Homeಅಂಕಣಗಳುಸೋಷಿಯಲ್ ಮೀಡಿಯಾದಲ್ಲಿ ಪ್ರಚಾರ ಮಾಡೋ ಭಕುತರಿಗೆ ತಿಂಗಳಿಗೆ 25 ಸಾವಿರ ಭಕ್ಷೀಸು!

ಸೋಷಿಯಲ್ ಮೀಡಿಯಾದಲ್ಲಿ ಪ್ರಚಾರ ಮಾಡೋ ಭಕುತರಿಗೆ ತಿಂಗಳಿಗೆ 25 ಸಾವಿರ ಭಕ್ಷೀಸು!

- Advertisement -
- Advertisement -

ಕೇಳುಗರಿಗೆಲ್ಲ ವೀರ ನಮಸ್ಕಾರಗಳು, ಇದೀಗ ನೀವು ಕೇಳುತ್ತಿದ್ದೀರಿ ಆಘಾತವಾಣಿ, ಓದುತ್ತಿರುವವರು ನಿಮ್ಮ ಪ್ರೀತಿಯ ಅಟ್ಯಾಕ್ ಹನ್ಮಂತು. ಬನ್ನಿ ಈ ವಾರದ ಸುದ್ದಿಗಳೇನೇನಿವೆ ಎಂದು ನೋಡೋಣ.
ಶಿವಮೊಗ್ಗದ ಹೊಸನಗರ ಕಡೆಯ ದನ ಕಾಯೋ ಅಂಕಲ್ ಕೌಬಾಯ್ ಸ್ವಾಮಿಯ ಬಗ್ಗೆ ಒಂದು ಆಘಾತಕಾರಿ ಸುದ್ದಿ ಬಂದಿದೆ. ಊರಲ್ಲಿ ಓಡಾಡೋ ಬೀಡಾಡಿ ದನಹಸುಗಳನ್ನು ಎಳೆದೊಯ್ದು ‘ಕೌ ಸ್ಕೂಲ್’ನೊಳಗೆ ಕೂಡಿ ಹಾಕಿ ದಂಧೆ ನಡೆಸುತ್ತಿದ್ದ ಈ ಕೌಬಾಯ್ ಸ್ವಾಮಿ ಮುಸುಡಿಗೆ ಹೈಕೋರ್ಟ್ ಬಕ್ ಬಕ್ ಎಂದು ಗುದ್ದಿದೆ. ಧಡಿಯೂರಪ್ಪನ ಕಾಲದಲ್ಲಿ ಗೋಕರ್ಣದ ದೇವಸ್ಥಾನವನ್ನು ತನ್ನ ಮಠದ ವಶಕ್ಕೆ ಪಡೆದಿದ್ದ ಕೌಬಾಯ್ ಕಳ್ಳನ ಕೋತಿಮುಷ್ಠಿಯಿಂದ ದೇವಸ್ಥಾನವನ್ನು ಕಿತ್ತು, ಸಾರ್ವಜನಿಕರ ಸಮಿತಿಯ ಮಂಡಳಿಗೆ ಒಪ್ಪಿಸಲಾಗಿದೆ. ಇಲ್ಲೀತನಕ ‘ಕೌ ಸ್ಕೂಲ್’ನ ಹಸುಗಳ ಹಾಲು-ಬೆಣ್ಣೆ ತುಪ್ಪ ಮಜ್ಜಿಗೆ-ಮೊಸರನ್ನು ಕನ್ಸೆಷನ್ ರೇಟಿಗೆ ಮಾರಿಕೊಂಡು, ಏಕಾಂತ ಸೇವೆಯಂಥ ‘ಅಡಲ್ಟ್ ಓನ್ಲಿ’ ಮಿಡ್ ನೈಟ್ ಚಟುವಟಿಕೆಗಳಲ್ಲಿ ಕಾಲೆತ್ತಿಕೊಂಡು ಆನಂದವಾಗಿದ್ದ ರಸಿಕರರಾಜ ಕೌಬಾಯ್ ಸ್ವಾಮಿಗೆ ಇದರಿಂದಾಗಿ ರಕ್ತವಾಂತಿಯಾದಷ್ಟು ನೋವುಂಟಾಗಿದೆ ಎಂದು ಮೂಲಗಳು ತಿಳಿಸಿವೆ. ಗೋಕರ್ಣ ದೇವಳದಿಂದ ಬರುತ್ತಿದ್ದ ಲಕ್ಷ ಲಕ್ಷ ಆದಾಯಕ್ಕೆ ಹೈಕೋರ್ಟ್ ಆದೇಶವು ಮಣ್ಣು ಸುರಿದಿರುವುದರಿಂದ ಇನ್ನು ಮುಂದೆ ‘ಕೌಸ್ಕೂಲ್’ ಬ್ಯುಸಿನೆಸ್ಸಿನಲ್ಲಿ ಸಿಗುತ್ತಿದ್ದ ಪುಡಿಗಾಸೇ ಗಟ್ಟಿ ಎಂದು ಖಾತ್ರಿಯಾಗುತ್ತಿದ್ದಂತೆ ಕೌಬಾಯ್ ಮುಸುಡಿ ಕಿವುಚಿಕೊಂಡು ತಲೆಮೇಲೆ ಕೈಹೊತ್ತು ಕುಳಿತಿದ್ದಾನಂತೆ. ಕೌಬಾಯ್ ಕಳ್ಳನ ಈ ಭೀಭತ್ಸ ಮುಖಾರವಿಂದವನ್ನು ನೋಡಿದ ಪೂಜೆಗೆಂದು ಬಂದ ಭಕ್ತರು, ಸ್ವಾಮಿಗೆ ಯಾವುದೋ ಆಫ್ರಿಕನ್ ದೆವ್ವ ಮೆಟ್ಟಿಕೊಂಡಿರಬೇಕೆಂದು ಭಯಗೊಂಡು ಕೇರಳ ಪಂಡಿತರನ್ನು ಕರೆತರಲು ದೌಡಾಯಿಸಿದ್ದಾರೆಂದು ನಂಬಲನರ್ಹ ಮೂಲಗಳು ತಿಳಿಸಿವೆ.

**********

ಕೇಂದ್ರ ಸರ್ಕಾರದ “ರನ್ನಿಂಗ್ ಇನ್ ದಿ ಫಾರಿನ್, ರನ್ ರನ್ ರನ್’ ಯೋಜನೆಯ ಲಾಭ ಪಡೆದ ಬ್ಯಾಂಕ್ ವಂಚಕರು ಸರ್ಕಾರಿ ಬ್ಯಾಂಕುಗಳಿಗೆ ಸಾವಿರಾರು ಕೋಟಿ ಉಂಡೆ ನಾಮ ತಿಕ್ಕಿ ಕಂಡ ಕಂಡ ದೇಶಗಳಿಗೆ ಓಡಿ ಹೋಗಿರುವುದು ಹಳೆಯ ವಿಷಯ. ಇಂಥಹ ವಂಚಕರನ್ನು, ಜಟಕಾಗಾಡಿ ಹತ್ತಿಕೊಂಡು ದೇಶದೇಶಗಳಿಗೆ ಪರ್ಯಟನೆ ಮಾಡಿ ಹಿಡಿದು ತರುತ್ತೇನೆಂದು ಬೊಗಳಿದ್ದ ಹಾಫ್‍ಮೆಂಟ್ಲು ಪಕೋಡೇಂದ್ರನು ಆನಂತರ ಮುಖ ಮತ್ತು ಇನ್ನೊಂದಕ್ಕೆ ಬ್ಯಾಂಡೇಜ್ ಹಾಕ್ಕೊಂಡು ಮಲಗಿರುವುದು ಸಹ ಹಳೇ ವಿಷಯ. ಹೊಸ ವಿಷಯ ಏನಪ್ಪ ಅಂತಂದ್ರೆ.. ಹೀಗೆ ಸರ್ಕಾರಿ ಬ್ಯಾಂಕುಗಳಿಗೆ ವಂಚಿಸಿ ಓಡಿಹೋದವರಲ್ಲಿ ಅಗ್ರಗಣ್ಯನಾದ ವಿಜಯ್ ಮಲ್ಯ, ತನ್ನ ಲಂಡನ್ ಮನೆಯಲ್ಲಿ ಕಕ್ಕ ಮಾಡಲು ಚಿನ್ನದ ಟಾಯ್ಲೆಟ್ ಕಮೋಡ್ ಕಟ್ಟಿಸಿಕೊಂಡಿರುವುದು ಬಯಲಾಗಿದೆ. ಒಬ್ಬರ ಹಿಂದೊಬ್ಬರು 28 ಮಂದಿ ಬ್ಯಾಂಕ್ ವಂಚಕರು ದೇಶ ಬಿಟ್ಟು ಓಡಿಹೋಗಿ ಹೀಗೆ ರಾಜಾಧಿರಾಜರಂತೆ ಎಂಜಾಯ್ ಮಾಡಿಕೊಂಡು ತಿರುಗುತ್ತಿದ್ದರೂ ಬ್ಲೂಜೆಪಿ ಪಕ್ಷದ ದ್ವೇಷಭಕ್ತ ಶಿಖಾಮಣಿಗಳು ಕಣ್ಣಿಗೆ ಲಕ್ವ ಹೊಡೆದವರಂತೆ ಸುಮ್ಮನಿರುವುದು ಆಶ್ಚರ್ಯವೇ ಸರಿ. ಪಕೋಡೇಂದ್ರನ ಫಾರಿನ್ ತೆವಲು ಹುಚ್ಚುಗೆದರಿ ದೇಶ ದೇಶ ಓತ್ಲಾ ಹೊಡೆಯುವಾಗ ಈ ವಂಚಕರಿರುವ ದೇಶಗಳಿಗೆಲ್ಲ ಹೋಗಿ ಬಂದರೂ ಇವರನ್ನು ಹಿಡಿದು ತರುವ ಬದಲು ತನ್ನ ‘ದೋಸ್ತಾನ ದೋಸ್ತ್’ಗಳಾದ ಅಂಬಾನಿ-ಆದಾನಿಗಳಿಗೆ ಆ ದೇಶಗಳಲ್ಲಿ ಬ್ಯುಸಿನೆಸ್ ಕಾಂಟ್ರಾಕ್ಟ್ ಕೊಡಿಸೋ ಅಡಿಕೆಮಂಡಿಯ ಕಮಿಷನ್ ಏಜೆಂಟ್ ದಲ್ಲಾಳಿಯಂತೆ ವರ್ತಿಸುತ್ತಿದ್ದಾನೆಂದು ಶ್ರಮಜೀವಿ ರೈತರು ಕ್ಯಾಕರಿಸಿ ಉಗಿಯುತ್ತಿದ್ದಾರೆಂದು ನಮ್ಮ ಬಾತ್ಮೀದಾರರು ವರದಿ ಮಾಡಿದ್ದಾರೆ.

**********

ಉತ್ತರಪ್ರದೇಶದ ಬೋಳುಮಂಡೆ ‘ಕುಂಗ್ ಫೂ ಮಾಂಕ್’ ಭೋಗಿ ಅನಿಷ್ಠನಾಥ್ ತನ್ನ ಆಡಳಿತಾವಧಿಯ ಅಭಿವೃದ್ಧಿ ಕೆಲಸಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಪ್ರಚಾರ ಮಾಡುವವರಿಗೆ ತಿಂಗಳಿಗೆ 25 ಸಾವಿರ ರೂಪಾಯಿ ಸಂಬಳ ಕೊಡೋದಾಗಿ ಪ್ರಕಟಿಸಿದ್ದಾರೆ. ಇದೇ ಕೆಲಸಕ್ಕೆಂದು ರಾಜ್ಯ ಸರ್ಕಾರದಡಿಯಿರುವ ವಾರ್ತಾ ಮತ್ತು ಪ್ರಚಾರ ಇಲಾಖೆಯವರು ಮಾಡೋ ಕೆಲಸ ಬಿಟ್ಟು ಯಾವ ದೊಡ್ಡಮೋರಿಗೆ ಕೇಸರಿ ಪೇಂಟ್ ಹೊಡೆಯಲು ಹೋಗಿದ್ದಾರೆಂದು ಜನರು ಪ್ರಶ್ನಿಸುತ್ತಿದ್ದಾರೆ. ಇರಲಿ, ಈ ಬಗ್ಗೆ ಅನಿಷ್ಠನಾಥನ ಅಭಿವೃದ್ಧಿಗಳನ್ನು ಪಟ್ಟಿ ಮಾಡುವುದಾದರೆ ಅವು ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಯಾರಿಗೂ ಹೊಳೆಯದ ತಲೆಕೆಟ್ಟ ಐಡಿಯಾಗಳೇ ಎಂಬುದು ಅರಿವಾಗುತ್ತದೆ. ಉತ್ತರಪ್ರದೇಶದ ರೋಡು, ಮೋರಿ, ಟಾಯ್ಲೆಟ್, ಸರ್ಕಾರಿ ಕಚೇರಿ, ಕಾರು ಬಸ್ಸು, ಸೈಕಲ್ ಆಟೋರಿಕ್ಷಾಗಳು… ಹೀಗೆ ಅನಿಷ್ಠನಾಥನ ಬುರುಡೆಯೊಂದನ್ನು ಬಿಟ್ಟು ಮಿಕ್ಕೆಲ್ಲದ್ದಕ್ಕೂ ಕೇಸರಿ ಪೇಂಟ್ ಹೊಡೆಯಲಾಗಿದೆ. ಸೆಗಣಿ ತಿಂದ್ರೆ ಗಂಡು ಮಗುವಾಗುತ್ತೆ, ಸೆಗಣಿ ಶಾಂಪೂನಲ್ಲಿ ತಲೆಸ್ನಾನ ಮಾಡಿದ್ರೆ ತಲೆಗೂದಲು ಸೊಂಪಾಗಿ ಬೆಳೆಯುತ್ತೆ, ದನದ ಉಚ್ಚೆ ಕುಡಿದರೆ ಸರ್ವರೋಗಗಳೂ ನಿವಾರಣೆಯಾಗುತ್ತೆ, ಸೆಗಣಿ ಸೋಪು, ಸೆಗಣಿ ಬಿಸ್ಕತ್ತು, ಸೆಗಣಿ ಸೊಳ್ಳೆಬತ್ತಿ, ಸೆಗಣಿ ನೆಲ ಕ್ಲೀನರ್.. ಇಂಥಹ ಲೂಸ್ ಸಂಶೋಧನೆ ನಡೆಸಿದ ಅಡ್ನಾಡಿ ಸನಾತನ ಪೀಡೆಗಳಿಗೆ ಪ್ರೋತ್ಸಾಹ ಕೊಡಲಾಗಿದೆ. ರಾಜ್ಯದಲ್ಲಿ ಯಾರು ಯಾರನ್ನು ಬೇಕಾದರೂ ಗುಂಪು ಕಟ್ಟಿಕೊಂಡು ಹೊಡೆದು ಕೊಲ್ಲಲು ಸರ್ಕಾರದಿಂದಲೇ ಅನಧಿಕೃತ ಅನುಮತಿ ನೀಡಲಾಗಿದೆ. ಸಾಯುತ್ತಿರೋ ಮನುಷ್ಯರಿಗೆ ಆಸ್ಪತ್ರೆ ಕಟ್ಟಿಸಲು, ಆಕ್ಸಿಜನ್ ಇಲ್ಲದೆ ಸತ್ತ ಸಾವಿರಾರು ಎಳೆಕಂದಮ್ಮಗಳಿಗೆ ಆಕ್ಸಿಜನ್ ವ್ಯವಸ್ಥೆ ಮಾಡಲು ಯೋಗ್ಯತೆಯಿಲ್ಲದಿದ್ದರೂ ಬೀಡಾಡಿ ದನಗಳಿಗೆ ಆಂಬ್ಯುಲೆನ್ಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಉಳಿದಂತೆ ಉತ್ತರಪ್ರದೇಶದ ಗ್ರಾಮೀಣಭಾಗವನ್ನು ಕ್ರಿಸ್ತಪೂರ್ವದಲ್ಲೇ ಬಾಕಿ ಉಳಿಸಲಾಗಿದೆ.. ಹೀಗೆ ಹೇಳುತ್ತ ಹೋದರೆ ಪಕೋಡಪ್ಪನ ಸುಳ್ಳುಗಳಂತೆ ಬೆಳೆಯುತ್ತ ಹೋಗುವ ಈ ತರುಕಲಾಂಡಿ ಕೆಲಸಗಳೇ ಭೋಗಿ ಅನಿಷ್ಠನಾಥನ ಅಭಿವೃದ್ಧಿಗಳೆಂದು ಸರ್ಕಾರದ ವರದಿಗಳೇ ಹೇಳುತ್ತಿವೆ. ವಸ್ತುಸ್ಥಿತಿ ಹೀಗಿರುವಾಗ ತಿಂಗಳಿಗೆ 25 ಸಾವಿರ ಸಂಬಳ ಕೊಟ್ಟು ತನ್ನ ಪಕ್ಷದ ‘ಬೇ ರೋಜ್ಗಾರ್ ಅಬ್ಬೇಪಾರಿಗಳಿಗೆ’ ಪುಗ್ಸಟ್ಟೆ ಸಂಬಳದ ವ್ಯವಸ್ಥೆ ಮಾಡ್ತಿರೋ ಅನಿಷ್ಠನಾಥ.. ಅದಕ್ಕೆ ಬೇಕಾದ ದುಡ್ಡನ್ನು ಸರ್ಕಾರಿ ಬೊಕ್ಕಸದಿಂದ ಕೊಡುತ್ತಾನೋ ಅಥವ ಅವನಪ್ಪನ ಮನೆಯೊಳಗೆ ಪ್ರಿಂಟು ಮಾಡಿ ತಂದು ಹಂಚುತ್ತಾನಾ ಎಂಬ ಬಗ್ಗೆ ಜನರಲ್ಲಿ ತೀವ್ರ ಜಿಜ್ಞಾಸೆ ಹುಟ್ಟಿಕೊಂಡಿದೆ.
ಇಲ್ಲಿಗೆ ವಾರ್ತಾಪ್ರಸಾರ ಮುಕ್ತಾಯವಾಯಿತು. ಮತ್ತೊಂದಷ್ಟು ಆಘಾತಕಾರಿ ನ್ಯೂಸುಗಳ ಸಮೇತ ಮತ್ತೆ ಭೇಟಿಯಾಗೋಣ. ಅಲ್ಲೀತನಕ ನಮಗೂ ನಿಮಗೂ ಅಟ್ಟೆ ಮಟ್ಟೆ ಕೋಳಿ ಮಟ್ಟೆ ವಾರದ್ ತನಕ ಮಾತಾಡ್ಸಲ್ಲ ಠೂ ಬಳೆ. ಧನ್ಯವಾದಗಳು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...