Homeಅಂಕಣಗಳುರೈತ ಪ್ರತಿಭಟನೆಯಲ್ಲಿ ಪಂಜಾಬಿನ ರೈತ ಕೂಲಿಯಾಳುಗಳ ಕತೆ

ರೈತ ಪ್ರತಿಭಟನೆಯಲ್ಲಿ ಪಂಜಾಬಿನ ರೈತ ಕೂಲಿಯಾಳುಗಳ ಕತೆ

’ಹೊಲಗಳೇ ಇಲ್ದಿದ್ರೆ ನಮ್ಮಂಥ ಕೂಲಿ ಮಾಡೋರು ಹೊಟ್ಟೆ ಬಟ್ಟೆಗೆ ಏನ್ಮಾಡಬೇಕು... ರೈತನಿಗೆ ನಷ್ಟ ಆದ್ರೆ ನಮ್ಗೆ ಕೂಲಿ ಹೆಂಗೆ ಕೊಟ್ಟಾನು... ಈ ಹೋರಾಟಾನ ನಾವು ಒಗ್ಗಟ್ಟಾಗಿ ಮಾಡ್ಬೇಕು’ ಎನ್ನುತ್ತಾರೆ ದೆಹಲಿ ಗಡಿಗಳಲ್ಲಿ ರೈತ ಪ್ರತಿಭಟನೆಗಳಲ್ಲಿ ಭಾಗವಹಿಸಿರುವ ಕೃಷಿ ಕೂಲಿ ಕಾರ್ಮಿಕ ದೇವ್‌ಸಿಂಗ್.

- Advertisement -
- Advertisement -

ದೆಹಲಿ ಗಡಿಗಳ ರೈತ ಪ್ರತಿಭಟನೆಯ ಬೆನ್ನುಮೂಳೆ ಪಂಜಾಬಿನ ರೈತರು. ಆರ್ಥಿಕವಾಗಿ ಬಹುತೇಕ ಬಲಾಢ್ಯರು. ಮೋದಿ-ಶಾ ಅವರಂತಹ ಪ್ರಚಂಡ ಜೋಡಿಗೆ ಸವಾಲೆಸೆದು ನೆಲಕಚ್ಚಿ ನಿಂತು ವರ್ಷಗಳ ಹೋರಾಟಕ್ಕೆ ತಯಾರೆಂದು ತೊಡೆ ತಟ್ಟಿರುವವರು. ಇವರ ಈ ಧಾರಣಾ ಶಕ್ತಿಯ ಬೆನ್ನುಮೂಳೆಯ ಹಿಂದೆ, ದಲಿತ ಕೂಲಿ ಕಾರ್ಮಿಕರ ಬೆವರಿದೆ.

’ಹೊಲಗಳೇ ಇಲ್ದಿದ್ರೆ ನಮ್ಮಂಥ ಕೂಲಿ ಮಾಡೋರು ಹೊಟ್ಟೆ ಬಟ್ಟೆಗೆ ಏನ್ಮಾಡಬೇಕು… ರೈತನಿಗೆ ನಷ್ಟ ಆದ್ರೆ ನಮ್ಗೆ ಕೂಲಿ ಹೆಂಗೆ ಕೊಟ್ಟಾನು… ಈ ಹೋರಾಟಾನ ನಾವು ಒಗ್ಗಟ್ಟಾಗಿ ಮಾಡ್ಬೇಕು’ ಎನ್ನುತ್ತಾರೆ ದೆಹಲಿ ಗಡಿಗಳಲ್ಲಿ ರೈತ ಪ್ರತಿಭಟನೆಗಳಲ್ಲಿ ಭಾಗವಹಿಸಿರುವ ಕೃಷಿ ಕೂಲಿ ಕಾರ್ಮಿಕ ದೇವ್‌ಸಿಂಗ್. ’ತಾಸಿಗೆ ಮೂರು ರುಪಾಯಿ ಕೂಲಿ ಕೊಡ್ತಿದ್ರು. ಈಗ ದಿನಕ್ಕೆ 300 ರುಪಾಯಿ. ಕನಿಷ್ಠ ಪಕ್ಷ ಹನ್ನೆರಡು ತಾಸು ದುಡೀತೀವಿ’ ಎನ್ನುತ್ತಾರೆ ಅವರು. ಫಾಜಿಲ್ಕಾ ಜಿಲ್ಲೆಯ ದೇವ್ ಸಿಂಗ್ ಅವರ ವಯಸ್ಸು 65. ಇಬ್ಬರು ಮಕ್ಕಳು. ಅವರೂ ಕೂಲಿ ಆಳುಗಳು. ಮಜಹಬಿ ಸಿಖ್ ಎಂದು ಕರೆಯಲಾಗುವ ದಲಿತನೀತ. ಪಂಜಾಬಿನ ಬಹುತೇಕ ಕೃಷಿ ಕೂಲಿ ಕಾರ್ಮಿಕರು ದಲಿತರು.

ಪಂಜಾಬಿನ ಸಮೃದ್ಧ ಸುಗ್ಗಿಗಳ ಹಿಂದೆ ಈ ಶ್ರಮಜೀವಿಗಳು ಬಸಿದ ಬೆವರೇ ಬಂಗಾರ. ರೈತರ ದನಗಳನ್ನು ಮೇಯಿಸುವುದರಿಂದ ಹಿಡಿದು, ಉಳುಮೆ, ಬಿತ್ತನೆ, ಕಟಾವು, ಒಕ್ಕುವುದೇ ಮುಂತಾದ ರೈತ ಕುಟುಂಬವೊಂದರ ಎಲ್ಲ ಕೆಲಸಗಳನ್ನೂ ಮಾಡುವವರು ಇವರು.

ಹರಿಯಾಣ-ದೆಹಲಿ ಗಡಿ ಪ್ರದೇಶದ ರೋಹ್ತಕ್ ಹೆದ್ದಾರಿಯಲ್ಲಿ ಮೈಲುಗಳುದ್ದಕ್ಕೆ ಟ್ರ್ಯಾಕ್ಟರು- ಟ್ರಾಲಿಗಳಲ್ಲಿ ಬೀಡುಬಿಟ್ಟಿರುವ ತಮ್ಮ ರೈತ ಧಣಿಗಳ ಜೊತೆಗೆ ಕೃಷಿ ಕೂಲಿಕಾರರೂ ದೊಡ್ಡ ಸಂಖ್ಯೆಯಲ್ಲಿ ಕೈಜೋಡಿಸಿ ನೆರವಾಗಿದ್ದಾರೆ.

ಕೂಲಿ ಮಾಡಿ ನಾಲ್ವರು ಸದಸ್ಯರ ಕುಟುಂಬವನ್ನು ಸಲಹುವ ಹೆಣ್ಣುಮಗಳು ತಾಝಾ ಬೇಗಮ್. ಲಕ್ವಾ ಬಡಿದು 14 ವರ್ಷಗಳ ಹಿಂದೆ ಕಾಲು ಕಳೆದುಕೊಂಡ ಗಂಡ. ಜಡ್ಡು ಜಾಪತ್ತು ಮದುವೆ ಮುಂಜಿಗಳಿಗೆ ದುಡ್ಡು ಬೇಕೆಂದರೆ ಧಣಿಯ ಮುಂದೆ ಕೈ ಚಾಚಬೇಕು. ಕೊಟ್ಟರೆ ಉಂಟು, ಕೊಡದಿದ್ದರೆ ಇಲ್ಲ. ಬೇಗಮ್‌ಳ ಪತಿ ತೋತಾ ಖಾನ್ ಲಕ್ವ ಹೊಡೆವ ಮುನ್ನ ಜಮೀನುದಾರನೊಬ್ಬನ ಬಳಿ 32 ವರ್ಷಗಳ ಕಾಲ ದುಡಿದಿದ್ದ. ಮುಲಾಜಿಲ್ಲದೆ ಆತನನ್ನು ಹೊರದಬ್ಬಿದ್ದ ಧಣಿ. ಬರಬೇಕಿದ್ದ ಹಳೆಯ ಬಾಕಿಯನ್ನೂ ಕೊಡಲಿಲ್ಲ.

ಈ ಕೂಲಿ ಕಾರ್ಮಿಕರಲ್ಲಿ ಬಹುತೇಕರು ಅಂದು ದುಡಿದು ಅಂದು ಉಣ್ಣಬೇಕಿರುವ ದುರ್ಗತಿಯಲ್ಲಿ ಬದುಕುತ್ತಿರುವವರು. ಅವರ ಜೀವನೋಪಾಯಕ್ಕೆ ಸಂಚಕಾರ ಬಂದಿದೆಯೆಂದು ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ. ಭೂಮಿಗಾಗಿ ದಲಿತರು ನಡೆಸಿರುವ ಹೋರಾಟದಲ್ಲಿ ಜಮೀನುದಾರರೊಂದಿಗೆ ಮುಖಾಮುಖಿಯಾಗಿರುವುದು ಹೌದು. ಈ ಮುಖಾಮುಖಿಗಳು ಹಿಂಸೆಗೆ ತಿರುಗಿರುವುದೂ ಉಂಟು. ಸಾಮಾಜಿಕ ಬಹಿಷ್ಕಾರವನ್ನೂ ದಲಿತ ಕೂಲಿಕಾರರು ಎದುರಿಸಿರುವುದೂ ನಿಜ. ದಲಿತ ಕೂಲಿಕಾರ ಸಂಘಗಳು ಭೂಮಿಹೀನ ದಲಿತರ ಬೆನ್ನಿಗೆ ನಿಂತಿವೆ. ಆದರೆ ಹೊಸ ಕೃಷಿ ಕಾನೂನುಗಳನ್ನು ಒಗ್ಗಟ್ಟಿನಿಂದ ಎದುರಿಸುವ ಅಗತ್ಯವನ್ನು ಈ ಸಂಘಗಳು ಮನಗಂಡಿವೆ. ಹೀಗಾಗಿ ಅವರೆಲ್ಲರೂ ಈ ಪ್ರತಿಭಟನೆಯಲ್ಲಿ ಭಾಗವಹಿಸಿವೆ ಎನ್ನುತ್ತಾರೆ ಸಾಕ್ಷ್ಯಚಿತ್ರ ನಿರ್ಮಾಪಕ ರಣದೀಪ್ ಮದ್ದೊಕೆ. ಮದ್ದೊಕೆ ಖುದ್ದು ಭೂಮಿಹೀನ ದಲಿತ ಕುಟುಂಬದಿಂದ ಬಂದವರು.

PC : OpIndia

ಪಂಜಾಬಿನ ಭೂಮಿಹೀನ ಬಡವರ ಕಷ್ಟ ಕಣ್ಣೀರುಗಳ ಕುರಿತು ಮದ್ದೊಕೆ ನಿರ್ಮಿಸಿರುವ ಸಾಕ್ಷ್ಯಚಿತ್ರ ‘Landle’ ಧಗಧಗಿಸುವ ಸತ್ಯವನ್ನು ಅನಾವರಣಗೊಳಿಸುತ್ತದೆ.

ದೇಶದಲ್ಲಿ ಅತಿಹೆಚ್ಚು ಶೇಕಡವಾರು ದಲಿತರನ್ನು ಹೊಂದಿರುವ ರಾಜ್ಯ ಪಂಜಾಬ್ ಎಂಬ ಸಂಗತಿ ಬಹಳ ಮಂದಿಗೆ ತಿಳಿದಿರಲಾರದು. 2011ನೆಯ ಜನಗಣತಿ ಪ್ರಕಾರ ಈ ರಾಜ್ಯದ ಜನರ ಪೈಕಿ ದಲಿತರ ಪ್ರಮಾಣ ಶೇ.31.94ರಷ್ಟು. ಕಳೆದ ಒಂಭತ್ತು ವರ್ಷಗಳಲ್ಲಿ ಈ ಪ್ರಮಾಣ ಇನ್ನಷ್ಟು ಹೆಚ್ಚಿದ್ದೀತೇ ವಿನಾ ಕಮ್ಮಿಯಾಗಿರುವುದಿಲ್ಲ. ಇಷ್ಟು ದೊಡ್ಡ ಪ್ರಮಾಣದಲ್ಲಿದ್ದರೂ ರಾಜ್ಯಾಧಿಕಾರ ಇವರಿಗೆ ದಕ್ಕಿಲ್ಲ. ನಾನಾ ಜಾತಿಗಳು ಮತ್ತು ಒಳಪಂಗಡಗಳಲ್ಲಿ ಹಂಚಿಹೋಗಿರುವ ದಲಿತರಿಗೆ ಅಧಿಕಾರ ಹಗಲುಗನಸು. ಮುಖ್ಯಮಂತ್ರಿ ಹುದ್ದೆ ಎಂದಿದ್ದರೂ ಶೇ.20ರಷ್ಟಿರುವ ಜಾಟ್ ಸಿಖ್ಖರ ಪಾಲು.

ಮುಕ್ಕಾಲು ಪಾಲು ದಲಿತರು ಗ್ರಾಮೀಣವಾಸಿಗಳು. ಜಾಟ್ ಸಿಖ್ಖರ ಹೊಲಗದ್ದೆಗಳಲ್ಲಿ ಕೂಲಿ ಮಾಡಿ ಅನ್ನ ಸಂಪಾದಿಸುವವರು. ಕೃಷಿಗೆ ಯಂತ್ರಗಳು ಕಾಲಿಟ್ಟ ನಂತರ ಈ ಕೂಲಿ ಕೆಲಸವೂ ಕೈತಪ್ಪಿದೆ. ಜಮೀನಿನ ಒಡೆತನ ಇವರ ಪಾಲಿಗೆ ಗಗನಕುಸುಮ. ಮಲ ಬಳಿವ ದಲಿತರ ಸಂಖ್ಯೆಯಲ್ಲಿ ದೇಶದಲ್ಲೇ ಐದನೆಯ ಸ್ಥಾನ ಪಂಜಾಬಿನದು. ದಲಿತರ ಮೇಲೆ ದಮನ ದೌರ್ಜನ್ಯಗಳು ನಿರಂತರ.

ಪಂಜಾಬಿನಲ್ಲಿ ಕೂಡ ದಲಿತರ ಕೇರಿಗಳು ಊರಿನ ಅಂಚಿಗಿರುತ್ತವೆ. ಪಶ್ಚಿಮ ದಿಕ್ಕಿಗಿರುವುದು ವಾಡಿಕೆ. ಮುಂಜಾನೆಯ ಸೂರ್ಯನ ಕಿರಣಗಳು ಮೇಲ್ಜಾತಿಗಳ ಕೇರಿಗಳ ಮೇಲೆ ಬೀಳುವ ಮುನ್ನ ಅಸ್ಪೃಶ್ಯರ ಹಟ್ಟಿಗಳನ್ನು ತಾಕಿ ಮೈಲಿಗೆ ಆಗದಂತೆ ವಹಿಸಿರುವ ಎಚ್ಚರಿಕೆ. ಚರಂಡಿಯ ರೊಜ್ಜು ಕೂಡ ಪೂರ್ವದ ಎತ್ತರದಿಂದ ಪಶ್ಚಿಮದ ತಗ್ಗಿನುದ್ದಕ್ಕೆ ಚಾಚಿ ಹರಿಯಬೇಕು.

ಇಂತಹ ಅಸೀಮ ತಾರತಮ್ಯದ ಬಲಿಪಶುಗಳು ತಮ್ಮ ಶೋಷಕನನ್ನು ಬೆಂಬಲಿಸಿ ಪ್ರತಿಭಟನೆಯಲ್ಲಿ ಭಾಗವಹಿಸಿರುವ ಬಗೆಯನ್ನು ಏನೆಂದು ಬಣ್ಣಿಸಲು ಬಂದೀತು?


ಇದನ್ನೂ ಓದಿ: ರೈತರ ಕೈಯಲ್ಲಿರುವ ರೊಟ್ಟಿಯನ್ನು ಕಿತ್ತುಕೊಳ್ಳಬೇಡಿ: ಭಾವನಾತ್ಮಕ ಟ್ವೀಟ್ ಮಾಡಿದ ರೈತ ಒಕ್ಕೂಟ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಚುನಾವಣಾ ಸಮಯದಲ್ಲಿ ಉಚಿತ ಕೊಡುಗೆಗಳ ಪ್ರವೃತ್ತಿ ಪ್ರಶ್ನಿಸಿದ ಸುಪ್ರೀಂ ಕೋರ್ಟ್

ರಾಜಕೀಯ ಪಕ್ಷಗಳು ಮತ್ತು ರಾಜ್ಯ ಸರ್ಕಾರಗಳು ಚುನಾವಣೆಗೆ ಮುನ್ನ "ಉಚಿತ ಕೊಡುಗೆಗಳ" ಜಾಹೀರಾತು ನೀಡುವ ಅಭ್ಯಾಸ ಹೆಚ್ಚುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಗುರುವಾರ ಬಲವಾದ ಮೌಖಿಕ ಅವಲೋಕನಗಳನ್ನು ನೀಡಿದೆ. ವಿದ್ಯುತ್ (ತಿದ್ದುಪಡಿ) ನಿಯಮಗಳು, 2024...

ರಾಹುಲ್ ಗಾಂಧಿಗೆ ಕರ್ಣಿ ಸೇನೆಯಿಂದ ಜೀವ ಬೆದರಿಕೆ: ಬಿಜೆಪಿ-ಆರ್‌ಎಸ್‌ಎಸ್ ಜಾಲವೇ ‘ಗೋಡ್ಸೆ ಕಾರ್ಖಾನೆ’ ಎಂದ ಕಾಂಗ್ರೆಸ್

ನವದೆಹಲಿ: ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿರುದ್ಧ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಕರ್ಣಿ ಸೇನೆ ಜೀವ ಬೆದರಿಕೆ ಹಾಕಿದ್ದು, ಇದು "ಏಕಾಂಗಿ ಸ್ಫೋಟವಲ್ಲ"...

ಬಿಹಾರ| ವಿಧಾನಸಭೆಯಲ್ಲಿ ‘ತಂಬಾಕು’ ತಿಂದ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ

ಬಿಹಾರ ವಿಧಾನಸಭೆಯ ಬಜೆಟ್ ಅಧಿವೇಶನದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬಳಿಕ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ವಿಡಿಯೋದಲ್ಲಿ, ಉಪಮುಖ್ಯಮಂತ್ರಿ ಹಾಗೂ ಹಿರಿಯ ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ ಕಲಾಪದ ಸಮಯದಲ್ಲಿ ವಸ್ತುವೊಂದನ್ನು...

‘ಬೆದರಿಕೆ, ಚಿತ್ರಹಿಂಸೆ, ಅತ್ಯಾಚಾರ ‘: ಇಸ್ರೇಲ್‌ ಜೈಲಿನ ದೌರ್ಜನ್ಯ ಬಿಚ್ಚಿಟ್ಟ ಪ್ಯಾಲೆಸ್ತೀನ್ ಪತ್ರಕರ್ತರು

ಇಸ್ರೇಲ್ ಜೈಲುಗಳಲ್ಲಿ ಬಂಧಿತರಾಗಿರುವ ಪ್ಯಾಲೆಸ್ತೀನ್ ಪತ್ರಕರ್ತರು ತೀವ್ರವಾದ ದೌರ್ಜನ್ಯಗಳನ್ನು ಎದುರಿಸುತ್ತಿದ್ದಾರೆ ಎಂದು ಅಂತಾರಾಷ್ಟ್ರೀಯ ಪತ್ರಕರ್ತರ ರಕ್ಷಣಾ ಸಮಿತಿ (ಸಿಪಿಜೆ) ಹೇಳಿದೆ. ಬಂಧನದಿಂದ ಬಿಡುಗಡೆಯಾಗಿರುವ ಪತ್ರಕರ್ತರನ್ನು ಸಂದರ್ಶಿಸಿರುವ ಸಿಪಿಜೆ, ಜೈಲಿನಲ್ಲಿರುವ ಪತ್ರಕರ್ತರು ನಿರಂತರವಾಗಿ ದೈಹಿಕ...

ಪಾಕಿಸ್ತಾನದ ಕರಾಚಿಯಲ್ಲಿ ಶಂಕಿತ ಅನಿಲ ಸೋರಿಕೆ: ಮಕ್ಕಳು ಸೇರಿದಂತೆ 16 ಮಂದಿ ಸಾವು

ಕರಾಚಿ: ಪಾಕಿಸ್ತಾನದ ಕರಾಚಿಯಲ್ಲಿ ಗುರುವಾರ ಬೆಳಿಗ್ಗೆ ವಸತಿ ಕಟ್ಟಡವೊಂದರಲ್ಲಿ ಶಂಕಿತ ಅನಿಲ ಸೋರಿಕೆಯಿಂದಾಗಿ ಸ್ಫೋಟ ಸಂಭವಿಸಿ, ಮಕ್ಕಳು ಸೇರಿದಂತೆ ಕನಿಷ್ಠ 16 ಜನರು ಸಾವನ್ನಪ್ಪಿದ್ದು, 14 ಜನರು ಗಾಯಗೊಂಡಿದ್ದಾರೆ. "ಓಲ್ಡ್ ಸೋಲ್ಜರ್ ಬಜಾರ್...

ಮಹಾರಾಷ್ಟ್ರ| 10 ದಿನಗಳ ಮಗುವಿನೊಂದಿಗೆ 12 ನೇ ತರಗತಿ ಪರೀಕ್ಷೆ ಬರೆದ ಮಹಿಳೆ

ಮಹಾರಾಷ್ಟ್ರದ ನಾಂದೇಡ್ ನಗರದಲ್ಲಿ 12 ನೇ ತರಗತಿಯ ಮಹಾರಾಷ್ಟ್ರ ಬೋರ್ಡ್ ಪರೀಕ್ಷೆಗೆ ಹಾಜರಾದ ಮಹಿಳೆಯೊಬ್ಬರು ತನ್ನ 10 ದಿನಗಳ ಮಗುವನ್ನು ಪರೀಕ್ಷಾ ಕೇಂದ್ರಕ್ಕೆ ಕರೆತಂದಿದ್ದಾರೆ. ಮಹಿಳೆ ಪರೀಕ್ಷೆ ಬರೆಯುವ ಕಾರಣಕ್ಕೆ ಕೇಂದ್ರದ ವಿಶೇಷ...

ಒಡಿಶಾ| ದಲಿತರು ವಾಸಿಸುವ ಪ್ರದೇಶಕ್ಕೆ ಕುಡಿಯುವ ನೀರು-ವಿದ್ಯುತ್ ಸಂಪರ್ಕ ಕಡಿತ

ಒಡಿಶಾದ ಬಲಂಗೀರ್ ಜಿಲ್ಲೆಯಲ್ಲಿ ಜಾತಿ ಆಧಾರಿತ ತಾರತಮ್ಯವಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ. ಆದರೆ, ಗ್ರಾಮದ ಅಧಿಕಾರಿಯೊಬ್ಬರು ಈ ಅಡಚಣೆಗೆ ಸ್ಥಳೀಯ ಕಲಹ ಕಾರಣ ಎಂದು ಆರೋಪಿಸಿದ್ದಾರೆ. ಜಿಲ್ಲೆಯ ತುರೆಕೆಲಾ ಬ್ಲಾಕ್‌ನ ಡುಮೆರ್ಚುವಾನ್ ಗ್ರಾಮದಲ್ಲಿ...

ತಮಿಳುನಾಡು ವಿಧಾನಸಭಾ ಚುನಾವಣೆ: ಡಿಎಂಕೆ ನೇತೃತ್ವದ ಮೈತ್ರಿಕೂಟಕ್ಕೆ ಡಿಎಂಡಿಕೆ ಸೇರ್ಪಡೆ

ಚೆನ್ನೈ: ದಿವಂಗತ ನಟ ವಿಜಯಕಾಂತ್ ಅವರ ದೇಶೀಯ ಮುರ್ಪೋಕ್ಕು ದ್ರಾವಿಡ ಕಳಗಂ (ಡಿಎಂಡಿಕೆ) ಗುರುವಾರ ದ್ರಾವಿಡ ಮುನ್ನೇತ್ರ ಕಳಗಂ ನೇತೃತ್ವದ ಜಾತ್ಯತೀತ ಪ್ರಗತಿಪರ ಒಕ್ಕೂಟ (ಎಸ್‌ಪಿಎ)ವನ್ನು 21ವರ್ಷಗಳ ಅಸ್ತಿತ್ವದ ನಂತರ ಮೊದಲ ಬಾರಿಗೆ...

ಟ್ರಕ್ ಚಾಲಕ ರಸ್ತೆಯಲ್ಲಿ ನಮಾಝ್ ಮಾಡಿದ್ದರಿಂದ ಟ್ರಾಫಿಕ್ ಜಾಮ್ ಎಂದು ಸುಳ್ಳು ಸುದ್ದಿ ಪ್ರಸಾರ : ಝೀ ನ್ಯೂಸ್‌ಗೆ 1 ಲಕ್ಷ ರೂ. ದಂಡ

ಮುಸ್ಲಿಂ ವ್ಯಕ್ತಿಯೊಬ್ಬರು ನಮಾಝ್ ಮಾಡಲು ಹೆದ್ದಾರಿ ಮಧ್ಯೆ ಟ್ರಕ್‌ ನಿಲ್ಲಿಸಿದ್ದರಿಂದ ಟ್ರಾಫಿಕ್ ಜಾಮ್‌ ಉಂಟಾಗಿದೆ ಎಂದು ಸುಳ್ಳು ಸುದ್ದಿ ಹಬ್ಬಿದ ಝೀ ನ್ಯೂಸ್‌ ಚಾನೆಲ್‌ಗೆ ಸುದ್ದಿ ಪ್ರಸಾರಕರು ಮತ್ತು ಡಿಜಿಟಲ್ ಮಾನದಂಡಗಳ ಪ್ರಾಧಿಕಾರ(ಎನ್‌ಬಿಡಿಎಸ್‌ಎ)...

ಗುಜರಾತ್‌| ಜಾತಿ ಆಧಾರಿತ ಜಗಳದಲ್ಲಿ ದಲಿತ ಯುವಕನ ಮೇಲೆ ಚಾಕುವಿನಿಂದ ದಾಳಿ

ಶನಿವಾರ ತಡರಾತ್ರಿ ರಾಣಿಪ್‌ನಲ್ಲಿ ನಡೆದ ಸಣ್ಣ ಭಿನ್ನಾಭಿಪ್ರಾಯವೊಂದು ಹಿಂಸಾಚಾರಕ್ಕೆ ತಿರುಗಿದ್ದು, 25 ವರ್ಷದ ದಲಿತ ಯುವಕ ಸಾಹಿಲ್ ವಘೇಲಾ ಮೇಲೆ ಚಾಕುವಿನಿಂದ ಹಲ್ಲೆ ನಡೆಸಲಾಗಿದೆ. ಯುವಕ ಗಂಭೀರವಾಗಿ ಗಾಯಗೊಂಡಿದ್ದು, ಘಟನೆಯು ಈ ಪ್ರದೇಶದಲ್ಲಿ...