Homeಚಳವಳಿಅಂದಿನ ಸಾದತ್‌ ಹಸನ್‌ ಮಂಟೋ ಮತ್ತು ಇಂದಿನ ನಾವು...!! : ಇಸ್ಮತ್ ಪಜೀರ್

ಅಂದಿನ ಸಾದತ್‌ ಹಸನ್‌ ಮಂಟೋ ಮತ್ತು ಇಂದಿನ ನಾವು…!! : ಇಸ್ಮತ್ ಪಜೀರ್

ಮಂಟೋನಿಗೆ ಮನುಷ್ಯನ ಧರ್ಮ ಯಾವತ್ತೂ ಮಹತ್ವದ್ದಾಗಿರಲಿಲ್ಲ. ಆತನ ಕಾಳಜಿ ಕೇವಲ ಮನುಷ್ಯತ್ವ ಮಾತ್ರವಾಗಿತ್ತು.

- Advertisement -
- Advertisement -

ಎನ್ನಾರ್ಸಿಯ ಚರ್ಚೆ ಸಾಮಾಜಿಕ ಜಾಲತಾಣಗಳಲ್ಲಿ ಉತ್ತುಂಗಕ್ಕೇರಿದ್ದಾಗ ನಾನು ಫೇಸ್‌ಬುಕ್‌ನ ನನ್ನ ಅನೇಕ ಹಿಂದೂ ಗೆಳೆಯರ ಪ್ರೊಫೈಲ್ ಮತ್ತು ಕೆಲವು ಸಜ್ಜನ ಹಿಂದೂಗಳ ಟೈಮ್‌ಲೈನ್‌ಗೆ ಆಗಾಗ ಇಣುಕುತ್ತಿದ್ದೆ. ನನಗೆ ನಿರಾಶೆಯೇ ಕಾದಿತ್ತು. ಮತಿಭ್ರಮಣೆಯಾಗುವುದೊಂದೇ ಉಳಿದಿತ್ತು.‌ ಆ ಮಟ್ಟಿಗೆ ನಾನು ಅತಿಯಾಗಿ ಪ್ರೀತಿಸುತ್ತಿದ್ದ ನನ್ನ ಬದುಕಿನ ನೋವು, ನಲಿವುಗಳನ್ನು ಹಂಚಿಕೊಳ್ಳುತ್ತಿದ್ದ ಮತ್ತು ಮನೆಯ ಸಂಕಷ್ಟಗಳನ್ನೆಲ್ಲಾ ನನ್ನಲ್ಲಿ ತೋಡಿಕೊಳುತ್ತಿದ್ದ ಗೆಳೆಯರಲ್ಲಿ ಬಹುತೇಕರು ಎನ್ನಾರ್ಸಿಯ ಪರವಿದ್ದರು ಮಾತ್ರವಲ್ಲಾ “ಇದು ಹಿಂದೂ ರಾಷ್ಟ್ರ, ಇಲ್ಲಿ ಹಿಂದೂಗಳಿಗಲ್ಲದೇ ಬೇರ್ಯಾರಿಗೂ ಬದುಕುವ ಹಕ್ಕಿಲ್ಲ”ಎಂಬರ್ಥದಲ್ಲಿ ಬರೆದು ಹಾಕಿದ್ದರು.

ಅವರಲ್ಲಿ ಎಂತವರೆಲ್ಲಾ ಇದ್ದರೆಂದರೆ “ನನ್ನಿಂದ ವೈಯಕ್ತಿಕವಾಗಿ ಸಹಾಯ ಪಡೆದವರು, ನನ್ನದೇ ರಕ್ತ ಪಡೆದು ಜೀವವುಳಿಸಿಕೊಂಡವ, ಸಹೋದರಿಯ ಮದುವೆಗೆ ನನ್ನವಳ ಒಡವೆಗಳನ್ನು ಕಡಪಡಕೊಂಡವರು…. ಹೀಗೆ ಪಟ್ಟಿ ಮುಂದುವರಿಯುತ್ತದೆ. ಆದರೆ ನನ್ನ ಆ ಗೆಳೆಯರು ಯಾರೂ ಆರೆಸ್ಸೆಸ್ ಅಥವಾ ಸಂಘಪರಿವಾರದವರೂ ಅಲ್ಲ. ನನಗೀಗಲೂ ಅವರು ನನ್ನನ್ನು ದ್ವೇಷಿಸುತ್ತಾರೆಂದೆನಿಸುವುದಿಲ್ಲ.. ಮತ್ತು ಆಂತರ್ಯದಲ್ಲಿ ಅವರಿಗೆ ನಾನು ಪಾಲಿಸುವ ಧರ್ಮದ ಬಗ್ಗೆ ದ್ವೇಷವೂ ಇಲ್ಲ. ಹಾಗಾದರೆ ಅವರು ಯಾಕೆ ಹಾಗೆಲ್ಲಾ ಬರೆದುಕೊಂಡಿದ್ದಾರೆ..? ಇದನ್ನೇ ಸಮೂಹ ಸನ್ನಿಯೆನ್ನುವುದು.

ಅವರು ಏಕಾಂಗಿಯಾಗಿದ್ದಾಗ ಅಥವಾ ನನ್ನ ಜೊತೆಗಿರುವಾಗ ಹಾಗೆ ಎಂದೂ ಯೋಚಿಸಲಾರರು ಎಂದೇ ನನ್ನ ದೃಢವಾದ ನಂಬಿಕೆ. ಅವರಿಂದ ಸಮೂಹ ಸನ್ನಿಯ ಮನೋಸ್ಥಿತಿ ಹಾಗೆ ಬರೆಯಿಸಿತ್ತು ಎಂದೇ ನಾನು ನಂಬಿರುವೆ ಮತ್ತು ಮುಂದೆಯೂ ನಂಬುತ್ತೇನೆ. ನನಗೆ ಅವರ ಬಗ್ಗೆ ಕಿಂಚಿತ್ತೂ ದ್ವೇಷವಿಲ್ಲ. ಅವರಿಗೆ ನಾನಿಲ್ಲದ ಅವರ ಬಗ್ಗೆ ಯೋಚಿಸಲೂ ಸಾಧ್ಯವಾಗದು.

ಅಂತಹ ಕೆಲವು ಗೆಳೆಯರ ಬಳಿ ನಾನು ನೇರವಾಗಿ ಮಾತನಾಡುತ್ತ ಕೇಳಿದೆ.. “ಏನು ಮಾರಾಯ.. ನಾವು ಇಲ್ಲಿರುವುದು ನಿಮಗೆ ಅಷ್ಟೂ ಇಷ್ಟವಿಲ್ಲವೇ…?
ಯಾರು ಹಾಗೆಂದರು ಮಾರಾಯ..?
ಯಾರು ಹೇಳುವುದ್ಯಾಕೆ… ನಾನೇ ನೋಡಿದೆನಲ್ಲಾ….?
ಅದುವಾ….. ಅದು ನಿನ್ನಂತವರ ಬಗೆಗಲ್ಲ ಮಾರಾಯ…
ನಾನು ಮುಸ್ಲಿಮನೇ ಮಾರಾಯ..
‌ನಾನೂ ನಮಾಜು ಮಾಡುತ್ತೇನೆ, ನಾನೂ ದನದ ಮಾಂಸ ತಿನ್ನುತ್ತೇನೆ.

ಅದೇನು ನಮಗೆ ಗೊತ್ತಿಲ್ಲದ್ದಾ…?
ಮತ್ಯಾಕೆ ಹಾಗೆ ಬರೆದಿರಿ..?
ಏ ಅದೆಲ್ಲಾ ಬಿಡು ಮಾರಾಯ.. ನಿನ್ನನ್ನು ನಾವು ದ್ವೇಷಿಸಲಾಗುತ್ತಾ…?

ಸಾದತ್ ಹಸನ್ ಮಂಟೋ ಎಂಬ ಜಗತ್ಪ್ರಸಿದ್ದ ಮತ್ತು ಅತ್ಯಂತಿಕವಾದ ವಿವಾದಾತ್ಮಕ ಉರ್ದು ಸಣ್ಣ ಕತೆಗಾರನೂ ಇಂತಹದ್ದನ್ನೇ ಅನುಭವಿಸಿದ್ದ.‌ ದೇಶ ವಿಭಜನೆಯ ಕಾಲದ ಅತಿಮಾನುಷ ಕ್ರೌರ್ಯಗಳನ್ನು ಕಂಡು ಮಾನಸಿಕ ಸ್ಥಿಮಿತವನ್ನೇ ಕಳಕೊಂಡಿದ್ದ ಮಂಟೋ ವಿಭಜನೆಯ ಕಾಲದ ಕ್ರೌರ್ಯವನ್ನು, ಹಿಂಸೆಯನ್ನು ಬರೆದಷ್ಟು ಮನೋಜ್ಞವಾಗಿ ಇನ್ಯಾವ ಲೇಖಕನೂ ಬರೆದಿಲ್ಲ. ಮಂಟೋನ ಮಾನವೀಯ ಅಂತಃಕರಣ ಆ ಕಾಲದ ಇತರೆಲ್ಲಾ ಲೇಖಕರಿಗಿಂತಲೂ‌ ಆತನನ್ನು ಭಿನ್ನವಾಗಿ ನೋಡುವಂತೆ ಮಾಡುತ್ತದೆ. ಆತ ಜನರನ್ನು ಹಿಂದೂ ಮುಸಲ್ಮಾನರೆಂದು ಪ್ರತ್ಯೇಕಿಸಿ ನೋಡಲಿಲ್ಲ.‌ ಅದಕ್ಕೆ ಆತ ಬರೆದ ಸುಮಾರು ಇನ್ನೂರೈವತ್ತಕ್ಕೂ ಮಿಕ್ಕಿದ ಸಣ್ಣ ಕತೆಗಳಲ್ಲಿ ನೂರರಷ್ಟು ಕತೆಗಳು ಸಾಕ್ಷ್ಯವೊದಗಿಸುತ್ತದೆ. ಆತನ ಕೇವಲ ಎರಡು ಗೆರೆಯ ಕತೆ “ಮಿಸ್ಟೇಕ್” ಒಂದನ್ನೇ ನೋಡಿದರೆ ಸಾಕು.

“ಹೊಟ್ಟೆಯನ್ನು ಸೀಳಿದ ಚಾಕು ಸೀಳುತ್ತಾ ಬಂದು ಪೈಜಾಮದ ಲಾಡಿ ಬಿಚ್ಚಿಸಿತು…
ಅಯ್ಯೋ ಎಂತಹಾ ‘ಮಿಸ್ಟೇಕ್’ ಮಾಡಿ ಬಿಟ್ಟೆನೆಲ್ಲಾ”

ಈ ಕತೆಯನ್ನು ಇನ್ನೊಮ್ಮೆ ಓದಿ. ಒಂದು ವೇಳೆ ಸತ್ತವನು ಮುಸ್ಲಿಮನಾದರೆ ಕೊಂದವನೂ ಮುಸ್ಲಿಂ. ಒಂದು ವೇಳೆ ಸತ್ತವನು ಹಿಂದೂವಾದರೆ ಕೊಂದವನೂ ಹಿಂದೂ.

ಕೊಲೆಗಾರ ಸತ್ತವನ ಜನನಾಂಗ ನೋಡಿ ನಿರ್ಧರಿಸುತ್ತಾನೆ. ಇದರಲ್ಲಿ ಮಂಟೋನ ತಂತ್ರಗಾರಿಕೆಯೂ ಅಡಗಿದೆ. ಅವನೊಳಗಿನ ಅತ್ಯಂತ ಆರ್ದ್ರ ಹೃದಯದೊಳಗಿನ ತಲ್ಲಣವೂ ಇದೆ. ಮಂಟೋನಿಗೆ ಮನುಷ್ಯನ ಧರ್ಮ ಯಾವತ್ತೂ ಮಹತ್ವದ್ದಾಗಿರಲಿಲ್ಲ. ಆತನ ಕಾಳಜಿ ಕೇವಲ ಮನುಷ್ಯತ್ವ ಮಾತ್ರವಾಗಿತ್ತು. ಈ ಕತೆಯನ್ನು ಬರೆದಾಗ ಮಂಟೋ ಇನ್ನೂ ಭಾರತದಲ್ಲೇ ಇದ್ದ.

ಕೆಲದಿನಗಳ ಹಿಂದಷ್ಟೇ ಓರಗೆಯವರಾಗಿದ್ದವರು, ಗೆಳೆಯರಾಗಿದ್ದವರು ಇಂದು ಪರಸ್ಪರರನ್ನು ಕೊಲ್ಲುವ ಮಟ್ಟಿಗೆ ಅತಿಮಾನುಷ ಕ್ರೌರ್ಯವನ್ನು ಒಪ್ಪಿಕೊಂಡದ್ದಾದರೂ ಹೇಗೆ ಎಂದು ಯೋಚಿಸುತ್ತಲೇ ಆತ ಮಾನಸಿಕವಾಗಿ ಜರ್ಜರಿತನಾಗಿ ಬಿಟ್ಟಿದ್ದ.

ಹಿಂದೂ ಮುಸಲ್ಮಾನ ಸೋದರರ ಯುದ್ಧ ಉಚ್ಚ್ರಾಯ ಸ್ಥಿತಿಗೆ ತಲುಪಿದ್ದ ಆ ದಿನಗಳಲ್ಲಿ ಮಂಟೋ ಮತ್ತು ಆತನ ಆತ್ಮೀಯ ಗೆಳೆಯನಾದ ಅಂದಿನ ಪ್ರಸಿದ್ಧ ಹಿಂದಿ ಸಿನಿಮಾ ನಟ ಶ್ಯಾಮ್‌ ಜೊತೆಗಿದ್ದಾಗ ಪಾಕಿಸ್ತಾನದ ರಾವಲ್ಪಿಂಡಿಯಿಂದ ಜೀವದ ಹಂಗು ತೊರೆದು ಬಂದಿದ್ದ ಸಿಖ್ಖ್ ಪರಿವಾರ ಶ್ಯಾಮ್‌ ಜೊತೆ ಮಾತಿಗೆ ನಿಂತಿತು. ಆ ಪರಿವಾರದ ಮುಖ್ಯಸ್ಥ ತಾನು ಕಂಡಿದ್ದ ಭೀಕರ ಹಿಂಸಾಚಾರದ ಕತೆಗಳನ್ನು ಇವರ ಮುಂದೆ ನಿರೂಪಿಸುತ್ತಿದ್ದಾಗ ಅದನ್ನು ಕೇಳುತ್ತಾ ಶ್ಯಾಮ್ ರೋಷದಿಂದ ಕುದಿಯುತ್ತಿದ್ದ. ಅತ್ಯಂತ ಸೂಕ್ಷ್ಮ ಮನಸ್ಸಿನ ಮಂಟೋ ತನ್ನ ಪ್ರಾಣ ಸ್ನೇಹಿತ ಶ್ಯಾಮ್‌ನ ಮುಖದಲ್ಲಾದ ಏರಿಳಿತಗಳನ್ನೆಲ್ಲಾ ಗಮನಿಸಿದ್ದ. ಅವರು ಅಲ್ಲಿಂದ ಹೊರಟು ಹೋದ ಎಷ್ಟೋ ಹೊತ್ತಿನ ಬಳಿಕ ಮಂಟೋ “ನಾನೂ ಒಬ್ಬ ಮುಸಲ್ಮಾನ, ನಿನಗೆ ನನ್ನನ್ನು ಕೊಲ್ಲಬೇಕೆಂದೆನಿಸುವುದಿಲ್ಲವೇ…?”

ಶ್ಯಾಮ್ ತುಂಬಾ ಗಂಭೀರವಾಗಿ “ಇಲ್ಲ ಈಗ ಕೊಲ್ಲಲಾರೆ, ಆ ಸಿಖ್ಖನ ಬಾಯಿಯಿಂದ ಮುಸಲ್ಮಾನರು ಹಿಂದೂಗಳ ಮೇಲೆ ದೌರ್ಜನ್ಯವೆಸಗುತ್ತಿದ್ದ ಕತೆಯನ್ನು ಕೇಳುತ್ತಿದ್ದಾಗ ನಿನ್ನನ್ನು ನಾನು ಕೊಲ್ಲಬಹುದಿತ್ತು”. ತನ್ನ ಪ್ರಾಣ ಸ್ನೇಹಿತ ಶ್ಯಾಮ್‌ನ ಬಾಯಿಯಿಂದ ಇಂತಹ ಮಾತುಗಳನ್ನು ಕೇಳಿಸಿದ ಮಂಟೋನಿಗೆ ಹೃದಯಾಘಾತವಾದಂತೆನಿಸುತ್ತದೆ. ಮುಂದೆ ಮಂಟೋ ಭಾರತ ತೊರೆಯಲು ಇದೇ ಕಾರಣವಾಗುತ್ತದೆ.

ಒಮ್ಮೆ ಇದ್ದಕ್ಕಿದ್ದಂತೆ ಮಂಟೋ ದೇಶ ತೊರೆಯುವ ವಿಚಾರ ಹೇಳಿದಾಗ ಶ್ಯಾಮ್ ಮತ್ತು ಮಂಟೋನ ಇನ್ನೋರ್ವ ಆತ್ಮೀಯ ಗೆಳೆಯನೂ ಆದ ಇನ್ನೋರ್ವ ಪ್ರಸಿದ್ಧ ನಟನೂ ಆದ ಅಶೋಕ್ ಕುಮಾರ್ ದಂಗಾಗಿಬಿಟ್ಟರು. ಮಂಟೋನ ಈ ದಿಡೀರ್ ತೀರ್ಮಾನಕ್ಕೆ ಕಾರಣವೇನೆಂದು ಅವರು ಕೇಳಿದಾಗ ಮಂಟೋ ತನ್ನ “ಪುರುಷಾರ್ಥ” ಕತೆಯನ್ನು ಓದುವಂತೆ ತಿಳಿಸುತ್ತಾನೆ. ಆತನ ಪುರುಷಾರ್ಥ ಕತೆ ಬೇರೇನೂ ಅಲ್ಲ.. ಅದು ಪಾಕಿಸ್ತಾನದಿಂದ ಜೀವದ ಹಂಗು ತೊರೆದು ಓಡಿ ಬಂದ ಸಿಖ್ ಪರಿವಾರ ಹೇಳಿದ ಕತೆ ಮತ್ತು ಶ್ಯಾಮ್ -ಮಂಟೋನ ನಡುವೆ ನಡೆದ ಮಾತುಕತೆಯೇ ಆಗಿದೆ. ಕಥಾ ನಾಯಕ ಮುಮ್ತಾಝ್ ಮತ್ತು ಆತನ ಸ್ನೇಹಿತ ಜುಗಲ್ ಮಧ್ಯೆ ನಡೆಯುವ ಮಾತುಕತೆಯಲ್ಲಿ “ಮಂಟೋ-ಶ್ಯಾಮ್‌ಗೆ ಕೇಳಿದ ಪ್ರಶ್ನೆಯನ್ನೂ, ಶ್ಯಾಮ್ ನೀಡಿದ ಉತ್ತರವನ್ನೂ” ಮಂಟೋ ಅತ್ಯಂತ ತಂತ್ರಪೂರ್ವಕವಾಗಿ ತಂದು ಕತೆ ಹೆಣೆದಿದ್ದ.

ವಾಸ್ತವದಲ್ಲಿ ಇಂತಹ ಮಾತುಕತೆಯಿಂದಾಗಿ ಮಂಟೋ ದೇಶ ತೊರೆಯಬಹುದೆಂಬ ಸಣ್ಣದೊಂದು ಸುಳಿವು ಸಿಕ್ಕಿದ್ದರೂ ಶ್ಯಾಮ್ ತನ್ನ ಮನದೊಳಗಿನ ರೋಷವನ್ನು ಮಂಟೋನ ಮುಂದೆ ಹೊರಗೆಡಹುತ್ತಿರಲಿಲ್ಲ. ಮಂಟೋ ದೇಶ ತೊರೆದ ಬಳಿಕ ತನ್ನ ಪ್ರೀತಿಯ ತಾಯ್ನಾಡನ್ನು, ಜೀವದ ಗೆಳೆಯರಾದ ಶ್ಯಾಮ್ ಮತ್ತು ಅಶೋಕ್ ಕುಮಾರರನ್ನು ನೆನೆದು ಬಹಳಷ್ಟು ಪರಿತಪಿಸಿದ. ಆತ ಇವರೊಂದಿಗೆ ಪತ್ರ ಸಂಪರ್ಕವಿಟ್ಟುಕೊಂಡಿದ್ದ. ಮಂಟೋ ಭಾರತ ತೊರೆದ ಬಳಿಕ ಆರ್ಥಿಕವಾಗಿ ಮತ್ತಷ್ಟು ಜರ್ಜರಿತನಾದ. ಶ್ಯಾಮ್ ಮತ್ತು ಅಶೋಕ್ ಕುಮಾರ್ ಮಂಟೋನಿಗೆಂದು ಆಗಾಗ ತುಸು ದುಡ್ಡನ್ನೂ ಕಳುಹಿಸುತ್ತಿದ್ದರು.

ಅಂದು ಮಂಟೋನ ಮುಂದೆ ಪಾಕಿಸ್ತಾನವೆಂಬ ಆಯ್ಕೆಯಿತ್ತು… ಇಂದು ನನ್ನ ಮುಂದಿರುವುದು ಡಿಟೆಂಶನ್‌ ಕ್ಯಾಂಪ್‌ ಎಂಬ ಆಯ್ಕೆ ಮಾತ್ರ. ನನಗಾಗಿ ಪಾಕಿಸ್ತಾನದ ಬಾಗಿಲು ಯಾವತ್ತೂ ತೆರೆಯುವುದಿಲ್ಲ.‌ ತೆರೆದರೂ ನನ್ನ ಆಯ್ಕೆ ಖಂಡಿತಾ ಅದಾಗದು…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. “ಇಂದು ನನ್ನೆದುರಿಗಿರುವುದು ಡಿಟಿಂಶನ್ ಕ್ಯಾಂಪ್ ಎಂಬ ಆಯ್ಕೆ ಮಾತ್ರ. ನನಗಾಗಿ ಪಾಕಿಸ್ತಾನದ ಬಾಗಿಲು ಯಾವತ್ತೂ ತೆರೆಯುವುದಿಲ್ಲ.” ಇದು ಸಹೃದಯರ ಮನ ಕಲಕುವ ಬರವಣಿಗೆ.

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...