Homeಕರ್ನಾಟಕಸಂತ ಸೇವಾಲಾಲ್‌ರ ಜನ್ಮಸ್ಥಳದಲ್ಲಿ ಆರ್‌ಎಸ್‌ಎಸ್‌ ಶಿಬಿರ ಆಯೋಜನೆ: ಬಂಜಾರ ಮುಖಂಡರ ಆಕ್ರೋಶ

ಸಂತ ಸೇವಾಲಾಲ್‌ರ ಜನ್ಮಸ್ಥಳದಲ್ಲಿ ಆರ್‌ಎಸ್‌ಎಸ್‌ ಶಿಬಿರ ಆಯೋಜನೆ: ಬಂಜಾರ ಮುಖಂಡರ ಆಕ್ರೋಶ

ಸೇವಾಲಾಲ್‌ರ ವಿಚಾರಗಳಿಗೂ ಆರ್‌ಎಸ್‌ಎಸ್‌ ಚಿಂತನೆಗೂ ಯಾವುದೇ ಸಂಬಂಧವಿಲ್ಲ ಎಂದು ಬಂಜಾರ ಮುಖಂಡರು ಪ್ರತಿಕ್ರಿಯೆ ನೀಡಿದ್ದಾರೆ.

- Advertisement -
- Advertisement -

ದಾವಣಗೆರೆ: ನ್ಯಾಮತಿ ತಾಲ್ಲೂಕಿನ ಸೂರಗೊಂಡನಕೊಪ್ಪದ ಸೇವಾಲಾಲ್ ಜನ್ಮಸ್ಥಳದಲ್ಲಿ ಆರ್‌ಎಸ್‌ಎಸ್ ಶಿಬಿರ ನಡೆಸಲು ಮುಂದಾಗಿರುವುದಕ್ಕೆ ಸಮುದಾಯದ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆರ್‌ಎಸ್‌ಎಸ್ ಚಿಂತನೆಗಳಿಗೂ ಸಂತ ಸೇವಾಲಾಲರ ವಿಚಾರಗಳಿಗೂ ಯಾವುದೇ ಸಂಬಂಧವಿಲ್ಲ. ಗಾಂಧಿ ಹತ್ಯೆ ಮಾಡಿದ ಗೋಡ್ಸೆ ಆರ್‌ಎಸ್‌ಎಸ್‌ಗೆ ಸೇರಿದವನು. ಮಕ್ಕಳಿಗೆ ಬಂದೂಕು ನೀಡಿ ತರಬೇತಿ ಕೊಡುವ ಕೆಲಸವನ್ನು ಸಂಘಪರಿವಾರ ಮಾಡುತ್ತಿದೆ. ಸೇವಾಲಲ್‌ರ ಚಿಂತನೆಗಳು, ಆರ್‌ಎಸ್‌ಎಸ್‌ ಚಿಂತನೆಗಳಿಗೂ ಯಾವುದೇ ಸಂಬಂಧವಿಲ್ಲ. ಅವರ ಜನ್ಮಸ್ಥಳದಲ್ಲಿ ಶಿಬಿರ ನಡೆಸಬಾರದು ಎಂದು ಆಗ್ರಹಿಸಲಾಗುತ್ತಿದೆ.

ಸೆಪ್ಟೆಂಬರ್‌ 11ರಿಂದ 19ರವರೆಗೆ ಆರ್‌ಎಸ್‌ಎಸ್, ‘ಉದ್ಯೋಗಿ ಪ್ರಾಥಮಿಕ ಶಿಕ್ಷಣ ವರ್ಗ’ ಎಂಬ ಕಾರ್ಯಕ್ರಮವನ್ನು ಮಠದಲ್ಲಿ ಹಮ್ಮಿಕೊಂಡಿದೆ. ಬಂಜಾರ ಮಹಾಮಠದಲ್ಲಿ ಆರ್‌ಎಸ್ಎಸ್ ಶಿಬಿರ ಆಯೋಜನೆ‌ ಮಾಡಬಾರದು ಎಂದು ಸೇವಾಲಾಲ್ ಸಮಿತಿಯವರು ಒತ್ತಾಯಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ದೇಶದಲ್ಲಿ ಕೋಮುವಾದ ಹರಡುತ್ತಿರುವ ಆರ್‌ಎಸ್ಎಸ್ ಎನ್ನುವ ಸಂಘಟನೆ ದಲಿತ, ಬಂಜಾರರ ಮೇಲೆ ದೌರ್ಜನ್ಯ ಎಸಗುತ್ತಲೇ ಬಂದಿದೆ‌. ಆರ್‌ಎಸ್‌ಎಸ್ ಶಿಬಿರ ಆಯೋಜನೆಗೆ ಅವಕಾಶ ಮಾಡಿಕೊಡಬಾರದು ಎಂದು ಕರುನಾಡು ಬಂಜಾರ ಸೇವಾ ಸೇನೆಯ ರಾಜ್ಯಾಧ್ಯಕ್ಷ ಲಕ್ಷ್ಮಣ್ ರಾಮಾವತ್ ಪ್ರತಿಕ್ರಿಯೆ ನೀಡಿದ್ದಾರೆ.

‘ನಾನುಗೌರಿ.ಕಾಂ’ ಜೊತೆ ಮಾತನಾಡಿದ ಅವರು, “ದಲಿತರಿಗೆ, ಬಂಜಾರರಿಗೆ ಮೀಸಲಾತಿ ನೀಡಿರುವುದನ್ನು, ಭಾರತದ ಸಂವಿಧಾನವನ್ನು ಒಪ್ಪದಿರುವ ಆರ್‌ಎಸ್‌ಎಸ್‌ನ ಶಿಬಿರ ಏರ್ಪಡಿಸಿರುವುದು ನ್ಯಾಯ ಸಮ್ಮತವಲ್ಲ. ಸಮುದಾಯದಲ್ಲಿ ತಾವೇ ನಾಯಕರೆಂದು ಬಿಂಬಿಸಿಕೊಂಡು ಆರ್‌ಎಸ್‌ಎಸ್ ಓಲೈಕೆ ಮಾಡಲು ಶಾಸಕ ಪಿ.ರಾಜೀವ್‌ ಏಕಪಕ್ಷೀಯವಾಗಿ ಕಾರ್ಯಕ್ರಮ ಆಯೋಜಿಸುತ್ತಿದ್ದಾರೆ. ಸಮುದಾಯವನ್ನು ಕಡೆಗಣಿಸಿ ಏಕಪಕ್ಷೀಯ ನಿರ್ಧಾರ ಕೈಗೊಂಡಿದ್ದಾರೆ” ಎಂದು ದೂರಿದರು.

ಇದನ್ನೂ ಓದಿರಿ: ಮ್ಯಾನೇಜ್‌ಮೆಂಟ್‌ ಸರ್ಕಾರ| ಆಡಿಯೊ ನನ್ನದೇ, ರಾಜೀನಾಮೆ ಕೇಳಿದರೆ ಕೊಡುವೆ- ಮಾಧುಸ್ವಾಮಿ

“ಸಚಿವ ಪ್ರಭು ಚೌವ್ಹಾಣ್ ಅವರನ್ನು ಸಚಿವ ಸ್ಥಾನದಿಂದ ಕೆಳಗಿಳಿಸಲು ಪ್ಲಾನ್‌ ಮಾಡಿದ್ದಾರೆ. ಸಚಿವ ಸ್ಥಾನ ಪಡೆಯಲು ಬಂಜಾರ ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಪಿ. ರಾಜೀವ್ ಏಕಪಕ್ಷೀಯ ನಿರ್ಧಾರ ತೆಗೆದುಕೊಂಡಿದ್ದಾರೆ” ಎಂದು ಆರೋಪಿಸಿದರು.

“ಆರ್‌ಎಸ್‌ಎಸ್ ಓಲೈಕೆಗಾಗಿ ಪಿ. ರಾಜೀವ್ ಶಿಬಿರ ಆಯೋಜನೆ ಮಾಡಿಕೊಟ್ಟಿರುವುದು ಅಕ್ಷಮ್ಯ ಅಪರಾಧ. ರಾಜೀವ್ ಅವರನ್ನು ಬಹಿಷ್ಕರಿಸಬೇಕು. ಕೋಮುವಾದಿ ಸಂಘಟನೆಗಳಿಗೆ ಮಠದಲ್ಲಿ ಅವಕಾಶ‌ ಕೊಟ್ಟರೆ ನಾವು ಸುಮ್ಮನಿರಲ್ಲ. ಸೇವಾಲಾಲ್ ಜನ್ಮಸ್ಥಳ ಮಹಾಮಠದಲ್ಲಿ ಆರ್‌ಎಸ್ಎಸ್ ಶಿಬಿರ ಆಯೋಜನೆ ಆದರೆ ಬಂಜಾರ ಅಸ್ಮಿತೆಯನ್ನು ನಾಶಪಡಿಸಿದಂತೆ” ಎಂದು ಆತಂಕ ವ್ಯಕ್ತಪಡಿಸಿದರು.

“ಮಹಾಮಠದಲ್ಲಿ ಯಾವುದೇ ರಾಜಕೀಯ ಸಂಘಟನೆಗಳಿಗೆ ಅವಕಾಶ ಕೊಡುವುದಿಲ್ಲ. ಇಲ್ಲಿಯವರೆಗೆ ಯಾವುದೇ ಪಕ್ಷದ ಸಮ್ಮೇಳನ, ಸಂಘಟನೆಗಳಿಗೆ ಅವಕಾಶ ನೀಡಿಲ್ಲ.‌ ಇಂದು ಆರ್‌ಎಸ್‌ಎಸ್‌ನವರು ಬಂದಿದ್ದಾರೆ. ನಾಳೆ ಬಿಜೆಪಿಯವರು, ನಾಡಿದ್ದು ಕಾಂಗ್ರೆಸ್‌ನವರು ಬರುತ್ತಾರೆ. ಹೀಗಾಗಲು ಬಿಡುವುದಿಲ್ಲ. ಈ ಶಿಬಿರ ನಿಲ್ಲದಿದ್ದರೆ ಸೇವಾಲಾಲ್ ಜನ್ಮಸ್ಥಳದ‌ ಎದುರು ಹೋರಾಟ ಮಾಡುವುದು ನಿಶ್ಚಿತ” ಎಂದು ಎಚ್ಚರಿಕೆ ನೀಡಿದರು.

ಸೂರಗೊಂಡನಕೊಪ್ಪ ಬಂಜಾರರ ಧಾರ್ಮಿಕ ಕ್ಷೇತ್ರ. ಇಲ್ಲಿ ನಮ್ಮ ವೃದ್ಧರಿಗೆ, ಭಕ್ತಾದಿಗಳಿಗೆ ಆಶ್ರಯ ಕೊಡಬೇಕು. ಸಮುದಾಯದ ವಿದ್ಯಾರ್ಥಿಗಳಿಗೆ ಉದ್ಯೋಗ ತರಬೇತಿ ಕೇಂದ್ರಗಳನ್ನು ಇಲ್ಲಿ ತೆರೆಯಬೇಕು ಎಂಬುದು ನಮ್ಮ ಉದ್ದೇಶ. ಇದನ್ನು ಮಾಡುವುದು ಬಿಟ್ಟು ಮತೀಯವಾದಿ ಸಂಘಟನೆಯ ಶಿಬಿರ ನಡೆಸಲು ಮುಂದಾಗಿದ್ದಾರೆ ಎಂದರು.

“ಸಮುದಾಯದ ಜನಪ್ರತಿನಿಧಿಗಳು ಈ ಕುರಿತು ಪ್ರತಿಕ್ರಿಯೆ ನೀಡಬೇಕಿದೆ. ನಾವು ಆಕ್ಷೇಪ ವ್ಯಕ್ತಪಡಿಸಿದ ಬಳಿಕ ಚರ್ಚೆ ಹುಟ್ಟಿಕೊಂಡಿದೆ. ಶಿಬಿರ ನಡೆಸಬೇಕೋ ಬೇಡವೋ ಎಂಬ ಚರ್ಚೆ ನಡೆಸಲು ಮಹಾಮಠ ಸಮಿತಿ ಆಗಸ್ಟ್‌ 21ರಂದು ಸಭೆ ನಡೆಸಲು ಮುಂದಾಗಿದೆ” ಎಂದು ಮಾಹಿತಿ ನೀಡಿದರು.

“ಸಂತ ಸೇವಾಲಾಲರ ಚಿಂತನೆಗೂ ಆರ್‌ಎಸ್‌ಎಸ್ ಚಿಂತನೆಗಳೂ ಯಾವುದೇ ಸಂಬಂಧವಿಲ್ಲ. ಆರ್‌ಎಸ್‌ಎಸ್‌ನವರಿಗೆ ನಮ್ಮ ಸಂಸ್ಕೃತಿಯ ಕುರಿತು ಒಂಚೂರು ಗೊತ್ತಿಲ್ಲ. ನಮ್ಮ ಸಂಸ್ಕೃತಿಯೇ ಬೇರೆ. ಅವರ ಸಂಸ್ಕೃತಿಯೇ ಬೇರೆ. ಮಕ್ಕಳ ಕೈಗೆ ಗನ್ ನೀಡಿ ಪ್ರಾಕ್ಟೀಸ್ ಮಾಡಿಸಿದ ಉದಾಹರಣೆಗಳನ್ನು ನೋಡಿದ್ದೇವೆ. ರಾಷ್ಟ್ರಪಿತ ಮಹಾತ್ಮಗಾಂಧಿಯವರನ್ನು ಕೊಂದ ಗೋಡ್ಸೆ ಆರ್‌ಎಸ್‌ಎಸ್‌ನವನು. ಆರ್‌ಎಸ್‌ಎಸ್‌ ಸಂಸ್ಕೃತಿಯನ್ನು ನಮ್ಮ ಸಂಸ್ಕೃತಿಯಲ್ಲಿ ಅಳವಡಿಸಿಕೊಳ್ಳಲು ನಾವು ಸಿದ್ಧರಿಲ್ಲ” ಎಂದು ಸ್ಪಷ್ಟಪಡಿಸಿದರು. ಈ ಕುರಿತು ಪತ್ರಿಕಾಗೋಷ್ಠಿಯನ್ನು ಅವರು ನಡೆಸಿದ್ದಾರೆ.

ಇದನ್ನೂ ಓದಿರಿ: ಉಡುಪಿ: ‘ಹಿಂದೂರಾಷ್ಟ್ರ’ ಎಂದಿರುವ ಪ್ಲೆಕ್ಸ್‌ಗೆ ಪೊಲೀಸ್ ಭದ್ರತೆ; ಸಾವರ್ಕರ್‌‌ ಫೋಟೋ ವೈಭವೀಕರಣ!

ಮತ್ತೊಬ್ಬ ಬಂಜಾರ ಮುಖಂಡರು ‘ನಾನುಗೌರಿ.ಕಾಂ’ಗೆ ಪ್ರತಿಕ್ರಿಯಿಸಿ, “ಸೂರಗೊಂಡನಕೊಪ್ಪ ಇಡೀ ಬಂಜಾರ ಜನಾಂಗಕ್ಕೆ ಸೇರಿದ ಧಾರ್ಮಿಕ ಸ್ಥಳವೇ ಹೊರತು ಯಾವುದೇ ಒಬ್ಬ ವ್ಯಕ್ತಿಯ ಸ್ಥಿರಾಸ್ತಿಯಲ್ಲ. ಸೂರಗೊಂಡನಕೊಪ್ಪದಲ್ಲಿ ರೆಜಿಸ್ಟರ್ಡ್ ಮಹಾಮಠ ಸಮಿತಿಯಿದೆ. ಈ ರೀತಿಯ ಶಿಭಿರವನ್ನು ನಡೆಸುವುದಾದರೆ ಆ ಸಮಿತಿಗೆ ಮನವಿ ಮಾಡಬೇಕು, ಈ ಶಿಬಿರದ ಅಜೆಂಡಾ ಏನೆಂದು ತಿಳಿಸಬೇಕು. ಆಗ ಇದಕ್ಕೆ ಅನುಮತಿ ಕೊಡಬೇಕೋ ಬೇಡವೋ ಎನ್ನುವುದನ್ನು ಸಮಿತಿ ತೀರ್ಮಾನ ಮಾಡುತ್ತದೆ. ಅದನ್ನು ಬಿಟ್ಟು ಸಮಿತಿಯ ಅಪ್ಪಣೆಯೇ ಇಲ್ಲದೆ ಅವರ ಗಮನಕ್ಕೆ ಬಾರದೆಯೇ ಬಿತ್ತಿ ಪತ್ರಗಳನ್ನು ಪ್ರಿಂಟ್ ಮಾಡಿ ಹಂಚುತ್ತಾರೆಂದರೆ ಇದು ಅಕ್ಷಮ್ಯ ಅಪರಾಧ” ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಇದಕ್ಕೆ ಸೂರಗೊಂಡನಕೊಪ್ಪ ಮಹಾಮಠ ಸಮಿತಿಯು ಕೂಡಲೇ ಕಾನೂನು ರೀತಿ ಕ್ರಮ ಜರುಗಿಸಬೇಕು ಇಲ್ಲವಾದರೆ ಮುಂದೆ ಬೇರೆ ಬೇರೆ ಸಂಘಟನೆಗಳು ಅಲ್ಲಿ ತಮ್ಮ ಸಿದ್ಧಾಂತವನ್ನು ಹೇರುವ ಕಾರ್ಯಕ್ರಮವನ್ನು ನಡೆಸಲು ಅನುಮತಿ ಕೇಳಿಕೊಂಡು ಬಂದಾಗ ಸಮಿತಿಯು ಅದರಿಂದಾಗುವ ವ್ಯತಿರಿಕ್ತ ಪರಿಣಾಮವನ್ನು ಎದುರಿಸಬೇಕಾಗುತ್ತದೆ. ಇಡೀ ಬಂಜಾರ ಸಮುದಾಯ ಕೇಳುವ ಪ್ರಶ್ನೆಗಳಿಗೆ ಉತ್ತರಿಸುವ ಪೇಚಿಗೆ ಸಿಕ್ಕಿಹಾಕಿಕೊಳ್ಳಬೇಕಾಗುತ್ತದೆ. ಈ ಹಿಂದೆ ಯಾವುದೇ ಪಕ್ಷದ ಆಡಳಿತವಿದ್ದರೂ ಅನೇಕ ಅಧ್ಯಕ್ಷರುಗಳು ಪಕ್ಷಾತೀತವಾಗಿ ಸಮುದಾಯವನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಮುದಾಯದ ಅಭಿವೃದ್ಧಿ ಮಾಡಿದ್ದಾರೆ. ಇಂದು ಸೂರಗೊಂಡನಕೊಪ್ಪದ ಭಾಯಾಘಡ್ ಈ ಹಂತಕ್ಕೆ ಬರಬೇಕಾದರೆ ಅನೇಕ ಅಧಿಕಾರಿಗಳ, ರಾಜಕಾರಣಿಗಳ, ಸನುದಾಯದ ಹಿರಿಯರ, ಸ್ಥಳೀಯರ ಪರಿಶ್ರಮವಿದೆ ಎನ್ನುವ ಅರಿವು ಎಲ್ಲರಲ್ಲೂ ಇರಲಿ ಎಂದು ತಿಳಿಸಿದರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

9 COMMENTS

  1. ಬ್ರಾಹ್ಮಣರಲ್ಲದ, ಬೇರೆಲ್ಲಾ ಸಾದುಸಂತರ, ಸ್ವಾಮೀಜಿಗಳ, ಮಟಾದೀಶರ ಹೆಸರು ಮತ್ತು ಕೊಡುಗೆಯನ್ನು ನಿರ್ನಾಮ ಮಾಡಿ, ಮುಂದಿನ ಪೀಳಿಗೆಗೆ ಅವರ ಹೆಸರೂ ಸಹ ದಕ್ಕಬಾರದು, ಎಂಬುದು ಮನುವಾದಿಗಳ ಹಿಡನ್ ಅಜೆಂಡಾ. ಇದನ್ನು ಅವರು ಅತ್ಯಂತ ವ್ಯವಸ್ಥಿತವಾಗಿ ಮಾಡುತ್ತಿದ್ದಾರೆ.

  2. ಸರಿಯಾಗಿ ಹೇಳಿದರಿ ಬ್ರೋ …
    ಬಂಜಾರಾ ಸಮಾಜವನ್ನು SC ST ಯಿಂದ ತೆಗದಾಕಬೇಕು ಎಂಬ ಒಳಸಂಚು ಈ ಮನೊವಾದಿಗಳದೆ ಅಲ್ಲವೇ? ..

  3. ಸಂತ ಸೇವಾಲಾಲ್ ಅವರು ಬಂಜಾರ ಸಮುದಾಯದ ಆದರ್ಶ ಪುರುಷರಾಗಿದ್ದಾರೆ. ಅವರ ಚಿಂತನೆಗಳು ಸಮುದಾಯದ ಅಭಿವೃದ್ಧಿಗೆ ಕಾರಣವಾಗಿದೆ ಆದರೆ ಆರ್ ಎಸ್ ಎಸ್ ವಿಚಾರಧಾರೆಗಳು ಸಮಾಜದಲ್ಲಿ ಕೋಮುಗಲಭೆಯನ್ನು ಸೃಷ್ಟಿ ಮಾಡಿ ಸಮಾಜದ ಆರೋಗ್ಯವನ್ನು ಹಾಳು ಮಾಡುತ್ತಿದ್ದಾರೆ ಇಂತಹ ಸಂಘಟನೆಗಳಿಂದ ಕಿಂಚಿತ್ತು ಪ್ರಯೋಜನವಾಗುವುದಿಲ್ಲ.

  4. RSS ಬಗ್ಗೆ ಬಂಜಾರ ಸಮುದಾಯಕ್ಕೆ ಪ್ರತ್ಯೇಕವಾಗಿ ಯುವಕರಿಗೆ ಸರಿಯಾದ ಮಾಹಿತಿ ನೀಡಬೇಕಾಗಿದೆ, RSS ಅದು ಒಂದು ಮನುವಾದಿ ಸಿದ್ಧಾಂತದ ಆಧಾರದಲ್ಲಿ ಸ್ಥಾಪಿಸಿಕೊಂಡ ಸಂಘಟನೆ ಅದು ಕಳೆದ 75 ವರ್ಷದಲ್ಲಿ ಈ ದೇಶದಲ್ಲಿ ಸಹೋದರತೆಯಿಂದ ಜೀವಿಸಲು ಯಾರನ್ನೂ ಬಿಡಲಿಲ್ಲ

  5. ನೂರಾರು ವರ್ಷಗಳಿಂದ ಈ ಸಮುದಾಯ ಮೇಲ್ವರ್ಗದವರಿಂದ ತುಳಿತಕ್ಕೆ ಒಳಗಾಗುತ್ತಲೇ ಬಂದಿದೆ… ಉಳುವವನೇ ಭೂಮಿಯ ಒಡೆಯ ಯೋಜನೆಯ ಫಲ ಮತ್ತು ಬಾಬಾ ಸಾಹೇಬರ ಸಂವಿಧಾನದ ಫಲವಾಗಿ ಇತ್ತೀಚಿನ ಹತ್ತರಿಂದ ಹದೈನೈದು ವರ್ಷಗಳಲ್ಲಿ ಬಂಜಾರ ಸಮುದಾಯ ತನ್ನ ಅಸ್ಮಿತೆಯನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತದೆ… ಅಂತಹದ್ದರಲ್ಲಿ ಗೆದ್ದ ಎತ್ತಿನ ಬಾಲ ಹಿಡಿಯುವಂತೆ ಈ ಸಮುದಾಯದ ಮಾತಲ್ಲಿ ಮೋಡಿ ಮಾಡುವ ರಾಜಕಾರಣಿಗಳ ಮಾತನ್ನು ಕೇಳಿ ಒಪ್ಪಿಗೆ ನೀಡದರೆಂದರೆ ಒಲೈಕೆಯ ರಾಜಕಾರಣಿಗಳು ಹಣ ಮತ್ತು ಪದವಿ ಪಡೆಯುತ್ತಾರೆ. ಆದರೆ ಈ ಸಮುದಾಯ ಬ್ರಾಹ್ಮಣ್ಯದ ಮತ್ತು ಬ್ರಾಹ್ಮಣರ ಗುಲಾಮರಾಗಬೇಕಾಗಬಹುದು..ಈ ಸಮುದಾಯದ ಕೆಲವರು ಈಗಾಗಲೇ ಅವರ ಸಿದ್ದಾಂತಗಳಿಗೆ ಪ್ರಭಾವಿತರಾಗಿ ಅವರ ಕಾಲ ಕಸವಾಗಿ ಬಿದ್ದಿದ್ದಾರೆ… ಮುಂದೊಂದು ದಿನ ಮನುಶಾಸ್ತ್ರವನ್ನೇ ಸಂವಿಧಾನವೆಂದು ನಂಬಿಸಿ ಬಿಡುತ್ತಾರೆ. ಮತ್ತೆ ಮನುವಿನ ಕಾಲದ ಶೋಷಣೆಗೆ ನಾವೆಲ್ಲರೂ ಒಳಗಾಗಬೇಕಾಗುತ್ತದೆ… ಎಚ್ಚರ ಈ ಹಿಂದೆ ನಮ್ಮವರಿಗೆ ಇವರಿಂದಲೇ ಶೋಷಣೆಗಳಾಗಿದ್ದನ್ನು ಮರಿಯಬೇಡಿ

  6. ನೂರಾರು ವರ್ಷಗಳಿಂದ ಈ ಸಮುದಾಯ ಮೇಲ್ವರ್ಗದವರಿಂದ ತುಳಿತಕ್ಕೆ ಒಳಗಾಗುತ್ತಲೇ ಬಂದಿದೆ… ಉಳುವವನೇ ಭೂಮಿಯ ಒಡೆಯ ಯೋಜನೆಯ ಫಲ ಮತ್ತು ಬಾಬಾ ಸಾಹೇಬರ ಸಂವಿಧಾನದ ಫಲವಾಗಿ ಇತ್ತೀಚಿನ ಹತ್ತರಿಂದ ಹದೈನೈದು ವರ್ಷಗಳಲ್ಲಿ ಬಂಜಾರ ಸಮುದಾಯ ತನ್ನ ಅಸ್ಮಿತೆಯನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತದೆ… ಅಂತಹದ್ದರಲ್ಲಿ ಗೆದ್ದ ಎತ್ತಿನ ಬಾಲ ಹಿಡಿಯುವಂತೆ ಈ ಸಮುದಾಯದ ಮಾತಲ್ಲಿ ಮೋಡಿ ಮಾಡುವ ರಾಜಕಾರಣಿಗಳ ಮಾತನ್ನು ಕೇಳಿ ಒಪ್ಪಿಗೆ ನೀಡದರೆಂದರೆ ಒಲೈಕೆಯ ರಾಜಕಾರಣಿಗಳು ಹಣ ಮತ್ತು ಪದವಿ ಪಡೆಯುತ್ತಾರೆ. ಆದರೆ ಈ ಸಮುದಾಯ ಬ್ರಾಹ್ಮಣ್ಯದ ಮತ್ತು ಬ್ರಾಹ್ಮಣರ ಗುಲಾಮರಾಗಬೇಕಾಗಬಹುದು..ಈ ಸಮುದಾಯದ ಕೆಲವರು ಈಗಾಗಲೇ ಅವರ ಸಿದ್ದಾಂತಗಳಿಗೆ ಪ್ರಭಾವಿತರಾಗಿ ಅವರ ಕಾಲ ಕಸವಾಗಿ ಬಿದ್ದಿದ್ದಾರೆ… ಮುಂದೊಂದು ದಿನ ಮನುಶಾಸ್ತ್ರವನ್ನೇ ಸಂವಿಧಾನವೆಂದು ನಂಬಿಸಿ ಬಿಡುತ್ತಾರೆ. ಮತ್ತೆ ಮನುವಿನ ಕಾಲದ ಶೋಷಣೆಗೆ ನಾವೆಲ್ಲರೂ ಒಳಗಾಗಬೇಕಾಗುತ್ತದೆ… ಎಚ್ಚರ ಈ ಹಿಂದೆ ನಮ್ಮವರಿಗೆ ಇವರಿಂದಲೇ ಶೋಷಣೆಗಳಾಗಿದ್ದನ್ನು ಮರೆಯಬೇಡಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...