Homeಚಳವಳಿಅಂದಿನ ಸಾದತ್‌ ಹಸನ್‌ ಮಂಟೋ ಮತ್ತು ಇಂದಿನ ನಾವು...!! : ಇಸ್ಮತ್ ಪಜೀರ್

ಅಂದಿನ ಸಾದತ್‌ ಹಸನ್‌ ಮಂಟೋ ಮತ್ತು ಇಂದಿನ ನಾವು…!! : ಇಸ್ಮತ್ ಪಜೀರ್

ಮಂಟೋನಿಗೆ ಮನುಷ್ಯನ ಧರ್ಮ ಯಾವತ್ತೂ ಮಹತ್ವದ್ದಾಗಿರಲಿಲ್ಲ. ಆತನ ಕಾಳಜಿ ಕೇವಲ ಮನುಷ್ಯತ್ವ ಮಾತ್ರವಾಗಿತ್ತು.

- Advertisement -
- Advertisement -

ಎನ್ನಾರ್ಸಿಯ ಚರ್ಚೆ ಸಾಮಾಜಿಕ ಜಾಲತಾಣಗಳಲ್ಲಿ ಉತ್ತುಂಗಕ್ಕೇರಿದ್ದಾಗ ನಾನು ಫೇಸ್‌ಬುಕ್‌ನ ನನ್ನ ಅನೇಕ ಹಿಂದೂ ಗೆಳೆಯರ ಪ್ರೊಫೈಲ್ ಮತ್ತು ಕೆಲವು ಸಜ್ಜನ ಹಿಂದೂಗಳ ಟೈಮ್‌ಲೈನ್‌ಗೆ ಆಗಾಗ ಇಣುಕುತ್ತಿದ್ದೆ. ನನಗೆ ನಿರಾಶೆಯೇ ಕಾದಿತ್ತು. ಮತಿಭ್ರಮಣೆಯಾಗುವುದೊಂದೇ ಉಳಿದಿತ್ತು.‌ ಆ ಮಟ್ಟಿಗೆ ನಾನು ಅತಿಯಾಗಿ ಪ್ರೀತಿಸುತ್ತಿದ್ದ ನನ್ನ ಬದುಕಿನ ನೋವು, ನಲಿವುಗಳನ್ನು ಹಂಚಿಕೊಳ್ಳುತ್ತಿದ್ದ ಮತ್ತು ಮನೆಯ ಸಂಕಷ್ಟಗಳನ್ನೆಲ್ಲಾ ನನ್ನಲ್ಲಿ ತೋಡಿಕೊಳುತ್ತಿದ್ದ ಗೆಳೆಯರಲ್ಲಿ ಬಹುತೇಕರು ಎನ್ನಾರ್ಸಿಯ ಪರವಿದ್ದರು ಮಾತ್ರವಲ್ಲಾ “ಇದು ಹಿಂದೂ ರಾಷ್ಟ್ರ, ಇಲ್ಲಿ ಹಿಂದೂಗಳಿಗಲ್ಲದೇ ಬೇರ್ಯಾರಿಗೂ ಬದುಕುವ ಹಕ್ಕಿಲ್ಲ”ಎಂಬರ್ಥದಲ್ಲಿ ಬರೆದು ಹಾಕಿದ್ದರು.

ಅವರಲ್ಲಿ ಎಂತವರೆಲ್ಲಾ ಇದ್ದರೆಂದರೆ “ನನ್ನಿಂದ ವೈಯಕ್ತಿಕವಾಗಿ ಸಹಾಯ ಪಡೆದವರು, ನನ್ನದೇ ರಕ್ತ ಪಡೆದು ಜೀವವುಳಿಸಿಕೊಂಡವ, ಸಹೋದರಿಯ ಮದುವೆಗೆ ನನ್ನವಳ ಒಡವೆಗಳನ್ನು ಕಡಪಡಕೊಂಡವರು…. ಹೀಗೆ ಪಟ್ಟಿ ಮುಂದುವರಿಯುತ್ತದೆ. ಆದರೆ ನನ್ನ ಆ ಗೆಳೆಯರು ಯಾರೂ ಆರೆಸ್ಸೆಸ್ ಅಥವಾ ಸಂಘಪರಿವಾರದವರೂ ಅಲ್ಲ. ನನಗೀಗಲೂ ಅವರು ನನ್ನನ್ನು ದ್ವೇಷಿಸುತ್ತಾರೆಂದೆನಿಸುವುದಿಲ್ಲ.. ಮತ್ತು ಆಂತರ್ಯದಲ್ಲಿ ಅವರಿಗೆ ನಾನು ಪಾಲಿಸುವ ಧರ್ಮದ ಬಗ್ಗೆ ದ್ವೇಷವೂ ಇಲ್ಲ. ಹಾಗಾದರೆ ಅವರು ಯಾಕೆ ಹಾಗೆಲ್ಲಾ ಬರೆದುಕೊಂಡಿದ್ದಾರೆ..? ಇದನ್ನೇ ಸಮೂಹ ಸನ್ನಿಯೆನ್ನುವುದು.

ಅವರು ಏಕಾಂಗಿಯಾಗಿದ್ದಾಗ ಅಥವಾ ನನ್ನ ಜೊತೆಗಿರುವಾಗ ಹಾಗೆ ಎಂದೂ ಯೋಚಿಸಲಾರರು ಎಂದೇ ನನ್ನ ದೃಢವಾದ ನಂಬಿಕೆ. ಅವರಿಂದ ಸಮೂಹ ಸನ್ನಿಯ ಮನೋಸ್ಥಿತಿ ಹಾಗೆ ಬರೆಯಿಸಿತ್ತು ಎಂದೇ ನಾನು ನಂಬಿರುವೆ ಮತ್ತು ಮುಂದೆಯೂ ನಂಬುತ್ತೇನೆ. ನನಗೆ ಅವರ ಬಗ್ಗೆ ಕಿಂಚಿತ್ತೂ ದ್ವೇಷವಿಲ್ಲ. ಅವರಿಗೆ ನಾನಿಲ್ಲದ ಅವರ ಬಗ್ಗೆ ಯೋಚಿಸಲೂ ಸಾಧ್ಯವಾಗದು.

ಅಂತಹ ಕೆಲವು ಗೆಳೆಯರ ಬಳಿ ನಾನು ನೇರವಾಗಿ ಮಾತನಾಡುತ್ತ ಕೇಳಿದೆ.. “ಏನು ಮಾರಾಯ.. ನಾವು ಇಲ್ಲಿರುವುದು ನಿಮಗೆ ಅಷ್ಟೂ ಇಷ್ಟವಿಲ್ಲವೇ…?
ಯಾರು ಹಾಗೆಂದರು ಮಾರಾಯ..?
ಯಾರು ಹೇಳುವುದ್ಯಾಕೆ… ನಾನೇ ನೋಡಿದೆನಲ್ಲಾ….?
ಅದುವಾ….. ಅದು ನಿನ್ನಂತವರ ಬಗೆಗಲ್ಲ ಮಾರಾಯ…
ನಾನು ಮುಸ್ಲಿಮನೇ ಮಾರಾಯ..
‌ನಾನೂ ನಮಾಜು ಮಾಡುತ್ತೇನೆ, ನಾನೂ ದನದ ಮಾಂಸ ತಿನ್ನುತ್ತೇನೆ.

ಅದೇನು ನಮಗೆ ಗೊತ್ತಿಲ್ಲದ್ದಾ…?
ಮತ್ಯಾಕೆ ಹಾಗೆ ಬರೆದಿರಿ..?
ಏ ಅದೆಲ್ಲಾ ಬಿಡು ಮಾರಾಯ.. ನಿನ್ನನ್ನು ನಾವು ದ್ವೇಷಿಸಲಾಗುತ್ತಾ…?

ಸಾದತ್ ಹಸನ್ ಮಂಟೋ ಎಂಬ ಜಗತ್ಪ್ರಸಿದ್ದ ಮತ್ತು ಅತ್ಯಂತಿಕವಾದ ವಿವಾದಾತ್ಮಕ ಉರ್ದು ಸಣ್ಣ ಕತೆಗಾರನೂ ಇಂತಹದ್ದನ್ನೇ ಅನುಭವಿಸಿದ್ದ.‌ ದೇಶ ವಿಭಜನೆಯ ಕಾಲದ ಅತಿಮಾನುಷ ಕ್ರೌರ್ಯಗಳನ್ನು ಕಂಡು ಮಾನಸಿಕ ಸ್ಥಿಮಿತವನ್ನೇ ಕಳಕೊಂಡಿದ್ದ ಮಂಟೋ ವಿಭಜನೆಯ ಕಾಲದ ಕ್ರೌರ್ಯವನ್ನು, ಹಿಂಸೆಯನ್ನು ಬರೆದಷ್ಟು ಮನೋಜ್ಞವಾಗಿ ಇನ್ಯಾವ ಲೇಖಕನೂ ಬರೆದಿಲ್ಲ. ಮಂಟೋನ ಮಾನವೀಯ ಅಂತಃಕರಣ ಆ ಕಾಲದ ಇತರೆಲ್ಲಾ ಲೇಖಕರಿಗಿಂತಲೂ‌ ಆತನನ್ನು ಭಿನ್ನವಾಗಿ ನೋಡುವಂತೆ ಮಾಡುತ್ತದೆ. ಆತ ಜನರನ್ನು ಹಿಂದೂ ಮುಸಲ್ಮಾನರೆಂದು ಪ್ರತ್ಯೇಕಿಸಿ ನೋಡಲಿಲ್ಲ.‌ ಅದಕ್ಕೆ ಆತ ಬರೆದ ಸುಮಾರು ಇನ್ನೂರೈವತ್ತಕ್ಕೂ ಮಿಕ್ಕಿದ ಸಣ್ಣ ಕತೆಗಳಲ್ಲಿ ನೂರರಷ್ಟು ಕತೆಗಳು ಸಾಕ್ಷ್ಯವೊದಗಿಸುತ್ತದೆ. ಆತನ ಕೇವಲ ಎರಡು ಗೆರೆಯ ಕತೆ “ಮಿಸ್ಟೇಕ್” ಒಂದನ್ನೇ ನೋಡಿದರೆ ಸಾಕು.

“ಹೊಟ್ಟೆಯನ್ನು ಸೀಳಿದ ಚಾಕು ಸೀಳುತ್ತಾ ಬಂದು ಪೈಜಾಮದ ಲಾಡಿ ಬಿಚ್ಚಿಸಿತು…
ಅಯ್ಯೋ ಎಂತಹಾ ‘ಮಿಸ್ಟೇಕ್’ ಮಾಡಿ ಬಿಟ್ಟೆನೆಲ್ಲಾ”

ಈ ಕತೆಯನ್ನು ಇನ್ನೊಮ್ಮೆ ಓದಿ. ಒಂದು ವೇಳೆ ಸತ್ತವನು ಮುಸ್ಲಿಮನಾದರೆ ಕೊಂದವನೂ ಮುಸ್ಲಿಂ. ಒಂದು ವೇಳೆ ಸತ್ತವನು ಹಿಂದೂವಾದರೆ ಕೊಂದವನೂ ಹಿಂದೂ.

ಕೊಲೆಗಾರ ಸತ್ತವನ ಜನನಾಂಗ ನೋಡಿ ನಿರ್ಧರಿಸುತ್ತಾನೆ. ಇದರಲ್ಲಿ ಮಂಟೋನ ತಂತ್ರಗಾರಿಕೆಯೂ ಅಡಗಿದೆ. ಅವನೊಳಗಿನ ಅತ್ಯಂತ ಆರ್ದ್ರ ಹೃದಯದೊಳಗಿನ ತಲ್ಲಣವೂ ಇದೆ. ಮಂಟೋನಿಗೆ ಮನುಷ್ಯನ ಧರ್ಮ ಯಾವತ್ತೂ ಮಹತ್ವದ್ದಾಗಿರಲಿಲ್ಲ. ಆತನ ಕಾಳಜಿ ಕೇವಲ ಮನುಷ್ಯತ್ವ ಮಾತ್ರವಾಗಿತ್ತು. ಈ ಕತೆಯನ್ನು ಬರೆದಾಗ ಮಂಟೋ ಇನ್ನೂ ಭಾರತದಲ್ಲೇ ಇದ್ದ.

ಕೆಲದಿನಗಳ ಹಿಂದಷ್ಟೇ ಓರಗೆಯವರಾಗಿದ್ದವರು, ಗೆಳೆಯರಾಗಿದ್ದವರು ಇಂದು ಪರಸ್ಪರರನ್ನು ಕೊಲ್ಲುವ ಮಟ್ಟಿಗೆ ಅತಿಮಾನುಷ ಕ್ರೌರ್ಯವನ್ನು ಒಪ್ಪಿಕೊಂಡದ್ದಾದರೂ ಹೇಗೆ ಎಂದು ಯೋಚಿಸುತ್ತಲೇ ಆತ ಮಾನಸಿಕವಾಗಿ ಜರ್ಜರಿತನಾಗಿ ಬಿಟ್ಟಿದ್ದ.

ಹಿಂದೂ ಮುಸಲ್ಮಾನ ಸೋದರರ ಯುದ್ಧ ಉಚ್ಚ್ರಾಯ ಸ್ಥಿತಿಗೆ ತಲುಪಿದ್ದ ಆ ದಿನಗಳಲ್ಲಿ ಮಂಟೋ ಮತ್ತು ಆತನ ಆತ್ಮೀಯ ಗೆಳೆಯನಾದ ಅಂದಿನ ಪ್ರಸಿದ್ಧ ಹಿಂದಿ ಸಿನಿಮಾ ನಟ ಶ್ಯಾಮ್‌ ಜೊತೆಗಿದ್ದಾಗ ಪಾಕಿಸ್ತಾನದ ರಾವಲ್ಪಿಂಡಿಯಿಂದ ಜೀವದ ಹಂಗು ತೊರೆದು ಬಂದಿದ್ದ ಸಿಖ್ಖ್ ಪರಿವಾರ ಶ್ಯಾಮ್‌ ಜೊತೆ ಮಾತಿಗೆ ನಿಂತಿತು. ಆ ಪರಿವಾರದ ಮುಖ್ಯಸ್ಥ ತಾನು ಕಂಡಿದ್ದ ಭೀಕರ ಹಿಂಸಾಚಾರದ ಕತೆಗಳನ್ನು ಇವರ ಮುಂದೆ ನಿರೂಪಿಸುತ್ತಿದ್ದಾಗ ಅದನ್ನು ಕೇಳುತ್ತಾ ಶ್ಯಾಮ್ ರೋಷದಿಂದ ಕುದಿಯುತ್ತಿದ್ದ. ಅತ್ಯಂತ ಸೂಕ್ಷ್ಮ ಮನಸ್ಸಿನ ಮಂಟೋ ತನ್ನ ಪ್ರಾಣ ಸ್ನೇಹಿತ ಶ್ಯಾಮ್‌ನ ಮುಖದಲ್ಲಾದ ಏರಿಳಿತಗಳನ್ನೆಲ್ಲಾ ಗಮನಿಸಿದ್ದ. ಅವರು ಅಲ್ಲಿಂದ ಹೊರಟು ಹೋದ ಎಷ್ಟೋ ಹೊತ್ತಿನ ಬಳಿಕ ಮಂಟೋ “ನಾನೂ ಒಬ್ಬ ಮುಸಲ್ಮಾನ, ನಿನಗೆ ನನ್ನನ್ನು ಕೊಲ್ಲಬೇಕೆಂದೆನಿಸುವುದಿಲ್ಲವೇ…?”

ಶ್ಯಾಮ್ ತುಂಬಾ ಗಂಭೀರವಾಗಿ “ಇಲ್ಲ ಈಗ ಕೊಲ್ಲಲಾರೆ, ಆ ಸಿಖ್ಖನ ಬಾಯಿಯಿಂದ ಮುಸಲ್ಮಾನರು ಹಿಂದೂಗಳ ಮೇಲೆ ದೌರ್ಜನ್ಯವೆಸಗುತ್ತಿದ್ದ ಕತೆಯನ್ನು ಕೇಳುತ್ತಿದ್ದಾಗ ನಿನ್ನನ್ನು ನಾನು ಕೊಲ್ಲಬಹುದಿತ್ತು”. ತನ್ನ ಪ್ರಾಣ ಸ್ನೇಹಿತ ಶ್ಯಾಮ್‌ನ ಬಾಯಿಯಿಂದ ಇಂತಹ ಮಾತುಗಳನ್ನು ಕೇಳಿಸಿದ ಮಂಟೋನಿಗೆ ಹೃದಯಾಘಾತವಾದಂತೆನಿಸುತ್ತದೆ. ಮುಂದೆ ಮಂಟೋ ಭಾರತ ತೊರೆಯಲು ಇದೇ ಕಾರಣವಾಗುತ್ತದೆ.

ಒಮ್ಮೆ ಇದ್ದಕ್ಕಿದ್ದಂತೆ ಮಂಟೋ ದೇಶ ತೊರೆಯುವ ವಿಚಾರ ಹೇಳಿದಾಗ ಶ್ಯಾಮ್ ಮತ್ತು ಮಂಟೋನ ಇನ್ನೋರ್ವ ಆತ್ಮೀಯ ಗೆಳೆಯನೂ ಆದ ಇನ್ನೋರ್ವ ಪ್ರಸಿದ್ಧ ನಟನೂ ಆದ ಅಶೋಕ್ ಕುಮಾರ್ ದಂಗಾಗಿಬಿಟ್ಟರು. ಮಂಟೋನ ಈ ದಿಡೀರ್ ತೀರ್ಮಾನಕ್ಕೆ ಕಾರಣವೇನೆಂದು ಅವರು ಕೇಳಿದಾಗ ಮಂಟೋ ತನ್ನ “ಪುರುಷಾರ್ಥ” ಕತೆಯನ್ನು ಓದುವಂತೆ ತಿಳಿಸುತ್ತಾನೆ. ಆತನ ಪುರುಷಾರ್ಥ ಕತೆ ಬೇರೇನೂ ಅಲ್ಲ.. ಅದು ಪಾಕಿಸ್ತಾನದಿಂದ ಜೀವದ ಹಂಗು ತೊರೆದು ಓಡಿ ಬಂದ ಸಿಖ್ ಪರಿವಾರ ಹೇಳಿದ ಕತೆ ಮತ್ತು ಶ್ಯಾಮ್ -ಮಂಟೋನ ನಡುವೆ ನಡೆದ ಮಾತುಕತೆಯೇ ಆಗಿದೆ. ಕಥಾ ನಾಯಕ ಮುಮ್ತಾಝ್ ಮತ್ತು ಆತನ ಸ್ನೇಹಿತ ಜುಗಲ್ ಮಧ್ಯೆ ನಡೆಯುವ ಮಾತುಕತೆಯಲ್ಲಿ “ಮಂಟೋ-ಶ್ಯಾಮ್‌ಗೆ ಕೇಳಿದ ಪ್ರಶ್ನೆಯನ್ನೂ, ಶ್ಯಾಮ್ ನೀಡಿದ ಉತ್ತರವನ್ನೂ” ಮಂಟೋ ಅತ್ಯಂತ ತಂತ್ರಪೂರ್ವಕವಾಗಿ ತಂದು ಕತೆ ಹೆಣೆದಿದ್ದ.

ವಾಸ್ತವದಲ್ಲಿ ಇಂತಹ ಮಾತುಕತೆಯಿಂದಾಗಿ ಮಂಟೋ ದೇಶ ತೊರೆಯಬಹುದೆಂಬ ಸಣ್ಣದೊಂದು ಸುಳಿವು ಸಿಕ್ಕಿದ್ದರೂ ಶ್ಯಾಮ್ ತನ್ನ ಮನದೊಳಗಿನ ರೋಷವನ್ನು ಮಂಟೋನ ಮುಂದೆ ಹೊರಗೆಡಹುತ್ತಿರಲಿಲ್ಲ. ಮಂಟೋ ದೇಶ ತೊರೆದ ಬಳಿಕ ತನ್ನ ಪ್ರೀತಿಯ ತಾಯ್ನಾಡನ್ನು, ಜೀವದ ಗೆಳೆಯರಾದ ಶ್ಯಾಮ್ ಮತ್ತು ಅಶೋಕ್ ಕುಮಾರರನ್ನು ನೆನೆದು ಬಹಳಷ್ಟು ಪರಿತಪಿಸಿದ. ಆತ ಇವರೊಂದಿಗೆ ಪತ್ರ ಸಂಪರ್ಕವಿಟ್ಟುಕೊಂಡಿದ್ದ. ಮಂಟೋ ಭಾರತ ತೊರೆದ ಬಳಿಕ ಆರ್ಥಿಕವಾಗಿ ಮತ್ತಷ್ಟು ಜರ್ಜರಿತನಾದ. ಶ್ಯಾಮ್ ಮತ್ತು ಅಶೋಕ್ ಕುಮಾರ್ ಮಂಟೋನಿಗೆಂದು ಆಗಾಗ ತುಸು ದುಡ್ಡನ್ನೂ ಕಳುಹಿಸುತ್ತಿದ್ದರು.

ಅಂದು ಮಂಟೋನ ಮುಂದೆ ಪಾಕಿಸ್ತಾನವೆಂಬ ಆಯ್ಕೆಯಿತ್ತು… ಇಂದು ನನ್ನ ಮುಂದಿರುವುದು ಡಿಟೆಂಶನ್‌ ಕ್ಯಾಂಪ್‌ ಎಂಬ ಆಯ್ಕೆ ಮಾತ್ರ. ನನಗಾಗಿ ಪಾಕಿಸ್ತಾನದ ಬಾಗಿಲು ಯಾವತ್ತೂ ತೆರೆಯುವುದಿಲ್ಲ.‌ ತೆರೆದರೂ ನನ್ನ ಆಯ್ಕೆ ಖಂಡಿತಾ ಅದಾಗದು…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. “ಇಂದು ನನ್ನೆದುರಿಗಿರುವುದು ಡಿಟಿಂಶನ್ ಕ್ಯಾಂಪ್ ಎಂಬ ಆಯ್ಕೆ ಮಾತ್ರ. ನನಗಾಗಿ ಪಾಕಿಸ್ತಾನದ ಬಾಗಿಲು ಯಾವತ್ತೂ ತೆರೆಯುವುದಿಲ್ಲ.” ಇದು ಸಹೃದಯರ ಮನ ಕಲಕುವ ಬರವಣಿಗೆ.

LEAVE A REPLY

Please enter your comment!
Please enter your name here

- Advertisment -

ಹೈದರಾಬಾದ್| ಎಕ್ಸ್‌ಪ್ರೆಸ್‌ವೇನಲ್ಲಿ ನೇಮಕಾತಿ ಪರೀಕ್ಷೆ ಓಎಂಆರ್ ಹಾಳೆಗಳು ಪತ್ತೆ: ತನಿಖೆಗೆ ಆದೇಶ

ನೇಮಕಾತಿ ಪರೀಕ್ಷೆಯ ಮೂಲ ಆಪ್ಟಿಕಲ್ ಮಾರ್ಕ್ ರೆಕಗ್ನಿಷನ್ (ಒಎಂಆರ್) ಹಾಳೆಗಳು ಹೈದರಾಬಾದ್‌ನ ರಸ್ತೆಬದಿಯಲ್ಲಿ ರಾಶಿ ರಾಶಿಯಾಗಿ ಬಿದ್ದಿರುವುದು ಕಂಡುಬಂದ ನಂತರ ತೆಲಂಗಾಣ ಸಾರ್ವಜನಿಕ ಸೇವಾ ಆಯೋಗ (ಟಿಜಿಪಿಎಸ್‌ಸಿ) ತನಿಖೆಗೆ ಆದೇಶಿಸಿದೆ. 2018 ರ ಹಾಸ್ಟೆಲ್...

ಕರೂರ್ ಕಾಲ್ತುಳಿತ ಮೃತರ ಕುಟುಂಬಸ್ಥರಿಗೆ ನೀಡಿದ್ದ ಸರ್ಕಾರಿ ಉದ್ಯೋಗವನ್ನು ರದ್ದುಗೊಳಿಸಿದ ಮದ್ರಾಸ್ ಹೈಕೋರ್ಟ್

ಕರೂರ್ ಕಾಲ್ತುಳಿತ ದುರಂತದಲ್ಲಿ ಮೃತಪಟ್ಟವರ ಕುಟುಂಬಸ್ಥರಿಗೆ ಸರ್ಕಾರಿ ಉದ್ಯೋಗ ನೀಡಿದ್ದ ತಮಿಳುನಾಡು ಸರ್ಕಾರದ ಆದೇಶವನ್ನು ಮದ್ರಾಸ್ ಹೈಕೋರ್ಟ್ ಸೋಮವಾರ ರದ್ದುಗೊಳಿಸಿದೆ. ಈ ನೇಮಕಾತಿಗಳನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ (PIL) ವಿಚಾರಣೆ...

ವಿದ್ಯಾರ್ಥಿಗಳ ಬಂಧನ: ಮತ್ತೆ ಪ್ರತಿಭಟನೆಯ ಎಚ್ಚರಿಕೆ ನೀಡಿದ ‘ಕಾಕ್ರೋಚ್ ಜನತಾ ಪಾರ್ಟಿ’

ಪ್ರತಿಭಟನಾಕಾರರ ವಿರುದ್ಧ ಯಾವುದೇ ಪೋಲೀಸ್ ಕ್ರಮ ಕೈಗೊಳ್ಳುವುದಿಲ್ಲ ಎಂಬ ಒಪ್ಪಂದವನ್ನು ಸಂಪೂರ್ಣವಾಗಿ ಉಲ್ಲಂಘಿಸಲಾಗಿದೆ ಎಂದು 'ಕಾಕ್ರೋಚ್ ಜನತಾ ಪಾರ್ಟಿ' (CJP) ರಾಷ್ಟ್ರೀಯ ವಕ್ತಾರ ಅಶುತೋಷ್ ರಂಕಾ ಎಕ್ಸ್ (X) ಸಾಮಾಜಿಕ ಜಾಲತಾಣದ ಪೋಸ್ಟ್‌ನಲ್ಲಿ...

ಜೆನ್ ಝೀ ಪೀಳಿಗೆಯ ಹೋರಾಟ ಮತ್ತು ಮುಂದಿನ ನಡೆ.!

NEET ಪರೀಕ್ಷೆಯ ಅಕ್ರಮ ಹಾಗೂ ಪೇಪರ್ ಸೋರಿಕೆ ವಿರುದ್ಧ 'ಜೆನ್ ಝೀ' (Gen Z) ಯುವ ಸಮೂಹ ನಡೆಸಿದ ಹೋರಾಟವು ಕೇವಲ ಒಂದು ತಾತ್ಕಾಲಿಕ ವಿದ್ಯಾರ್ಥಿ ಹೋರಾಟವಾಗಿ ಉಳಿದಿಲ್ಲ. ಇದು ಪ್ರಭುತ್ವದ ಅಹಂಕಾರವನ್ನು...

ಬಿಹಾರ| ವಿದ್ಯಾರ್ಥಿಗಳ ಪ್ರತಿಭಟನೆಯ ಸಮಯದಲ್ಲಿ ಎಕೆ-47 ಬಳಸಿದ ಪೊಲೀಸ್‌ ಕಾನ್‌ಸ್ಟೆಬಲ್ ಅಮಾನತು

ಬಿಹಾರದ ಸಿವಾನ್ ಜಿಲ್ಲೆಯಲ್ಲಿ ಜುಲೈ 25 ರಂದು ನಡೆದ ವಿದ್ಯಾರ್ಥಿಗಳ ಪ್ರತಿಭಟನೆಯ ಸಮಯದಲ್ಲಿ ಎಕೆ-47 ರೈಫಲ್ ಬಳಸಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಪೊಲೀಸ್ ಕಾನ್‌ಸ್ಟೆಬಲ್ ಒಬ್ಬರನ್ನು ಅಮಾನತುಗೊಳಿಸಲಾಗಿದೆ ಎಂದು...

ನಾಳೆ ನನ್ನ ಮಗನೂ ಮೋದಿ ವಿರುದ್ಧ ಮಾತನಾಡಬಹುದು: ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ

ಅಸ್ಸಾಂ ಸಚಿವರೊಬ್ಬರ ಮಗಳು ಗುವಾಹಟಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು, ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿರುವುದು ರಾಜ್ಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ಘಟನೆಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ...

ವಿದ್ಯಾರ್ಥಿಗಳನ್ನು ಗುಂಡಿಕ್ಕಿ ಕೊಲ್ಲಬೇಕಿತ್ತು: ಆರ್‌ಎಸ್‌ಎಸ್ ಸಿದ್ಧಾಂತವಾದಿ ಟಿ.ಜಿ. ಮೋಹನ್‌ದಾಸ್ ವಿಕೃತ ಹೇಳಿಕೆ

ನವದೆಹಲಿ: ಕೇಂದ್ರ ಸರ್ಕಾರದ ಶಿಕ್ಷಣ ನೀತಿಗಳು ಹಾಗೂ ಪರೀಕ್ಷಾ ಅಕ್ರಮಗಳ ವಿರುದ್ಧ ದೆಹಲಿಯ ಜಂತರ್ ಮಂತರ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸಿ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿದ್ದ ಯುವಜನರ ವಿರುದ್ಧ...

ಸಿಜೆಪಿ ಪ್ರತಿಭಟನೆ: ವಿದ್ಯಾರ್ಥಿಗಳ ಮೇಲೆ ‘ಪೆಲೆಟ್‌ ಗನ್’ ದಾಳಿ ದೃಢ; ನಿಯಮಾವಳಿಗಳನ್ನು ಉಲ್ಲಂಘಿಸಿ ಬಲಪ್ರಯೋಗ ನಡೆಸಿರುವ RAF

ನವದೆಹಲಿ: ತಮ್ಮ ಹಕ್ಕುಗಳಿಗಾಗಿ ಪ್ರಜಾಸತ್ತಾತ್ಮಕವಾಗಿ ಧ್ವನಿ ಎತ್ತುತ್ತಿದ್ದ ವಿದ್ಯಾರ್ಥಿ ಸಮುದಾಯದ ಮೇಲೆ ಕೇಂದ್ರದ ಸಶಸ್ತ್ರ ಪಡೆಗಳು ಎಸಗಿದ ದೌರ್ಜನ್ಯದ ಕರಾಳ ಮುಖ ಕೊನೆಗೂ ಅನಾವರಣಗೊಂಡಿದೆ. ಜುಲೈ 20ರಂದು ದೆಹಲಿಯ ಕನ್ಹಾಟ್ ಪ್ಲೇಸ್ ಪ್ರದೇಶದಲ್ಲಿ...

ಕೇವಲ ಪ್ರತಿಭಟಿಸಿದ್ದಕ್ಕೆ ವಿದ್ಯಾರ್ಥಿಗಳು ಜೈಲುಪಾಲು; ಗಂಗೆಯ ದೋಣಿಯಲ್ಲಿ ಬಿರಿಯಾನಿ ತಿಂದವರಿಗೂ ಸಿಗುತ್ತಿಲ್ಲ ಜಾಮೀನು : ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಕಳವಳ

ಭಾರತದಲ್ಲಿ ಭಿನ್ನಾಭಿಪ್ರಾಯಗಳನ್ನು ಗೌರವಿಸುವ ಮತ್ತು ಅವುಗಳಿಗೆ ಅವಕಾಶ ನೀಡುವ ಸಾರ್ವಜನಿಕ ಸ್ಥಳಗಳು ಎಷ್ಟು ಕಡಿಮೆಯಾಗುತ್ತಿವೆ ಎಂದರೆ, ತಮ್ಮ ಹಕ್ಕುಗಳಿಗಾಗಿ ಪ್ರತಿಭಟಿಸುವ ವಿದ್ಯಾರ್ಥಿಗಳನ್ನು ಬಂಧಿಸಿ ಅವರಿಗೆ ಜಾಮೀನು ನಿರಾಕರಿಸಲಾಗುತ್ತಿದೆ ಎಂದು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ...

ಪ.ಬಂಗಾಳ: ನೂತನ ‘ಗೂಂಡಾ ಕಾಯ್ದೆ’ ಅಡಿ NEET ಪ್ರತಿಭಟನೆಯಲ್ಲಿ ಭಾಗಿಯಾದ 10 ಮುಸ್ಲಿಂ ಯುವಕರು ಸೇರಿದಂತೆ 11 ಜನರ ಬಂಧನ 

ಕೋಲ್ಕತ್ತಾ: ಕೇಂದ್ರದ ನರೇಂದ್ರ ಮೋದಿ ಸರ್ಕಾರದ ಶಿಕ್ಷಣ ಕ್ಷೇತ್ರದ ವೈಫಲ್ಯಗಳು ಹಾಗೂ ನೀಟ್-ಯುಜಿ (NEET-UG) ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣವನ್ನು ಖಂಡಿಸಿ ಶುಕ್ರವಾರ ಕೋಲ್ಕತ್ತಾದಲ್ಲಿ ನಡೆದ ಬೃಹತ್ ವಿದ್ಯಾರ್ಥಿ ಪ್ರತಿಭಟನೆಯು ತೀವ್ರ ರಾಜಕೀಯ...