Homeಮುಖಪುಟಏರುತ್ತಿರುವ ಜಾಗತಿಕ ತಾಪಮಾನ: ಈ ಶತಮಾನದ ಅಂತ್ಯದೊಳಗೆ ಮಂಗಳೂರು-ಮುಂಬೈ ಸಮುದ್ರ ಸಮಾಧಿ!

ಏರುತ್ತಿರುವ ಜಾಗತಿಕ ತಾಪಮಾನ: ಈ ಶತಮಾನದ ಅಂತ್ಯದೊಳಗೆ ಮಂಗಳೂರು-ಮುಂಬೈ ಸಮುದ್ರ ಸಮಾಧಿ!

- Advertisement -
- Advertisement -

ಒಂದೇ ಸಮನೆ ಏರಿಕೆಯಾಗುತ್ತಿರುವ ಜಾಗತಿಕ ತಾಪಮಾನ ಇನ್ನೊಂದು ದಶಕದಲ್ಲಿ ಅಂದಾಜು ಮಟ್ಟಕ್ಕಿಂತ ಹೆಚ್ಚಾಗಲಿದೆ. ಇದರಿಂದ ಪ್ರಕೃತಿ ವಿಕೋಪವಾಗಿ ಜೀವ ಜಾಲಕ್ಕೆ ಗಂಡಾಂತರ ಎದುರಾಗಲಿದೆಯೆಂದು ವಿಶ್ವ ಸಂಸ್ಥೆಯ ಹವಾಮಾನ ಬದಲಾವಣೆ ಕುರಿತ ವರದಿ ಆಘಾತಕಾರಿ ಎಚ್ಚರಿಕೆ ಈಚೆಗಷ್ಟೆ ನೀಡಿತ್ತು. ವಿಶ್ವ ಸಂಸ್ಥೆಯ ಈ ಸಮಿತಿ 1988ರಿಂದ 5-7 ವರ್ಷಕ್ಕೊಮ್ಮೆ ತಾಪಮಾನ ಏರಿಕೆ, ಹಸಿರು ಮನೆ ಅನಿಲ ಪರಿಣಾಮ, ಸಮುದ್ರ ಮಟ್ಟ, ಮಂಜು ಕರಗುವಿಕೆ ಬಗ್ಗೆ ವರದಿ ಕೊಡುತ್ತಿದೆ.

ವಿಶ್ವ ಸಂಸ್ಥೆಯ ಭೂ ತಾಪಮಾನದ ವರದಿ ಆಧರಿಸಿ ಅಮೆರಿಕಾದ ಬಾಹ್ಯಾಕಾಶ ಸಂಸ್ಥೆ ನಾಸಾ ಪ್ರಕಟಿಸಿರುವ ತನ್ನ 6ನೇ ಮೌಲ್ಯ ಮಾಪನ ವರದಿಯಲ್ಲಿ ಬೆಚ್ಚಿಬೀಳಿಸುವ ಸಂಗತಿಗಳಿವೆ! ಜಾಗತಿಕ ತಾಪಮಾನ ಏರು ಗತಿಯಲ್ಲಿರುವುದರಿಂದ ಸಮುದ್ರ ಮಟ್ಟದಲ್ಲೂ ದೊಡ್ಡ ಏರಿಕೆಯಾಗುತ್ತಿದೆ. ಹೀಗಾಗಿ ಕಡಲಂಚಿನ ಊರೂರುಗಳನ್ನು ಸಮುದ್ರ ಆಪೋಷನ ಪಡೆಯಲಿದೆ. ಭಾರತದ ಮಂಗಳೂರು, ಮುಂಬೈ, ಕೊಚ್ಚಿ, ವಿಶಾಖಪಟ್ಟಣಂ… ಮುಂತಾದ 12ಕ್ಕಿಂತ ಹೆಚ್ಚು ಮಹಾನಗರಗಳು 2100ರ ಒಳಗಾಗಿ ಸಮುದ್ರ ಪಾಲಾಗಲಿದೆಯೆಂದು ನಾಸಾ ಸ್ಪಷ್ಟವಾಗಿ ಹೇಳಿದೆ.

ಜಗತ್ತಿನಾದ್ಯಂತ ಸಮುದ್ರದಲ್ಲಾಗತ್ತಿರುವ ಏರುಪೇರಿನ ಆಧಾರದಲ್ಲಿ ವರದಿ ಸಿದ್ಧಪಡಿಸಿರುವ ನಾಸಾ, ಸಮುದ್ರದ ಈಗಿನ ಸ್ಥಿತಿ-ಗತಿ ಪ್ರಕಾರ ಸಮುದ್ರ ಏರಿದರೆ ಇನ್ನೆರಡು ಅಡಿ ಏರುತ್ತದೆ ಎಂದಿದೆ. ಶತಮಾನದ ಅಂತ್ಯದೊಳಗೆ ಇದು ಇನ್ನಷ್ಟು ತೀವ್ರಗೊಂಡರೆ 2100ರ ಕೊನೆಗೆ 3 ಅಡಿಯಷ್ಟು ಉಕ್ಕೇರುತ್ತದೆ. ಆಗ ಮಂಗಳೂರು, ಮಂಬೈ, ಮರ್ಮಗೋವಾ, ಕೊಚ್ಚಿ, ವಿಶಾಖಪಟ್ಟಣಂ, ಪಾರಾದೀಪ್, ಖದೀರ್ಪುರ್, ಚೆನ್ನೈ, ತೂತ್ತುಕುಡಿ, ಕಂಡ್ಲಾ, ಒಖಾ, ಭಾವನಗರ್ ಕಡಲಲ್ಲಿ ಕರಗಲಿವೆ ಎಂಬುದು ನಾಸಾ ಲೆಕ್ಕಾಚಾರವಾಗಿದೆ.

ಏಷ್ಯಾದ ಸುತ್ತಲಿನ ಸಮುದ್ರ ಮಟ್ಟವು ಜಾಗತಿಕ ಸರಾಸರಿ ದರಕ್ಕಿಂತ ವೇಗವಾಗಿ ಏರುತ್ತಿದೆ. ಈ ರೀತಿಯ ಸಮುದ್ರ ಮಟ್ಟ ಬದಲಾವಣೆ ಸಾಮನ್ಯವಾಗಿ 100 ವರ್ಷಕ್ಕೊಮ್ಮೆ ಆಗುತ್ತಿತ್ತು. ಇನ್ನು ಮುಂದೆ 2050ರ ತನಕ 6ರಿಂದ 9ವರ್ಷಕ್ಕೊಮ್ಮೆ ಸಂಭವಿಸಬಹುದು. 2006ರಿಂದ 2018ರ ತನಕ ನಡೆಸಿದ ಅಧ್ಯಯನ ಅಂದಾಜಿನಂತೆ ಸಮುದ್ರದ ಜಾಗತಿಕ ಸರಾಸರಿ ಮಟ್ಟ ಪ್ರತಿ ವರ್ಷ ಸುಮಾರು 3.7 ಮಿಲಿ ಮೀಟರ್ ನಷ್ಟು ಏರಿಕೆಯಾಗುತ್ತಿದೆ ಎಂದು ನಾಸಾ ಅಧ್ಯಯನ ವರದಿಯಲ್ಲಿ ಉಲ್ಲೇಖವಾಗಿದೆ.

ನಾಸಾ ಪ್ರಕಟಪಡಿಸಿರುವ ವರದಿಯಂತೆ ಕರ್ನಾಟಕದ ಬರಿ ಮಂಗಳೂರು ಮಾತ್ರವಲ್ಲ, ಕಡಲಂಚಿನ ಕಾರವಾರ, ಕುಮಟಾ, ಹೊನ್ನಾವರ, ಭಟ್ಕಳ ಮತ್ತು ಉಡುಪಿ ಜಿಲ್ಲೆಯ ಹಲವು ಪ್ರದೇಶಗಳು ಸಮುದ್ರದಲ್ಲಿ ಲೀನವಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ! ಸಾರ್ವಜನಿಕರಿಗಾಗಿ ನಾಸಾ ಸ್ಥಳೀಯ ಸಮುದ್ರ ಮಟ್ಟವನ್ನು ತಿಳಿಯುವ ಆನ್‌ಲೈನ್ ಸಾಧನ ಕಂಡುಹಿಡಿದಿದೆ. 2020 ರಿಂದ 2150ರ ಒಳಗಿನ ದಶಕಗಳನ್ನು ಆಯ್ದುಕೊಂಡು ನಮಗೆ ಬೇಕಾದ ಪ್ರದೇಶದ ಸಮುದ್ರ ಮಟ್ಟ ತಿಳಿಯಬಹುದಾಗಿದೆ. ಮಾಹಿತಿಯನ್ನು ಡೌನ್ಲೋಡ್ ಮಾಡಿಕೊಳ್ಳ ಬಹುದಾಗಿದೆ.

ಮಂಗಳೂರಿನ ಸಮುದ್ರ ಮಟ್ಟ 2100ರ ಒಳಗೆ 1.87 ಅಡಿ ಏರಿಕೆಯಾಗಲಿದೆಯೆಂಬ ಎಚ್ಚರಿಕೆ ಕೊಟ್ಟಿದೆ. ಅಂದರೆ ಕಡಲು ಕ್ರಮೇಣ ಮಂಗಳೂರನ್ನು ಕಬಳಿಸಲಿದೆ ಎಂದರ್ಥ. ನಾಸಾ ವಿಜ್ಞಾನಿಗಳ ಮುಳುಗಡೆ ವರದಿ ಬಗ್ಗೆ ನಾನಾ ನಮೂನೆಯ ಜಿಜ್ಞಾಸೆ ಶುರುವಾಗಿದೆ. ಇದೆಲ್ಲ ಬರಿ ಸುಳ್ಳು; ಹಿಂದೆ ಜಗತ್ತೆ ಮುಳುಗುತ್ತದೆಂದು ಬೊಬ್ಬೆ ಎಬ್ಬಿಸಲಾಗಿತ್ತಲ್ಲ ಹಾಗೇ ಇದೆಂಬ ಅಭಿಪಾಯ ವ್ಯಕ್ತವಾಗುತ್ತಿದೆ. ಈ ಬಗ್ಗೆ ಟ್ರೋಲ್‌ಗಳೂ ನಡೆದಿದೆ. ಇನ್ನೊಂದೆಡೆ ನಾಸಾ ವಿಜ್ಞಾನಿಗಳೇಕೆ ಸುಳ್ಳು ಹೇಳುತ್ತಾರೆ; ಇಂಥ ಗಂಭೀರ ವಿಷಯ ಆಳವಾದ ಅಧ್ಯಯನವಿಲ್ಲದೆ ಹೇಳಲು ಸಾಧ್ಯವೇ ಇಲ್ಲ; ನಾಸಾ ವಿಜ್ಞಾನಿಗಳ ಅಭಿಪ್ರಾಯ ಕರಾರುವಾಕ್ ಆಗಿದೆ ಎನ್ನುವ ಚರ್ಚೆ ನಡೆದಿದೆ.

ನಾಸಾ ವಿಜ್ಞಾನಿಗಳು ಕೊಟ್ಟಿರುವ ಮಾಹಿತಿ ಸರಿಯಾದದ್ದು; ಮುಂದಿನ ದಿನಗಳ ಸಂಭವನೀಯ ಘಟನೆ ಎಂದು ಮಂಗಳೂರಿನ ಪಿಲಿಕುಳ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ-ಸಂಶೋಧಕ ಪ್ರೊ.ಕೆವಿ.ರಾವ್ ಹೇಳುತ್ತಾರೆ. ನಿತ್ಯ ನಗರೀಕರಣ, ಕಾರ್ಖಾನೆಗಳ ಹೆಚ್ಚಳವೇ ಮುಂತಾದ ಕಾರಣದಿಂದ ಜಾಗತಿಕ ಮಾಲಿನ್ಯ ವಿಪರೀತವಾಗುತ್ತಿದೆ. ಇದೇ ಗತಿಯಲ್ಲಿ ಮಾಲಿನ್ಯ ಹೆಚ್ಚಳವಾದರೆ ಮನುಷ್ಯನ ಕೈತಪ್ಪಿ ಜಗತ್ತಿನ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು ಅಷ್ಟು ಸುಲಭವಲ್ಲವೆಂದು ಪ್ರೊ.ರಾವ್ ಅಭಿಪ್ರಾಯ.

ಪ್ರೊ.ಕೆವಿ.ರಾವ್

ಪ್ರಕೃತಿ ನಮಗೆ ಆಕ್ಸಿಜನ್, ನೈಟ್ರೋಜನ್ ಮತ್ತಿತರ ಅನಿಲವನ್ನು ಸಾಕಷ್ಟು ನೀಡುತ್ತಿದೆ. ಪ್ರಕೃತಿ ನೀಡಿರುವ ಪೂರಕ ವಾತಾವರಣವನ್ನು ನಾವೇ ಹಾಳುಮಾಡುತ್ತಿದ್ದೇವೆ; ಕಾಡು ನಾಶವಾಗಿ ನಗರಗಳಾಗಿವೆ; ಇದರಿಂದ ಜಾಗತಿಕ ತಾಪಮಾನ ಹದಗೆಟ್ಟಿ ಪರಿಸರ ಸಂರಕ್ಷಿಸದೇ ಇರುವುದರಿಂದ ಸಾಗರದ ಹಿಮ ಗಡ್ಡೆಗಳು ನಿರೀಕ್ಷೆಗಿಂತ ವೇಗವಾಗಿ ಕರಗುತ್ತಿವೆ. ನಮ್ಮ ಸುತ್ತಲಿನ ಜಾಗವನ್ನು ಕಾಳಜಿಯಿಂದ ಕಾಪಾಡಿಕೊಳ್ಳದಿದ್ದರೆ ವಾತಾವರಣದ ಉಷ್ಣತೆ ಏರಿಕೆಯಾಗಿ ನೀರ್ಗಲ್ಲುಗಳು ಕರಗಿ ಸಮುದ್ರ ಉಕ್ಕೇರುವುದು ಸಹಜ ಪ್ರಕ್ರಿಯೆ; ಆಗ ಕಡಲ ತಡಿಯ ಪ್ರದೇಶ ಸಮುದ್ರದ ಪಾಲಾಗುತ್ತದೆ. ಇದನ್ನೆ ನಾಸಾ ಅಧ್ಯಯನದ ಮೂಲಕ ತಿಳಿಸಿದೆಯೆಂದು ಪ್ರೊ.ರಾವ್ ಹೇಳಿದ್ದಾರೆ.

ಹಾಲಿ ವೇಗದಲ್ಲೇ ನೀರ್ಗಲ್ಲುಗಳು ಕರಗುತ್ತ ಹೋದರೆ ಸಮಸ್ಯೆ ಏನಾಗಬಹುದೆಂದು ನಾಸಾ ವಿಜ್ಞಾನಿಗಳು ಲೆಕ್ಕ ಹಾಕಿದಾಗ ನಿರೀಕ್ಷಗಿಂತಲೂ ಆಘಾತಕಾರಿ ಅಂಶಗಳು ಗೋಚರಿಸಿದೆ. ದಕ್ಷಿಣದ ಮಹಾನಗರಗಳಾದ ಮುಂಬೈ, ಮಂಗಳೂರು ಸಮುದ್ರಕ್ಕೆ ಹತ್ತಿರದಲ್ಲಿದೆ. ಸಮುದ್ರದಲ್ಲಿ ಒಂದು ಮೀಟರ್ ನೀರು ಜಾಸ್ತಿಯಾದರೂ ಬಹಳಷ್ಟು ನಗರಗಳು ಮುಳುಗುತ್ತವೆ. ಈ ಕುರಿತು ವಿಶ್ವ ಸಂಸ್ಥೆ, ಜಾಗತಿಕ ಸಂಸ್ಥೆಗಳಲ್ಲಿ ತುಂಬ ಚರ್ಚೆಯಾಗಿದೆ.

ಸಮುದ್ರ ಒಮ್ಮೆ ಮುನ್ನುಗ್ಗಿದರೆ ಮತ್ತೆ ಹಿಂದಕ್ಕೆ ಬರಲಾರದು. ವಾತಾವರಣ, ಪ್ರಕೃತಿಯನ್ನು ಮನುಷ್ಯ ಕಾಪಾಡಿಕೊಳ್ಳದಿದ್ದರೆ ಮುಂದೆ ದೊಡ್ಡ ಅನಾಹುತ ಕಾದಿದೆ. ಈಗಾಗಲೆ ವಾತಾವರಣ ಇದ್ದಕ್ಕಿದ್ದಂತೆ ಅನಾಹುತಕಾರಿಯಾಗಿ ಬದಲಾಗುತ್ತಿದೆ. ಅತಿವೃಷ್ಟಿಯಾಗುತ್ತಿದೆ; ಮೇಘ ಸ್ಪೋಟದಿಂದ ನರೆಯೇರುತ್ತಿದೆ; ಸಮುದ್ರದ ನೀರು ತಂತಾನೆ ಉಕ್ಕಿ ಹರಿಯುವುದು, ಸುನಾಮಿ, ಸೈಕ್ಲೋನ್ ಅಪ್ಪಳಿಸುತ್ತಿರುವುದೆಲ್ಲ ವಾತಾವರಣ ಕಲುಷಿತಗೊಂಡಿರುವುದಕ್ಕೆ ಸಂಕೇತ ಎಂದು ವಾತಾವರಣದ ಅನಾಹುತ ವಿವರಿಸುವ ಪ್ರೊ.ರಾವ್, ಮನು ಕುಲ-ಜೀವ ಸಂಕುಲ ಉಳಿಯಬೇಕೆಂದರೆ ಪರಿಸರ ಸಂರಕ್ಷಣೆ ಆಗಲೇಬೇಕೆನ್ನುತ್ತಾರೆ.

ಜಾಗತಿಕ ತಾಪಮಾನ ಬದಲಾವಣೆಯಿಂದ ಹಿಮಾಲಯದ ನೀರ್ಗಲ್ಲುಗಳು ಕರಗುತ್ತಿವೆ; ಕಾರ್ಬನ್ ಡೈಆಕ್ಸೈಡ್‌ ಉಷ್ಣತೆ ಹೆಚ್ಚುತ್ತಿದೆ. ಉಷ್ಣತೆಯಿಂದ ನೀರಾವಿ ಹೆಚ್ಚುತ್ತದೆ. ನೀರಾವಿ ಏರಿಕೆಯಾದರೆ ಹಸಿರು ಮನೆ ಅನಿಲದ ಮೇಲೆ ಪರಿಣಾವಾಗುತ್ತದೆ. ದೇಶದ ಬೆನ್ನೆಲುಬಾದ ಕೃಷಿಯನ್ನು ನಿರ್ಧರಿಸುವ ಮಾನ್ಸೂನ್ ಮಾರುತದ ದಿಕ್ಕನ್ನೇ ತಪ್ಪಿಸಲಿದೆ ಜಾಗತಿಕ ತಾಪಮಾನ ಹೆಚ್ಚಳ. ಇದೆಲ್ಲದರ ಒಟ್ಟೂ ಪರಿಣಾಮವೇ ಹವಾಮಾನ ವೈಪರಿತ್ಯ. ಹೀಗಾಗಿ ಕಡಲಂಚಿನ ಹಲವು ನಗರಗಳು ಮುಳುಗುವ ಆತಂಕ ಎದುರಾಗಿದೆ ಎಂದು ವಿಜ್ಞಾನಿಗಳು ಎಚ್ಚರಿಕೆ ಕೊಟ್ಟಿದ್ದಾರೆ!


ಇದನ್ನೂ ಓದಿ: ಕಾಳಿ ನದಿ ಮೇಲೆ ಸಚಿವ ನಿರಾಣಿ ಸಹೋದರರ ಕಣ್ಣು!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...