Homeಮುಖಪುಟಮಾದರಿ ಪುಸ್ತಕಪ್ರೇಮಿ: ಕಟಿಂಗ್ ಶಾಪ್ ನಲ್ಲಿ ಪುಟ್ಟ ಗ್ರಂಥಾಲಯ, ಪುಸ್ತಕ ಓದು ಅಭಿಯಾನ

ಮಾದರಿ ಪುಸ್ತಕಪ್ರೇಮಿ: ಕಟಿಂಗ್ ಶಾಪ್ ನಲ್ಲಿ ಪುಟ್ಟ ಗ್ರಂಥಾಲಯ, ಪುಸ್ತಕ ಓದು ಅಭಿಯಾನ

- Advertisement -
- Advertisement -

ತರಾವರಿ ಪುಸ್ತಕಗಳ ಗ್ರಂಥಾಲಯವಿರುವ ಕಟಿಂಗ್ ಶಾಪಿನ ಫೋಟೋವೊಂದು ವೈರಲ್ ಆಗಿ ಓಡಾಡುತ್ತಿತ್ತು. ಮೇಲುನೋಟಕ್ಕೆ ಇದೊಂದು ಪೋಟೋಶಾಪ್ ಮಾಡಿದ ಫೇಕ್ ಫೋಟೋ ಇರಬೇಕು ಅಂದುಕೊಂಡೆ. ನಂತರ ಇದನ್ನು ಪರಿಶೀಲಿಸಲು ಗೂಗಲ್ ಮಾಡಿದಾಗ,  ಈ ಫೋಟೋದ ನಿಜದ ಕಥೆ ಹೇಳುವ ಹಿಂದೂ ಪತ್ರಿಕೆಯ ವರದಿಯೊಂದು ಕಾಣಿಸಿತು. ಈ ಫೋಟೋದ ಬಗೆಗಿನ ಕುತೂಹಲಕಾರಿ ಸಂಗತಿ ತಿಳಿಯಲೆಂದು ವರದಿಯನ್ನು ಅನುವಾದಿಸಿದ್ದೇನೆ.

ಪೊನ್ನ ಮರಿಯಪ್ಪ ಹದಿನೆಂಟು ವರ್ಷ ದಿನಗೂಲಿ ಮಾಡಿ ಅದರಲ್ಲಿ ಒಂದಷ್ಟು ಹಣವನ್ನು ಉಳಿತಾಯ ಮಾಡುತ್ತಾನೆ. ಈ ಹಣದಲ್ಲಿ ತನ್ನ ಬಹುದಿನದ ಕನಸಾದ ತನ್ನದೇ `ಸುರೇಶ್ ಬ್ಯೂಟಿ ಸೆಂಟರ್’ ಹೆಸರಿನ ಕಟಿಂಗ್ ಶಾಪೊಂದನ್ನು ತಮಿಳುನಾಡಿನ ತೂತುಕುಡಿ ಜಿಲ್ಲೆಯ ಮಿಲ್ಲೆರ್ ಪುರಂ ನಲ್ಲಿ 2014 ರಲ್ಲಿ ತೆರೆಯುತ್ತಾನೆ.

ಸಹಜವಾಗಿ ಕಟಿಂಗ್ ಮಾಡಿಸಲು ಬಂದವರು ತಮ್ಮ ಸರತಿ ಬರುವ ತನಕ ಕಾಯಬೇಕಾಗಿತ್ತು. ಈ ಅವಧಿಯಲ್ಲಿ ಎಲ್ಲರೂ ತಮ್ಮ ಮೊಬೈಲಿನಲ್ಲಿ ಮುಳುಗಿರುತ್ತಿದ್ದರು. ಕೆಲವರು ಶಾಪಲ್ಲಿನ ಟಿವಿ ನೋಡುತ್ತಿದ್ದರು. ಹೀಗಿರುವಾಗ ಮರಿಯಪ್ಪನಿಗೆ ಸರತಿ ಬರುವ ತನಕ ಕಾಯುವವರ ಕೈಗೆ ಪುಸ್ತಕಗಳನ್ನು ಯಾಕೆ ಕೊಡಬಾರದು ಎನ್ನುವ ಯೋಚನೆ ಹೊಳೆಯುತ್ತದೆ. ಮರುದಿನವೇ ತನ್ನ ಶಾಪಿನಿಂದ ಟಿ.ವಿಯನ್ನು ತೆಗೆಯುತ್ತಾನೆ. ಆಗ ಟಿವಿ ಇಟ್ಟಿದ್ದ ಜಾಗದಲ್ಲಿ  ದಿನ ಪತ್ರಿಕೆಗಳ ಜತೆ 5 ಪುಸ್ತಕಗಳನ್ನು ಇಡುತ್ತಾರೆ. ಈ ಐದೂ ಪುಸ್ತಕಗಳು ಕಾರ್ಲ್ ಮಾರ್ಕ್ಸ್, ಅಬ್ರಾಹಂ ಲಿಂಕನ್, ಪೆರಿಯಾರ್, ಅಣ್ಣಾದೊರೈ, ಅಬ್ದುಲ್ ಕಲಾಮ್ ಕುರಿತಾದ ಆತ್ಮಕಥನ/ಜೀವನ ಚರಿತ್ರೆಗಳು.  ಕೆಲವೇ ದಿನಗಳಲ್ಲಿ ಮೊಬೈಲ್ ನೋಡುವವರು ಈ ಪುಸ್ತಕಗಳನ್ನು ಹಿಡಿದು ತಿರುವಿಹಾಕಿ ಹಾಗೆ ಪುಸ್ತಕದ ಜಾಗಕ್ಕೆ ಇಡತೊಡಗಿದರು, ಕೆಲವರು ಚೂರು ಚೂರು ಓದತೊಡಗಿದರು. ಇದು ಮರಿಯಪ್ಪನ ಖುಷಿಯನ್ನು ಇಮ್ಮಡಿಗೊಳಿಸಿತು.

ಆ ನಂತರ ಮರಿಯಪ್ಪ ಹಳೆ ಪುಸ್ತಕ ಮಾರುವವರಲ್ಲಿ, ಹೆಚ್ಚು ರಿಯಾಯಿತಿ ದರದಲ್ಲಿ ಮಾರುವ ಪುಸ್ತಕ ಮೇಳಗಳಲ್ಲಿ ಪುಸ್ತಕಗಳನ್ನು ಕೊಂಡು ತನ್ನ ಶಾಪಿಗೆ ತರತೊಡಗುತ್ತಾನೆ. 2015 ರ ಕೊನೆಗೆ ಶಾಪಿನ ಒಂದು ಗೋಡೆಯನ್ನು ಪುಸ್ತಕಗಳ ಕಪಾಟಿಗಾಗಿ ಸಿದ್ದಗೊಳಿಸುತ್ತಾನೆ. ತತ್ವಶಾಸ್ತ್ರ, ವಿಜ್ಞಾನ, ಜನಪದ ಕತೆ, ಧರ್ಮ, ನೀತಿಕತೆಗಳು, ಮಕ್ಕಳಿಗೆ ಬೇಕಾಗುವ ರಮ್ಯ ಕಥೆಗಳು ಹೀಗೆ ಹಲವು ವೈವಿಧ್ಯಮಯ 250 ಪುಸ್ತಗಳು ಸೇರ್ಪಡೆಗೊಳ್ಳುತ್ತವೆ.

“ಶಾಪಿಗೆ ಬಂದು ಅವರ ಸರತಿ ಬರುವವರೆಗೆ ಕಾಯುವ ಗಿರಾಕಿಗಳನ್ನು ದಯವಿಟ್ಟು ಮೊಬೈಲ್ ಬಳಸಬೇಡಿ, ಇಲ್ಲಿ ಒಳ್ಳೊಳ್ಳೆ ಪುಸ್ತಕಗಳಿವೆ ಕಟಿಂಗ್ ಮಾಡಿಸಿಕೊಳ್ಳುವ ತನಕ ಪುಸ್ತಕ ಓದಿ” ಎಂದು ಆತ್ಮೀಯವಾಗಿ ಕೇಳಿಕೊಳ್ಳುವೆ. ಈ ತನಕ ಯಾರೂ ನನ್ನ ಮಾತನ್ನು ಮೀರಿಲ್ಲ. ಅದು ನನಗೆ ಖುಷಿಕೊಡುತ್ತದೆ ಎನ್ನುತ್ತಾನೆ ಮರಿಯಪ್ಪ.

ಶಾಲಾ ಮಕ್ಕಳು ಬಂದಾಗ, ನೀವು ಪುಸ್ತಕ ಓದುವುದು ಮಾತ್ರವಲ್ಲ, ನೀವು ಓದಿದ ಭಾಗದ ಮುಖ್ಯಾಂಶಗಳನ್ನು ಬರೆದು ಹೋಗಿ ಎಂದು ಹೇಳುತ್ತಾರೆ. ಹೀಗೆ ವಿವರ ಟಿಪ್ಪಣಿ ಪರಿಚಯ ಬರೆಯುವುದಕ್ಕಾಗಿ 2018 ರಿಂದ ಒಂದು ದಾಖಲಾತಿ ಪುಸ್ತಕವನ್ನೂ ಇಟ್ಟಿದ್ದಾರೆ. ಅದರಲ್ಲಿ ಪುಸ್ತಕ ಓದಿದವರು ಅಭಿಪ್ರಾಯ ಬರೆದು ಹೋಗುತ್ತಾರೆ. ಈತನಕ 300 ವಿದ್ಯಾರ್ಥಿಗಳು ತಾವು ಓದಿದ ಪುಸ್ತಕದ ಬಗ್ಗೆ ಅಭಿಪ್ರಾಯ, ತಮ್ಮ ಹೆಸರು ಮತ್ತು ಶಾಲೆಯ ವಿಳಾಸವನ್ನು ಬರೆದು ಹೋಗಿದ್ದಾರೆ.

ಕನಿಷ್ಠ ಒಂದು ಪುಸ್ತಕದ 10 ಪುಟ ಓದಿ, ಅದರ ಬಗ್ಗೆ ಒಂದು ಟಿಪ್ಪಣಿ ಬರೆದರೆ ಹೇರ್ ಕಟ್ ಗೆ 80 ರೂ ಇದ್ದರೆ.  30 ರೂ ರಿಯಾಯಿತಿ ಕೊಡುವುದಾಗಿ ಹೇಳಿ 2020 ರ ಹೊಸ ವರ್ಷವನ್ನು ಆಚರಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಮರಿಯಪ್ಪನವರ ಸಲೂನ್ ಲೈಬ್ರರಿಯ ಫೋಟೋ ವೈರಲ್ ಆಗುವುದಕ್ಕಿಂತ ಮೊದಲು ಆರು ವರ್ಷ ಯಾವುದೇ ಪ್ರಚಾರ ಬಯಸದೆ ಮರಿಯಪ್ಪ ತನ್ನ ಸಲೂನಲ್ಲಿ ಓದು ಅಭಿಯಾನ ಶುರುಮಾಡಿದ್ದರು. ಮರಿಯಪ್ಪನ ಪುಸ್ತಕ ಪ್ರೀತಿ ನೋಡಿ ಪ್ರಸಿದ್ಧ ಪುಸ್ತಕ ಪ್ರಕಾಶನ Hatchette Indiaದವರು ಒಂದಷ್ಟು ಇಂಗ್ಲೀಷ್ ಪುಸ್ತಕಗಳನ್ನು ಕೊಡುಗೆಯಾಗಿ ಕೊಟ್ಟಿದ್ದಾರೆ. ಇದರಿಂದ ಆ ತನಕ ಬರಿ ತಮಿಳು ಪುಸ್ತಕ ಇಟ್ಟಿದ್ದ ಮರಿಯಪ್ಪ ಇದೀಗ ಇಂಗ್ಲೀಷ್ ಪುಸ್ತಕಗಳನ್ನು ಇಟ್ಟಿದ್ದಾರೆ. ತೂತುಕುಡಿ ಎಂ.ಪಿ. ಕನಿಮೋಜಿ ಯವರು 50 ಪುಸ್ತಕಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಇದೀಗ ಮರಿಯಪ್ಪನ ಸಲೂನಿನಲ್ಲಿ 900 ರಷ್ಟು ವೈವಿಧ್ಯಮಯ ತಮಿಳು, ಇಂಗ್ಲೀಷ್ ಪುಸ್ತಕಗಳ ಸಂಗ್ರಹವಾಗಿದೆ. ನಿರಂತರವಾಗಿ ಓದುತ್ತಿದ್ದರೆ ಹೊಸ ಹೊಸ ಆಲೋಚನೆಗಳು ಬರುತ್ತವೆ ಎಂದು ಮರಿಯಪ್ಪ ಹೇಳುತ್ತಾರೆ.

ತನ್ನ ವಿದ್ಯಭ್ಯಾಸ ಕುಂಟಿತವಾದರೂ ಬೇರೆಯವರು ಓದಬೇಕು, ಓದಿ ಜ್ಞಾನ ಸಂಪಾದಿಸಬೇಕೆಂದು ಕನಸುವ ಪೊನ್ನ ಮರಿಯಪ್ಪನವರ ನಡೆಯಿಂದ  ಸೆಲೂನ್ ಶಾಪ್ ನ ಸ್ಥಾಪಿತ ಕಲ್ಪನೆಯನ್ನೆ ಹೊಡೆದು ಹಾಕಿದ್ದಾರೆ.

  • (ಕೃಪೆ): ದ ಹಿಂದು
  • ಮೂಲ: ಸೋಮ ಬಸು
  • ಅನುವಾದ: ಅರುಣ್ ಜೋಳದಕೂಡ್ಲಿಗಿ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...