Homeಚಳವಳಿಮಾಂಟೋನ ಈ ಕಥೆಗಳನ್ನು ಓದಿದರೆ, ನೀವು ಬೆಚ್ಚುತ್ತೀರಿ. ಓದಿ ನೋಡಿ

ಮಾಂಟೋನ ಈ ಕಥೆಗಳನ್ನು ಓದಿದರೆ, ನೀವು ಬೆಚ್ಚುತ್ತೀರಿ. ಓದಿ ನೋಡಿ

ಇವತ್ತು ವಿಭಜನೆ ಸೃಷ್ಟಿಸಿದ ವಿಲಕ್ಷಣ ಕಥೆಗಾರ ಹಸನ್ ಸಾದತ್ ಮಾಂಟೋ ಜನ್ಮದಿನ.

- Advertisement -
- Advertisement -

| ಪುನೀತ್ ಅಪ್ಪು |

ಇವತ್ತು ವಿಭಜನೆ ಸೃಷ್ಟಿಸಿದ ವಿಲಕ್ಷಣ ಕಥೆಗಾರ ಹಸನ್ ಸಾದತ್ ಮಾಂಟೋ ಜನ್ಮದಿನ. ದೇಶ ವಿಭಜನೆಯ ಆಘಾತವನ್ನು ತಡೆದುಕೊಳ್ಳಲಾರದೆ ಕೊನೆಯ ಕ್ಷಣದವರೆಗೂ ಭಾರತ ಮತ್ತು ಪಾಕಿಸ್ಥಾನದ ಬಡ, ದಮನಿತ ಮತ್ತು ನಿಕೃಷ್ಟ ಜನರಿಗೋಸ್ಕರ ಮರುಗಿದ, ಭಾರತದ ಕನವರಿಕೆಯಲ್ಲಿಯೇ ಪ್ರಾಣ ತ್ಯಜಿಸಿದ ಮಾಂಟೋ ಬರಿಯ ಕಥೆಗಾರನಲ್ಲ, ಆತನ ಬದುಕೇ ಒಂದು ರೂಪಕ. ಆತನ ಸಾವು ಇನ್ನೂ ವಿಚಿತ್ರ. ಮಾಂಟೋ ಯಾರು ಎಂದು ಯಾರಾದರೂ ಕೇಳಿದರೆ ಮಾಂಟೋ ಅಂದರೆ ಕಳ್ಳಭಟ್ಟಿ ಸಾರಾಯಿ ಎನ್ನಬಯಸುತ್ತೇನೆ. ಮಾಂಟೋನ ಕಥೆಗಳು ಕೂಡಾ ಆ ಸಾರಾಯಿಯಂತೆ ಸುಡುತ್ತಲೇ ಒಳಗಿಳಿಯುತ್ತವೆ. ಆದರೆ ಅದನ್ನು ಮೋಹಿಸಿದವನಿಗೆ ಮಾತ್ರ ಗೊತ್ತು ಅದರ ಮತ್ತು ಮತ್ತು ಗತ್ತು. ಬದುಕಬೇಕೆಂದು ಯಾರೂ ಅದನ್ನು ಕುಡಿಯುವುದಿಲ್ಲ. ಇದು ಸತ್ತವರ ಕಥೆ. ಬದುಕಿದವರು ಕಥೆಯಾಗುವುದಿಲ್ಲ. ನಾನು ಕುಡಿದರೂ ಸಾಯುತ್ತೇನೆ, ಕುಡಿಯದಿದ್ದರೂ ಸಾಯುತ್ತೇನೆ, ಅಮೇರಿಕಾದಿಂದ ಆಮದಾಗುವ ಈ ಗೋದಿಯ ಬೆಲೆ ನೋಡಿದರೆ ಮಾನ ಮರ್ಯಾದೆ ಇಲ್ಲದವರು ಮಾತ್ರ ಬದುಕಲು ಸಾಧ್ಯ ಎಂದಿದ್ದ ಮಾಂಟೋ.

ಸಾದತ್ ಹಸನ್ ಮಾಂಟೋ

ಮಾಂಟೋನ ಕೆಲವು ಸಣ್ಣ ಸಾಲುಗಳನ್ನು ಇಲ್ಲಿ ಕೊಟ್ಟಿರುವೆ.

1. ಶಾಶ್ವತ ರಜೆ.

.ಗಲಭೆಕೋರರ ಒಂದು ಗುಂಪು ಗಣಿಯತ್ತ ತೆರಳಿತು. ಸಿಕ್ಕಿ ಸಿಕ್ಕಿದವರನ್ನು ಹೊಡೆದು ಸಾಯಿಸ ತೊಡಗಿತು. ಒಬ್ಬ ಕಾರ್ಮಿಕ ಕೂಗಿಕೊಂಡ, ” ಅಯ್ಯೋ ನನ್ನ ಕೊಲ್ಲಬೇಡಿ, ನಾನು ರಜೆಯಲ್ಲಿ ಊರಿಗೆ ತೆರಳುತಿರುವೆ”.

2. ಪಠಾಣಿಸ್ತಾನ್

ಗಲಭೆಕೋರರ ತಂಡ ಒಬ್ಬನನ್ನು ತಡೆದು ನಿಲ್ಲಿಸಿತು.
“ಏಯ್ ಯಾರು ನೀನು ಇಂದೂವ ಅಥವಾ ಮುಸ್ಲಮೀನಾ”?
ವ್ಯಕ್ತಿ : ” ಹ್ಞಾಂ ಹ್ಞಾ.. ಮುಸ್ಲಮೀನ್ ಮುಸ್ಲಮೀನ್”
ತಂಡ : “ಓಹೋ ಹಾಗಾದರೆ ನಿನ್ನ ಪ್ರವಾದಿ ಯಾರು ಹೇಳು ನೋಡೋಣ”.
ವ್ಯಕ್ತಿ: “ಹ್ಞಾಂ? …. ಮಹಮ್ಮದ್ ಖಾನ್”
ತಂಡ : ” ಸರಿ, ಈತನನ್ನು ಬಿಟ್ಟು ಬಿಡೋಣ”.

3. ರೇಡಿಯೋ ವಾರ್ತೆ:

” ಪಂಜಾಬ್, ಗ್ವಾಲಿಯರ್ ಮತ್ತು ಮುಂಬಯಿಯ ಕೆಲವು ಗಲ್ಲಿಗಳಲ್ಲಿ ಜನರು ಸಿಹಿ ಹಂಚುತ್ತಿದ್ದಾರೆ. ಮಹಾತ್ಮಾ ಗಾಂಧಿಯವರ ಹತ್ಯೆಯಾಗಿದೆ”.

4. ಮೂರ್ಖ.

ಆತನ ಆತ್ಮಹತ್ಯೆಯ ಬಗ್ಗೆ ಆತನ ಸ್ನೇಹಿತ ಹೀಗೆ ಹೇಳಿದ್ದ, ‘ ಎಂತಹಾ ಮೂರ್ಖ! ನಾನು ಅವನಲ್ಲಿ ಹೇಳುತ್ತಲೆ ಇದ್ದೆ, ಆ ಉದ್ದನೆಯ ಗಡ್ಡವನ್ನು ಬೋಳಿಸಿ, ಕೂದಲಿಗೆ ಕತ್ತರಿ ಹಾಕಿದ ಕೂಡಲೇ ಆತನೇನು ಧರ್ಮಭ್ರಷ್ಟನಾಗೋದಿಲ್ಲ. ನಮ್ಮ ಸಚ್ಚೇ ಗುರುವಿಗೆ ಶರಣಾಗಿ ಆತನ ಅನುಗ್ರಹವಿದ್ದರೆ ಆತ ತನ್ನ ಮೊದಲ ಸ್ವರೂಪಕ್ಕೆ ಬದಲಾಗಿ ಬಿಡುತ್ತಿದ್ದ’.

5. ಧೃಡತೆ.

‘ಯಾವ ಕಾರಣಕ್ಕೂ ನಾನು ಸಿಖ್ ಆಗಿ ಮತಾಂತರವಾಗಲಾರೆ, ಮರ್ಯಾದೆಯಿಂದ ನನ್ನ ಕ್ಷೌರಕತ್ತಿ ವಾಪಾಸ್ ಕೊಡಿ’

5. ಮಾನವೀಯತೆ.

‘ ಅಯ್ಯೋ ದಯವಿಟ್ಟು ನನ್ನ ಮಗಳನ್ನು ನನ್ನ ಕಣ್ಣೆದುರಿನಲ್ಲೇ ಕೊಲ್ಲದಿರಿ’.
‘ಸರಿ, ಸರಿ, ಆಕೆಯ ಬಟ್ಟೆ ಬಿಚ್ಚಿ ಓಡಿಸಿ’.

6. ದೇವರು ದೊಡ್ಡವನು !

ಆ ಸಂಜೆ ಕೊನೆಗೂ ಮುಗಿಯಿತು ಮತ್ತು ಆ ಮುಜ್ರಾ ನರ್ತಕಿಯ ಗಿರಾಕಿಗಳು ಒಬ್ಬೊಬ್ಬರೇ ಮನೆಗೆ ತೆರಳಿದರು.

ಮುಜ್ರಾವನ್ನು ವ್ಯವಸ್ಥೆ ಮಾಡಿದ್ದ ಮುದುಕ ನಿಟ್ಟುಸಿರುಬಿಟ್ಟ, ‘ ಆ ದೇಶದಲ್ಲಿ ಎಲ್ಲವನ್ನೂ ಕಳೆದುಕೊಂಡು ಇಲ್ಲಿಗೆ ಬಂದೆವು, ಆದರೂ ಅಲ್ಲಾಹ್ ಕೈ ಬಿಡಲಿಲ್ಲ. ಕೆಲವೇ ದಿನಗಳಲ್ಲಿ ನಮಗೆ ಒಳ್ಳೆಯ ದಿನಗಳು ಲಭಿಸಿದವು’.

7.ವಿಶ್ರಾಂತಿ.

‘ನೋಡು ಅವನಿನ್ನೂ ಸತ್ತಿಲ್ಲ. ಜೀವ ಇದ್ದ ಹಾಗೆ ಕಾಣ್ತಾ ಇದೆ’.
‘ ಏಯ್ ಇರ್ಲಿ ಬಿಡೊ, ನನಗೂ ಕೈ ನೋಯ್ರಾ ಇದೆ’.

8. ನ್ಯಾಯ.

‘ನೋಡು ಇದು ಅನ್ಯಾಯ. ಕಾಳಸಂತೆ ಬೆಲೆಯಲ್ಲಿ ಕಳಪೆ ಪೆಟ್ರೋಲ್ ಮಾರಾಟ ಮಾಡಿದ್ದೀಯ ನೀನು, ಒಂದೇ ಒಂದು ಅಂಗಡಿಯನ್ನು ಸುಡೋಕಾಗಿಲ್ಲ’.

9. ಅದೃಷ್ಟ.

‘ಏನ್ ದುರಾದೃಷ್ಟ ನೋಡೋ ನಂದು, ಅಷ್ಟೆಲ್ಲಾ ಕಷ್ಟಪಟ್ಟು ನನಗೆ ಸಿಕ್ಕಿದ್ದು ಈ ಒಂದು ಪೆಟ್ಟಿಗೆ ಮಾತ್ರ…. ಅದರಲ್ಲಿ ಕೂಡಾ ಸಿಕ್ಕಿದ್ದು ಹಂದಿ ಮಾಂಸ’.

10. ಕೇಳೋರೇ ಇಲ್ಲ

‘ಎಂತಹಾ ದರಿದ್ರ ಜನಗಳಪ್ಪಾ ಇವ್ರು, ಮಸೀದಿಯೊಳಗೆ ಬಿಸಾಡೋಕೆ ಅಂತ ಕಷ್ಟ ಪಟ್ಟು ಒಂದೈವತ್ತು ಹಂದಿಗಳನ್ನು ಕಡ್ದು ಕಾಯ್ತಾ ಇದ್ದೀನಿ, ಒಂದೇ ಒಂದು ಗಿರಾಕಿ ಸಿಗ್ತಾ ಇಲ್ಲ, ಗಡಿಯಾಚೆ ನೋಡು, ಅಲ್ಲಿನ ಜನ ದನದ ಮಾಂಸಕ್ಕೊಸ್ಕರ ಕ್ಯೂ ನಿಂತಿದ್ದಾರೆ, ಇಲ್ಲಿ ಹಂದಿ ಮಾಂಸನ ಕೇಳೋರೇ ಇಲ್ಲ’.

11. ತಪ್ಪನ್ನು ತಿದ್ದಲಾಯಿತು.

‘ಯಾರಯ್ಯ ನೀನು’

‘ಹರ್ ಹರ್ ಮಹಾದೇವ್, ಹರ್ ಹರ್ ಮಹದೇವ್, ಹರ್ ಹರ್ ಮಹಾದೇವ್’!
‘ನೀನು ಅದೇ ಎಂದು ಹೇಳೋದಕ್ಕೆ ಸಾಕ್ಷಿ ಏನಿದೆ’
‘ನನ್ನ ಹೆಸರು ಧರಮ್ ಚಂದ್’
‘ಅದು ಸಾಕ್ಷಿಯಾಗೋದಿಲ್ಲ’
‘ಸರಿ ಸರಿ, ನನಗೆ ನಾಲಕ್ಕು ವೇದಗಳೂ ಬಾಯಿಪಾಠ ಬರುತ್ತವೆ, ಬೇಕಿದ್ದರೆ ಪರೀಕ್ಷಿಸಿ’
‘ನಮಗೆ ವೇದ ಗೀದ ಎಲ್ಲಾ ಬರೋದಿಲ್ಲ, ಸಾಕ್ಷಿ ಕೊಡು’
‘ಏನೂ?!’
‘ನಿನ್ನ ಪೈಜಾಮ ಕೆಳಗೆ ಮಾಡು’
ಆತ ತನ್ನ ಪೈಜಾಮ ಕೆಳಗೆ ಜಾರಿಸಿದ ತಕ್ಷಣ ಅಲ್ಲೊಂದು ಬೊಬ್ಬೆ ಕೇಳಿಸಿತು,’ಕೊಲ್ಲಿ ಕೊಲ್ಲಿ ಆತನನ್ನು’.
‘ಅಯ್ಯೋ ದಯವಿಟ್ಟು ನಿಲ್ಲಿ, ನಾನು ನಿಮ್ಮ ಸಹೋದರ, ದೇವರಾಣೆಗೂ..’
‘ಹಾಗಾದರೆ ಇದೇನು?’
‘ನಾನು ಹಾದು ಬರಬೇಕಾಗಿದ್ದ ಆ ದಾರಿ ಶತ್ರುಗಳ ನಿಯಂತ್ರಣದಲ್ಲಿತ್ತು, ನಾನು ಮುನ್ನೆಚ್ಚರಿಕೆ ವಹಿಸಬೇಕಾಗಿತ್ತು ಅದಿಕ್ಕೆ ಇದೊಂದೇ ತಪ್ಪು ನಾನು ಮಾಡಿದ್ದು ನಮ್ಮ ಜೀವ ಉಳಿಸುವುದಕ್ಕೋಸ್ಕರ, ಮತ್ತೆಲ್ಲವೂ ಸರಿ ಇದೆ, ಇದೊಂದೇ ತಪ್ಪು ನಾನು ಮಾಡಿದ್ದು’.
‘ಸರಿ, ತಪ್ಪನ್ನು ತಿದ್ದಿ ಬಿಡಿ’.
ಹಾಗೆ, ತಪ್ಪು ನಿವಾರಿಸಲ್ಪಟ್ಟಿತು, ಜೊತೆಗೆ ಧರಮ್ ಚಂದನು ಕೂಡಾ.

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...