಾಡುವುದಕ್ಕೆ ಕೈ ಹಾಕಿದ್ದೇನೆ ಎಂದು ನಟ ದುನಿಯಾ ವಿಜಯ್ ಹೇಳಿದರು. ಗುರುವಾರ (ಜ.29) ಬೆಂಗಳೂರಿನ...

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...