Homeಅಂಕಣಗಳುಸೋಷಿಯಲ್ ಮೀಡಿಯಾದಲ್ಲಿ ಪ್ರಚಾರ ಮಾಡೋ ಭಕುತರಿಗೆ ತಿಂಗಳಿಗೆ 25 ಸಾವಿರ ಭಕ್ಷೀಸು!

ಸೋಷಿಯಲ್ ಮೀಡಿಯಾದಲ್ಲಿ ಪ್ರಚಾರ ಮಾಡೋ ಭಕುತರಿಗೆ ತಿಂಗಳಿಗೆ 25 ಸಾವಿರ ಭಕ್ಷೀಸು!

- Advertisement -
- Advertisement -

ಕೇಳುಗರಿಗೆಲ್ಲ ವೀರ ನಮಸ್ಕಾರಗಳು, ಇದೀಗ ನೀವು ಕೇಳುತ್ತಿದ್ದೀರಿ ಆಘಾತವಾಣಿ, ಓದುತ್ತಿರುವವರು ನಿಮ್ಮ ಪ್ರೀತಿಯ ಅಟ್ಯಾಕ್ ಹನ್ಮಂತು. ಬನ್ನಿ ಈ ವಾರದ ಸುದ್ದಿಗಳೇನೇನಿವೆ ಎಂದು ನೋಡೋಣ.
ಶಿವಮೊಗ್ಗದ ಹೊಸನಗರ ಕಡೆಯ ದನ ಕಾಯೋ ಅಂಕಲ್ ಕೌಬಾಯ್ ಸ್ವಾಮಿಯ ಬಗ್ಗೆ ಒಂದು ಆಘಾತಕಾರಿ ಸುದ್ದಿ ಬಂದಿದೆ. ಊರಲ್ಲಿ ಓಡಾಡೋ ಬೀಡಾಡಿ ದನಹಸುಗಳನ್ನು ಎಳೆದೊಯ್ದು ‘ಕೌ ಸ್ಕೂಲ್’ನೊಳಗೆ ಕೂಡಿ ಹಾಕಿ ದಂಧೆ ನಡೆಸುತ್ತಿದ್ದ ಈ ಕೌಬಾಯ್ ಸ್ವಾಮಿ ಮುಸುಡಿಗೆ ಹೈಕೋರ್ಟ್ ಬಕ್ ಬಕ್ ಎಂದು ಗುದ್ದಿದೆ. ಧಡಿಯೂರಪ್ಪನ ಕಾಲದಲ್ಲಿ ಗೋಕರ್ಣದ ದೇವಸ್ಥಾನವನ್ನು ತನ್ನ ಮಠದ ವಶಕ್ಕೆ ಪಡೆದಿದ್ದ ಕೌಬಾಯ್ ಕಳ್ಳನ ಕೋತಿಮುಷ್ಠಿಯಿಂದ ದೇವಸ್ಥಾನವನ್ನು ಕಿತ್ತು, ಸಾರ್ವಜನಿಕರ ಸಮಿತಿಯ ಮಂಡಳಿಗೆ ಒಪ್ಪಿಸಲಾಗಿದೆ. ಇಲ್ಲೀತನಕ ‘ಕೌ ಸ್ಕೂಲ್’ನ ಹಸುಗಳ ಹಾಲು-ಬೆಣ್ಣೆ ತುಪ್ಪ ಮಜ್ಜಿಗೆ-ಮೊಸರನ್ನು ಕನ್ಸೆಷನ್ ರೇಟಿಗೆ ಮಾರಿಕೊಂಡು, ಏಕಾಂತ ಸೇವೆಯಂಥ ‘ಅಡಲ್ಟ್ ಓನ್ಲಿ’ ಮಿಡ್ ನೈಟ್ ಚಟುವಟಿಕೆಗಳಲ್ಲಿ ಕಾಲೆತ್ತಿಕೊಂಡು ಆನಂದವಾಗಿದ್ದ ರಸಿಕರರಾಜ ಕೌಬಾಯ್ ಸ್ವಾಮಿಗೆ ಇದರಿಂದಾಗಿ ರಕ್ತವಾಂತಿಯಾದಷ್ಟು ನೋವುಂಟಾಗಿದೆ ಎಂದು ಮೂಲಗಳು ತಿಳಿಸಿವೆ. ಗೋಕರ್ಣ ದೇವಳದಿಂದ ಬರುತ್ತಿದ್ದ ಲಕ್ಷ ಲಕ್ಷ ಆದಾಯಕ್ಕೆ ಹೈಕೋರ್ಟ್ ಆದೇಶವು ಮಣ್ಣು ಸುರಿದಿರುವುದರಿಂದ ಇನ್ನು ಮುಂದೆ ‘ಕೌಸ್ಕೂಲ್’ ಬ್ಯುಸಿನೆಸ್ಸಿನಲ್ಲಿ ಸಿಗುತ್ತಿದ್ದ ಪುಡಿಗಾಸೇ ಗಟ್ಟಿ ಎಂದು ಖಾತ್ರಿಯಾಗುತ್ತಿದ್ದಂತೆ ಕೌಬಾಯ್ ಮುಸುಡಿ ಕಿವುಚಿಕೊಂಡು ತಲೆಮೇಲೆ ಕೈಹೊತ್ತು ಕುಳಿತಿದ್ದಾನಂತೆ. ಕೌಬಾಯ್ ಕಳ್ಳನ ಈ ಭೀಭತ್ಸ ಮುಖಾರವಿಂದವನ್ನು ನೋಡಿದ ಪೂಜೆಗೆಂದು ಬಂದ ಭಕ್ತರು, ಸ್ವಾಮಿಗೆ ಯಾವುದೋ ಆಫ್ರಿಕನ್ ದೆವ್ವ ಮೆಟ್ಟಿಕೊಂಡಿರಬೇಕೆಂದು ಭಯಗೊಂಡು ಕೇರಳ ಪಂಡಿತರನ್ನು ಕರೆತರಲು ದೌಡಾಯಿಸಿದ್ದಾರೆಂದು ನಂಬಲನರ್ಹ ಮೂಲಗಳು ತಿಳಿಸಿವೆ.

**********

ಕೇಂದ್ರ ಸರ್ಕಾರದ “ರನ್ನಿಂಗ್ ಇನ್ ದಿ ಫಾರಿನ್, ರನ್ ರನ್ ರನ್’ ಯೋಜನೆಯ ಲಾಭ ಪಡೆದ ಬ್ಯಾಂಕ್ ವಂಚಕರು ಸರ್ಕಾರಿ ಬ್ಯಾಂಕುಗಳಿಗೆ ಸಾವಿರಾರು ಕೋಟಿ ಉಂಡೆ ನಾಮ ತಿಕ್ಕಿ ಕಂಡ ಕಂಡ ದೇಶಗಳಿಗೆ ಓಡಿ ಹೋಗಿರುವುದು ಹಳೆಯ ವಿಷಯ. ಇಂಥಹ ವಂಚಕರನ್ನು, ಜಟಕಾಗಾಡಿ ಹತ್ತಿಕೊಂಡು ದೇಶದೇಶಗಳಿಗೆ ಪರ್ಯಟನೆ ಮಾಡಿ ಹಿಡಿದು ತರುತ್ತೇನೆಂದು ಬೊಗಳಿದ್ದ ಹಾಫ್‍ಮೆಂಟ್ಲು ಪಕೋಡೇಂದ್ರನು ಆನಂತರ ಮುಖ ಮತ್ತು ಇನ್ನೊಂದಕ್ಕೆ ಬ್ಯಾಂಡೇಜ್ ಹಾಕ್ಕೊಂಡು ಮಲಗಿರುವುದು ಸಹ ಹಳೇ ವಿಷಯ. ಹೊಸ ವಿಷಯ ಏನಪ್ಪ ಅಂತಂದ್ರೆ.. ಹೀಗೆ ಸರ್ಕಾರಿ ಬ್ಯಾಂಕುಗಳಿಗೆ ವಂಚಿಸಿ ಓಡಿಹೋದವರಲ್ಲಿ ಅಗ್ರಗಣ್ಯನಾದ ವಿಜಯ್ ಮಲ್ಯ, ತನ್ನ ಲಂಡನ್ ಮನೆಯಲ್ಲಿ ಕಕ್ಕ ಮಾಡಲು ಚಿನ್ನದ ಟಾಯ್ಲೆಟ್ ಕಮೋಡ್ ಕಟ್ಟಿಸಿಕೊಂಡಿರುವುದು ಬಯಲಾಗಿದೆ. ಒಬ್ಬರ ಹಿಂದೊಬ್ಬರು 28 ಮಂದಿ ಬ್ಯಾಂಕ್ ವಂಚಕರು ದೇಶ ಬಿಟ್ಟು ಓಡಿಹೋಗಿ ಹೀಗೆ ರಾಜಾಧಿರಾಜರಂತೆ ಎಂಜಾಯ್ ಮಾಡಿಕೊಂಡು ತಿರುಗುತ್ತಿದ್ದರೂ ಬ್ಲೂಜೆಪಿ ಪಕ್ಷದ ದ್ವೇಷಭಕ್ತ ಶಿಖಾಮಣಿಗಳು ಕಣ್ಣಿಗೆ ಲಕ್ವ ಹೊಡೆದವರಂತೆ ಸುಮ್ಮನಿರುವುದು ಆಶ್ಚರ್ಯವೇ ಸರಿ. ಪಕೋಡೇಂದ್ರನ ಫಾರಿನ್ ತೆವಲು ಹುಚ್ಚುಗೆದರಿ ದೇಶ ದೇಶ ಓತ್ಲಾ ಹೊಡೆಯುವಾಗ ಈ ವಂಚಕರಿರುವ ದೇಶಗಳಿಗೆಲ್ಲ ಹೋಗಿ ಬಂದರೂ ಇವರನ್ನು ಹಿಡಿದು ತರುವ ಬದಲು ತನ್ನ ‘ದೋಸ್ತಾನ ದೋಸ್ತ್’ಗಳಾದ ಅಂಬಾನಿ-ಆದಾನಿಗಳಿಗೆ ಆ ದೇಶಗಳಲ್ಲಿ ಬ್ಯುಸಿನೆಸ್ ಕಾಂಟ್ರಾಕ್ಟ್ ಕೊಡಿಸೋ ಅಡಿಕೆಮಂಡಿಯ ಕಮಿಷನ್ ಏಜೆಂಟ್ ದಲ್ಲಾಳಿಯಂತೆ ವರ್ತಿಸುತ್ತಿದ್ದಾನೆಂದು ಶ್ರಮಜೀವಿ ರೈತರು ಕ್ಯಾಕರಿಸಿ ಉಗಿಯುತ್ತಿದ್ದಾರೆಂದು ನಮ್ಮ ಬಾತ್ಮೀದಾರರು ವರದಿ ಮಾಡಿದ್ದಾರೆ.

**********

ಉತ್ತರಪ್ರದೇಶದ ಬೋಳುಮಂಡೆ ‘ಕುಂಗ್ ಫೂ ಮಾಂಕ್’ ಭೋಗಿ ಅನಿಷ್ಠನಾಥ್ ತನ್ನ ಆಡಳಿತಾವಧಿಯ ಅಭಿವೃದ್ಧಿ ಕೆಲಸಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಪ್ರಚಾರ ಮಾಡುವವರಿಗೆ ತಿಂಗಳಿಗೆ 25 ಸಾವಿರ ರೂಪಾಯಿ ಸಂಬಳ ಕೊಡೋದಾಗಿ ಪ್ರಕಟಿಸಿದ್ದಾರೆ. ಇದೇ ಕೆಲಸಕ್ಕೆಂದು ರಾಜ್ಯ ಸರ್ಕಾರದಡಿಯಿರುವ ವಾರ್ತಾ ಮತ್ತು ಪ್ರಚಾರ ಇಲಾಖೆಯವರು ಮಾಡೋ ಕೆಲಸ ಬಿಟ್ಟು ಯಾವ ದೊಡ್ಡಮೋರಿಗೆ ಕೇಸರಿ ಪೇಂಟ್ ಹೊಡೆಯಲು ಹೋಗಿದ್ದಾರೆಂದು ಜನರು ಪ್ರಶ್ನಿಸುತ್ತಿದ್ದಾರೆ. ಇರಲಿ, ಈ ಬಗ್ಗೆ ಅನಿಷ್ಠನಾಥನ ಅಭಿವೃದ್ಧಿಗಳನ್ನು ಪಟ್ಟಿ ಮಾಡುವುದಾದರೆ ಅವು ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಯಾರಿಗೂ ಹೊಳೆಯದ ತಲೆಕೆಟ್ಟ ಐಡಿಯಾಗಳೇ ಎಂಬುದು ಅರಿವಾಗುತ್ತದೆ. ಉತ್ತರಪ್ರದೇಶದ ರೋಡು, ಮೋರಿ, ಟಾಯ್ಲೆಟ್, ಸರ್ಕಾರಿ ಕಚೇರಿ, ಕಾರು ಬಸ್ಸು, ಸೈಕಲ್ ಆಟೋರಿಕ್ಷಾಗಳು… ಹೀಗೆ ಅನಿಷ್ಠನಾಥನ ಬುರುಡೆಯೊಂದನ್ನು ಬಿಟ್ಟು ಮಿಕ್ಕೆಲ್ಲದ್ದಕ್ಕೂ ಕೇಸರಿ ಪೇಂಟ್ ಹೊಡೆಯಲಾಗಿದೆ. ಸೆಗಣಿ ತಿಂದ್ರೆ ಗಂಡು ಮಗುವಾಗುತ್ತೆ, ಸೆಗಣಿ ಶಾಂಪೂನಲ್ಲಿ ತಲೆಸ್ನಾನ ಮಾಡಿದ್ರೆ ತಲೆಗೂದಲು ಸೊಂಪಾಗಿ ಬೆಳೆಯುತ್ತೆ, ದನದ ಉಚ್ಚೆ ಕುಡಿದರೆ ಸರ್ವರೋಗಗಳೂ ನಿವಾರಣೆಯಾಗುತ್ತೆ, ಸೆಗಣಿ ಸೋಪು, ಸೆಗಣಿ ಬಿಸ್ಕತ್ತು, ಸೆಗಣಿ ಸೊಳ್ಳೆಬತ್ತಿ, ಸೆಗಣಿ ನೆಲ ಕ್ಲೀನರ್.. ಇಂಥಹ ಲೂಸ್ ಸಂಶೋಧನೆ ನಡೆಸಿದ ಅಡ್ನಾಡಿ ಸನಾತನ ಪೀಡೆಗಳಿಗೆ ಪ್ರೋತ್ಸಾಹ ಕೊಡಲಾಗಿದೆ. ರಾಜ್ಯದಲ್ಲಿ ಯಾರು ಯಾರನ್ನು ಬೇಕಾದರೂ ಗುಂಪು ಕಟ್ಟಿಕೊಂಡು ಹೊಡೆದು ಕೊಲ್ಲಲು ಸರ್ಕಾರದಿಂದಲೇ ಅನಧಿಕೃತ ಅನುಮತಿ ನೀಡಲಾಗಿದೆ. ಸಾಯುತ್ತಿರೋ ಮನುಷ್ಯರಿಗೆ ಆಸ್ಪತ್ರೆ ಕಟ್ಟಿಸಲು, ಆಕ್ಸಿಜನ್ ಇಲ್ಲದೆ ಸತ್ತ ಸಾವಿರಾರು ಎಳೆಕಂದಮ್ಮಗಳಿಗೆ ಆಕ್ಸಿಜನ್ ವ್ಯವಸ್ಥೆ ಮಾಡಲು ಯೋಗ್ಯತೆಯಿಲ್ಲದಿದ್ದರೂ ಬೀಡಾಡಿ ದನಗಳಿಗೆ ಆಂಬ್ಯುಲೆನ್ಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಉಳಿದಂತೆ ಉತ್ತರಪ್ರದೇಶದ ಗ್ರಾಮೀಣಭಾಗವನ್ನು ಕ್ರಿಸ್ತಪೂರ್ವದಲ್ಲೇ ಬಾಕಿ ಉಳಿಸಲಾಗಿದೆ.. ಹೀಗೆ ಹೇಳುತ್ತ ಹೋದರೆ ಪಕೋಡಪ್ಪನ ಸುಳ್ಳುಗಳಂತೆ ಬೆಳೆಯುತ್ತ ಹೋಗುವ ಈ ತರುಕಲಾಂಡಿ ಕೆಲಸಗಳೇ ಭೋಗಿ ಅನಿಷ್ಠನಾಥನ ಅಭಿವೃದ್ಧಿಗಳೆಂದು ಸರ್ಕಾರದ ವರದಿಗಳೇ ಹೇಳುತ್ತಿವೆ. ವಸ್ತುಸ್ಥಿತಿ ಹೀಗಿರುವಾಗ ತಿಂಗಳಿಗೆ 25 ಸಾವಿರ ಸಂಬಳ ಕೊಟ್ಟು ತನ್ನ ಪಕ್ಷದ ‘ಬೇ ರೋಜ್ಗಾರ್ ಅಬ್ಬೇಪಾರಿಗಳಿಗೆ’ ಪುಗ್ಸಟ್ಟೆ ಸಂಬಳದ ವ್ಯವಸ್ಥೆ ಮಾಡ್ತಿರೋ ಅನಿಷ್ಠನಾಥ.. ಅದಕ್ಕೆ ಬೇಕಾದ ದುಡ್ಡನ್ನು ಸರ್ಕಾರಿ ಬೊಕ್ಕಸದಿಂದ ಕೊಡುತ್ತಾನೋ ಅಥವ ಅವನಪ್ಪನ ಮನೆಯೊಳಗೆ ಪ್ರಿಂಟು ಮಾಡಿ ತಂದು ಹಂಚುತ್ತಾನಾ ಎಂಬ ಬಗ್ಗೆ ಜನರಲ್ಲಿ ತೀವ್ರ ಜಿಜ್ಞಾಸೆ ಹುಟ್ಟಿಕೊಂಡಿದೆ.
ಇಲ್ಲಿಗೆ ವಾರ್ತಾಪ್ರಸಾರ ಮುಕ್ತಾಯವಾಯಿತು. ಮತ್ತೊಂದಷ್ಟು ಆಘಾತಕಾರಿ ನ್ಯೂಸುಗಳ ಸಮೇತ ಮತ್ತೆ ಭೇಟಿಯಾಗೋಣ. ಅಲ್ಲೀತನಕ ನಮಗೂ ನಿಮಗೂ ಅಟ್ಟೆ ಮಟ್ಟೆ ಕೋಳಿ ಮಟ್ಟೆ ವಾರದ್ ತನಕ ಮಾತಾಡ್ಸಲ್ಲ ಠೂ ಬಳೆ. ಧನ್ಯವಾದಗಳು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...